ಕಾದಂಬರಿ ಮೂಕಜ್ಜಿಯ ಕನಸುಗಳು: Mukajjiya kanasugalu

ಮೂಕಜ್ಜಿಯ ಕನಸುಗಳು ಡಾ.

ಶಿವರಾಮ ಕಾರಂತರು ರಚಿಸಿರುವ ಒಂದು ಕಾದಂಬರಿ. ಈ ಕಾದಂಬರಿಗೆ ೧೯೭೭ರಲ್ಲಿ ಜ್ಞಾನಪೀಠ ಪ್ರಶಸ್ತಿ ಲಭಿಸಿದೆ. ಅಜ್ಜಿ ಮತ್ತು ಮೊಮ್ಮಗನ ನಡುವೆ ನಡೆಯೋ ಸಂಭಾಷಣೆಯನ್ನು ಶಿವರಾಮ ಕಾರಂತರು ಅದ್ಭುತವಾಗಿ ಕಟ್ಟಿ ಕೊಟ್ಟಿದ್ದಾರೆ. ಮೊಮ್ಮಗನ ಪ್ರಶ್ನೆಗಳಿಗೆ ಅಜ್ಜಿ ತನ್ನ ಅನಿಸಿಕೆಗಳನ್ನು ಹೇಳುತ್ತಾ ಇಂದಿನ ಜಮಾನದ ಜನತೆಗೆ ಇರುವ ಹಲವು ಬಗೆಯ ಗೊಂದಲಗಳನ್ನು ಬಿಡಿಸಿ ತಿಳಿಸಿದ್ದಾರೆ.ಈ ಕಾದಂಬರಿಯಲ್ಲಿ ಬರುವ ಮೂಕಜ್ಜಿಗೆ ಒಂದು ಅಚ್ಚರಿಯಾದ ಶಕ್ತಿ ಇರುತ್ತದೆ.ಅದೇನೆಂದರೆ,ಯಾವುದೇ ವಸ್ತು ಅಥವಾ ಮನುಷ್ಯನನ್ನು ಕಂಡರೆ ಅವರ ಬಗ್ಗೆ ಕನಸುಗಳು ಮೂಡುತ್ತವೆ.ಅಂದರೆ ಇವು ನಿದ್ದೆಯಲ್ಲಿ ಬರೋ ಕನಸುಗಳು ಅಲ್ಲ.ಎಚ್ಚರವಿದ್ದಾಗ ಬರುವ ಕನಸುಗಳು. ಈ ಕಾದಂಬರಿಯ ಕಥಾನಾಯಕಿ, ಮೂಕಜ್ಜಿ, ತನ್ನ ಕನಸುಗಳ ಬಗ್ಗೆ ಅವಳ ಮೊಮ್ಮಗನ ಹತ್ತಿರ ಹೇಳಿಕೊಳ್ಳುತ್ತಾಳೆ. ಈ ಕನಸುಗಳು ಮನುಷ್ಯನ ಸಾಮಾಜಿಕ ಬೆಳವಣಿಗೆಗಳು ಮತ್ತು ದೇವರ ಸ್ವರೂಪದ ಬಗ್ಗೆ ಇರುತ್ತದೆ.ಇಲ್ಲಿ ಹಲವು ಪಾತ್ರಗಳು ಬಂದು ಹೋದರು ಅಜ್ಜ್ಜಿ ಮತ್ತು ಮೊಮ್ಮಗನ ಪಾತ್ರಗಳು ಮುಖ್ಯವಾದವು ತಂತಮ್ಮ ಅಪಕ್ವ ನಂಬುಗೆಗಳನ್ನು ಪರರ ಮೇಲೆ ಹೊರಿಸಿದ ಜನರ ಕಥೆಯೂ ಇಲ್ಲಿದೆ. ಅದರಿಂದಾಗಿ ಇಂದಿನ ನಮಗೆ ಕೇಳಿಸದೇ ಹೋದ ಕೆಲವು ಯಾತನೆಯ ಧ್ವನಿಗಳನ್ನು ಲೇಖಕರು ಬಹಳ ಸೊಗಸಾಗಿ ಪುಟಗಳ ಮೇಲೆ ತಂದಿದ್ದಾರೆ.

