ಮಹಾಶ್ವೇತಾ ದೇವಿ: ಭಾರತೀಯ ಬೆಂಗಾಳಿ ಭಾಷಾ ಲೇಖಕಿ.

ಮಹಾಶ್ವೇತಾ ದೇವಿ (ಬಂಗಾಳಿ: মহাশ্বেতা দেবী ಮೊಹಾಶೆಶೆತಾ ಡೇಬಿ ) (ಜನನ ೧೯೨೬, ಢಾಕಾದಲ್ಲಿ; ಸದ್ಯ ಇದು ಬಾಂಗ್ಲಾದೇಶ) ದಲ್ಲಿದ್ದು ಅವರು ಭಾರತೀಯ ಸಾಮಾಜಿಕ ಕಾರ್ಯಕರ್ತೆ ಮತ್ತು ಬರಹಗಾರ್ತಿ ಎನಿಸಿದ್ದಾರೆ.

Mahasweta Devi
ಮಹಾಶ್ವೇತಾ ದೇವಿ: ಜೀವನ ಚರಿತ್ರೆ, ವೃತ್ತಿಜೀವನ, ಇತ್ತೀಚಿನ ಕಾರ್ಯಚಟುವಟಿಕೆ
ಜನನಜನವರಿ 14, 1926
Dhaka, British India
ಮರಣ28 July 2016
ವೃತ್ತಿActivist, Author
ರಾಷ್ಟ್ರೀಯತೆIndian
ಕಾಲ೧೯೫೬-೨೦೧೬
ಪ್ರಕಾರ/ಶೈಲಿnovel, short story, drama, essay
ವಿಷಯDenotified tribes of India
ಸಾಹಿತ್ಯ ಚಳುವಳಿGananatya
ಪ್ರಮುಖ ಕೆಲಸ(ಗಳು)Hajar Churashir Ma (No. ೧೦೮೪'s Mother)
Aranyer Adhikar (The Occupation of the Forest)
Titu Mir

ಪ್ರಭಾವಿತರು
  • Gayatri Chakravorty Spivak

ಜೀವನ ಚರಿತ್ರೆ

ಮಹಾಶ್ವೇತಾದೇವಿಯು ಢಾಕಾದಲ್ಲಿ ೧೯೨೬ ರಲ್ಲಿ ಜನಿಸಿದರು.ಸಾಹಿತ್ಯ ಲೋಕದ ಪರಿಚಿತ ಹಿಂದು ಬ್ರಾಹ್ಮಣ ಕುಟುಂಬದಲ್ಲಿ ಅವರ ಜನನವಾಯಿತು. ಅವರ ತಂದೆ ಮನಿಷ್ ಘಟಕ್ ಅವರು ಕಲ್ಲೊಳ್ ಯುಗದ ಓರ್ವ ಕವಿ ಮತ್ತು ಕಾದಂಬರಿಕಾರ, ತಮ್ಮ ಹೆಸರನ್ನು ಜುಬನಾಶ್ವಾ ಎಂಬ ಗುಪ್ತನಾಮದಿಂದ ಪ್ರಸಿದ್ದರಾದವರು. ಹೆಸರಾಂತ ಚಿತ್ರನಿರ್ಮಾಪಕ ರಿತ್ವಿಕ್ ಘಟಕ್ ಅವರಿಗೆ ಹಿರಿಯ ಸಹೋದರರಾಗಿದ್ದಾರೆ. ಮಹಾಶ್ವೇತಾ ಅವರ ತಾಯಿ ಧರಿತ್ರಿ ದೇವಿ ಕೂಡ ಓರ್ವ ಬರಹಗಾರ್ತಿ ಮತ್ತು ಸಾಮಾಜಿಕ ಕಾರ್ಯಕರ್ತೆಯಾಗಿದ್ದರು.ಅವರ ಇಬ್ಬರು ಸಹೋದರರೂ ಸಹ ವಿವಿಧ ಕ್ಷೇತ್ರಗಳಲ್ಲಿ ಪ್ರಖ್ಯಾತ ವ್ಯಕ್ತಿಗಳೆನಿಸಿಕೊಂಡವರು.ಹೆಸರಾಂತ ಶಿಲ್ಪಕಲೆಗಾರ ಸಂಖಾ ಚೌಧರಿ ಹಾಗು ಇನ್ನೊಬ್ಬರು ಸಚಿನ್ ಚೌಧರಿ, ಎಕಾನಾಮಿಕ್ ಅಂಡ್ ಪೊಲಿಟಿಕಲ್ ವೀಕ್ಲಿ ಆಫ್ ಇಂಡಿಯಾದ ಸಂಸ್ಥಾಪಕ ಸಂಪಾದಕರಾಗಿದ್ದರು. ಅವರ ಮೊದಲ ಶಿಕ್ಷಣವು ಢಾಕಾದಲ್ಲಿ ನಡೆಯಿತು.ಆದರೆ ಭಾರತದ ವಿಭಜನೆಯ ನಂತರ ಅವರು ಭಾರತದ ಪಶ್ಚಿಮ ಬಂಗಾಳಕ್ಕೆ ಬಂದರು. ರವೀಂದ್ರನಾಥ ಟ್ಯಾಗೋರ್ ಅವರು ಸಂಸ್ಥಾಪಿಸಿದ ಶಾಂತಿನಿಕೇತನದಲ್ಲಿನ ವಿಶ್ವಭಾರತಿ ಯುನ್ವರ್ಸಿಟಿಯಲ್ಲಿ ಪ್ರವೇಶ ಪಡೆದು ಅವರು ತಮ್ಮ ಬಿ.ಎ ಆನರ್ಸ್ )ಪದವಿ,ಹೀಗೆ ಇಂಗ್ಲೀಷ್ ವಿಷಯದಲ್ಲಿ ಆನರ್ಸ್ ಪಡೆದ ನಂತರ ಕೊಲ್ಕತ್ತಾ ವಿಶ್ವವಿದ್ಯಾಲಯದಲ್ಲಿ ತಮ್ಮ ಇಂಗ್ಲೀಷ್ ಎಂ.ಎ ಯನ್ನೂ ಪೂರ್ಣಗೊಳಿಸಿದರು. ಅವರು ತದನಂತರ ಪ್ರಸಿದ್ದ ನಾಟಕಕಾರ ಬಿಜೊನ್ ಭಟ್ಟಾಚಾರ್ಯ ಅವರನ್ನು ಮದುವೆಯಾದರು,ಅವರು IPTAದೊಂದಿಗೆ ಗುರುತಿಸಿಕೊಂಡರು.ಇಂಡಿಯಾ ಪೀಪಲ್ ಥೆಯಟರ್ ಅಸೊಶಿಯೇಶನ್ ರಂಗಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದೆ.

