ಸಾ.ಶಿ.ಮರುಳಯ್ಯ

ಸಾ.ಶಿ.

ಮರುಳಯ್ಯನವರು (28-01-1931 / 05-02-2016) ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ ತಾಲೂಕು ಸಾಸಲು ಗ್ರಾಮಲ್ಲಿ 11 ರಲ್ಲಿ ಜನಿಸಿದರು. ತಂದೆ ಶಿದ್ರಯ್ಯ, ತಾಯಿ ಸಿದ್ದಮ್ಮ.ಪ್ರಾಥಮಿಕ ವಿದ್ಯಾಭ್ಯಸ ಸಾಸಲು ಗ್ರಾಮದಲ್ಲಿ. ಕಾಲೇಜು ಕಲಿತಿದ್ದು ಚಿತ್ರದುರ್ಗದಲ್ಲಿ. ಇಂಟರ್‌ಮೀಡಿಯಟ್‌ ಮುಗಿಸಿ ಮ್ಯಾಂಗನೀಸ್ ಗಣಿಯ ಕಂಟ್ರಾಕ್ಟರ್ ಬಳಿ ಕೆಲಕಾಲ ಗುಮಾಸ್ತರಾಗಿ ಕೆಲಸ ಮಾಡಿದರು.ಕೂಡಿಟ್ಟ ಹಣದಿಂದ ಸ್ನಾತಕೋತ್ತರ ಪದವಿ ಪಡೆಯಲು ಮೈಸೂರಿಗೆ ಬಂದ ಸಾ.ಶಿ.ಮರುಳಯ್ಯ ಬಿ.ಎ ಆನರ್ಸ್‌ನಲ್ಲಿ ಡಿ.ಎಲ್.ಎನ್, ತ.ಸು.ಶಮರಾಯ, ಎಸ್.ವಿ.ಪರಮೇಶ್ವರ ಭಟ್ಟ, ಎಸ್.ವಿ.ರಂಗಣ್ಣ, ಕುವೆಂಪು, ದೇಜಗೌ ರಂಥ ವಿದ್ವಾಂಸರ ಮಾರ್ಗದರ್ಶನ ದೊರೆಯಿತು. ಎಂ.ಎ. ಓದಲು ಅಡಚಣೆಯಾಗಿ ಮತ್ತೆ ಉದ್ಯೋಗಕ್ಕೆ ಸೇರಿದರು. ಚಾಮರಾಜನಗರ ಕಾಲೇಜಿನ ಅರೆಕಾಲಿಕ ಶಿಕ್ಷಕರಾಗಿ ಕೆಲ ಕಾಲ ಕಾರ್ಯನಿರ್ವಹಿಸಿದರು. ನಂತರ ಇವರು 1956 ರಲ್ಲಿ ಮೈಸೂರು ವಿಶ್ವವಿದ್ಯಾನಿಲಯದಿಂದ ಕನ್ನಡ ಎಂ.ಎ. ಪದವಿಯನ್ನು 1971 ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯದಿಂದ 'ಕೆಳದಿಯ ಅರಸರು ಮತ್ತು ಕನ್ನಡ ಸಾಹಿತ್ಯ' ಕುರಿತ ಮಹಾ ಪ್ರಬಂಧಕ್ಕೆ ಪಿ.ಎಚ್.ಡಿ. ಪದವಿಯನ್ನೂ ಪಡೆದರು.