ಆಲೂಗಡ್ಡೆ

ಆಲೂಗಡ್ಡೆಯು ಸೊಲ್ಯಾನೇಸೀ ಕುಟುಂಬದ ಬಹುವಾರ್ಷಿಕ ಸಲೇನಮ್ ಟ್ಯೂಬರೋಸಮ್‌ನ ಒಂದು ಪಿಷ್ಟವುಳ್ಳ, ಗೆಡ್ಡೆ ಬೆಳೆ.

ಆಲೂಗಡ್ಡೆ
ಆಲೂಗಡ್ಡೆ
ಆಲೂಗಡ್ಡೆ
Scientific classification
ಸಾಮ್ರಾಜ್ಯ:
plantae
(ಶ್ರೇಣಿಯಿಲ್ಲದ್ದು):
Asterids
ಗಣ:
ಸೋಲನೇಲ್ಸ್
ಕುಟುಂಬ:
ಸೊಲನೆಸಿಯೆ
ಕುಲ:
ಸೋಲನಮ್
ಪ್ರಜಾತಿ:
S. tuberosum
Binomial name
ಸೊಲನಮ್ ಟುಬೆರೋಸಮ್
L.

ಆಲೂಗಡ್ಡೆ ಶಬ್ದ ಆ ಸಸ್ಯವನ್ನೂ ನಿರ್ದೇಶಿಸಬಹುದು. ಆಂಡೀಸ್‌ನ ಪ್ರದೇಶದಲ್ಲಿ, ಕೆಲವು ಇತರ ನಿಕಟವಾಗಿ ಸಂಬಂಧಿತ ಸಾಗುವಳಿ ಮಾಡಲಾದ ಆಲೂಗಡ್ಡೆ ಜಾತಿಗಳಿವೆ. ಆಲೂಗಡ್ಡೆಗಳು, ಅಕ್ಕಿ, ಗೋಧಿ, ಮತ್ತು ಮೆಕ್ಕೆ ಜೋಳದ ನಂತರ, ವಿಶ್ವದ ನಾಲ್ಕನೇ ಅತಿ ದೊಡ್ಡ ಆಹಾರ ಬೆಳೆಯಾಗಿವೆ.

ಸಸ್ಯಮೂಲ-ಪರಿಚಯ

ಬಡವರಿಗೂ, ಬಳಲ್ಲಿದರಿಗೂ ಆಲೂಗಡ್ಡೆ ರುಚಿ ಅಂಟಿಕೊಂಡಿದೆ.ಆದ್ದರಿಂದ ಬಿ.ಜಿ.ಎಲ್.ಸ್ವಾಮಿಯವರು ಇದಕ್ಕೆ 'ಕಲ್ಪಕಂದ' ಎಂದು ಹೆಸರಿಸಿದ್ದಾರೆ. ಈ ಕಲ್ಪಕಂದವು ವಿದೇಶೀಯರ ದೈನಂದಿನ ಆಹಾರಗಳಲ್ಲಿ ಪ್ರಮುಖ ಸ್ಥಾನ ಪಡೆದಿದೆ. ಕರ್ನಾಟಕದ ಹಲವು ಪ್ರದೇಶಗಲ್ಲಿ ಬಟಾಟೆ ಎಂದು ಕರೆಯಲ್ಪಡುವ ಈ ಹೆಸರು ಮೂಲದ ಪೊಟಾಟೋದಿಂದಲೇ ಬಂದದ್ದು. ನಾವು ಅಕ್ಕಿಯನ್ನೂ, ಉತ್ತರ ಭಾರತೀಯರು ಗೋಧಿಯನ್ನು ಬಳಸುವಂತೆ, ಬೇಯಿಸಿದ, ಬಾಡಿಸಿದ, ಹುರಿದ ಆಲೂ ಪಾಶ್ಚಾತ್ಯರಿಗೆ ಅನ್ನದಂತೆ.

ಔಷಧೀಯ ಗುಣಗಳು

ನಾವು ಸಾಮಾನ್ಯವಾಗಿ ಆಲೂಗಡ್ಡೆಯನ್ನು ಆರೋಗ್ಯಕರ ಆಹಾರವೆಂದು ಪರಿಗಣಿಸುವುದಿಲ್ಲ, ಆದರೆ ಫೈಬರ್, ವಿಟಮಿನ್ ಸಿ ಮತ್ತು ಪೊಟ್ಯಾಸಿಯಮ್ ಸೇರಿದಂತೆ ಹಣ್ಣುಗಳು ಮತ್ತು ತರಕಾರಿಗಳಿಂದ ನೀವು ಪಡೆಯುವ ಅದೇ ಪೋಷಕಾಂಶಗಳಲ್ಲಿ ಆಲೂಗಡ್ಡೆ ನಿಜವಾಗಿಯೂ ಸಮೃದ್ಧವಾಗಿವೆ. ಪ್ರತಿರಕ್ಷಣಾ ವ್ಯವಸ್ಥೆಯನ್ನು ಹೆಚ್ಚಿಸಲು ಮತ್ತು ಕ್ಯಾನ್ಸರ್-ಉಂಟುಮಾಡುವ ಸ್ವತಂತ್ರ ರಾಡಿಕಲ್‌ಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ.