ವೃತ್ತಿಜೀವನ

ಅದಾದ ಮೇಲೆ ೧೯೬೪ ರಲ್ಲಿ ಅವರು ಬಿಜೊಯ್ ಘರ್ ಕಾಲೇಜ್ ನಲ್ಲಿ ಉಪನ್ಯಾಸಕಿಯಾಗಿದ್ದರು.(ಇದು ಕೊಲ್ಕತ್ತಾ ವಿಶ್ವವಿದ್ಯಾಲಯದ ಅಡಿ ಬರುವ ಅಧೀನ ಶಿಕ್ಷಣ ಪದ್ದತಿಯ ಸಂಸ್ಥೆಯಾಗಿದೆ.) ಆ ಕಾಲದಲ್ಲಿ ಬಿಜೊಯ್ ಘರ್ ಕಾಲೇಜು ಉದ್ಯೋಗ ನಿರತ ಮಹಿಳಾ ವಿದ್ಯಾರ್ಥಿಗಳಿಗಾಗಿರುವ ಶಿಕ್ಷಣ ಸಂಸ್ಥೆಯಾಗಿತ್ತು. ಅದೇ ವೇಳೆಗೆ ಅವರು ಓರ್ವ ಪತ್ರಕರ್ತೆ ಮತ್ತು ಸೃಜನಾತ್ಮಕ ಲೇಖಕಿಯಾಗಿ ಕೆಲಸ ಮಾಡಿದ್ದಾರೆ. ಇತ್ತೀಚಿಗೆ ಅವರು ಪಶ್ಚಿಮ ಬಂಗಾಳಲೋಧಾಸ್ ಮತ್ತು ಶಬರಾಸ್ ಗುಡ್ಡಗಾಡು ಜನಾಂಗದ ಸಮುದಾಯದ ಅಲ್ಲದೇ ಮಹಿಳೆಯರ ಮತ್ತು ದಲಿತರ ಕುರಿತು ಆಳ ಅಧ್ಯಯನ ನಡೆಸಿದ ಪ್ರಯುಕ್ತ ಹೆಚ್ಚು ಜನಮಾನಸದಲ್ಲಿ ಪ್ರಸಿದ್ದರಾಗಿದ್ದಾರೆ. ಅವರು ಗುಡ್ಡಗಾಡು ಜನಾಂಗದ ಹೋರಾಟಗಳಲ್ಲಿ ಸಕ್ರಿಯ ಭಾಗಿಯಾಗಿದ್ದವರು,ಬಿಹಾರ್,ಮಧ್ಯಪ್ರದೇಶ ಮತ್ತು ಛತ್ತೀಸ್ ಘಡ್ ಗಳಲ್ಲಿನ ಗುಡ್ಡಗಾಡು ಜನಾಂಗದ ಮೂಲಭೂತ ಬೇಡಿಕೆಗಳಿಗಾಗಿ, ಅವರ ಪರವಾಗಿ ನಿರಂತರ ಹೋರಾಟಕ್ಕಾಗಿ ತಮ್ಮನ್ನು ಮುಡುಪಾಗಿಸಿದ್ದಾರೆ. ಅವರ ಬಂಗಾಳಿ ಸಾಹಿತ್ಯ ಕಥನದಲ್ಲಿ ಗುಡ್ಡಗಾಡು ಜನಾಂಗದ ಮೇಲಾಗುವ ದೌರ್ಜನ್ಯ ಮತ್ತು ದಬ್ಬಾಳಿಕೆಗಳನ್ನು ವಿವರವಾಗಿ ಚಿತ್ರಿಸಿದ್ದಾರೆ.ಬಲವಂತರು,ಮೇಲ್ವರ್ಗದವರು,ಭೂಮಾಲೀಕರು,ಸಾಲನೀಡುವ ಸಾಹುಕಾರರು ಹಾಗು ಸರ್ಕಾರಿ ಅಧಿಕಾರಿ ವರ್ಗ ಹೇಗೆ ಈ ತುಳಿತಕ್ಕೊಳಗಾದ ಮತ್ತು ಅಸ್ಪೃಶ್ಯರನ್ನು ನಡೆಸಿಕೊಳ್ಳುತ್ತದೆ ಎಂದು ವಿಶದವಾಗಿ ವಿವರಿಸಿದ್ದಾರೆ. ಅವರು ತಮ್ಮ ಈ ಸಾಮಾಜಿಕ ಕಾರ್ಯದ ಸ್ಪೂರ್ತಿಯಿಂದ ಇದನ್ನು ಬರೆದಿದ್ದಾರೆ:

