ಸೋಮವಾರಪೇಟೆ

ಕೊಡ್ಲಿಪೇಟ್ ಗ್ರಾಮವು ಭಾರತದ ಕರ್ನಾಟಕ ರಾಜ್ಯದ ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕಿನಲ್ಲಿದೆ.

ಇದು ಮೈಸೂರು ವಿಭಾಗಕ್ಕೆ ಸೇರಿದೆ. ಇದು ಜಿಲ್ಲಾ ಕೇಂದ್ರವಾದ ಮಡಿಕೇರಿಯಿಂದ ಉತ್ತರಕ್ಕೆ 52 ಕಿಮೀ ದೂರದಲ್ಲಿದೆ. ಸೋಮವಾರಪೇಟೆಯಿಂದ 21 ಕಿ.ಮೀ. ರಾಜ್ಯದ ರಾಜಧಾನಿ ಬೆಂಗಳೂರಿನಿಂದ 217 ಕಿ.ಮೀ

ಕೊಡ್ಲಿಪೇಟ್ ಪಿನ್ ಕೋಡ್ 571231 ಮತ್ತು ಅಂಚೆ ಕೇಂದ್ರ ಕಛೇರಿ ಕೊಡ್ಲಿಪೇಟೆ.

ಶನಿವಾರಸಂತೆ (9 ಕಿಮೀ) ಕೊಡ್ಲಿಪೇಟೆಗೆ ಸಮೀಪದ ಗ್ರಾಮಗಳು. ಕೊಡ್ಲಿಪೇಟೆಯು ಉತ್ತರಕ್ಕೆ ಆಲೂರು ತಾಲೂಕು, ದಕ್ಷಿಣಕ್ಕೆ ಸೋಮವಾರಪೇಟೆ ತಾಲೂಕು, ಪೂರ್ವಕ್ಕೆ ಅರಕಲಗೂಡು ತಾಲೂಲ್, ಪೂರ್ವಕ್ಕೆ ಹಾಸನ ತಾಲೂಕು ಸುತ್ತುವರಿದಿದೆ.

ಸಕಲೇಶಪುರ, ಹಾಸನ, ಮಡಿಕೇರಿ, ಚಿಕ್ಕಮಗಳೂರು ನಗರಗಳು ಕೊಡ್ಲಿಪೇಟೆಗೆ ಸಮೀಪದಲ್ಲಿದೆ.

ಕೊಡ್ಲಿಪೇಟೆಯ ಜನಸಂಖ್ಯಾಶಾಸ್ತ್ರ

ಕನ್ನಡ ಇಲ್ಲಿ ಸ್ಥಳೀಯ ಭಾಷೆ.

ಕೊಡ್ಲಿಪೇಟೆಯಲ್ಲಿ ರಾಜಕೀಯ

ಭಾರತೀಯ ಜನತಾ ಪಕ್ಷ, ಜೆಡಿ (ಎಸ್), ಬಿಜೆಪಿ, ಭಾರತೀಯ ಜನತಾ ಪಕ್ಷ (ಬಿಜೆಪಿ), ಐಎನ್‌ಸಿ ಈ ಪ್ರದೇಶದಲ್ಲಿ ಪ್ರಮುಖ ರಾಜಕೀಯ ಪಕ್ಷಗಳಾಗಿವೆ.

ಪ್ರವಾಸಿ ಸ್ಥಳಗಳು

ಸೋಮವಾರಪೇಟೆ 
ಮಲ್ಲಳ್ಳಿ ಜಲಪಾತದ ನೋಟ ೬೨ ಮೀ (೨೦೫ ಅಡಿ)

ಮಲ್ಲಳ್ಳಿ ಜಲಪಾತ(ಫಾಲ್ಸ್ )

. ಮಲ್ಲಳ್ಳಿ ಜಲಪಾತ ಸೋಮವಾರಪೇಟೆಯಿಂದ ೨೫ ಕಿ.ಮೀ ದೂರದಲ್ಲಿದೆ.

ಮಲ್ಲಳ್ಳಿ ಜಲಪಾತವು ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನಲ್ಲಿದೆ.ಈ ಜಲಪಾತವು

ಅತ್ಯಂತ ಸುಂದರವಾಗಿದೆ. ಇದು ಮುಖ್ಯವಾಗಿ ಪ್ರವಾಸಿ ತಾಣವಾಗಿದೆ. ಇಲ್ಲಿಗೆ ಹಲವಾರು ಪ್ರವಾಸಿಗರು

ಭೇಟಿ ನೀಡಿ ಆನಂದಿಸುತ್ತಾರೆ. ಹಾಗೆಯೇ ಇದೊಂದು

ಹೆಸರುವಾಸಿ ಜಲಪಾತವಾಗಿದೆ.

