ಚಲನಚಿತ್ರ ಕೂರ್ಮಾವತಾರ: ಕನ್ನಡ ಚಲನಚಿತ್ರ

ಕೂರ್ಮಾವತಾರ ಗಿರೀಶ್ ಕಾಸರವಳ್ಳಿ ನಿರ್ದೇಶಿನದ ಕನ್ನಡ ಚಲನಚಿತ್ರ.

ಇದು ಅದೇ ಹೆಸರಿನಲ್ಲಿ ಕುಂ.ವೀರಭದ್ರಪ್ಪ ಅವರು ಬರೆದ ಕನ್ನಡ ಕಾದಂಬರಿಯನ್ನು ಆಧರಿಸಿದೆ.

ಕೂರ್ಮಾವತಾರ (ಚಲನಚಿತ್ರ)
ಕೂರ್ಮಾವತಾರ
ನಿರ್ದೇಶನಗಿರೀಶ್ ಕಾಸರವಳ್ಳಿ
ನಿರ್ಮಾಪಕಬಸಂತ್‌ಕುಮಾರ‍್ ಪಾಟೀಲ್
ಚಿತ್ರಕಥೆಗಿರೀಶ್ ಕಾಸರವಳ್ಳಿ
ಕಥೆಕುಂ.ವೀರಭದ್ರಪ್ಪ
ಸಂಭಾಷಣೆಗಿರೀಶ್ ಕಾಸರವಳ್ಳಿ
ಪಾತ್ರವರ್ಗಡಾ.ಶಿಕಾರಿಪುರ ಕೃಷ್ಣಮೂರ್ತಿ ಜಯಂತಿ, ರಶ್ಮಿ ಸುಮುಖ ಭಾರದ್ವಾಜ್, ಅಪೂರ್ವ ಕಾಸರವಳ್ಳಿ, ಪ್ರವೀಣ್, ಹರೀಶ್ ರಾಜ್, ವಿಕ್ರಂ, ಸೂರಿ, ನಂಜುಂಡ, ಎಚ್. ಜಿ. ಸೋಮಶಖರ ರಾವ್, ಗೋವಾ ದತ್ತು
ಸಂಗೀತಐಸಾಕ್ ಥಾಮಸ್
ಛಾಯಾಗ್ರಹಣಜಿ. ಎಸ್. ಭಾಸ್ಕರ‍್
ಸಂಕಲನಎಂ. ಎನ್. ಸ್ವಾಮಿ
ಬಿಡುಗಡೆಯಾಗಿದ್ದು೨೦೧೧
ಪ್ರಶಸ್ತಿಗಳುಅತ್ಯುತ್ತಮ ಪ್ರಾದೇಶಿಕ (ಕನ್ನಡ) ಚಲನಚಿತ್ರರಾಷ್ಟ್ರೀಯ ಪುರಸ್ಕಾರ, ೫ ಅಂತಾರಾಷ್ಟ್ರೀಯ ಚಿತ್ರೋತ್ಸವಗಳಿಗೆ ಆಯ್ಕೆ
ಚಿತ್ರ ನಿರ್ಮಾಣ ಸಂಸ್ಥೆಬಸಂತ್‌ಕುಮಾರ‍್ ಪಾಟೀಲ್

ಕಥಾಹಂದರ

ಕೂರ್ಮಾವತಾರ ಇಲ್ಲಿ ಒಂದು ರೂಪಕ . ಸುರಾಸುರರುಸಮುದ್ರ ಮಂಥನ ಮಾಡುತ್ತಿರುವ ಸಮಯದಲ್ಲಿ, ಕಡೆಗೋಲಾಗಿ ಬಳಸಿದ ಮಂದರ ಪರ್ವತ ಮುಳುಗ ತೊಡಗಿದಾಗ ಮಹಾವಿಷ್ಣು ಕೂರ್ಮದ ಅವತಾರ ತಾಳಿ ಮುಳುಗುತ್ತಿರುವ ವಿಶ್ವವನ್ನು ಎತ್ತಿ ಹಿಡಿಯುತ್ತಾನೆ. ಭೌತಿಕ ಸುಖ ಲೋಲುಪ್ತತೆಯಲ್ಲಿ ಮುಳುಗಿ, ನಮ್ಮ ವ್ಯವಹಾರಗಳಲ್ಲಿ ಭಿನ್ನ ನೈತಿಕ ಮೌಲ್ಯಗಳಿಗೆ ಮಹತ್ವ ಕೊಡುತ್ತಿರುವ ಇಂದಿನ ಕಾಲ ಘಟ್ಟದಲ್ಲಿ ಜಗತ್ತಿಗೊಂದು ಪರ್ಯಾಯ ಮಾದರಿ ಕೊಡಬಲ್ಲ ಗಾಂಧಿವಾದ ಕೂರ್ಮ ಆದೀತೆ ಎಂಬ ಜಿಜ್ನಾಸೆ ಕಥೆಯ ಅನೇಕ ಆಶಯಗಳಲ್ಲೊಂದು.

