ರಾಘವಾಂಕನ ‘ಹರಿಶ್ಚಂದ್ರ ಚಾರಿತ್ರ್ಯ’ ಕಾವ್ಯದಲ್ಲಿ ಸಪ್ತಮ ಸ್ಥಲವು ಆತನ ಉಜ್ವಲ ಕಾವ್ಯಪ್ರತಿಭೆಗೆ ಸಾಕ್ಷಿಯಾಗಿದೆ.
ಆತನ ಇಡೀ ಕಾವ್ಯವೇ ಅದಕ್ಕೆ ಸಾಕ್ಷಿಯಾಗಬಹುದಾದರೂ, (’ಹರಿಶ್ಚಂದ್ರಕಾವ್ಯಸಂಗ್ರಹ’ದ ವಾಚನ ರಸಿಕರಿಗೊಂದು ರಸಯಾತ್ರೆ. – ಕುವೆಂಪು) ಈ ಪ್ರಸಂಗ ಮಾತ್ರ, ತನ್ನ ವೈಚಾರಿಕ ಸಂಘರ್ಷದಿಂದ, ಕಾವ್ಯಸೌಂದರ್ಯದಿಂದ ಆತನ ಪ್ರತಿಭೆಗೆ ಸುಂದರ ಚೌಕಟ್ಟನ್ನು ಒದಗಿಸುತ್ತದೆ. ಸಂದರ್ಭ ಹೀಗಿದೆ: ತಾನು ಸೃಷ್ಟಿಸಿದ ಹಂದಿ, ಹರಿಶ್ಚಂದ್ರನ ಬಾಣಗಳಿಂದ ಗಾಯಗೊಂಡು ಬಂದಿದೆ. ಅದನ್ನು ನೋಡಿ ಕುಪಿತನಾದ ವಿಶ್ವಾಮಿತ್ರ ‘ಸಿಕ್ಕಿದನಲಾ ಭೂಪನ್ ಇಂದು. ನಾನಾಯ್ತು ತಾನಾಯ್ತು, ಕೆಡಿಸದೆ ಮಾಣೆನ್’ ಎಂದು ಹೂಂಕರಿಸಿದಾಗ ಸತಿಯರಿಬ್ಬರು ಸೃಷ್ಟಿಯಾಗುತ್ತಾರೆ. ಆತನ ಆಜ್ಞೆಯಂತೆ, ಅವರಿಬ್ಬರು ಹರಿಶ್ಚಂದ್ರನಿದ್ದಲ್ಲಿಗೆ ಬಂದು, ಹಾಡಿ ನರ್ತಿಸಿ ಅವನನ್ನು ಸಂತೋಷಪಡಿಸುತ್ತಾರೆ. ಆದರೆ ಆತ ಕೊಡಲುದ್ದೇಶಿಸಿದ ಕೊಡುಗೆಯನ್ನು ನಿರಾಕರಿಸಿ ತಮ್ಮನ್ನು ಮದುವೆಯಾಗುವಂತೆ ಹಠ ಹಿಡಿಯುತ್ತಾರೆ. ಆದರೆ, ಹರಿಶ್ಚಂದ್ರ ಅವರನ್ನು ಮದುವೆಯಾಗದಿರುವುದಕ್ಕೆ ಕೊಡುವ ಕಾರಣ ಅವರು ಹೊಲತಿಯರೆಂಬುದು! ಈ ಹೊಲೆತನದ ವಿಶ್ಲೇಷಣೆಯನ್ನು ರಾಘವಾಂಕ ಹೇಗೆ ನೆಡೆಸಿದ್ದಾನೆ? ಅದರ ಬಗ್ಗೆ ಆತನ ನಿಲುವೇನು? ಇಂತಹ ಒಂದು ವೈಚಾರಿಕ ಸಂಘರ್ಷವನ್ನು ಕಾವ್ಯದಲ್ಲಿ ರಾಘವಾಂಕ ಕಲಾತ್ಮಕವಾಗಿ ಅಭಿವ್ಯಕ್ತಿಸಿದ್ದಾನೆಯೆ? ಅದಕ್ಕೆ ಆತ ಕಂಡುಕೊಂಡ ಉಪಾಯವೇನು? ಎಂಬುದನ್ನು ನಾವು ಮನಗಾಣಬೇಕಾಗಿದೆ.
ಇದು ಸಪ್ತಮಸ್ಥಲದ ಎರಡನೆಯ ಪದ್ಯ. ಮುಂದೆ ತಾನು ಹರಿಶ್ಚಂದ್ರ ಮತ್ತು ಗಾನರಾಣಿಯರ ನಡುವೆ ನಡೆಸಲಿರುವ ವೈಚಾರಿಕ ಸಂಘರ್ಷಕ್ಕೂ ಮೊದಲೇ ರಾಘವಾಂಕ ‘ಹೊಲೆತನ’ ‘ಅಸ್ಪೃಷ್ಯತೆ’ ಇವುಗಳ ಬಗ್ಗೆ ತನ್ನ ನಿಲುವನ್ನು ಸ್ಪಷ್ಟಪಡಿಸಿದ್ದಾನೆ. ಆತನ ಪ್ರಕಾರ ಹೊಲೆತನಕ್ಕೆ ಕಾರಣಗಳು ಮೂರು; . ಅತಿ ಕೋಪ, ಬದ್ಧದ್ವೇಷ, ಅನಿಮಿತ್ತ ವೈರ. ಅದು ಮುನಿಗೆ ಎಂದು ಹೇಳಿದ್ದರೂ ಒಂದು ರೀತಿಯಲ್ಲಿ ಸಾರ್ವತ್ರಿಕವಾಗಿಯೂ ಆ ಕಾರಣಗಳು ಹೊಲೆತನಕ್ಕೆ ಅನ್ವಯವಾಗುವಂತಹವೇ ಆಗಿವೆ. ಅಂತಹ ಗುಣಗಳಿದ್ದರೆ ಮುನಿಯಾದವನಿಗೂ ಹೊಲೆತನ ತಪ್ಪಿದ್ದಲ್ಲ! ಹೊಲೆತನ ಹುಟ್ಟಿನಿಂದ ಬರುವುದಿಲ್ಲ; ಗುಣದಿಂದ ಬರುತ್ತದೆ. ಅದು, ಹುಟ್ಟುವಿಕೆಗೆ ಕಾರಣವಾದ ಸಂದರ್ಭದಿಂದ, ಉದ್ದೇಶದಿಂದ ಹಾಗೂ ವ್ಯಕ್ತಿಯ ನಡವಳಿಕೆಯಿಂದ ಹೊಲೆತನ ಆರೋಪಿತವಾಗುತ್ತದೆ. ಆದರೆ ಒಂದು ಅಂಶವನ್ನು ಸ್ಪಷ್ಟವಾಗಿ ಗಮನಿಸಬೇಕು. ರಾಘವಾಂಕ ಸೂಚನಾಪದ್ಯದಲ್ಲಿ ಮತ್ತು ಎರಡನೆಯ ಪದ್ಯದಲ್ಲಿ ಮಾತ್ರ ಆ ಗಾನರಾಣಿಯರನ್ನು ‘ಹೊಲತಿ’ಯರೆಂದು ಸಂಬೋಧಿಸಿದ್ದಾನೆ. ಇನ್ನು ಉಳಿದಂತೆ ಹರಿಶ್ಚಂದ್ರನ ಮತ್ತು ಗಾನರಾಣಿಯರ ನಡುವೆ ನಡೆಯುವ ವೈಚಾರಿಕ ಸಂಘರ್ಷದಲ್ಲಿ, ವಿಶ್ವಾಮಿತ್ರ-ಹರಿಶ್ಚಂದ್ರರ ನಡುವಿನ ವಾಗ್ಯುದ್ಧದಲ್ಲಿ ಮಾತ್ರ, ಆಯಾಯ ಪಾತ್ರಗಳ ಬಾಯಲ್ಲಿ ಸಂದರ್ಭಾನುಸಾರವಾಗಿ ಬಳಸಿದ್ದಾನೆ.
