ಭಾಸ್ಕರ ಆನಂದ ಸಾಲೆತೊರೆ ಇವರು ಕರ್ನಾಟಕದ ಪ್ರಸಿದ್ಧ ಪ್ರಾಚ್ಯ ಸಂಶೋಧಕರು.
ಇವರ ಜನನ ೧೯೦೨ನೆಯ ಇಸವಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆಯಿತು.
ಆರಂಭದ ಶಿಕ್ಷಣವನ್ನು ಮಂಗಳೂರಿನಲ್ಲಿ ಪೂರೈಸಿದ ಸಾಲೆತೊರೆಯವರು ಮದ್ರಾಸ್ ವಿಶ್ವವಿದ್ಯಾಲಯದಿಂದ ಬಿ.ಟಿ ಪದವಿಯನ್ನು ಹಾಗೂ ಮುಂಬಯಿ ವಿಶ್ವವಿದ್ಯಾಲಯದಿಂದ ಎಂ.ಎ ಪದವಿಯನ್ನು ಪಡೆದರು. ೧೯೩೧ರಲ್ಲಿ ಲಂಡನ್ ವಿಶ್ವವಿದ್ಯಾಲಯದಲ್ಲಿ ಇತಿಹಾಸದ ಅಧ್ಯಯನವನ್ನು ಮಾಡಿದರು. ೧೯೩೩ರಲ್ಲಿ ಜರ್ಮನಿಯ ಗೈಸೆನ್ ವಿಶ್ವವಿದ್ಯಾಲಯದಲ್ಲಿ ರಾಜ್ಯಶಾಸ್ತ್ರವನ್ನು ಅಭ್ಯಸಿಸಿದರು.
ವಿಜಯನಗರ ಸಾಮ್ರಾಜ್ಯದ ಸಾಮಾಜಿಕ ಹಾಗೂ ಸಾಂಸ್ಕೃತಿಕ ಜೀವನ ಇದುಲಂಡನ್ ವಿಶ್ವವಿದ್ಯಾಲಯದಲ್ಲಿ ತಮ್ಮ ಪಿ.ಎಚ್.ಡಿ ಪದವಿಗಾಗಿ ಸಾಲೆತೊರೆಯವರು ಬರೆದ ಮಹಾಪ್ರಬಂಧ. ವಿಜಯನಗರ ಸ್ಥಾಪಕರಾದ ಸಂಗಮ ವಂಶದವರ ಮೂಲವನ್ನು ಈ ಹೊತ್ತಿಗೆಯಲ್ಲಿ ಸಂಶೋಧಿಸಲಾಗಿದೆ; ಹಾಗೂ ವಿಜಯನಗರ ಸಾಮ್ರಾಜ್ಯ ನಿಸ್ಸಂಶಯವಾಗಿಯೂ ಕನ್ನಡ ಸಾಮ್ರಾಜ್ಯವೆಂದು ಪ್ರಮಾಣಪೂರ್ವಕವಾಗಿ ಸಾಧಿಸಿ ತೋರಿಸಲಾಗಿದೆ.
ಭಾಸ್ಕರ ಆನಂದ ಸಾಲೆತೊರೆಯವರು ೧೯೬೩ರಲ್ಲಿ ನಿಧನರಾದರು.
This article uses material from the Wikipedia ಕನ್ನಡ article ಭಾಸ್ಕರ ಅನಂದ ಸಾಲೆತ್ತೂರು, which is released under the Creative Commons Attribution-ShareAlike 3.0 license ("CC BY-SA 3.0"); additional terms may apply (view authors). ವಿಶೇಷವಾಗಿ ಟಿಪ್ಪಣಿ ಮಾಡದಿದ್ದ ಹೊರತು ಪಠ್ಯ "CC BY-SA 4.0" ರಡಿ ಲಭ್ಯವಿದೆ. Images, videos and audio are available under their respective licenses.
®Wikipedia is a registered trademark of the Wiki Foundation, Inc. Wiki ಕನ್ನಡ (DUHOCTRUNGQUOC.VN) is an independent company and has no affiliation with Wiki Foundation.