ಶಂ.ಬಾ.
ಜೋಶಿ (ಜನವರಿ ೪, ೧೮೯೬ - ಸೆಪ್ಟೆಂಬರ್ ೨೮, ೧೯೯೧) ಕನ್ನಡದ ಖ್ಯಾತ ವಿದ್ವಾಂಸ ಮತ್ತು ಸಾಹಿತಿ. ಇವರು ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಗುರ್ಲಹೊಸೂರು ಗ್ರಾಮದಲ್ಲಿ ೪-೧-೧೮೯೬ರಲ್ಲಿ ಜನಿಸಿದರು. ೧೯೧೪ರಲ್ಲಿ ಮಲಪ್ರಭಾ ನದಿಗೆ ಮಹಾಪೂರ ಬಂದಾಗ ಗುರ್ಲಹೊಸೂರು ಜಲಮಯವಾಯಿತು. ಜೊತೆಗೆ ತಂದೆಯ ಸಾವು. ಹೀಗಾಗಿ ಜೋಶಿಯವರು ಅಜ್ಜಿಯ ಮನೆಯಾದ ಪುಣೆಗೆ ಹೊದರು. ಅಲ್ಲಿ ಲೋಕಮಾನ್ಯ ತಿಲಕರ ಪ್ರಭಾವಕ್ಕೆ ಒಳಗಾದರು. ಅಲ್ಲಿಂದ ಧಾರವಾಡಕ್ಕೆ ಮರಳಿದ ಜೋಶಿಯವರು ೧೯೧೯ರಲ್ಲಿ ಕನ್ನಡ ಶಿಕ್ಷಕರ ತರಬೇತಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ, ೧೯೨೦ರಲ್ಲಿ ಬೆಳಗಾವಿ ಜಿಲ್ಲೆಯ ಚಿಕ್ಕೋಡಿಯಲ್ಲಿ ಶಿಕ್ಷಕರಾದರು. ೧೯೨೧ರಲ್ಲಿ ಜೋಶಿಯವರ ಮದುವೆ ಜಮಖಂಡಿಯ ಕರಂದೀಕರ ಮನೆತನದ ಸೌ. ಪಾರ್ವತಿಬಾಯಿಯವರೊಡನೆ ಜರುಗಿತು. ಚಿಕ್ಕೋಡಿಗೆ ಗಾಂಧೀಜಿ ಆಗಮಿಸಿದಾಗ ಶಂ.ಬಾ.ಜೋಶಿಯವರಿಂದ ಗಾಂಧೀಜಿಯ ಕೈಂಕರ್ಯ;ಇದರಿಂದಾಗಿ ಸರಕಾರದ ಅವಕೃಪೆ. ಜೋಶಿಯವರಿಗೆ ಉಗರಗೋಳಕ್ಕೆ ವರ್ಗಾವಣೆ. ಜೋಶಿಯವರು ಕೆಲಕಾಲದ ನಂತರ ರಾಜೀನಾಮೆ ನೀಡಿ ಧಾರವಾಡಕ್ಕೆ ಬಂದರು.
ಶಂ.ಬಾ. ಜೋಷಿ | |
---|---|
ಚಿತ್ರ | [[File:|200px]] |
ಜನನದ ದಿನಾಂಕ | 1896 |
ಸಾವಿನ ದಿನಾಂಕ | 1991 |
ವೃತ್ತಿ | ಭಾಷಾವಿಜ್ಞಾನಿ, ಲೇಖಕ |
ರಾಷ್ಟ್ರೀಯತೆ | ಭಾರತ, ಬ್ರಿಟಿಷ್ ರಾಜ್, ಭಾರತೀಯ ಪ್ರಭುತ್ವ |
ಮಾತನಾಡುವ ಅಥವಾ ಬರೆಯುವ ಭಾಷೆಗಳು | ಕನ್ನಡ |
ಪೌರತ್ವ | ಭಾರತ, ಬ್ರಿಟಿಷ್ ರಾಜ್, ಭಾರತೀಯ ಪ್ರಭುತ್ವ |
ದೊರೆತ ಪ್ರಶಸ್ತಿ | ಸಾಹಿತ್ಯ ಅಕಾಡೆಮಿ ಪ್ರಶಸ್ತಿ |
ಲಿಂಗ | ಪುರುಷ |
ಕುಟುಂಬದ ಹೆಸರು | Joshi |
ಧಾರವಾಡದಲ್ಲಿ ೧೯೨೬-೨೭ರಲ್ಲಿ ಕರ್ನಾಟಕ ಹಾಯ್ ಸ್ಕೂಲಿನಲ್ಲಿ ಹಾಗು ೧೯೨೮ರಿಂದ ೧೯೪೬ರವರೆಗೆ ಅದೇ ಸಂಸ್ಥೆಯ ವ್ಹಿಕ್ಟೋರಿಯಾ ಹಾಯ್ ಸ್ಕೂಲಿನಲ್ಲಿ( ಈಗಿನ ವಿದ್ಯಾರಣ್ಯ ಹಾಯ್ ಸ್ಕೂಲು) ಕನ್ನಡ ಶಿಕ್ಷಕರಾಗಿ ಸೇವೆ ಸಲ್ಲಿಸಿದರು.
