ಸೋಂದಾ

ಸೋಂದಾ ಕ್ಷೇತ್ರವು ಕರ್ನಾಟಕದಲ್ಲಿರುವ ಪವಿತ್ರ ಸ್ಥಳಗಳಲ್ಲಿ ಒಂದು.

ವಿವಿಧ ಪ್ರದೇಶದ ಜನರಿಂದ ಸೋಂದಾ, ಸೋದೆ, ಸ್ವಾದಿ ಮುಂತಾದ ಹೆಸರಿನಿಂದ ಕರೆಯಲ್ಪಡುವ ಈ ಸ್ಥಳವು ಉತ್ತರ ಕನ್ನಡ ಜಿಲ್ಲೆಯ ಸಿರ್ಸಿ ಸಮೀಪವಿದೆ. ಇದು ಬೆಂಗಳೂರಿನಿಂದ 450 ಕಿ.ಮೀ. ಮತ್ತು ಉತ್ತರ ಕನ್ನಡ ಜಿಲ್ಲೆಯ ಸಿರ್ಸಿ ನಗರದಿಂದ 25 ಕಿಲೋ ಮೀಟರ್ ದೂರದಲ್ಲಿದೆ. ಸಿರ್ಸಿಯಿಂದ ತಲುಪಲು ಸಾಕಷ್ಟು ರಾಜ್ಯ ಸಾರಿಗೆ ಬಸ್ ಮತ್ತು ಖಾಸಗಿ ವಾಹನಗಳ ಸೌಕರ್ಯ ಇದೆ. ಇಲ್ಲಿ ಮಾಧ್ವ ಯತಿಗಳಲ್ಲೊಬ್ಬರಾದ ಮತ್ತು ದಾಸ ಸಾಹಿತ್ಯದಲ್ಲಿಯೂ ಕೊಡುಗೆ ಸಲ್ಲಿಸಿರುವ ವಾದಿರಾಜರ ಬೃಂದಾವನವಿದೆ. ಇಲ್ಲಿ ಶ್ರೀ ಜೈನಮಠ ಮತ್ತು ಶ್ರೀ ಸ್ವಣ೯ವಲ್ಲಿಮಠಗಳೂ ಇವೆ. ಇದು ಪ್ರಕೃತಿ ಸೌಂದರ್ಯ ವೀಕ್ಷಣಿಗೂ ಸೂಕ್ತ ಸ್ಥಳವಾಗಿದೆ.

ಸೋಂದಾ (ಸೋದೆ)
ಹಳ್ಳಿ
Countryಸೋಂದಾ ಭಾರತ
ರಾಜ್ಯಕರ್ನಾಟಕ
ಜಿಲ್ಲೆಉತ್ತರ ಕನ್ನಡ
Languages
 • OfficialKannada
ಸಮಯ ವಲಯಯುಟಿಸಿ+5:30 (IST)
Nearest citySirsi
ಸೋಂದಾ
ಧವಳ ಗಂಗಾ ಸರೋವರ

ಈ ಕ್ಷೇತ್ರದಲ್ಲಿ ವಾದಿರಾಜರ ಬೃಂದಾವನವಲ್ಲದೆ, ತ್ರಿವಿಕ್ರಮ ದೇವರ ಮತ್ತು ಭೂತರಾಜರ ಗುಡಿಗಳಿವೆ. ತ್ರಿವಿಕ್ರಮ ದೇವರ ಗುಡಿಯಲ್ಲಿ ವಾದಿರಾಜರು ಪೂಜೆ ಸಲ್ಲಿಸುತ್ತಿದ್ದರೆಂದು ಹೇಳಲಾಗುತ್ತದೆ.ವಾದಿರಾಜರಿಗೆ ಸಂಬಂಧಿಸಿದ ಕೆಲವು ಕೃತಿ, ಹಾಡುಗಳಲ್ಲಿ ಈಬಗ್ಗೆ ಉಲ್ಲೇಖಿಸಲಾಗಿದೆ.

