ಕನ್ನಡ ವಿಕಿಪೀಡಿಯದ ೧೩ನೆಯ ವರ್ಷಾಚರಣೆಯನ್ನು ಆಚರಿಸುವ ಸಂದರ್ಭದಲ್ಲಿ ಮೈಸೂರಿನಲ್ಲಿ ಪೂರ್ವಭಾವಿಯಾಗಿ ೨೦೧೬ರ ಜನವರಿ ತಿಂಗಳಲ್ಲಿ ಕನ್ನಡ ವಿಕಿಪೀಡಿಯಕ್ಕೆ ನಡೆಸಿದ ಸಂಪಾದನೋತ್ಸವದಲ್ಲಿ ಕನ್ನಡ ಸಾಹಿತ್ಯ ಚರಿತ್ರೆಗೆ ಸಂಬಂಧಿಸಿ ಬಂದ ಲೇಖನಗಳ ವಿವರ ಈ ಪುಟದಲ್ಲಿದೆ.
ಕನ್ನಡ ಸಾಹಿತ್ಯವೆಂಬುದು ವಿಶಾಲವಾದ ವಿವರವುಳ್ಳ, ವಿಚಾರವುಳ್ಳ ಶಿಸ್ತು. ಈ ಭಾಗದಲ್ಲಿ ಕನ್ನಡ ಸಾಹಿತ್ಯ ಚರಿತ್ರೆ, ಕನ್ನಡದ ಕವಿಗಳು, ಕನ್ನಡ ಕೃತಿಗಳು ಕುರಿತಂತೆ ಮಾಹಿತಿಗಳು ಸಮಗ್ರವಾಗಿ ಇಲ್ಲ. ಈ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಚರಿತ್ರೆಗೆ ಸಂಬಂಧಿಸಿದ ಎಲ್ಲಾ ಮಜಲುಗಳಲ್ಲಿ ಆದ, ಆಗಬೇಕಾದ ವಿಚಾರಗಳನ್ನು, ಚಿಂತನೆಗಳನ್ನು ಈ ಪುಟದಲ್ಲಿ ನೀಡಲು ಬಯಸಲಾಗಿದೆ.
ಕನ್ನಡ ನಾಡು, ನುಡಿ, ಸಂಸ್ಕೃತಿಯನ್ನು ಸಾರುವ ಉಲ್ಲೇಖಗಳು ಪ್ರಾಚೀನ ಕಾಲದಲ್ಲಿ ಇದ್ದುವು ಎನ್ನುವುದಕ್ಕೆ ಹಲವಾರು ಸಾಕ್ಷಿಗಳಿವೆ. ಶಾಸನಗಳಲ್ಲಿ ಕನ್ನಡ ನುಡಿ, ಕನ್ನಡ ಲಿಪಿ, ಕನ್ನಡ ಪ್ರಾಚೀನತೆಯನ್ನು ಸಾರುವ ಅಂಶಗಳಿವೆ. ಅಲ್ಲದೆ ಈ ಕಾಲದ ಕೃತಿಗಳು ಶಿಲಾ ಶಾಸನ, ತಾಮ್ರಶಾಸನ, ತಾಳೆಗರಿ
ಕಾಲ | ಶಾಸನ | ರಾಜ ಮನೆತನ/ದೇಶ |
---|---|---|
ಗ್ರೀಕ್ ಪ್ರಹಸನ ಗ್ರೀಕ್ | ಗ್ರೀಕ್ | |
೩ನೇ ಶ. | ಶಿಲಾಲಿಪಿ/ತಾಮ್ರಲಿಪಿ ಪ್ರಾಕೃತ/ಸಂಸ್ಕೃತ | ಅಶೋಕ |
೪೫೦ ಕ್ರಿ. ಶ. | ಹಲ್ಮಿಡಿ ಶಾಸನ ಕನ್ನಡ | ಕಾಕುತ್ಸವರ್ಮ |