  • ಈ ಪೋಷಕಾಂಶಗಳಲ್ಲದೆ ಅವಶ್ಯಕ ಅಮೈನೋ ಆಮ್ಲಗಳು ಕೂಡ ಇರುವುದರಿಂದ ರುಚಿ ಹಿತರಕವಾಗಿದ್ದು ಎಲ್ಲಾ ತಿಂಡಿತಿನಿಸುಗಳಲ್ಲಿ ಬಳಸಬಹುದಾದ, ಸುಲಭವಾಗಿ ದೊರೆಯುವ, ಪ್ರಪಂಚದಾದ್ಯಂತ ಬಳಕೆಯಲ್ಲಿರುವ ಗೆಡ್ಡೆ ತರಕಾರಿ.
  • ಆಲೂಗಡ್ಡೆಯನ್ನು ೩ ಭಾಗಗಳಾಗಿ ವಿಂಗಡಿಸಬಹುದು.
  • ಮೊದಲನೆಯದು,ಮೇಲ್ಭಾಗದ ಸಿಪ್ಪೆ,ಎರಡನೆಯದು,ಸಿಪ್ಪೆಯ ಮೇಲ್ಬಾಗದಲ್ಲಿರುವ ತೆಳುವಾದ ಪೊರೆ,ಮೂರನೆಯದು, ಒಳ ಪಿಷ್ಟ ಭಾಗ.
  • ಮೊದಲನೆಯ ಭಾಗದಲ್ಲಿ ಖನಿಜಾಂಶಾ ಮತ್ತು ಜೀವಸತ್ವಗಳಿರುತ್ತವೆ.
  • ಎರಡನೆಯ ಪದರದಲ್ಲಿ ಸಸಾರಜನಕ ಮತ್ತು ವರ್ಣದ್ರವ್ಯ ಇರುತ್ತವೆ.
  • ಈ ವರ್ಣದ್ರವ್ಯ ನಾವು ಆಲೂಗಡ್ಡೆಯನ್ನು ಕತ್ತರಿಸಿದಾಗ ಗಾಳಿಯ ಸಂಪರ್ಕಕ್ಕೆ ಬಂದು ಆಲೂಗಡ್ಡೆಯ ಬಣ್ಣವನ್ನು ಬದಲಾಯಿಸುತ್ತದೆ.
  • ಮೂರನೇಯ ಭಾಗವು ಪಿಷ್ಟ ಮತ್ತು ನೀರಿನಿಂದ ಕೂಡಿರುತ್ತದೆ.
  • ಆದುದರಿಂದಲೇ ಆಲೂಗಡ್ಡೆಯ ಸಿಪ್ಪೆಯನ್ನು ತೆಗೆಯುದರಿಂದ ಅಥವಾ ತೊಳೆಯುದರಿಂದ ಪೋಷಕಾಂಶಗಳು ನಷ್ಟವಾಗಿ ಕೇವಲ ಪಿಷ್ಟ ಪದಾರ್ಥ ಮಾತ್ರ ಉಳಿಯುತ್ತದೆ.

ತಿಂಡಿಗಳು

  • ಆಲೂ ಪಾಯಸ:ಬೇಯಿಸಿದ ಆಲೂಗಡ್ಡೆಯನ್ನು ರುಬ್ಬಿ ಹಾಲಿಗೆ ಸೇರಿಸಿ ಕುದಿಸಿ, ರುಚಿಗೆ ತಕ್ಕಷ್ಟು ಸಕ್ಕರೆ ಸೇರಿಸಬೇಕು.ಹುರಿದ ಗೋಡಂಬಿ ಮತ್ತು ದ್ರಾಕ್ಷಿ ಸೇರಿಸಬಹುದು. ಹೆಚ್ಚಿನ ರುಚಿ ಬೇಕಾದರೆ ಹಾಲಿನೊಂದಿಗೆಖೋವಾ ಸೇರಿಸಿದರೆ ವಿಶೇಷ ರುಚಿ ಬರುತ್ತದೆ.
  • ಆಲೂ ಹಲ್ವ:ಆಲೂಗಡ್ಡೆಯನ್ನು ಶುಚಿಮಾಡಿ ಬೇಯಿಸಿ ಚೆನ್ನಾಗಿ ಮಸೆದು ಸಕ್ಕರೆ ಬೆರೆಸಿ ಬಾಣಲೆಯಲ್ಲಿ ಹಾಕಿ ಒಲೆಯ ಮೇಲಿಟ್ಟು ಮಗಚುತ್ತಾ ತುಪ್ಪ ಸೇರಿಸಿದರೆ ಒಳ್ಳೆಯ ವಾಸನೆ ಬಂದು ಪಾತ್ರೆ ಬಿಡುವಾಗ ತುಪ್ಪ ಸವರಿದ ತಟ್ಟೆಗೆ ಹರಡಿ ಇಡಬೇಕು.ಆರಿದ ಮೇಲೆ ಬೇಕಾದ ಆಕಾರಕ್ಕೆ ಕತ್ತರಿಸಿ ಉಪಯೋಗಿಸಬವುದು.