ಈ ಪದ್ಯದಲ್ಲಿ ಎರಡು ಭಾಗಗಳಿವೆ. ಮೊದಲು ಆ ಅನಾಮಿಕೆಯರ ಅಸಹಜ ಸೌಂದರ್ಯದ ಕಾರಣದಿಂದ ಅವರ ಕುಲ ಹಸಗೆಟ್ಟು ಅನಾಮಿಕೆಯರಾದರು ಎಂಬುದನ್ನು (ಇಲ್ಲಿ ರಾಘವಾಂಕ ಹೊಲತಿ ಎಂಬ ಪದವನ್ನು ಬಳಸಿಲ್ಲದಿರುವುದು ಗಮನಾರ್ಹ; ಆದರೆ ಕುಲದ ಮಾತೆತ್ತಿದ್ದಾನೆ.) ಒಪ್ಪಲು ಕಷ್ಟವಾಗುತ್ತದೆ. ಆದರೆ ಎರಡನೆಯ ಭಾಗದಲ್ಲಿ ‘ಅವಗುಣಂಗಳ ಸಂಗದಿಂ ಕುಲಂ ಹಸಗೆಟ್ಟು’ ಹೊಲತಿಯರಾದರು ಎಂಬುದರಲ್ಲಿ ಸ್ವಲ್ಪಮಟ್ಟಿನ ಅರ್ಥವಿದೆ. ವಿಚಾರಗೆಟ್ಟವರು ಮಾತ್ರ ಹೊಲೆತನಕ್ಕೆ ಒಳಗಾಗುತ್ತಾರೆ. ಕೊನೆಯ ಸಾಲು, ‘ಸಂಗವು ಆರ ಕುಲಮಂ ಕೆಡಿಸದು’ ಎನ್ನುವಲ್ಲಿ ರಾಘವಾಂಕ ತನ್ನ ವೈಚಾರಿಕ ನಿಲುವನ್ನು ಉನ್ನತೀಕರಿಸಿಕೊಂಡಿರುವುದನ್ನು ನೋಡಬಹುದು. ಅಸಹಜ ಸೌಂದರ್ಯದಿಂದ, ಅವಗುಣಂಗಳ ಸಂಗದಿಂದ ಹೊಲತಿಯರಾಗಿರುವ ಆ ಅನಾಮಿಕೆಯರ ಸಂಗ ಯಾರ ಕುಲವನ್ನೂ ಕೆಡಿಸುವುದಿಲ್ಲ. ಏಕೆಂದರೆ ಅವರಿಗೆ ಆರೋಪಿತವಾಗಿರುವ ಹೊಲೆತನಕ್ಕೆ ಅವರು ಕಾರಣರಲ್ಲ! ಮುಂದಿನ ಪದ್ಯದಲ್ಲಿ,
ಎಂದು ಹೇಳುವಾಗಲೂ, ಅವರ ಬಗ್ಗೆ ರಾಘವಾಂಕ ಸಹಾನುಭೂತಿ ಉಳ್ಳವನಾಗಿದ್ದಾನೆ. ಹಾಗೆ ಬಂದ ಗಾನನಾಯಕಿಯರು, ಹರಿಶ್ಚಂದ್ರನನ್ನು ಸ್ತುತಿಸಿ, ‘ಯಥೋಚಿತ ತಾರಮಧುರಮಂದ್ರಂಗಳಿಂ’ ಹಾಡಿ, ನರ್ತಿಸಿ ರಾಗರಸಲಹರಿಯಿಂದ ಹರಿಶ್ಚಂದ್ರನ ದುಗುಡವನ್ನು ತೊಳೆಯುತ್ತಾರೆ. ಇಲ್ಲಿ ರಾಘವಾಂಕ ಅನಾಮಿಕೆಯರು ಎಂಬ ಪದ ಬಳಸಿರುವುದರಲ್ಲಿ ಔಚಿತ್ಯವಿದೆ. ಏಕೆಂದರೆ ಅವರಿಬ್ಬರೂ ಹರಿಶ್ಚಂದ್ರನಿಗೆ ಅಪರಿಚಿತರು. ಅವರಿಗೆ ಎಂದು ಒಂದು ಹೆಸರೂ ಇಲ್ಲ! ಅವರೇನು ಬಂದು ಹರಿಶ್ಚಂದ್ರನಲ್ಲಿ ತಮ್ಮ ಪರಿಚಯ (ವಿಶ್ವಾಮಿತ್ರನ ಮಕ್ಕಳೆಂದು) ಹೇಳಿಕೊಂಡಿಲ್ಲ. ಹಂದಿಯನ್ನು ಬೆನ್ನಟ್ಟಿದ ಆಸಱು, ವಿಶ್ವಾಮಿತ್ರನ (ಮುನಿರಕ್ಕಸ!) ಆಶ್ರಮಕ್ಕೆ ಬಂದಿರುವ ಅಂಜಿಕೆ, (ಮುಕ್ಕಣ್ಣನೆನಿಪ) ಗುರುವಶಿಷ್ಠನ ಆಜ್ಞೆಯನ್ನು ತಪ್ಪಿದ ಅಳಲು, ವಿಶ್ರಮಿಸಿಕೊಳ್ಳುವಾಗ ಕಂಡ ಕನಸಿನ ಭಯ ಇವುಗಳನ್ನು, ಅನಾಮತ್ತಾಗಿ ಮರೆಸಿಬಿಡುವಂತೆ ಹಾಡಿ ನರ್ತಿಸಿದ ಆ ಕನ್ನೆಯರಿಗೆ ಏನಾದರೂ ಕೊಡಬೇಕೆನ್ನಿಸುತ್ತದೆ. ಹರಿಶ್ಚಂದ್ರ ಕೊಡುಗೈದಾನಿ. ತನ್ನ ಮೈಮೇಲಿದ್ದ ಆಭರಣವನ್ನೇ ತೆಗೆದು ಕೊಡಲು ಮುಂದಾಗುತ್ತಾನೆ. ಆಭರಣಕ್ಕೆ ಆಸೆ ಪಡದ ಆ ಗಾನರಾಣಿಯರು, (ಅಸಮ್ಮತಿಯ ಧ್ವನಿಯಲ್ಲಿ)
ಎಂದು ಒತ್ತಾಯಪಡಿಸುತ್ತಾರೆ. ಇಲ್ಲಿಂದಲೇ ರಾಘವಾಂಕ ತಾನು ನೇರವಾಗಿ ಏನನ್ನೂ ಹೇಳದೆ, ಹರಿಶ್ಚಂದ್ರ ಮತ್ತು ಗಾನರಾಣಿಯರ ಮುಖಾಂತರ ವೈಚಾರಿಕ ಸಂಘರ್ಷವನ್ನು ಮುಂದುವರೆಸುತ್ತಾನೆ; ಪರಕಾಯ ಪ್ರವೇಶ ಮಾಡಿದವನಂತೆ! ಇಲ್ಲಿ ಗಾನರಾಣಿಯರ ಮತ್ತು ಹರಿಶ್ಚಂದ್ರನ ಉದ್ದೇಶಗಳು ಮೊದಲೇ ನಿರ್ಧಾರಿತವಾಗಿವೆ. ಆದರೆ, ಅವರಿಬ್ಬರೂ ನಟಿಸಲೇಬೇಕಾಗಿದೆ. ಏಕೆಂದರೆ ರಾಘವಾಂಕ ಸೂತ್ರಧಾರನ ಜಾಗದಲ್ಲಿ ನಿಂತಿದ್ದಾನೆ. ಅವರು ಕೇಳುವ ಮುತ್ತಿನ ಸತ್ತಿಗೆ (ಮುತ್ತಿನಿಂದ ಅಲಂಕೃತವಾದ ಬಿಳಿಕೊಡೆಯಾದರೂ ಆಗಬಹುದು; ಶ್ಲೇಷಾರ್ಥವನ್ನು ಆರೋಪಿಸಿಕೊಂಡರೆ ‘ಚುಂಬನ’ವೂ ಆಗಬಹುದು!) ಹರಿಶ್ಚಂದ್ರನಲ್ಲಿ ದಿಗಿಲನ್ನು ಹುಟ್ಟಿಸುತ್ತದೆ. ಆತ ಆ ಸತ್ತಿಗೆಯನ್ನು ಸೂರ್ಯವಂಶದವರಿಗಲ್ಲದೆ ಬೇರೆಯವರಿಗೆ ಕೊಡಲು ಬಾರುವುದಿಲ್ಲ ಎಂದು ಹೇಳುತ್ತಾನೆ.
