ರಘುವೀರ್ ಚೌಧರಿ ಗುಜರಾತಿ ಸಾಹಿತಿ ಹಾಗೂ ವಿಮರ್ಶಕ.
ಪತ್ರಿಕೆಗಳ ಅಂಕಣಕಾರ. ಅನೇಕ ಸಾಹಿತ್ಯಿಕ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಇವರು ೫೧ನೇ ಜ್ಞಾನಪೀಠ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಇವರು ಕವನ, ಕಾದಂಬರಿ, ನಾಟಕ, ವಿಮರ್ಶೆ ಪ್ರಕಾರಗಳಲ್ಲಿ ಸಾಹಿತ್ಯ ರಚಿಸಿದ್ದಾರೆ. ಮುಖ್ಯವಾಗಿ ಗುಜರಾತಿ ಭಾಷೆಯಲ್ಲಿ ಸಾಹಿತ್ಯ ರಚಿಸುತ್ತಾರೆ ಹಾಗೂ ಕೆಲವು ಹಿಂದಿ ಭಾಷೆಯ ಲೇಖನಗಳನ್ನೂ ಬರೆದಿದ್ದಾರೆ. ೮೦ಕ್ಕೂ ಹೆಚ್ಚು ಪುಸ್ತಕಗಳನ್ನು ರಚಿಸಿದ್ದಾರೆ. ಇವರು ಪತ್ರಿಕೆಗಳಲ್ಲೂ ಸಕ್ರಿಯರಾಗಿದ್ದು ಸಂದೇಶ್, ಜನ್ಮಭೂಮಿ, ನಿರೀಕ್ಷಕ, ದಿವ್ಯಭಾಸ್ಕರ್ ಮುಂತಾದ ಪತ್ರಿಕೆಗಳಲ್ಲಿ ಅಂಕಣಕಾರರಾಗಿದ್ದರು. ಇವರ ರುದ್ರಮಹಾಲಯ ಗುಜರಾತ್ನ ಐತಿಹಾಸಿಕ ಕಾದಂಬರಿ ಖ್ಯಾತವಾಗಿತ್ತು. ಅವರ ಕಾದಂಬರಿಗಳಲ್ಲಿರುವ ಹಾಸ್ಯಪ್ರವೃತ್ತಿ ಉಳಿದ ಲೇಖಕರಿಗಿಂತ ಭಿನ್ನ.
ಅವರ ಕೆಲವು ಪ್ರಮುಖ ಕೃತಿಗಳು ಹೀಗಿವೆ.
તમસા ( કાવ્યસંગ્રહ) / રઘુવીર ચૌધરી -ತಮಸಾ, ಗುಜ್ ಲಿಟ್ ತಾಣದಲ್ಲಿ ಚೌಧರಿಯವರ ಕವನ ಸಂಗ್ರಹ (ಗುಜರಾತಿ ಭಾಷೆಯಲ್ಲಿದೆ) Archived 2016-12-20 ವೇಬ್ಯಾಕ್ ಮೆಷಿನ್ ನಲ್ಲಿ.
This article uses material from the Wikipedia ಕನ್ನಡ article ರಘುವೀರ್ ಚೌಧರಿ, which is released under the Creative Commons Attribution-ShareAlike 3.0 license ("CC BY-SA 3.0"); additional terms may apply (view authors). ವಿಶೇಷವಾಗಿ ಟಿಪ್ಪಣಿ ಮಾಡದಿದ್ದ ಹೊರತು ಪಠ್ಯ "CC BY-SA 4.0" ರಡಿ ಲಭ್ಯವಿದೆ. Images, videos and audio are available under their respective licenses.
®Wikipedia is a registered trademark of the Wiki Foundation, Inc. Wiki ಕನ್ನಡ (DUHOCTRUNGQUOC.VN) is an independent company and has no affiliation with Wiki Foundation.