ಸಾತೋಡಿ ಜಲಪಾತ

ಸಾತೋಡಿ ಜಲಪಾತ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನಲ್ಲಿರುವ ಒಂದು ಜಲಪಾತ.

ಇದು ಸಿರ್ಸಿಯಿಂದ ೭೩ ಕಿಲೋಮೀಟರ್ ದೂರದಲ್ಲಿದೆ. ಯಲ್ಲಾಪುರದಿಂದ ಸುಮಾರು ೩೨ ಕಿ.ಮೀ. ದೂರದಲ್ಲಿದೆ. ಈ ಜಲಪಾತವು ದಾಂಡೇಲಿ ರಕ್ಷಿತಾರಣ್ಯದ ವ್ಯಾಪ್ತಿಯಲ್ಲಿ ಬರುವುದಲ್ಲದೆ ದಟ್ಟ ಕಾನನದ ನಡುವೆ ಸೇರಿಕೊಂಡಿದೆ. ಹಲವಾರು ಝರಿಗಳಿಂದ ಸೇರಿದ ನೀರು ಸುಮಾರು ೧೫ ಮೀಟರ್ ಎತ್ತರದಿಂದ ಧುಮುಕುತ್ತದೆ. ನಂತರ ಕೊಡಸಳ್ಳಿ ಜಲಾಶಯದ ಮೂಲಕ ಕಾಳಿ ನದಿಯನ್ನು ಸೇರುತ್ತದೆ. ಯಲ್ಲಾಪುರದಿಂದ ಹುಬ್ಬಳ್ಳಿ-ಅಂಕೋಲ ರಾಷ್ಟ್ರೀಯ ಹೆದ್ದಾರಿಯಲ್ಲಿ ಹುಬ್ಬಳ್ಳಿಗೆ ಹೋಗುವ ಮಾರ್ಗದಲ್ಲಿ ೫ ಕಿ.ಮೀ. ನಷ್ಟು ಮುಂದೆ ಸಾಗಿ ಎಡಕ್ಕೆ (ಕಲಘಟಗಿ, ಹುಬ್ಬಳ್ಳಿಯಿಂದ ಬರುವವರು ಬಲಕ್ಕೆ ತಿರುಗಬೇಕು) ತಿರುಗಿ ೨೫ ಕಿ.ಮೀ. ಸಾಗಿದರೆ ಸಾತೋಡಿ ಜಲಪಾತದ ಪ್ರದೇಶವು ಕಾಣಸಿಗುತ್ತದೆ. ಅರಣ್ಯ ಇಲಾಖೆಯ ಅನುಮತಿ ಪತ್ರ ಪಡೆದು(ಕೆಲವೊಮ್ಮೆ ಪಡೆಯದೆಯೂ ತೆರಳಬಹುದು) ೨ ಕಿ.ಮೀ. ನಷ್ಟು ಕಚ್ಚಾರಸ್ತೆಯಲ್ಲಿ ನಡೆದು ಸಾಗಿದರೆ ಜಲಪಾತದ ಸೌಂದರ್ಯವು ಕಾಣುತ್ತದೆ.