೬೩೪ ಕ್ರಿ.ಶ | ಐಹೋಳೆ ಶಾಸನ ಸಂಸ್ಕೃತ | ಇಮ್ಮಡಿ ಪುಲಿಕೇಶಿ |
೭ನೇ ಶ. | ಕಪ್ಪೆ ಅರಭಟ್ಟ ಶಾಸನ | ಕನ್ನಡ |
೯-೧೦ನೇ ಶ | ಗಂಗಾಧರ ಶಾಸನ ಕನ್ನಡ ಸಂಸ್ಕೃತ ತೆಲುಗು | ಜಿನವಲ್ಲಭ |
೧೩೬೫ ಕ್ರಿ ಶ. | ಶ್ರವಣಬೆಳಗೊಳ ಶಾಸನ ಕನ್ನಡ | ಜೈನ ಪರಂಪರೆ |
ಪ್ರೇರಣೆಗಳು-
ಇದರಲ್ಲಿ ನಾಲ್ಕು ಅಂಶಗಳು ಇವೆ ಅವು ಯಾವವು ಅಂದರೆ 1=ಮತ ಧರ್ಮಗಳ ಪ್ರಭಾವ 2=ರಾಜಶ್ರಯ 3=ಯುಗಧರ್ಮ 4=ಕವಿಯ ಸೃಜನಶೀಲತೆ
ಕನ್ನಡ ಸಾಹಿತ್ಯ ಬೆಳೆದುಬಂದ ಬಗೆಯನ್ನು ಈ ಮುಂದಿನ ಪಟ್ಟಿಯಲ್ಲಿ ವಿವರಿಸಲಾಗುತ್ತದೆ.
ಘಟ್ಟ | ಕಾಲ | ಯುಗ | ಛಂದಸ್ಸು |
---|---|---|---|
ಪೂರ್ವದ ಹಳಗನ್ನಡ | ೧೦ನೇ ಶತಮಾನಕ್ಕಿಂತ ಪೂರ್ವ | ಪಂಪ ಪೂರ್ವ ಯುಗ | ಸಂಸ್ಕೃತ ಮತ್ತು ಪ್ರಾಕೃತ |
ಹಳಗನ್ನಡ | ೧೦ ರಿಂದ ೧೨ನೇ ಶತಮಾನದ ವರೆಗೆ | ಪಂಪ ಯುಗ | ಚಂಪೂ - ವೃತ್ತ ಮತ್ತು ಕಂದ |
ನಡುಗನ್ನಡ | ೧೨ ರಿಂದ ೧೫ ನೇ ಶತಮಾನದ ವರೆಗೆ | ಬಸವಯುಗ | ವಚನ |
ನಡುಗನ್ನಡ | ೧೫ ರಿಂದ ೧೮ನೇ ಶತಮಾನದ ವರೆಗೆ | ಕುಮಾರವ್ಯಾಸ ಯುಗ | ಷಟ್ಪದಿ |
ಹೊಸಗನ್ನಡ | ೧೯ನೇ ಶತಮಾನದಿಂದ ಈ ವರೆಗೆ | ಹೊಸಯುಗ | ಹೊಸ ಚಳುವಳಿಗಳು |
ನಮ್ಮಲ್ಲಿ ಕೆಲವು ಭಾಷಾ ವಿದ್ವಾಂಸರು ಸಾಹಿತ್ಯ ಚರಿತ್ರೆ ಬರೆಯುವಾಗ ಬಹಳ ಮುಖ್ಯವಾಗಿ ಒಂದೊಂದು ಬಗೆಯ ವಿಭಾಗ ಕ್ರಮಗಳನ್ನು ಅನುಸರಿಸಿದ್ದಾರೆ. ಅವರ ಹೆಸರುಗಳು ಈ ರೀತಿಯಾಗಿದೆ.
ಹಳಗನ್ನಡಕ್ಕಿಂತ ಪೂರ್ವದ ಕಾಲವನ್ನು ಪೂರ್ವದ ಹಳಗನ್ನಡವೆಂದು ಕರೆಯುತ್ತಾರೆ.
