ಚಾರ್ವಾಕ

ಚಾರ್ವಾಕ ಭಾರತದಲ್ಲಿ ಬೆಳೆದು ಬಂದ ಸಿದ್ಧಾಂತಗಳಲ್ಲೊಂದು.ಕ್ರಿ.ಪೂ ೬೦೦ಕ್ಕಿಂತಲೂ ಹಿಂದಿನಿಂದಲೇ ಈ ಪರಂಪರೆ ಬೆಳೆದು ಬಂದಿದೆ ಎಂದು ನಂಬಲಾಗಿದೆ.ಚಾರ್ವಾಕ ಮತದ ಮೂಲಗ್ರಂಥಗಳು ಇಂದು ದೊರೆಯದ ಕಾರಣ ೧೩-೧೪ನೇ ಶತಮಾನದಲ್ಲಿದ್ದ ವಿಜಯನಗರ ಸಾಮ್ರಾಜ್ಯ ಸ್ಥಾಪನಾಚಾರ್ಯರೆಂದೇ ಪ್ರಸಿದ್ಧರಾದ ಶೃಂಗೇರಿ ಮಠದ ಶ್ರೀ ವಿದ್ಯಾರಣ್ಯ ಮಾಹಾಸ್ವಾಮಿಗಳ 'ಸರ್ವ ದರ್ಶನ ಸಂಗ್ರಹ'ಎಂಬ ಗ್ರಂಥದಲ್ಲಿರುವ ಚಾರ್ವಾಕ ದರ್ಶನ ಎಂಬ ಅಧ್ಯಾಯವೇ ಆಧಾರವಾಗಿದೆ.ಹಿಂದೂ ಧರ್ಮ ಗ್ರಂಥಗಳಲ್ಲಿ ಹೇಳಲ್ಪಟ್ಟ 'ಪ್ರತ್ಯಕ್ಷ ಪ್ರಮಾಣ' ಒಂದನ್ನು ಮಾತ್ರಾ ಚಾರ್ವಾಕಮತ ಅಂಗೀಕರಿಸಿದೆ.ಚಾರ್ವಾಕ ದರ್ಶನವನ್ನು ಕೆಲವೊಮ್ಮೆ 'ಲೋಕಾಯತ'ದರ್ಶನ ಎಂದೂ ಕರೆಯುತ್ತಾರೆ.


ಹಿಂದೂ ತತ್ತ್ವಶಾಸ್ತ್ರ
ಸರಣಿಯ ಲೇಖನ
aum symbol
ಪಂಥಗಳು
ಸಾಂಖ್ಯ · ನ್ಯಾಯ
ವೈಶೇಷಿಕ · ಯೋಗ
ಪೂರ್ವ ಮೀಮಾಂಸಾ · ವೇದಾಂತ
ವೇದಾಂತ ಪಂಥಗಳು
ಅದ್ವೈತ · ವಿಶಿಷ್ಟಾದ್ವೈತ
ದ್ವೈತ
ಪ್ರಮುಖ ವ್ಯಕ್ತಿಗಳು
ಕಪಿಲ · ಗೋತಮ
ಕಣಾದ · ಪತಂಜಲಿ
ಜೈಮಿನಿ · ವ್ಯಾಸ
ಮಧ್ಯಕಾಲೀನ
ಆದಿಶಂಕರ · ರಾಮಾನುಜ
ಮಧ್ವ · ಮಧುಸೂದನ
ವೇದಾಂತ ದೇಶಿಕ · ಜಯತೀರ್ಥ
ಆಧುನಿಕ
ರಾಮಕೃಷ್ಣ · ರಮಣ
ವಿವೇಕಾನಂದ · ನಾರಾಯಣ ಗುರು
ಅರವಿಂದ ·ಶಿವಾನಂದ