ಸೋಮವಾರಪೇಟೆ 
ಪುಫ್ಪಗಿರಿ ಬೆಟ್ಟದಿಂದ ನೋಡಿದಾಗ
ಸೋಮವಾರಪೇಟೆ 
ಪುಷ್ಪಗಿರಿ

ಪುಷ್ಪಗಿರಿ

ಸೋಮವಾರಪೇಟೆಯಿಂದ ೩೦ ಕಿ.ಮೀ ದೂರದಲ್ಲಿ ಕುಕ್ಕೆ ಸುಬ್ರಮಣ್ಯ ಕಡೆಗಿನ ರಸ್ತೆಯಲ್ಲಿದೆ.ಹಲವಾರು ವನ್ಯ ಜೀವಿಗಳ ತವರೂರು.

ಸೋಮವಾರಪೇಟೆ 
ಗವಿಬೆಟ್ಟದಿಂದ ಹೊನ್ನಮ್ಮನ ಕೆರೆಯ ನೋಟ

ಹೊನ್ನಮ್ಮನ ಕೆರೆ

ಸೋಮವಾರಪೇಟೆಯಿಂದ ೬ ಕಿಮಿ ದೂರದಲ್ಲಿದೆ. ಈ ಜಾಗವು ಒಂದು ಪ್ರವಾಸಿ ಹಾಗು ಪಾರಂಪರಿಕ ಜಾಗವೆಂದು ಹೆಸರುವಾಸಿಯಾಗಿದೆ. ಇದರ ಸುತ್ತಲು ಬೆಟ್ಟಗಳಿವೆ ಇದರಲ್ಲಿ 'ಮೋರಿ' ಹಾಗು 'ಗವಿ' ಬೆಟ್ಟಗಳು ಬಹಳ ಹೆಸರುವಾಸಿ.

ಸೋಮವಾರಪೇಟೆ ಪಟ್ಟಣದಲ್ಲೀ ಸಾಕಮ್ಮನ ಬಂಗಲೆ ಇದ್ದು ಹಳೆಯ ಐತಿಹಾಸಿಕ ಕಟ್ಟಡದ ಮಾದರಿ ಶೈಲಿಯಲ್ಲಿದೆ.

ಪಟ್ಟಣದಲ್ಲಿ ಹಾಗೂ ಸಮೀ ಹಲವಾರು ದೇವಸ್ಥಾನ (ಇದರಲ್ಲಿ ಚೌಡ್ಲು ಗ್ರಾಮ & ಸಮೀಪ ಹಲವಾರು ಹಳೆಯ ಕಾಲದ ಐತಿಹಾಸಿಕ ಕೆತ್ತನೆ ಗಳು & ದೇವಸ್ಥಾನ ದ ಪಳೆಯುಳಿಗಳು ಇವೆ.), ಮಸೀದಿ & ದರ್ಗಾ (ಸೋಮವಾರಪೆಟೆ ಪಟ್ಟಣದ ಮಧ್ಯದಲ್ಲಿ ಇಸ್ಲಾಂ ನ ಸೂಫಿ ಪರಪರೆಯ ಸಂತರಾದ ಹಜರತ್ ಮಲಂಗ್ ಷಾರವರ ದರ್ಗಾ ಇದೆ). ಚರ್ಚ್ ( ವಿನೂತನ ಶೈಲಿಯ ಚರ್ಚ್ ಗಮನಸೆಳೆಯುತ್ತದೆ)

