ತಾಂಬೂಲ

ಎಲೆ ಅಡಕೆಗೆ ತಾಂಬೂಲ ಎಂದು ಹೆಸರಿದೆ.

ಬಳಸುವಾಗ ಸುಣ್ಣವೂ ಬೇಕಾಗುತ್ತದೆ. ಜೀರ್ಣಶಕ್ತಿಯನ್ನು ಹೆಚ್ಚಿಸುವ ಆಮ್ಲತೆಯನ್ನು ಕಡಿಮೆ ಮಾಡುವ ಕಟುಮಧರ ಪುಷ್ಟಿಕತ ವಸ್ತುವಿದೆ. ಇದರಿಂದ ಬಾಯಿಗೆ ಕೆಂಪು, ಸುವಾಸನೆ ಉಂಟಾಗುತ್ತದೆ. ಮನಸ್ಸಿಗೆ ಉತ್ಸಾಹ ಬರುತ್ತದೆ. ಶರೀರದ ಶಾಖ ಹೆಚ್ಚುತ್ತದೆ. ತಾಂಬೂಲದ ಪ್ರಧಾನ ಅಂಗಗಳಾದ ವೀಳಯದೆಲೆ, ಅಡಕೆ ಮತು ಸುಣ್ಣಗಳಿಂದ ಭಿನ್ನ ಭಿನ್ನ ಪ್ರಯೋಜನಗಳುಂಟು. ಎಲೆಯಿಂದ ಶಾಖ ಹೆಚ್ಚುತ್ತದೆ. ಸುಣ್ಣ ತೇವವನ್ನು ಆರಿಸುತ್ತದೆ. ಅಡಕೆಯಿಂದ ಹಲ್ಲು ವಸಡು ಮತ್ತು ಜಠರಗಳು ಗಟ್ಟಿಯಾಗುತ್ತವೆ. ತಾಂಬೂಲಕ್ಕೆ ಪಚ್ಚಕರ್ಪೂರ, ಏಲಕ್ಕಿ, ಲವಂಗ. ಜಾಕಾಯಿ, ಜಾಪತ್ರೆ, ಕಾಚು ಮುಂತಾದ ಇನ್ನೂ ಅನೇಕ ಮಸಾಲೆ ದ್ರವ್ಯಗಳನ್ನೂ ಬಳಸುತ್ತಾರೆ. ಡಚ್ ಭಾಷೆಯಲ್ಲಿ ಇದಕ್ಕೆ ತಾಂಬೂಲ ಎಂದು ಹೆಸರು. ಊಟವಾದ ಮೇಲೆ ಮಿತವಾಗಿ ತಾಂಬೂಲ ಸೇವನೆ ಮಾಡುವುದರಿಂದ ಆರೋಗ್ಯಕ್ಕೆ ಒಳ್ಳೆಯದಾಗುವುದಾದರೂ ಅತಿಯಾದ ಸೇವನೆಯಿಂದ ನಾಲಗೆಯ ರುಚಿ ಕೆಡುವ ಅಪಾಯವೂ ಉಂಟು.

ತಾಂಬೂಲ

ಇದು ಪ್ರಾಚೀನ ಭಾರತದ ಉತ್ತಮ ಪ್ರಸಾಧನ ಸಾಮಗ್ರಿಗಳಲ್ಲೊಂದಾಗಿದೆ. ಇದನ್ನು ಪೂಜಾ ಮತ್ತು ಶೃಂಗಾರ ಸಾಧನವನ್ನಾಗಿ ಉಪಯೋಗಿಸುವ ರೂಢಿ ಇಂದಿಗೂ ಇದೆ. ಮಂಗಳ ದ್ರವ್ಯಗಳಲ್ಲಿ ಇದೂ ಒಂದು. ಆರ್ಯರು ಈ ದೇಶಕ್ಕೆ ಬರುವ ಮೊದಲು ಇದರ ಉಪಯೋಗವನ್ನು ತಿಳಿದಿರಲಿಲ್ಲ. ಇಲ್ಲಿಗೆ ಬಂದ ಮೇಲೆ ನಾಗ ಜಾತಿಯಿಂದ ಇದರ ಪ್ರಯೋಗವನ್ನು ತಿಳಿದರು. ಇದರಲ್ಲಿ ಬಳಸುವ ಎಲೆ ಬಳ್ಳಿಗೆ ನಾಗವಲ್ಲಿಯೆಂದೇ ಹೆಸರು. ಈ ನಾಗವಲ್ಲಿ ಉದಯನನಿಗೆ ವಾಸುಕಿ ನಾಗನಿಂದ ಬಳುವಳಿಯಾಗಿ ಬಂದಿತೆಂದು ಪ್ರತೀತಿ. ಪಾಂಡವರ ಅಶ್ವಮೇಧಯಾಗಕ್ಕಾಗಿ ನಾಗಜಾತಿಯವರಿಂದ ಇದನ್ನು ತರಿಸಲಾಯಿತೆಂದು ಪ್ರತೀತಿ ಇದೆ.