ಹರಿಶ್ಚಂದ್ರ:
ಗಾಣರಾಣಿಯರು:
ಹರಿಶ್ಚಂದ್ರ:
ಗಾಣರಾಣಿಯರು:
ಹರಿಶ್ಚಂದ್ರ:
ಗಾಣರಾಣಿಯರು:
ಹರಿಶ್ಚಂದ್ರ:
ಗಾಣರಾಣಿಯರು:
ಹರಿಶ್ಚಂದ್ರ:
ಇಲ್ಲಿಯವರೆಗೆ ಮಾತಿಗೆ ಮಾತು ಕೊಟ್ಟು ತಾವು ಬೇಡಿದ್ದುದನ್ನು ಗಾಣರಾಣಿಯರು, ಅದನ್ನು ಕೊಡದಿರುವುದಕ್ಕೆ ಹರಿಶ್ಚಂದ್ರ ಸಮರ್ಥನೆಯನ್ನು ಒದಗಿಸುವಲ್ಲಿ ನಿರತರಾಗಿದ್ದಾರೆ. ಆದರೆ ಹರಿಶ್ಚಂದ್ರ ಬಗ್ಗುವುದಿಲ್ಲ ಎಂಬುದನ್ನು ಮನಗಂಡ ಅವರಿಬ್ಬರೂ ತಮ್ಮ ವರಸೆಯನ್ನು ಬದಲಾಯಿಸುತ್ತಾರೆ.
ಗಾಣರಾಣಿಯರು:
(ಹರಿಶ್ಚಂದ್ರನನ್ನೇ ಮದುವೆಯಾಗು ಎಂದು ಕೇಳುತ್ತಿದ್ದಾರೆ. ಈಗಾಗಲೇ ಆತನಿಗೆ ಮದುವೆಯಾಗಿದೆ; ಮಗನಿದ್ದಾನೆ. ಅವರಿಬ್ಬರೂ ಅಲ್ಲಿಯೇ ಇದ್ದಾರೆ.ಅದು ಗೊತ್ತಿದ್ದೂ, ಆದರೆ ರಾಜನಾದವನು ಬಹುಪತ್ನಿವಲ್ಲಭನಾಗಬಹುದಲ್ಲವೆ? ಆ ಆಸೆಯಿಂದ ಕೈಮುಗಿದು ಗೋಗರೆದು ಕೇಳುತ್ತಿದ್ದಾರೆ.)
ಹರಿಶ್ಚಂದ್ರ:
ಗಮನಿಸಬೇಕು, ಇಲ್ಲಿಯವರೆಗೂ ಗಾನರಾಣಿಯರ ಹಾಗೂ ಹರಿಶ್ಚಂದ್ರನ ಮಾತಿನಲ್ಲಿ ಹೊಲೆತನದ, ಅಸ್ಪೃಷ್ಯತೆಯ ಮಾತು ಬಂದಿಲ್ಲ. ಹರಿಶ್ಚಂದ್ರನಂತೂ ಅವರನ್ನು ಆ ದೃಷ್ಟಿಯಿಂದ ನೋಡೇ ಇಲ್ಲ. ಆದರೆ ಮದುವೆಯ ಮಾತು ಕೇಳುತ್ತಲೇ ಆತನ ಕುಲಶ್ರೇಷ್ಠತೆಯ ಅಹಂ ಎಚ್ಚೆತ್ತುಬಿಡುತ್ತದೆ. ‘ತನಗೆ ಮದುವೆಯಾಗಿ ಮಗನಿದ್ದಾನೆ, ಮನಕೊಪ್ಪಿದ ಮಡದಿ ಚಂದ್ರಮತಿಯಿದ್ದಾಳೆ. ನನಗೆ ಇನ್ನೊಂದು ಮದುವೆಯ ಆಸೆಯಿಲ್ಲ’ ಎಂದು ನಿರಾಕರಿಸುವ ಬದಲು ಕುಲದ ಮಾತು ಎತ್ತುತ್ತಾನೆ. ಮೊದಲ ಬಾರಿಗೆ ಅವರನ್ನು ‘ಹೊಲತಿ’ಯರು ಎಂದು ಕರೆದು ಹೀಯಾಳಿಸುತ್ತಾನೆ. ಬಂದ ಕಾಲಗುಣದ ಹಾಗೂ ನಿಂದ ನೆಲದ (ವಿಶ್ವಾಮಿತ್ರನ ಆಶ್ರಮಕ್ಕೆ ಸೇರಿದ ಜಾಗ) ಬಗ್ಗೆಯೂ ತಪ್ಪಾಗಿ ಮಾತನಾಡುತ್ತಾನೆ. ಅಷ್ಟಕ್ಕೂ ‘ನಾವು ಹೊಲತಿಯರು’ ಎಂದಾಗಲೀ, ವಿಶ್ವಾಮಿತ್ರನ ಮಕ್ಕಳೆಂದಾಗಲೀ ಅವರು ಹರಿಶ್ಚಂದ್ರನಿಗೆ ಪರಿಚಯಿಸಿಕೊಂಡಿಲ್ಲ. ಯಾವ ಆಧಾರದ ಮೇಲೆ ಅವರನ್ನು ಹೊಲತಿಯರು ಎಂದು ಹರಿಶ್ಚಂದ್ರ ಕರೆಯುತ್ತಾನೆ? ಅವರ ದೈಹಿಕ ಲಕ್ಷಣಗಳ ಆಧಾರದ ಮೇಲೆ; ಮೈಬಣ್ಣದ ಆಧಾರದ ಮೇಲೆ! ಕುಲದ ಅಡಚಣೆಯಿಲ್ಲದಿದ್ದರೆ ಅವರಿಬ್ಬರನ್ನು ಆತ ಮದುವೆಯಾಗುತ್ತಿದ್ದನೆ!? ಈ ಪ್ರಶ್ನೆಗೆ ಹರಿಶ್ಚಂದ್ರನಂತೆ ರಾಘವಾಂಕನೂ ಉತ್ತರಿಸುವ ಗೋಜಿಗೆ ಹೋಗುವುದಿಲ್ಲ.
