ವೀರಪ್ಪ ಮೊಯ್ಲಿ

ವೀರಪ್ಪ ಮೊಯ್ಲಿ ಕರ್ನಾಟಕ ರಾಜ್ಯದ ೧೩ ನೇ ಮುಖ್ಯಮಂತ್ರಿ ಯಾಗಿ ಸೇವೆ ಸಲ್ಲಿಸಿದ್ದಾರೆ.

ವೀರಪ್ಪ ಮೊಯಿಲಿಯವರು ೧೯೪೦ ಜನೆವರಿ ೧೨ರಂದು ಜನಿಸಿದರು. ಇವರ ತಾಯಿ ಪೂವಮ್ಮ ; ತಂದೆ ತಮ್ಮಯ್ಯ ಮೊಯಿಲಿ.

ವೀರಪ್ಪ ಮೊಯ್ಲಿ
ವೀರಪ್ಪ ಮೊಯ್ಲಿ

ವಾಣಿಜ್ಯ ವ್ಯವಹಾರ ಸಚಿವ (ಭಾರತ)
ಹಾಲಿ
ಅಧಿಕಾರ ಸ್ವೀಕಾರ 
ಜುಲೈ ೧೩, ೨೦೧೧
ಪ್ರಧಾನ ಮಂತ್ರಿ ಮನಮೋಹನ್ ಸಿಂಗ್

ಕಾನೂನು ಮತ್ತು ನ್ಯಾಯ ಮಂತ್ರಿ
ಅಧಿಕಾರ ಅವಧಿ
28 ಮೇ 2009 – ಜುಲೈ 12, 2011
ಪ್ರಧಾನ ಮಂತ್ರಿ ಮನಮೋಹನ್ ಸಿಂಗ್
ಪೂರ್ವಾಧಿಕಾರಿ ಹಂಸರಾಜ್ ಭಾರದ್ವಾಜ್
ಉತ್ತರಾಧಿಕಾರಿ ಸಲ್ಮಾನ್ ಖುರ್ಷಿದ್

ಅಧಿಕಾರ ಅವಧಿ
19 ನವೆಂಬರ್ 1992 – 11 ಡಿಸೆಂಬರ್ 1994
ರಾಜ್ಯಪಾಲ ಖುರ್ಶೆದ್ ಆಲಂ ಖಾನ್
ಪೂರ್ವಾಧಿಕಾರಿ ಎಸ್. ಬಂಗಾರಪ್ಪ
ಉತ್ತರಾಧಿಕಾರಿ ದೇವೇಗೌಡ
ವೈಯಕ್ತಿಕ ಮಾಹಿತಿ
ಜನನ (1940-01-12) ೧೨ ಜನವರಿ ೧೯೪೦ (ವಯಸ್ಸು ೮೪)
ಮೂಡಬಿದಿರೆ, ಬ್ರಿಟಿಷ್ ಇಂಡಿಯಾ
ರಾಜಕೀಯ ಪಕ್ಷ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
ಸಂಗಾತಿ(ಗಳು) ಮಾಲತಿ ಮೊಯಿಲಿ
ಮಕ್ಕಳು 4
ಅಭ್ಯಸಿಸಿದ ವಿದ್ಯಾಪೀಠ ಯೂನಿವರ್ಸಿಟಿ ಕಾಲೇಜು, ಮಂಗಳೂರು
ಬೆಂಗಳೂರು ವಿಶ್ವವಿದ್ಯಾಲಯ
ಜಾಲತಾಣ Official Website
ವೀರಪ್ಪ ಮೊಯ್ಲಿ
ವೀರಪ್ಪ ಮೊಯ್ಲಿ

ಶಿಕ್ಷಣ

ಮೊಯಿಲಿಯವರು ತಮ್ಮ ಪ್ರಾಥಮಿಕ ಹಾಗು ಮಾಧ್ಯಮಿಕ ಶಿಕ್ಷಣಗಳನ್ನು ಮೂಡಬಿದಿರಿಯಲ್ಲಿ ಪೂರೈಸಿ, ಮಂಗಳೂರಿನ ಸರಕಾರಿ ಕಾಲೇಜಿನಲ್ಲಿ ಅಧ್ಯಯನ ಪೂರೈಸಿ, ಪದವಿ ಪಡೆದರು. ಕರ್ನಾಟಕ ಸರಕಾರದ ಮೀನುಗಾರಿಕೆ ಇಲಾಖೆಯಲ್ಲಿ, ತನ್ನಂತರ ಭಾರತೀಯ ಜೀವವಿಮಾ ನಿಗಮದಲ್ಲಿ ಸೇವೆ ಸಲ್ಲಿಸುತ್ತಿದ್ದಂತೆಯೆ , ಬೆಂಗಳೂರಿನ ಸರಕಾರಿ ಕಾನೂನು ಕಾಲೇಜಿನಿಂದ ಬಿ.ಎಲ್.ಪದವಿ ಪಡೆದರು.