ಇದು ಮಲಯದಿಂದ ಬಂದದ್ದೆಂದು ಹೇಳಲಾಗುತ್ತದೆ. ಸುಮಾರು ಕ್ರಿ.ಪೂ. 600ರ ಹೊತ್ತಿಗೆ ಕಾಶಿಯಲ್ಲಿ ರಚಿತವಾದ ಸುಕೃತ ಸಂಹಿತೆ ಎಂಬ ಆಯುರ್ವೇದ ಗ್ರಂಥದಲ್ಲಿ ಇದರ ವಿಚಾರ ಮೊದಲಿಗೆ ಪ್ರಸ್ತಾವಿತವಾಗಿದೆಯೆಂದು ತಿಳಿದು ಬರುತ್ತದೆ. ಚರಕ ಸುಶ್ರುತರ ಗ್ರಂಥಗಳಿಂದ ಕೂಡ ಕ್ರಿ.ಪೂ. ದಲ್ಲೇ ಇದರ ಪ್ರಯೋಗವಿತ್ತೆಂದು ತಿಳಿಯುತ್ತದೆ.

ವರಾಹಮಿಹಿರ ಕೂಡ ಇದರ ಗುಣಗಳನ್ನು ಬಹುವಾಗಿ ಹೊಗಳುತ್ತಾನೆ. ಇದರ ಸೇವನೆಯಿಂದ ಮುಖಕ್ಕೆ ಕಾಂತಿ, ಸುಗಂಧ, ವಾಣಿಗೆ ಮಾಧುರ್ಯ ಉಂಟಾಗುತ್ತದೆ.

ಇದು ಮಧುರವೂ, ಕ್ಷಾರಪೂರ್ಣವೂ, ಕಷಾಯಗುಣಯುತವೂ, ವಾತಾಪರಿಹಾರಿಯೂ, ಕ್ರಿಮಿನಾಶಕವೂ, ಕಫಹರವೂ, ದುರ್ಗಂಧನಾಶಕವೂ ಆಗಿರುವುದರಿಂದ ಆರೋಗ್ಯಕ್ಕೆ ಒಳ್ಳೆಯದು.

ಎಲೆ, ಅಡಕೆ, ಸುಣ್ಣ ಇತ್ಯಾದಿಗಳನ್ನು ಕೂಡಿಸಿ ಬೀಡ ಕಟ್ಟುವುದಂತೂ ಒಂದು ಕಲೆಯಾಗಿ ಉಳಿದುಬಂದಿದೆ. ಒಂದು ಕಾಲದಲ್ಲಿ ತಾಂಬೂಲರಸ ಉಗಿಯುವುದರಲ್ಲೂ ಚಿತ್ರಕಲಾ ಕೌಶಲವನ್ನು ಪ್ರದರ್ಶಿಸುತ್ತಿದ್ದುದೂ ಉಂಟೆಂದು ದಶಕುಮಾರ ಚರಿತ್ರೆಯಿಂದ ತಿಳಿದುಬರುತ್ತದೆ. ರಾಜಾಸ್ಥಾನಗಳಲ್ಲಿ ಶ್ರೀಮಂತರ ಮನೆಗಳಲ್ಲಿ ತಾಂಬೂಲಕರಂಕವಾಹಿನಿಯರು ಇರುತ್ತಿದ್ದರು. ಇವರನ್ನು ಕುಮಾರವ್ಯಾಸ ಹಡಪದಬಲೆಯರು ಎಂದಿದ್ದಾನೆ. ಮನೆಯ ಯಜಮಾನ ಯಜಮಾನಿಯರಿಗೆ ಎಲೆಯಡಿಕೆ ಒದಗಿಸುವುದು ಇವರ ಕೆಲಸವಾಗಿತ್ತು. ತಾಂಬೂಲವನ್ನು ಉಗಿಯುವ ಪೀಕದಾನಿ ಎಂಬ ವಿಶೇಷ ರೀತಿಯ ಪಾತ್ರೆ ಇಂದಿಗೂ ಚಾಲ್ತಿಯಲ್ಲಿದೆ.

