ಶ್ರೀರಂಗ

ಆದ್ಯ ರಂಗಾಚಾರ್ಯ ( ಶ್ರೀರಂಗ ) (೧೯೦೪ - ೧೯೮೪) - ಕನ್ನಡದ ಪ್ರಖ್ಯಾತ ವಿದ್ವಾಂಸ, ನಾಟಕಕಾರ ಮತ್ತು ಸಾಹಿತಿ.

ಇವರ "'ಕಾಳಿದಾಸ"' ಎಂಬ ಕೃತಿಗೆ ೧೯೭೧ರ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರಕಿದೆ. ಆದ್ಯ ರಂಗಾಚಾರ್ಯರ ಮೂಲ ಹೆಸರು ಆರ್.ವಿ.ಜಾಗೀರದಾರ.

ಶ್ರೀರಂಗ
ಚಿತ್ರ[[File:|200px]]
ಜನನದ ದಿನಾಂಕ1904
ಹುಟ್ಟಿದ ಸ್ಥಳಅಗರಖೇಡ
ಸಾವಿನ ದಿನಾಂಕ1984
ಮರಣ ಸ್ಥಳಬೆಂಗಳೂರು
ವೃತ್ತಿನಟ, ಲೇಖಕ
ರಾಷ್ಟ್ರೀಯತೆಭಾರತ, ಬ್ರಿಟಿಷ್ ರಾಜ್, ಭಾರತೀಯ ಪ್ರಭುತ್ವ
ಮಾತನಾಡುವ ಅಥವಾ ಬರೆಯುವ ಭಾಷೆಗಳುಕನ್ನಡ
ಪೌರತ್ವಭಾರತ, ಬ್ರಿಟಿಷ್ ರಾಜ್, ಭಾರತೀಯ ಪ್ರಭುತ್ವ
ದೊರೆತ ಪ್ರಶಸ್ತಿಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಪದ್ಮಭೂಷಣ
ಲಿಂಗಪುರುಷ

ಜನನ

ಇವರು 26 ಸೆಪ್ಟಂಬರ 1904 ರಂದು ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಅಗರಖೇಡದಲ್ಲಿ ಜನಿಸಿದರು.

ಶಿಕ್ಷಣ

ಪ್ರಾರಂಭಿಕ ಶಿಕ್ಷಣ ಅಗರಖೇಡ ಮತ್ತು ವಿಜಯಪುರದಲ್ಲಿ ಮಾಧ್ಯಮಿಕ, ಪುಣೆಯ ಡೆಕ್ಕನ್ ಕಾಲೇಜಿನಲ್ಲಿ ಪದವಿ. ಲಂಡನ್ನಿನ ಸ್ಕೂಲ್ ಆಫ್ ಓರಿಯಂಟಲ್ ಸ್ಟಡೀಸ್‌ನಲ್ಲಿ ಭಾಷಾಶಾಸ್ತ್ರದಲ್ಲಿ ಪಡೆದ ಎಂ.ಎ. ಪದವಿ (೧೯೨೫-೨೮)

ಲಂಡನ್ನಿನಲ್ಲಿ ಎಮ್.ಎ. ಪದವಿಯನ್ನು ಪಡೆದ ಬಳಿಕ ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ೧೯೨೮ರಲ್ಲಿ ಸಂಸ್ಕೃತ ಪ್ರಾಧ್ಯಾಪಕರಾಗಿ ಸೇವೆ ಪ್ರಾರಂಭಿಸಿದರು ಹಾಗು 20 ವರ್ಷಗಳ ಕಾಲ ದುಡಿದರು.

