ಎನ್.ಲಕ್ಷ್ಮೀನಾರಾಯಣ್

ಎನ್.ಲಕ್ಷ್ಮೀನಾರಾಯಣ್ (ಎನ್ನೆಲ್ )ಕನ್ನಡ ಚಿತ್ರರಂಗದ ಮೇರು ನಿರ್ದೇಶಕರಲ್ಲಿ ಒಬ್ಬರು.ಕನ್ನಡ ಚಿತ್ರರಂಗಕ್ಕೆ ಕಲಾತ್ಮಕತೆಯ ಸ್ಪರ್ಶ ಕೊಟ್ಟು,ಕನ್ನಡ ಚಿತ್ರರಂಗವನ್ನು ಅಂತಾರಾಷ್ಟ್ರೀಯ ಮಟ್ಟಕ್ಕೇರಿಸುವಲ್ಲಿ ಇವರ ಪಾಲು ದೊಡ್ಡದು.

೧೯೬೪ರಲ್ಲಿ ವಾದಿರಾಜ್ ನಿರ್ಮಾಣದ ನಾಂದಿ ಚಿತ್ರದ ಮೂಲಕ ಕನ್ನಡ ಚಿತ್ರಗಳ ನಿರ್ದೇಶನಕ್ಕೆ ಕಾಲಿಟ್ಟರು.

ಹಿನ್ನೆಲೆ

ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿ ಪ್ರತಿಭಾವಂತರ ಕುಟುಂಬದಲ್ಲಿ ಒಬ್ಬರಾಗಿ ಜನಿಸಿದ ಲಕ್ಷ್ಮೀನಾರಾಯಣ್‌ಗೆ ಬಾಲ್ಯದಿಂದಲೇ ಕಲೆಯ ಸೆಳೆತ ಹೆಚ್ಚು.ಹೀಗಾಗಿ ಚಿಕ್ಕಂದಿನಿಂದಲೇ ಛಾಯಾಗ್ರಹಣ, ಸಿನಿಮಾ ತಾಂತ್ರಿಕತೆಯನ್ನು ಅಭ್ಯಾಸ ಮಾಡಿದರು.

ಚಿತ್ರರಂಗ ಪ್ರವೇಶ

ಚಿತ್ರರಂಗದಲ್ಲಿದ್ದ ತಮ್ಮ ಸೋದರಮಾವ ಬಿ.ಆರ್.ಕೃಷ್ಣಮೂರ್ತಿಯವರ ಸಹಾಯಕರಾಗಿ ಚಿತ್ರರಂಗ ಪ್ರವೇಶಿಸಿದರು.ಇವರು ಸಹನಿರ್ದೇಶನ ಮಾಡಿದ ಮೊದಲ ಚಿತ್ರ ಶ್ರೀರಾಮ ಪೂಜ.ನಂತರ ಆರ್.ನಾಗೇಂದ್ರರಾಯರ ಸಹ ನಿರ್ದೇಶಕರಾಗಿ ದುಡಿದರು.ಕನ್ನಡ ಚಿತ್ರರಂಗಕ್ಕೆ ಪ್ರಯೋಗಶೀಲತೆಯನ್ನು ಅಳವಡಿಸಬೇಕೆಂಬ ಹಂಬಲದಿಂದ,'ಬ್ರಿಟಿಷ್ ಫಿಲಂ ಇನ್‌ಸ್ಟಿಟ್ಯೂಟ್' ಸೇರಿ ತರಬೇತಿ ಪಡೆದರು.ಇವರ ನಿರ್ದೇಶನದ ಬ್ಲಿಸ್ ಎಂಬ ಮೂಕಿ ಚಿತ್ರ ಸ್ಯಾನ್‌ಫ್ರಾನ್ಸಿಸ್ಕೋದಲ್ಲಿ ಪ್ರದರ್ಶನ ಕಂಡಿತು.

ನಿರ್ದೇಶಿಸಿರುವ ಚಿತ್ರಗಳು

ಸಾಧನೆಗಳು

  • ನಾಂದಿ ಚಿತ್ರ ಲಂಡನ್‌ನಲ್ಲಿ ನಡೆದ "ಕಾಮನ್ವೆಲ್ತ್ ಚಲನಚಿತ್ರೋತ್ಸವ"ದಲ್ಲಿ ಪ್ರದರ್ಶಿತವಾಯಿತು.
  • ಉಯ್ಯಾಲೆ ಚಿತ್ರ ಫ್ರಾಂಕ್‌ಫರ್ಟ್‌ನಲ್ಲಿ ನಡೆದ "ಏಷ್ಯನ್ ಚಿತ್ರೋತ್ಸವ" ಹಾಗೂ ರಷ್ಯಾದಲ್ಲಿ ನಡೆದ "ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ"ದಲ್ಲಿ ಪ್ರದರ್ಶನ ಕಂಡಿತು.
  • ಮುಕ್ತಿ ಚಿತ್ರ ವೆನಿಸ್ ಚಿತ್ರೋತ್ಸವದಲ್ಲಿ ಪ್ರದರ್ಶಿತವಾಯಿತು.
  • ಬೆಟ್ಟದ ಹೂವು ಚಿತ್ರ ವಿದೇಶಗಳಲ್ಲಿ ಪ್ರದರ್ಶನಗೊಂಡಿದೆ.