ಸಂಖ್ಯೆ | ಕಾಲ | ಗ್ರಂಥಕಾರ | ಮತ | ಗ್ರಂಥ | ಗ್ರಂಥ ಸ್ವರೂಪ |
---|---|---|---|---|---|
೧ | ೫೫೦-೬೦೦ | ದುರ್ವಿನೀತ | ಜೈನ | ಬೃಹತ್ಕಥೆ | ವಡ್ಡಕಥೆ|ಶಬ್ದಾವತಾರ|ಟೀಕೆ ಸಂಸ್ಕೃತದಲ್ಲಿ | ? |
೨ | ೬೫೦ | ತುಂಬಲೂರಾಚಾರ್ಯ | ಜೈನ | ಚೂಡಾಮಣಿ | ವ್ಯಾಖ್ಯಾನ ಗ್ರಂಥ |
೩ | ೬೫೦ | ಶ್ಯಾಮಕುಂದಾಚಾರ್ಯ | ಜೈನ | ಕನ್ನಡ ಪ್ರಾಭೃತ ಇಲ್ಲವೆ ಪರಾಪದ್ಧತಿ | ಶಾಸ್ತ್ರಗಂಥ |
೪ | ೮೦೦ | ಸೈಗೊಟ್ಟ ಶಿವಕುಮಾರ | ಜೈನ | ಶಿವಕುಮಾರ ಮತ | ಗಜಶಾಸ್ತ್ರಗಂಥ |
೫ | ೮೧೫-೮೭೭ | ಶ್ರೀವಿಜಯ | ಜೈನ | ಕವಿರಾಜಮಾರ್ಗ | ಕಾವ್ಯಲಕ್ಷಣ ಗ್ರಂಥ |
೬ | ೮೫೪ | ಅಸಗ | ಜೈನ | ಕರ್ನಾಟಕ ಕುಮಾರಸಂಭವ ಕಾವ್ಯ | ? |
೭ | ೯೦೦ | ಗುಣನಂದಿ | ಜೈನ | ? | ? |
೮ | ೯೦೦ ? | ಗುಣವರ್ಮ-೧ | ಜೈನ | ಹರಿವಂಶ|ಶೂದ್ರಕ | ಚಂಪೂಕಾವ್ಯ |
೯ | ೯೨೫ | ಶಿವಕೋಟ್ಯಾಚಾರ್ಯ | ಜೈನ | ವಡ್ಡಾರಾಧನೆ | ಗದ್ಯಕಥೆ |
ಸಂಖ್ಯೆ | ಕಾಲ | ಕವಿ | ಬಿರುದು | ಮತ | ರಾಜಾಶ್ರಯ | ಗ್ರಂಥ | ಪ್ರಕಾರ |
---|---|---|---|---|---|---|---|
೧ | ೯೦೨-೯೪೨ | ಪಂಪ | ಜೈನ | ಚಾಲುಕ್ಯ ಅರಸು ಅರಿಕೇಸರಿ | ೧.ಆದಿಪುರಾಣ ೨.ವಿಕ್ರಮಾರ್ಜುನ ವಿಜಯ/ಪಂಪಭಾರತ | ಚಂಪೂಕಾವ್ಯ | |
೨ | ೯೫೦ | ಪೊನ್ನ | ಜೈನ | ರಾಷ್ಟ್ರಕೂಟ ೩ನೆಯ ಕೃಷ್ಣ | ೧.ಶಾಂತಿಪುರಾಣ ೨.ಭುವನೈಕ ರಾಮಾಭ್ಯದಯ/ರಾಮಕಥೆ ೩. ಜಿನಾಕ್ಷರಮಾಲೆ | ಚಂಪೂಕಾವ್ಯ ಕಂದ ಪದ್ಯ | |
೩ | ೯೭೫ | ಚಾವುಂಡರಾಯ | ಜೈನ | ಗಂಗರಾಚಮಲ್ಲ | ೧. ಚಾವುಂಡರಾಯ ಪುರಾಣ | ಗದ್ಯ ಗ್ರಂಥ | |
೪ | ೯೯೦ | ನಾಗವರ್ಮ-೧ | ಬ್ರಾಹ್ಮಣ | ರಕ್ಕಸಗಂಗ ? | ೧. ಛಂದೋಂಬುಧಿ | ಶಾಸ್ತ್ರಗ್ರಂಥ | |