ದೇವಸ್ಥಾನಗಳು

ಮಲೇ ಮಲ್ಲೇಶ್ವರ ದೇವಸ್ಥಾನ

       ಕೊಡಗು ಜಿಲ್ಲೆ ಸೋಮವಾರಪೇಟೆ ತಾಲೂಕಿನಲ್ಲಿ ಬರುವಂತಹ ಒಂದು ಪುಟ್ಟ ಗ್ರಾಮ ಮಳೆಮಲ್ಲೇಶ್ವರ ಈ ಗ್ರಾಮದ ವಿಶೇಷತೆ ಏನೆಂದರೆ ಮಾದೇಶ್ವರ ಬೆಟ್ಟದಲ್ಲಿ ಶಿವನ ಮೂರ್ತಿ ಉಗಮವಾಗಿದ್ದು ಹಾಗೂ ನಂದಿ  ಮೂರ್ತಿಗಳ ಉಗಮಸ್ಥಾನವಾಗಿದೆ ಇಲ್ಲಿ ವರ್ಷಕ್ಕೊಮ್ಮೆ ಅಂದರೆ ಫೆಬ್ರವರಿ ತಿಂಗಳಿನಲ್ಲಿ ಆಗುವಂತಹ ಮಹಾಶಿವರಾತ್ರಿಯ ದಿನದಂದು ಅದ್ದೂರಿಯಾಗಿ ಶಿವನ ಆರಾಧನೆ ನಡೆಯುತ್ತದೆ ಆರಾಧನೆಗೆ ಹತ್ತಿರದ ಗ್ರಾಮದಿಂದ ಹಲವಾರು ಭಕ್ತಾದಿಗಳು ಬಂದು ಶಿವನ ದರ್ಶನವನ್ನು ಪಡೆದು ಸಂತೃಪ್ತರಾಗುತ್ತಾರೆ ಹಾಗೆಯೇ ಬೆಟ್ಟದ ತುದಿಯಿಂದ ಸುತ್ತಲಿನ ಪರಿಸರವನ್ನು ಕಣ್ತುಂಬಿಕೊಳ್ಳಬಹುದು. 

ಸಿದ್ದಲಿಂಗಪುರ

ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೋಕಿನ ಒಂದು ಪುಟ್ಟ ಹಳ್ಳಿ ಸಿದ್ದಲಿಂಗಪುರ. ಸಿದ್ದಲಿಂಗೀಶ್ವರ ದೇವರು ನೇಲೆಸಿರುವುದರಿಂದ ಈ ಊರಿಗೆ ಸಿದ್ದಲಿಂಗಪುರ ಎಂಬ ಹೆಸರು ಬಂದಿರುತ್ತದೆ. ಸಿದ್ದಲಿಂಗಪುರ ಗ್ರಾಮ ಅರಣ್ಯ ಪ್ರದೇಶದ ಮದ್ಯ ಭಾಗದಲ್ಲಿ ಇರುವ ಒಂದು ಸುಂದರ ಹಳ್ಳಿಯಾಗಿದೆ. ಈ ಊರಿನ ಸುತ್ತ-ಮುತ್ತ  ಅರಣ್ಯ ಪ್ರದೇಶ ಗೀಡ ಮರ ಬೆಟ್ಟಗಳ ಸಾಲುಗಳು ಕಂಡು ಪ್ರಾಣಿಗಳು ಸುಂದರ ಪಕ್ಷಿಗಳು ನೇಲಸಿರುವ ಪ್ರದೇಶವಾಗಿರುತ್ತದೆ ಈ ಊರು ಸೋಮವಾರಪೇಟೆ ತಾಲೋಕು ಇಂದ 20 ಕಿಲೋಮೀಟರ್, ಕುಶಾಲನಗರದಿಂದ 17 ಕಿಲೋಮೀಟರ್ ಮದ್ಯದಲ್ಲಿ ಇರುತ್ತಾದೆ.

ಈ ಹಳ್ಳಿಯಲ್ಲಿ ಪ್ರಾಥಮಿಕ ಶಾಲೆ, ಮಹಿಳಾ ಹಾಲು ಶೇಕರಣ ಕೇಂದ್ರ(ಡೈರಿ), ಸಿದ್ದಲಿಂಗೇಶ್ವರ ಬನ, ಚಾಮುಂಡೆಶ್ವರಿ ದೇವಸ್ಥಾನ, ಚಚಱ ಇರುತ್ತದೆ. ಈ ಹಳ್ಳಿಯ ಜನರು ಕೃಷಿಯನ್ನು ಅವಲಂಬಿಸಿದರೆ. ಜೋಳ, ಕಾಫಿ, ಮೇಣಸು, ತೇಂಗು, ಶುಠಿ, ಮುಂತಾದ ಬೆಳೆಗಳನ್ನು ಬೆಳೆಯುತ್ತರೆ.