ಸಾತೋಡಿ ಜಲಪಾತ
ಸಾತೋಡಿ ಜಲಪಾತದ ನೋಟ

ಉತ್ತರ ಕನ್ನಡ ಜಿಲ್ಲೆ, ಜಲಪಾತಗಳಿಗೆ ತವರು ಮನೆ. ಜಲಪಾತಗಳ ಜಿಲ್ಲೆಯೆಂದೇ ಕೆಲವೊಮ್ಮೆ ಕರೆಸಿಕೊಳ್ಳುವ ಈ ಪ್ರದೇಶ, ಮಳೆಗಾಲದ ದಿನಗಳಲ್ಲಿ ಜಿಲ್ಲೆಯ ಹಳ್ಳಿಗಳತ್ತ 'ಪಾದಯಾತ್ರೆ' ಮಾಡಿದರೆ ನಮಗೆ ಕಾಣಿಸುವುದು ಬಹುಪಾಲು ಜಲಪಾತಗಳೇ. 'ಸಾತೊಡ್ಡಿಯ ಜಲಪಾತ'ವನ್ನು ಕಂಡವರು ಅದನ್ನು ಅಮೆರಿಕದ ಚಿಕ್ಕ ನಯಾಗರ ಜಲಪಾತ ಕ್ಕೆ ಹೋಲಿಸುವುದುಂಟು. ನಿತ್ಯ ಹರಿದ್ವರ್ಣದ ಕಾಡುಗಳು, ಮುಗಿಲೆತ್ತರದ ಬೆಟ್ಟಗಳಲ್ಲಿ ಹುಟ್ಟಿ ಪ್ರಪಾತಕ್ಕೆ ಧುಮುಕುವ ನದಿಗಳ ಜಲಧಾರೆ ನಿಧಾನವಾಗಿ ಪ್ರವಹಿಸುತ್ತಾ ಕಣಿವೆಗಳಲ್ಲಿ ನದಿಯಾಗಿ ಹರಿಯುವ ಪರಿ ಅನನ್ಯ.

ಜಲಪಾತದ ಅಕ್ಕ-ಪಕ್ಕ

ತಂಪಾದ ವಾತಾವರಣ ಹಚ್ಚ ಹಸುರಿನ ವನಸಿರಿ, ಬಣ್ಣಬಣ್ಣದ ವಿದಿಧ ಪ್ರಕಾರದ ಹಕ್ಕಿಗಳ ಚಿಲಿಪಿಲಿ ಕಲರವ, ಬಂಡೆಗಳ ಮೇಲೆ ಮಧ್ಯೆ ಚಿಮ್ಮಿಕೊಂಡು ಕೆಳಗೆ ಹರಿದೋಡುವ ಜಲರಾಶಿ ಕಣ್ಣಿಗೆ ಮುದಕೊಡುತ್ತದೆ. ವರುಷವಿಡೀ ತನ್ನ ವೈಯಾರದಿಂದ ಶೋಭಿಸುವ ಸಾತೊಡ್ಡಿ ಜಲಪಾತ ಮಳೆಗಾಲದ ವೇಳೆ ತನ್ನ ಸೌಂದರ್ಯ ಮತ್ತು ಮೋಹಕತೆಯನ್ನು ಅರೆದು ಹೊಯ್ದಿರುವಂತೆ ಭಾಸವಾಗುತ್ತದೆ. ನಿಸರ್ಗದ ಮಧ್ಯೆ ಹಾಲುನೊರೆಯೋಪಾದಿಯಲ್ಲಿ ದುಮ್ಮಿಕ್ಕುವ ಜಲಪಾತದ ವೈಭವವನ್ನು ಕಾಣಲು ಪ್ರತಿದಿನ ಪ್ರವಾಸಿಕರ ದಂಡೇ ಸೇರಿರುತ್ತದೆ. ಈ ಜಲಧಾರೆಯ ಉಗಮ ಕಾಳಿನದಿಯ ಉಪನದಿಯಾದ 'ಸೂರಬ್ಬಿ ಹಳ್ಳ''ದಿಂದಾಗಿದೆಯೆಂಬುದು ತಿಳಿದುಬರುವ ಸಂಗತಿ. ಸುಮಾರು ೫೦ ಅಡಿ ಎತ್ತರದಿಂದ ವಿಶಾಲವಾಗಿ ಕೆಳಗೆ ಧುಮುಕುತ್ತಾ ಝೇಂಕಾರಮಾಡಿ ಹರಿಯುವ ನದಿ ಪರ್ಯಟಕರನ್ನು ಮರುಳುಮಾಡುತ್ತದೆ.

