ರಿಕ್ಟರ್ ಮಾಪಕ

ರಿಕ್ಟರ್, ಮಾನಕ ಅಧಿಕೇಂದ್ರಗಳಲ್ಲಿ ಭೂಕಂಪನಗಳ ಪರಿಮಾಣ ವನ್ನು ಅಂದಾಜು ಮಾಡಲು ಮತ್ತು ತುಲನೆ ಮಾಡಲು ಉಪಯೋಗಿಸುವ ಅಳತೆಗೋಲು (ರಿಕ್ಟರ್ ಸ್ಕೇಲ್).

ರಿಕ್ಟರ್ ಮಾಪಕ
ಚಾರ್ಲ್ಸ್ ರಿಕ್ಟರ್
ರಿಕ್ಟರ್ ಮಾಪಕ
ರಿಕ್ಟರ್ ಮಾಪಕ

ಈ ಅಳತೆಗೋಲನ್ನು ಮೊಟ್ಟಮೊದಲಿಗೆ ೧೯೩೫ರಲ್ಲಿ ಚಾರ್ಲ್ಸ್ ರಿಕ್ಟರ್ ಎಂಬ ವ್ಯಕ್ತಿಯು ಬೆನೋ ಗುಟನ್‌ಬರ್ಗ್ ಎಂಬ ವ್ಯಕ್ತಿಯೊಡಗೂಡಿ ಕ್ಯಾಲಿಫೋರ್ನಿಯಾದ ಕೆಲವು ಭಾಗಗಳಲ್ಲಿ ಅಳವಡಿಸಿದ್ದ ವುಡ್-ಆಂಡರ್ಸನ್ ಭೂಕಂಪ ಮಾಪಕದಲ್ಲಿ ದಾಖಲಾದ ಕಂಪನಗಳನ್ನು ಅಳೆಯಲು ಉಪಯೋಗಿಸಿದನು.


ಈ ಅಳತೆಗೋಲು ಭೂಮಿಗೆ ಸಮಾನಾಂತರವಾಗಿ ಆಗುವ ಕಂಪನದ ತೀವ್ರತೆಯನ್ನು ಅವಲಂಬಿಸಿ ೧೦ರ ಲಘುಗಣಕವನ್ನು ಆಧರಿಸಿರುದ ಒಂದು ಸಂಖ್ಯೆಯನ್ನು ನೀಡುತ್ತದೆ. ಇದೊಂದು ವಿವೃತಾಂತ (ಓಪನ್ ಎಂಡೆಡ್) ಲಘುಗಣಕೀಯ (ಲಾಗರಿತ್ಮಿಕ್) ಮಾನಕವಾಗಿದ್ದರೂ 0ಯಿಂದ 10ರವರೆಗೆ ಸಂಖ್ಯೆಗಳುಳ್ಳ ಮಾನಕವೆಂದು ನಿರೂಪಿಸುವುದು ರೂಢಿ. ಈ ವ್ಯಾಪ್ತಿಯನ್ನು ಮೀರುವ ಭೂಕಂಪನದ ಸಂಭವನೀಯತೆ ಕಡಿಮೆ ಎಂಬುದೇ ಕಾರಣ.