ಸಾಹಿತ್ಯ

ಶ್ರೀರಂಗರ ಸಾಹಿತ್ಯ ಅಪಾರ ಹಾಗು ವೈವಿಧ್ಯಮಯ. ಇವರು ೩೪ ದೊಡ್ಡ ನಾಟಕಗಳನ್ನು, ೫೦ ಏಕಾಂಕಗಳನ್ನು, ೧೦ ಕಾದಂಬರಿಗಳನ್ನು, ೧೨೦ ಹಾಸ್ಯ ಪ್ರಬಂಧಗಳನ್ನು ಹಾಗು ೯ ಗಂಭೀರ ಗ್ರಂಥಗಳನ್ನು ರಚಿಸಿದ್ದಾರೆ. ಧಾರವಾಡದ ಪ್ರಸಿದ್ಧ ನಿಯತಕಾಲಿಕ "'ಜಯಂತಿ"'ಗೆ ಸತತ ೩ ವರ್ಷಗಳವರೆಗೆ ಅಂಕಣ ಬರೆದಿದ್ದಾರೆ. ವಿವಿಧ ಪತ್ರಿಕೆಗಳಲ್ಲಿ ೫೦ಕ್ಕೂ ಹೆಚ್ಚು ಬಿಡಿ ಲೇಖನಗಳನ್ನು ಬರೆದಿದ್ದಾರೆ. ಭರತನ ನಾಟ್ಯಶಾಸ್ತ್ರ ಇವರ ಪ್ರಸಿಧ್ಧ ಕೃತಿ.

ವಿದ್ಯಾರ್ಥಿ ದೆಸೆಯಿಂದಲೇ ನಾಟಕ ರಚನೆಯ ಹುಚ್ಚು. ರಚಿಸಿದ ಮೊದಲ ಕೃತಿ ‘ಉದರ ವೈರಾಗ್ಯ’ ೧೯೩೦ರಲ್ಲಿ ಪ್ರಕಟಿತ. ಕರ್ನಾಟಕ ಕಾಲೇಜಿನಲ್ಲಿ ಸಂಸ್ಕೃತ ಸಹಾಯಕ ಉಪನ್ಯಾಸಕರಾಗಿ ನೇಮಕ. ನಂತರ ೧೯೫೪ರಲ್ಲಿ ಕೇಂದ್ರ ಸಮಾಚಾರ ಮತ್ತು ಪ್ರಸಾರ ಇಲಾಖೆ. ೧೯೫೬ರಲ್ಲಿ ಬೆಂಗಳೂರು ಆಕಾಶವಾಣಿಯ ನಾಟಕ ವಿಭಾಗದ ನಿರ್ದೇಶಕರ ಹುದ್ದೆ. ಬಾಲ್ಯದಲ್ಲೇ ಗ್ರಾಮೀಣ ರಂಗಭೂಮಿ ಬೀರಿದ ಪ್ರಭಾವ.

ಬಿಜಾಪುರ ಮತ್ತು ಪುಣೆಯ ಕಂಪನಿಯ ನಾಟಕಗಳು ಬಣ್ಣದ ಬದುಕಿನ ರುಚಿ ತೋರಿದವು. ಇಂಗ್ಲೆಂಡಿನಲ್ಲಿದ್ದಾಗ ೩ ವರ್ಷ ವಿವಿಧ ರಂಗಭೂಮಿಯ ಪರಿಚಯ. ರಚಿಸಿದ ನಾಟಕಗಳು ಹಲವಾರು-ದರಿದ್ರ ನಾರಾಯಣ, ಹರಿಜನ್ವಾರ, ಪ್ರಪಂಚ ಪಾಣಿಪತ್ತು, ಸಂಧ್ಯಾಕಾಲ, ಕರ್ತಾರನ ಕಮ್ಮಟ, ಶೋಕಚಕ್ರ, ಕತ್ತಲೆ-ಬೆಳಕು, ಕೇಳು ಜನಮೇಜಯ, ಸಿರಿಪುರಂದರ, ಏನು ಬೇಡಲಿ ನಿನ್ನ ಬಳಿಗೆ ಬಂದು, ಗುಮ್ಮನೆಲ್ಲಿಹ ತೋರಮ್ಮ, ಸಂಸಾರಿಗ ಕಂಸ, ಜರಾಸಂ, ಜೀವನ ಜೋಕಾಲಿ ಮುಂತಾದ ೩೪ ದೊಡ್ಡ ನಾಟಕಗಳು, ಐವತ್ತು ಏಕಾಂಕ ನಾಟಕಗಳು, ಹತ್ತು ಕಾದಂಬರಿಗಳು, ನೂರಿಪ್ಪತ್ತು ಹಾಸ್ಯ ಪ್ರಬಂಧಗಳು, ಭಗವದ್ಗೀತೆ, ಸಂಸ್ಕೃತ ನಾಟಕ, ಭಾಷಾಶಾಸ್ತ್ರ, ನಾಟ್ಯಶಾಸ್ತ್ರ, ಹಾಸ್ಯರಸ ವಿವೇಚನೆ, ಕಾಳಿದಾಸ ಈ ವಿಷಯಗಳ ಮೇಲೆ ಬರೆದ ಒಂಬತ್ತು ಗ್ರಂಥಗಳೂ ಸೇರಿ ಒಟ್ಟು ೧೦೦ಕ್ಕೂ ಹೆಚ್ಚು ಕೃತಿ ರಚನೆ.