ಸಾಮಾನ್ಯ ಜನರೇ ನಿಜವಾದ ಇತಿಹಾಸ ನಿರ್ಮಿಸಬಲ್ಲರೆಂದು ನಾನು ಯಾವಾಗಲೂ ನಂಬಿದ್ದೇನೆ. ಇದಕ್ಕಾಗಿ ನಾನು ಸತತವಾಗಿ ಅವರ ಮರುಗೋಚರತೆಯನ್ನು ಎಲ್ಲೆಡೆಯೂ ಕಾಣುತ್ತಿದ್ದೇನೆ.ಅದು ಜಾನಪದ,ಗ್ರಾಮೀಣ ನೃತ್ಯಗಳು,ಪುರಾಣ-ಪುಣ್ಯಕಥೆಗಳು ಇತ್ಯಾದಿಗಳನ್ನು ಸಾಮಾನ್ಯ ಜನರೇ ತಮ್ಮ ಪೀಳಿಗೆಯಿಂದ ಪೀಳಿಗೆಗೆ ಸಾಗಿಸಿ ಸಮಾಜವನ್ನು ಉಪಕರಿಸಿದ್ದಾರೆ...ನನ್ನ ಬರೆಹದ ಸ್ಪೂರ್ತಿಗೆ ಶೋಷಣೆಗೊಳಗಾದ,ದುರುಪಯೋಗಕ್ಕೊಳಗಾದ ಅದಲ್ಲದೇ ತಮ್ಮ ಸೋಲನ್ನೇ ಒಪ್ಪಿಕೊಳ್ಳದ ಇಂತಹ ಜನರೇ ನನಗೆ ಪ್ರೇರಣೆಯಾಗಿದ್ದಾರೆ. ನನಗೆ ಇಂತಹ ಉದಾತ್ತ ಮನೋಭಾವದ,ಚಕಿತಗೊಳಿಸುವ ವ್ಯಕ್ತಿತ್ವ ಹೊಂದಿದ ಮತ್ತು ನೋವಿನಿಂದ ಘಾಸಿಗೊಂಡ ಈ ಮನುಕುಲದ ಜನರೇ ನನ್ನ ಸಾಹಿತ್ಯದ ಗಟ್ಟಿ ಮೂಲವಸ್ತುಗಳಾಗಿದ್ದಾರೆ. ಇದಕ್ಕಾಗಿ ನಾನೇಕೆ ಬೇರೆ ಕಚ್ಚಾ ಸಾಮಗ್ರಿಗಳತ್ತ ಹೊರಳಲಿ,ಯಾವಾಗ ನಾನು ಇವರನ್ನು ತಿಳಿದುಕೊಳ್ಳಲು ಆರಂಭಿಸಿದೆನೋ? ಆಗ ಬೇರೆಡೆಗೆ ಹೋಗುವ ಅಗತ್ಯ ನನಗೆ ಕಾಣಲಿಲ್ಲ. ನನಗೆ ಹಲವು ವೇಳೆ ಅನಿಸಿದ್ದೇನೆಂದರೆ ನನ್ನ ಬರೆಹವೆಂದರೆ ಅವರ ಕಾರ್ಯಚಟುವಟಿಕೆಗಳು.