ವೃತ್ತಿ ಜೀವನ

ಕಾರ್ಕಳ ಹಾಗು ಮಂಗಳೂರುಗಳಲ್ಲಿ ವೃತ್ತಿಯನ್ನಾರಂಭಿಸಿದ ಮೊಯಿಲಿಯವರು , ಬೆಂಗಳೂರಿನಲ್ಲಿ ಉಚ್ಚ ನ್ಯಾಯಾಲಯದಲ್ಲಿ ನ್ಯಾಯವಾದಿ ವೃತ್ತಿಯನ್ನು ಮುಂದುವರಿಸಿದರು.

ರಾಜಕಾರಣ

೧೯೬೮ರಲ್ಲಿ ಮೊಯಿಲಿಯವರು ಕಾಂಗ್ರೆಸ್ ಪಕ್ಷದ ಸದಸ್ಯರಾದರು. ೧೯೬೯ರಲ್ಲಿ ಕಿಸಾನ ಸಭಾ ಸ್ಥಾಪಿಸಿದರು.
೧೯೭೨ರಿಂದ ೧೯೯೯ರವರೆಗೆ ಮೊಯಿಲಿಯವರು ದಕ್ಷಿಣ ಕನ್ನಡ ಜಿಲ್ಲೆಯ ಕಾರ್ಕಳ ವಿಧಾನ ಸಭಾ ಕ್ಷೇತ್ರದ ಶಾಸಕರಾಗಿದ್ದರು.ಮಂಗಳೂರು ಲೋಕಸಭಾ ಕ್ಷೇತ್ರದಿಂದ ಸತತ ಮೂರು ಬಾರಿ ಸೋಲು ಅನುಭವಿಸಿ ಕೊನೆಗೆ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಆರಿಸಿ ಬಂದರು.
೧೯೭೪ರಿಂದ ೧೯೭೭ರವರೆಗೆ ಮೊಯಿಲಿಯವರು ಸಣ್ಣ ಕೈಗಾರಿಕೆ ಖಾತೆಯ ಮಂತ್ರಿಯಾಗಿದ್ದರು.

೧೯೮೦ರಿಂದ ೧೯೮೨ರವರೆಗೆ ಹಣಕಾಸು ಮತ್ತು ಯೋಜನಾ ಖಾತೆಯ ಮಂತ್ರಿಯಾಗಿದ್ದರು.
೧೯೮೩ರಿಂದ ೧೯೮೫ರವರೆಗೆ ವಿರೋಧ ಪಕ್ಷದ ನಾಯಕರಾಗಿದ್ದರು.

ಸಿ ಭೈರೇಗೌಡರನ್ನು ೨ ಲಕ್ಷ ರೂಪಾಯಿ ನೀಡಿ, ಕಾಂಗ್ರೆಸ್ ಪಕ್ಷಕ್ಕೆ ಸೆಳೆಯಲು ಮೊಯಿಲಿ ಆಮಿಷ ಒಡ್ಡಿದರು ಎಂಬ ಹಗರಣ ೧೯೮೩ರಲ್ಲಿ ದೊಡ್ಡ ಸುದ್ದಿಯಾಯಿತು. ಕಾಂಗ್ರೆಸ್ ನ ಪ್ರಧಾನ ಕಾರ್ಯದರ್ಶಿ ಸಿ. ಎಂ. ಸ್ಟೀಫನ್ ರಾಮಕೃಷ್ಣ ಹೆಗಡೆ ಸರ್ಕಾರವನ್ನು ಉರುಳಿಸುವುದಾಗಿ ಘೋಷಿಸಿದ್ದ ವೇಳೆ, ಈ ಹಗರಣ ಬಂದುದು, ಮೊಯಿಲಿಯವರ ರಾಜಕೀಯ ಬದುಕಿಗೆ ಆಘಾತ ನೀಡಿತ್ತು. ನ್ಯಾ. ಆರ್. ಜಿ. ದೇಸಾಯಿ ನೇತೃತ್ವದ ವಿಚಾರಣಾ ಆಯೋಗ ಮೊಯಿಲಿಯವರು ನಿರ್ದೋಷಿ ಎಂದು ವರದಿ ಸಲ್ಲಿಸಿತು.
೧೯೮೯ರಿಂದ ೧೯೯೨ರ ವರೆಗೆ ವಿವಿಧ ಇಲಾಖೆಗಳ ಸಚಿವರಾಗಿದ್ದ ಮೊಯಿಲಿ,
೧೯೯೨ರಿಂದ ೧೯೯೪ರವರೆಗೆ ಕರ್ನಾಟಕದ ೧೩ನೆಯ ಮುಖ್ಯ ಮಂತ್ರಿಗಳಾಗಿ ಸೇವೆ ಸಲ್ಲಿಸಿದರು.