ನಾಟಕಗಳು

  • ಸ್ವಾರ್ಥತ್ಯಾಗ
  • ಧರ್ಮವಿಜಯ
  • ಉದರ ವೈರಾಗ್ಯ
  • ಹರಿಜನ್ವಾರ
  • ಸಂಸಾರಿಗ ಕಂಸ
  • ಪ್ರಪಂಚ ಪಾಣಿಪತ್ತು
  • ಜರಾಸಂಧಿ
  • ವೈದ್ಯರಾಜ
  • ದರಿದ್ರನಾರಾಯಣ
  • ನರಕದಲ್ಲಿ ನರಸಿಂಹ
  • ಗೆಳೆಯ ನೀನು ಹಳೆಯ ನಾನು
  • ಶೋಕಚಕ್ರ
  • ಪುರುಷಾರ್ಥ
  • ಜೀವನ ಜೋಕಾಲಿ
  • ಅಧಿಕ ಮಾಸ
  • ಮುಕ್ಕಣ್ಣ ವಿರಾಟಪುರುಷ
  • ಇದೇ ಸಂಸಾರ
  • ಸಂಧ್ಯಾಕಾಲ
  • ಕತ್ತಲೆ ಬೆಳಕು
  • ನೀ ಮಾಯೆಯೊಳಗೋ? ನಿನ್ನೊಳು ಮಾಯೆಯೋ?
  • ಗುಮ್ಮನೆಲ್ಲಿಹ ತೋರಮ್ಮ- ಇವು ೧೯೫೯ನೆಯ ಇಸವಿಗಿಂತ ಮೊದಲು ಶ್ರೀರಂಗರು ಬರೆದ ನಾಟಕಗಳು. " ಕತ್ತಲೆ ಬೆಳಕು" ನಾಟಕದ ನಂತರ ಅವರ ಬರವಣಿಗೆಯಲ್ಲಿ ಹೊಸ ಬದಲಾವಣೆ ಬಂದಿತು.
  • ಕೇಳು ಜನಮೇಜಯ
  • ಹುಟ್ಟಿದ್ದು ಹೊಲೆಯೂರು
  • ಸಿರಿಪುರಂದರ
  • ಸಂಜೀವನಿ
  • ಸಾವಿತ್ರಿ
  • ತೇಲಿಸೊ ರಂಗ,ಇಲ್ಲ ಮುಳುಗಿಸೊ
  • ದಾರಿ ಯಾವುದಯ್ಯಾ ವೈಕುಂಠಕೆ?
  • ರಂಗಭಾರತ
  • ಸ್ವರ್ಗಕ್ಕೆ ಮೂರೆ ಬಾಗಿಲು - ಇವು ೧೯೫೯ರ ನಂತರದ ಅವರ ಶ್ರೇಷ್ಠ ನಾಟಕಗಳು.