ಸಾರಾಂಶ

ನೋಡಲು ಗಾಂಧೀಜಿಯ ಹೋಲಿಕೆ ಇದೆ ಎನ್ನುವ ಏಕ ಮಾತ್ರ ಕಾರಣಕ್ಕೆ ಸರ್ಕಾರಿ ನೌಕರ ಆನಂದ ರಾವ್‌ಗೆ ಟಿವಿ ಸೀರಿಯಲ್ ನಲ್ಲಿ ಗಾಂಧಿ ಪಾತ್ರ ಮಾಡುವ ಅವಕಾಶ ಸಿಗುತ್ತದೆ. ಅದರಿಂದ ಸಿಗಬಹುದಾದ ಹಣ ಮತ್ತು ಜನಪ್ರಿಯತೆಗೆ ಮರುಳಾದ ರಾಯರ ಮಗ ಹಾಗೂ ಸೊಸೆಯ ಒತ್ತಾಯ ಮಾಡಿದಾಗ ರಾಯರು ಆ ಪಾತ್ರ ಒಪ್ಪಿಕೊಳ್ಳುತ್ತಾರೆ. ಪಾತ್ರಮಾಡುತ್ತಾ ಹೋದಂತೆ ರಾಯರಲ್ಲಿ ಎರಡು ಭಿನ್ನ ರೀತಿಯ ಯಾನ ಆರಂಭವಾಗುತ್ತದೆ. ಗಾಂಧೀಜಿಯ ಬದುಕನ್ನು ಪುನರಾವಲೋಕಿಸುತ್ತಾ ಸಾಗಿದ ರಾಯರಿಗೆ ತನ್ನ ವೈಯಕ್ತಿಕ ಬದುಕಿನಲ್ಲಿ ತಾನು ತನ್ನ ಮೃತ ಪತ್ನಿಯ ಬಗ್ಗೆ ತಳೆದ ಕೆಲವು ನಿರ್ಧಾರಗಳು ಅಮಾನವೀಯವಾಗಿದ್ದವು ಅನ್ನಿಸ ತೊಡಗುತ್ತದೆ. ಹಾಗೆಯೇ ಗಾಂಧೀಜಿ ತಮ್ಮ ಮಗ ಹರಿಲಾಲ್ ಬಗ್ಗೆ ತಳೆದ ನಿಲುವು ಅನಾದರ ಎನ್ನಿಸಿ ತನ್ನ ಮನೆ ಸಂಸಾರದ ಬಗ್ಗೆ ವಿಶೇಷ ಅಕ್ಕರೆ ತೋರ ತೊಡಗುತ್ತಾರೆ. ಸೀರಿಯಲ್ ಜನಪ್ರಿಯವಾಗತೊಡಗಿದಂತೆ ಅವರ ಮಿತ್ರರು ರಾಯರಲ್ಲಿ ಗಾಂಧೀಜಿಯನ್ನು ಕಾಣ ಬಯಸುತ್ತಾರೆ. ಆದರೆ ಕ್ರಮೇಣ ರಾಯರಿಗೆ ತನ್ನ ಇತಿ ಮಿತಿಗಳೆಲ್ಲಾ ಅರಿವಾಗುತ್ತಾ ಹೋದಂತೆ ಅವರು ಹಲವು ರೀತಿಯ ತಲ್ಲಣಗಳಿಗೆ ಒಳಗಾಗುತ್ತಾ ಸಾಗುತ್ತಾರೆ. ವಿಧುರ ರಾಯರು ಇದಕ್ಕೆ ಉತ್ತರ ಹುಡುಕುತ್ತಾ ಕಸ್ತೂರ್ಬಾ ಪಾತ್ರದ ನಟಿಯ ಸಹಚರ್ಯಕ್ಕೆ ಹಪಹಪಿಸಿದಾಗ ಕಥೆ ಬೇರೊಂದು ತಿರುವು ಪಡೆಯುತ್ತದೆ.