ಮೂಕಜ್ಜಿಯ ಕನಸುಗಳು
ಕಾದಂಬರಿ ಮೂಕಜ್ಜಿಯ ಕನಸುಗಳು: ಹಿನ್ನಲೆ, ಕಥಾವಳಿ, ಪಾತ್ರಗಳು
ಲೇಖಕರುಕೆ. ಶಿವರಾಮ ಕಾರಂತ
ದೇಶಭಾರತ
ಭಾಷೆಕನ್ನಡ
ಪ್ರಕಾರಕಾದಂಬರಿ
ಪ್ರಕಾಶಕರುಎಸ್ ಬಿ ಎಸ್ ಪ್ರಕಾಶಕರು ಮತ್ತು ವಿತರಕರು (Kannada)
ಪ್ರಕಟವಾದ ದಿನಾಂಕ
೧೯೬೮
ಪುಟಗಳು೨೭೨
ಐಎಸ್‍ಬಿಎನ್9788172850623

ಹಿನ್ನಲೆ

ಕಾರoತರ ಈ ಕಾದoಬರಿಯು ಕರ್ನಾಟಕದ ಕರಾವಳಿಯ ಹಳ್ಲಿಯೊಂದರಲ್ಲಿ ನಡೆಯುತ್ತದೆ. ಕಾದಂಬರಿಯು ಪ್ರಾಚೀನಕಾಲದಿಂದ ನಂಬಿಕೊಂಡು ಬಂದಿರುವ ಸಂಪ್ರದಾಯಗಳನ್ನು, ದೇವರ ಅಸ್ತಿತ್ವವನ್ನು, ಇತಿಹಾಸ ಪರಂಪರೆಯನ್ನು, ಧಾರ್ಮಿಕ ವಿಧಿವಿಧಾನಗಳನ್ನು ಮತ್ತು ಅವುಗಳ ಹಿನ್ನಲೆಯನ್ನು ಅನ್ವೇಷಿಸುತ್ತದೆ. ಕಥೆಯು ಹಳ್ಳಿ ಜೀವನದ ಮಗ್ಗಲುಗಳನ್ನು, ಕೌಟುಂಬಿಕ ಸಂಬಂಧಗಳನ್ನು, ಧಾರ್ಮಿಕ ಆಚರಣೆಗಳನ್ನು ಹತ್ತಿರದಿಂದ ನೋಡುತ್ತದೆ. ಕಥೆಯು ಹೆಚ್ಚ್ರಾಗಿ ಕರಾವಳಿಯ ಕನ್ನಡವನ್ನು ಬಳಸುತ್ತದೆ.

ಕಥಾವಳಿ

ಸುಬ್ಬರಾಯನು ಕುತೂಹಲದ ವ್ಯಕ್ತಿ. ಅವನಿಗೆ ತಾನು ಚಿಕ್ಕವನಿಂದ ಕೇಳಿಕೊಂಡು ಬಂದಿರುವ ಕಥೆಗಳ ಹಿನ್ನಲೆ ಏನೆಂದು ತಿಳಿಯುವ ಕುತೂಹಲ. ಮೂಕಜ್ಜಿಯು ಸುಬ್ಬರಾಯನ ಅಜ್ಜಿ, ಅವಳ ಹೆಸರು ದೇವಿ ಮೂಕಾಂಬಿಕೆ ಮೇಲೆ ಇಡಲಾಗಿದೆ, ಅವಳೊಬ್ಬ ಅನಕ್ಷರಸ್ಥೆ, ವಿಧವೆ. ಕಥೆಯಲ್ಲಿ ಮೂಕಜ್ಜಿಗೆ ವಿಶೇಷವಾದ ಗ್ರಹಣಶಕ್ತಿ ಇದೆ, ಅವಳು ಹಿಂದೆ ನಡೆದುಹೋದ ಘಟನೆಗಳ, ಈಗ ಅಗುತ್ತಿರುವ ಘಟನೆಗಳ ಅರಿವಿದೆ. ಸುಬ್ಬರಾಯನು ತನ್ನ ಅಜ್ಜಿಯ ಜೊತೆ ನಡೆಸುವ ಚರ್ಚೆಗಳು ಕಾದಂಬರಿಯ ಜೀವಾಳ.