ಚಾರ್ವಾಕ ದರ್ಶನ ಸಾರಾಂಶ

'ಸರ್ವ ದರ್ಶನ ಸಂಗ್ರಹ'ದಲ್ಲಿ ಉದ್ದರಿಸಿದಂತೆ ಚಾರ್ವಾಕ ಮತದ ಮುಖ್ಯ ತತ್ವಗಳು ಇಂತಿವೆ.ಸಂತೋಷವೇ ಬದುಕಿನ ಮುಖ್ಯ ಗುರಿ.ಈ ಪ್ರಪಂಚದ ನಂತರ ಇನ್ನೊಂದು ಪ್ರಪಂಚ (ಸ್ವರ್ಗ ಯಾ ನರಕ)ಎಂದು ಏನೂ ಇಲ್ಲ.ಸ್ವರ್ಗ ಹಾಗೂ 'ಹುಟ್ಟು ಸಾವುಗಳಿಂದ ಬಿಡುಗಡೆ' ಎಂದು ಹೇಳಲ್ಪಟ್ಟವುಗಳೆಲ್ಲವೂ ಕೇವಲ ಭ್ರಮಾಧೀನ ಆದರ್ಶಗಳೆಷ್ಟೆ.ಸಾವು ಎಲ್ಲರಿಗೂ ನಿಶ್ಚಿತ.ಮರುಜನ್ಮ ಎಂಬುದಿಲ್ಲ.ಆದುದರಿಂದ ಎಲ್ಲರೂ ಬದುಕಿರುವಷ್ಟು ದಿನ ಸುಖವಾಗಿರಲು ಪ್ರಯತ್ನಿಸಬೇಕು. ಬದುಕಿನಲ್ಲಿ ದುಖ ಇದೆ ಎಂದು ಸುಖವನ್ನು ತ್ಯಜಿಸುವುದು ಸರಿಯಲ್ಲ. ಅಕ್ಕಿಯನ್ನು ಪಡೆಯುವಾಗ ಭತ್ತದ ಹೊಟ್ಟು ಮತ್ತು ದೂಳು ದೊರೆಯುತ್ತದೆ ಎಂದು ಅಕ್ಕಿಯನ್ನು ತ್ಯಜಿಸಲು ಸಾದ್ಯವೇ? ಅಂತೆಯೇ ದುಖಕ್ಕಾಗಿ ಸುಖ ತ್ಯಜಿಸುವುದು ಯುಕ್ತವಲ್ಲ. ಭೂಮಿ,ವಾಯು,ನೀರು ಹಾಗೂ ಬೆಂಕಿ ಮೂಲಭೂತ ವಸ್ತುಗಳು.ಪ್ರಜ್ಞೆಯು ಈ ನಾಲ್ಕು ಮೂಲಭೂತ ವಸ್ತುಗಳಿಂದಲೇ ಪ್ರಾಪ್ತಿಯಾಗುತ್ತದೆ.ಹೇಗೆ ಕೆಲವು ಅಮಲೇರಿಸುವ ಗುಣಗಳಿಲ್ಲದ ವಸ್ತುಗಳನ್ನು ಬೆರೆಸಿದಾಗ ಅಮೆಲೇರಿಸುವ ಗುಣವುಳ್ಳ ವಸ್ತುವಾಗುವುದೋ ಅಂತೆಯೇ ಪ್ರಜ್ಞೆಯು ಈ ನಾಲ್ಕು ವಸ್ತುಗಳಿಂದಾಗುತ್ತದೆ. ದೇಹವಿಲ್ಲದೆ ಆತ್ಮಎಂಬುದು ಇಲ್ಲ.'ನಾನು ತೆಳ್ಳಗಿದ್ದೇನೆ' 'ನಾನು ದಪ್ಪಗಿದ್ದೇನೆ' ಎಂದು ಮುಂತಾಗಿ ನಾವು ಹೇಳುವುದೆಲ್ಲವೂ ಈ ದೇಹಕ್ಕೇನೆ ಹೊರತು ಆತ್ಮಕ್ಕಲ್ಲ. ಬೆಂಕಿಯ ಬಿಸಿ,ಗಾಳಿಯ ತಂಪು ಎಲ್ಲವೂ ಪ್ರಕೃತಿದತ್ತವಾದವುಗಳೇ.ಎಲ್ಲಾ ವೈವಿದ್ಯಮಯ ವಸ್ತುಗಳೂ ಈ ಪ್ರಕೃತಿಯಿಂದಲೇ ಉಂಟಾಗಿದೆ ಮತ್ತು ಪ್ರಕೃತಿ ನಿಯಮದಂತೆಯೇ ನಡೆಯುತ್ತದೆ. ವೇದಗಳು ಹಾಗೂ ಅವುಗಳಲ್ಲಿ ಹೇಳಲಾದ ಯಾಗ,ಯಜ್ಞಾದಿಗಳು ಕೇವಲ ಕೆಲವು ಜನರ ಹೊಟ್ಟೆಪಾಡಿಗಾಗಿವೆಯಲ್ಲದೆ ಅವುಗಳಿಂದ ಪ್ರಯೋಜನವೇನೂ ಇಲ್ಲ.ವೇದಗಳಲ್ಲಿ ವಿವೇಕವಾಗಲೀ ಪ್ರಾಮಾಣಿಕತೆಯಾಗಲೀ ಇಲ್ಲವಾದುದರಿಂದ ಅವುಗಳು ಸ್ವೀಕಾರಾರ್ಹವಲ್ಲ.

