ಈ ಚಳುವಳಿ ೧೯೧೬ ರಿಂದ ೧೯೧೮ರ ವರೆಗೆ ಅನ್ನಿ ಬೆಸೆಂಟ್ ಅವರ ನೇತೃತ್ವದಲ್ಲಿ ನಡೆಯಿತು.
೧೯೨೦ ರಲ್ಲಿ ಭಾರತೀಯ ಹೋಂ ರೂಲ್ ಚಳುವಳಿಯು ತನ್ನ ಹೆಸರನ್ನು "ಸ್ವರಾಜ್ಯ ಸಭಾ" ಎಂದು ಬದಲಾಯಿಸಿಕೊಂಡಿತು.
೧೯೦೯ರಲ್ಲಿ ತಂದ ಭಾರತೀಯ ಸರ್ಕಾರ ಆಕ್ಟನಿಂದ ಭಾರತೀಯರಿಗೆ ಯಾವ ಅನುಕೂಲತೆಗಳೂ ಇಲ್ಲದ್ದರಿಂದ ರಾಷ್ಟ್ರೀಯ ನಾಯಕರಲ್ಲಿ ಅದರ ಬಗ್ಗೆ ಅಸಮಾಧಾನ ಏರ್ಪಟ್ಟಿತ್ತು. ಈ ಮಧ್ಯೆ ಭಾರತೀಯ ರಾಷ್ಟ್ರೀಯ ಕಾಂಗ್ರೇಸ್ಸಿನ ವಿಭಜನೆ ಮತ್ತು ಬಾಲ ಗಂಗಾಧರ ತಿಲಕರ ಬಂಧನದಂತಹ ಘಟನೆಗಳಿಂದ ಈ ರಾಷ್ಟ್ರಮಟ್ಟದ ನಾಯಕತ್ವದ ಕೊರತೆಯುಂಟಾಯಿತು. ಇದರಿಂದ ಭಾರತೀಯ ಸ್ವಾತಂತ್ರ್ಯ ಸಂಗ್ರಾಮಕ್ಕೂ ಹಿನ್ನಡೆಯುಂಟಾಗಿತ್ತು. ಈ ಸಮಯದಲ್ಲಿ ಮುನ್ನಲೆಗೆ ಬಂದವರು ಅನ್ನಿ ಬೆಸೆಂಟ್. ಐರ್ಲ್ಯಾಂಡಿನಲ್ಲಿ ಐರಿಷ್ ಹೋಮ್ ಲೀಗನ್ನು ಸ್ಥಾಪಿಸಿದ್ದ ಅವರು ಭಾರತದಲ್ಲಿ ಭಾರತೀಯ ಹೋಮ್ ರೂಲ್ ಲೀಗನ್ನು ೧೯೧೬ರಲ್ಲಿ ಸ್ಥಾಪಿಸಿದರು. ಇದರಲ್ಲಿ ಇವರಲ್ಲದೇ ಭಾರತೀಯ ನಾಯಕರುಗಳಾದ ಬಾಲಗಂಗಾಧರ ತಿಲಕ್, ಮುಸ್ಲಿಂ ಲೀಗ್ ಮತ್ತು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಹಲವು ನಾಯಕರುಗಳೂ ಪಾಲ್ಗೊಂಡರು
ಹೋಮ್ ರೂಲ್ ಲೀಗ್ ಮೂಲಕ ಅನ್ನಿ ಬೆಸೆಂಟ್ ಅವರು ಐರಿಷ್ ಮಾದರಿಯಲ್ಲಿ ಭಾರತಕ್ಕಾಗಿ ಬೇಡಿಕೆಗಳನ್ನು ರೂಪಿಸಿದರು. ಮೊದಲ ಬಾರಿಗೆ ಭಾರತ ಬದಲಾವಣೆಗಾಗಿ ಹೋರಾಡಲು ಒಂದು ರಾಜಕೀಯ ಪಕ್ಷವನ್ನು ಹೊಂದಿತ್ತು. ಕಾಂಗ್ರೆಸ್ನ ಹಾಗಲ್ಲದೇ, ಲೀಗ್ ವರ್ಷ ಪೂರ್ತಿ ಕೆಲಸ ಮಾಡಿತು. ಅದು ಸ್ಥಳೀಯ ಕೇಂದ್ರಗಳ ಒಂದು ಪ್ರಬಲ ವಿನ್ಯಾಸವನ್ನು ರಚಿಸಿತು. ಅವುಗಳನ್ನು ಪ್ರದರ್ಶನಗಳು, ಸಾರ್ವಜನಿಕ ಸಭೆಗಳು ಮತ್ತು ಪ್ರತಿಭಟನೆಗಳನ್ನು ಸಜ್ಜುಗೊಳಿಸಲು ಸಾಧ್ಯವಾಗಿಸಿತು. ಜೂನ್ 1917ರಲ್ಲಿ ಅನ್ನಿಯನ್ನು ಬಂಧಿಸಲಾಯಿತು ಮತ್ತು ಒಂದು ಗಿರಿಧಾಮದಲ್ಲಿ ಕೂಡಿಟ್ಟರು. ಆಕೆಯ ಪ್ರತಿಭಟನೆಯನ್ನು ವ್ಯಕ್ತಪಡಿಸಲು ಅವರು ಉದ್ಯಾನವನದಲ್ಲಿ ಒಂದು ಕೆಂಪು ಮತ್ತು ಹಸಿರು ಬಾವುಟವನ್ನು ಹಾರಿಸಿದರು. ಆಕೆಯನ್ನು ಬಂಧ ಮುಕ್ತಗೊಳಿಸದಿದ್ದರೆ, ಕಾಂಗ್ರೆಸ್ ಮತ್ತು ಮುಸ್ಲಿಂ ಲೀಗ್ ಜೊತೆಯಾಗಿ ಪ್ರತಿಭಟನೆಗಳನ್ನು ಆರಂಭಿಸುವುದಾಗಿ ಹೋಮ್ ರೂಲ್ ಲೀಗ್ ಬೆದರಿಕೆ ಹಾಕಿತು. ಅನ್ನಿಯ ಬಂಧನ ಪ್ರತಿಭಟನೆಗೆ ಒಂದು ಕೇಂದ್ರ ಬಿಂದುವನ್ನು ಸೃಷ್ಟಿಸಿತು. ಭಾರತಕ್ಕಾಗಿ ಧೀರ್ಘ-ಕಾಲದ ಸ್ವಾತಂತ್ರವನ್ನು ಬಯಸುತ್ತಿದ್ದವರಿಗೆ ಒಂದು ಸರಳ, ಸಾಧಿಸಬಲ್ಲ ಗುರಿಗಾಗಿ ಒಟ್ಟಿಗೆ ಕೆಲಸ ಮಾಡುವ ಒಂದು ಅವಕಾಶವನ್ನು ನೀಡಿತು. ಭಾರತೀಯ ಸ್ವ-ಸರ್ಕಾರ ಬ್ರಿಟಿಷ್ ಆಡಳಿತದ ಸರ್ವೋಚ್ಚ ಗುರಿ ಎಂದು ಘೋಷಿಸಿತು ಮತ್ತು ಆ ದಿಕ್ಕಿನಲ್ಲಿ ಕಾರ್ಯಗಳನ್ನು ಅಶ್ವಾಸಿತು. ಅನ್ನಿಯನ್ನು ಸೆಪ್ಟೆಂಬರ್ನಲ್ಲಿ ಬಿಡುಗಡೆ ಮಾಡಲಾಯಿತು ಭಾರತದ ಎಲ್ಲಾ ಕಡೆಯಿಂದ ಜನಸಮೂಹದಿಂದ ಭರ್ಜರಿ ಸ್ವಾಗತ ದೊರೆಯಿತು.
ಬಾಲಗಂಗಾಧರ ತಿಲಕ್ ಅವರು ತಮ್ಮ ಹೋರಾಟಕ್ಕಾಗಿ ೧೯೧೮ರಲ್ಲಿ ಲಂಡನ್ನಿಗೆ ತೆರಳಿದರು. ಅದೇ ಸಂದರ್ಭದಲ್ಲಿ ಬ್ರಿಟಿಷ್ ಸರ್ಕಾರದ ಸುಧಾರಣೆಗಳಿಂದ ಸಮಾಧಾನ ಹೊಂದಿದ ಅನ್ನಿ ಬೆಸೆಂಟರೂ ಕೂಡ ಹೋಮ್ ರೂಲ್ ಲೀಗಿನ ಚಟುವಟಿಕೆಗಳಲ್ಲಿ ನಿಷ್ಕ್ರಿಯರಾದರು. ಅದೇ ಸಂದರ್ಭದಲ್ಲಿ ಮಹಾತ್ಮ ಗಾಂಧಿಯವರು ತಮ್ಮ ಅಸಹಕಾರ ಚಳುವಳಿಗಳಿಂದ ಪ್ರಸಿದ್ಧಿಗೆ ಬರತೊಡಗಿದ್ದರಿಂದ ಹೋಮ್ ರೂಲ್ ಲೀಗಿನ ಮಹತ್ವ ಕಡಿಮೆಯಾಗತೊಡಗಿತು.
ಮಹಾತ್ಮ ಗಾಂಧೀಜಿಯವರ ಪ್ರಭಾವಕ್ಕೆ ಒಳಗಾದ ಹೋಂ ರೂಲ್ ಲೀಗಿನ ಸದಸ್ಯರು ೧೯೨೦ರಲ್ಲಿ ಅವರನ್ನು ಅಧ್ಯಕ್ಷರನ್ನಾಗಿ ಆರಿಸಿದರು. ಆಗ ಅದರ ಹೆಸರನ್ನು "ಸ್ವರಾಜ್ಯ ಸಭಾ" ಎಂದು ಬದಲಾಯಿಸುವುದರೊಂದಿಗೆ ಅದು ಗಾಂಧೀಜಿಯವರ ಸ್ವಾತಂತ್ರ್ಯ ಹೋರಾಟದ ಪ್ರಯತ್ನಗಳಲ್ಲಿ ವಿಲೀನಗೊಂಡಿತು.
This article uses material from the Wikipedia ಕನ್ನಡ article ಹೋಮ್ ರೂಲ್ ಚಳುವಳಿ, which is released under the Creative Commons Attribution-ShareAlike 3.0 license ("CC BY-SA 3.0"); additional terms may apply (view authors). ವಿಶೇಷವಾಗಿ ಟಿಪ್ಪಣಿ ಮಾಡದಿದ್ದ ಹೊರತು ಪಠ್ಯ "CC BY-SA 4.0" ರಡಿ ಲಭ್ಯವಿದೆ. Images, videos and audio are available under their respective licenses.
®Wikipedia is a registered trademark of the Wiki Foundation, Inc. Wiki ಕನ್ನಡ (DUHOCTRUNGQUOC.VN) is an independent company and has no affiliation with Wiki Foundation.