ಪ್ರಾಥಮಿಕ ವಿದ್ಯಾಭ್ಯಾಸ ಸಾಸಲು ಗ್ರಾಮದಲ್ಲಿ. ಕಾಲೇಜು ಕಲಿತಿದ್ದು ಚಿತ್ರದುರ್ಗದಲ್ಲಿ. ಇಂಟರ್‌ಮೀಡಿಯಟ್‌ ಮುಗಿಸಿ ಮ್ಯಾಂಗನೀಸ್ ಗಣಿಯ ಕಂಟ್ರಾಕ್ಟರ್ ಬಳಿ ಕೆಲಕಾಲ ಗುಮಾಸ್ತರಾಗಿ ಕೆಲಸ ಮಾಡಿದರು.ಕೂಡಿಟ್ಟ ಹಣದಿಂದ ಸ್ನಾತಕೋತ್ತರ ಪದವಿ ಪಡೆಯಲು ಮೈಸೂರಿಗೆ ಬಂದ ಸಾ.ಶಿ.ಮ ಅವರಿಗೆ ಬಿ.ಎ ಆನರ್ಸ್‌ನಲ್ಲಿ ಡಿ.ಎಲ್.ಎನ್, ತ.ಸು.ಶಾಮರಾಯ, ಎಸ್.ವಿ.ಪರಮೇಶ್ವರ ಭಟ್ಟ, ಎಸ್.ವಿ.ರಂಗಣ್ಣ, ಕುವೆಂಪು, ದೇಜಗೌ ರಂಥ ವಿದ್ವಾಂಸರ ಮಾರ್ಗದರ್ಶನ ದೊರೆಯಿತು. ಎಂ.ಎ. ಓದಲು ಅಡಚಣೆಯಾಗಿ ಮತ್ತೆ ಉದ್ಯೋಗಕ್ಕೆ ಸೇರಿದರು. ಚಾಮರಾಜನಗರ ಕಾಲೇಜಿನ ಅರೆಕಾಲಿಕ ಶಿಕ್ಷಕರಾಗಿ ಕೆಲ ಕಾಲ ಕಾರ್ಯನಿರ್ವಹಿಸಿದರು. ನಂತರ ಇವರು 1956 ರಲ್ಲಿ ಮೈಸೂರು ವಿಶ್ವವಿದ್ಯಾನಿಲಯದಿಂದ ಕನ್ನಡ ಎಂ.ಎ. ಪದವಿಯನ್ನು 1971 ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯದಿಂದ 'ಕೆಳದಿಯ ಅರಸರು ಮತ್ತು ಕನ್ನಡ ಸಾಹಿತ್ಯ' ಕುರಿತ ಮಹಾ ಪ್ರಬಂಧಕ್ಕೆ ಪಿ.ಎಚ್.ಡಿ. ಪದವಿಯನ್ನೂ ಪಡೆದರುಅವರು ಎಂ.ಎ ಪೂರ್ಣಗೊಳಿಸಿ ತುಮಕೂರು, ದಾವಣಗೆರೆ, ಚಿತ್ರದುರ್ಗ, ಶಿವಮೊಗ್ಗ, ಚಾಮರಾಜನಗರ, ಚನ್ನಪಟ್ಟಣ, ಮಂಗಳೂರು, ಬೆಂಗಳೂರುಗಳ ಕಾಲೇಜುಗಳಲ್ಲಿ ಅಧ್ಯಾಪಕರಾಗಿ,ಬೋಧನಾ ವೃತ್ತಿ ಮುಂದುವರಿಸಿದರು. ಪ್ರಾಂಶುಪಾಲರಾಗಿ, ಪ್ರವಾಚಕರಾಗಿ,ಪ್ರಾಧ್ಯಾಪಕರಾಗಿ,ಮೂವತ್ತು ವರ್ಷಗಳ ವಿಷಯ ವೈವಿಧ್ಯಮಯವಾ ರೂಪಕಗಳನ್ನು ರಚಿಸಿದ್ದಾರೆ ಕನ್ನಡದಲ್ಲಿ ವಿಶಿಷ್ಟ ಪರಂಪರೆಯನ್ನು ಹುಟ್ಟಿಹಾಕಿದರು.