ಇತಿಹಾಸ

ಚಾರ್ವಾಕ ದರ್ಶನ-ವಿವರ 2

  • ಚಾರ್ವಾಕ ದರ್ಶನಕ್ಕೆ ಬೃಹಸ್ಪತಿ ಆಚಾರ್ಯರು ಮೂಲ ಪುರುಷರು . ಆದ್ದರಿಂದ ಇದಕ್ಕೆ ಬಾರ್ಹಪತ್ಯ ದರ್ಶನ ಎಂದೂ ಹೆಸರುಂಟು. ಇವರ ಶಿಷ್ಯರೇ ಚಾರ್ವಾಕರು -ಈ ದರ್ಶನದ ವ್ಯಾಕ್ಯಾನಕಾರರು. ಕಂಬಲಾಶ್ವರ (ಕಂಬಲೇಶ -Kamalaśīla and Haribhadra.) , ಪುರಂಧರ, ಮೊದಲಾದವರು ಪ್ರವರ್ತಕರು. ರಾಮಾಯಣ, ಮಹಾಭಾರತ, ಕಠ, ಬೃಹದಾರಣ್ಯಕ ಉಪನಿಷತ್ ಗಳಲ್ಲಿ ಇವರ ವಿಷಯ ಬಂದಿರುವುದರಿಂದ ಇದು ಪ್ರಾಚೀನ ದರ್ಶನ ಎಂದು ಹೇಳಬಹುದು.
  • ಚಾರ್ವಾಕ ದರ್ಶನ ಅಥವಾ ಲೋಕಯತ ದರ್ಶನ ಎಲ್ಲಾ ದರ್ಶನಗಳ ಪ್ರತಿಕಕ್ಷಿ ಅಥವಾ ವಿರೋಧಿ.

ತತ್ವ ಮೀಮಾಂಸೆ :

  • ೧ : ಭೂಮಿ, ವಾಯು, ಜಲ, ತೇಜಸ್ (ಅಗ್ನಿ) ಮೂಲ ತತ್ವಗಳು (ನಾಲ್ಕೇ ಮೂಲ ತತ್ವಗಳು -ಉಳಿದ ಎಲ್ಲಾ ದರ್ಶನಗಳಲ್ಲಿ ಆಕಾಶವೂ ಸೇರಿ ಐದು ತತ್ವಗಳು ;ಪಂಚ ಭೂತಗಳು) ಆಕಾಶವು, '೦' ಅಥವಾ ಶೂನ್ಯವಾದ್ದರಿಂದ ತತ್ವವಲ್ಲ. ಪೃಥಿವ್ಯಪ್ ತೇಜೋ ವಾಯುರಿತಿ ತತ್ವಾನಿ

ತತ್ಸಮುದಾಯೋ ಶರೀರೇಂದ್ರಿಯ ವಿಷಯ ಸಂಜ್ಞಾ ಇವುಗಳ ಸಂಯೋಗದಿಂದ ಮಾತ್ರಾ ಶರೀರ ಇಂದ್ರಿಯಗಳು. ಪ್ರತ್ಯೇಕ ಚೇತನದ ಅವಶ್ಯಕತೆ ಇಲ್ಲ. ಅದು ತನ್ನ ಸ್ವಭಾವದಿಂದ ಹುಟ್ಟುತ್ತದೆ. ಜಗತ್ತು ತಾನಾಗಿ ಹುಟ್ಟಿದೆ. ಶರೀರಕ್ಕಿಂತ ಬೇರೆಯಾದ ಆತ್ಮನಿಲ್ಲ. ; ಶರೀರವೇ ಆತ್ಮ ; ಉದಾಹರಣೆಗೆ -ನಾನು ದಪ್ಪಗಿದ್ದೇನೆ -(ಶರೀರವನ್ನೇ ನಾನು ಎಂದು ಭಾವಿಸಿ ಹೇಳುತ್ತಾರೆ ,)

ಚಾರ್ವಾಕರ ತರ್ಕ :-

  • ೧. ಶರೀರದಿಂದಲೇ ಚೈತನ್ಯ ಉಂಟಾಗುವುದು. ಅನ್ನ ಪಾನದಿಂದ ಚೈತನ್ಯ ಹೆಚ್ಚುತ್ತದೆ. ಇಲ್ಲದಿದ್ದರೆ ಕ್ಷೀಣಿಸುತ್ತದೆ. ದೇಹ ಹುಟ್ಟಿದಾಗ ಚೈತನ್ಯ ಹುಟ್ಟಿ ಸತ್ತಾಗ ಅದೂ ಸಾಯುತ್ತದೆ. ಆದ್ದರಿಂದ ಪೂಜಾದಿಗಳಿಗೂ , ವೇದಗಳಿಗೂ ಅರ್ಥವಿಲ್ಲ.
  • ೨. ಶ್ರಾದ್ಧದಲ್ಲಿ ಹಾಕಿದ ಪಿಂಡವು ಪರಲೋಕದಲ್ಲಿರುವವರಿಗೆ ತಲುಪುವುದಾದರೆ, ಪರ ಊರಿಗೆ ಹೋದವರಿಗೆ ಇಲ್ಲಿಯೇಊಟ ಹಾಕಬಹುದಲ್ಲವೇ?
  • ೩. ಯಜ್ಞದಲ್ಲಿ ಕೊಲ್ಲಲ್ಪಟ್ಟ ಪ್ರಾಣಿಯು ಸ್ವರ್ಗಕ್ಕೆ ಹೋಗಬಹುದಾದರೆ ಯಜ್ಞದ ಯಜಮಾನನು. ತನ್ನ ತಂದೆಯನ್ನೇ ಏಕೆ ಯಜ್ಞಕ್ಕೆ ಬಲಿಕೊಡಬಾರದು ?