ಏಕೆಂದರೆ, ಇಲ್ಲಿ ಕತೆಯ ನೆಡೆ ಮೊದಲೇ ನಿರ್ಧಾರವಾಗಿಬಿಟ್ಟಿದೆ. ಆದರೆ, ಆ ನೆಡೆಯ ನಡುವೆಯೇ ರಾಘವಾಂಕ ಹೊಲೆತನದ, ಅಸ್ಪೃಷ್ಯತೆಯ ಬಗ್ಗೆ ತನಗಿರುವ ವಿರೋಧವನ್ನು ದಾಖಲಿಸುವ ಮನಸ್ಸು ಮಾಡಿಬಿಟ್ಟಿದ್ದಾನೆ. ಅದಕ್ಕಾಗೆ ಈ ಗಾನರಾಣಿಯರ ಸೃಷ್ಟಿ, ಈ ಪರಕಾಯಪ್ರವೇಶ. ಗಾನರಾಣಿಯರ ಮೂಲಕ ತನ್ನ ನಿಲುವನ್ನು ಇಲ್ಲಿ ರಾಘವಾಂಕ ವ್ಯಕ್ತಪಡಿಸುತ್ತಾ ಹೋಗುತ್ತಾನೆ. ಅದಕ್ಕೆ ಪೂರಕವಾದ ವಾತಾವರಣವನ್ನು ಹರಿಶ್ಚಂದ್ರನ ಮೂಲಕ ಕಲ್ಪಿಸಿಕೊಳ್ಳುತ್ತಾನೆ. ‘ವೈಚಾರಿಕ ದೃಷ್ಟಿಯಿಂದ ಹರಿಶ್ಚಂದ್ರನ ವಾದ ಒಪ್ಪಿತವಾದುದಲ್ಲ’ ಎಂಬ ಡಾ. ಕೆ,ವೈ.ಶಿವಕುಮಾರರ ಗ್ರಹಿಕೆಯೇ ಅದನ್ನು ಸೂಚಿಸುತ್ತದೆ. ಇಲ್ಲಿ ಕವಿ ಗಾನರಾಣಿಯರ ಮೂಲಕ ಮಾತನಾಡುತ್ತಿದ್ದಾನೆ. ಆದ್ದರಿಂದಲೇ ಇಲ್ಲಿ ಸಹೃದಯ ಓದುಗರ ಸಹಾನುಭೂತಿ ಗಾನರಾಣಿಯರ ಕಡೆಗೇ ವ್ಯಕ್ತವಾಗುತ್ತದೆ. (ಮುಂದೆ ಒಟ್ಟು ಕಾವ್ಯದ ನಡೆಯ ದೃಷ್ಟಿಯಿಂದ ಕಥಾನಾಯಕನಾದ ಹರಿಶ್ಚಂದ್ರನಿಗೂ ಸಹಾನಭೂತಿಯನ್ನು ಗಳಿಸಿಕೊಡುವಲ್ಲಿ ಯಶಸ್ವಿಯಾಗಿದ್ದಾನೆ)
ಗಾಣರಾಣಿಯರು:
ಮಾಂಸದ ಕೆಚ್ಚಲಿನ ಹಾಲು, ನೊಣದ ಎಂಜಲಿನ ಜೇನು, ಮೃಗನಾಭಿಯ ಕಸ್ತೂರಿ ಇವಕ್ಕೆ ಮೈಲಿಗೆಯಿಲ್ಲ, ಹೊಲೆತನವಿಲ್ಲ. ಅವು ದೇವರಿಗೆ ಸಲ್ಲುತ್ತವೆ. (ಇಂದಿಗೂ, ‘ಮಡಿ’ ಆಚರಣೆ ಮಾಡುವವರು, ಸನ್ಯಾಸಿಗಳು, ಮಠಾಧಿಪತಿಗಳು ತಾವು ಬಳಸುವ, ರೇಷ್ಮೆಹುಳುವಿನ ಎಂಜಲಿನಿಂದ ಸೃಷ್ಟಿಯಾಗುವ ರೇಷ್ಮೆಬಟ್ಟೆ, ತಾವು ಕುಳಿತುಕೊಳ್ಳಲು ಬಳಸುವ ಮೃಗಚರ್ಮ ಇವುಗಳನ್ನು ಮೈಲಿಗೆ ಎಂದು ಭಾವಿಸುವುದಿಲ್ಲ.) ಸದ್ಗುಣಿಯೇ ಆಗಿರುವ ನೀನು ನಮ್ಮ ಕುಲದ ಕುಂದನ್ನು ಕಳೆಯಲಾರೆಯಾ? ಯೌವನ್ನಕ್ಕೆ ಯಾವ ಕುಲ? ಎನ್ನುವಲ್ಲಿ, ಅವರು ಹರಿಶ್ಚಂದ್ರನ ದೃಷ್ಟಿಯಲ್ಲಿ ಹೊಲೆತನವನ್ನು ಸ್ವೀಕರಿಸಿಯೇ ವಾದ ಮಂಡಿಸುತ್ತಿರುವುದನ್ನು ಗಮನಿಸಬೇಕು. ಹೌದು, ನಮಗೆ ಹೊಲೆತನದ ಕುಂದು ಇದೆ. ಅದನ್ನು ನಿನ್ನ ಸದ್ಗುಣಗಳಿಂದ ಹೋಗಲಾಡಿಸು ಎಂದು ಒತ್ತಾಯಿಸುತ್ತಿದ್ದಾರೆ. ಪ್ರಜೆಗಳ ಕುಂದನ್ನು ಕಳೆಯುವುದು ರಾಜನ ಕರ್ತವ್ಯವಲ್ಲವೆ? ಅದಕ್ಕೆ ತಾನೆ ಹರಿಶ್ಚಂದ್ರ ಬೇಟೆಗೆ ಬಂದಿದ್ದು! ಆದರೆ, ಹರಿಶ್ಚಂದ್ರ ವಿಚಾರದ ದಾರಿಯನ್ನು ಬಿಟ್ಟು ತರ್ಕದ ದಾರಿಯನ್ನು ಹಿಡಿಯುತ್ತಾನೆ. ಇಲ್ಲಿ ವಿಚಾರದ ದಾರಿ ಎಂದರೆ, ಅವರನ್ನು ಮದುವೆಯಾಗುವುದಲ್ಲ; ಬದಲಿಗೆ ಮದುವೆಯನ್ನು ನಿರಾಕರಿಸಲು ತನಗಿರುವ ಕಾರಣಗಳ ಆಯ್ಕೆಯಲ್ಲಿ ಆತ ಎಡವಿರುವುದು. ಮುಂದೆ ಆತ ಕೊಡುವ ಕಾರಣಗಳನ್ನು ಗಮನಿಸಬಹುದು.
ಹರಿಶ್ಚಂದ್ರ:
ಇಂದು ಬಚ್ಚಲ ನೀರನ್ನು ಸಂಸ್ಕರಿಸಿ ಮರುಬಳಕೆಗೆ ಯೋಗ್ಯವಾಗುವಂತೆ ಮಾಡಲಾಗುತ್ತಿದೆ; ನಾಯಿಯ ಹಾಲಿನಲ್ಲೂ ಔಷಧಿಯ ಗುಣಗಳಿವೆ ಎನ್ನಲಾಗುತ್ತಿದೆ. ಶ್ಮಶಾಣದಲ್ಲಿ ಬೆಳೆದ ಮಾತ್ರಕ್ಕೆ ಹೂವು ತನ್ನ ಸುವಾಸನೆಯನ್ನು ಕಳೆದುಕೊಳ್ಳಬೇಕೆ? ಸ್ವತಃ ಹರಿಶ್ಚಂದ್ರನ ಆರಾಧ್ಯದೈವ ಸ್ಮಶಣದವಾಸಿ ಶಿವನಲ್ಲವೆ? ನೀವು ಹೊಲತಿಯರೆಂದ ಮೇಲೆ, ನಿಮಗಿರುವ ಜವ್ವನ, ಚೆಲುವು, ಜಾಣತನ ಇವೆಲ್ಲಾ ವ್ಯರ್ಥ. ಅವುಗಳಿದ್ದ ಮಾತ್ರಕ್ಕೆ ನಿಮ್ಮನ್ನು ರಮಿಸಲಾಗದು ಎನ್ನುತ್ತಾನೆ. ಅವರು ಆಡುವ ಮಾತಿಗೂ ಹೊಲೆತನದ ಆರೋಪವನ್ನು ಹೊರಿಸುತ್ತಾನೆ. ಏಕೆಂದರೆ ಅವನ ಪ್ರಕಾರ ಅವರು ಹೊಲತಿಯರು. ಅವರು ಹೊಲತಿಯರಲ್ಲದಿದ್ದ ಪಕ್ಷದಲ್ಲಿ ಹರಿಶ್ಚಂದ್ರನ ವಾದ ಏನಾಗಿರುತ್ತಿತ್ತು?
