ಅರುಂಧತಿ ನಾಗ್: ಭಾರತೀಯ ನಟಿ, ರಂಗಕರ್ಮಿ

ಅರುಂಧತಿನಾಗ್ - ಮರಾಠಿ ಮೂಲದ ಕನ್ನಡ ರಂಗಭೂಮಿ ಕಲಾವಿದೆ, ಮತ್ತು ಕನ್ನಡ ಚಿತ್ರರಂಗದ ಹೆಸರಾಂತ ನಟಿಯರಲ್ಲೊಬ್ಬರು.

ಖ್ಯಾತ ನಟ, ನಿರ್ದೇಶಕ ಶಂಕರನಾಗ್ ಅವರ ಪತ್ನಿ ಅರುಂಧತಿನಾಗ್. ಈ ದಂಪತಿಗಳ ಮಗಳ ಹೆಸರು ಕಾವ್ಯ. ೧೯೯೦ರಲ್ಲಿ ನಡೆದ ರಸ್ತೆ ಅಪಘಾತವೊಂದರಲ್ಲಿ ಅರುಂಧತಿನಾಗ್ ಅವರ ಪತಿ ಶಂಕರನಾಗ್ ಮೃತರಾದರು.

ಅರುಂಧತಿ ನಾಗ್
ಅರುಂಧತಿ ನಾಗ್: ಬದುಕಿನ ವಿವರಗಳು, ಅರುಂಧತಿನಾಗ್ ಅಭಿನಯದ ಕನ್ನಡ ಚಲನಚಿತ್ರಗಳು, ಅರುಂಧತಿನಾಗ್ ಅಭಿನಯದ ಹಿಂದಿ ಚಲನಚಿತ್ರಗಳು
Occupationನಟಿ
Years active೧೯೮೦–ಪ್ರಸ್ತುತ
Spouseಶಂಕರ್ ನಾಗ್

