'ಮರಿಯಪ್ಪ ನಾಟೇಕರ್' ಗುಲ್ಬರ್ಗಾ ನಗರದ ಮದರ್ ಇಂಡಿಯ ಮಹಾವಿದ್ಯಾಲಯದಲ್ಲಿ ಕನ್ನಡ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸಿದ ಯುವ ಪ್ರತಿಭೆ.
ಒಬ್ಬ ಒಳ್ಳೆಯ ಕವಿ, ಕಥೆಗಾರ ಹಾಗು ಲೇಖಕರಾಗಿ ಪ್ರಸಿದ್ಧರಾಗಿದ್ದಾರೆ. ಹಲವು ಕಾವ್ಯ ಸ್ಪರ್ಧೆಗಳ ನಿರ್ಣಾಯಕರಾಗಿ ಕನ್ನಡ ಸಾಹಿತ್ಯ ಪರಿಷತ್ತು (ಮಹಾರಾಷ್ಟ್ರ ಘಟಕದ ಕಾರ್ಯಕಾರಿ ಸಮಿತಿಯ ಸದಸ್ಯ) ರಾಗಿ ೬ ವರ್ಷಗಳ ಕಾಲ ಕಾರ್ಯನಿರ್ವಹಿಸಿದ್ದಾರೆ.
ನಾಟೇಕರ್, ಮೂಲತಃ ಯಾದಗಿರಿ ಜಿಲ್ಲೆಯ ಶಹಾಪೂರ ತಾಲ್ಲುಕಿನ 'ವಡಗೇರಾ' ಗ್ರಾಮದ ವಾಸಿ ತಂದೆ, ವೀರಪ್ಪ ನಾಟೇಕರ್, ತಾಯಿ ,ನಿಂಗಮ್ಮ ನಾಟೇಕರ್. 'ಮುಂಬಯಿ ನಗರದ ದಿ. ಎನ್. ನಗರದ ಮ. ನ. ಪ. ಕನ್ನಡ ಶಾಲೆ'ಯಲ್ಲಿ ೬ ವರ್ಷ ಶಿಕ್ಷಕರಾಗಿ ದುಡಿದಿದ್ದಾರೆ.
ಮುಂಬಯಿ, ಸೊಲ್ಲಾಪುರ, ಗುಲ್ಬರ್ಗಾ, ದೆಹಲಿ ಮುಂತಾದ ನಗರಗಳಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನಗಳನ್ನು ಆಯೋಜಿಸಿ, ನೂರಾರು ಕವಿ ಗೋಷ್ಠಿ ಗಳಲ್ಲಿ ಕವನವಾಚನ ಮಾಡಿದ್ದಾರೆ.
ಡಾ. 'ಭರತ್ ಕುಮಾರ್ ಪೊಲಿಪು' ಹಾಗು 'ವಿಮಲಾ ಭಟ್,' ಮುಂತಾದವರ ನಿರ್ದೇಶನಗಳಲ್ಲಿ ಹಲವು ನಾಟಕಗಳಲ್ಲಿ ಅಭಿನಯಿಸಿದ್ದಾರೆ. ದಲಿತ ಸಮುದಾಯದ ಜಾಗೃತಿಗೆ, ಕಿರುನಾಟಕಗಳನ್ನೂ ರಚಿಸಿ, ನಿರ್ದೇಶಿಸಿ, ಅವುಗಳಲ್ಲಿ ನಟಿಸಿಯೂ ಇದ್ದಾರೆ.
'ಮರಿಯಪ್ಪ ನಾಟೇಕರ್,' 'ದ. ರಾ. ಬೇಂದ್ರೆಯವರ ಸಮಗ್ರ ನಾಟಕಗಳು-ಒಂದು ಅಧ್ಯಯನ' ಎನ್ನುವ ಮಹಾ ಪ್ರಬಂಧ ಮಂಡಿಸಿ ಮುಂಬಯಿ ವಿಶ್ವ ವಿದ್ಯಾಲಯ ಕನ್ನಡದಲ್ಲಿ ಡಾಕ್ಟರೇಟ್ ಪದವಿಗಳಿಸಿದರು. ಇವರು ಮುಂಬಯಿ ವಿಶ್ವವಿದ್ಯಾಲಯದ ಕನ್ನಡ ವಿಭಾಗ ಮುಖ್ಯಸ್ಥರಾದ, ಡಾ. ಜಿ. ಎನ್. ಉಪಾಧ್ಯ ರವರ ಮಾರ್ಗದರ್ಶನದಲ್ಲಿ ಸಂಶೋಧನಾ ವಿದ್ಯಾರ್ಥಿಯಾಗಿ ಕೆಲಸಮಾಡುತಿದ್ದರು.
This article uses material from the Wikipedia ಕನ್ನಡ article ಮರಿಯಪ್ಪ ನಾಟೇಕರ್, which is released under the Creative Commons Attribution-ShareAlike 3.0 license ("CC BY-SA 3.0"); additional terms may apply (view authors). ವಿಶೇಷವಾಗಿ ಟಿಪ್ಪಣಿ ಮಾಡದಿದ್ದ ಹೊರತು ಪಠ್ಯ "CC BY-SA 4.0" ರಡಿ ಲಭ್ಯವಿದೆ. Images, videos and audio are available under their respective licenses.
®Wikipedia is a registered trademark of the Wiki Foundation, Inc. Wiki ಕನ್ನಡ (DUHOCTRUNGQUOC.VN) is an independent company and has no affiliation with Wiki Foundation.