ಗಾಣರಾಣಿಯರು:
ಹರಿಶ್ಚಂದ್ರ:
ಕುಲಜರಾದವರು ಅಧಮ ಸತಿಯರನ್ನು ನೋಡಬಾರದು; ನೋಡಿದರೂ ಮಾತನಾಡಿಸಬಾರದು; ಮಾತನಾಡಿಸಿದರೂ ಒಪ್ಪಿಕೊಳ್ಳಬಾರದು; ಆ ಕ್ಷಣಕ್ಕೆ ಬುದ್ದಿಗೆಟ್ಟು ಒಪ್ಪಿಕೊಂಡರೂ, ಕರೆದು ಏನನ್ನು ಕೊಡಲಾಗದು! ಕೊಟ್ಟರೆ ಅದು ಅನುಚಿತ! ಹರಿಶ್ಚಂದ್ರ ಶೋಷಕರ ವಕ್ತಾರನಂತೆ ಮಾತನಾಡುತ್ತಿದ್ದಾನೆ. ದುರಂತವೆಂದರೆ, ಇದುವರೆವಿಗೂ ಆತ ಅದನ್ನೇ ಮಾಡಿದ್ದಾನೆ. ಅವರನ್ನು ನೋಡಿದ್ದಾನೆ; ಅವರೊಂದಿಗೆ ಮಾತನಾಡಿದ್ದಾನೆ. ಅವರನ್ನು ಮನ್ನಿಸಿದ್ದಾನೆ. ಅವರಿಗೆ ತನ್ನ ಆಭರಣಗಳನ್ನು ಕೊಡಲು ಉದ್ದೇಶಿಸಿದ್ದಾನೆ. ಅಂದರೆ ಆತನೂ ಅನುಚಿತವಾದುದನ್ನು ಮಾಡಲೆಳೆಸಿದ್ದನೆ!?
ಪಾಪ, ಗಾಣರಾಣಿಯರಿಗೆ ನಿರಾಶೆಯಾಗುತ್ತದೆ. ಆದರೂ ಪಟ್ಟು ಬಿಡದೆ “ಸತ್ಕುಲಜಭೂಪ ನಿನ್ನಯ ಸಂಗದಿಂ ಶಾಪದಿಂದಾದ ದುಷ್ಕುಲಂ ಶುದ್ಧವಪ್ಪುದು ಎಂಬ ಅಪೇಕ್ಷೆಯಿಂ ಬಂದೆವು.” ಎನ್ನುತ್ತಾರೆ. ಅವರಿಗೆ ಆರೋಪಿತವಾಗಿರುವ ದುಷ್ಕುಲ ಶಾಪದಿಂದಲೇ ಆದುದು ಎಂದು ಭಾವಿಸಿದರೂ, ಶಾಪವಿಮೋಚನೆ ಆಗಲೇ ಬೇಕಲ್ಲವೆ? ದುಷ್ಕುಲದ ಶಾಪವನ್ನು ಕಳೆಯಲು ಸತ್ಕುಲಜನಾದ ರಾಜನಿಂದಲೇ ಸಾಧ್ಯ ಅಲ್ಲವೆ? ರಾಜ ಪ್ರತ್ಯಕ್ಷ ದೇವರಲ್ಲವೆ? ಇವರ ಈ ಬಲವಾದ ಪಟ್ಟಿನಿಂದ ಹರಿಶ್ಚಂದ್ರ ಅಲ್ಲಾಡಿ ಹೋಗುತ್ತಾನೆ. ಭಂಡತನಕ್ಕೆ ಬಿದ್ದವನಂತೆ ವಾದಕ್ಕೆ ನಿಲ್ಲುತ್ತಾನೆ.
ಹರಿಶ್ಚಂದ್ರ:
ಗಾಣರಾಣಿಯರು:
ಹರಿಶ್ಚಂದ್ರ:
ಕೋಟ್ಯಂತರ ಜನರ ಪಾಪವನ್ನು ತೊಳೆಯುತ್ತಿದ್ದರೂ ಗಂಗೆ ಪವಿತ್ರಳಾಗಿಯೇ ಉಳಿದಿದ್ದಾಳಲ್ಲ – ಇದು ಅಮೂರ್ತಕಲ್ಪನೆ. ನೂರು ಒಳ್ಳೆಯ ಹಣ್ಣುಗಳ ನಡುವೆ ಒಂದು ಕೆಟ್ಟ ಹಣ್ಣು ಇಟ್ಟರೆ ಎಲ್ಲ ಹಣ್ಣುಗಳೂ ಕೆಟ್ಟು ಹೋಗುತ್ತವೆ – ವಾಸ್ತವ ಮತ್ತು ಮೂರ್ತಕಲ್ಪನೆ. ಇಲ್ಲಿ ಇಬ್ಬರೂ ತರ್ಕಕ್ಕೆ ಬಿದ್ದು ವಾದಿಸುತ್ತಿರುವುದರಿಂದ ಅವರು ಆಶ್ರಯಿಸಿರುವ ಉದಾಹರಣೆಗಳು ಅದಲು ಬದಲಾಗಿವೆ ಅನ್ನಿಸುತ್ತದೆ. ಮಾತು ಸೋತುದರ ಸಂಕೇತ! ಈ ಮಾತುಗಳ ನಂತರ ಇಬ್ಬರ ಮಾತುಗಳಲ್ಲಿಯೂ ಚರ್ಚೆಯ ಅಂತ್ಯದ ಸುಳಿವು ಸಿಗುತ್ತದೆ. ಹರಿಶ್ಚಂದ್ರನೇ ಮೊದಲಿಗನಾಗಿ ಅವರಿಗೆ ದೈಹಿಕವಾಗಿ ಶಿಕ್ಷಿಸಲು ಮುಂದಾಗುತ್ತಾನೆ.
ಗಾಣರಾಣಿಯರು:
ಹರಿಶ್ಚಂದ್ರನಿಗೆ ಬಹಳ ಇಕ್ಕಟ್ಟಿಗೆ ಇಟ್ಟುಕೊಳ್ಳುತ್ತದೆ. ಅವನ ಪ್ರಕಾರ ಅವರ ಹಾಡು ಕೇಳಿದ್ದೇ ಅವನ ತಪ್ಪು. ಬೀದಿಯಲ್ಲಿ ಹೋಗುತ್ತಿದ್ದ ಮಾರಿಯನ್ನು ಮನೆಗೆ ಹೊಕ್ಕಿಸಿಕೊಂಡಂತಾಗಿಬಿಟ್ಟಿದೆ ಆತನಿಗೆ. ಇದುವರೆಗೂ ರಾಜನೆಂಬ ಕಾರಣದಿಂದ ಅಧಿಕಾರಯುತನಾಗಿಯೂ, ತುಸು ಸಂಯಮದಿಂದಲೂ ವಾದಿಸುತ್ತಿದ್ದವನು, ಈಗ ತನ್ನ ಪುರುಷ ಅಹಂಕಾರವನ್ನೂ ಸೇರಿಸಿಕೊಂಡು ಅವರನ್ನು ದೈಹಿಕವಾಗಿ ದಂಡಿಸುವ ಮಟ್ಟಕ್ಕೆ ಇಳಿಸುಬಿಡುತ್ತಾನೆ.
