ವಂದೇ ಮಾತರಮ್

ವಂದೇ ಮಾತರಂ ಪಶ್ಚಿಮ ಬಂಗಾಳದ ಪ್ರಮುಖ ಲೇಖಕ ಮತ್ತು ಕವಿ ಬಂಕಿಮಚಂದ್ರ ಚಟರ್ಜಿ ರಚಿಸಿದ, ಬ್ರಿಟಿಷರ ಕಾಲದಲ್ಲಿ ರಾಷ್ಟ್ರದ ಜನತೆಗೆ ಸ್ವಾತಂತ್ರ್ಯದ ಜಾಗೃತಿಯನ್ನುಂಟು ಮಾಡಿದ ಕೃತಿ.

ರಾಷ್ಟ್ರಗೀತೆಯಾಗುವ ಎಲ್ಲ ಅಂಶ, ಅರ್ಹತೆಗಳಿದ್ದರೂ, ರವೀಂದ್ರನಾಥ ಟಾಗೋರ್ ರ ಜನಗಣ ಮನ ಕೃತಿಗೆ ಆ ಪಟ್ಟ ದೊರಕಿತು.

ವಂದೇ ಮಾತರಂ ಎಂದರೆ, ತಾಯಿಯನ್ನು ನಮಸ್ಕರಿಸುತ್ತೇನೆ ಎಂದರ್ಥ. ಇದನ್ನು ರಾಷ್ಟ್ರೀಯ ಗಾನ ಎಂದು ಕರೆಯಲಾಗುತ್ತದೆ. ಇದು ಬಂಗಾಲಿಮತ್ತು ಸಂಸ್ಕೃತ ಭಾಷೆಗಳಲ್ಲಿದೆ. ಬಂಕಿಮರು ೧೮೮೨ರಲ್ಲಿ ಬರೆದ "ಆನಂದ ಮಠ" ಎಂಬ ಕೃತಿಯ ಭಾಗವಾಗಿದ್ದ ಈ ಗೀತೆ ಅತ್ಯಂತ ಜನಪ್ರಿಯತೆ ಗಳಿಸಿತು. ಇದನ್ನು ೧೮೯೬ರಲ್ಲಿ ನಡೆದ ಭಾರತ ರಾಷ್ಟ್ರೀಯ ಕಾಂಗ್ರೆಸ್ ನ ಅಧಿವೇಶನದಲ್ಲಿ ರವೀಂದ್ರನಾಥ ಟಾಗೋರ್ ಅವರು ಹಾಡಿದರು. ಭಾರತವು ಸ್ವತಂತ್ರವಾದ ನಂತರ ೧೯೫೦ರಲ್ಲಿ ಈ ಗೀತೆಯ ಮೊದಲ ಎರಡು ಪದ್ಯ ಭಾಗಗಳಿಗೆ ಭಾರತೀಯ ಗಣರಾಜ್ಯದ ರಾಷ್ಟ್ರೀಯ ಗಾನ ಎಂಬ ಅಧಿಕೃತ ಮನ್ನಣೆಯನ್ನು ನೀಡಲಾಯಿತು.

ವಂದೇಮಾತರಂನ ಖ್ಯಾತ ಭಾಗ

ವಂದೇ ಮಾತರಂ

ವಂದೇ ಮಾತರಂ!

ಸುಜಲಾಂ ಸುಫಲಾಂ ಮಲಯಜ-ಶೀತಲಾಂ ಸಸ್ಯ-ಶ್ಯಾಮಲಾಂ ಮಾತರಂ!

ಶುಭ್ರ-ಜ್ಯೋತ್ಸ್ನಾ-ಪುಲಕಿತ-ಯಾಮಿನೀಂ ಫುಲ್ಲ-ಕುಸುಮಿತ-ದ್ರುಮದಲ-ಶೋಭಿನೀಂ

ಸುಹಾಸಿನೀಂ ಸುಮಧುರ-ಭಾಷಿಣೀಂ, ಸುಖದಾಂ ವರದಾಂ ಮಾತರಂ!