ಜನನ

ಸಾ.ಶಿ. ಮರುಳಯ್ಯನವರು (28-01-1931 / 05-02-2016) ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ ತಾಲೂಕು ಸಾಸಲು ಗ್ರಾಮದಲ್ಲಿ 1931ರಲ್ಲಿ ಜನಿಸಿದರು. ತಂದೆ ಶಿವರುದ್ರಯ್ಯ, ತಾಯಿ ಸಿದ್ದಮ್ಮ.

ಶಿಕ್ಷಣ

ಪ್ರಾಥಮಿಕ ವಿದ್ಯಾಭ್ಯಾಸ ಸಾಸಲು ಗ್ರಾಮದಲ್ಲಿ. ಕಾಲೇಜು ಕಲಿತಿದ್ದು ಚಿತ್ರದುರ್ಗದಲ್ಲಿ. ಇಂಟರ್‌ಮೀಡಿಯಟ್‌ ಮುಗಿಸಿ ಮ್ಯಾಂಗನೀಸ್ ಗಣಿಯ ಕಂಟ್ರಾಕ್ಟರ್ ಬಳಿ ಕೆಲಕಾಲ ಗುಮಾಸ್ತರಾಗಿ ಕೆಲಸ ಮಾಡಿದರು.ಕೂಡಿಟ್ಟ ಹಣದಿಂದ ಸ್ನಾತಕೋತ್ತರ ಪದವಿ ಪಡೆಯಲು ಮೈಸೂರಿಗೆ ಬಂದ ಸಾ.ಶಿ.ಮ ಅವರಿಗೆ ಬಿ.ಎ ಆನರ್ಸ್‌ನಲ್ಲಿ ಡಿ.ಎಲ್.ಎನ್, ತ.ಸು.ಶಾಮರಾಯ, ಎಸ್.ವಿ.ಪರಮೇಶ್ವರ ಭಟ್ಟ, ಎಸ್.ವಿ.ರಂಗಣ್ಣ, ಕುವೆಂಪು, ದೇಜಗೌ ರಂಥ ವಿದ್ವಾಂಸರ ಮಾರ್ಗದರ್ಶನ ದೊರೆಯಿತು. ಎಂ.ಎ. ಓದಲು ಅಡಚಣೆಯಾಗಿ ಮತ್ತೆ ಉದ್ಯೋಗಕ್ಕೆ ಸೇರಿದರು. ಚಾಮರಾಜನಗರ ಕಾಲೇಜಿನ ಅರೆಕಾಲಿಕ ಶಿಕ್ಷಕರಾಗಿ ಕೆಲ ಕಾಲ ಕಾರ್ಯನಿರ್ವಹಿಸಿದರು. ನಂತರ ಇವರು 1956 ರಲ್ಲಿ ಮೈಸೂರು ವಿಶ್ವವಿದ್ಯಾನಿಲಯದಿಂದ ಕನ್ನಡ ಎಂ.ಎ. ಪದವಿಯನ್ನು 1971 ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯದಿಂದ 'ಕೆಳದಿಯ ಅರಸರು ಮತ್ತು ಕನ್ನಡ ಸಾಹಿತ್ಯ' ಕುರಿತ ಮಹಾ ಪ್ರಬಂಧಕ್ಕೆ ಪಿ.ಎಚ್.ಡಿ. ಪದವಿಯನ್ನೂ ಪಡೆದರು.

ಬೋಧನಾ ವೃತ್ತಿ ಮತ್ತು ಸಾಹಿತ್ಯ ಸೇವೆ

  • ಅವರು ಎಂ.ಎ ಪೂರ್ಣಗೊಳಿಸಿ ತುಮಕೂರು, ದಾವಣಗೆರೆ, ಚಿತ್ರದುರ್ಗ, ಶಿವಮೊಗ್ಗ, ಚಾಮರಾಜನಗರ, ಚನ್ನಪಟ್ಟಣ, ಮಂಗಳೂರು, ಬೆಂಗಳೂರುಗಳ ಕಾಲೇಜುಗಳಲ್ಲಿ ಅಧ್ಯಾಪಕರಾಗಿ,ಬೋಧನಾ ವೃತ್ತಿ ಮುಂದುವರಿಸಿದರು. ಪ್ರಾಂಶುಪಾಲರಾಗಿ, ಪ್ರವಾಚಕರಾಗಿ,ಪ್ರಾಧ್ಯಾಪಕರಾಗಿ,ಮೂವತ್ತು ವರ್ಷಗಳ ಬೋಧನಾನುಭವವನ್ನು ಹೊಂದಿದ್ದಾರೆ. ಜೊತೆಗೆ ಆಡಳಿತಾನುಭವವನ್ನು ಹೊಂದಿರುವ ಅವರ ಅಧ್ಯಯನ - ಬರವಣಿಗೆಗಳಲ್ಲಿ ಆಳ ಹರಹುಗಳಿವೆ. ವಿಷಯ ವೈವಿಧ್ಯಮಯವಾದದ್ದು ಅಂದರೆ ಕಾವ್ಯ, ಪ್ರಹಸನ, ಜೀವನ ಚಿತ್ರಣ, ಕಾದಂಬರಿ, ಸಣ್ಣಕಥೆ, ನಾಟಕ, ವಿಮರ್ಶೆ, ಸಂಶೋಧನೆ, ಜಾನಪದ, ವ್ಯಾಕರಣ ಮುಂತಾದ ಪ್ರಕಾರಗಳಲ್ಲಿ ತೊಂಬತ್ತಕ್ಕೂ ಹೆಚ್ಚು ಕೃತಿಗಳನ್ನು ಪ್ರಕಟಿಸಿದ್ದಾರೆ.
  • 1995ರಿಂದ 1998ರವರೆಗೆ ಅವರು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿದ್ದರು. ರಾಜ್ಯಭಾಷಾ ಆಯೋಗದ ಸದಸ್ಯರಾಗಿಯೂ ಅವರು ಸೇವೆ ಸಲ್ಲಿಸಿದ್ದರು.

