ಮೋಳಿಗೆ ಮಾರಯ್ಯ

ಮೋಳಿಗೆ ಮಾರಯ್ಯ ಸು.1160.

ಶಿವಶರಣ ಹಾಗೂ ವಚನಕಾರ, ಹನ್ನೆರಡನೆ ಶತಮಾನದ ಬಸವಣ್ಣನವರ ಸಮಕಾಲೀನ. ಇವನಿಗೆ ಮೋಳಿಗಯ್ಯ ಎಂಬ ಹೆಸರು ಇದೆ.

ಇವರು ಮೊದಲಿಗೆ ಕಾಶ್ಮೀರ ದೇಶದ ಸವಾಲಕ್ಷದ ಅರಸರಾಗಿದ್ದರು. ಮಾಂಡವ್ಯಪುರ ಇವರ ರಾಜಧಾನಿ. ಇವರ ಮೊದಲಿನ ಹೆಸರು ಮಹಾದೇವ ಭೂಪಾಲ ಇವರ ರಾಣಿಯ ಹೆಸರು ಮಹಾದೇವಿ, ಮಗನ ಹೆಸರು ಲಿಂಗಾರತಿ. ಬಸವಣ್ಣನವರ ತತ್ವಗಳಿಗೆ ಮಾರು ಹೋಗಿ ರಾಜ್ಯವನ್ನು ಮಗನಾದ ಲಿಂಗಾರತಿಗೆ ಪಟ್ಟಗಟ್ಟಿ ಪತ್ನಿ ಮಹಾದೇವಿಯೊಡನೆ ಕಲ್ಯಾಣಕ್ಕೆ ಬರುತ್ತಾರೆ. ಅಲ್ಲಿ ಶರಣರ ತತ್ವಗಳಿಗೆ ತಕ್ಕಂತೆ ಕಟ್ಟಿಗೆ ಮಾರುವ ಕಾಯಕವನ್ನು ಮಾಡುತ್ತಾರೆ .

ಮೊದಲಿಗೆ ಈತ ಕಾಶ್ಮೀರ ದೇಶದ ಮಾಂಡವ್ಯಪುರದ ರಾಜನಾಗಿದ್ದನೆಂದೂ ಅನಂತರ ಬಸವಣ್ಣನವರ ವಿಚಾರಗಳ ಆಕರ್ಷಣೆಗೊಳಗಾಗಿ ರಾಜ್ಯ ತ್ಯಜಿಸಿ ತನ್ನ ಹೆಂಡತಿ ಗಂಗಾದೇವಿಯೊಂದಿಗೆ ಕಲ್ಯಾಣಕ್ಕೆ ಬಂದು ಅಲ್ಲಿ ಮೋಳಿಗೆ ಮಾರಯ್ಯನಾದನೆಂದು ಹೆಂಡತಿ ಮಹಾದೇವಿಯಾದಳೆಂದು ವೀರಶೈವ ಗ್ರಂಥಗಳು ಹೇಳುತ್ತವೆ. ತೆಲುಗು ಬಸವಪುರಾಣಮು, ಕನ್ನಡ ಬಸವಪುರಾಣ, ಶಿವತತ್ತ್ವಚಿಂತಾಮಣಿ, ವೀರಶೈವಾಮೃತ ಮಹಾಪುರಾಣ, ಪ್ರಭುದೇವರ ಪುರಾಣ, ರಾಘವಾಂಕ ಚಾರಿತ್ರ, ಗುರುರಾಜಚಾರಿತ್ರ, ವೃಷಭೇಂದ್ರ ವಿಜಯ, ಭೈರವೇಶ್ವರಕಾವ್ಯದ ಕಥಾಮಣಿಸೂತ್ರರತ್ನಾಕರ, ಶರಣಲೀಲಾಮೃತ, ಬೋರಬಸವಪುರಾಣ ಮೊದಲಾದ ಗ್ರಂಥಗಳಲ್ಲಿ ಈತನ ಚರಿತ್ರೆ ನಿರೂಪಿತವಾಗಿದೆ. ಹೊನ್ನಳ್ಳಿಯ ಗೌರಾಂಕ (ಸು. 1525) ಈತನನ್ನು ಕುರಿತು ಮೋಳಿಗಯ್ಯನ ಪುರಾಣ ಎಂಬ ಕಾವ್ಯವನ್ನು ಬರೆದಿದ್ದಾನೆ. ಪ್ರಭುದೇವರ ಶೂನ್ಯಸಂಪಾದನೆಯಲ್ಲಿ ಮೋಳಿಗಯ್ಯಗಳ ಸಂಪಾದನೆ ಎಂಬ ಭಾಗವಿದೆ.