ಪ್ರಮಾಣಗಳು : (ತರ್ಕಕ್ಕೆ ಆಧಾರ)

  • (Epistemology)

೧. ಚಾರ್ವಾಕರಿಗೆ ಪ್ರತ್ಯಕ್ಷವೇ ಪ್ರಮಾಣ. ಏಕೆಂದರೆ ಇಂದ್ರಿಯಗಳಿಗೆ , ಅನುಭವಕ್ಕೆ ನಿಲುಕುವ ಸಂಗತಿಗಳಷ್ಟೇ ಪ್ರಧಾನ ಪ್ರಮಾಣ ಅಥವಾ ಆಧಾರ. ಅನುಮಾನ (Inference ) ಶಾಸ್ತ್ರ, ಶಬ್ದ (ಅನುಭವಿಗಳಮಾತು), ನಮಗೆ ಸ್ವತಂತ್ರವಾಗಿ ಜ್ಞಾನವನ್ನು ಕೊಡಲಾರವು. ಅನುಮಾನಕ್ಕೆ ಉದಾಹರಣೆ : ದೂರದಲ್ಲಿ ಹೊಗೆಯನ್ನು ಅಲ್ಲಿ ಬೆಂಕಿ ಇದೆ ಎಂದು ಊಹಿಸುವುದು. ಒಂದು ಅಗಳು ಅನ್ನವನ್ನು ಹಿಚುಕಿ ನೋಡಿ ಬೆಂದಿದ್ದರೆ , ಎಲ್ಲವೂಬೆಂದಿದೆ ಎಂದು ತಿಳಿಯುವುದು. ಚವಾಕರು ಇದನ್ನು ಲೋಕ ವ್ಯವಹಾರಕ್ಕೆ ಸೀಮಿತ ಎನ್ನುತ್ತಾರೆ. ತತ್ವ ನಿರ್ಣಯಕ್ಕೆ ಪ್ರಯೋಜನವಿಲ್ಲವೆನ್ನುತ್ತಾರೆ. ಏಕೆಂದರೆ ಇದು ಸಂಭಾವನಾರೂಪದ್ದು (ಊಹೆ). ನಿಜವಾದರೂ ಆಗಬಹುದು ಅಥವಾ ಆಗದಿರಬಹುದು

  • ೨. ಚರ್ವಾಕರು - ಜಗತ್ತಿನ ನಿಯಮಗಳು ಕಾರ್ಯ ಕಾರಣ ನಿಮಿತ್ತವೆಂದು ಒಪ್ಪಲಾರರು. (ಕಾರಣವಿಲ್ಲದೆ -ಕಾರ್ಯವಿಲ್ಲ ಎಂಬ ನಿಯಮ); ಈ ಕಾರಣಕ್ಕಾಗಿ - ಈ ಕಾರ್ಯವಗುತ್ತದೆ ಎಂಬ ನಿಯಮ. ಏಕೆಂದರೆ ಪ್ರಕೃತಿಯು ಕಾರ್ಯ ಕಾರಣ ನಿಯಮದಂತೆ ನಡೆಯುವುದಿಲ್ಲ. ಪ್ರತಿಯೊಂದೂ ಅದರ ಸ್ವಭಾವದಂತೆ ನಡೆಯುವುದು.

ಅವರ ತತ್ವ : ಸುಖಕ್ಕೆ ಧರ್ಮವೇ ಕಾರಣವೆಂದಾಗಲೀ ದುಃಖಕ್ಕೆ ಅಧರ್ಮವೇ ಕಾರಣವೆಂದಾಗಲೀ ಹೇಳುವಂತಿಲ್ಲ. ಸುಖ ದುಃಖಗಳಿಗೆ ಸ್ವಭಾವವೇ ಕಾರಣ, ಕೋಗಿಲೆಯ ಮಧುರ ಸ್ವರಕ್ಕೆ : ನವಿಲಿನ ಚೆಂದಕ್ಕೆ ; ಹೂವಿನ ಸುವಾಸನೆಗೆ - ಸ್ವಭಾವವೇ ಕಾರಣ .