ಫ್ರಾಂಕ್ ಫರ್ಟ್ ಬುಕ್ ಫೇರ್, ೨೦೦೬ ರಲ್ಲಿನ ಪುಸ್ತಕ ಮೇಳದಲ್ಲಿ ಭಾರತವು ಈ ಮೇಳದ ಎರಡನೆಯ ಬಾರಿಗಿನ ಅತಿಥಿ ದೇಶವಾಗಿದ್ದುದು ಮೊದಲ ದೇಶವೆನಿಸಿತು.ಅದೇ ಸಂದರ್ಭದಲ್ಲಿ ಅವರು ಪ್ರಾಸ್ತಾವಿಕ ಭಾಷಣ ಮಾಡಿ ಅದರಲ್ಲಿ ಈ ಜನರ ಪಾಡು ಬಿಂಬಿಸಿದಾಗ ಇಡೀ ಪ್ರೇಕ್ಷಕ ವರ್ಗ ಕಣ್ಣೀರಿನ ಕೋಡಿ ಹರಿಸಿತು.ಅವರು ಆಗ ರಾಜ್ ಕಪೂರ್ ಅವರ ಪ್ರಸಿದ್ದ ಹಿಂದಿ ಸಿನೆಮಾದ ಹಾಡಿನ ಸಾಲುಗಳನ್ನು ಉಚ್ಛರಿಸಿ ಕರಳು ಕರಗಿಸಿದ ಸನ್ನಿವೇಶ ಅದಾಗಿತ್ತು.(ಈ ಹಾಡಿನ ಇಂಗ್ಲೀಷ್ ರೂಪ ಕಂಸದಲ್ಲಿದೆ):

ಇದು ನಿಜವಾದ ಸಮಯವಾಗಿದ್ದು ಅದನ್ನು ನೆನಪಿಸಲು ಎಂದು ಅವರು ಹೇಳಿದ್ದರು,ಜೂತಾ (ಬೂಟು)ಜಪಾನಿನದಾದರೆ,ಪಾಟ್ಲೂನ್ (ಷರಾಯಿ) ಇಂಗ್ಲಿಸ್ಥಾನಿ (ಬ್ರಿಟಿಶ್)ಅದಲ್ಲದೇ ಟೊಪ್ಪಿಗೆ (ಹ್ಯಾಟ್)ರಷಿಯಾದಾದರೂ ಹೃದಯ ಮಾತ್ರ... ದಿಲ್ (ಹೃದಯ) ಮಿಡಿತ ಯಾವಾಗಲೂ ಹಿಂದೂಸ್ಥಾನೀ (ಭಾರತೀಯ)... ನನ್ನ ದೇಶವು ಹರಿದು ಹೋಗಿದ್ದರೂ,ಹಂಚಿ ಚೂರಾಗಿದ್ದರೂ,ಗರ್ವ ಮೂಡಿಸುವಂತಹದ್ದು,ಅಭಿಮಾನದ್ದು,ಸುಂದರ,ಬೆಚ್ಚಗಿನ,ಆರ್ದೃತೆಯುಳ್ಳದ್ದು,ತಂಪಾದುದು,ಮರಳು ಹೊದ್ದಿರುವ ನನ್ನ ದೇಶ ಪ್ರಕಾಶಿಸುತ್ತಿರುವ ಭಾರತ. ನನ್ನ ದೇಶ.