ಕೃತಿಗಳು

ಅವರು 40ಕ್ಕೂ ಹೆಚ್ಚು ನೃತ್ಯ ರೂಪಕಗಳನ್ನು ರಚಿಸಿದ್ದಾರೆ ಕನ್ನಡದಲ್ಲಿ ವಿಶಿಷ್ಟ ಪರಂಪರೆಯನ್ನು ಹುಟ್ಟಿಹಾಕಿದರು.

ಅವರ ಪ್ರಮುಖ ಕೃತಿಗಳು:

ಕಾವ್ಯ

  1. ಶಿವತಾಂಡವ
  2. ಕೆಂಗನಕಲ್ಲು
  3. ರಾಸಲೀಲೆ
  4. ರೂಪಸಿ

ಕಾದಂಬರಿ

  1. ಪುರುಷಸಿಂಹ
  2. ಹೇಮಕೂಟ
  3. ಸಾಮರಸ್ಯದ ಶಿಲ್ಪ
  4. ನಾಟ್ಯಮಯೂರಿ
  5. ವರಕವಿ

ನಾಟಕ

  1. ವಿಜಯವಾತಾಪಿ
  2. ಎರಡು ನಾಟಕಗಳು
  3. ಮರೀಬೇಡಿ

ಕಥಾಸಂಕಲನ

  1. ನೆಲದ ಸೊಗಡು

ಸಂಶೋಧನಾ ಕೃತಿಗಳು

  1. ವಚನ ವೈಭವ
  2. ಸ್ಪಂದನ
  3. ಅವಲೋಕನ

ವಿಮರ್ಶೆ

  1. ಮಾಸ್ತಿಯವರ ಕಾವ್ಯಸಮೀಕ್ಷೆ
  2. ಅಭಿವ್ಯಕ್ತ
  3. ಅನುಶೀಲನ

ಪ್ರಶಸ್ತಿಗಳು

  • ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ
  • ರಾಜ್ಯೋತ್ಸವ ಪ್ರಶಸ್ತಿ
  • ದೇವರಾಜ ಬಹದ್ದೂರ್ ಪ್ರಶಸ್ತಿ
  • ಎಚ್.ನರಸಿಂಹಯ್ಯ ಪ್ರಶಸ್ತಿ
  • ‘ಕೆಳದಿಯ ಅರಸರು ಮತ್ತು ಕನ್ನಡ ಸಾಹಿತ್ಯ’ ಮಹಾಪ್ರಬಂಧಕ್ಕೆ ಡಾಕ್ಟರೇಟ್ ಪದವಿ ಸಂದಿತ್ತು.

ವಿಧಿವಶ

  • ಸಾ.ಶಿ. ಮರುಳಯ್ಯನವರು (85) ಶುಕ್ರವಾರ ೫-೨-೨೦೧೬ ಬೆಳಿಗ್ಗೆ ನಿಧನರಾದರು. ಅವರು ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದರು. ಅವರು ಕೆಲ ದಿನಗಳಿಂದ ಜಯದೇವ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

ಉಲ್ಲೇಖಗಳು

Tags:

ಸಾ.ಶಿ.ಮರುಳಯ್ಯ ಜನನಸಾ.ಶಿ.ಮರುಳಯ್ಯ ಶಿಕ್ಷಣಸಾ.ಶಿ.ಮರುಳಯ್ಯ ಬೋಧನಾ ವೃತ್ತಿ ಮತ್ತು ಸಾಹಿತ್ಯ ಸೇವೆಸಾ.ಶಿ.ಮರುಳಯ್ಯ ಕೃತಿಗಳುಸಾ.ಶಿ.ಮರುಳಯ್ಯ ಪ್ರಶಸ್ತಿಗಳುಸಾ.ಶಿ.ಮರುಳಯ್ಯ ವಿಧಿವಶಸಾ.ಶಿ.ಮರುಳಯ್ಯ ಉಲ್ಲೇಖಗಳುಸಾ.ಶಿ.ಮರುಳಯ್ಯ