ಜಲಪಾತ ತಲುಪಲು

ಯಲ್ಲಾಪುರದಿಂದ, ಸುಮಾರು ೨೦ ಕಿ.ಮೀ.ದೂರ ಸಾಗಲು,(ಆನಗೋಡ, ದೇಹಳ್ಳಿ, ಮಾರ್ಗದಲ್ಲಿ ಕ್ರಮಿಸಬೇಕು) ಸರಕಾರಿ ಬಸ್ಸುಗಳಿವೆ. ಆದರೆ ಅವುಗಳ ಸಂಖ್ಯೆ ಅತಿ ಕಡಿಮೆ. ಮಳೆಗಾಲದಲ್ಲಿ ಕೊನೆಯ ೮-೧೦ ಕಿ.ಮೀ.ದೂರದ ದಾರಿಯನ್ನು ಪಾದಯಾತ್ರೆ ಮಾಡಿ ಮುಟ್ಟುವುದು ಅನಿವಾರ್ಯವಾಗುತ್ತದೆ. ಸ್ವಂತ ವಾಹನ ವ್ಯವಸ್ಥೆಯಲ್ಲಿ ದಾರಿಯಲ್ಲಿ ಹೋಗುವಾಗ ಬಲಿತ ಭಾರಿ ಗಾತ್ರದ ಮರಗಳನ್ನು ನೋಡಬಹುದು. ಪರ್ವತಗಳು ಹಚ್ಚಹಸುರಿನಿಂದ ಆವೃತವಾಗಿರುವ ದೃಶ್ಯ ಕಣ್ಣಿಗೆ ಮುದಕೊಡುತ್ತದೆ. ಅಂಕುಡೊಂಕಾದ ರಸ್ತೆಯಲ್ಲಿ ಹೋಗುವುದು ಮನಸ್ಸಿಗೆ ಮುದಕೊಟ್ಟರೆ, ಅಲ್ಲಿನ ವನಸಂಪತ್ತನ್ನು ಫೋಟೋ ಕಣ್ಣುಗಳಿಂದ ಸೆರೆಹಿಡಿಯುವ ಪರಿ ಅನನ್ಯ.

ಜಲಪಾತದ ನೀರಿನಲ್ಲಿ ಜಳಕ

ಜಲಪಾತದ ಹತ್ತಿರ ೪-೫ ಕಿ.ಮೀ.ದೂರ ಕಾಳಿನದಿಯ ಹಿನ್ನೀರಿನ ದಂಡೆಯ ಮೇಲೆ ಸಾಗಬೇಕು. ಕೊರೆಯುವ ಚಳಿಯಲ್ಲಿ ಹರಿವ ನೀರಿನಲ್ಲಿ ಜಳಕ ಮಾಡುವ ಅನುಭವ ಅದ್ಭುತ. ಭಾರಿ ಪ್ರಮಾಣದ ಹಾಸುಕಲ್ಲುಗಳ ಮೇಲೆ ಚಿತ್ತಾರ ಮಾಡಿದ್ದಾರೆನ್ನುವಂತಹ ಅನುಭವವಾಗುತ್ತದೆ. ಎಲ್ಲಕ್ಕಿಂತ ಹೆಚ್ಚಾಗಿ ಶುಭ್ರ ಮತ್ತು ಪರಿಸರ ಮಲಿನತೆಯಿಲ್ಲದ ಸೊಗಸಾದ ವಾತಾವರಣ ಒಂದು ಹೊಸ ಅನುಭವವನ್ನು ನೀಡುತ್ತದೆ.