ಇತ್ತೀಚಿನ ಕಾರ್ಯಚಟುವಟಿಕೆ

ಇತ್ತೀಚಿಗೆ ತನ್ನ ತಾಯ್ನಾಡು ಪಶ್ಚಿಮ ಬಂಗಾಳ, ರಾಜ್ಯದ ಕೈಗಾರಿಕಾ ನೀತಿಯ ವಿರುದ್ದ ಅವರು ಹೋರಾಟ ನಡೆಸಿದ್ದಾರೆ,ಇದಕ್ಕಾಗಿ ನ್ಯಾಯಕ್ಕಾಗಿ ಅವರ ಶ್ರಮ ಮೀಸಲಾಗಿದೆ. ಅದರಲ್ಲೂ ವಿಶೇಷವಾಗಿ ಫಲವತ್ತಾದ ಭೂಮಿಯನ್ನು ಸರ್ಕಾರ ಕೈಗಾರಿಕೆಗಳ ಅಭಿವೃದ್ಧಿ ಹೆಸರಲ್ಲಿ ಸ್ವಾಧೀನಪಡಿಸಿಕೊಳ್ಳುತ್ತಿದೆ.ಸರ್ಕಾರವು ಬಡ ರೈತರ ಇಂತಹ ಭೂಮಿಯನ್ನು ಅತ್ಯಂತ ಕಡಿಮೆ ದರದಲ್ಲಿ ಖರೀದಿಸಿ ಅವರನ್ನು ಬೀದಿ ಪಾಲು ಮಾಡುತ್ತಿದೆ ಎಂದು ಅವರ ಹೋರಾಟದ ಮೂಲ ಮಂತ್ರವಾಗಿದೆ. ಅವರ ಪ್ರಕಾರ ಈ ಪ್ರಕ್ರಿಯೆಯು ರವೀಂದ್ರನಾಥ ಟ್ಯಾಗೊರ್ ರ ಶಾಂತಿನಿಕೇತನವನ್ನು ವಾಣೀಜ್ಯೀಕರಣಗೊಳಿಸದಂತಾಗಿದೆ.ಅವರು ಇದೇ ಸ್ಥಳದಲ್ಲಿಯೇ ಹೋರಾಟಕ್ಕಾಗಿ ಸಜ್ಜುಗೊಂಡಿದ್ದಾರೆ. ಅವರ ನೇತೃತ್ವವು ಅಸಂಖ್ಯಾತ ಬುದ್ದಿಜೀವಿಗಳು,ಕಲಾವಿದರು,ಬರೆಹಗಾರರು ಮತ್ತು ರಂಗ ಕಲಾವಿದರನ್ನು ಸರ್ಕಾರದ ಈ ನೀತಿಯ ವಿರುದ್ಧ ಹೋರಾಡಲು ಕರೆ ತಂದಿತು.ಅದಲ್ಲದೇ ಸಿಂಗೂರ್ ಮತ್ತು ನಂದಿ ಗ್ರಾಮಗಳಲ್ಲಿ ಇದರ ಬಹುತೇಕ ಅನುಷ್ಟಾನವೂ ಆಯಿತು.

ಇತ್ತೀಚಿಗೆ ಗುಜರಾತ ರಾಜ್ಯವು ಗ್ರಾಮೀಣ ಮಟ್ಟದಲ್ಲಿ ಕೆಳವರ್ಗದ ವರೆಗೂ ಅಭಿವೃದ್ಧಿ ತಂದುದನ್ನು ಶ್ಲಾಘಿಸಿದ್ದಾರೆ.ಆದರೆ ೩೦ ವರ್ಷಗಳಿಂದ ಎಡರಂಗದ ಆಡಳಿತ ಕಂಡ ಪಶ್ಚಿಮ ಬಂಗಾಳ ರಾಜ್ಯದಲ್ಲಿ ಅಭಿವೃದ್ಧಿ "ಅತ್ಯಲ್ಪ ಪ್ರಮಾಣ"ದಲ್ಲಿಯೂ ಇಲ್ಲ ಎಂದು ಅವರು ಟೀಕಿಸಿದ್ದಾರೆ.

ನಿಧನ

ಮಹಾಶ್ವೇತಾದೇವಿ ಅವರು ಕೋಲ್ಕತ್ತದಲ್ಲಿ 2016 ಜುಲೈ 28ರಂದು ನಿಧನರಾದರು.