  • ೩. ಪ್ರತ್ಯಕ್ಷ ಮಾಡಿ ತೋರಿಸಬಹುದಾದ ಅನುಮಾನವನ್ನು ಒಪ್ಪಬಹುದು.
  • ೪. ಆಪ್ತ ವ್ಯಕ್ತಿಯ ಮಾತನ್ನು ಪ್ರಮಾಣವೆಂದು ಕೆಲವರು ಒಪ್ಪುವರು. ಆದರೆ ಚರ್ವಾಕರು ಒಪ್ಪುವುದಿಲ್ಲ. ಏಕೆಂದರೆ ಅದು ಪ್ರತ್ಯಕ್ಷದಿಂದಲೇ (ನೋಡಿದಾಗಲೇ ನಿಜವೆಂದು ಹೇಳಬಹುದು) ಸಿದ್ಧಿಸುತ್ತದೆ. ಉದಾಹರಣೆ : ಒಬ್ಬನು ಆಕಳು ಹಾಯುವುದಿಲ್ಲವೆಂದು ಹೇಳಿದರೆ. ಹತ್ತಿರ ಹೋದಾಗಲೇ ಸತ್ಯ ಗೊತ್ತಾಗುವುದು.
  • ಆದ್ದರಿಂದ ಶಾಸ್ತ್ರ ಪುರಾಣಗಳನ್ನು ನಂಬುವುದಿಲ್ಲ ಅವು ಪ್ರಮಾಣವಾಗಲಾರವು. ಅವುಗಳನ್ನು ಪ್ರತ್ಯಕ್ಞ ತೋರಿಸುವಂತಿದ್ದರೆ ಮಾತ್ರ ಒಪ್ಪಬಹುದು.

ಜೀವನದ ಗುರಿ (ಆಚಾರ -ವಿಚಾರ)

  • ಕಾಮ ಏಕೈಕ ಪುರುಷಾರ್ಥ: ಕಾಮ ಎಂದರೆ ಆಸೆ ; ಆಸೆಗಳನ್ನು ಪೂರೈಸಿಕೊಂಡು ಸುಖವಾಗಿ ಬಾಳುವುದೇ ಜೀವನದ ಗುರಿ.

ಪ್ರಸಿದ್ಧ ಶ್ಲೋಕ :

    ಯಾವಜ್ಜೀವೇತ್ ಸುಖಂ ಜೀವೇತ್ |
    ಋಣಂ ಕೃತ್ವಾ ಘೃತಂ ಪಿಬೇತ್ ||
    ಭಸ್ಮೀಭೂತಸ್ಯ ದೇಹಸ್ಯ |
    ಪುನರಾಗಮನಂ ಕುತಃ ||
  • ಬದುಕಿರುವವರೆಗೂ ಸುಖವಾಗಿ ಬದುಕಬೇಕು. ಸಾಲವನ್ನು ಮಾಡಿಯಾದರೂ ತುಪ್ಪವನ್ನು ಕುಡಿಯಬೇಕು. (ಸತ್ತು) ಶರೀರವು ಸುಟ್ಟುಹೋದ ಮೇಲೆ ಮರಳಿಬಂದವರಾರು. ( ಮರಳಿಬಂದವರು ಇಲ್ಲ )
  • ಪ್ರಾಣಿಗಳ ಕಾಟವಿದೆಯೆಂದು ಬೀಜವನ್ನು ಬಿತ್ತದೆ ಇರುವುದಿಲ್ಲ. ದುಃಖಕ್ಕೆ ಹೆದರಿ ಸುಖವನ್ನು ತ್ಯಾಗ ಮಾಡಬಾರದು. ಪರಲೋಕದಲ್ಲಿ ಸುಖ ಸಿಗುವುದೆಂದು ಈಲೋಕದಲ್ಲಿಸುಖವನ್ನು ತ್ಯಾಗ ಮಾಡುವುದು ವ್ಯರ್ಥ .

ಸಮೀಕ್ಷೆ :

  • ಚಾರ್ವಾಕರು ಅನೀತಿಯಿಂದಾದರೂ ಸುಖವನ್ನು ಪಡೆಯಬೇಕೆಂದು ಉಪದೇಶಿಸುತ್ತಾರೆಂದು ಅಪವಾದವಿದೆ. ಆದರೆ ಹಾಗೆಂದುಹೇಳಲು ಬರುವುದಿಲ್ಲ.
  • ಏಕೆಂದರೆ ದೇವರನ್ನು ಒಪ್ಪದಿದ್ದರೂ ರಾಜ ಶಾಸನವನ್ನೂ, ಸಮಾಜದ ನೀತಿನಿಯಮಗಳನ್ನೂ ಒಪ್ಪುತ್ತಾರೆ. ಅವರ ಹೇಳಿಕೆ :
    ನಿಗ್ರಹಾನುಗ್ರಹ ಕರ್ತಾ ರಾಜಾಈಶ್ವರಃ||
  • ರಾಜನೇ ಈಶ್ವರ ;ಅವನ ಶಾಸನಕ್ಕೇ ಒಳಪಟ್ಟಿರಬೇಕೆಂಬುದು ಅಭಿಪ್ರಾಯ.

