ಕವಿತಾ ಕೃಷ್ಣ ಇವರು ೧೯೪೪ರಲ್ಲಿ ಜನಿಸಿದರು.
ಕನ್ನಡ ಪಂಡಿತ ಹಾಗು ಎಮ್.ಏ. ಪದವಿ ಪಡೆದ ಇವರು ಮಣ್ಣೆಯಲ್ಲಿರುವ ಪ್ರೌಢಶಾಲೆಯಲ್ಲಿಕನ್ನಡ ಪಂಡಿತರಾಗಿ ಹಾಗು ಕನ್ನಡ ಭಾಷಾ ಸಹಾಯಕರಾಗಿ ಕೆಲಸ ಮಾಡಿದ್ದಾರೆ. ಇವರ ತಂದೆ ಯಜಮಾನ ಕಾಳಯ್ಯ.
ಕವಿತಾ ಕೃಷ್ಣರು ಈವರೆಗೆ ೯೫ ಕೃತಿಗಳನ್ನು ರಚಿಸಿದ್ದಾರೆ. ಇವುಗಳಲ್ಲಿ ೧೩ ಕವನಸಂಕಲನಗಳು, ೧೫ ನಾಟಕಗಳು, ೧೦ ಶೈಕ್ಷಣಿಕ ಕೃತಿಗಳು, ೭ ಮಕ್ಕಳ ಸಾಹಿತ್ಯಕೃತಿಗಳು, ೧೯ ಚರಿತ್ರಾಕೃತಿಗಳು ಹಾಗು ೨೫ ಇತರ ಕೃತಿಗಳು ಸೇರಿವೆ. ಇವರ ಕೃತಿಗಳಲ್ಲಿ ಕೆಲವು ಇಂತಿವೆ:
ಕವಿತಾಕೃಷ್ಣರು ತುಮಕೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಗೌರವಿಸಲ್ಪಟ್ಟಿದ್ದಾರೆ. ದೆಹಲಿ ಸಮ್ಮೇಲನದಲ್ಲಿ "ಕರ್ನಾಟಕ ಜ್ಯೋತಿ" ಪ್ರಶಸ್ತಿ ಪಡೆದಿದ್ದಾರೆ. ಭಾರತೀಯ ವಿದ್ಯಾಭವನದ "ಸರ್ವೋತ್ತಮ ಆಚಾರ್ಯ" ಪ್ರಶಸ್ತಿ ಇವರಿಗೆ ಲಭಿಸಿದೆ. ಇವಲ್ಲದೆ ಕೇಂದ್ರ ಮಾನವ ಸಂಪನ್ಮೂಲ ಇಲಾಖೆಯ ಫೆಲೋಶಿಪ್, ಆದಿಚುಂಚನಗಿರಿ ಮಠದ "ಚುಂಚಶ್ರೀ",ಗೊರೂರು ಪ್ರಶಸ್ತಿ, ದೆಹಲಿ ಕನ್ನಡ ಸಂಘದ "ಕನ್ನಡ ರತ್ನ" ಪ್ರಶಸ್ತಿ, ಜವಾಹರಲಾಲ ನೆಹರೂ ಅಕಾಡೆಮಿಯ "ವಿದ್ಯಾ ವಾಚಸ್ಪತಿ" ಪ್ರಶಸ್ತಿ ಸಹ ಇವರಿಗೆ ಸಂದಿವೆ.
This article uses material from the Wikipedia ಕನ್ನಡ article ಕವಿತಾ ಕೃಷ್ಣ, which is released under the Creative Commons Attribution-ShareAlike 3.0 license ("CC BY-SA 3.0"); additional terms may apply (view authors). ವಿಶೇಷವಾಗಿ ಟಿಪ್ಪಣಿ ಮಾಡದಿದ್ದ ಹೊರತು ಪಠ್ಯ "CC BY-SA 4.0" ರಡಿ ಲಭ್ಯವಿದೆ. Images, videos and audio are available under their respective licenses.
®Wikipedia is a registered trademark of the Wiki Foundation, Inc. Wiki ಕನ್ನಡ (DUHOCTRUNGQUOC.VN) is an independent company and has no affiliation with Wiki Foundation.