ಪ್ರಬೋಧ ಚಂದ್ರ ದೇ (ಅಹೋಮಿಯಾ: মান্না দে ಮನ್ನಾ ದೇ; ಮೇ ೧, ೧೯೧೯ - ಅಕ್ಟೋಬರ್ ೨೪ ೨೦೧೩) ಮನ್ನಾ ದೇ ಭಾರತದ ಪ್ರಸಿದ್ಧ ಗಾಯಕರಲ್ಲಿ ಒಬ್ಬರು.
ಮನ್ನಾ ಡೆ | |
---|---|
Born | ಪ್ರಬೋಧ ಚಂದ್ರ ಡೇ ೧ ಮೇ ೧೯೧೯ |
Died | ಅಕ್ಟೋಬರ್ ೨೪, ೨೦೧೩ ಬೆಂಗಳೂರು |
Other names | ಮನ್ನಾ ಡೇ |
Occupation | ಹಿನ್ನೆಲೆ ಗಾಯನ |
Years active | 1929–2010 |
Website | www |
೧೯೬೦-೭೦ ರ ದಶಕದ ಸಮಯದಲ್ಲಿ, ದೇಶದಾದ್ಯಂತ ಹಿಂದಿ, ಬಂಗಾಳೀ ಚಿತ್ರರಂಗದ ಮಧುರಗೀತೆಗಳನ್ನು ಹಾಡಿರಂಜಿಸುತ್ತಿದ್ದ ಮನ್ನಾಡೆಯವರ ಛಾಪನ್ನು ಮೂಡಿಸುವ ಗೀತೆಗಳನ್ನು ಕೇಳಿದ ಕೂಡಲೇ ಮನ್ನಾಡೆ, ನಮಗೆ ಫಕ್ಕನೆ ನೆನೆಪಾಗುತ್ತಾರೆ. ಆಗಿನಕಾಲದಲ್ಲಿ ’ಮುಖೇಶ್’, ಒಂದು ಶೈಲಿಯ ಗಾಯಕರು. ’ಮೊಹಮ್ಮದ್ ರಫಿ,’ ಇನ್ನೊಂದು ತರಹ. ಮತ್ತೆ ’ಮನ್ನಾಡೆ’, ಹಿಂದೂಸ್ತಾನಿ ಸಂಗೀತದ ಜಾಡನ್ನು ಆಧರಿಸಿ ಹಲವಾರು ಹಾಡುಗಳನ್ನು ಹಾಡಿದ್ದಾರೆ, ’ಏ ಭಾಯ್ ಝರ ದೇಖ್ ಕೆ ಚಲೊ’, ಗೀತೆ, ರಾಜ್ ಕಪೂರ್ ರವರ ಕಾಲದ್ದು. ಆದರೆ ಅದನ್ನು ಮನ್ನಾಡೆ ಹಾಡಿದ ರೀತಿ ಅತ್ಯಂತ ರೋಚಕವಾದದ್ದು. ಆ ಹಾಡಿನಲ್ಲಿ ತಮ್ಮೆಲ್ಲಾ ಭಾವನೆ ಸಂವೇದನೆಗಳನ್ನು ತುಂಬಿ, ರಾಜಕಪೂರ್ ರವರ ಪಾತ್ರಕ್ಕೆ ತುಂಬು-ಪೋಷಣೆ ನೀಡಿದ್ದಾರೆ. ಬಹುಶಃ ಆ ಹಾಡು ಅವರಲ್ಲದೆ ಬೇರೆ ಯಾರೂ ಹಾಡಲು ಸಾಧ್ಯವಿಲ್ಲವೇನೋ ಎನ್ನುವಷ್ಟು ಭಾವ ಆ ಗೀತೆಯಲ್ಲಡಗಿದೆ.