೫ | ೯೯೦ | ರನ್ನ | ಜೈನ | ಚಾಲುಕ್ಯ ತೈಲಪ ಸತ್ಯಾಶ್ರಯ ಇರಿವಬೆಡಂಗ | ೧. ಸಾಹಸಭೀಮವಿಜಯ/ಗದಾಯುದ್ಧಂ ೨. ಪರಶುರಾಮಚರಿತೆ ೩. ಚಕ್ರೇಶ್ವರಚರಿತೆ ೪. ಅಜಿತಪುರಾಣ ೫. ರನ್ನ ಕಂದ | ಚಂಪೂ | |
೬ | ೧೦೨೪ | ಚಾವುಂಡರಾಯ.೨ | ಬ್ರಾಹ್ಮಣ | ಚಾಲುಕ್ಯ ಜಯಸಿಂಹ ಜಗದೇಕಮಲ್ಲ | ೧. ಲೋಕೋಪಚಾರ | ೧. ವೃತ್ತಪದ್ಯ ೨. ಕಂದಪದ್ಯ | |
೭ | ೧೦೩೦ | ದುರ್ಗಸಿಂಹ | ಬ್ರಾಹ್ಮಣ | ಚಾಲುಕ್ಯ ಜಯಸಿಂಹ ಜಗದೇಕಮಲ್ಲ | ಪಂಚತಂತ್ರ | ಚಂಪೂಕಾವ್ಯ, ಗದ್ಯ ಕಾವ್ಯ | |
೮ | ೧೦೪೦ | ಚಂದ್ರರಾಜ | ಬ್ರಾಹ್ಮಣ | ಮಹಾ ಸಾಮಂತ ರೇಚ | ಮದನತಿಲಕ | ಚಂಪೂ | |
೯ | ೧೦೫೦ | ಶ್ರೀಧರಾಚಾರ್ಯ | ಜೈನ | ಚಾಳುಕ್ಯ ಅಹಮಲ್ಲ - ೧ನೆಯ ಸೋಮೇಶ್ವರ | ೧. ಜಾತಕ ತಿಲಕ ೨. ಚಂದ್ರಪ್ರಭಚರಿತ | ಶಾಸ್ತ್ರ - ಕಂದಪದ್ಯ, ವೃತ್ತ | |
೧೦ | ೧೦೭೦ | ಶಾಂತಿನಾಥ | ಜೈನ | ಭುವನೈಕಮಲ್ಲ ಪಸಾಯಿತ ಲಕ್ಷ್ಮನೃಪ | ಸುಕುಮಾರಚರಿತ | ಚಂಪೂ | |
೧೧ | ೧೦೭೦ | ನಾಗವರ್ಮಾಚಾರ್ಯ | ಬ್ರಾಹ್ಮಣ | ಭುವನೈಕಮಲ್ಲ ದಂಡನಾಯಕ ಉದಯಾದಿತ್ಯ | ಚಂದ್ರಚೂಡಾಮಣಿ ಶತಕ | ಶತಕ [ವೃತ್ತ] | |
೧೨ | ೧೧೦೦ | ನಾಗಚಂದ್ರ | ಜೈನ | ಹೊಯ್ಸಳ ಒಂದನೆಯ ಬಲ್ಲಾಳ | ೧. ಮಲ್ಲಿನಾಥಪುರಾಣ ೨. ರಾಮಚಂದ್ರಚರಿತ ಪುರಾಣ - ಪಂಪರಾಮಾಯಣ | ಚಂಪೂ | |
೧೩ | ೧೧೦೦? | ಕಂತಿ | ಜೈನ | ಹೊಯ್ಸಳ ಒಂದನೆಯ ಬಲ್ಲಾಳ | ಕಂತಿಹಂಪನ ಸಮಸ್ಯೆಗಳು | ಕಂದ ಪದ್ಯ | |
೧೪ | ೧೧೦೦ | ನಯಸೇನ | ಜೈನ | - | ಧರ್ಮಾಮೃತ | ಚಂಪೂ ಗದ್ಯ ಕಾವ್ಯ | |
೧೫ | ೧೧೫೦ | ಬ್ರಹ್ಮಶಿವ | ಜೈನ | - | ೧. ಸಮಯಪರೀಕ್ಷೆ ೨. ತ್ರೈಲೋಕ್ಯಚೂಡಾಮಣಿ ಸ್ತೋತ್ರ | ವೃತ್ತ ಕಂದ | |