ಹರಿಶ್ಚಂದ್ರ:
ಗಾಣರಾಣಿಯರು:
ಹರಿಶ್ಚಂದ್ರ ಕೋಪದಿಂದ ದಡದಡನೆ ಎದ್ದು ‘ಹಲ್ಲ ಕಳೆ, ಬಾಯ ಹರಿಯ ಕೊಯ್, ಹೊಡೆ ಹೊಡೆ. ಎನ್ನುತ್ತ, ಎದ್ದು ಚಾವಟಿಯನ್ನು ತೆಗೆದು ಹೊಡೆಯುತ್ತಾನೆ. ಆತನೊಂದಿಗೆ ಮಂತ್ರಿಯೂ ಕೈಜೋಡಿಸುತ್ತಾನೆ. ಒಬ್ಬರೊಬ್ಬರನು ‘ಬೆನ್ನೊಡೆಯೆ, ಮುಡಿ ಹುಡಿಯೊಳಗೆ ಹೊರಳೆ, ಹಲು ಬೀಳೆ, ಬಾಯೊಡೆಯೆ, ಮೆಯ್ ನೋಯೆ, ಕಯ್ಯು ನಡೆದಲ್ಲಿ ನಡೆದು, ಹೊಕ್ಕಲ್ಲಿ ಹೊಕ್ಕು ಓಡಿ, ಹೋದೆಡೆಗೆ ಬೆನ್ನಟ್ಟಿ, ರುಧಿರಂ ಬಸಿಯೆ ಹೊಡೆದು’ ಓಡಿಸಿ ಹಿಂತಿರುಗುತ್ತಾರೆ. ಅವರು ಒರಲುತ್ತ ವಿಶ್ವಾಮಿತ್ರನೆಡೆಗೆ ಬಂದು ’ನಿಷ್ಕಾರಣಂ ನೃಪತಿ ಹೊಡೆದನ್. ಎಲೆ ಕೌಶಿಕಮುನೀಂದ್ರ, ಮೊಱೆಯೋ’ ಎಂದು ದೂರು ಹೇಳುತ್ತಾರೆ.
ಗಾಣರಾಣಿಯರು:
ವಿಶ್ವಾಮಿತ್ರ ಮುಖದಲ್ಲಿ ಸಂತೋಷವನ್ನು ಪ್ರಕಟಿಸುತ್ತಾ “ಎನ್ನಯ ಮನೋರಥಂ ಕೈಸಾರ್ದುದು! (ಗಾಣರಾಣಿಯರ ಕಡೆ ತಿರುಗಿ) ಅಳಲು ಬೇಡ” ಎಂದು ಹರಿಶ್ಚಂದ್ರನಲ್ಲಿಗೆ ಬರುತ್ತಾನೆ. ತನ್ನ ಮಕ್ಕಳಿಗಾದ ಅನ್ಯಾಯಕ್ಕೆ ನ್ಯಾಯ ಕೇಳುತ್ತಾನೆ. “ಕಲೆಗೆ ಮನ್ನಣೆ ಕೊಡುತ್ತೀಯಾ ಎಂದು ಕೇಳಿದರೆ, ಸತ್ತಿಗೆ ಕೊಡುವುದಿಲ್ಲ ಎನ್ನಬಹುದಿತ್ತು; ಸಂಗ ಮಾಡುವುದಿಲ್ಲ ಎಂದು ಹೇಳಿದ್ದರೆ ಸಾಕಿತ್ತು; ಹೊಡೆದುದು ಏಕೆ? ಆ ಹೆಣ್ಣುಗಳನ್ನು ಹೊಲತಿಯರೆನ್ನುವ ಮೂಲಕ ನನ್ನನ್ನೂ ಹೊಲೆಯ ಎನ್ನುತ್ತಿದ್ದೀಯಾ?” ಹೀಗೆ ವಿಶ್ವಾಮಿತ್ರ ಇನ್ನೊಂದು ರೀತಿಯಲ್ಲಿ ಭಂಡತನವನ್ನು ಪ್ರದರ್ಶಿಸುತ್ತಾನೆ. ಇಲ್ಲಿಯವರೆಗೂ ಗಾನರಾಣಿಯರ ಪರವಾಗಿ ಸಹಾನುಭೂತಿಯಿಂದಿದ್ದ ಸಹೃದಯರ ಮನಸ್ಸು ಇಲ್ಲಿಂದ ಮುಂದೆ ಹರಿಶ್ಚಂದ್ರನ ಪರವಾಗಿ ವಾಲುತ್ತದೆ.
“ಮುನಿಗೆ ಹೊಲೆ ಯಾವುದು?’ ಎಂಬ ಪ್ರಶ್ನೆಯನ್ನೆತ್ತಿಕೊಂಡು, ‘ಅತಿ ಕೋಪ, ಬದ್ಧ ದ್ವೇಷ, ಅನಿಮಿತ್ತ ವೈರ’ ಎಂದು ಹೇಳಿ, ‘ಅದರಿಂದ ಹುಟ್ಟಿದರಾಗಿ’ ವಿಶ್ವಾಮಿತ್ರಸಂಭವೆಯರಾದ ಗಾಣಗಾತಿಯರು ‘ಹೊಲತಿ’ಯರಾದರು ಎಂದು ರಾಘವಾಂಕ ವ್ಯಾಖ್ಯಾನಿಸುತ್ತಾನೆ. ಎಂದರೆ ‘ಅತಿಕೋಪ’, ಬದ್ಧದ್ವೇಷ, ಅನಿಮಿತ್ತ ವೈರ’ ಇತ್ಯಾದಿ ತಾಮಸ ಗುಣಗಳಿದ್ದ ಪಕ್ಷದಲ್ಲಿ ಅವನು ಮುನಿಯಾಗಿದ್ದರೂ, ಅದು ಅವನ ಹೊಲೆತನಕ್ಕೆ ಸಾಕ್ಷಿ ಎಂಬುದು ಇಲ್ಲಿನ ಅರ್ಥ”. ಎಂಬ ಜಿ.ಎಸ್.ಎಸ್. ಅವರ ಮಾತುಗಳು ಸಹಜವಾಗಿಯೇ ಇವೆಯಾದರೂ “ಗಾಣಗಾತಿಯರು, ವಿಶ್ವಾಮಿತ್ರನಂಥ ಋಷಿಯ ಕನ್ಯೆಯರಾದರೂ ಆತನ ತಾಮಸಗುಣಗಳಿಂದ ಹುಟ್ಟಿ, ಹರಿಶ್ಚಂದ್ರನಂಥ ಸತ್ಯವಂತನನ್ನು ಹಾದಿಗೆಡಿಸುವ ಉದ್ದೇಶಕ್ಕಾಗಿ ನಿಯುಕ್ತರಾದ್ದರಿಂದ ಅವರು ‘ಹೊಲತಿ’ಯರಾಗಿ ಕಾಣುತ್ತಾರೆ.” ಎನ್ನುವ ಮಾತುಗಳನ್ನು ಒಪ್ಪಿಕೊಳ್ಳುವುದು ಸ್ವಲ್ಪ ಕಷ್ಟ. ಜಿ.ಎಸ್.