ಕೋಟಿ-ಕೋಟಿ-ಕಂಠ-ಕಲಕಲ-ನಿನಾದ-ಕರಾಲೇ

ಕೋಟಿ-ಕೋಟಿ-ಭುಜೈರ್ದೃತ-ಖರಕರವಾಲೇ ಅಬಲಾ ಕೇನ ಮಾ ಏತ ಬಲೇ

ಬಹುಬಲ-ಧಾರಿಣೀಂ ನಮಾಮಿ ತಾರಿಣೀಂ ರಿಪುದಲ-ವಾರಿಣೀಂ ಮಾತರಂ!

ಸಂಪೂರ್ಣ ಗೀತೆ

ವಂದೇ ಮಾತರಂ

ವಂದೇ ಮಾತರಂ!

ಸುಜಲಾಂ ಸುಫಲಾಂ ಮಲಯಜ-ಶೀತಲಾಂ ಸಸ್ಯ-ಶ್ಯಾಮಲಾಂ ಮಾತರಂ!

ಶುಭ್ರ-ಜ್ಯೋತ್ಸ್ನಾ-ಪುಲಕಿತ-ಯಾಮಿನೀಂ ಫುಲ್ಲ-ಕುಸುಮಿತ-ದ್ರುಮದಲ-ಶೋಭಿನೀಂ

ಸುಹಾಸಿನೀಂ ಸುಮಧುರ-ಭಾಷಿಣೀಂ, ಸುಖದಾಂ ವರದಾಂ ಮಾತರಂ!

ಕೋಟಿ-ಕೋಟಿ-ಕಂಠ-ಕಲಕಲ-ನಿನಾದ-ಕರಾಲೇ

ಕೋಟಿ-ಕೋಟಿ-ಭುಜೈರ್ಧೃತ-ಖರಕರವಾಲೇ ಅಬಲಾ ಕೇನ ಮಾ ಏತ ಬಲೇ

ಬಹುಬಲ-ಧಾರಿಣೀಂ ನಮಾಮಿ ತಾರಿಣೀಂ ರಿಪುದಲ-ವಾರಿಣೀಂ ಮಾತರಂ!


ತುಮಿ ವಿದ್ಯಾ, ತುಮಿ ಧರ್ಮ, ತುಮಿ ಹೃದಿ ತುಮಿ ಮರ್ಮ, ತ್ವಂ ಹಿ ಪ್ರಾಣಾಃ ಶರೀರೇ, ಬಾಹು ತೇ ತುಮಿ ಮಾ ಶಕ್ತಿ

ಹೃದಯೇ ತುಮಿ ಮಾ ಭಕ್ತಿ, ತೋಮಾರಈ ಪ್ರತಿಮಾ-ಗಡಿ-ಮಂದಿರೇ, ಮಂದಿರೇ


ತ್ವಂ ಹಿ ದುರ್ಗಾ ದಶ-ಪ್ರಹರಣ-ಧಾರಿಣೀ ಕಮಲಾ ಕಮಲಾದಲ-ವಿಹಾರಿಣೀ

ವಾಣೀ ವಿದ್ಯಾ-ದಾಯಿನೀ ನಮಾಮಿ ತ್ವಾಂ ನಮಾಮಿ ಕಮಲಾಂ ಅಮಲಾಂ ಅತುಲಾಂ

ಸುಜಲಾಂ ಸುಫಲಾಂ ಮಾತರಂ, ವಂದೇ ಮಾತರಂ!


ಶ್ಯಾಮಲಾಂ ಸರಲಾಂ ಸುಸ್ಮಿತಾಂ ಭೂಷಿತಾಂ ಧರಣೀಂ ಭರಣೀಂ ಮಾತರಂ!