೧೬ | ೧೧೫೦ | ಕರ್ಣಪಾರ್ಯ | ಜೈನ | ಲಕ್ಷ್ಮಣರಾಜ | ನೇಮಿನಾಥಪುರಾಣ | ಚಂಪೂ | |
೧೭ | ೧೧೫೦ | ನಾಗವರ್ಮ ೨ | ಜೈನ | ಚಾಲುಕ್ಯ ಜಗದೇಕಮಲ್ಲ | ೧. ಭಾಷಾಭೂಷಣ ೨. ಕಾವ್ಯಾವಲೋಕನ ೩. ವಸ್ತುಕೋಶ | ಸೂತ್ರ ಕಂದ ವೃತ್ತ | |
೧೮ | ೧೧೫೦ | ಸುಮನೋಬಾಣವ | ಜೈನ | ಹೊಯ್ಸಳ ನರಸಿಂಹ | ಜೈನಪುರಾಣ ? | - | |
೧೯ | ೧೧೫೦ | ಜಗದ್ಗಳ-ಸೋಮನಾಥ | ಜೈನ | - | ಕರ್ನಾಟಕ ಕಲ್ಯಾಣಕಾರ್ಕ | ಕಂದ, ವೃತ್ತ |
ಕಾಲ | ಕವಿ | ಅಂಕಿತನಾಮ | ಮತ | ಗ್ರಂಥ | ಸ್ವರೂಪ |
---|---|---|---|---|---|
೧೧೫೦ | ಅಲ್ಲಮಪ್ರಭು | ಗುಹೇಶ್ವರ | ವೀರಶೈವ | ೧. ಷಟ್ಸ್ಥಲಜ್ಞಾನಚಾರಿತ್ರ ೨. ಮಂತ್ರಗೋಪ್ಯ | ವಚನ |
೧೧೫೦ | ಸಕಲೇಶಮಾದರಸ | ವೀರಶೈವ | ವಚನಗಳು | ವಚನ | |
೧೧೫೦ | ಬಸವಣ್ಣ | ಕೂಡಲಸಂಗಮದೇವ | ವೀರಶೈವ | ೧. ಷಟ್ಸ್ಥಲ ವಚನ, ೨. ಕಾಲಜ್ಞಾನ ವಚನ, ೩. ಮಂತ್ರಗೋಪ್ಯ | ವಚನ |
೧೧೫೦ | ಚೆನ್ನಬಸವ | ವೀರಶೈವ | ೧. ಷಟ್ಸ್ಥಲ ವಚನ, ೨. ಕರಣಹಸುಗೆ, ೩. ಮಿಶ್ರಾರ್ಪಣ, ೪. ಮಂತ್ರಗೋಪ್ಯ, ೫. ಕಾಲಜ್ಞಾನ, ೬. ರುದ್ರಭಾರತದ ದೃಷ್ಟಿ | ವಚನ ಮತ್ತು ವ್ಯಾಖ್ಯಾನಗಳು | |
೧೧೫೦ | ಸಿದ್ಧರಾಮ | ವೀರಶೈವ | ೧. ವಚನಗಳು ೨. ಮಿತ್ರಸ್ತೋತ್ರದ ತ್ರಿವಿಧಿ ೩. ಬಸವಸ್ತೋತ್ರ ತ್ರಿವಿಧಿ ೪. ಅಷ್ಟಾವರನಸ್ತೋತ್ರ ತ್ರಿವಿಧಿ ೫. ಕಾಲಜ್ಞಾನ, ೬. ಮಂತ್ರಗೋಪ್ಯ | ವಚನ ಮತ್ತು ತ್ರಿಪದಿ | |
೧೧೫೦ | ಅಕ್ಕಮಹಾದೇವಿ | ಚೆನ್ನಮಲ್ಲಿಕಾರ್ಜುನ | ವೀರಶೈವ | ೧. ವಚನಗಳು ೨. ಯೋಗಾಂಗತ್ರಿವಿಧಿ ೩. ಸೃಷ್ಟಿಯ ವಚನ ೪. ಅಕ್ಕಗಳ ಪೀಠಿಕೆ ? | ವಚನ ತ್ರಿವಿಧಿ ಮತ್ತು ವ್ಯಾಖ್ಯಾನಗಳು |
೧೧೬೦ | ಮಲ್ಲಿಕಾರ್ಜುನ ಪಂಡಿತಾರಾಧ್ಯ | ವೀರಶೈವ | ೧. ವಚನಗಳು ೨. ಗಣಸಹಸ್ರನಾಮ ೩. ಇಷ್ಟಲಿಂಗಸ್ತೋತ್ರ ೪. ಬಸವಗೀತ | ವಚನ ಮತ್ತು ವ್ಯಾಖ್ಯಾನಗಳು | |