ಭೂತರಾಜರ ಗುಡಿ

ಇಲ್ಲಿರುವ ಭೂತರಾಜರ ಗುಡಿಗೆ ಸಂಬಂಧಿಸಿದಂತೆ ಅನೇಕ ದಂತಕಥೆಗಳಿವೆ. ತನ್ನ ಪ್ರಶ್ನೆಗಳ ಮೂಲಕ ವಾದಿರಾಜರನ್ನು ಸೋಲಿಸಿ, ಅವರಿಗೆ ಉಪದ್ರ ಕೊಡಬೇಕೆಂದು ಬಂದ ಭೂತಕ್ಕೆ ತಕ್ಕ ಉತ್ತರ ಕೊಟ್ಟು ವಾದಿರಾಜರು ಅದನ್ನು ಸೋಲಿಸಿದರೆಂಬ ಪ್ರತೀತಿ ಇದೆ. ಆ ಕಾರಣದಿಂದ ಭೂತ ವಾದಿರಾಜರ ಸೇವಕನಾಗಿ, ಈ ಕ್ಷೇತ್ರದಲ್ಲಿ ನೆಲೆಸಿದೆ ಎಂದು ಸ್ಥಳೀಯರ ನಂಬಿಕೆಯಾಗಿದೆ. ಈಗಲೂ ಮಾನಸಿಕ ರೋಗಗಳಿಂದ ನರಳುತ್ತಿರುವ( ದೆವ್ವ ಹಿಡಿದವರು ಎಂದು ಹೇಳಲಾಗುವವರು) ಜನರನ್ನು ಈ ಸ್ಥಳಕ್ಕೆ ಕರೆತರಲಾಗುತ್ತದೆ. ಅವರು ಭೂತರಾಜರಿಗೆ ಹರಕೆ,ಸೇವೆಗಳನ್ನು ಸಲ್ಲಿಸುವುದರಿಂದ ಅವರ ಮನೋವಿಕಾರಗಳು ದೂರವಾಗುತ್ತದೆ ಎಂದು ಜನರ ನಂಬಿಕೆಯಾಗಿದೆ. ವಾದಿರಾಜರ ಬೃಂದಾವನದ ಸಮೀಪದಲ್ಲಿ ಧವಳ ಗಂಗಾ ಎಂಬ ಸರೋವರವಿದೆ. ಈ ಕೊಳದ ಒಂದು ಮೂಲೆಯನ್ನು ಭೂತರಾಜರ ಸ್ಥಳ ಎಂದು ಕರೆಯಲಾಗುತ್ತದೆ. ಆ ಸ್ಥಳವನ್ನು ಜನರು ಉಪಯೋಗಿಸುವುದಿಲ್ಲ. ವಾದಿರಾಜರು ಧವಳ ಗಂಗೆಯ ಗಂಗಾಧರ ಮಹಾಲಿಂಗ ಎಂದು ಶಿವನನ್ನು ಸ್ತುತಿಸಿರುವ ಕೀರ್ತನೆಯು ಇದೇ ಸರೋವರದ ಕುರಿತಾಗಿದೆ.

ತಪೋವನ

ಸೋಂದಾ 
ತಪೋವನ

ದಟ್ಟ ಕಾಡಿನ ನಡುವೆ ಇರುವ ಒಂದು ಪ್ರದೇಶದಲ್ಲಿ ವಾದಿರಾಜರು ತಪಸ್ಸು ಮಾಡುತ್ತಿದ್ದರೆಂದು ಹೇಳಲಾಗುತ್ತದೆ. ಶಾಲ್ಮಲಾ ನದಿ ಇಲ್ಲಿ ಸಣ್ಣದಾಗಿ ಹರಿಯತ್ತದೆ. ನದಿ ತೀರದ ಬಂಡೆಯೊಂದರೆಲ್ಲಿ ವಾದಿರಾಜರ ಇಷ್ಟ ದೈವವಾದ ಹಯಗ್ರೀವ ದೇವರ ಚಿತ್ರವನ್ನು ಕಾಣಬಹುದಾಗಿದೆ. ==ಹತ್ತಿರದ ಪ್ರೇಕ್ಷಣೀಯ ಸ್ಥಳಗಳು== ಶ್ರೀ ಸ್ವರ್ಣವಲ್ಲೀ ಮಠ, ಶ್ರೀ ವಾದಿರಾಜ ಮಠ, ಜೈನ ಮಠ, ವೆಂಕಟರಮಣ ದೇವಸ್ಥಾನ, ಶಂಕರನಾರಾಯಣ ದೇವಸ್ಥಾನ, ಸದಾಶಿವ ದೇವಸ್ಥಾನ, ಸಿರ್ಸಿಯ ಮಾರಿಕಾಂಬಾ ದೇವಸ್ಥಾನ, ಸಹಸ್ರಲಿಂಗ ಮತ್ತು ಯಾಣ ಇಲ್ಲಿಗೆ ಹತ್ತಿರದ ಪ್ರೇಕ್ಷಣೀಯ ಸ್ಥಳಗಳು.

