ಡಿ.ಕೆ.ತಾರದೇವಿ ಸಿದ್ಧಾರ್ಥ (ಜನನ 1953) ಭಾರತದ ಕರ್ನಾಟಕದ ರಾಜಕಾರಣಿ.
Taradevi Siddatha | |
---|---|
Born | 1953 |
ಮೂಡಿಗೆರೆಯ ಕೃಷ್ಣಪ್ಪ ಗೌಡರ ಪುತ್ರಿ, ತಾರದೇವಿ 26 ಡಿಸೆಂಬರ್ 1953 ರಂದು ಜನಿಸಿದರು. ಅವರು ಬ್ಯಾಚುಲರ್ ಆಫ್ ಆರ್ಟ್ಸ್ ಪದವಿ ಪಡೆದಿದ್ದಾರೆ.
1978 ರಲ್ಲಿ ತಾರದೇವಿಯನ್ನು ಮೂಡಿಗರೆ ತಾಲ್ಲೂಕು ಅಭಿವೃದ್ಧಿ ಮಂಡಳಿಯ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು ಮತ್ತು ಪಟ್ಟಣದ ಪುರಸಭೆಯ ಮುಖ್ಯಸ್ಥರಾದರು. ಇಂದಿರಾ ಗಾಂಧಿ ಚಿಕ್ಕಮಗಳೂರಿನಿಂದ ಚುನಾವಣೆಗೆ ಸ್ಪರ್ಧಿಸಿದಾಗ, ಅವರು ತಾರಾದೇವಿ ಮನೆಯಲ್ಲಿ ಉಳಿದರು. ನಂತರ,ತಾರಾದೇವಿ ಅವರು 1984 ರವರೆಗೆ ಕರ್ನಾಟಕ ವಿಧಾನಸಭೆಯ ಸದಸ್ಯರಾಗಿ ಸೇವೆ ಸಲ್ಲಿಸಿದರು, 1984 ರ ಭಾರತೀಯ ಸಾರ್ವತ್ರಿಕ ಚುನಾವಣೆಯ ಸಂದರ್ಭದಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ (ಐಎನ್ಸಿ) ಅವರನ್ನು ಚಿಕ್ಕಮಗಳೂರಿನಲ್ಲಿ ಕಣಕ್ಕಿಳಿಸಿತು. 8 ನೇ ಲೋಕಸಭೆಯಲ್ಲಿ ಮೊದಲ ಅವಧಿ ಮುಗಿದ ನಂತರ 1990 ರಲ್ಲಿ ರಾಜ್ಯಸಭೆಗೆ ಆಯ್ಕೆಯಾದರು. ಮುಂದಿನ ವರ್ಷ, ತಾರಾದೇವಿ 1991 ರ ಭಾರತೀಯ ಸಾರ್ವತ್ರಿಕ ಚುನಾವಣೆಯಲ್ಲಿ ಸ್ಪರ್ಧಿಸಿ ಪಿ.ವಿ.ನರಸಿಂಹ ರಾವ್ ಅವರ ಹೊಸದಾಗಿ ರೂಪುಗೊಂಡ ಸಂಪುಟದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ರಾಜ್ಯ ಸಚಿವರಾದರು.
ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಜಂಟಿ ಕಾರ್ಯದರ್ಶಿ ಸೇರಿದಂತೆ ತಾರದೇವಿ ಐಎನ್ಸಿ ಆಡಳಿತದೊಳಗೆ ಪ್ರಮುಖ ಹುದ್ದೆಗಳನ್ನು ಅಲಂಕರಿಸಿದ್ದಾರೆ. ಅಲ್ಪಾವಧಿಗೆ ಅವರು ಭಾರತೀಯ ಜನತಾ ಪಕ್ಷದ ಸದಸ್ಯರಾಗಿದ್ದರು.
ತಾರದೇವಿ ಕರ್ನಾಟಕದ ಐಎನ್ಸಿಯ ಪ್ರಮುಖ ಸದಸ್ಯ ಸಿದ್ಧಾರ್ಥ ರೆಡ್ಡಿ ಅವರನ್ನು ವಿವಾಹವಾದರು.
This article uses material from the Wikipedia ಕನ್ನಡ article ತಾರಾದೇವಿ ಸಿದ್ಧಾರ್ಥ, which is released under the Creative Commons Attribution-ShareAlike 3.0 license ("CC BY-SA 3.0"); additional terms may apply (view authors). ವಿಶೇಷವಾಗಿ ಟಿಪ್ಪಣಿ ಮಾಡದಿದ್ದ ಹೊರತು ಪಠ್ಯ "CC BY-SA 4.0" ರಡಿ ಲಭ್ಯವಿದೆ. Images, videos and audio are available under their respective licenses.
®Wikipedia is a registered trademark of the Wiki Foundation, Inc. Wiki ಕನ್ನಡ (DUHOCTRUNGQUOC.VN) is an independent company and has no affiliation with Wiki Foundation.