ಶರೀರವು ಭೋಗಾಯತನ. ಸುಖವನ್ನು ಬಯಸುವುದು. ಆದರೆ ದುಃಖ - ಕ್ಲೇಶವು ಈ ಜೀವನದಲ್ಲಿ ಆಗುವುದು. ಈ ದುಃಖಕ್ಕೆಲ್ಲಾ ಕೊನೆ - ಸಾವು. ಮರಣವೇ ಮೋಕ್ಷ. ಮರಣಮೇವಾಪರ್ಗ. ಕಾರಣ ಮರಣದ ನಂತರ ಆತ್ಮ ಇರುವುದೆಂಬುದನ್ನು ಅವರು ಒಪ್ಪುವುದಿಲ್ಲ.

ವಿಫಲತೆಗೆ ಕಾರಣ

    ೧. ಅತೀಂದ್ರಿಯ ಅನುಭವಗಳಿಗೂ , ಭಾವನೆಗಳಿಗೂ, ಪ್ರೀತಿ ಪ್ರೇಮಗಳಿಗೂ, ಪಾಮುಖ್ಯತೆ ಕೊಡದಿರುವುದರಿಂದ ಭಾರತದಲ್ಲಿ ಈ ದರ್ಶನ ತಿರಸ್ಕಾರಕ್ಕೆ ಒಳಗಾಯಿತೆಂದು ಹೇಳಬಹುದು.
    ೨. ಅನುಮಾನ ಪ್ರಮಾಣಕ್ಕೆ ಮಾನ್ಯತೆ ಇಲ್ಲಿರುವುದರಿಂದ ತರ್ಕದಲ್ಲಿ ಸೋತಿತು. ಉದಾಹರಣೆಗೆ -ಸೂರ್ಯನು ದೂರದಲ್ಲಿ ಚಿಕ್ಕವನಾಗಿ ಕಂಡರೂ ಅನುಮಾನ ಪ್ರಮಾಣದಿಂದ (ಗಣಿತದ ಲೆಕ್ಕಾಚಾರದಿಂದ) ಅದು ಅತಿ ದೊಡ್ಡದು. ಹತ್ತಿರ ಹೋಗಿ ಪರೀಕ್ಷಿಸಲು ಸಾಧ್ಯವಿಲ್ಲ. ಆದರೆ ಅದು ಸತ್ಯ.
    ೩. ಕಾರ್ಯ-ಕಾರಣ ವಾದವನ್ನು ಸಾರಾಸಗಟಾಗಿ ತಿರಸ್ಕರಿಸಿದ್ದೂ ಅದರ ದೊಡ್ಡ ಪ್ರಮಾದ.
    ೪. ಭಕ್ತಿ, ದೈವ ವಾದ, ಅದ್ಯಾತ್ಮ , ಮೋಕ್ಷಗಳ ಅಬ್ಬರದಲ್ಲಿ ಚರ್ವಾಕವಾದ ಅಡಗಿಹೋಯಿತು.

ಉಪಸಂಹಾರ

  • ಆದರೆ ಎಲ್ಲರೂ ಸ್ವಲ್ಪ ಮಟ್ಟಿಗೆ ಲೋಕಾಯತರೆ ಆಗಿದ್ದಾರೆ. ಬಹಳಷ್ಟು ಜನರು ಸ್ವರ್ಗ ಪ್ರಾಪ್ತಿಯ ಸುಖಕ್ಕಾಗಿ ಈ ಜಗತ್ತಿನ ಸುಖ ಸಂಪತ್ತನ್ನು .ಪೂರ್ತಿ ತ್ಯಾಗ ಮಾಡಲಾರರು. ಮರಣಾನಂತರ ಪರಲೋಕದಲ್ಲಿ ಪಡೆಯಬಹುದಾದ ಸುಖಕ್ಕಾಗಿ ,ತಮ್ಮ ಅಮೂಲ್ಯವಾದ ಶರೀರವನ್ನು ವ್ಯರ್ಥವಾಗಿ ದಂಡಿಸುವ ಜನರಿಗೆ, ಚರ್ವಾಕ ದರ್ಶನವಾದಿಗಳು ,ಅದನ್ನು ಬಿಟ್ಟು ಸುಖವಾಗಿ ಕಳೆಯುವಂತೆ ಉಪದೇಶಿಸಿದರು.
  • ಮೋಕ್ಷ ವೈರಾಗ್ಯದ ಹೆಸರಿನಲ್ಲಿ ,ಪರಲೋಕದ ಸುಖಕ್ಕಾಗಿ ತಾವೂ ಸುಖ ಪಡದೆ, ಬೇರೆಯವರಿಗೂ ಈ ಜೀವನದಲ್ಲಿ ಸುಖವನ್ನು ಕೊಡದೆ, ಪ್ರಾಪಂಚಿಕ ಧರ್ಮವನ್ನು ಮರೆತು, ದೇಹವನ್ನು ದಂಡಿಸುತ್ತಾ ತಾವೂ ದುಡಿಯದೆ -ಬೇರೆಯವರ ಮೇಲೆ ಅವಲಂಬಿಸಿಕೊಂಡು, - ಈ ಜಗತ್ತೆಲ್ಲಾ ದುಃಖ ಮಯವೆಂದೂ, ಇದು ಪಾಪಿ ಜನ್ಮವೆಂದೂ, ಪಾಪ ಪ್ರಜ್ಞೆಯಲ್ಲಿ ಬದುಕುವವರನ್ನು ಚರ್ವಾಕರು ಧೈರ್ಯವಾಗಿ ವಿರೋಧಿಸಿದರು. ಚರ್ವಾಕ ವಾದ ಪ್ರಬಲವಾಗಿದ್ದರೆ (ಪ್ರಬಲವಾಗಿ ಬೆಳೆದಿದ್ದರೆ), ವಿಜ್ಞಾನ ,ಅರ್ಥಶಾಸ್ತ್ರ, ಮೊದಲಾದ ಲೌಕಿಕ ಶಾಸ್ತ್ರಗಳು ಇನ್ನಷ್ಟು ಪುಷ್ಟವಾಗಿ ಬೆಳೆದು ದೇಶದ ಚರಿತ್ರೆಯೇ ಬೇರೆಯಾಗಬಹುದಿತ್ತು ಎಂಬುದು ವಿಚಾರ ವಾದಿಗಳ ಅಭಿಪ್ರಾಯ. ಆದರೆ ಇತಿಹಾಸದಲ್ಲಿ ಹಾಗಾಗುವು ಇರಲಿಲ್ಲ.