’ಪಡೋಸನ್’ ಚಿತ್ರದ ’ಏಕ್ ಚತುರ ನಾರ್,’ ’ಆಶೀರ್ವಾದ್’ ಚಿತ್ರದ ’ಪೂಛೋನ ಕೈಸೆ’, ಮತ್ತು ’ಯೆ ಮೆರೆ ಪ್ಯಾರ ವತನ್’ ’ಯೇ ದೋಸ್ತಿ, ಹಮ್ ನಹಿ ಛೋಡೇಂಗೆ’, ಗಳನ್ನು ಹಾಡಿ ಹಿಂದಿಚಿತ್ರದ-ಸಿನಿ-ರಸಿಕರ ಮನವನ್ನು ತಣಿಸಿದ ’ಮನ್ನಾಡೆ’ ಯವರಿಗೆ ಸಂಗೀತದ ಬಗ್ಗೆ ತೀವ್ರ ಆಸಕ್ತಿ, ಹಾಗೂ ಪ್ರೇಮ. ತಮ್ಮ ಬಾಲ್ಯದ ದಿನಗಳಲ್ಲಿ ಗೆಳೆಯರ ಮುಂದೆ ಬೆಂಚಿನ ಮಣೆಯನ್ನು ಕುಟ್ಟಿ, ಧ್ವನಿಹೊರಡಿಸಿ ರಂಜಿಸುತ್ತಿದ್ದರು. ಕಲ್ಕತ್ತದ ಪ್ರಸಿದ್ಧ ಸ್ಕಾಟಿಷ್ ಚರ್ಚ್ ಕಾಲೇಜ್, ಮತ್ತು ವಿದ್ಯಾಸಾಗರ್ ಕಾಲೇಜ್ ನಲ್ಲಿ ವ್ಯಾಸಂಗದ ಸಮಯದಲ್ಲಿ ಸತತವಾಗಿ ಅಂತರ ಕಾಲೇಜ್ ಸ್ಪರ್ಧೆಯಲ್ಲಿ ೩ ವರ್ಷ ಪ್ರಥಮ ಬಹುಮಾನವನ್ನು ಗಿಟ್ಟಿಸಿಕೊಂಡಿದ್ದರು. ಬೊಂಬಾಯಿನ ’ಬಾಲಿವುಡ್ ಚಿತ್ರರಂಗ’ದಲ್ಲಿ ವರ್ಚಸ್ಸನ್ನು ಹೊಂದಿದ್ದ ಅನೇಕ ನಟರು, ನಿರ್ದೇಶಕರು, ಸಂಗೀತಗಾರರು ತುಂಬಿಕೊಂಡಿದ್ದರು. ಅವರಲ್ಲಿ ಪ್ರಮುಖರು ಸಂಗೀತ ಸಂಯೋಜಕ, ಶ್ರೀ ಕೃಷ್ಣ ಚಂದ್ರ ಡೇ. ಅವರು, ಆಗಿನ (K. C. De), ಮೇರು ಸಂಗೀತಕಾರರನ್ನು ಮನ್ನಾಡೆ ಯವರಿಗೆ ಪರಿಚಯಿಸಿದರು. ’ಉಸ್ತಾದ್ ದಬೀರ್ ಖಾನ್’, ’ಉಸ್ತಾದ್ ಅಮ ನ್ ಆಲಿ ಖಾನ್’, ’ಉಸ್ತಾದ್ ಅಬ್ದುಲ್ ರೆಹ್ಮಾನ್ ಖಾನ್’, ಮುಂತಾದವರು. ಇಂತಹ ಹೆಸರುವಾಸಿಯಾಗಿದ್ದ ಗುರುಗಳ ಶಿಕ್ಷಣದಿಂದ ಅವರು ಒಳ್ಳೆಯ ಕಂಠಶ್ರೀಯನ್ನು ಹೊಂದಿದ್ದು, ಚಿತ್ರ ರಸಿಕರ ಮನವನ್ನು ಗೆದ್ದಿದ್ದರು.