ಎಸ್. ಮುಂದುವರೆದು ಹೇಳುವ “‘ಹೊಲೆತನ’ದ ಪ್ರತೀಕವಾದ ಗಾಣಗಾತಿ ‘ಹೊಲತಿ’ಯರಿಗೂ, ಹೊಲೆಯ ಕುಲದಲ್ಲೆ ಹುಟ್ಟಿದ ವೀರಬಾಹುಕನಿಗೂ ಇರುವ ಸ್ವಭಾವದ ವ್ಯತ್ಯಾಸವನ್ನು ಗಮನಿಸಿದರೆ, ಗಾಣಗಾತಿಯರ ‘ಹೊಲೆತನ’ವೆ ನಿಜವಾದ ‘ಹೊಲೆ’ ಎನ್ನಿಸುತ್ತದೆ.” ಎಂಬ ಮಾತುಗಳನ್ನ ಅರಗಿಸಿಕೊಳ್ಳುವುದು ಕಷ್ಟ. ಇಲ್ಲಿ ಅವರು ಸ್ವ-ಇಚ್ಛೆಯಿಂದ ಆ ಕೆಲಸವನ್ನು ಅಂದರೆ, ‘ಹರಿಶ್ಚಂದ್ರನಂಥ ಸತ್ಯವಂತನನ್ನು ಹಾದಿಗೆಡಿಸುವ’ ಕೆಲಸವನ್ನು ಆಯ್ದುಕೊಂಡಿರಲಿಲ್ಲ. ಅವರು ನಿರ್ದೇಶಿತರಾಗಿದ್ದರು. ಆದ್ದರಿಂದ ಇಲ್ಲಿ ಹೊಲೆತನಕ್ಕೆ ಈಡಾಗಬೇಕಾದವನು ವಿಶ್ವಾಮಿತ್ರನೇ ಹೊರತು ಗಾನರಾಣಿಯರಲ್ಲ. ವಿಶ್ವಾಮಿತ್ರನಾದರೊ ಇಂತಹ ಯಾವುದಕ್ಕೂ ಆತ ತಲೆಕೆಡಿಸಿಕೊಂಡವನಲ್ಲ. ಆತನದು ಮುರಿದು ಕಟ್ಟುವ, ಪರ್ಯಾಯವನ್ನು ಸೃಷ್ಟಿಸುವ ಮನೋಧರ್ಮ. ಆತ ತ್ರಿಶಂಕುಸ್ವರ್ಗವನನ್ನು ಸೃಷ್ಟಿಸಿದ್ದು, ಪ್ರಸ್ತುತ ಕಾವ್ಯದಲ್ಲಿ, ಹರಿಶ್ಚಂದ್ರನಿಗೆ ತೋಂದರೆ ಕೊಡುತ್ತಲೇ, ಆತನ ಸತ್ಯಪ್ರಕಾಶಕ್ಕೆ ಅವಕಾಶ ಮಾಡಿಕೊಡುವುದು ಆತನ ಮನೋಧರ್ಮವನ್ನು ಸಮರ್ಥವಾಗಿ ಬಿಂಬಿಸುತ್ತವೆ. “‘ಹೊಲೆತನ’ ಎನ್ನುವುದು ವ್ಯಕ್ತಿಯ ಅಂತರಂಗದ ಅವಗುಣಗಳಿಗೆ ಸಂಬಂಧಿಸಿದ್ದೆ ಹೊರತು, ಅದು ಒಂದು ಜಾತಿಯನ್ನು ಕುರಿತ ಪ್ರಶ್ನೆಯಲ್ಲ ಎನ್ನುವ ತಾತ್ವಿಕ ದೃಷ್ಟಿ ರಾಘವಾಂಕನದು.” ಎಂಬ ಮಾತುಗಳಿಗೆ ಪೂರಕವಾಗಿ “ಗಾಣಗಾತಿಯರ ‘ಹೊಲೆತನ’ವೆ ನಿಜವಾದ ‘ಹೊಲೆ’” ಎಂಬ ಮಾತುಗಳು ಬಂದಿರುವುದರಿಂದ, ಅಷ್ಟರಮಟ್ಟಿಗೆ ಸ್ವೀಕಾರಾರ್ಹ.
ಜಿ.ಎಸ್.ಎಸ್. ಹೇಳುವಂತೆ “ಹರಿಶ್ಚಂದ್ರನಿಗೆ ಹೊಲತಿಯರಾದ ಗಾಣಗಾತಿಯರಿಂದ ಮೊದಲು ಪ್ರಾಪ್ತವಾಗುವ ಆಹ್ವಾನವೇ ಕಡೆಗೆ ಅವನು ವೀರಬಾಹುಕನ ಆಳಾಗಿ ಹೊಲೆಯರಿಗೆ ಉಚಿತವಾದ ಚಾಂಡಾಲತ್ವವನ್ನು ಕೈಗೊಳ್ಳುವವರೆಗೂ ಅಟ್ಟಿಸಿಕೊಂಡು ಹೋಗಿರುವುದು ಗಮನಿಸಬೇಕಾದ ಸಂಗತಿಯಾಗಿದೆ. ಸಾಮಾಜಿಕವಾಗಿ ಹಾಗೂ ವಾಂಶಿಕವಾಗಿ, ಉಚ್ಚವರ್ಗದ ಪ್ರತಿಷ್ಠಿತ ವ್ಯಕ್ತಿಯಾದ ಹರಿಶ್ಚಂದ್ರ, ತಾನು ಯಾವ ಸಾಮಾಜಿಕ ಸ್ತರವನ್ನು ಉದ್ದಕ್ಕೂ ನಿಕೃಷ್ಟವೆಂದೇ ಕಂಡನೋ, ಅದೇ ಸಾಮಾಜಿಕ ಸ್ತರಕ್ಕೆ ಹೋಗಿ ಮುಟ್ಟುವ ಅನಿವಾರ್ಯತೆಯಲ್ಲಿ, ಆತನ ವಂಶಪ್ರಜ್ಞೆಯ ಹಾಗೂ ಅಹಂಕಾರದ ನಿರಸನಗಳು ಈ ಕೃತಿಯಲ್ಲಿ ಕ್ರಮಬದ್ಧವಾಗಿ ಚಿತ್ರಿತವಾಗಿವೆ.” ಮುಂದೆ ತನ್ನನ್ನು ತಾನು ಮಾರಿಕೊಳ್ಳುವ ಸಂದರ್ಭದಲ್ಲಿ, ತನ್ನನ್ನು ಕೊಳ್ಳುವವನು ಒಬ್ಬ ಚಾಂಡಾಲ ಎಂದು ತಿಳಿದಾಗ ಕನಲುವ ಹರಿಶ್ಚಂದ್ರನಿಗೆ “ಹುಸಿಯ ಹೊಲೆಯನ್ನು ಹೊತ್ತ ನೀನು ಚಾಂಡಾಲನೋ, ತನ್ನ ಪಾಡಿಗೆ ತಾನು ಇರುವ ನನ್ನಂಥವನು ಚಂಡಾಲನೋ” ಎಂದು ಪ್ರಶ್ನಿಸಿ, ಹರಿಶ್ಚಂದ್ರನಿಗೆ ತನ್ನ ತಪ್ಪಿನ ಅರಿವಾಗುವಂತೆ ಮಾಡುವವನೂ ಚಂಡಾಲನಾದ ವೀರಬಾಹುಕ ಎಂಬುದು ಗಮನಾರ್ಹ. ಹೊಲತಿಯರ ವಿಷಯದಲ್ಲಿ ಕಠಿಣನಾದಷ್ಟು ವೀರಬಾಹುಕನ ಮನೆಯಲ್ಲಿದ್ದ ಹರಿಶ್ಚಂದ್ರ ಹೊಲೆತನದ ವಿಷಯದಲ್ಲಿ ಕಠಿಣನಾಗುವುದಿಲ್ಲ ಎಂಬುದನ್ನು ಗಮನಿಸಬೇಕು.”