ಓಂ ತತ್ ಸತ್

ನೋಡಿ

ಭಾರತೀಯ ದರ್ಶನಶಾಸ್ತ್ರ ಅಥವಾ ಭಾರತೀಯ ತತ್ತ್ವಶಾಸ್ತ್ರ
ಚಾರ್ವಾಕ ದರ್ಶನ ಜೈನ ದರ್ಶನ ಬೌದ್ಧ ದರ್ಶನ ಸಾಂಖ್ಯ ದರ್ಶನ
ರಾಜಯೋಗ ನ್ಯಾಯ ವೈಶೇಷಿಕ ದರ್ಶನ ಮೀಮಾಂಸ ದರ್ಶನ
ಆದಿ ಶಂಕರರು ಮತ್ತು ಅದ್ವೈತ ಅದ್ವೈತ- ಜ್ಞಾನ-ಕರ್ಮ ವಿವಾದ ವಿಶಿಷ್ಟಾದ್ವೈತ ದರ್ಶನ ದ್ವೈತ ದರ್ಶನ
ಮಾಧ್ವ ಸಿದ್ಧಾಂತ ಶ್ರೀಮನ್ಮಹಾಭಾರತಮ್ ಮತ್ತು ದ್ವೈತ ದರ್ಶನ ಭಾರತೀಯ ತತ್ವಶಾಸ್ತ್ರ ಸಮೀಕ್ಷೆ ಭಗವದ್ಗೀತಾ ತಾತ್ಪರ್ಯ
ಕರ್ಮ ಸಿದ್ಧಾಂತ ವೀರಶೈವ ತತ್ತ್ವ ಭಾರತೀಯ ತತ್ತ್ವಶಾಸ್ತ್ರದಲ್ಲಿ ದೇವರು - ಭಾರತೀಯ ತತ್ತ್ವಶಾಸ್ತ್ರದಲ್ಲಿ ಜಗತ್ತು
ಭಾರತೀಯ ತತ್ತ್ವಶಾಸ್ತ್ರದಲ್ಲಿ ಜೀವಾತ್ಮ ಮೋಕ್ಷ ಗೀತೆ ಬ್ರಹ್ಮಸೂತ್ರ

ಹೆಚ್ಚಿನ ಓದಿಗೆ - ಪೂರಕ ಮಾಹಿತಿ

ಬಾಹ್ಯ ಸಂಪರ್ಕಗಳು

ಉಲ್ಲೇಖ

Tags:

ಚಾರ್ವಾಕ ದರ್ಶನ ಸಾರಾಂಶಚಾರ್ವಾಕ ಇತಿಹಾಸಚಾರ್ವಾಕ ತತ್ವ ಮೀಮಾಂಸೆ :ಚಾರ್ವಾಕ ರ ತರ್ಕ :-ಚಾರ್ವಾಕ ಪ್ರಮಾಣಗಳು : (ತರ್ಕಕ್ಕೆ ಆಧಾರ)ಚಾರ್ವಾಕ ಜೀವನದ ಗುರಿ (ಆಚಾರ -ವಿಚಾರ)ಚಾರ್ವಾಕ ಸಮೀಕ್ಷೆ :ಚಾರ್ವಾಕ ವಿಫಲತೆಗೆ ಕಾರಣಚಾರ್ವಾಕ ಉಪಸಂಹಾರಚಾರ್ವಾಕ ನೋಡಿಚಾರ್ವಾಕ ಬಾಹ್ಯ ಸಂಪರ್ಕಗಳುಚಾರ್ವಾಕ ಉಲ್ಲೇಖಚಾರ್ವಾಕ