ತಳಿಗಳು

ಆಲೂಗಡ್ಡೆ 
ಆಲೂಗಡ್ಡೆ

ಆಲೂಗಡ್ಡೆ  ಆಲೂಗಡ್ಡೆ  ಆಲೂಗಡ್ಡೆ  ಇದು ಬಹುಬೇಗ ೯೦ ದಿನಗಳಲ್ಲಿ ಇಳುವರಿಗೆ ಬರುವ ಮತ್ತು ವಿವಿಧ ಹವಾಗುಣಗಳಿಗೆ ಹೊಂದಿಕೊಂಡು ಬೇಳೆಯುವ ಭಾರತದ ಉತ್ತಮ ತಳಿ.ಚಪ್ಪಟೆಯದ ಗೆಡ್ಡೆಗಳು ವಿಶಾಲವಾದ, ನಯವಾದ ಮೇಲ್ಮೈ ಹೊಂದಿರುತ್ತವೆ.

ಬೀಜ ಮತ್ತು ಬಿತ್ತನೆ

ಈ ಬೆಳೆಯನ್ನು ಗೆಡ್ಡೆಗಳ ಮುಖಾಂತರ ಸಸ್ಯಾಭಿವ್ರದ್ಧಿ ಮಾಡಲಾಗುವುದು. ಈ ಉದೇಶಕ್ಕೆ ಇಡೀ ಗೆಡ್ಡೆ ಅಥವಾ ಗೆಡ್ಡೆಯ ಚೂರುಗಳನ್ನು ಬೀಜವಾಗಿ ಬಳಸುತ್ತಾರೆ. ಆಲೂಗಡ್ಡೆಗೆ ಮಾರಕವಾದ ರೋಗಗಳು ಗೆಡ್ಡೆಗಳ ಮುಖಾಂತರ ಹರಡುವುದರಿಂದ ರೋಗರಹಿತ ಗೆಡ್ಡೆಗಳನ್ನು ಮಾತ್ರ ಬಳಸಬೇಕು.

ನೀರಾವರಿ ಮತ್ತು ಅಂತರಬೇಸಾಯ

ನಾಟಿಮಾಡಿದ ಕೂಡಲೆ ತೆಳು ನೀರಾವರಿ ಒದಗಿಸಬೇಕು.ನಂತರದ ನೀರಾವರಿಗಳನ್ನು ಮಣ್ಣು ಮತ್ತು ಹವಾಗುಣಗಳಿಗನುಗುಣವಾಗಿ ೫-೭ ದಿನಗಳ ಅಂತರದಲ್ಲಿ ಕೊಡಬೇಕು ಮತ್ತು ಕಳೆ ಬರದಂತೆ ಎಚ್ಚರ ವಹಿಸಬೇಕು.

ಉಲ್ಲೇಖ

Tags:

ಆಲೂಗಡ್ಡೆ ಸಸ್ಯಮೂಲ-ಪರಿಚಯಆಲೂಗಡ್ಡೆ ಔಷಧೀಯ ಗುಣಗಳುಆಲೂಗಡ್ಡೆ ತಿಂಡಿಗಳುಆಲೂಗಡ್ಡೆ ತಳಿಗಳುಆಲೂಗಡ್ಡೆ ಬೀಜ ಮತ್ತು ಬಿತ್ತನೆಆಲೂಗಡ್ಡೆ ನೀರಾವರಿ ಮತ್ತು ಅಂತರಬೇಸಾಯಆಲೂಗಡ್ಡೆ ಉಲ್ಲೇಖಆಲೂಗಡ್ಡೆಅಕ್ಕಿಗೆಡ್ಡೆಗೋಧಿಪಿಷ್ಟಬೆಳೆಮೆಕ್ಕೆ ಜೋಳ