ಬದುಕಿನ ವಿವರಗಳು

ಅರುಂಧತಿ ನಾಗ್ : ಕನ್ನಡ ರಂಗಭೂಮಿ ಹಾಗೂ ಚಲನಚಿತ್ರ ಕಲಾವಿದೆ. ಪ್ರಸಿದ್ಧ ನಟ ಹಾಗೂ ನಿರ್ದೇಶಕ ಶಂಕರ್ ನಾಗ್ (ನೋಡಿ) ಅವರ ಪತ್ನಿ. ಇವರ ಆರಂಭದ ಜೀವನ ಮುಂಬಯಿಯಲ್ಲಿ ಕಳೆಯಿತು. ಅಲ್ಲಿರುವಾಗ ಮುಂಬಯಿನ ಹವ್ಯಾಸಿ ರಂಗಭೂಮಿಯ ಸಕ್ರಿಯ ವ್ಯಕ್ತಿಯಾಗಿದ್ದರು. ಮರಾಠಿ, ಗುಜರಾತಿ, ಹಿಂದಿ, ಇಂಗ್ಲಿಷ್ ಮೊದಲಾದ ಭಾಷೆಗಳಲ್ಲೂ ಅಭಿನಯಿಸಿದ್ದಾರೆ. ಇವರು ಕೆಲವೊಮ್ಮೆ ತಿಂಗಳಲ್ಲಿ 42 ಪ್ರದರ್ಶನಗಳನ್ನು ಕೊಟ್ಟದ್ದೂ ಇದೆ. ಈ ದಿನಗಳಲ್ಲೇ ಸಹ ರಂಗನಟ ಶಂಕರನಾಗ್ ಅವರ ಪರಿಚಯವಾಯಿತು. ಪರಿಚಯ ಪ್ರೇಮವಾಗಿ ವಿವಾಹ ವಾದರು. ಅನಂತರ ಇಬ್ಬರೂ ಬೆಂಗಳೂರಿನಲ್ಲಿ ನೆಲೆಸಿ ರಂಗಭೂಮಿ ಹಾಗೂ ಚಲನಚಿತ್ರ - ಈ ಎರಡೂ ಕ್ಷೇತ್ರಗಳಲ್ಲಿ ಇಬ್ಬರೂ ಕೆಲಸ ಮಾಡತೊಡಗಿದರು. ಈ ಎಲ್ಲ ಸಂದರ್ಭಗಳಲ್ಲಿ ಪತಿ ಶಂಕರನಾಗ್‍ಗೆ ನೆರವಾದರು. ಕೆಲವು ಸಂದರ್ಭಗಳಲ್ಲಿ ಶಂಕರನಾಗ್ ಅವರಿಗೆ ಸಹಾಯಕ ನಿರ್ದೇಶಕರಾಗಿಯೂ ಕೆಲಸ ಮಾಡಿದರು. ಶಂಕರನಾಗ್ ಹಿಂದಿಯ ಕಿರುತೆರೆಗಾಗಿ ಸಿದ್ಧಪಡಿಸಿದ ಆರ್.ಕೆ.ನಾರಾಯಣ್ ಅವರ ‘ಮಾಲ್ಗುಡಿ ಡೇಸ್’ ಇವರಿಬ್ಬರಿಗೂ ಅಪಾರ ಖ್ಯಾತಿಯನ್ನು ತಂದುಕೊಟ್ಟಿತು. ಅರುಂಧತಿಯವರು ಅನೇಕ ನಾಟಕ ಹಾಗೂ ಚಲನಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ನೋಡಿ ಸ್ವಾಮಿ ನಾವಿರೋದು ಹೀಗೆ ಎಂಬ ನಾಟಕ ಇವರ ಅಭಿನಯದ ಅತ್ಯಂತ ಜನ ಪ್ರಿಯ ನಾಟಕ. ಇದು ಚಲನಚಿತ್ರವಾ ಗಿಯೂ ಆಪಾರ ಯಶಸ್ವಿಯಾಯಿತು. ಆಕ್ಸಿಡೆಂಟ್, ಗೋಲಿಬಾರ್, ಪರಮೇಶಿಯ ಪ್ರೇಮ ಪ್ರಸಂಗ ಇವರ ಅಭಿನಯದ ಇತರ ಚಿತ್ರಗಳು. ಮಣಿರತ್ನಂಅವರ ದಿಲ್‍ಸೆ ಎಂಬ ಹಿಂದಿ ಚಿತ್ರದಲ್ಲಿಒಂದು ಚಿಕ್ಕ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಅನಂತರ `ಪಾ’ ಎಂಬ ಹಿಂದಿ ಚಿತ್ರದಲ್ಲಿಅಭಿನಯಿಸಿ ಅಪಾರ ಮನ್ನಣೆಗಳಿಸಿದರು. ಶಂಕರ್‍ನಾಗ್ ನಿರ್ದೇಶನದ ‘ಒಂದು ಮುತ್ತಿನಕಥೆ’ ಚಿತ್ರಕ್ಕೆ ವಸ್ತ್ರ ವಿನ್ಯಾಸಕಿಯಾಗಿ ದುಡಿದಿದ್ದಾರೆ. ಕಾರು ಅಪಘಾತವೊಂದರಲ್ಲಿಶಂಕರನಾಗ್ ನಿಧನರಾದಾಗ ಅದೇ ಕಾರಿನಲಿದ್ದ ಅರುಂಧತಿ ಪ್ರಾಣಾಪಾಯದಿಂದ ಪಾರಾದರು. ಪತಿಯನ್ನು ಕಳದುಕೊಂಡು ಕೆಲಕಾಲ ಎಲ್ಲ ಚಟುವಟಿಕೆಗಳಿಂದ ದೂರವಿದ್ದ ಇವರು ಅನಂತರ ಶಂಕರನಾಗ್ ಅವರ ಕನಸಿನ ಕಲ್ಪನೆಯ 'ರಂಗಶಂಕರ' ಎಂಬ ಸಮಗ್ರ ನಾಟಕ ಚಟುವಟಿಕೆಯ ಕೇಂದ್ರವೊಂದರ ನಿರ್ಮಾಣದಲ್ಲಿ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಂಡರು. ಸುಮಾರು ಮೂರು ಕೋಟಿ ರೂಪಾಯಿ ವೆಚ್ಚದ ಈ ರಂಗಭೂಮಿ ಸಂಕೀರ್ಣ ಯೋಜನೆ ಈಗ ಪೂರ್ಣಗೊಂಡಿದ್ದು ಕಾರ್ಯ ಚಟುವಟಿಕೆಯನ್ನು ಆರಂಭಿಸಿದೆ (2004). ಸಂಕೇತ್ ಟ್ರಸ್ಟ್ ‘ರಂಗಶಂಕರ’ದ ಚಟುವಟಿಕೆಗಳನ್ನು ನೋಡಿಕೊಳ್ಳುತ್ತದೆ. ಗಿರೀಶ್ ಕಾರ್ನಾಡ್ ರಂಗಶಂಕರದ ಅಧ್ಯಕ್ಷರು. ಅರುಂಧತಿ ಅದರ ಕಾರ್ಯನಿರ್ವಾಹಕ ಸದಸ್ಯರು.