🔥 Trending searches on Wiki ಕನ್ನಡ:

ಕರ್ಕಾಟಕ ರಾಶಿಜಲಿಯನ್‍ವಾಲಾ ಬಾಗ್ ಹತ್ಯಾಕಾಂಡಇಸ್ಲಾಂ ಧರ್ಮಚೀನಾನಾಮಪದದೇವರ/ಜೇಡರ ದಾಸಿಮಯ್ಯಕೇಂದ್ರ ಲೋಕ ಸೇವಾ ಆಯೋಗಅಲೆಕ್ಸಾಂಡರ್ಸಾವಿತ್ರಿಬಾಯಿ ಫುಲೆಗಣೇಶಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ಯಲ್ಲಮ್ಮ ದೇವಿ ದೇವಸ್ಥಾನ ಸವದತ್ತಿಮಾಧ್ಯಮದಾಸವಾಳಗುದ್ದಲಿಜೋಳದಶರಥಶ್ರೀಕೃಷ್ಣದೇವರಾಯಸೂರ್ಯ (ದೇವ)ಧರ್ಮಮೊಘಲ್ ಸಾಮ್ರಾಜ್ಯಗೂಗಲ್ಅಲಂಕಾರಸಂವತ್ಸರಗಳುಭೂತಾರಾಧನೆಜೈಜಗದೀಶ್ವಿರೂಪಾಕ್ಷ ದೇವಾಲಯಭಕ್ತಿ ಚಳುವಳಿಕರಡಿಚಂದ್ರಯಾನ-೩ದಶಾವತಾರವಿಶ್ವ ವ್ಯಾಪಾರ ಸಂಸ್ಥೆಶ್ರೀ ಸಿದ್ದೇಶ್ವರ ಸ್ವಾಮಿಜಿಗಳುಮದುವೆಆಮ್ಲಗಳು ಮತ್ತು ಪ್ರತ್ಯಾಮ್ಲಗಳುವೀರಗಾಸೆಭಾರತದ ಗಡಿಗಳು ಮತ್ತು ನರೆ ರಾಜ್ಯಗಳುಗೋವಿಂದ ಪೈಪುರೂರವಸ್ವಿಕಿಪೀಡಿಯ ಪ್ರಚಲಿತ ವಿದ್ಯಮಾನಗಳುಅಂತರರಾಷ್ಟ್ರೀಯ ಹಣಕಾಸು ಸಂಸ್ಥೆಕನ್ನಡದಲ್ಲಿ ಕಾದಂಬರಿ ಸಾಹಿತ್ಯಜಾತಕ ಕಥೆಗಳುಹರಿಶ್ಚಂದ್ರಸಾವಯವ ಬೇಸಾಯವೈದೇಹಿಭಾರತದ ರಾಜ್ಯಗಳ ಜನಸಂಖ್ಯೆಪ್ಯಾರಾಸಿಟಮಾಲ್ಋತುಸಮಾಜ ವಿಜ್ಞಾನಭಾರತದ ತ್ರಿವರ್ಣ ಧ್ವಜಬಹುಸಾಂಸ್ಕೃತಿಕತೆರಂಗವಲ್ಲಿಭಾರತದ ಇತಿಹಾಸಪಂಪಕ್ರಿಯಾಪದಸ್ವಾಮಿ ವಿವೇಕಾನಂದಜಾಗತಿಕ ತಾಪಮಾನ ಏರಿಕೆಯ ಪರಿಣಾಮಗಳುವಚನ ಸಾಹಿತ್ಯವಿಜ್ಞಾನಲಕ್ಷ್ಮೀಶಅಮ್ಮಪಶ್ಚಿಮ ಘಟ್ಟಗಳುಇಮ್ಮಡಿ ಪುಲಕೇಶಿಏಡ್ಸ್ ರೋಗಗರ್ಭಧಾರಣೆಬಿ.ಜಯಶ್ರೀಕುವೆಂಪುಆದಿಪುರಾಣಗುರುನಾನಕ್ಈರುಳ್ಳಿಮಾನವ ಸಂಪನ್ಮೂಲ ನಿರ್ವಹಣೆಕನಕದಾಸರುಮೂಲಧಾತುಕರ್ಮಧಾರಯ ಸಮಾಸಭಾರತದ ಚುನಾವಣಾ ಆಯೋಗಭಾರತದ ಸ್ವಾತಂತ್ರ್ಯ ಚಳುವಳಿ🡆 More