ಶಂ.ಬಾ. ಜೋಶಿಯವರ ಕೃತಿಗಳನ್ನು ಸಾಂಸ್ಕೃತಿಕ ಸಂಶೋಧನಾ ಸಾಹಿತ್ಯವೆಂದು ಕರೆಯಬಹುದು. ಮಾನವಜನಾಂಗಗಳ ನಾಗರಿಕತೆಯ ಮಜಲುಗಳನ್ನು ಅವರವರ ಭಾಷಾಪ್ರಯೋಗಗಳಲ್ಲಿ ಕಾಣಬಹುದು ಎನ್ನುವದನ್ನು ಶಂ.ಬಾ.ಜೋಶಿಯವರು ತಮ್ಮ ಸಂಶೋಧನ ಲೇಖನಗಳಲ್ಲಿ ತೋರಿಸಿಕೊಟ್ಟರು. ಜೋಶಿಯವರು ಈ ಶಾಸ್ತ್ರವಿಭಾಗವನ್ನು ಪ್ರಾರಂಭಿಸಿದ ಭಾರತೀಯರಲ್ಲಿ ಮೊದಲಿಗರು. ಇದೇ ಸಮಯಕ್ಕೆ ಯುರೋಪಿನಲ್ಲಿ ಸಹ ಈ ತರಹದ ಶಾಸ್ತ್ರವಿಭಾಗ ಪ್ರಾರಂಭವಾಯಿತು. ಆದುದರಿಂದ ಜಗತ್ತಿನಲ್ಲಿ ಇವರನ್ನು ಸಹಪ್ರಥಮರು ಎಂದು ಹೇಳಲು ಅಡ್ಡಿಯಿಲ್ಲ.
ಶ್ರೀ ಶಂಕರ ಬಾಳದೀಕ್ಷಿತ ಜೋಶಿಯವರು ಸೆಪ್ಟೆಂಬರ್ ೨೮, ೧೯೯೧ರಂದು ನಿಧನರಾದರು. ಮಾರನೆಯ ದಿನ, ಸೆಪ್ಟೆಂಬರ್ ೨೯, ೧೯೯೧ರಂದು ೧೫ ದಿನಗಳಿಗೂ ಹೆಚ್ಚು ಕೋಮಾದಲ್ಲಿದ್ದ ಜೋಶಿಯವರ ಪತ್ನಿ ಶ್ರೀಮತಿ ಪಾರ್ವತಿಬಾಯಿ ಕೂಡ ಇಹಲೋಕ ತ್ಯಜಿಸಿದರು.
ಇವರ "ಕರ್ನಾಟಕ ಸಂಸೃತಿಯ ಪೂರ್ವ ಪೀಠಿಕೆ" ಎಂಬ ಕೃತಿಗೆ ೧೯೭೦ರ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರಕಿದೆ. ೧೯೭೧ರಲ್ಲಿ ಶಂ.ಬಾ.ಜೋಶಿಯವರಿಗೆ ಮೈಸೂರು ವಿಶ್ವವಿದ್ಯಾನಿಲಯವು ಡಾಕ್ಟರೇಟ್ ಪದವಿಯನ್ನು ನೀಡಿ ಗೌರವಿಸಿತು. ೧೯೮೧ರಲ್ಲಿ ಮಡಿಕೇರಿಯಲ್ಲಿ ನಡೆದ ಅಖಿಲ ಕರ್ನಾಟಕ ಸಾಹಿತ್ಯಸಮ್ಮೇಳನದ ಅಧ್ಯಕ್ಷರಾಗಿದ್ದರು.
", -(ಸಾಪ್ತಾಹಿಕ ಪುರವಣಿ / 28/9/2014 ಪ್ರಜಾವಾಣಿ)
This article uses material from the Wikipedia ಕನ್ನಡ article ಶಂ.ಬಾ. ಜೋಷಿ, which is released under the Creative Commons Attribution-ShareAlike 3.0 license ("CC BY-SA 3.0"); additional terms may apply (view authors). ವಿಶೇಷವಾಗಿ ಟಿಪ್ಪಣಿ ಮಾಡದಿದ್ದ ಹೊರತು ಪಠ್ಯ "CC BY-SA 4.0" ರಡಿ ಲಭ್ಯವಿದೆ. Images, videos and audio are available under their respective licenses.
®Wikipedia is a registered trademark of the Wiki Foundation, Inc. Wiki ಕನ್ನಡ (DUHOCTRUNGQUOC.VN) is an independent company and has no affiliation with Wiki Foundation.