‘ವಂದೇ ಮಾತರಂ’ ಗೀತೆಯ ಭಾವಾರ್ಥ

ಹೇ ಮಾತೆ, ನಾನು ನಿನಗೆ ವಂದಿಸುತ್ತೇನೆ.ಜಲ, ಧನಧಾನ್ಯಗಳಿಂದ ಸಮೃದ್ಧವಾಗಿರುವ, ದಕ್ಷಿಣದಲ್ಲಿನ ಮಲಯ ಪರ್ವತದಿಂದ ಬರುವ ವಾಯುಲಹರಿಗಳಿಂದ ಶೀತಲವಾಗುವ ಮತ್ತು ವಿಪುಲವಾದ ಕೃಷಿಯಿಂದ ಶ್ಯಾಮಲ ವರ್ಣವಾಗಿರುವ, ಹೇ ಮಾತೆ !

ಶ್ವೇತಶುಭ್ರ ಬೆಳದಿಂಗಳಿನಿಂದ ನಿನ್ನ ರಾತ್ರಿಗಳು ಪ್ರಫುಲ್ಲಿತವಾಗಿರುತ್ತವೆ, ಅದೇ ರೀತಿ ಅರಳಿದ ಹೂವುಗಳಿಂದ ನಿನ್ನ ಭೂಮಿಯು ವೃಕ್ಷಬಳ್ಳಿಗಳ ವಸ್ತ್ರಗಳನ್ನು ಧರಿಸಿದಂತೆ ಸುಶೋಭಿತವಾಗಿ ಕಾಣಿಸುತ್ತದೆ. ಸದಾ ಹಸನ್ಮುಖ ಮತ್ತು ಸದಾಕಾಲ ಮಧುರವಾಗಿ ಮಾತನಾಡುವ, ವರದಾಯಿನಿ, ಸುಖಪ್ರದಾಯಿನಿಯಾಗಿರುವ ಹೇ ಮಾತೆ !

ಮೂವತ್ತು ಕೋಟಿ ಕಂಠಗಳಿಂದ ಭಯಂಕರವಾದ ಗರ್ಜನೆಯು ಮೊಳಗುತ್ತಿರುವಾಗ ಮತ್ತು ಆರವತ್ತು ಕೋಟಿ ಕೈಗಳಲ್ಲಿ ಹಿಡಿದಿರುವ ಖಡ್ಗಗಳ ಮೊನೆಯು ಹೊಳೆಯುತ್ತಿರುವಾಗ ಹೇ ಮಾತೆಯೇ ನೀನು ಅಬಲೆಯಾಗಿದ್ದಿ ಎಂದು ಹೇಳಲು ಯಾರಿಗಾದರೂ ಧೈರ್ಯವಿದೆಯೇ? ವಾಸ್ತವದಲ್ಲಿ ಮಾತೆಯೇ ಅಪಾರ ಸಾಮರ್ಥ್ಯವು ನಿನ್ನಲ್ಲಿದೆ. ಶತ್ರುಸೈನ್ಯದ ಪಡೆಯನ್ನೇ ಹಿಂತಿರುಗಿಸಿ ನಿನ್ನ ಸಂತಾನವಾದ ನಮ್ಮನ್ನು ರಕ್ಷಿಸುತ್ತಿರುವ ಹೇ ಮಾತೆಯೇ ನಾನು ನಿನಗೆ ವಂದಿಸುತ್ತೇನೆ.