ಅಳತೆಗೋಲಿನ ಬಗ್ಗೆ ಹೆಚ್ಚಿನ ಮಾಹಿತಿ

ಭೂಚಲನೆಯ ಪಾರವನ್ನು (ಆಂಪ್ಲಿಟ್ಯೂಡ್) ಪ್ರಧಾನ ಅಲೆಯ ಅವಧಿಯಿಂದ ಭಾಗಿಸಿದಾಗ ಲಭಿಸುವ ಭಾಗಲಬ್ಧದ ಲಘುಗಣಕವನ್ನು ಈ ಮಾನಕದಲ್ಲಿ ನಮೂದಿಸಿರುವ ಸಂಖ್ಯೆಗಳು ಪ್ರತಿನಿಧಿಸುತ್ತವೆ. ಎಂದೇ, ರಿಕ್ಟರ್ ಮಾನಕದಲ್ಲಿ ಯಾವುದೇ ಸಂಖ್ಯೆ ಪ್ರತಿನಿಧಿಸುವ ಭೂಕಂಪನ ಅದರ ಹಿಂದಿನ ಸಂಖ್ಯೆಯದಕ್ಕಿಂತ 10ಪಟ್ಟು ಅಧಿಕ ಪರಿಮಾಣವುಳ್ಳದ್ದಾಗಿದೆ. ಭೂಕಂಪನ ಬಿಡುಗಡೆ ಮಾಡಿದ ಒಟ್ಟು ಶಕ್ತಿಯನ್ನು ಅಂದಾಜು ಮಾಡಲು ಮಾತ್ರ ಇದು ಉಪಯುಕ್ತ (ಸ್ಥಳದಿಂದ ಸ್ಥಳಕ್ಕೆ ಬದಲಾಗುವ ಭೂಕಂಪನ ವಿನಾಶಕಾರೀ ಸಾಮಥ್ರ್ಯ ವನ್ನು ಅಂದಾಜು ಮಾಡಲು ಮರ್ಕಲಿ ಮಾನಕ ಬಳಕೆಯಲ್ಲಿದೆ). ಅಮೆರಿಕನ್ ಭೂಕಂಪನವಿಜ್ಞಾನಿ ಚಾಲ್ರ್ಸ್ ಫ್ರಾನ್ಸಿಸ್ ರಿಕ್ಟರ್(1900-85) ಈ ಮಾನಕವನ್ನು ಉಪಜ್ಞಿಸಿದ (1935).


ರಿಕ್ಟರ್ ಮಾನಕದ ಸಂಖ್ಯೆಗಳು ಪ್ರತಿನಿಧಿಸುವ ಭೂಕಂಪಗಳ ಸಂಕ್ಷಿಪ್ತ ವಿವರಣೆ

  • 3.5 ಅಥವಾ ಅದಕ್ಕಿಂತ ಕಡಿಮೆ: ಭೂಕಂಪನ ಮಾಪಕಗಳು ಮಾತ್ರ ಗುರುತಿಸುತ್ತವೆ, ಮಾನವಗ್ರಾಹ್ಯ ಪರಿಣಾಮ ಗಳು ಇಲ್ಲ;
  • 3.5-6: ಸಾಪೇಕ್ಷ ಅತ್ಯಂತ ಲಘು ಕಂಪನ, ಅಸ್ಥಿರ ವಸ್ತುಗಳ ಬೀಳುವಿಕೆ ಮುಂತಾದ ಮಾನವಗ್ರಾಹ್ಯ ಪರಿಣಾಮಗಳು;
  • 6-7: ಗೋಡೆಗಳಲ್ಲಿ ಬಿರುಕು ಅಥವಾ ದುರ್ಬಲ ಗೋಡೆ, ಕಟ್ಟಡಗಳ ಕುಸಿತ, ಭೂಬಿರಿತ ಮುಂತಾದ ಗಂಭೀರ ಪರಿಣಾಮಗಳು;
  • 7-8: ಬಹುತೇಕ ಕಟ್ಟಡಗಳ ಹಾಗೂ ಸೇತುವೆಗಳ ನಾಶ, ರೈಲ್ವೆ ಹಳಿಗಳ ಬಾಗುವಿಕೆ, ಪ್ರವಾಹಗಳು, ಭೂಕುಸಿತಗಳು ಮುಂತಾದ ಆಪತ್ತುಗಳು.
  • 8ಕ್ಕಿಂತ ಅಧಿಕ: ಸರ್ವನಾಶ.