ಕೃತಿಗಳು

  • ದಿ ಕ್ವೀನ್ ಆಫ್ ಝಾನ್ಸಿ (ಜೀವನ ಚರಿತ್ರೆ, ಇದನ್ನು ಸಾಗರೀ ಮತ್ತು ಮಂದಿರಾ ಸೇನ್ ಗುಪ್ತಾ ಇಂಗ್ಲೀಷ್ ಗೆ ಅನುವಾದಿಸಿದ್ದಾರೆ. ಝಾನ್ಸಿರ್ ರಾಣಿ )ಎಂಬ ಬಂಗಾಳಿ ಕೃತಿ ೧೯೫೬ ರಲ್ಲಿ ಮೊದಲ ಬಾರಿಗೆ ಪ್ರಕಟವಾಗಿತ್ತು.
  • ಹಜಾರ್ ಚುರಾಶಿರ್ ಮಾ (ನಂ. ೧೦೮೪'ನ ತಾಯಿ , ೧೯೭೫)
  • ಅರನ್ಯೆರ್ ಅಧಿಕಾರ್ (ಅರಣ್ಯದ ಸ್ವಾಧೀನತೆ , ೧೯೭೭)
  • ಅಗ್ನಿಗರ್ಭ (ಬೆಂಕಿಯ ಗರ್ಭ , ೧೯೭೮)
  • ಬಿಟರ್ ಸೊಯಿಲ್ ಅನುವಾದ, ಇಪ್ಸಿತಾ ಚಂದ್ರ. ಸೀಗಲ್, ೧೯೯೮. ಫೋರ್ ಸ್ಟೋರೀಸ್.
  • ಛೋಟಿ ಮುಂಡಾ ಇವಾಮ್ ತಾರ್ ತಿರ್ (ಛೋಟಿ ಮುಂಡಾ ಅಂಡ್ ಹೀಸ್ ಆರೊವ್ , ೧೯೮೦)
  • ಇಮ್ಯಾನರಿ ಮ್ಯಾಪ್ಸಿ (ಅನುವಾದ :ಗಾಯತ್ರಿ ಸ್ಪಿವ್ಯಾಕ್ ಲಂಡನ್& ನ್ಯುಯಾರ್ಕ್. ರೌಟ್‌ಲೆಡ್ಜ್, ೨೦೦೭.
  • ಧೌಲಿ(ಸಣ್ಣ ಕಥೆ)
  • ಡಸ್ಟ್ ಆನ್ ದಿ ರೋಡ್ (ಇಂಗ್ಲೀಷ್ ಅನುವಾದ ಮೈತ್ರೇಯ್ ಘಟಕ್. ಸೀಗಲ್, ಕೊಲ್ಕತ್ತಾ.)
  • ಅವರ್ ನಾನ್-ವೆಜ್ ಕೌ (ಸೀಗಲ್ ಬುಕ್ಸ್, ಕೊಲ್ಕತ್ತಾ, ೧೯೯೮. ಬೆಂಗಾಲಿಯಿಂದ ಪರಮಿತಾ ಬ್ಯಾನರ್ಜೀ ಅವರಿಂದ ಅನುವಾದ.)
  • ಬಾಷೈ ತುಡು (ಇಂಗ್ಲೀಷ್ ಗೆ ಅನುವಾದ:ಗಾಯತ್ರಿ ಚಕ್ರ್ಬೊರ್ತಿ ಸ್ಪಿವ್ಯಾಕ್ ಅಂಡ್ ಶಮಿಕ್ ಬಂಡೋಪಾಧ್ಯಾಯ ಅವರಿಂದ. ಥಿಮಾ, ಕೊಲ್ಕತ್ತಾ, ೧೯೯೩)
  • ತಿತು ಮೀರ್
  • ರುಡಾಲಿ
  • ಬ್ರೀಸ್ಟ್ ಸ್ಟೋರೀಸ್ (ಇಂಗ್ಲೀಷ್ ಗೆ ಅನುವಾದ:ಗಾಯತ್ರಿ ಚಕ್ರ್ಬೊರ್ತಿ ಸ್ಪಿವ್ಯಾಕ್ ಅಂಡ್ ಶಮಿಕ್ ಬಂಡೋಪಾಧ್ಯಾಯ ಅವರಿಂದ. ಸೀಗಲ್, ಕೊಲ್ಕತ್ತಾ, ೧೯೯೭)
  • ಆಫ್ ಉಮೆನ್, ಒಟ್ ಕಾಸ್ಟ್ಸ್, ಪೀಜಂಟ್ಸ್, ಅಂಡ್ ರೆಬೆಲ್ಸ್ (ಇಂಗ್ಲೀಷ್ ಗೆ ಅನುವಾದ ಕಲ್ಪನಾ ಬರ್ಧನ್,ಯುನ್ವರ್ರ್ಸಿಟಿ ಆಫ್ ಕ್ಯಾಲಿಫೊರ್ನಿಯಾ, ೧೯೯೦.) ಸಿಕ್ಸ್ ಸ್ಟೋರೀಸ್.
  • ಏಕ್-ಕೋರೀಸ್' ಡ್ರೀಮ್ (ಇಂಗ್ಲೀಷ್ ಗೆ ಲೀಲಾ ಮಜುಮದಾರ್ ಅವರಿಂದ ಅನುವಾದ. N.B.T., ೧೯೭೬)
  • ದಿ ಬುಕ್ ಆಫ್ ಹಂಟರ್ (ಸೀಗಲ್ ಇಂಡಿಯಾ, ೨೦೦೨)
  • ಔಟ್ ಕಾಸ್ಟ್ (ಸೀಗಲ್, ಇಂಡಿಯಾ, ೨೦೦೨)
  • ಇನ್ ಅದರ್ ವರ್ಲ್ಡ್ಸ್: ಎಸ್ಸೆಯ್ಸ್ ಇನ್ ಕಲ್ಚರಲ್ ಪಾಲಿಟಿಕ್ಸ್ (ಇಂಗ್ಲೀಷ್ ಗೆ ಅನುವಾದ ಗಾಯತ್ರಿ ಚಕ್ರಬೊರ್ತಿ ಸ್ಪಿವ್ಯಾಕ್. ಮೆಥ್ಯುಯೆನ್ ಅಂಡ್ ಕಂಪನಿ, ೧೯೮೭. ನ್ಯುಯಾರ್ಕ್, ಲಂಡನ್)
  • ಟಿಲ್ ಡೆತ್ ಡು ಅಸ್ ಪಾರ್ಟ್
  • ಓಲ್ಡ್ ಉಮೆನ್
  • ಕುಲಪುತ್ರ (ಇದನ್ನು ಕನ್ನಡಕ್ಕೆ ಶ್ರೀಮತಿ ಎಚ್ ಎಸ್ CVG ಪಬ್ಲಿಕೇಶನ್ಸ್, ಬೆಂಗಳೂರು)
  • ದಿ ವ್ಹೈ-ವ್ಹೈ ಗರ್ಲ್ (ತುಳಿಕಾ, ಚೆನ್ನೈ.)
  • ಡಕಾತೆಯ್ ಕಹಾನಿ