೧೯೬೦ರ ದಶಕದಲ್ಲಿ ಬಿಡುಗಡೆಯಾದ ಉದಯಕುಮಾರ್, ಜಯಂತಿ ನಟಿಸಿದ ಕಲಾವತಿ ಚಿತ್ರದಲ್ಲಿ ರಾಷ್ಟ್ರ ಕವಿ ಕುವೆಂಪು ವಿರಚಿತ 'ಕುಹೂ ಕುಹೂ ಎನ್ನುತ ಹಾಡುವ ಕಿನ್ನರ ಕಂಠದ ಕೋಗಿಲೆಯೇ' ಕವಿತೆಯನ್ನು ಜಿ.ಕೆ.ವೆಂಕಟೇಶ್ ಸಂಗೀತದಲ್ಲಿ ಹಾಡಿದ್ದರು. ಈಗಲು ಸಹ ಆಕಾಶವಾಣಿಯಲ್ಲಿ ಪ್ರಸಾರವಾಗುವ ಈ ಗೀತೆ ಬಹಳ ಜನಪ್ರಿಯವಾಗಿದೆ. ೬೦-೭೦ರ ದಶಕದಲ್ಲಿ ಇನ್ನು ಕೆಲವು ಕನ್ನಡ ಚಿತ್ರಗೀತೆಗಳನ್ನು ಹಾಡಿದ್ದರು. ಮನ್ನಾಡೇ- ‘ಜಯತೆ ಜಯತೆ…’ ಸೇರಿದಂತೆ ಕನ್ನಡದಲ್ಲಿ ಒಟ್ಟು ಏಳು ಹಾಡುಗಳನ್ನು ಹಾಡಿದ್ದಾರೆ. ಅವುಗಳೆಂದರೆ ‘ಸಂಗೊಳ್ಳಿ ರಾಯಣ್ಣ’ ಚಿತ್ರದ ‘ಜಗವಿದು ಸೋಜಿಗ’, ‘ನೀರೆ ನೀನು ಬಾರೆ’, ಕಲಾವತಿ ಚಿತ್ರದ ‘ಕುಹು ಕುಹೂ ಎನ್ನುತ ಹಾಡುವ…’ (ರಚನೆ: ಕುವೆಂಪು), ಮಾರ್ಗದರ್ಶಿ ಚಿತ್ರದ ಎರಡು ಹಾಡುಗಳು .ಕಳೆದ ಹಲವು ವರ್ಷಗಳಿಂದ ಕರ್ನಾಟಕದಲ್ಲೇ ವಾಸಿಸುತ್ತಿದ್ದಾರೆ. ಬೆಂಗಳೂರು ನಿವಾಸಿ ಮನ್ನಾಡೆ ಇತ್ತೀಚೆಗೆ ಕನ್ನಡದ ಗಾಯಕಿ ದಿವ್ಯಾ ರಾಘವನ್ ಜೊತೆ ದುಬೈ ಕನ್ನಡ ಸಂಘದ ಕಾರ್ಯಕ್ರಮಗಳಲ್ಲಿ ಕೂಡ ಭಾಗವಹಿಸಿದ್ದಾರೆ.
ಮನ್ನಾಡೆಯವರು ಬೊಂಬಾಯಿನ, ಹಿಂದಿ ಚಿತ್ರರಂಗಕ್ಕೆ ಪಾದಾರ್ಪಣೆಮಾಡಿದ್ದು, ೧೯೪೩ ರಲ್ಲಿ ’ತಮನ್ನಾ’ ಎಂಬ ಚಿತ್ರದ, ಅವರ ಸೋದರ ಮಾವ, 'ಕೆ.ಸಿ.ಡೇ' ರವರ ಸಂಗೀತ ಸಂಯೋಜನೆಯ ಮೂಲಕ, ಆ ದಿನಗಳ ಮೇರು ಸಂಗೀತಜ್ಞೆ, ಸುರೈಯ ಜೊತೆ ಹಾಡಿದರು. ಆ ಚಿತ್ರದ ಗೀತೆಗಳು ಒಳ್ಳೆಯ ಹೆಸರು ಮಾಡಿದವು. ’ಮೊಹಮ್ಮದ್ ರಫಿ’, ’ಕಿಶೋರ್ ಕುಮಾರ್’ ಮುಂತಾದ ಹಾಡುಗಾರ ಜೊತೆಯಲ್ಲಿ ಹಾಡಿನಲ್ಲಿ ಹೆಚ್ಚು ರೋಮ್ಯಾಂಟಿಕ್ ರೀತಿಯಲ್ಲಿ ಹಾಡುವುದಿಲ್ಲ ಎನ್ನುವ ಅಪವಾದವಿತ್ತು. ಒಟ್ಟು ಹಾಡಿದ ಗೀತೆಗಳ ಸಂಖ್ಯೆ, ೩,೫೦೦ ಕ್ಕು ಮಿಗಿಲು. ’ಬಂಗಾಳಿ’, ’ಮರಾಠಿ’, ಮಲಯಾಳಂ ಚಿತ್ರ ’'ಚೆಮ್ಮೀನ್'’ನಲ್ಲಿಯೂ ಅವರು ಒಂದು ಗೀತೆಯನ್ನು ಹಾಡಿದ್ದಾರೆ.
