ತಲ್ಲೂರ ಗ್ರಾಮವು ಕರ್ನಾಟಕ ರಾಜ್ಯದ ಉಡುಪಿ ಜಿಲ್ಲೆಯ ಕುಂದಾಪುರ ತಾಲ್ಲೂಕಿನಲ್ಲಿದೆ.
2011 ರ ಜನಗಣತಿಯ ಪ್ರಕಾರ ಇದು 3,801 ಜನಸಂಖ್ಯೆಯನ್ನು ಹೊಂದಿದೆ. ಇದು ಕುಂದಾಪುರ ಪಟ್ಟಣದಿಂದ ಮೂರು ಕಿಲೋಮೀಟರ್ ಗಿಂತ ಕಡಿಮೆ ದೂರದಲ್ಲಿದೆ ಮತ್ತು ರಾಷ್ಟ್ರೀಯ ಹೆದ್ದಾರಿ 66 ಕ್ಕೆ ಹೊಂದಿಕೊಂಡಿದೆ.
ತಲ್ಲೂರು | |
---|---|
ಗ್ರಾಮ | |
ದೇಶ | ಭಾರತ |
ರಾಜ್ಯ | ಕರ್ನಾಟಕ |
ಜಿಲ್ಲೆ | ಉಡುಪಿ |
ಸಮಯ ವಲಯ | ಯುಟಿಸಿ+5:30 (ಐ ಎಸ್ ಟಿ) |
ವಾಹನ ನೋಂದಣಿ | KA-20 (ಕೆಎ 20) |
ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಮತ್ತು ಶ್ರೀ ಕುಂತಿಅಮ್ಮ ದೇವಸ್ಥಾನಗಳು ಈ ಗ್ರಾಮದಲ್ಲಿರುವ ಎರಡು ಪ್ರಮುಖ ದೇವಾಲಯಗಳಾಗಿವೆ. ಇವೆರಡೂ ಐನೂರು ವರ್ಷಗಳಿಗಿಂತಲೂ ಹೆಚ್ಚು ಕಾಲದಿಂದ ಆಯಾ ತಾಣಗಳಲ್ಲಿವೆ. ಈ ಗ್ರಾಮದಲ್ಲಿ ಸೇಂಟ್ ಫ್ರಾನ್ಸಿಸ್ ಅಸ್ಸಿಸಿ ಚರ್ಚ್ ಎಂಬ ಕ್ಯಾಥೊಲಿಕ್ ಚರ್ಚ್ ಕೂಡ ಇದೆ.
ಕೊಲ್ಲೂರು ನದಿಯು ಪಂಚಗಂಗಾವಳಿ ನದಿಗೆ ಹರಿಯುವ ಮೊದಲು ಗ್ರಾಮದ ಉತ್ತರ ಭಾಗದಲ್ಲಿ ಹರಿಯುತ್ತದೆ. ಗ್ರಾಮದ ಪೂರ್ವದಲ್ಲಿ ಉಪ್ಪಿನಕುದ್ರು ದ್ವೀಪವಿದೆ, ಇದು ಗ್ರಾಮಕ್ಕೆ ಸೇತುವೆಯ ಮೂಲಕ ಸಂಪರ್ಕ ಹೊಂದಿದೆ.
ಗ್ರಾಮ ಮತ್ತು ಅದರ ಸುತ್ತಮುತ್ತಲಿನ ಕುಗ್ರಾಮಗಳನ್ನು ತಲ್ಲೂರು ಗ್ರಾಮ ಪಂಚಾಯತ್ ನಿರ್ವಹಿಸುತ್ತದೆ, ಇದು ಪ್ರಸ್ತುತ 18 ಚುನಾಯಿತ ಸದಸ್ಯರನ್ನು ಹೊಂದಿದೆ. 2022ರಲ್ಲಿ ವಲಸೆ, ದಿನಗೂಲಿ ಕಾರ್ಮಿಕ ಶ್ರೀಮತಿ ಭೀಮವ್ವ ಪಂಚಾಯತ್ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು.
ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆ 108 ವರ್ಷಗಳಿಗಿಂತಲೂ ಹಳೆಯದಾಗಿದ್ದು, ಇದನ್ನು ಬ್ರಿಟಿಷ್ ರಾಜ್ ಸಮಯದಲ್ಲಿ ನಿರ್ಮಿಸಲಾಯಿತು.
This article uses material from the Wikipedia ಕನ್ನಡ article ತಲ್ಲೂರು, which is released under the Creative Commons Attribution-ShareAlike 3.0 license ("CC BY-SA 3.0"); additional terms may apply (view authors). ವಿಶೇಷವಾಗಿ ಟಿಪ್ಪಣಿ ಮಾಡದಿದ್ದ ಹೊರತು ಪಠ್ಯ "CC BY-SA 4.0" ರಡಿ ಲಭ್ಯವಿದೆ. Images, videos and audio are available under their respective licenses.
®Wikipedia is a registered trademark of the Wiki Foundation, Inc. Wiki ಕನ್ನಡ (DUHOCTRUNGQUOC.VN) is an independent company and has no affiliation with Wiki Foundation.