ಮಕ್ಕಳ ಗುಡಿ ಬೆಟ್ಟ

ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕಿನ ತಾಕೇರಿ ಎಂಬ ಗ್ರಾಮದಲ್ಲಿ ಇರುವಂತಹ ಒಂದು ಪ್ರವಾಸಿ ತಾಣವಾಗಿದೆ. ಇದು ಸೋಮವಾರಪೇಟೆಯಿಂದ ಸುಮಾರು ಇಪ್ಪತ್ತು ಕಿಲೋಮೀಟರ್ ದೂರದಲ್ಲಿದೆ. ಈ ಮಕ್ಕಳ ಗುಡಿ ಬೆಟ್ಟ ಬೆಟ್ಟ ಗುಡ್ಡಗಳಿಂದ ಕೂಡಿದ ಒಂದು ಪ್ರೇಕ್ಷಣೀಯ ಸ್ಥಳವಾಗಿದೆ. ಇಲ್ಲಿಗೆ ಮಕ್ಕಳ ಗುಡಿ ಬೆಟ್ಟ ಎಂಬ ಹೆಸರು ಬರಲು ಕಾರಣವೇನೆಂದರೆ ಹಿಂದಿನ ಕಾಲದಲ್ಲಿ ಮಕ್ಕಳು ಇಲ್ಲಿಗೆ ಆಟವಾಡಲೆಂದು ದನಗಳನ್ನು ಮೇಯಿಸುತ್ತಾ ಮತ್ತು ಬೆಟ್ಟದ ಸಮೀಪ ಪ್ರತಿನಿತ್ಯ ಬರುತ್ತಿದ್ದರು. ಅಲ್ಲಿ ಮಕ್ಕಳು ಆಟವಾಡುತ್ತ ಚಿಕ್ಕ ಚಿಕ್ಕ ಕಲ್ಲುಗಳಿಂದ ಗುಡಿಯನ್ನು ಕಟ್ಟಿದರು. ದಿನನಿತ್ಯ ಮಕ್ಕಳು ಹಾಗೆಯೇ ಮುಂದುವರಿಸುತ್ತಾ ಮತ್ತು ಗುಡಿಗೆ ಪೂಜೆಯನ್ನು ಮಾಡುತ್ತಿದ್ದರು. ತದನಂತರ ಅದು ಹಾಗೆಯೇ ಮುಂದುವರಿದು ಮತ್ತು ಬೆಟ್ಟಕ್ಕೆ ಯಾರೇ ಹೋದರೂ ಒಂದು ಕಲ್ಲನ್ನು ಇಟ್ಟು ಬರುವಂತದ್ದು ಒಂದು ಸಂಪ್ರದಾಯವಾಗಿ ಇಂದಿಗೂ ಮುಂದುವರಿಸುತ್ತಾ ಬಂದಿದೆ. ಅಲ್ಲದೆ ಆ ಗುಡಿಯ ಒಳಗೆ ನಾಣ್ಯಗಳನ್ನು ಹಾಕಿದರೆ ಅದು ಒಂದು ರೀತಿಯ ವಿಶೇಷವಾದ ಶಬ್ದವನ್ನು ಕೇಳಬಹುದು. ಪ್ರಸ್ತುತ ದಿನಗಳಲ್ಲಿ ಈ ಮಕ್ಕಳಗುಡಿ ಬೆಟ್ಟವು ಕಲ್ಲುಗಳಿಂದ ನಿರ್ಮಿತ ವಾದ ಒಂದು ಬೃಹತ್ ಗುಡಿಯಾಗಿ ನಿರ್ಮಿತ ವಾಗಿರುವುದನ್ನು ನಾವು ನೋಡಬಹುದು.

ಸೋಮವಾರಪೇಟೆ 
ಕೊಡಗು ತಾಲ್ಲೂಕುಗಳು
ಮಡಿಕೇರಿ | ಸೋಮವಾರಪೇಟೆ | ವಿರಾಜಪೇಟೆ

Tags:

ಸೋಮವಾರಪೇಟೆ ಪ್ರವಾಸಿ ಸ್ಥಳಗಳುಸೋಮವಾರಪೇಟೆ ದೇವಸ್ಥಾನಗಳುಸೋಮವಾರಪೇಟೆ ಸಿದ್ದಲಿಂಗಪುರಸೋಮವಾರಪೇಟೆ ಮಕ್ಕಳ ಗುಡಿ ಬೆಟ್ಟಸೋಮವಾರಪೇಟೆ

🔥 Trending searches on Wiki ಕನ್ನಡ:

ಮಾಹಿತಿ ತಂತ್ರಜ್ಞಾನಹಿಂದೂ ಧರ್ಮಕೈಗಾರಿಕೆಗಳುಬ್ಯಾಂಕ್ವಿವಾಹಚೆನ್ನಕೇಶವ ದೇವಾಲಯ, ಬೇಲೂರುಕರ್ನಾಟಕ ಜನಪದ ನೃತ್ಯಹನುಮಾನ್ ಚಾಲೀಸದ.ರಾ.ಬೇಂದ್ರೆಅದ್ವೈತಪ್ಯಾರಾಸಿಟಮಾಲ್ಪಾಪಹಾ.ಮಾ.ನಾಯಕಕುಮಾರವ್ಯಾಸಉಪ್ಪಾರಕರ್ನಾಟಕದಲ್ಲಿ ಪಂಚಾಯತ್ ರಾಜ್ಆಂಧ್ರ ಪ್ರದೇಶಯಶ್(ನಟ)ಸಹಕಾರಿ ಸಂಘಗಳುಪೂರ್ಣಚಂದ್ರ ತೇಜಸ್ವಿಋಗ್ವೇದಭಾರತೀಯ ಸಂವಿಧಾನದ ತಿದ್ದುಪಡಿಮಂಕುತಿಮ್ಮನ ಕಗ್ಗವಿರಾಟ್ ಕೊಹ್ಲಿಭೂಮಿ ದಿನಷಟ್ಪದಿತಾಳೀಕೋಟೆಯ ಯುದ್ಧಧೃತರಾಷ್ಟ್ರಯು.ಆರ್.ಅನಂತಮೂರ್ತಿಕರ್ನಾಟಕದ ನದಿಗಳುಹಸ್ತ ಮೈಥುನಶನಿ (ಗ್ರಹ)ಯೇಸು ಕ್ರಿಸ್ತಸಂಭೋಗಅನುಶ್ರೀಚಾಲುಕ್ಯಕರ್ನಾಟಕದ ಜಿಲ್ಲೆಗಳುಊಳಿಗಮಾನ ಪದ್ಧತಿಪಂಚ ವಾರ್ಷಿಕ ಯೋಜನೆಗಳುಪಿತ್ತಕೋಶದಾಸವಾಳರವಿಚಂದ್ರನ್ಮಾಟ - ಮಂತ್ರಪರಶುರಾಮಕನ್ನಡ ಗುಣಿತಾಕ್ಷರಗಳುರಾಷ್ಟ್ರೀಯ ಉತ್ಪನ್ನಸಾಗುವಾನಿಚಿಕ್ಕಬಳ್ಳಾಪುರಭಾರತದ ಜನಸಂಖ್ಯೆಯ ಬೆಳವಣಿಗೆಕುವೆಂಪುದಯಾನಂದ ಸರಸ್ವತಿಖೊಖೊಬೆಲ್ಲಪೆಟ್ರೋಮ್ಯಾಕ್ಸ್ (ಚಲನಚಿತ್ರ)ಗ್ರಾಮ ಪಂಚಾಯತಿಕರ್ನಾಟಕದ ವಿಧಾನ ಸಭಾ ಕ್ಷೇತ್ರಗಳುಕ್ಯಾನ್ಸರ್ಡಾ ಬ್ರೋಭಾರತದ ರಾಷ್ಟ್ರಪತಿಗಳ ಪಟ್ಟಿಮಂಗಳೂರುಮಾದಿಗಇಮ್ಮಡಿ ಪುಲಿಕೇಶಿಜ್ಯೋತಿಷ ಶಾಸ್ತ್ರದ ನಕ್ಷತ್ರಗಳುಕರ್ನಾಟಕದ ಸಂಸ್ಕೃತಿಸೆಕೆಂಡರಿ ಸ್ಕೂಲ್ ಲೀವಿಂಗ್ ಸರ್ಟಿಫಿಕೇಟ್ಮಂಜುಳಶಾಸ್ತ್ರೀಯ ಭಾಷೆಬೀಚಿಕೊಡಗಿನ ಗೌರಮ್ಮರಗಳೆಬರಗೂರು ರಾಮಚಂದ್ರಪ್ಪವಿಕಿಪೀಡಿಯಪಿ.ಲಂಕೇಶ್ಮಧ್ವಾಚಾರ್ಯಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಭಾರತೀಯ ಭಾಷೆಗಳುಭಾರತದ ಆರ್ಥಿಕ ವ್ಯವಸ್ಥೆ🡆 More