🔥 Trending searches on Wiki ಕನ್ನಡ:

ಯೋಗಜನತಾ ದಳಗೊರೂರು ರಾಮಸ್ವಾಮಿ ಅಯ್ಯಂಗಾರ್ತೆಂಗಿನಕಾಯಿ ಮರಗುಣ ಸಂಧಿರಾಜ್‌ಕುಮಾರ್ಮೂಢನಂಬಿಕೆಗಳುದಿಕ್ಸೂಚಿಭೌಗೋಳಿಕ ಲಕ್ಷಣಗಳುಸಸ್ಯ ಅಂಗಾಂಶಕೆ. ಎಸ್. ನಿಸಾರ್ ಅಹಮದ್ವಿನಾಯಕ ದಾಮೋದರ ಸಾವರ್ಕರ್ಜಾಗತಿಕ ತಾಪಮಾನ ಏರಿಕೆಕರ್ನಾಟಕದ ಹಬ್ಬಗಳುಭಾರತದ ಆರ್ಥಿಕ ವ್ಯವಸ್ಥೆಚದುರಂಗದ ನಿಯಮಗಳುಕರ್ನಾಟಕದ ವಾಸ್ತುಶಿಲ್ಪರಂಗಭೂಮಿಜಲಿಯನ್‍ವಾಲಾ ಬಾಗ್ ಹತ್ಯಾಕಾಂಡಭಾರತೀಯ ಭಾಷೆಗಳುಗೋವಿನ ಹಾಡುಕಾಶ್ಮೀರದ ಬಿಕ್ಕಟ್ಟುಕಾದಂಬರಿಕರ್ನಾಟಕ ಹೈ ಕೋರ್ಟ್ರಾಮಾಚಾರಿ (ಕನ್ನಡ ಧಾರಾವಾಹಿ)ಬೇಸಿಗೆಮಾನಸಿಕ ಆರೋಗ್ಯಬಾಲಕಾರ್ಮಿಕಸೋನಾರ್ಅಕ್ಬರ್ಗೌತಮಿಪುತ್ರ ಶಾತಕರ್ಣಿಸಿ. ಎನ್. ಆರ್. ರಾವ್ತೂಕಮುದ್ದಣಕರ್ಣಮುಮ್ಮಡಿ ಕೃಷ್ಣರಾಜ ಒಡೆಯರುಮಣಿಪುರಆಸ್ಪತ್ರೆಲಿಂಗಾಯತ ಧರ್ಮಟೊಮೇಟೊಭಾರತದ ಚುನಾವಣಾ ಆಯೋಗಸಿದ್ದಲಿಂಗಯ್ಯ (ಕವಿ)ಟಿಪ್ಪು ಸುಲ್ತಾನ್ಪೆರಿಯಾರ್ ರಾಮಸ್ವಾಮಿನೈಸರ್ಗಿಕ ಸಂಪನ್ಮೂಲಕನ್ನಡ ರಂಗಭೂಮಿಭಾರತದ ರಾಷ್ಟ್ರೀಯ ಚಿನ್ಹೆಗಳುಸಾವಯವ ಬೇಸಾಯಮಾಹಿತಿ ತಂತ್ರಜ್ಞಾನರಕ್ತಭಾರತದ ಸ್ವಾತಂತ್ರ್ಯ ಚಳುವಳಿಮದುವೆಬೆಳಗಾವಿದಿಯಾ (ಚಲನಚಿತ್ರ)ಚಿಕ್ಕಮಗಳೂರುಶುಕ್ರಸವರ್ಣದೀರ್ಘ ಸಂಧಿಕನ್ನಡ ವ್ಯಾಕರಣಎಚ್.ಎಸ್.ಶಿವಪ್ರಕಾಶ್ಆರೋಗ್ಯಛಂದಸ್ಸುಇಂಟೆಲ್ಭತ್ತರಾಷ್ಟ್ರೀಯತೆಶಾಂತಕವಿಕರ್ನಾಟಕದಲ್ಲಿ ಪಂಚಾಯತ್ ರಾಜ್ಪ್ರವಾಸೋದ್ಯಮತೆಲುಗುಭಾಗ್ಯಲಕ್ಷ್ಮೀ (ಕನ್ನಡ ಧಾರಾವಾಹಿ)ಕೃಷ್ಣದೇವರಾಯಕರ್ನಾಟಕ ವಿಧಾನ ಸಭೆಕುರಿಸಮಾಜಶಾಸ್ತ್ರಕರ್ನಾಟಕದ ನದಿಗಳುಕನ್ನಡ ಪತ್ರಿಕೆಗಳು🡆 More