ಅರುಂಧತಿನಾಗ್ ಅಭಿನಯದ ಕನ್ನಡ ಚಲನಚಿತ್ರಗಳು

ಅರುಂಧತಿನಾಗ್ ಅಭಿನಯದ ಹಿಂದಿ ಚಲನಚಿತ್ರಗಳು

  • ಪಾ

ರಂಗಶಂಕರ

ಅರುಂಧತಿ ನಾಗ್: ಬದುಕಿನ ವಿವರಗಳು, ಅರುಂಧತಿನಾಗ್ ಅಭಿನಯದ ಕನ್ನಡ ಚಲನಚಿತ್ರಗಳು, ಅರುಂಧತಿನಾಗ್ ಅಭಿನಯದ ಹಿಂದಿ ಚಲನಚಿತ್ರಗಳು 
ಅರುಂಧತಿನಾಗ್ ನೇತೃತ್ವದ ಶಂಕರನಾಗ್ ಕನಸು

ರಂಗಶಂಕರ - ಕನ್ನಡ ರಂಗಭೂಮಿಗೆ ಶಂಕರನಾಗ್ ಕಂಡ ಕನಸು. ನಾಟಕರಂಗದಲ್ಲಿಯೇ ಪ್ರಾರಂಭದಿಂದ ಒಡನಾಟ ಬೆಳೆಸಿಕೊಂಡಿದ್ದ ಶಂಕರನಾಗ್ ದಂಪತಿಗಳು ರಂಗಭೂಮಿಯ ಕಲಾವಿದರಿಗೆ ನೆರವಾಗುವಂತೆ, ನಾಟಕಗಳ ಪ್ರದರ್ಶನ ಸುಗಮವಾಗಿರುವಂತೆ ನಾಟಕಮಂದಿರವೊಂದನ್ನು ನಿರ್ಮಿಸಬೇಕೆಂದಿದ್ದರು. ಆ ಯೋಜನೆಯು ಕಾರ್ಯರೂಪಕ್ಕೆ ಬರುವ ಮುಂಚೆಯೇ ಶಂಕರನಾಗ್ ದುರ್ಮರಣಕ್ಕೀಡಾದರು. ಅವರ ಪತ್ನಿ ಅರುಂಧತಿನಾಗ್ ಆ ಯೋಜನೆಯನ್ನು ಮುಂದುವರೆಸಿ, ಕಾರ್ಯರೂಪಕ್ಕೆ ತಂದಿದ್ದಾರೆ. ರಂಗಶಂಕರ, ಬೆಂಗಳೂರಿನ ಜೆ.ಪಿ.ನಗರದಲ್ಲಿ ಕಾರ್ಯನಿರ್ವಹಿಸುತ್ತಿದೆ.

ಪ್ರಶಸ್ತಿಗಳು

೨೦೧೦ರಲ್ಲಿ 57ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳಲ್ಲಿ ನಿರ್ದೇಶಕ ಆರ್.ಬಾಲಕೃಷ್ಣನ್ ಅವರ'ಪಾ'(ಹಿಂದಿ) ಚಿತ್ರದಲ್ಲಿನ ಮನೋಜ್ಞ ಅಭಿನಯಕ್ಕಾಗಿ ಅರುಂಧತಿ ನಾಗ್ ಅವರಿಗೆ ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿ ನೀಡಲಾಗಿದೆ.

ಹೊರಗಿನ ಸಂಪರ್ಕಗಳು

ಈ ಪುಟಗಳನ್ನೂ ನೋಡಿ

ಅರುಂಧತಿ ನಾಗ್: ಬದುಕಿನ ವಿವರಗಳು, ಅರುಂಧತಿನಾಗ್ ಅಭಿನಯದ ಕನ್ನಡ ಚಲನಚಿತ್ರಗಳು, ಅರುಂಧತಿನಾಗ್ ಅಭಿನಯದ ಹಿಂದಿ ಚಲನಚಿತ್ರಗಳು 
ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ:

Tags:

ಅರುಂಧತಿ ನಾಗ್ ಬದುಕಿನ ವಿವರಗಳುಅರುಂಧತಿ ನಾಗ್ ಅರುಂಧತಿನಾಗ್ ಅಭಿನಯದ ಕನ್ನಡ ಚಲನಚಿತ್ರಗಳುಅರುಂಧತಿ ನಾಗ್ ಅರುಂಧತಿನಾಗ್ ಅಭಿನಯದ ಹಿಂದಿ ಚಲನಚಿತ್ರಗಳುಅರುಂಧತಿ ನಾಗ್ ರಂಗಶಂಕರಅರುಂಧತಿ ನಾಗ್ ಪ್ರಶಸ್ತಿಗಳುಅರುಂಧತಿ ನಾಗ್ ಹೊರಗಿನ ಸಂಪರ್ಕಗಳುಅರುಂಧತಿ ನಾಗ್ ಈ ಪುಟಗಳನ್ನೂ ನೋಡಿಅರುಂಧತಿ ನಾಗ್ಕನ್ನಡ ಚಿತ್ರರಂಗಮರಾಠಿಶಂಕರನಾಗ್೧೯೯೦