🔥 Trending searches on Wiki ಕನ್ನಡ:

ನೂಲುಗುಪ್ತ ಸಾಮ್ರಾಜ್ಯಕುರಿಹೈನುಗಾರಿಕೆಬೆಕ್ಕುಅಷ್ಟಷಟ್ಪದಿವೆಂಕಟೇಶ್ವರ ದೇವಸ್ಥಾನನೀರಿನ ಸಂರಕ್ಷಣೆಅಳತೆ, ತೂಕ, ಎಣಿಕೆವಿಷ್ಣುವರ್ಧನ್ (ನಟ)ಮನೆತಾಳೀಕೋಟೆಯ ಯುದ್ಧಯೋಗಹುಲಿಸಮುಚ್ಚಯ ಪದಗಳುರಾವಣತಾಮ್ರಶ್ರೀಕಾಳಹಸ್ತಿಕಾಮಾಕ್ಯ ದೇವಾಲಯಚೋಮನ ದುಡಿಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಆರ್ಯಭಟ (ಗಣಿತಜ್ಞ)ಕರ್ಬೂಜಚಿದಂಬರ ರಹಸ್ಯಯೇಸು ಕ್ರಿಸ್ತಜಯಂತ ಕಾಯ್ಕಿಣಿಹದಿಬದೆಯ ಧರ್ಮನಂದಿ ಬೆಟ್ಟ (ಭಾರತ)ಜಯಚಾಮರಾಜ ಒಡೆಯರ್ಬಾಹುಬಲಿಶಿಕ್ಷಕಜಿಂಕೆಇಮ್ಮಡಿ ಪುಲಕೇಶಿಮೈಸೂರು ದಸರಾವ್ಯಂಜನಕೈಗಾರಿಕಾ ಕ್ರಾಂತಿಶಾಲೆಕುದುರೆವಿನಾಯಕ ಕೃಷ್ಣ ಗೋಕಾಕಕರ್ನಾಟಕ ಹಿಂದುಳಿದ ವರ್ಗಗಳ ಆಯೋಗಗಳುವೃದ್ಧಿ ಸಂಧಿಶೂದ್ರ ತಪಸ್ವಿಮೂಲಧಾತುಸುಧಾರಾಣಿಮಲೈ ಮಹದೇಶ್ವರ ಬೆಟ್ಟಲಕ್ಷ್ಮಿಅಮರ್ (ಚಲನಚಿತ್ರ)ಕನ್ನಡ ಸಾಹಿತ್ಯ ಪರಿಷತ್ತುಗವಿ ಗಂಗಾಧರೇಶ್ವರ ದೇವಾಲಯ, ಬೆಂಗಳೂರುಚಿತ್ರದುರ್ಗ ಕೋಟೆಒಗಟುವೆಂಕಟರಮಣೇ ಗೌಡ (ಸ್ಟಾರ್ ಚಂದ್ರು)ಅಶೋಕನ ಶಾಸನಗಳುಜನಪದ ಕಲೆಗಳುಡಾ. ಎಚ್ ಎಲ್ ಪುಷ್ಪನಾಗಚಂದ್ರಕುವೆಂಪುಕಲ್ಪನಾದಿವ್ಯಾಂಕಾ ತ್ರಿಪಾಠಿಜಿ.ಪಿ.ರಾಜರತ್ನಂಮಾರುಕಟ್ಟೆವಿಜಯಪುರ ಜಿಲ್ಲೆಯ ತಾಲೂಕುಗಳುಭೂತಾರಾಧನೆಅಂತರರಾಷ್ಟ್ರೀಯ ನ್ಯಾಯಾಲಯದಾಸ ಸಾಹಿತ್ಯಹಣಮೈಸೂರು ಅರಮನೆಕರ್ನಾಟಕದ ಮುಖ್ಯಮಂತ್ರಿಗಳುಸಿದ್ಧಯ್ಯ ಪುರಾಣಿಕಹಣ್ಣುಜೋಳಉಪನಯನಮಸೂದೆಸರ್ಕಾರೇತರ ಸಂಸ್ಥೆಗಾದೆಸ್ವಚ್ಛ ಭಾರತ ಅಭಿಯಾನವಿಧಾನ ಸಭೆಸುಮಲತಾ🡆 More