ಆದರೆ ‘ಹೊಲೆಯ’ ಎಂಬ ಜಾತಿಯನ್ನು ಕುರಿತು, ರಾಘವಾಂಕನ ನಾಯಕ ಪಾತ್ರವಾದ ಹರಿಶ್ಚಂದ್ರನ ಪ್ರತಿಕ್ರಿಯೆಯಲ್ಲಿ ನಾವು ಕಾಣುವುದು, ಎಲ್ಲ ಕಾಲದ ಸಾಮಾಜಿಕ ವ್ಯವಸ್ಥೆಯಲ್ಲಿ ಈ ಒಂದು ಕುಲದ ಬಗ್ಗೆ ಇರುವ ಮನೋಧರ್ಮವನ್ನೆ. ಹರಿಶ್ಚಂದ್ರನಿಗೆ ತಾನು ಸಾಮಾಜಿಕವಾಗಿ- ಆರ್ಥಿಕವಾಗಿ ಉಚ್ಚವರ್ಗಕ್ಕೆ ಸೇರಿದವನೆಂಬ ಪ್ರಜ್ಞೆಯೆ ಪ್ರಧಾನವಾಗಿದೆ. ಮತ್ತು ಅದು ಸಹಜವೂ ಆಗಿದೆ. ತಾನು ಉತ್ತಮ ವಂಶದವನು, ಚಕ್ರವರ್ತಿ, ಎಂಬ ಹೆಮ್ಮೆಯಲ್ಲಿ ಬದುಕುವ ಹರಿಶ್ಚಂದ್ರನಿಗೆ ಉದ್ದಕ್ಕೂ ಸ್ಪರ್ಧಿಯಾಗುವುದು, ಸಾಮಾಜಿಕವಾಗಿ ಅತ್ಯಂತ ಕೆಳಗಿನ ಸ್ತರವೆಂದು ಭಾವಿಸಲಾಗಿರುವ ಹೊಲೆಯರೊಂದಿಗೆ ಮಾಡಿಕೊಳ್ಳಬೇಕಾದ ಒಡಂಬಡಿಕೆಯ ಪ್ರಶ್ನೆಯೇ.” ಎಂಬ ಅವರದೇ ಮಾತುಗಳು ಹಾಗೂ ಎಲ್. ಬಸವರಾಜು ಅವರ “ಮುನಿ ಎನಿಸಿಕೊಂಡವನಿಗೆ ಹೊಲೆಯಾಗಿರುವ ಅತಿಕೋಪ, ಬದ್ಧದ್ವೇಷ ಮತ್ತು ನಿಷ್ಕಾರಣ ವೈರ – ಈ ಮೂರು ದುರ್ಗಣದಿಂದ ಹುಟ್ಟಿದವರಾಗಿ ಮಾತ್ರ ಅವರು ಹೊಲತಿಯರು. ರಾಘವಾಂಕನ ಅಸ್ಪೃಷ್ಯಕಲ್ಪನೆ ಈ ಮಟ್ಟಿಗೆ ನೀತಿಪರವಾದ್ದು, ವರ್ಣಬೇಧದ ಬರ್ಬರ ರೀತಿಯಲ್ಲ.” ಎಂಬ ಅಭಿಪ್ರಾಯಗಳು ಸಮಂಜಸವಾದವುಗಳೇ ಆಗಿವೆ.
ಹರಿಶ್ಚಂದ್ರನು ಹೊಲತಿಯರೆಂದು ಕರೆಯುವ ಗಾನರಾಣಿಯರು ಹಾಗೂ ಚಾಂಡಾಲನಾದ ವೀರಬಾಹುಕ ಇವರೇ ಆತನ ಉದ್ಧಾರಪಥದಲ್ಲಿ ಬೆಳಕಾಗಿ ನಿಲ್ಲುತ್ತಾರೆ! ಗಾನರಾಣಿಯರ ಪಾತ್ರಗಳು ರಾಘವಾಂಕನ ಸ್ವಂತ ಸೃಷ್ಟಿ ಎಂಬುದು ಮುಖ್ಯವಾಗಿ ಗಮನಿಸಬೇಕಾದ ಅಂಶ. ತಾನು ಸೃಷ್ಟಿಸಿಕೊಂಡ ಪಾತ್ರಗಳ ಮುಖಾಂತರ ತನ್ನ ನಿಲುವನ್ನು ಕಲಾತ್ಮಕವಾಗಿ ಅಭಿವ್ಯಕ್ತಿಸುವಲ್ಲಿಯೂ, ತಾನು ಸತ್ಯವಂತನೆಂದು ನಿರೂಪಿಸಿಕೊಳ್ಳಲು ಹೊರಟ ಹರಿಶ್ಚಂದ್ರ, ಅದರ ಜೊತೆಗೆ ಕುಲಮದವನ್ನು ಕಳೆದು ಮಾನವೀಯನಾಗುವಂತೆ ಹಾಗೂ ಅದಕ್ಕೆ ಗಾನರಾಣಿಯರಿಗೆ ಆರೋಪಿತವಾಗುವ ಹೊಲೆತನವೇ ಕಾರಣವೆಂಬಂತೆ ಕತೆಯನ್ನು ಬೆಳೆಸುವಲ್ಲಿಯೂ, ಮುಂದೆ ಕಥಾನಾಯಕನ ಪರವಾದ ಸಹಾನುಭೂತಿಯನ್ನು ಸಹೃದಯರು ಹೊಂದುವಂತೆ ಮಾಡುವಲ್ಲಿಯೂ, ಇಡೀ ಸಂದರ್ಭವನ್ನು ಸಮರ್ಥವಾಗಿ ನಿಭಾಯಿಸುವುದರಲ್ಲಿಯೂ ರಾಘವಾಂಕ ಕವಿಯಾಗಿ ಗೆಲ್ಲುತ್ತಾನೆ; ಹರಿಶ್ಚಂದ್ರಚಾರಿತ್ರ್ಯಂ ಕಾವ್ಯವಾಗಿ ಗೆಲ್ಲುತ್ತದೆ. ರಸಿಕರಿಗೊಂದು ರಸಯಾತ್ರೆಯ ಅವಕಾಶವಂತೂ ಇದ್ದೇ ಇದೆ.
This article uses material from the Wikipedia ಕನ್ನಡ article ಗಾಣರಾಣಿಯರು : ರಾಘವಾಂಕನ ಅದ್ಭುತ ಸೃಷ್ಟಿ!, which is released under the Creative Commons Attribution-ShareAlike 3.0 license ("CC BY-SA 3.0"); additional terms may apply (view authors). ವಿಶೇಷವಾಗಿ ಟಿಪ್ಪಣಿ ಮಾಡದಿದ್ದ ಹೊರತು ಪಠ್ಯ "CC BY-SA 4.0" ರಡಿ ಲಭ್ಯವಿದೆ. Images, videos and audio are available under their respective licenses.
®Wikipedia is a registered trademark of the Wiki Foundation, Inc. Wiki ಕನ್ನಡ (DUHOCTRUNGQUOC.VN) is an independent company and has no affiliation with Wiki Foundation.