ಬಾಹ್ಯ ಸಂಪರ್ಕಗಳು

ರಿಕ್ಟರ್ ಮಾಪಕ 
ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ:

Tags:

ಭೂಕಂಪ

🔥 Trending searches on Wiki ಕನ್ನಡ:

ಸೆಸ್ (ಮೇಲ್ತೆರಿಗೆ)ಎಂ. ಎಸ್. ಉಮೇಶ್ಸಂಗೀತಸಿಂಧನೂರುಜನ್ನಶ್ರೀ ರಾಮ ಜನ್ಮಭೂಮಿಬಾದಾಮಿಮಹಾತ್ಮ ಗಾಂಧಿಬೆಲ್ಲಮಂಡಲ ಹಾವುಯಶವಂತ ಚಿತ್ತಾಲಗರ್ಭಧಾರಣೆಭಾರತದ ಸಂಸ್ಕ್ರತಿವಿಷ್ಣುವರ್ಧನ್ (ನಟ)ಜಾಗತಿಕ ತಾಪಮಾನವಿಜಯವಾಣಿತ್ರಿಪದಿಆರೋಗ್ಯವಾಯುಗುಣತಾಳಗುಂದ ಶಾಸನವಾಯು ಮಾಲಿನ್ಯಗುರು (ಗ್ರಹ)ಋತುಶ್ರೀಕೃಷ್ಣದೇವರಾಯಕರ್ನಾಟಕ ವಿಶ್ವವಿದ್ಯಾಲಯಜಲಿಯನ್‍ವಾಲಾ ಬಾಗ್ ಹತ್ಯಾಕಾಂಡಹೊಯ್ಸಳಮುದ್ದಣಬೆಂಗಳೂರು ಕೋಟೆಭರತನಾಟ್ಯಲಾರ್ಡ್ ಕಾರ್ನ್‍ವಾಲಿಸ್ವಿಶ್ವ ವ್ಯಾಪಾರ ಸಂಸ್ಥೆತಾಪಮಾನಶಾಂತಲಾ ದೇವಿಸಂಗೊಳ್ಳಿ ರಾಯಣ್ಣಜಲ ಮೂಲಗಳುಸೋಮನಾಥಪುರಬಲರಾಮದುರ್ಗಸಿಂಹಶ್ರೀನಾಥ್ಭಾರತದಲ್ಲಿ ಬಡತನವಿಭಕ್ತಿ ಪ್ರತ್ಯಯಗಳುಹಾವು ಕಡಿತಮಳೆಗಾಲನೀನಾದೆ ನಾ (ಕನ್ನಡ ಧಾರಾವಾಹಿ)ಚಿನ್ನಶನಿಮಂಗಳೂರುಯುಗಾದಿಕರ್ಕಾಟಕ ರಾಶಿಕುಂದಾಪುರಬಿ.ಟಿ.ಲಲಿತಾ ನಾಯಕ್ಭಾರತದ ವಾಯುಗುಣಒಗಟುಬೌದ್ಧ ಧರ್ಮಸಮುಚ್ಚಯ ಪದಗಳುಮೂಲಧಾತುಗಣರಾಜ್ಯೋತ್ಸವ (ಭಾರತ)ಅರ್ಥಶಾಸ್ತ್ರಹಾಲಕ್ಕಿ ಸಮುದಾಯಮನುಸ್ಮೃತಿಮಾಟ - ಮಂತ್ರನಗರೀಕರಣಪರಿಣಾಮಜಿ.ಪಿ.ರಾಜರತ್ನಂಗ್ರಹನುಡಿ (ತಂತ್ರಾಂಶ)ಶ್ವೇತ ಪತ್ರಹಿ. ಚಿ. ಬೋರಲಿಂಗಯ್ಯಬುಡಕಟ್ಟುಮಾಸ್ತಿ ವೆಂಕಟೇಶ ಅಯ್ಯಂಗಾರ್ರಾಜಧಾನಿಗಳ ಪಟ್ಟಿಸಂಸ್ಕೃತಚಿತ್ರದುರ್ಗಬಸವೇಶ್ವರಭಾರತದ ರಾಷ್ಟ್ರೀಯ ಉದ್ಯಾನಗಳುಟೊಮೇಟೊಪಂಚಾಂಗ🡆 More