೧೨೦೦ | ಹರಿಹರ | ವೀರಶೈವ | ೧. ಗಿರಿಜಾಕಲ್ಯಾಣ ೨. ಪಂಪಾಶತಕ ೩. ರಕ್ಷಾಶತಕ ೪. ಮುಡಿಗೆಯ ಅಷ್ಟಕ, ೫. ಶಿವಗಣದ ರಗಳೆಗಳು | ಚಂಪೂ, ವೃತ್ತ ಮತ್ತು ರಗಳೆ | |
೧೨೦೦ | ಕೆರೆಯ ಪದ್ಮರಸ | ವೀರಶೈವ | ದೀಕ್ಷಾ ಬೋಧೆ | ರಗಳೆ - ಕೇವಲ ಪದ್ಯ |
ಕೇರಳದಿಂದ ಕೊಡುವ ಪ್ರಶಸ್ತಿ. ಚಂದ್ರಶೇಖರ ಕಂಬಾರ, ಕೆ.ಎಸ್.ನರಸಿಂಹ ಸ್ವಾಮಿ
ಕ್ರಮ ಸಂಖ್ಯೆ | ಹೆಸರು | ಕೃತಿ ಹೆಸರು | |
---|---|---|---|
೧ | ಕುವೆಂಪು | ಶ್ರೀ ರಾಮಾಯಣ ದರ್ಶನಂ | ೧೯೬೮ |
೨ | ದ.ರಾ.ಬೇಂದ್ರೆ | ನಾಕುತಂತಿ | ೧೯೭೩ |
೩ | ಮಾಸ್ತಿ ವೆಂಕಟೇಶ ಅಯ್ಯಂಗಾರ್ | ಚಿಕವೀರರಾಜೇಂದ್ರ | ೧೯೮೩ |
೪ | ಶಿವರಾಮ ಕಾರಂತ | ಮೂಕಜ್ಜಿಯ ಕನಸುಗಳು | ೧೯೭೭ |
೫ | ವಿನಾಯಕ ಕೃಷ್ಣ ಗೋಕಾಕ | ಭಾರತದ ಸಿಂಧುರಶ್ಮಿ | ೧೯೯೦ |
೬ | ಯು.ಆರ್.ಅನಂತಮೂರ್ತಿ | ಸಮಗ್ರ ಸಾಹಿತ್ಯ | ೧೯೯೪ |
೭ | ಗಿರೀಶ್ ಕಾರ್ನಾಡ್ | ಸಮಗ್ರ ಸಾಹಿತ್ಯ | ೧೯೯೮ |
೮ | ಚಂದ್ರಶೇಖರ ಕಂಬಾರ | ಸಮಗ್ರ ಸಾಹಿತ್ಯ | ೨೦೧೦ |
ಕ್ರಮ ಸಂಖ್ಯೆ | ಹೆಸರು | ವರ್ಷ | ಕೃತಿ ಹೆಸರು |
---|---|---|---|
೧ | ಎಸ್.ಎಲ್.ಭೈರಪ್ಪ | ೨೦೧೦ | ಮಂದ್ರ ಕಾದಂಬರಿ |
೨ | ವೀರಪ್ಪ ಮೊಯಿಲಿ | ೨೦೧೪ | ರಾಮಾಯಣ ಮಹಾನ್ವೇಷಣಂ ಮಹಾಕಾವ್ಯ |
ಕಾರ್ನಾಡ ಸದಾಶಿವರಾವ್
ಕನ್ನಡ ನಾಡು, ನುಡಿ, ಸಂಸ್ಕೃತಿ, ಭಾಷೆ ಬೆಳೆಯುವುದಕ್ಕೆ ಕಾರಣರಾದ ಕರ್ನಾಟಕವನ್ನು ಆಳಿದ ರಾಜರು, ರಾಜವಂಶಗಳು, ಕನ್ನಡ ನಾಡನ್ನು ಹಾಡಿ ಹೊಗಳಿದ ಕವಿಗಳು, ಕನ್ನಡ ನಾಡಿನ ಕುರಿತಂತೆ ಪ್ರಕಟಗೊಂಡ ಹಲವಾರು ಕೃತಿಗಳು ಕನ್ನಡ ನಾಡಿನ ಚರಿತ್ರೆಯ ಮಾಹಿತಿಯನ್ನು ನೀಡುತ್ತವೆ.