ಅವರ ನಾಟಕಗಳನ್ನು ಹೆಚ್ಚಾಗಿ ಕಲಾವಿಲಾಸಿ ನಾಟಕಕಾರರು ಆಡುತ್ತಲಿದ್ದಾರೆ. (ಅವರೇ ಸ್ವತಃ ೧೯೩೩ರಲ್ಲಿ ’ಕಲಾವಿಲಾಸಿ ನಾಟ್ಯಸಂಘ’ ಎನ್ನುವ ಸಂಸ್ಥೆಯನ್ನು ಧಾರವಾಡದಲ್ಲಿ ಸ್ಥಾಪಿಸಿದರು.) " ದಾರಿ ಯಾವುದಯ್ಯಾ ವೈಕುಂಠಕೆ?" ನಾಟಕವು ಬಿ.ವಿ. ಕಾರಂತರಿಂದ ರಂಗದ ಮೇಲೆ ತರಲ್ಪಟ್ಟಿದೆ. ನಾಟಕಗಳನ್ನಲ್ಲದೆ ಶ್ರೀರಂಗರು ಹರಟೆಗಳನ್ನು ಹಾಗು ಕಾದಂಬರಿಗಳನ್ನು ಸಹ ಬರೆದಿದ್ದಾರೆ. ಇವರ ಕಾದಂಬರಿಗಳಲ್ಲಿ ಬರುವ ಪ್ರಜ್ಞಾಪ್ರವಾಹ ತಂತ್ರವು ಕನ್ನಡ ಕಾದಂಬರಿಗಳಲ್ಲಿ ವಿಶಿಷ್ಟವಾದದ್ದಾಗಿದೆ.

ಕಾದಂಬರಿಗಳು

  • ಭರಮಪ್ಪನ ಭೂತ,
  • ವಿಶ್ವಾಮಿತ್ರನ ಸೃಷ್ಟಿ,
  • ಕುಮಾರ ಸಂಭವ,
  • ಅನಾದಿ,
  • ಪ್ರಕೃತಿ (ಪ್ರಕೃತಿ ಪುಸ್ತಕದ ವಿಮರ್ಶೆ). ಮೊದಲಾದವು ಶ್ರೀರಂಗರ ಕಾದಂಬರಿಗಳು. "ಗೀತಾ ಗಾಂಭೀರ್ಯ", "ಭಾರತೀಯ ರಂಗಭೂಮಿ", "ಕಾಳಿದಾಸ" ಮೊದಲಾದವು ಇವರ ಗಂಭೀರ ಗ್ರಂಥಗಳು. ಅಲ್ಲದೆ ಕಮಾಲ್ ಪಾಶಾ ಹಾಗು ಜವಾಹರಲಾಲ ನೆಹರೂರವರ [೧] ಚರಿತ್ರೆಯನ್ನು ಸಹ ಶ್ರೀರಂಗರು ಬರೆದಿದ್ದಾರೆ. ಇವರು " ಆಹ್ವಾನ" ಎನ್ನುವ ಕವನ ಸಂಕಲನವನ್ನೂ ಸಹ ರಚಿಸಿದ್ದಾರೆ.

ರಾಜಕೀಯ ಜೀವನ

ಶ್ರೀರಂಗರು ಪ್ರತ್ಯಕ್ಷವಾಗಿ ಸ್ವಾತಂತ್ರ್ಯ ಚಳವಳಿಯಲ್ಲಿ ಭಾಗವಹಿಸಲಿಲ್ಲ. ಆದರೆ ಸ್ವಾತಂತ್ರ್ಯ ಹೋರಾಟಗಾರರಿಗೆ ಇವರ ಅಪ್ರತ್ಯಕ್ಷ ನೆರವು ಸದಾ ಸಿದ್ಧವಿರುತ್ತಿತ್ತು. ಕೆಲವು ಭೂಗತ ಹೋರಾಟಗಾರರು ಇವರ ಮನೆಯಲ್ಲಿ ಆಶ್ರಯ ಹಾಗು ವೈದ್ಯಕೀಯ ನೆರವು ಪಡೆದಿದ್ದಾರೆ. ಚಳವಳಿ ಮುಂದುವರೆಸಲು ಧನಸಹಾಯ ಪಡೆದಿದ್ದಾರೆ. ಸ್ವತಃ ಶ್ರೀರಂಗರು ಕರ್ಮವೀರ ವಾರಪತ್ರಿಕೆಯಲ್ಲಿ ರಾಜಕೀಯ ಅಗ್ರಲೇಖನಗಳನ್ನು ಬರೆದಿದ್ದಾರೆ. ತಮ್ಮ ಮನೆಯಿಂದಲೇ ‘ಬುಲೆಟಿನ್’ ಸೈಕ್ಲೊಸ್ಟೈಲ್ ಮಾಡಿಸಿ ಕಳುಹಿಸಿ ಕೊಟ್ಟಿದ್ದಾರೆ.