ತಮ್ಮ ಜೀವನ ಚರಿತ್ರೆಯನ್ನು ಹಲವು ಭಾಷೆಗಳಲ್ಲಿ ಹೊರತರುತ್ತಿದ್ದಾರೆ.
ಈಗಾಗಲೇ ಅವರ ಪುಸ್ತಕವನ್ನಾಧರಿಸಿ, ಒಂದು ’ಸಾಕ್ಷಿಚಿತ್ರ’ವೂ ಹೊರಹೊಮ್ಮಿದೆ.
’ಪ್ರಹಾರ್,’ ಎಂಬ ಚಿತ್ರಕ್ಕೆ ಸಂಗೀತವನ್ನು ಹಾಡುವತನಕ ಅವರು ಸಕ್ರಿಯವಾಗಿದ್ದರು. ೯೦ ವರ್ಷ ಹರೆಯದ ಮನ್ನಾಡೆ, ಈಗ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಅನೇಕ ’ಸ್ಟೇಜ್ ಶೋ’ ಹಾಗೂ ’ರಿಯಾಲಿಟಿ ಶೋ’ಗಳಲ್ಲಿ ತಪ್ಪದೆ ಭಾಗವಹಿಸುವ, ಮನ್ನಾಡೆ, ಈಗಲೂ ಸಂಗೀತವೆಂದರೆ ಬಹಳ ಇಷ್ಟಪಡುತ್ತಾರೆ. 'ಮನ್ನಾಡೆ'ಯವರು, ೧೯೫೬ ನೇ, ಡಿಸೆಂಬರ್, ೧೮ ರಂದು,ಕೇರಳದ ಮೂಲದ, 'ಸುಲೋಚನ ಕುಮಾರನ್' ರನ್ನು ಮದುವೆಯಾದರು. ಈ ದಂಪತಿಗಳಿಗೆ, 'ಶುರೋಮಾ', (ಅಕ್ಟೋಬರ್, ೧೯, ೧೯೫೬), ಹಾಗೂ 'ಸುಮಿತಾ', (ಜೂನ್, ೨೦, ೧೯೫೮), ಎಂಬ ಇಬ್ಬರು ಹೆಣ್ಣುಮಕ್ಕಳು.
’ಪ್ರಬೋಧ್ ಚಂದ್ರ ಡೇ’, ಯವರನ್ನು ೨೦೦೭ ವರ್ಷದ ಸಾಲಿನ ’ಬಾಬಾ ಸಾಹೇಬ್ ಫಾಲ್ಕೆ ಪ್ರಶಸ್ತಿ,’ ಗೆ ಚುನಾಯಿಸಿದ್ದಾರೆ. ೯೦ ವರ್ಷದ ಹರೆಯದ ಮನ್ನಾಡೆಯವರಿಗೆ, ಇದು ಎಂದೋ ಸಲ್ಲಬೇಕಿತ್ತು.ಅವರಿಗೆ ’ಪದ್ಮಶ್ರೀ’, ’ಪದ್ಮ ಭೂಷಣ್’ ಹಾಗೂ ಅನೇಕ ಪ್ರಶಸ್ತಿಗಳು ಸಂದಿವೆ. ’ಫಾಲ್ಕೆ ಅವಾರ್ಡ್’ ಅವರ ಮುಡಿಗೆ ಒಂದು ಹೊಸ ಗರಿ ಸೇರಿಸಿದಂತಾಗಿದೆ. ಅಕ್ಟೋಬರ್ ೨೧ ರಂದು, ೫೫ ನೆಯ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಹಿರಿಯ ಸಿನಿ-ಗಾಯಕ, ಮನ್ನಾಡೆ, ಬಾಲಿವುಡ್ ಚಿತ್ರ-ನಿರ್ಮಾಪಕ ಯಶ್ ಚೋಪ್ರಾ, ಸಹಿತ ಭಾರತೀಯ ಸಿನೆಮಾದ ಹಲವು ಪ್ರತಿಷ್ಟಿತರಿಗೆ, ರಾಷ್ಟ್ರಾಧ್ಯಕ್ಷೆ, 'ಶ್ರೀಮತಿ ಪ್ರತಿಭಾ ಪಾಟೀಲ್' ರವರು, ಪ್ರಶಸ್ತಿಗಳನ್ನು ಪ್ರದಾನಿಸಿದರು. ಅದರಲ್ಲಿ ಅತಿ ಪ್ರಮುಖವಾದದ್ದು, ೨೦೦೭ ರ ಸಾಲಿನ ಪ್ರತಿಷ್ಟಿತ, ’ಬಾಬಾಸಾಹೇಬ್ ಫಾಲ್ಕೆ ಪ್ರಶಸ್ತಿ. ರಾಷ್ಟ್ರಾಧ್ಯಕ್ಷೆ, ಶ್ರೀಮತಿ, ಪ್ರತಿಭಾ ಪಾಟೀಲ್, ಮನ್ನಾಡೆಯವರಿಗೆ, ಶಾಲುಹೊದಿಸಿ, ಚಿನ್ನದ ತಾವರೆಯನ್ನೂ, ೧೦ ಲಕ್ಷರೂಪಾಯಿಗಳ ನಗದು ಹಣವನ್ನೂ ನೀಡಿ ಗೌರವಿಸಿದರು.