ಸಾಹಿತ್ಯ

ವೀರಪ್ಪ ಮೊಯಿಲಿಯವರು ಸಾಹಿತಿಗಳೂ ಆಗಿದ್ದಾರೆ. ಅವರ ಹೆಂಡತಿ ಮಾಲತಿ ಮೊಯಿಲಿ ಸಹ ಲೇಖಕಿಯಾಗಿದ್ದಾರೆ. ಮೊಯಿಲಿಯವರ ಕೃತಿಗಳು ಇಂತಿವೆ:

ಕಾದಂಬರಿ

  • ಸುಳಿಗಾಳಿ
  • ಸಾಗರದೀಪ
  • ಕೊಟ್ಟ
  • ತೆಂಬರೆ

ನಾಟಕಗಳು

  • ಮಿಲನ
  • ಪ್ರೇಮವೆಂದರೆ
  • ಪರಾಜಿತ
  • ಮೂರು ನಾಟಕಗಳು

ಕವನ ಸಂಕಲನ

  • ಹಾಲು ಜೇನು
  • ಮತ್ತೆ ನಡೆಯಲಿ ಸಮರ
  • ಯಕ್ಷಪ್ರಶ್ನೆ
  • ಜೊತೆಯಾಗಿ ನಡೆಯೋಣ ( ಮಾಲತಿ ಮೊಯಿಲಿಯವರ ಜೊತೆಯಲ್ಲಿ)

ಮಹಾಕಾವ್ಯ

  • ಶ್ರೀರಾಮಾಯಣ ಮಹಾನ್ವೇಷಣಂ
  • ಶ್ರೀಬಾಹುಬಲಿ ಅಹಿಂಸಾದಿಗ್ವಿಜಯಂ

ಪುರಸ್ಕಾರ

  • ೨೦೦೦ನೆಯ ಸಾಲಿನಲ್ಲಿ ಮೊಯಿಲಿಯವರಿಗೆ ಅಲ್-ಅಮೀನ್ ಸದ್ಭಾವನಾ ಪ್ರಶಸ್ತಿ ಲಭಿಸಿತು.
  • ೨೦೦೧ನೆಯ ಸಾಲಿನಲ್ಲಿ ಹಿಂದುಳಿದ ಹಾಗು ಅಲ್ಪಸಂಖ್ಯಾತ ವರ್ಗದವರ ಸುಧಾರಣೆಗಾಗಿ ಕೊಡಮಾಡುವ ದೇವರಾಜ ಅರಸ ಪ್ರಶಸ್ತಿ ದೊರೆಯಿತು.
  • ೨೦೦೧ಆರ್ಯಭಟ ಪುರಸ್ಕಾರ ದೊರೆತಿದೆ.
  • ೨೦೦೨ರಲ್ಲಿ ಗೊರೂರು ಪ್ರತಿಷ್ಠಾನದ ಸಮಗ್ರ ಸಾಹಿತ್ಯ ಪುರಸ್ಕಾರ ಲಭಿಸಿತು.
  • ೨೦೧೪ - ಸರಸ್ವತಿ ಸನ್ಮಾನ
  • ೨೦೨೦ - ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ - ಶ್ರೀ ಬಾಹುಬಲಿ ಅಹಿಂಸಾದಿಗ್ವಿಜಯ ಮಹಾಕಾವ್ಯಕ್ಕೆ.

ಉಲ್ಲೇಖಗಳು




Tags:

ವೀರಪ್ಪ ಮೊಯ್ಲಿ ಶಿಕ್ಷಣವೀರಪ್ಪ ಮೊಯ್ಲಿ ವೃತ್ತಿ ಜೀವನವೀರಪ್ಪ ಮೊಯ್ಲಿ ರಾಜಕಾರಣವೀರಪ್ಪ ಮೊಯ್ಲಿ ಸಾಹಿತ್ಯವೀರಪ್ಪ ಮೊಯ್ಲಿ ಪುರಸ್ಕಾರವೀರಪ್ಪ ಮೊಯ್ಲಿ ಉಲ್ಲೇಖಗಳುವೀರಪ್ಪ ಮೊಯ್ಲಿಕರ್ನಾಟಕಜನೆವರಿ೧೯೪೦

🔥 Trending searches on Wiki ಕನ್ನಡ:

ಸುಭಾಷ್ ಚಂದ್ರ ಬೋಸ್ಮಾರುಕಟ್ಟೆಎಂ. ಎಸ್. ಉಮೇಶ್ಶಿವಕಾರ್ಮಿಕರ ದಿನಾಚರಣೆಝಾನ್ಸಿಗೋಕರ್ಣಜ್ವರಭಾಗ್ಯಲಕ್ಷ್ಮೀ (ಕನ್ನಡ ಧಾರಾವಾಹಿ)ಭಾರತೀಯ ಸ್ಟೇಟ್ ಬ್ಯಾಂಕ್ಕೃಷಿಗ್ರಾಮಗಳುಏಡ್ಸ್ ರೋಗಭಾರತೀಯ ಅಂಚೆ ಸೇವೆಛಂದಸ್ಸುಸಜ್ಜೆಲಕ್ಷ್ಮಣಮೊದಲನೇ ಅಮೋಘವರ್ಷಕೆ. ಅಣ್ಣಾಮಲೈದೇವಸ್ಥಾನಕೆ. ಎಸ್. ನಿಸಾರ್ ಅಹಮದ್ವಿಶ್ವ ಪರಿಸರ ದಿನಚಾಮರಾಜನಗರಯೋಗವಾಹಜೋಳರಾಷ್ಟ್ರಕವಿದಾವಣಗೆರೆಮೋಕ್ಷಗುಂಡಂ ವಿಶ್ವೇಶ್ವರಯ್ಯವೆಂಕಟೇಶ್ವರಪತ್ರಿಕೋದ್ಯಮಆಧುನಿಕ ಮಾಧ್ಯಮಗಳುಕೇಂದ್ರಾಡಳಿತ ಪ್ರದೇಶಗಳುಕೊಲ್ಲೂರು ಮೂಕಾಂಬಿಕಾ ದೇವಸ್ಥಾನಜೈನ ಧರ್ಮವಾಲಿಬಾಲ್ಸೆಕೆಂಡರಿ ಸ್ಕೂಲ್ ಲೀವಿಂಗ್ ಸರ್ಟಿಫಿಕೇಟ್ಪ್ರಾಥಮಿಕ ಶಿಕ್ಷಣಸಾವಯವ ಬೇಸಾಯಲೋಪಸಂಧಿಅಲಂಕಾರಕರ್ನಾಟಕ ಲೋಕಸೇವಾ ಆಯೋಗಗ್ರಂಥಾಲಯಗಳುಭಾರತದ ಸ್ವಾತಂತ್ರ್ಯ ದಿನಾಚರಣೆಹುಬ್ಬಳ್ಳಿದುರ್ಗಸಿಂಹಕೈವಾರ ತಾತಯ್ಯ ಯೋಗಿನಾರೇಯಣರುವಡ್ಡಾರಾಧನೆಹಿ. ಚಿ. ಬೋರಲಿಂಗಯ್ಯಭಾರತ ರತ್ನಸ್ವರಮಣ್ಣುಕೆ. ಎಸ್. ನರಸಿಂಹಸ್ವಾಮಿಗೊರೂರು ರಾಮಸ್ವಾಮಿ ಅಯ್ಯಂಗಾರ್ಯಕ್ಷಗಾನಕೇರಳಬ್ಲಾಗ್ಆರೋಗ್ಯಕರೀಜಾಲಿಸೂರ್ಯಲೋಕಸಭೆಮದಕರಿ ನಾಯಕಗಾಂಧಿ ಜಯಂತಿತ್ರಿವೇಣಿಪೂರ್ಣಚಂದ್ರ ತೇಜಸ್ವಿಹೀಮೊಫಿಲಿಯಕನ್ನಡದಲ್ಲಿ ಕಾದಂಬರಿ ಸಾಹಿತ್ಯಕನ್ನಡ ಕಾಗುಣಿತಕೈಗಾರಿಕೆಗಳುವಿಜಯವಾಣಿಪಟ್ಟದಕಲ್ಲುಮಂಜುಳಬೆಂಗಳೂರು ಗ್ರಾಮಾಂತರ (ಲೋಕ ಸಭೆ ಚುನಾವಣಾ ಕ್ಷೇತ್ರ)ಸ್ವಾಮಿ ವಿವೇಕಾನಂದಜನಪದ ಕ್ರೀಡೆಗಳುರಸ(ಕಾವ್ಯಮೀಮಾಂಸೆ)ಕನ್ನಡ ಛಂದಸ್ಸುಪಾಂಡವರುಅಕ್ಷಾಂಶ ಮತ್ತು ರೇಖಾಂಶ🡆 More