ಮಹಾಶ್ವೇತಾದೇವಿಯವರ ಕೃತಿಗಳ ಆಧರಿಸಿದ ಚಲನಚಿತ್ರಗಳು

  • ಸುಂಘರ್ಷ್ (೧೯೬೮), ಇದು ಅವರದೇ ಕಥೆಯಾದರಿಸದ ಕಲ್ಪನಾ ಕಥನ ಸಾಹಿತ್ಯ ಒಂದು ಥುಗ್ಗೀ ಪಂಥದವರ ದ್ವೇಷದ ಕುರಿತ ವಾರಾಣಸಿನಗರದಲ್ಲಿ ನಡೆಯುವ ಘಟನೆ.
  • ರುಡಾಲಿ (೧೯೯೩)
  • ಹಜಾರ್ ಚೌರಾಸಿ ಕಿ ಮಾ (೧೯೯೮)
  • ಮಾಟಿ ಮಾಯ್ (೨೦೦೬), ಇದು ಸಣ್ಣ ಕಥೆ,ದಾಯೆನ್ ಆಧರಿಸಿದೆ

ಪ್ರಮುಖ ಪ್ರಶಸ್ತಿಗಳು

  • ೧೯೭೯: ಸಾಹಿತ್ಯ ಅಕಾಡಮಿ ಅವಾರ್ಡ್ (ಬೆಂಗಾಳಿ): –ಅರನ್ಯೆರ್ ಅಧಿಕಾರ್ (ಕಾದಂಬರಿ)
  • ೧೯೮೬: ಪದ್ಮಶ್ರೀ
  • ೧೯೯೬:ಜ್ಞಾನ ಪೀಠ ಅವಾರ್ಡ್- ಭಾರತೀಯ ಜ್ಞಾನಪೀಠದ ಅತ್ಯಂತ ದೊಡ್ಡ ಸಾಹಿತ್ಯ ಕ್ಷೇತ್ರದ ಪ್ರಶಸ್ತಿ ಇದಾಗಿದೆ.
  • ೧೯೯೭: ರಾಮೊನ್ ಮ್ಯಾಗ್ಸೆಸೆ ಆವಾರ್ಡ್ - ಜರ್ನಾಲಿಜಮ್, ಲಿಟರೇಚರ್, ಅಂಡ್ ದಿ ಕ್ರಿಯೇಟಿವ್ ಕಮ್ಯುನಿಕೇಶನ್ಸ್ ಆರ್ಟ್ಸ್
  • ೧೯೯೯: ಹಾನರೀಸ್ ಕೌಸಾ - ಇಂದಿರಾ ಗಾಂಧಿ ನ್ಯಾಶನಲ್ ಒಪನ್ ಯುನ್ವರ್ಸಿಟಿ (IGNOU)
  • ೨೦೦೬:ಪದ್ಮ ವಿಭೂಷಣ- ಭಾರತ ಸರ್ಕಾರದಎರಡನೆಯ ಅತಿದೊಡ್ಡ ನಾಗರಿಕ ಗೌರವ ಸನ್ಮಾನ ಇದಾಗಿದೆ.

ಉಲ್ಲೇಖಗಳು

ಬಾಹ್ಯ ಕೊಂಡಿಗಳು

Tags:

ಮಹಾಶ್ವೇತಾ ದೇವಿ ಜೀವನ ಚರಿತ್ರೆಮಹಾಶ್ವೇತಾ ದೇವಿ ವೃತ್ತಿಜೀವನಮಹಾಶ್ವೇತಾ ದೇವಿ ಇತ್ತೀಚಿನ ಕಾರ್ಯಚಟುವಟಿಕೆಮಹಾಶ್ವೇತಾ ದೇವಿ ನಿಧನಮಹಾಶ್ವೇತಾ ದೇವಿ ಕೃತಿಗಳುಮಹಾಶ್ವೇತಾ ದೇವಿ ಪ್ರಮುಖ ಪ್ರಶಸ್ತಿಗಳುಮಹಾಶ್ವೇತಾ ದೇವಿ ಉಲ್ಲೇಖಗಳುಮಹಾಶ್ವೇತಾ ದೇವಿ ಬಾಹ್ಯ ಕೊಂಡಿಗಳುಮಹಾಶ್ವೇತಾ ದೇವಿಢಾಕಾಬಂಗಾಳಿಬಾಂಗ್ಲಾದೇಶಭಾರತ