೯೪ ವರ್ಷದ ಪ್ರಾಯದ 'ಮನ್ನಾಡೆ'ಯವರು, ೨೦೧೩ ರ, ಅಕ್ಟೋಬರ್, ೨೪, ಗುರುವಾರದಂದು ಬೆಂಗಳೂರಿನಲ್ಲಿ ನಿಧನರಾದರು. ಅವರು ಬಹಳ ದಿನಗಳಿಂದ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದರು. ಹಲವು ಬಾರಿ ಆಸ್ಪತ್ರೆಗೆ ಸೇರಿಸಲ್ಪಟ್ಟು ಮತ್ತೆ ಮನೆಗೆ ವಾಪಸ್ಸಾಗಿದ್ದರು. ಆದರ ಈ ಬಾರಿ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಮನ್ನಾಡೆಯವರ ಕಾಯಿಲೆ ಉಲ್ಬಣಿಸಿ, ಬೆಳಗಿನ ಜಾವ, ೩.೩೩ ಕ್ಕೆ ಕೊನೆಯುಸಿರೆಳೆದರು. ಮರಣದ ಸಮಯದಲ್ಲಿ ಅವರ ಪುತ್ರಿ,'ಶಮಿತಾ ದೇಬ್', ಮತ್ತು ಅಳಿಯ, 'ಜ್ಞಾನ್ ರಂಜನ್ ದೇಬ್' ಅವರ ಬಳಿ ಇದ್ದರು. ಪತ್ನಿ ಸುಲೋಚನ ಕ್ಯಾನ್ಸರ್ ನಿಂದಾಗಿ ೨೦೧೨ ರಲ್ಲಿ ನಿಧನರಾಗಿದ್ದರು. ಮನ್ನಾಡೆಯವರ ಅಂತಿಮ ಸಂಸ್ಕಾರವು, ಬೆಂಗಳೂರಿನ ಉಪನಗರವೊಂದಾದ ಹೆಬ್ಬಾಳದ ಸ್ಮಶಾನದಲ್ಲಿ ಸಕಲ ಗೌರವಗಳೊಂದಿಗೆ ೨೪ ರ, ಗುರುವಾರದ ದಿನದಂದೇ ನೆರವೇರಿತು.
This article uses material from the Wikipedia ಕನ್ನಡ article ಮನ್ನಾ ಡೆ, which is released under the Creative Commons Attribution-ShareAlike 3.0 license ("CC BY-SA 3.0"); additional terms may apply (view authors). ವಿಶೇಷವಾಗಿ ಟಿಪ್ಪಣಿ ಮಾಡದಿದ್ದ ಹೊರತು ಪಠ್ಯ "CC BY-SA 4.0" ರಡಿ ಲಭ್ಯವಿದೆ. Images, videos and audio are available under their respective licenses.
®Wikipedia is a registered trademark of the Wiki Foundation, Inc. Wiki ಕನ್ನಡ (DUHOCTRUNGQUOC.VN) is an independent company and has no affiliation with Wiki Foundation.