ದ್ರಾವಿಡ ಭಾಷೆಗಳ ಲಕ್ಷಣಗಳು, ದ್ರಾವಿಡ ಭಾಷೆಗಳ ವರ್ಗೀಕರಣ
ಇಸ್ಕ್ರೂ, ಲೋಟೀಸು, ಜಲ್ಮ, ದೊಡ್ಡಸ್ತಿಕೆ, ಸುಂಟರಗಾಳಿ, ಅವಳಿಜವಳಿ, ಕೂಡಲಸಂಗಮ, ಕಾಗದಪತ್ರ, ಎಳ್ಳೆಣ್ಣೆ, ತಂಗುಳನ್ನ, ಹೌದು, ಹೀಗೆ, ಹಾಗೆ,ಅಗಸ, ಕಾದಗ, ಅರಲ್, ಹೊಸ್ತಿಲು, ನಾಣಿ, ಶೀನಿ, ಬಂತು, ತಾಂಬಾ, ಪಾಶ್ಚಾತ್ಯ, ದಿವಸ್ಪತಿ, ಬೆಳಕಿಂಡಿ, ವೀರಾಜಪೇಟೆ
ಹೊನ್ನು, ಆಳು, ಒಡವೆ, ಎಣ್ಣೆ, ಓಲೆ,ನಾತ, ತಿಥಿ, ಬೈರಾಗಿ,ಕೂಳು, ಸಂತೆ, ಜಾರ, ತವರುಮನೆ, ಅಪರೂಪ, ಅವಸರ,ನೊಗ
ಪಟ್ಟಾಂಗ,ಬೆಸ್ತವಾರ, ಗುದ್ದಲಿ, ಕುಂದಕನ್ನಡ, ಕತ್ತಿ, ಅಮ್ಮ, ಜಂಬರ, ಪಂಚಾಂಗ
ಅರಿವಳಿಕೆ, ಕಾದಂಬರಿ, ಸಣ್ಣಕತೆ, ಶಾಸಕ, ಶ್ವೇತಪತ್ರ, ಧಾರಾವಾಹಿ, ಸುಗ್ರಿವಾಜ್ಞೆ, ಸಚಿವ ಸಂಪುಟ, ಶೀತಲಸಮರ, ಕಾಲುಚೀಲ
ಅಬ್ಕಾರಿ, ಆಸ್ಪತ್ರೆ,ಕಂತ್ರಿ, ಕಂದೀಲು, ಕೇರಿ, ಗಟಾರ, ಚರಂಡಿ, ಚಹ, ಜೀನಸು, ಜುಗಾರಿ, ತಂಬಾಕು, ತರಕಾರಿ, ಕೂಲಿ, ಚಮಚ, ಪಂಚಾಯಿತಿ, ಮೇಜು, ರಜ, ರೈತ, ಸಜ್ಜಿಗೆ, ಸಿಬ್ಬಂದಿ, ಹರತಾಳ
ಸತೀಶ್ ಕುಮಾರ್
This article uses material from the Wikipedia ಕನ್ನಡ article ಕನ್ನಡ ಸಾಹಿತ್ಯ ಚರಿತ್ರೆ, which is released under the Creative Commons Attribution-ShareAlike 3.0 license ("CC BY-SA 3.0"); additional terms may apply (view authors). ವಿಶೇಷವಾಗಿ ಟಿಪ್ಪಣಿ ಮಾಡದಿದ್ದ ಹೊರತು ಪಠ್ಯ "CC BY-SA 4.0" ರಡಿ ಲಭ್ಯವಿದೆ. Images, videos and audio are available under their respective licenses.
®Wikipedia is a registered trademark of the Wiki Foundation, Inc. Wiki ಕನ್ನಡ (DUHOCTRUNGQUOC.VN) is an independent company and has no affiliation with Wiki Foundation.