ಶ್ರೀಪತಿ ಬಲ್ಲಾಳ್ ರಂಗಕರ್ಮಿ, ನಟ ಮತ್ತು ಸಂಘಟಕರಾಗಿದ್ದವರು.
ಶ್ರೀಪತಿ ಬಲ್ಲಾಳ್, ರಾಮದಾಸ್ ಬಲ್ಲಾಳ್ ಮತ್ತು ಕಲ್ಯಾಣಿ ಬಲ್ಲಾಳ್ ದಂಪತಿಗಳ ೭ ಗಂಡು ಮತ್ತು ೬ ಹೆಣ್ಣುಮಕ್ಕಳಲ್ಲಿ ಒಬ್ಬರಾಗಿ ಜನಿಸಿದರು. ೧೯೪೭ ರಲ್ಲಿ ಕಾಲೇಜು ಶಿಕ್ಷಣ ಗಳಿಸಲು ಮುಂಬಯಿ ನಗರಕ್ಕೆ ಪಾದಾರ್ಪಣೆಮಾಡಿದರು. ನಂತರ ರಂಗಭೂಮಿಯ ಕಾರ್ಯಚಟುವಟಿಕೆಗಳಿಂದ ಪ್ರೇರಿತರಾಗಿ ಸುಮಾರು ೪ ದಶಕಗಳ ಕಾಲ ಮುಂಬಯಿನಲ್ಲಿ ನೆಲೆನಿಂತರು. ದಕ್ಷಿಣ ಕನ್ನಡದ ಉಡುಪಿಯ ಸಮೀಪದ ಅಂಬಲ ಪಾಡಿಯಿಂದ ಮುಂಬಯಿನಗರಕ್ಕೆ ವಲಸೆಬಂದು ಹವ್ಯಾಸಿ ರಂಗಭೂಮಿಯನ್ನು ಕಟ್ಟಿಬೆಳೆಸಲು ಬಹಳ ಶ್ರಮಿಸಿದವರಲ್ಲಿ ಒಬ್ಬರು. ತಮ್ಮ ೧೬ ನೆಯ ವಯಸ್ಸಿನಲ್ಲಿಯೇ ರಂಗಪ್ರವೇಶ ಮಾಡಿದರು. ಅವರ ಜೊತೆ ಕಿಶೋರಿ ಬಲ್ಲಾಳರೂ ಸಹಕರಿಸಿದರು. ಜ್ಯಾತ ಕಾದಂಬರಿ ಕರ್ತೃ ವ್ಯಾಸರಾಯ ಬಲ್ಲಾಳ ರು ಶ್ರೀಪತಿ ಬಲ್ಲಾಳರ ಹಿರಿಯ ಸೋದರರು.
ಕುವೆಂಪು ರವರು ರಚಿಸಿದ "ಬಿರುಗಾಳಿ"ಯಲ್ಲಿ ಅಭಿನಯಿಸಿದರು. ಈ ನಾಟಕದಿಂದ ಅವರು ರಂಗಭೂಮಿಗೆ ಪಾದಾರ್ಪಣೆಮಾಡಿದ್ದರು.
ತರಂಗ ತಂಡವನ್ನು ಕಟ್ಟಿ ಹಲವಾರು ನಾಟಕಗಳನ್ನು ರಾಜ್ಯದಾದ್ಯಂತ ಪ್ರಚಾರಮಾಡಿದರು.
ಶ್ರೀಪತಿಬಲ್ಲಾಳ್, (೯೧) ಬೆಂಗಳೂರಿನ ಉಪನಗರಗಳಲ್ಲೊಂದಾದ ಕೋರಮಂಗಲದ ಗೃಹದಲ್ಲಿ ಶುಕ್ರವಾರ, ೧೯,ಏಪ್ರಿಲ್, ೨೦೧೯ ರಂದು ನಿಧನರಾದರು. ಅವರು ಬಹಳ ದಿನಗಳಿಂದ ಅನಾರೋಗ್ಯದಿಂದ ಹಾಸಿಗೆ ಹಿಡಿದಿದ್ದರು. ರಂಗನಟಿ ಮತ್ತು ಸಿನೆಮಾಗಳಲ್ಲೂ ಅಭಿನಯಿಸಿದ ಅವರ ಪತ್ನಿ ಕಿಶೋರಿಬಲ್ಲಾಳ್, ಮತ್ತು ಸೊಸೆ ಅಹಲ್ಯ ಬಲ್ಲಾಳ್ ಇದ್ದಾರೆ. ಅವರ ಮಗ ಸಂತೋಷ್ ಬಲ್ಲಾಳ್ ೧೦ ವರ್ಷಗಳ ಹಿಂದೆಯೇ ತೀರಿಕೊಂಡಿದ್ದರು.
This article uses material from the Wikipedia ಕನ್ನಡ article ಶ್ರೀಪತಿ ಬಲ್ಲಾಳ, which is released under the Creative Commons Attribution-ShareAlike 3.0 license ("CC BY-SA 3.0"); additional terms may apply (view authors). ವಿಶೇಷವಾಗಿ ಟಿಪ್ಪಣಿ ಮಾಡದಿದ್ದ ಹೊರತು ಪಠ್ಯ "CC BY-SA 4.0" ರಡಿ ಲಭ್ಯವಿದೆ. Images, videos and audio are available under their respective licenses.
®Wikipedia is a registered trademark of the Wiki Foundation, Inc. Wiki ಕನ್ನಡ (DUHOCTRUNGQUOC.VN) is an independent company and has no affiliation with Wiki Foundation.