ಕರ್ನಾಟಕ ಏಕೀಕರಣ

ಕರ್ನಾಟಕ ಏಕೀಕರಣದಲ್ಲಿ ಇವರು ಅತ್ಯಂತ ಮಹತ್ವದ ಪಾತ್ರವನ್ನು ಮಾಡಿದ್ದಾರೆ. ಕರ್ನಾಟಕ ವಿದ್ಯಾವರ್ಧಕ ಸಂಘವು ೧೯೦೬ರಲ್ಲಿಯೇ ಕರ್ನಾಟಕ ಏಕೀಕರಣದ ಗೊತ್ತುವಳಿಯನ್ನು ಸ್ವೀಕರಿಸಿತ್ತು. ೧೯೪೪ರಲ್ಲಿ ಕೆಲವು ಗೆಳೆಯರ ಜೊತೆಗೆ ಕೂಡಿಕೊಂಡು, ಶ್ರೀರಂಗರು ಅಖಿಲ ಕರ್ನಾಟಕ ಏಕೀಕರಣ ಸಮಿತಿಯೊಂದನ್ನು ಸ್ಥಾಪಿಸಿದರು. ಈ ಸಮಿತಿಗೆ ಕರ್ನಾಟಕದ ಎಲ್ಲ ಭಾಗಗಳಿಂದಲೂ ಪ್ರತಿನಿಧಿಗಳನ್ನು ಆಯೋಜಿಸಲಾಗಿತ್ತು. ೧೯೪೬ಡಿಸೆಂಬರದಲ್ಲಿ ಶ್ರೀರಂಗರು ಪ್ರಧಾನ ಮಂತ್ರಿ ಜವಾಹರಲಾಲ ನೆಹರೂ[೨]ರನ್ನು ಭೇಟಿಯಾಗಿ ಭಾಷಾವಾರು ಪ್ರಾಂತಗಳ ರಚನೆಗಾಗಿ ಉಪಸಮಿತಿಯ ರಚನೆ ಹಾಗು ಅದರಲ್ಲಿ ಕರ್ನಾಟಕ ಏಕೀಕರಣದ ವಿಷಯವು ಒಳಗೊಳ್ಳುವ ನಿರ್ಣಯದಲ್ಲಿ ಮಹತ್ವದ ಪಾತ್ರವಹಿಸಿದರು. ಆದರೆ ಭಾರತಕ್ಕೆ ಸ್ವಾತಂತ್ರ್ಯ ದೊರೆತ ಬಳಿಕ ೧೯೪೭ ಸೆಪ್ಟೆಂಬರದಲ್ಲಿ ರಾಜಕೀಯ ವ್ಯಕ್ತಿಗಳ ಬೇರೊಂದು ಸಮಿತಿಯು ಅಸ್ತಿತ್ವಕ್ಕೆ ಬಂದಿತು. ಅಲ್ಲದೆ, ಶ್ರೀರಂಗರನ್ನು ಧಾರವಾಡದಿಂದಲೇ ಹೊರಗೋಡಿಸುವ ಪ್ರಯತ್ನಗಳು ನಡೆದವು. ಆತ್ಮಾಭಿಮಾನಿ ಶ್ರೀರಂಗರು ೧೯೪೮ರಲ್ಲಿ ನೌಕರಿಗೆ ರಾಜೀನಾಮೆ ನೀಡಿದರು.