🔥 Trending searches on Wiki ಕನ್ನಡ:

ಬಿ.ಎಚ್.ಶ್ರೀಧರವಾಟ್ಸ್ ಆಪ್ ಮೆಸ್ಸೆಂಜರ್ಮಾನವ ಸಂಪನ್ಮೂಲಗಳುಬ್ಯಾಂಕ್ಭೂತಕೋಲತ್ರಿವೇಣಿಗೋವಿಂದ ಪೈಇಮ್ಮಡಿ ಪುಲಿಕೇಶಿಯೋನಿಶೈಕ್ಷಣಿಕ ಮನೋವಿಜ್ಞಾನಪ್ರೇಮಾಅಲಾವುದ್ದೀನ್ ಖಿಲ್ಜಿತ್ಯಾಜ್ಯ ನಿರ್ವಹಣೆವಾಲ್ಮೀಕಿಸಿದ್ದರಾಮಯ್ಯಮೂಲಧಾತುಗಳ ಪಟ್ಟಿಆಮ್ಲಗಳು ಮತ್ತು ಪ್ರತ್ಯಾಮ್ಲಗಳುಮಹಜರುಊಳಿಗಮಾನ ಪದ್ಧತಿವಿಧಾನ ಪರಿಷತ್ತುಮಲ್ಲಿಕಾರ್ಜುನ್ ಖರ್ಗೆತ್ರಯಂಬಕಂ (ಚಲನಚಿತ್ರ)ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಕನ್ನಡ ಭಾಷಾ ಸಾಹಿತಿಗಳುಹಿಂದೂಪೌರತ್ವಬೆಂಗಳೂರು ಗ್ರಾಮಾಂತರ (ಲೋಕ ಸಭೆ ಚುನಾವಣಾ ಕ್ಷೇತ್ರ)ಭಾರತದ ರೂಪಾಯಿಕದಂಬ ರಾಜವಂಶಬಾಲ್ಯ ವಿವಾಹಅಕ್ಬರ್ಕರ್ನಾಟಕ ಹಿಂದುಳಿದ ವರ್ಗಗಳ ಆಯೋಗಗಳುಕರ್ನಾಟಕದ ತಾಲೂಕುಗಳುಕಂಪ್ಯೂಟರ್ಗಾದೆಕಬ್ಬುಮಲೆನಾಡುರಾಮರಾಷ್ಟ್ರೀಯ ಶಿಕ್ಷಣ ನೀತಿಬಾಲ ಗಂಗಾಧರ ತಿಲಕಹವಾಮಾನಸಂವಹನಭಾರತದ ಜನಸಂಖ್ಯೆಯ ಬೆಳವಣಿಗೆಹನುಮಾನ್ ಚಾಲೀಸಡೊಳ್ಳು ಕುಣಿತಲಟ್ಟಣಿಗೆಹೈನುಗಾರಿಕೆಭಾರತದಲ್ಲಿ ಪಂಚಾಯತ್ ರಾಜ್ಹಣಅಳತೆ, ತೂಕ, ಎಣಿಕೆವಸ್ತುಸಂಗ್ರಹಾಲಯವಾದಿರಾಜರುಸಾಕ್ಷಾತ್ಕಾರಬಿಳಿ ರಕ್ತ ಕಣಗಳುಇಸ್ಲಾಂ ಧರ್ಮಕನ್ನಡ ಚಿತ್ರರಂಗಬಿ.ಎಫ್. ಸ್ಕಿನ್ನರ್ಮಾನವನ ನರವ್ಯೂಹಆಯುರ್ವೇದಅದ್ವೈತಸೆಕೆಂಡರಿ ಸ್ಕೂಲ್ ಲೀವಿಂಗ್ ಸರ್ಟಿಫಿಕೇಟ್ಸ್ಯಾಮ್ ಪಿತ್ರೋಡಾಸಾವಿತ್ರಿಬಾಯಿ ಫುಲೆಚಿತ್ರದುರ್ಗಕನ್ನಡ ಪತ್ರಿಕೆಗಳುಶಿವಮೊಗ್ಗಯೋಗಮಾಧ್ಯಮಶಬ್ದಎಲಾನ್ ಮಸ್ಕ್ಭಾರತದ ೨೦೨೪ರ ಸಾರ್ವತ್ರಿಕ ಚುನಾವಣೆಗಳುಆದಿವಾಸಿಗಳು೧೬೦೮ಬಯಲಾಟಕ್ರೈಸ್ತ ಧರ್ಮಶ್ರೀಲಂಕಾ ಕ್ರಿಕೆಟ್ ತಂಡಕರ್ನಾಟಕದ ವಿಧಾನ ಸಭಾ ಕ್ಷೇತ್ರಗಳು🡆 More