ಈಗ ತಾಂಬೂಲಕ್ಕೆ ಬಳಸುವ ಅಡಕೆಯಲ್ಲಿ ಎರಡು ಬಗೆಗಳುಂಟು. ಬೇಯಿಸಿ ಬಣ್ಣ ಕಟ್ಟಿದ್ದು ಒಂದು. ಹಸಿಯದು ಇನ್ನೊಂದು. ಅಡಕೆಯನ್ನು ಹಾಲು ಸಕ್ಕರೆಯಲ್ಲಿ ಬೇಯಿಸಿ ಬೆಳ್ಳಿಯ ರೇಕು ಕಟ್ಟಿ ಬಳಸುವವರೂ ಇದ್ದಾರೆ. ಎಲೆಯ ಖಾಯಿಷಿನಲ್ಲೂ ವೈವಿಧ್ಯವಿದೆ. ಶಿವಮೊಗ್ಗ ತರೀಕೆರೆಯಾದಿಯಾದ ಮಲೆನಾಡಿನಲ್ಲಿ ಕರಿಯ ಎಳೆ ಎಲೆ ಜನಪ್ರಿಯವಾಗಿದೆ. ಮದ್ರಾಸಿನ ಕಡೆ ಬಿಳಿಯ ಅಂಬಾಡಿ ಎಲೆ ಬಳಕೆಯಲ್ಲಿದೆ. ಉತ್ತರ ಭಾರತದವರು ಬಲಿತ ಹಣ್ಣೆಲೆ ಉಪಯೋಗಿಸುತ್ತಾರೆ. ಬಿಳಿಯ ಬಣ್ಣಕ್ಕೂ ಮೃದುತ್ವಕ್ಕೂ ಹೆಸರಾದ್ದು ಮೈಸೂರು ಎಲೆ.

ತಂಬಾಕು ಪ್ರಿಯರಿಗೆ ಒಗಚಾದ ಬೆಟ್ಟಡಕೆ ಹಾಗೂ ಬಲಿತ ಕಾರವಾದ ಎಲೆ ಹೊಸಸುಣ್ಣ ಆಗಬೇಕು.

ಬಾಹ್ಯ ಸಂಪರ್ಕಗಳು

  • Nutritional composition of paan
  • Humans, Iarc Working Group on the Evaluation of Carcinogenic Risks to; Cancer, International Agency for Research on (2004). Betel-quid and Areca-nut Chewing and Some Areca-nut-derived Nitrosamines. Vol. 85. p. 2004. ISBN 978-92-832-1285-0.
  • Traditional values of Betel Leaf in Indian
ತಾಂಬೂಲ 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:

Tags:

ಅಡಕೆಏಲಕ್ಕಿಲವಂಗ

🔥 Trending searches on Wiki ಕನ್ನಡ:

ನಾಟಕಶಬ್ದಅಳತೆ, ತೂಕ, ಎಣಿಕೆಭಾರತದ ಮುಖ್ಯಮಂತ್ರಿಗಳುಭಾರತೀಯ ರಿಸರ್ವ್ ಬ್ಯಾಂಕ್ಮೂಢನಂಬಿಕೆಗಳುರಕ್ತದೊತ್ತಡಈಸೂರುಬಾದಾಮಿಗಣೇಶವಿಜಯನಗರ ಸಾಮ್ರಾಜ್ಯಗುರು (ಗ್ರಹ)ಸಾಹಿತ್ಯಕಲಬುರಗಿಮೊದಲನೆಯ ಕೆಂಪೇಗೌಡಅಕ್ಕಮಹಾದೇವಿವ್ಯವಹಾರದಶಾವತಾರಚುನಾವಣೆಕರ್ನಾಟಕದ ಅಣೆಕಟ್ಟುಗಳುಭಾರತದ ಗಡಿಗಳು ಮತ್ತು ನರೆ ರಾಜ್ಯಗಳುಭಾರತದ ನದಿಗಳುಒನಕೆ ಓಬವ್ವತತ್ಸಮ-ತದ್ಭವಭರತನಾಟ್ಯಅಳಿಲುಕರ್ನಾಟಕದ ಮುಖ್ಯಮಂತ್ರಿಗಳುಮಾನವನಲ್ಲಿ ನಿರ್ನಾಳ ಗ್ರಂಥಿಗಳುಕನ್ನಡ ಸಾಹಿತ್ಯ ಪ್ರಕಾರಗಳುಮಾನವ ಹಕ್ಕುಗಳುಮೂಕಜ್ಜಿಯ ಕನಸುಗಳು (ಕಾದಂಬರಿ)ರವಿಚಂದ್ರನ್ಭಾರತದ ಜನಸಂಖ್ಯೆಯ ಬೆಳವಣಿಗೆಕನ್ನಡ ಸಾಹಿತ್ಯತ್ರಿವೇಣಿಮೈಸೂರು ಅರಮನೆಏಡ್ಸ್ ರೋಗವಿನಾಯಕ ದಾಮೋದರ ಸಾವರ್ಕರ್ಕರ್ನಾಟಕದ ಶಾಸನಗಳುಪೆಟ್ರೋಮ್ಯಾಕ್ಸ್ (ಚಲನಚಿತ್ರ)ಊಟವರದಕ್ಷಿಣೆಮಾನವ ಸಂಪನ್ಮೂಲ ನಿರ್ವಹಣೆಜಾಹೀರಾತುನಗರೀಕರಣಆರೋಗ್ಯಪ್ರಪಂಚದ ದೊಡ್ಡ ನದಿಗಳುವೀರೇಂದ್ರ ಪಾಟೀಲ್ವಿಜಯವಾಣಿಮಲೇರಿಯಾಪೌರತ್ವಝಾನ್ಸಿ ರಾಣಿ ಲಕ್ಷ್ಮೀಬಾಯಿವಿಷ್ಣುಶ್ರೀಕೃಷ್ಣದೇವರಾಯಓಂ ನಮಃ ಶಿವಾಯಭಾರತೀಯ ಕಾವ್ಯ ಮೀಮಾಂಸೆಆಮ್ಲಗಳು ಮತ್ತು ಪ್ರತ್ಯಾಮ್ಲಗಳುಆದಿವಾಸಿಗಳುಹಸ್ತ ಮೈಥುನತುಳಸಿಸಾದರ ಲಿಂಗಾಯತಭಾರತದ ಸರ್ವೋಚ್ಛ ನ್ಯಾಯಾಲಯವ್ಯಂಜನಸಂಕ್ಷಿಪ್ತ ಸಂಧ್ಯಾವಂದನೆ ಮಂತ್ರ ಮತ್ತು ಭೋಜನ ವಿಧಿವೀರಗಾಸೆರಾಮ ಮಂದಿರ, ಅಯೋಧ್ಯೆಮುದ್ದಣಹುಲಿಕವಿಕರ್ನಾಟಕದ ನದಿಗಳುದೇವಸ್ಥಾನಬಿ. ಎಂ. ಶ್ರೀಕಂಠಯ್ಯಉತ್ತರ ಕರ್ನಾಟಕಕರ್ಬೂಜಅಯೋಧ್ಯೆಯುರೋಪ್ಮಲ್ಟಿಮೀಡಿಯಾ🡆 More