Tags:

ಉತ್ತರ ಕನ್ನಡಕರ್ನಾಟಕವರ್ಗ:ದಾಸ ಸಾಹಿತ್ಯವಾದಿರಾಜರುಶ್ರೀ ಮಧ್ವಾಚಾರ್ಯರುಸಿರ್ಸಿ

🔥 Trending searches on Wiki ಕನ್ನಡ:

ಪಠ್ಯಪುಸ್ತಕಸಾರಜನಕಉತ್ಪಾದನೆಯ ವೆಚ್ಚಪ್ರಬಂಧ ರಚನೆವಿಜಯದಾಸರುಈರುಳ್ಳಿದ್ವಿಗು ಸಮಾಸಕೇಶಿರಾಜಪು. ತಿ. ನರಸಿಂಹಾಚಾರ್ಆತ್ಮರತಿ (ನಾರ್ಸಿಸಿಸಮ್‌)ರಾಘವಾಂಕಟಿ.ಪಿ.ಕೈಲಾಸಂಜನಪದ ಕಲೆಗಳುಚುನಾವಣೆಸುಭಾಷ್ ಚಂದ್ರ ಬೋಸ್ಅಕ್ಕಮಹಾದೇವಿಭಾರತೀಯ ರಿಸರ್ವ್ ಬ್ಯಾಂಕ್ಶ್ರೀಶೈಲಪಂಚಾಂಗಬರವಣಿಗೆಮಾಧ್ಯಮಕನ್ನಡ ರಂಗಭೂಮಿಚೆನ್ನಕೇಶವ ದೇವಾಲಯ, ಬೇಲೂರುಕಾದಂಬರಿಕರ್ನಾಟಕದ ಮುಖ್ಯಮಂತ್ರಿಗಳುಬಾಲ್ಯ ವಿವಾಹಯಲ್ಲಮ್ಮ ದೇವಿ ದೇವಸ್ಥಾನ ಸವದತ್ತಿತಮಿಳುನಾಡುಭಾರತ ಸಂವಿಧಾನದ ಪೀಠಿಕೆಆಟಿಸಂಬಾದಾಮಿಶಿವವಿವಾಹಸಾರಾ ಅಬೂಬಕ್ಕರ್ಯಜಮಾನ (ಚಲನಚಿತ್ರ)ಭಗತ್ ಸಿಂಗ್ಕಾಳಿದಾಸಮಾಸ್ತಿ ವೆಂಕಟೇಶ ಅಯ್ಯಂಗಾರ್ಅಲಂಕಾರಕೃತಕ ಬುದ್ಧಿಮತ್ತೆಕನಕಪುರಬೆಕ್ಕುಟೈಗರ್ ಪ್ರಭಾಕರ್ಮಾದರ ಚೆನ್ನಯ್ಯಝೊಮ್ಯಾಟೊಭಾರತ ಸರ್ಕಾರರಾಮ ಮಂದಿರ, ಅಯೋಧ್ಯೆಸೀತಾ ರಾಮವಿದುರಾಶ್ವತ್ಥಶಬ್ದಮಣಿದರ್ಪಣಬಾಳೆ ಹಣ್ಣುಯಕೃತ್ತುಕಪ್ಪೆಚಿಪ್ಪುಭ್ರಷ್ಟಾಚಾರಶೂದ್ರ ತಪಸ್ವಿಪ್ಲೇಟೊಉಪ್ಪಿನ ಸತ್ಯಾಗ್ರಹಸಂಸ್ಕಾರಭಾವನಾ(ನಟಿ-ಭಾವನಾ ರಾಮಣ್ಣ)ನಯಸೇನಕನ್ನಡ ಗುಣಿತಾಕ್ಷರಗಳುತತ್ಸಮ-ತದ್ಭವಧಾರವಾಡಪ್ರಬಂಧನುಗ್ಗೆ ಕಾಯಿಉದಯವಾಣಿಭಾರತದ ಮುಖ್ಯ ನ್ಯಾಯಾಧೀಶರುನುಗ್ಗೆಕಾಯಿರಾಮಾಚಾರಿ (ಕನ್ನಡ ಧಾರಾವಾಹಿ)ಭಾರತದ ಚುನಾವಣಾ ಆಯೋಗಬಂಡಾಯ ಸಾಹಿತ್ಯಶ್ರೀಕೃಷ್ಣದೇವರಾಯಸೂರ್ಯಮಲೆನಾಡುಭಾರತರಕ್ತಪಿಶಾಚಿಕರ್ನಾಟಕ ಜನಪದ ನೃತ್ಯ🡆 More