ನೀನೇ ನಮ್ಮ ಜ್ಞಾನ, ನೀನೇ ನಮ್ಮ ಚಾರಿತ್ರ್ಯ, ನೀನೇ ನಮ್ಮ ಧರ್ಮವಾಗಿದ್ದಿ. ನೀನೇ ನಮ್ಮ ಹೃದಯ, ನೀನೇ ನಮ್ಮ ಚೈತನ್ಯವಾಗಿದ್ದಿ. ನಮ್ಮ ದೇಹದಲ್ಲಿನ ಪ್ರಾಣವು ಖಂಡಿತವಾಗಿಯೂ ನೀನೇ ಆಗಿದ್ದಿ. ನಮ್ಮ ಮಣಿಕಟ್ಟಿನಲ್ಲಿರುವ ಶಕ್ತಿ ನೀನೇ ಮತ್ತು ಅಂತಃಕರಣದಲ್ಲಿನ ಕಾಳಿಯೂ ನೀನೇ. ದೇವಸ್ಥಾನದಲ್ಲಿ ನಾವು ಯಾವ ಮೂರ್ತಿಯ ಪ್ರತಿಷ್ಠಾಪನೆ ಮಾಡುತ್ತೇವೆಯೋ ಅದೆಲ್ಲವೂ ನಿನ್ನದೇ ರೂಪಗಳು.

ತನ್ನ ಹತ್ತೂ ಕೈಗಳಲ್ಲಿ ಹತ್ತು ಶಸ್ತ್ರಗಳನ್ನು ಧರಿಸಿದ ಶತ್ರುಸಂಹಾರಿಣಿ ದುರ್ಗೆಯೂ ನೀನೆ ಮತ್ತು ಕಮಲದ ಪುಷ್ಪಗಳಿಂದ ತುಂಬಿದ ಸರೋವರದಲ್ಲಿ ವಿಹರಿಸುವ ಕಮಲಕೋಮಲ ಲಕ್ಷ್ಮೀಯೂ ನೀನೆ. ನಿನಗೆ ನಮ್ಮ ನಮಸ್ಕಾರ. ಮಾತೆ, ನಾನು ನಿನಗೆ ವಂದಿಸುತ್ತೇನೆ. ಐಶ್ವರ್ಯದಾತ್ರಿ, ಪುಣ್ಯಪ್ರದಾಯಿನಿ ಮತ್ತು ಪಾವನ, ಪವಿತ್ರ ಜಲಪ್ರವಾಹಗಳಿಂದ ಮತ್ತು ಅಮೃತಮಯ ಫಲಗಳಿಂದ ಸಮೃದ್ಧಳಾಗಿರುವ ಮಾತೆಯೇ ನಿನ್ನ ಶ್ರೇಷ್ಠತನಕ್ಕೆ ಯಾವುದೇ ಹೋಲಿಕೆಯಿಲ್ಲ, ಯಾವುದೇ ಮಿತಿಯೂ ಇಲ್ಲ. ಹೇ ಮಾತೆ, ಹೇ ಜನನಿ ನಿನಗೆ ನನ್ನ ಪ್ರಣಾಮಗಳು.

ಬಾಹ್ಯ ಸಂಪರ್ಕಗಳು

ಉಲ್ಲೇಖಗಳು

Tags:

ವಂದೇ ಮಾತರಮ್ ವಂದೇಮಾತರಂನ ಖ್ಯಾತ ಭಾಗವಂದೇ ಮಾತರಮ್ ಸಂಪೂರ್ಣ ಗೀತೆವಂದೇ ಮಾತರಮ್ ಬಾಹ್ಯ ಸಂಪರ್ಕಗಳುವಂದೇ ಮಾತರಮ್ ಉಲ್ಲೇಖಗಳುವಂದೇ ಮಾತರಮ್ಬಂಕಿಮ ಚಂದ್ರ ಚಟ್ಟೋಪಾಧ್ಯಾಯಭಾರತದ ರಾಷ್ಟ್ರಗೀತೆರವೀಂದ್ರನಾಥ ಠಾಗೋರ್

🔥 Trending searches on Wiki ಕನ್ನಡ:

ಹಾಸನ ಜಿಲ್ಲೆಹಾ.ಮಾ.ನಾಯಕ೧೮೬೨ಮೈಸೂರು ಸಂಸ್ಥಾನಭಾರತೀಯ ಅಂಚೆ ಸೇವೆಹನುಮಾನ್ ಚಾಲೀಸಕನ್ನಡ ಗುಣಿತಾಕ್ಷರಗಳುಹನುಮ ಜಯಂತಿಹಲ್ಮಿಡಿಶಾಂತಿನಿಕೇತನಒಗಟುಭಾರತದಲ್ಲಿನ ಶಿಕ್ಷಣತಂತ್ರಜ್ಞಾನನಾಟಕಸೇಡಿಯಾಪು ಕೃಷ್ಣಭಟ್ಟಪಠ್ಯಪುಸ್ತಕಕನ್ನಡ ಅಕ್ಷರಮಾಲೆಮಲೆನಾಡುಭಾರತದಲ್ಲಿ ತುರ್ತು ಪರಿಸ್ಥಿತಿಕರ್ನಾಟಕದ ಏಕೀಕರಣಪಿತ್ತಕೋಶವಿಕಿಪೀಡಿಯ ಪ್ರಚಲಿತ ವಿದ್ಯಮಾನಗಳುಬಾಲಕಾಂಡಅಶೋಕ್ಪ್ರಚಂಡ ಕುಳ್ಳಓಂ ನಮಃ ಶಿವಾಯಎರಡನೇ ಮಹಾಯುದ್ಧರಾಮಾಯಣಕನ್ನಡ ಕಾವ್ಯಸಮುಚ್ಚಯ ಪದಗಳುಮಧ್ವಾಚಾರ್ಯಗದ್ಯದಕ್ಷಿಣ ಕನ್ನಡಜಿ.ಪಿ.ರಾಜರತ್ನಂತಲಕಾಡುಗುಪ್ತ ಸಾಮ್ರಾಜ್ಯಅವತಾರಸಮಾಸಅನುಪಮಾ ನಿರಂಜನಜಲ ಮೂಲಗಳುದ್ರಾವಿಡ ಭಾಷೆಗಳುಅಂತರ್ಜಾಲ ಹುಡುಕಾಟ ಯಂತ್ರಗ್ರಾಮ ಪಂಚಾಯತಿವಿಷ್ಣುವಿಧಾನಸೌಧಅಥರ್ವವೇದಕೆಂಬೂತ-ಘನವಿಶ್ವಕರ್ಮಎಚ್.ಎಸ್.ಶಿವಪ್ರಕಾಶ್ಮಳೆನೀರು ಕೊಯ್ಲುಗವಿಸಿದ್ದೇಶ್ವರ ಮಠತ್ರಿವೇಣಿಜಲ ಮಾಲಿನ್ಯನಾಗರೀಕತೆಮಂಗಳೂರುದ್ವಿರುಕ್ತಿಗೌತಮ ಬುದ್ಧಕೆ. ಅಣ್ಣಾಮಲೈಜಾನಪದಚಾಣಕ್ಯಚಂದ್ರಯಾನ-೩ವ್ಯವಹಾರರಾಷ್ಟ್ರೀಯ ಸ್ವಯಂಸೇವಕ ಸಂಘಸವಿತಾ ನಾಗಭೂಷಣಪರಿಸರ ವ್ಯವಸ್ಥೆಭಾರತದ ಸಂವಿಧಾನ ರಚನಾ ಸಭೆಏಡ್ಸ್ ರೋಗಮೈಸೂರು ರಾಜ್ಯವಾಲಿಬಾಲ್ಸಂಭೋಗಶ್ರೀ ರಾಮ ನವಮಿಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮವೃತ್ತಪತ್ರಿಕೆಕ್ರೈಸ್ತ ಧರ್ಮಬಾದಾಮಿವಾಸ್ತುಶಾಸ್ತ್ರಯೇಸು ಕ್ರಿಸ್ತಸಾವಿತ್ರಿಬಾಯಿ ಫುಲೆ🡆 More