ಹಿರಿಮೆಗಳು

  1. ರೋಂನಲ್ಲಿ ನಡೆಯಲಿರುವ ಏಷ್ಯನ್ ಚಿತ್ರೋತ್ಸವದಲ್ಲಿ ಪ್ರದರ್ಶನ
  2. ಬರ್ಲಿನ್ ನಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಪ್ರದರ್ಶನ
  3. ಮುಂಬಯಿ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಸ್ಪರ್ಧಾತ್ಮಕ ವಿಭಾಗದಲ್ಲಿ ಪಾಲ್ಗೊಳ್ಳುವಿಕೆ
  4. ಕೆನೆಡಾದ ಟೊರೊಂಟೊದಲ್ಲಿ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಮಾಸ್ಟರ್ ಫಿಲ್ಮ್ ಮೇಕರ್ ವಿಭಾಗದಲ್ಲಿ ಪ್ರದರ್ಶನ
  5. ಬ್ರೆಝಿಲ್ ದೇಶದ ರಯೋ ಡಿ ಜನೈರೋ ದಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಫ಼ೋಕಸ್ ವಿಭಾಗದಲ್ಲಿ ಪ್ರದರ್ಶನ

ಪ್ರಶಸ್ತಿ

ಇದು ಕನ್ನಡ ಅತ್ಯುತ್ತಮ ಚಲನಚಿತ್ರಕ್ಕೆ ನೀಡುವ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಪಡೆದಿದೆ (೨೦೧೧)

ಉಲ್ಲೇಖಗಳು

೧. Archived 2015-10-20 ವೇಬ್ಯಾಕ್ ಮೆಷಿನ್ ನಲ್ಲಿ.
೨. [ಶಾಶ್ವತವಾಗಿ ಮಡಿದ ಕೊಂಡಿ]

Tags:

ಚಲನಚಿತ್ರ ಕೂರ್ಮಾವತಾರ ಕಥಾಹಂದರಚಲನಚಿತ್ರ ಕೂರ್ಮಾವತಾರ ಸಾರಾಂಶಚಲನಚಿತ್ರ ಕೂರ್ಮಾವತಾರ ಹಿರಿಮೆಗಳುಚಲನಚಿತ್ರ ಕೂರ್ಮಾವತಾರ ಪ್ರಶಸ್ತಿಚಲನಚಿತ್ರ ಕೂರ್ಮಾವತಾರ ಉಲ್ಲೇಖಗಳುಚಲನಚಿತ್ರ ಕೂರ್ಮಾವತಾರಕುಂ.ವೀರಭದ್ರಪ್ಪಗಿರೀಶ್ ಕಾಸರವಳ್ಳಿ

🔥 Trending searches on Wiki ಕನ್ನಡ:

ಹಂಪೆಧನಂಜಯ್ (ನಟ)ಸೂಫಿಪಂಥಅದ್ವೈತಭಾಗ್ಯಲಕ್ಷ್ಮೀ (ಕನ್ನಡ ಧಾರಾವಾಹಿ)ಸತ್ಯ (ಕನ್ನಡ ಧಾರಾವಾಹಿ)ದೇಶದಿಯಾ (ಚಲನಚಿತ್ರ)ಕರ್ಬೂಜತತ್ಸಮ-ತದ್ಭವಮುಟ್ಟುಪತ್ರಮದುವೆಕರ್ನಾಟಕದಲ್ಲಿ ಪಂಚಾಯತ್ ರಾಜ್ಆಗಮ ಸಂಧಿಪುರಂದರದಾಸಕಲ್ಯಾಣ ಕರ್ನಾಟಕಮಾರ್ಕ್ಸ್‌ವಾದನದಿಸಬಿಹಾ ಭೂಮಿಗೌಡಅರಿಸ್ಟಾಟಲ್‌ಉಡುಪಿ ಚಿಕ್ಕಮಗಳೂರು (ಲೋಕಸಭಾ ಕ್ಷೇತ್ರ)ಕೃತಕ ಬುದ್ಧಿಮತ್ತೆರವೀಂದ್ರನಾಥ ಠಾಗೋರ್ನಂಜನಗೂಡುಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ಭಾರತೀಯ ಮೂಲಭೂತ ಹಕ್ಕುಗಳುಕೊಡಗು ಜಿಲ್ಲೆಪ್ರಗತಿಶೀಲ ಸಾಹಿತ್ಯಕಾವೇರಿ ನದಿ ನೀರಿನ ವಿವಾದಕೊಲ್ಲೂರು ಮೂಕಾಂಬಿಕಾ ದೇವಸ್ಥಾನಅಡಿಕೆಹೈದರಾಬಾದ್‌, ತೆಲಂಗಾಣನ್ಯೂ ಜೀಲ್ಯಾಂಡ್ ಕ್ರಿಕೆಟ್ ತಂಡಜಗನ್ನಾಥದಾಸರುಮಾನವ ಸಂಪನ್ಮೂಲ ನಿರ್ವಹಣೆತುಮಕೂರುವಂದೇ ಮಾತರಮ್ಸ್ಟಾರ್‌ಬಕ್ಸ್‌‌ಸೆಕೆಂಡರಿ ಸ್ಕೂಲ್ ಲೀವಿಂಗ್ ಸರ್ಟಿಫಿಕೇಟ್ಓಝೋನ್ ಪದರಅಶ್ವತ್ಥಾಮತಿರುಪತಿನಂಜುಂಡೇಶ್ವರ ದೇವಸ್ಥಾನ, ನಂಜನಗೂಡುಚೋಮನ ದುಡಿ (ಸಿನೆಮಾ)ನೇಮಿಚಂದ್ರ (ಲೇಖಕಿ)ವಿಜಯನಗರ ಸಾಮ್ರಾಜ್ಯಪರಿಸರ ಶಿಕ್ಷಣಭಾರತದ ರಾಷ್ಟ್ರಪತಿಚಿನ್ನಹನುಮಾನ್ ಚಾಲೀಸರಗಳೆಕೃಷ್ಣಾ ನದಿಕರ್ನಾಟಕ ಲೋಕಸಭಾ ಚುನಾವಣೆ, 2019ಕುವೆಂಪುಅಂಬಿಗರ ಚೌಡಯ್ಯಚಂದ್ರಗುಪ್ತ ಮೌರ್ಯಬಿ.ಎಸ್. ಯಡಿಯೂರಪ್ಪವಿಜ್ಞಾನಕರ್ನಾಟಕದ ಜಾನಪದ ಕಲೆಗಳುಜಿ.ಪಿ.ರಾಜರತ್ನಂಹಯಗ್ರೀವಜಲ ಮಾಲಿನ್ಯಕನ್ನಡ ಗುಣಿತಾಕ್ಷರಗಳುಬೆಂಗಳೂರು ಕೇಂದ್ರ (ಲೋಕ ಸಭೆ ಚುನಾವಣಾ ಕ್ಷೇತ್ರ)ಚಿಪ್ಕೊ ಚಳುವಳಿಬೆಟ್ಟದ ನೆಲ್ಲಿಕಾಯಿಮೊಘಲ್ ಸಾಮ್ರಾಜ್ಯಎರಡನೇ ಮಹಾಯುದ್ಧಭಾರತದ ಬುಡಕಟ್ಟು ಜನಾಂಗಗಳುಭಾರತದ ಮುಖ್ಯಮಂತ್ರಿಗಳುಹಾಲುರಾಮೇಶ್ವರ ಕ್ಷೇತ್ರತಾಜ್ ಮಹಲ್ಗುಣ ಸಂಧಿಆಲದ ಮರಪಿ.ಲಂಕೇಶ್ಪಶ್ಚಿಮ ಘಟ್ಟಗಳು🡆 More