ಸಾತೋಡಿ ಜಲಪಾತ 
ಸಾತೋಡಿ ಜಲಪಾತ


Tags:

ಉತ್ತರ ಕನ್ನಡ ಜಿಲ್ಲೆಕಾಳಿ ನದಿದಾಂಡೇಲಿಯಲ್ಲಾಪುರಸಿರ್ಸಿಹುಬ್ಬಳ್ಳಿ

🔥 Trending searches on Wiki ಕನ್ನಡ:

ತೆಂಗಿನಕಾಯಿ ಮರಗೋವಿಂದ ಪೈಚನ್ನಬಸವೇಶ್ವರಮೈಸೂರು ಅರಮನೆಯಮರಾಮಾಯಣತ್ರಿಪದಿಮೆಕ್ಕೆ ಜೋಳವಚನಕಾರರ ಅಂಕಿತ ನಾಮಗಳುವ್ಯಾಸರಾಯರುಪ್ರಿನ್ಸ್ (ಚಲನಚಿತ್ರ)ವೀರೇಂದ್ರ ಪಾಟೀಲ್ದಯಾನಂದ ಸರಸ್ವತಿಮೈಸೂರು ಮಲ್ಲಿಗೆವಂದೇ ಮಾತರಮ್ಉಪನಯನಹುಲಿಬಾಲಕಾರ್ಮಿಕಭಾಷೆಪಂಜುರ್ಲಿಶ್ಚುತ್ವ ಸಂಧಿಸ್ಯಾಮ್ ಪಿತ್ರೋಡಾಶಬರಿಸಂಚಿ ಹೊನ್ನಮ್ಮಶ್ರೀ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳುರವಿಕೆಶೈಕ್ಷಣಿಕ ಸಂಶೋಧನೆಪಿ.ಲಂಕೇಶ್ವಿಧಾನಸೌಧಕನ್ನಡ ಛಂದಸ್ಸುಹೈದರಾಲಿಕಾರ್ಮಿಕರ ದಿನಾಚರಣೆದಾಳಿಂಬೆದೇವಸ್ಥಾನಸಂಸ್ಕೃತಪ್ರಜಾಪ್ರಭುತ್ವವಿಜ್ಞಾನಆದಿವಾಸಿಗಳುಧರ್ಮರಾಯ ಸ್ವಾಮಿ ದೇವಸ್ಥಾನಸಂಭೋಗಗಣೇಶಗೀತಾ (ನಟಿ)ಬಂಜಾರಜಾಹೀರಾತು೨೦೨೪ರಲ್ಲಿ ಕೆನಡಾದ ಕ್ರಿಕೆಟ್ ತಂಡದ ಅಮೇರಿಕ ಸಂಯುಕ್ತ ಸಂಸ್ಥಾನ ಪ್ರವಾಸಸರಾಸರಿನಿರ್ವಹಣೆ ಪರಿಚಯಅಂಡವಾಯುಬೀಚಿಕಂಪ್ಯೂಟರ್ಬುಡಕಟ್ಟುಕೃಷ್ಣರಾಜನಗರಸೂರ್ಯ (ದೇವ)ಬಹಮನಿ ಸುಲ್ತಾನರುಮಾನ್ವಿತಾ ಕಾಮತ್ಹಾಸನ ಜಿಲ್ಲೆಕ್ರಿಯಾಪದಜೀವಕೋಶಭಾರತೀಯ ರಾಷ್ಟ್ರೀಯ ಕಾಂಗ್ರೆಸ್ತಂತ್ರಜ್ಞಾನದ ಉಪಯೋಗಗಳುವಿಜಯಪುರಪಾಕಿಸ್ತಾನವಿನಾಯಕ ಕೃಷ್ಣ ಗೋಕಾಕಇಂದಿರಾ ಗಾಂಧಿಏಡ್ಸ್ ರೋಗಚದುರಂಗ (ಆಟ)ಭಾರತದ ರೂಪಾಯಿಗುಪ್ತ ಸಾಮ್ರಾಜ್ಯಅರ್ಜುನಶಿಕ್ಷಕಕಮಲವೇದವ್ಯಾಸಹೊಯ್ಸಳ ವಿಷ್ಣುವರ್ಧನವಾಲ್ಮೀಕಿಚಿನ್ನ🡆 More