ಇದುವರೆಗೆ ಈತನ 819 ವಚನಗಳು ದೊರಕಿವೆ. ನಿಃಕಳಂಕಮಲ್ಲಿಕಾರ್ಜುನ ಎಂಬುದು ಈ ವಚನಗಳ ಅಂಕಿತ. ಪಟ್ಸ್ಥಲಸಿದ್ಧಾಂತವನ್ನು ನಿರೂಪಿಸುವ ಈತನ ಒಂದು ವಚನ ಹೀಗಿದೆ.

ವೃಕ್ಷ ಬೀಜವ ನುಂಗಿತ್ತೋ, ಬೀಜ ವೃಕ್ಷವ ನುಂಗಿತ್ತೋ

ಎಂಬುದನರಿದಾಗವೆ ಭಕ್ತಸ್ಥಲ.

ಮುತ್ತು ಜಲವ ನುಂಗಿತ್ತೋ, ಜಲವು ಮುತ್ತು ನುಂಗಿತ್ತೋ

ಎಂಬುದನರಿದಾಗವೆ ಮಾಹೇಶ್ವರಸ್ಥಲ.

ಪ್ರಭೆ ಪಾಷಾಣವ ನುಂಗಿತ್ತೋ, ಪಾಷಾಣ ಪ್ರಭೆಯ ನುಂಗಿತ್ತೋ

ಎಂಬುದನರಿದಾಗವೆ ಪ್ರಸಾದಿಸ್ಥಲ.

ವಹ್ನಿ ಕಾಷ*ವ ನುಂಗಿತ್ತೋ, ಕಾಷ* ವಹ್ನಿಯ ನುಂಗಿತ್ತೋ

ಎಂಬುದನರಿದಾಗವೆ ಪ್ರಾಣಲಿಂಗಿಸ್ಥಲ.

ಸಾರ ಬಲಿದು ಶರಧಿಯ ಕೂಡಿದಾಗವೆ ಶರಣಸ್ಥಲ.

ವಾರಿ ಬಲಿದು ವಾರಿಧಿಯಂತಾದಾಗವೆ ಐಕ್ಯಸ್ಥಲ.

ಹೀಂಗಲ್ಲದೆ ಷಟ್ಸ್ಥಲಬ್ರಹ್ಮಿಗಳೆಂತಾದಿರಣ್ಣಾ ?

ಕರೆಯದೆ ಪಶುವಿಂಗೆ ತೃಣವ ಘಳಿಸುವನಂತೆ,

ಒಲ್ಲದ ಸತಿಯರಲ್ಲಿ ರತಿಕೂಟವ ಬಯಸುವನಂತೆ,

ಗೆಲ್ಲತನಕ್ಕೆ ಹೋರುವರಲ್ಲಿ ಬಲ್ಲತನವನರಸುವನಂತೆ,

ಕೊಲ್ಲಿಯಾವಿನಲ್ಲಿ ಸ್ವಲೀಲೆಯನರಸುವನಂತೆ,

ಬಲಿದ ವಂಶದಲ್ಲಿ ಕಳಿಲೆಯನರಸುವನಂತೆ,

ಬರಿಮಾತಿಂಗೆಡೆಯಾದುದುಂಟೆ ?

ಬಯಲ ಕೊಂಡ ಘನಕ್ಕೆ ಅವಧಿಗೊಡಲಿಲ್ಲ.

ಉರಿಕೊಂಡ ಕರ್ಪುರಕ್ಕೆ ರೂಪಿಂಗೆಡೆಯಿಲ್ಲ.

ಬಯಲ ಬಡಿವಡೆವಂಗೆ ಕೈಗೆ ಮೃದುವಿಲ್ಲ.

ಮನ ಮಹದಲ್ಲಿ ನಿಂದವಂಗೆ ಆರನೆಣಿಸಲಿಲ್ಲ, ಮೂರ ಮುಟ್ಟಲಿಲ್ಲ.

ಮೀರಿದ ತೋರಿದ ಘನ ತನ್ನಲ್ಲಿ ನಿರ್ಲೇಪ,

ನಿಃಕಳಂಕ ಮಲ್ಲಿಕಾರ್ಜುನಾ.