ಪ್ರಶಸ್ತಿ/ಪುರಸ್ಕಾರಗಳು

  • ಅಬಚೂರಿನ ಪೋಸ್ಟಾಫೀಸು ಚಿತ್ರಕ್ಕೆ ಕೇಂದ್ರ ಹಾಗೂ ರಾಜ್ಯ ಸರಕಾರಗಳೆರಡರ ಪ್ರಶಸ್ತಿ ದೊರೆತಿದೆ.
  • ಬೆಟ್ಟದ ಹೂವು ಚಿತ್ರಕ್ಕೆ ರಾಷ್ಟ್ರಪತಿಗಳ ರಜತ ಪದಕ ದೊರೆತಿದೆ.
  • "ಎನ್ನೆಲ್ " ಅವರ ಉಯ್ಯಾಲೆ ಮತ್ತು ಮುಕ್ತಿ ಚಿತ್ರಗಳು ೧೯೬೯-೭೦ ರ ದ್ವಿತೀಯ ಅತ್ಯುತ್ತಮ ರಾಜ್ಯ ಚಲನಚಿತ್ರ ಪ್ರಶಶ್ತಿಯನ್ನು ಹಂಚಿಕೊಂಡವು.

ಒಬ್ಬ ನಿರ್ದೇಶಕನ ಎರಡು ಚಿತ್ರಗಳು ಒಂದೇ ಪ್ರಶಸ್ತಿಯನ್ನು ಹಂಚಿಕೊಂಡ ಅಪರೂಪದ ದಾಖಲೆ ಮತ್ತೆ ಪುನರಾವರ್ತನೆಯಾಗಲಿಲ್ಲ.

ಇತರ ಆಸಕ್ತಿಗಳು

ದೇಶ-ವಿದೇಶಗಳಲ್ಲಿನ ಚಲನಚಿತ್ರ ಕ್ಷೇತ್ರದ ಬೆಳವಣಿಗೆಯನ್ನು ಕುತೂಹಲದಿಂದ ಗಮನಿಸುತ್ತಿದ್ದರು.ಚಲನಚಿತ್ರ ಮಾಧ್ಯಮದಲ್ಲಿ ಕ್ಲಾಸಿಕ್ ಅಂಶಗಳನ್ನು ಗುರುತಿಸಿ,ಅದರ ಬೆಳವಣಿಗೆ ಮತ್ತು ಸಂವಹನಕ್ಕೆ ನಿರಂತರ ಶ್ರಮಿಸುತ್ತಿದ್ದರು."ಫಿಲಂ ಸೊಸೈಟಿ" ಆಂದೋಲನವನ್ನು ಕರ್ನಾಟಕದಲ್ಲಿ ಶುರು ಮಾಡಿದರು.ಕರ್ನಾಟಕದಲ್ಲಿ ಚಲನಚಿತ್ರೋತ್ಸವಗಳು ಪ್ರಾರಂಭವಾಗಲು ಕಾರಣಕರ್ತರಾದರು.ನಿರ್ದೇಶಕನ ವಿದೇಶಯಾತ್ರೆ ಅವರ ಪ್ರಮುಖ ಕೃತಿ.ಫೆಬ್ರುವರಿ ೧೬, ೧೯೯೧ರಲ್ಲಿ ಅಕಾಲಿಕವಾಗಿ ನಿಧನರಾದರು.

Tags:

ಎನ್.ಲಕ್ಷ್ಮೀನಾರಾಯಣ್ ಹಿನ್ನೆಲೆಎನ್.ಲಕ್ಷ್ಮೀನಾರಾಯಣ್ ಚಿತ್ರರಂಗ ಪ್ರವೇಶಎನ್.ಲಕ್ಷ್ಮೀನಾರಾಯಣ್ ನಿರ್ದೇಶಿಸಿರುವ ಚಿತ್ರಗಳುಎನ್.ಲಕ್ಷ್ಮೀನಾರಾಯಣ್ ಸಾಧನೆಗಳುಎನ್.ಲಕ್ಷ್ಮೀನಾರಾಯಣ್ ಪ್ರಶಸ್ತಿಪುರಸ್ಕಾರಗಳುಎನ್.ಲಕ್ಷ್ಮೀನಾರಾಯಣ್ ಇತರ ಆಸಕ್ತಿಗಳುಎನ್.ಲಕ್ಷ್ಮೀನಾರಾಯಣ್ಕನ್ನಡಕನ್ನಡ ಚಿತ್ರರಂಗನಾಂದಿವಾದಿರಾಜ್೧೯೬೪