🔥 Trending searches on Wiki ಕನ್ನಡ:

ಮಂಗಳ (ಗ್ರಹ)ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಗೋಕಾಕ್ ಚಳುವಳಿಹನುಮ ಜಯಂತಿಮಾಹಿತಿ ತಂತ್ರಜ್ಞಾನಗಲ್ಲು ಶಿಕ್ಷೆಭರತನಾಟ್ಯನವರತ್ನಗಳುಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಆರತಿಕನ್ನಡ ರಾಜ್ಯೋತ್ಸವಬಿ. ಎಂ. ಶ್ರೀಕಂಠಯ್ಯಮತದಾನತುಂಗಭದ್ರಾ ಅಣೆಕಟ್ಟುವೆಂಕಟೇಶ್ವರಅಳತೆ, ತೂಕ, ಎಣಿಕೆಸಂಸ್ಕಾರಬೇಸಿಗೆಮಹಿಳೆ ಮತ್ತು ಭಾರತಮಧ್ವಾಚಾರ್ಯಮಳೆಗಾಲನೇಮಿಚಂದ್ರ (ಲೇಖಕಿ)ಜನಪದ ಕಲೆಗಳುಕೇಂದ್ರ ಲೋಕ ಸೇವಾ ಆಯೋಗಚಾಮುಂಡೇಶ್ವರಿ ದೇವಸ್ಥಾನ, ಮೈಸೂರುಕೃಷ್ಣಾ ನದಿಲಕ್ಷ್ಮಣ ತೀರ್ಥ ನದಿಆನೆಹಾಗಲಕಾಯಿಶ್ರೀ ಸಿದ್ದೇಶ್ವರ ಸ್ವಾಮಿಜಿಗಳುಚನ್ನವೀರ ಕಣವಿಭಾರತದ ಸಂವಿಧಾನರಾಜಸ್ಥಾನಚಿತ್ರದುರ್ಗ ಕೋಟೆತಿರುಗುಬಾಣಅರಸಾರಾ ಅಬೂಬಕ್ಕರ್ಮಾಪನಟೊಮೇಟೊವರ್ಗೀಯ ವ್ಯಂಜನವೆಂಕಟರಮಣೇ ಗೌಡ (ಸ್ಟಾರ್ ಚಂದ್ರು)ಗಿರವಿದಾರಶಾಲೆಬಿ.ಜಯಶ್ರೀಜೈನ ಧರ್ಮಬೀದರ್ಮಧ್ಯಕಾಲೀನ ಭಾರತವಿಮರ್ಶೆಚಂಡಮಾರುತರಾಷ್ಟ್ರೀಯ ಭದ್ರತಾ ಪಡೆಅನುಶ್ರೀಸಂಗೀತಭಾರತದ ಇತಿಹಾಸಅಷ್ಟಷಟ್ಪದಿಮಕರ ಸಂಕ್ರಾಂತಿಮೋಕ್ಷಗುಂಡಂ ವಿಶ್ವೇಶ್ವರಯ್ಯಭೂಕಂಪಮಾನಸಿಕ ಆರೋಗ್ಯಮೊಘಲ್ ಸಾಮ್ರಾಜ್ಯರಾಧಿಕಾ ಗುಪ್ತಾಜ್ಯೋತಿಬಾ ಫುಲೆಚಂದ್ರಗುಪ್ತ ಮೌರ್ಯಕರ್ನಾಟಕ ಹೈ ಕೋರ್ಟ್ಹಣ್ಣುಭಾರತದ ಆರ್ಥಿಕ ವ್ಯವಸ್ಥೆಮಾನವನ ಪಚನ ವ್ಯವಸ್ಥೆಕರ್ನಾಟಕದ ಕಲೆ ಮತ್ತು ಸಂಸ್ಕೃತಿನೀನಾದೆ ನಾ (ಕನ್ನಡ ಧಾರಾವಾಹಿ)ಹುಣಸೂರುಕೈವಾರ ತಾತಯ್ಯ ಯೋಗಿನಾರೇಯಣರುಕನ್ನಡ ಅಭಿವೃದ್ಧಿ ಪ್ರಾಧಿಕಾರಮುದ್ದಣಲೋಕಸಭೆಕರ್ನಾಟಕ ಸರ್ಕಾರಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಕನ್ನಡ ಭಾಷಾ ಸಾಹಿತಿಗಳುಹೊಯ್ಸಳ ವಿಷ್ಣುವರ್ಧನರಾಮಮಧುಬನಿ ಕಲೆ🡆 More