ಗೌರವ

  • ೧೯೫೪ರಲ್ಲಿ ರಾಯಚೂರಿನಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಶ್ರೀರಂಗರು ಅಧ್ಯಕ್ಷರಾಗಿದ್ದರು.
  • ೧೯೬೩ರಲ್ಲಿ ಕೇಂದ್ರ ಸಂಗೀತ ನಾಟಕ ಅಕಾಡೆಮಿಯ Playwright Award
  • ೧೯೬೮ರಲ್ಲಿ ಕೇಂದ್ರ ಸಂಗೀತ ನಾಟಕ ಅಕಾಡೆಮಿಯ ಫೆಲೋಶಿಪ್
  • ೧೯೭೨ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿಯ ಪುರಸ್ಕಾರ
  • ೧೯೭೨ರಲ್ಲಿ ರಾಜ್ಯ ಸಂಗೀತ ನಾಟಕ ಅಕಾಡೆಮಿ ಪುರಸ್ಕಾರ
  • ೧೯೭೨ರಲ್ಲಿ ರಾಜ್ಯ ಸಾಹಿತ್ಯ ಅಕಾಡೆಮಿ ಪುರಸ್ಕಾರ

ಹೆಸರಾಂತ ಭಾರತೀಯ ಆಂಗ್ಲ ಲೇಖಕಿ ಶಶಿ ದೇಶಪಾಂಡೆ ಶ್ರೀರಂಗರ ಮಗಳು. [೩] ೧೯೮೪ರಲ್ಲಿ ಶ್ರೀರಂಗರು ಬೆಂಗಳೂರಿನಲ್ಲಿ ನಿಧನರಾದರು.

ನಿಧನ

ಶ್ರೀರಂಗರು 17ನೇ ಅಕ್ಟೋಬರ್ 1984ರಲ್ಲಿ ಧೈವಾಧಿನರಾದರು.

ನೋಡಿ

ಹೊರಗಿನ ಕೊಂಡಿಗಳು

ಉಲ್ಲೇಖಗಳು

Tags:

ಶ್ರೀರಂಗ ಜನನಶ್ರೀರಂಗ ಶಿಕ್ಷಣಶ್ರೀರಂಗ ಸಾಹಿತ್ಯಶ್ರೀರಂಗ ನಾಟಕಗಳುಶ್ರೀರಂಗ ಕಾದಂಬರಿಗಳುಶ್ರೀರಂಗ ರಾಜಕೀಯ ಜೀವನಶ್ರೀರಂಗ ಕರ್ನಾಟಕ ಏಕೀಕರಣಶ್ರೀರಂಗ ಗೌರವಶ್ರೀರಂಗ ನಿಧನಶ್ರೀರಂಗ ನೋಡಿಶ್ರೀರಂಗ ಹೊರಗಿನ ಕೊಂಡಿಗಳುಶ್ರೀರಂಗ ಉಲ್ಲೇಖಗಳುಶ್ರೀರಂಗ

🔥 Trending searches on Wiki ಕನ್ನಡ:

ಸೂರ್ಯ (ದೇವ)ಕರ್ಣವಿಕ್ರಮಾರ್ಜುನ ವಿಜಯಆದಿಪುರಾಣಕೃಷಿ ಉಪಕರಣಗಳುಕಾಲಾಯ ತಸ್ಮೈ ನಮಃ (ಚಲನಚಿತ್ರ)ರಾಷ್ಟ್ರಕವಿಮಹಾತ್ಮ ಗಾಂಧಿಋಗ್ವೇದನಾಲ್ವಡಿ ಕೃಷ್ಣರಾಜ ಒಡೆಯರುಹಾಲುವಾಯು ಮಾಲಿನ್ಯಹೆಚ್.ಡಿ.ಕುಮಾರಸ್ವಾಮಿಓಂ (ಚಲನಚಿತ್ರ)ಚದುರಂಗ (ಆಟ)ಮುಪ್ಪಿನ ಷಡಕ್ಷರಿಅಂತಾರಾಷ್ಟ್ರೀಯ ಸಂಬಂಧಗಳುರಂಗಭೂಮಿರಾಮಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಹಂಪೆರಾಧಿಕಾ ಗುಪ್ತಾಶಿಶುನಾಳ ಶರೀಫರುಮೋಕ್ಷಗುಂಡಂ ವಿಶ್ವೇಶ್ವರಯ್ಯಕೃಷಿಡಿಸ್ಲೆಕ್ಸಿಯಾನೀತಿ ಆಯೋಗಎಂ. ಕೆ. ಇಂದಿರಹೆಚ್.ಡಿ.ದೇವೇಗೌಡಭಜರಂಗಿ (ಚಲನಚಿತ್ರ)ಭಾರತದಲ್ಲಿನ ಶಿಕ್ಷಣಇಮ್ಮಡಿ ಪುಲಕೇಶಿಪೋಕ್ಸೊ ಕಾಯಿದೆಮಹಮದ್ ಬಿನ್ ತುಘಲಕ್ಆರೋಗ್ಯರಾಜಾ ರವಿ ವರ್ಮದ್ರವೀಕೃತ ಪೆಟ್ರೋಲಿಯಮ್‌ ಅನಿಲ(ಎಲ್‌ಪಿಜಿ),ಮಾನವ ಸಂಪನ್ಮೂಲ ನಿರ್ವಹಣೆಬ್ರಿಟಿಷ್ ಈಸ್ಟ್ ಇಂಡಿಯ ಕಂಪನಿಕದಂಬ ಮನೆತನವಿದುರಾಶ್ವತ್ಥಭಾರತದ ಬ್ಯಾಂಕುಗಳ ಪಟ್ಟಿಛಂದಸ್ಸುಸುರಪುರದ ವೆಂಕಟಪ್ಪನಾಯಕಅಲೆಕ್ಸಾಂಡರ್ಕರ್ನಾಟಕ ಸರ್ಕಾರಬಿ.ಜಯಶ್ರೀಶಿವರಾಜ್‍ಕುಮಾರ್ (ನಟ)ಎಚ್.ಎಸ್.ಶಿವಪ್ರಕಾಶ್ಬಿ.ಎಸ್. ಯಡಿಯೂರಪ್ಪಈಸೂರುಕರ್ನಾಟಕ ಸಹಕಾರ ಹಾಲು ಉತ್ಪಾದಕರ ಒಕ್ಕೂಟಉಪನಯನಕರ್ನಾಟಕ ವಿಧಾನ ಪರಿಷತ್ಇದ್ದಿಲುಅಂತಿಮ ಸಂಸ್ಕಾರಭಾರತದ ಪ್ರಧಾನ ಮಂತ್ರಿಸೂಫಿಪಂಥಚಂಪೂಮಧುಮೇಹಭತ್ತಕನ್ನಡ ಸಾಹಿತ್ಯ ಪರಿಷತ್ತುಕನ್ನಡದಲ್ಲಿ ಕಾದಂಬರಿ ಸಾಹಿತ್ಯಎ.ಪಿ.ಜೆ.ಅಬ್ದುಲ್ ಕಲಾಂಭಾರತದ ಸಂಸತ್ತುಗಂಗ (ರಾಜಮನೆತನ)ದೀಪಾವಳಿಕನ್ನಡಪ್ರಭಶ್ರೀ ಸಿದ್ದೇಶ್ವರ ಸ್ವಾಮಿಜಿಗಳುಚುನಾವಣೆಭರತ-ಬಾಹುಬಲಿಮಧ್ವಾಚಾರ್ಯಡಿ.ಕೆ ಶಿವಕುಮಾರ್ವಿಜಯದಾಸರುಕರ್ನಾಟಕ ವಿಶ್ವವಿದ್ಯಾಲಯಕರ್ನಾಟಕ ಜನಪದ ನೃತ್ಯಪ್ಲೇಟೊಚಿಪ್ಕೊ ಚಳುವಳಿ🡆 More