ಲಲಿತಾ ಬಿ.ಟಿ.ನಾಯಕ್ - ಕನ್ನಡದ ಮಹಿಳಾ ಬಂಡಾಯ ಸಾಹಿತಿಗಳಲ್ಲಿ ಪ್ರಮುಖರು.
ಲಲಿತಾ ನಾಯಕ್ ರ ಕಥೆ, ಕಾದಂಬರಿ, ನಾಟಕಗಳೆಲ್ಲದರಲ್ಲಿ ಜಾತೀಯತೆ, ಮಹಿಳೆಯರ ಶೋಷಣೆ, ಬಂಡಾಯದ ದನಿ, ದಲಿತರ ನೋವುಗಳಿವೆ. ಸಂಘಟಕರಾಗಿಯು ಇವರು ಗಮನ ಸೆಳೆದಿದ್ದಾರೆ ಸಾಮಾಜಿಕ ಕಳಕಳಿ, ಕಾಳಜಿಯನ್ನು ಇವರು ಹೊಂದಿದ್ದಾರೆ
ಚಿಕ್ಕಮಗಳೂರುಜಿಲ್ಲೆಯ, ಕಡೂರು ತಾಲೂಕಿನ ತಂಗಲಿ ತಾಂಡ್ಯಾ ಇವರ ಹುಟ್ಟಿದೂರು ತಂದೆ ಬಾಲಾಜಿ ನಾಯ್ಕ, ತಾಯಿ ಗಂಗಾಬಾಯಿ. ಕಡುಬಡತನದ ಬಾಲ್ಯ ಲಲಿತಾ ನಾಯಕ್ ಅವರದಾಗಿತ್ತೆಂದು, ಆವರ ಕೆಲವು ಬರಹಗಳಿಂದ ತಿಳಿದು ಬರುತ್ತದೆ. ತಂದೆ ಮತ್ತು ಅಣ್ಣನ ಪ್ರೋತ್ಸಾಹದಿಂದ ಪ್ರೌಢಶಾಲೆಯ ನಂತರ ಮನೆಯಲ್ಲಿಯೇ ವಿದ್ಯಾಭ್ಯಾಸ ಮುಂದುವರಿಸುತ್ತಾರೆ.
ಲಂಕೇಶ್ ಪತ್ರಿಕೆಯಲ್ಲಿ ೧೯೮೨ ರಿಂದ ವರದಿಗಾರ್ತಿಯಾಗಿ ದುಡಿದ ಇವರ ಅನೇಕ ಲೇಖನ, ಕತೆ, ಕವನಗಳು ಆ ಪತ್ರಿಕೆಯಲ್ಲಿ ಪ್ರಕಟಗೊಂಡವು. ಇವರು ರಚಿಸಿದ ನಾಟಕಗಳು ಧಾರವಾಡದ ಬಾನುಲಿಕೇಂದ್ರದಿಂದ ಪ್ರಸಾರವಾಗಿವೆ.
1986ರ ವರ್ಷದಲ್ಲಿ ರಾಮಕೃಷ್ಣ ಹೆಗಡೆಯವರ ಆಹ್ವಾನದ ಮೇರೆಗೆ ರಾಜಕೀಯ ಪ್ರವೇಶ ಮಾಡಿದ ಲಲಿತಾ ನಾಯಕ್ ರು, ೧೯೮೬ರಲ್ಲಿ ರಾಜಕೀಯ ಪ್ರವೇಶಿಸಿ, ೧೯೮೬ರಿಂದ ೧೯೯೨ ರ ವರೆಗೆ ಕರ್ನಾಟಕ ವಿಧಾನ ಪರಿಷತ್ ಸದಸ್ಯೆಯಾಗಿಯೂ ೧೯೯೪ರಿಂದ ೧೯೯೯ರ ವರೆಗೆ ವಿಧಾನಸಭೆಯಲ್ಲಿ ಶಾಸಕಿಯಾಗಿ, ಮಂತ್ರಿಯಾಗಿ, ಕರ್ನಾಟಕ ಬಾಲಭವನ ಸೊಸೈಟಿ, ಕರ್ನಾಟಕ ಜನತಾದಳ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯೆಯಾಗಿ, ರಾಜಕೀಯ ವ್ಯವಹಾರ ಸಮಿತಿ ಸದಸ್ಯೆಯಾಗಿ, ಹಲವಾರು ಸಂಘ ಸಂಸ್ಥೆಗಳಲ್ಲಿ ಪ್ರಮುಖ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸಿದ್ದಾರೆ.
ಭರವಸೆ
This article uses material from the Wikipedia ಕನ್ನಡ article ಬಿ.ಟಿ.ಲಲಿತಾ ನಾಯಕ್, which is released under the Creative Commons Attribution-ShareAlike 3.0 license ("CC BY-SA 3.0"); additional terms may apply (view authors). ವಿಶೇಷವಾಗಿ ಟಿಪ್ಪಣಿ ಮಾಡದಿದ್ದ ಹೊರತು ಪಠ್ಯ "CC BY-SA 4.0" ರಡಿ ಲಭ್ಯವಿದೆ. Images, videos and audio are available under their respective licenses.
®Wikipedia is a registered trademark of the Wiki Foundation, Inc. Wiki ಕನ್ನಡ (DUHOCTRUNGQUOC.VN) is an independent company and has no affiliation with Wiki Foundation.