ಸತ್ಯಮೇವ ಜಯತೆ (सत्यमेव जयते; ಅಂದರೆ ಸತ್ಯವೊಂದೇ ಸದಾ ಗೆಲ್ಲುತ್ತದೆ) ಇದು ಪ್ರಾಚೀನ ಭಾರತೀಯ ಗ್ರಂಥ ಮುಂಡಕ ಉಪನಿಷತ್ತಿನಲ್ಲಿನ ಒಂದು ಮಂತ್ರ.
ಭಾರತ ದೇಶವು ಸ್ವಾತಂತ್ರ್ಯ ಪಡೆದಾಗ, ಇದನ್ನು ಭಾರತದ ರಾಷ್ಟ್ರೀಯ ಧ್ಯೇಯ ವಾಕ್ಯವನ್ನಾಗಿ ಅಳವಡಿಸಿಕೊಂಡಿತು.. ರಾಷ್ಟ್ರೀಯ ಲಾಂಛನದ ತಳಭಾಗದಲ್ಲಿ ದೇವನಾಗರಿ ಲಿಪಿಯಲ್ಲಿ ಇದನ್ನು ಕೆತ್ತಲಾಗಿದೆ. ಲಾಂಛನ ಮತ್ತು "ಸತ್ಯಮೇವ ಜಯತೆ" ಪದಗಳನ್ನು ಎಲ್ಲಾ ಭಾರತೀಯ ನಾಣ್ಯ ಮತ್ತು ನಗದು ನೋಟುಗಳಲ್ಲಿ ಅಚ್ಚು ಮಾಡಲಾಗುತ್ತದೆ. ಭಾರತದ ಉತ್ತರ ಪ್ರದೇಶ ರಾಜ್ಯದ ವಾರಣಾಸಿ ಸಮೀಪದ ಸಾರಾನಾಥದಲ್ಲಿ ಕ್ರಿ.ಪೂ. ೨೫೦ರ ಸುಮಾರಿನಲ್ಲಿ ನಿಲ್ಲಿಸಲಾದ ಅಶೋಕ ಸ್ತಂಭದಲ್ಲಿರುವ ಸಿಂಹಲಾಂಛನದ ರೂಪಾಂತರ ಈ ವಾಕ್ಯವಾಗಿದೆ.
ಈ ಧ್ಯೇಯವಾಕ್ಯದ ಮೂಲವು ಮಂಡೂಕ ಉಪನಿಷತ್ತಿನ ಪ್ರಸಿದ್ಧ ಮಂತ್ರ 3.1.6 ಆಗಿದೆ. ಆ ಮಂತ್ರದ ಲಿಪ್ಯಂತರ ಈ ಕೆಳಗಿನಂತೆ ಇದೆ.
ಸತ್ಯಮೇವ ಜಯತೆ ನಾನೃತಂ
ಸತ್ಯೇನ ಪಂಥಾ ವಿತತೋ ದೇವಯಾನಃ
ಯೇನಾಕ್ರಮಂತಿ ಋಷಯೋ ಹ್ಯಾಪ್ತಕಾಮಾ
ಯತ್ರ ತತ್ ಸತ್ಯಸ್ಯ ಪರಮಂ ನಿಧಾನಂ
सत्यमेव जयते नानृतं
सत्येन पन्था विततो देवयानः ।
येनाक्रमन्त्यृषयो ह्याप्तकामा
यत्र तत् सत्यस्य परमं निधानम् ॥६॥
ಸತ್ಯ ಮಾತ್ರ ಗೆಲ್ಲುವುದು ಸುಳ್ಳುತನ ಅಲ್ಲ ಯಾವುದರ ಮೂಲಕ ಆಸೆಗಳನ್ನು ಸಂಪೂರ್ಣವಾಗಿ ಗೆದ್ದ ಋಷಿಗಳು ನಡೆದು ಸತ್ಯದ ಪರಮ ನಿಧಿಯನ್ನು ಹೊಂದುವರೋ ಆ ದೈವಿಕ ಪಥವು ಸತ್ಯದ ಮೂಲಕವೇ ಸಾಗುವುದು ಸತ್ಯದಲ್ಲಿ ಪರಮಾತ್ಮನ ನಿಧಿ ವಾಸಿಸುತ್ತದೆ.
ಈ ಘೋಷಣಾ ವಾಕ್ಯವನ್ನು ೧೯೧೮ ರಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಪಂಡಿತ್ ಮದನ ಮೋಹನ ಮಾಳವೀಯರು ಜನಪ್ರಿಯಗೊಳಿಸಿದರು .
ಈ ಲೇಖನ about government in India ಒಂದು ಚುಟುಕು. ನೀವು ಇದನ್ನು ವಿಸ್ತರಿಸುವುದರ ಮೂಲಕ ವಿಕಿಪೀಡಿಯಾಗೆ ಸಹಾಯ ಮಾಡಬಹುದು. |
This article uses material from the Wikipedia ಕನ್ನಡ article ಸತ್ಯಮೇವ ಜಯತೆ, which is released under the Creative Commons Attribution-ShareAlike 3.0 license ("CC BY-SA 3.0"); additional terms may apply (view authors). ವಿಶೇಷವಾಗಿ ಟಿಪ್ಪಣಿ ಮಾಡದಿದ್ದ ಹೊರತು ಪಠ್ಯ "CC BY-SA 4.0" ರಡಿ ಲಭ್ಯವಿದೆ. Images, videos and audio are available under their respective licenses.
®Wikipedia is a registered trademark of the Wiki Foundation, Inc. Wiki ಕನ್ನಡ (DUHOCTRUNGQUOC.VN) is an independent company and has no affiliation with Wiki Foundation.