ಮೋಳಿಗೆ ಮಾರಯ್ಯ
ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ:

Tags:

ಬಸವಣ್ಣ

🔥 Trending searches on Wiki ಕನ್ನಡ:

ಅವಲುಮ್ ಪೆನ್ ತಾನೆಮೇಲುಕೋಟೆಲಕ್ಷ್ಮಿಮುದ್ದಣಅರಿಸ್ಟಾಟಲ್‌ಚಾಮರಸವಿಷ್ಣುವರ್ಧನ್ (ನಟ)ತಾಳೀಕೋಟೆಯ ಯುದ್ಧಮಾರಾಟ ಪ್ರಕ್ರಿಯೆಉಪನಯನಪುರಂದರದಾಸಹರ್ಡೇಕರ ಮಂಜಪ್ಪಕರ್ನಾಟಕದ ಜಾನಪದ ಕಲೆಗಳುಚನ್ನಬಸವೇಶ್ವರಕರ್ನಾಟಕ ಜನಪದ ನೃತ್ಯವಿಜಯನಗರದ ಸಂಸ್ಥಾಪನಾಚಾರ್ಯ ಕುಮಾರ ರಾಮಚಾಣಕ್ಯಗೌತಮ ಬುದ್ಧಸುಮಲತಾಚಾಮುಂಡೇಶ್ವರಿ ದೇವಸ್ಥಾನ, ಮೈಸೂರುಶ್ರೀ ರಾಘವೇಂದ್ರ ಸ್ವಾಮಿಗಳುಮ್ಯಾಕ್ಸ್ ವೆಬರ್ಭಾರತದ ಆರ್ಥಿಕ ವ್ಯವಸ್ಥೆವಿಜಯನಗರ ಸಾಮ್ರಾಜ್ಯನಟಸಾರ್ವಭೌಮ (೨೦೧೯ ಚಲನಚಿತ್ರ)ನಾಲ್ವಡಿ ಕೃಷ್ಣರಾಜ ಒಡೆಯರುಇಂಗ್ಲೆಂಡ್ ಕ್ರಿಕೆಟ್ ತಂಡಮಂಡ್ಯಕನ್ನಡಪ್ರಭತತ್ಪುರುಷ ಸಮಾಸದೇವನೂರು ಮಹಾದೇವಮಹಜರುಸ್ಟಾರ್‌ಬಕ್ಸ್‌‌ಬಡತನಪೆಟ್ರೋಮ್ಯಾಕ್ಸ್ (ಚಲನಚಿತ್ರ)ಪಂಚ ವಾರ್ಷಿಕ ಯೋಜನೆಗಳುಶ್ರೀಕೃಷ್ಣದೇವರಾಯಭಾರತೀಯ ಶಾಸ್ತ್ರೀಯ ನೃತ್ಯಕರ್ನಾಟಕದ ರಾಜ್ಯಪಾಲರುಗಳ ಪಟ್ಟಿಭಾರತದಲ್ಲಿನ ಚುನಾವಣೆಗಳುಜ್ಯೋತಿಷ ಶಾಸ್ತ್ರದ ನಕ್ಷತ್ರಗಳುಒಡೆಯರ್ಆಸ್ಪತ್ರೆಉತ್ತರ ಕರ್ನಾಟಕಕರ್ನಾಟಕದ ಮಹಾನಗರಪಾಲಿಕೆಗಳುಅನುಭವ ಮಂಟಪಚಿಕ್ಕಬಳ್ಳಾಪುರನಿರ್ವಹಣೆ ಪರಿಚಯರಾಷ್ಟ್ರೀಯತೆನಳಂದನೇಮಿಚಂದ್ರ (ಲೇಖಕಿ)ಸಂಶೋಧನೆಅಶ್ವಮೇಧಮಾನವ ಹಕ್ಕುಗಳುವಿಧಾನ ಸಭೆಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆವಿನೋಬಾ ಭಾವೆಭಾರತದ ವಿಶ್ವ ಪರಂಪರೆಯ ತಾಣಗಳುಗೊರೂರು ರಾಮಸ್ವಾಮಿ ಅಯ್ಯಂಗಾರ್ರಾಮಾಚಾರಿ (ಕನ್ನಡ ಧಾರಾವಾಹಿ)ತಾಳೆಮರಆಲದ ಮರದಯಾನಂದ ಸರಸ್ವತಿಭಾರತೀಯ ಆಡಳಿತಾತ್ಮಕ ಸೇವೆಗಳುಡಾ ಬ್ರೋಧರ್ಮ (ಭಾರತೀಯ ಪರಿಕಲ್ಪನೆ)ಪು. ತಿ. ನರಸಿಂಹಾಚಾರ್ಮೊದಲನೆಯ ಕೆಂಪೇಗೌಡವಜ್ರಮುನಿಒಂದು ಮುತ್ತಿನ ಕಥೆಕರ್ನಾಟಕದ ಅಣೆಕಟ್ಟುಗಳುಜಾಹೀರಾತುವಿಷ್ಣುಗಿಡಮೂಲಿಕೆಗಳ ಔಷಧಿರವಿಚಂದ್ರನ್ಸಾಮಾಜಿಕ ತಾಣಎಡ್ವಿನ್ ಮೊಂಟಾಗು🡆 More