🔥 Trending searches on Wiki ಕನ್ನಡ:

ಭೌಗೋಳಿಕ ಲಕ್ಷಣಗಳುದರ್ಶನ್ ತೂಗುದೀಪ್ಪರಮಾಣು ಸಂಖ್ಯೆಗರ್ಭಧಾರಣೆಊಳಿಗಮಾನ ಪದ್ಧತಿವಲ್ಲಭ್‌ಭಾಯಿ ಪಟೇಲ್ಭಾರತೀಯ ನದಿಗಳ ಪಟ್ಟಿಪಶ್ಚಿಮಬಂಗಾ ಬಾಂಗ್ಲಾ ಅಕಾಡೆಮಿಕಾಂತಾರ (ಚಲನಚಿತ್ರ)ಕನ್ನಡಅಂಡಮಾನ್ ಮತ್ತು ನಿಕೊಬಾರ್ ದ್ವೀಪಗಳುಸಸ್ಯ ಅಂಗಾಂಶಸಲಗ (ಚಲನಚಿತ್ರ)ಭಾರತದ ಜನಸಂಖ್ಯೆಯ ಬೆಳವಣಿಗೆಕನ್ನಡದಲ್ಲಿ ವಚನ ಸಾಹಿತ್ಯಕರ್ನಾಟಕ ಜನಪದ ನೃತ್ಯಕೈಗಾರಿಕೆಗಳ ಸ್ಥಾನೀಕರಣಆಯುರ್ವೇದಗೋಲ ಗುಮ್ಮಟಗುರುಲಿಂಗ ಕಾಪಸೆಪಕ್ಷಿಹೃದಯಕೆ. ಎಸ್. ನರಸಿಂಹಸ್ವಾಮಿದಿಕ್ಕುವಾಣಿಜ್ಯ ಪತ್ರಕನ್ನಡ ಛಂದಸ್ಸುಭಾಷೆಆಂಗ್‌ಕರ್ ವಾಟ್ಹಸ್ತ ಮೈಥುನನರೇಂದ್ರ ಮೋದಿಸಿಂಗಾಪುರಭಾರತ ಬಿಟ್ಟು ತೊಲಗಿ ಚಳುವಳಿಮಲ್ಲಿಕಾರ್ಜುನ ಜ್ಯೋತಿರ್ಲಿಂಗಮಾಧ್ಯಮಅ.ನ.ಕೃಷ್ಣರಾಯಶ್ರೀ ರಾಘವೇಂದ್ರ ಸ್ವಾಮಿಗಳುಕಲ್ಯಾಣ ಕರ್ನಾಟಕಸಮಾಜಶಾಸ್ತ್ರವರ್ಗೀಯ ವ್ಯಂಜನನದಿರಚಿತಾ ರಾಮ್ಉತ್ಪಾದನೆಹಸಿರುಮನೆ ಪರಿಣಾಮಭರತ-ಬಾಹುಬಲಿಅಡಿಕೆತ್ರಿಪದಿವೆಂಕಟೇಶ್ವರ ದೇವಸ್ಥಾನಸಂವತ್ಸರಗಳುಬುದ್ಧಪರಮಾಣುಗೋವಿಂದ III (ರಾಷ್ಟ್ರಕೂಟ)ಕರ್ನಾಟಕದ ಇತಿಹಾಸಯುಗಾದಿಗುಡುಗುಅರ್ಜುನವಾದಿರಾಜರುಮೂಲವ್ಯಾಧಿಆಸ್ಟ್ರೇಲಿಯನಾಗರಹೊಳೆ ರಾಷ್ಟ್ರೀಯ ಉದ್ಯಾನವನಪು. ತಿ. ನರಸಿಂಹಾಚಾರ್ಋತುರಾವಣರಂಗಭೂಮಿಭಾರತೀಯ ಭಾಷೆಗಳುಕರ್ನಾಟಕ ಲೋಕಾಯುಕ್ತಉಪನಯನಮಹಾಕಾವ್ಯಭಾರತೀಯ ಸಂವಿಧಾನದ ತಿದ್ದುಪಡಿಶಾಲೆಬಸವೇಶ್ವರಪ್ರಚ್ಛನ್ನ ಶಕ್ತಿಇಂಡಿಯಾನಾಅರಣ್ಯನಾಶಭಾರತದ ನದಿಗಳುಜ್ಯೋತಿಬಾ ಫುಲೆವಿಜಯನಗರ ಸಾಮ್ರಾಜ್ಯಪಾರ್ವತಿ🡆 More