ಪಾತ್ರಗಳು

  • ಸುಬ್ಬರಾಯ- ಕಥೆಯ ನಾಯಕ,ನಿರೂಪಕ. ಸುಬ್ಬರಾಯನು ಒದಿದ ಹುಡುಗ, ಅವನಿಗೆ ಹಳ್ಳಿಯ ಧಾರ್ಮಿಕ ಆಚರಣೆಗಳ, ಅವುಗಳ ಇತಿಹಾಸ ತಿಳಿಯುವ ಹಂಬಲ.
  • ಮೂಕಜ್ಜಿ- ಸುಬ್ಬರಾಯನ ಅಜ್ಜಿ, ಅವಳ ಪೂರ್ಣ ಹೆಸರು ಮೂಕಾಂಬಿಕೆ ಅಂತ. ಕಾದಂಬರಿಯಲ್ಲಿ ಇವಳಿಗೆ ವಿಶೇಷವಾದ ಗ್ರಹಣಶಕ್ತಿ ಇದೆ, ಅವಳು ಹಿಂದೆ ನಡೆದುಹೋದ ಘಟನೆಗಳ, ಈಗ ಅಗುತ್ತಿರುವ ಘಟನೆಗಳನ್ನು ಸರಿಯಾಗಿ ಊಹಿಸುತ್ತಾಳೆ. ಹಳ್ಲಿಯ ಜನರ ಪ್ರಕಾರ ಈ ಅಜ್ಜಿಗೆ ಅರಳು ಮರಳು.
  • ಸೀತೆ-ಸುಬ್ಬರಾಯನ ಹೆಂಡತಿ.
  • ಜನಾರ್ಧನ-ಸುಬ್ಬರಾಯನ ಸ್ನೇಹಿತ, ಅವನೊಡನೆ ಇವನ ಒಡನಾಟ ಹೆಚ್ಚು.

ಬಹುಮಾನ, ಗೌರವಗಳು

ಮೂಕಜ್ಜಿಯ ಕನಸುಗಳು ಕಾದಂಬರಿಯು ೧೯೭೭ರ ಜ್ಞಾನಪೀಠ ಪ್ರಶಸ್ತಿ ಗಳಿಸಿತು.

ಉಲ್ಲೇಖಗಳು

Tags:

ಕಾದಂಬರಿ ಮೂಕಜ್ಜಿಯ ಕನಸುಗಳು ಹಿನ್ನಲೆಕಾದಂಬರಿ ಮೂಕಜ್ಜಿಯ ಕನಸುಗಳು ಕಥಾವಳಿಕಾದಂಬರಿ ಮೂಕಜ್ಜಿಯ ಕನಸುಗಳು ಪಾತ್ರಗಳುಕಾದಂಬರಿ ಮೂಕಜ್ಜಿಯ ಕನಸುಗಳು ಬಹುಮಾನ, ಗೌರವಗಳುಕಾದಂಬರಿ ಮೂಕಜ್ಜಿಯ ಕನಸುಗಳು ಉಲ್ಲೇಖಗಳುಕಾದಂಬರಿ ಮೂಕಜ್ಜಿಯ ಕನಸುಗಳುಕಾದಂಬರಿಜ್ಞಾನಪೀಠ ಪ್ರಶಸ್ತಿಶಿವರಾಮ ಕಾರಂತ

🔥 Trending searches on Wiki ಕನ್ನಡ:

ರಕ್ತಪಿಶಾಚಿತಂತ್ರಜ್ಞಾನದ ಉಪಯೋಗಗಳುಮೈಸೂರು ಸಂಸ್ಥಾನಕರ್ನಾಟಕ ಪೊಲೀಸ್ಹೊಂಗೆ ಮರದೇವಸ್ಥಾನಮಂಟೇಸ್ವಾಮಿಬಲರಾಮವಿಕಿಪೀಡಿಯರಾಮಾಯಣಭರತನಾಟ್ಯಬಿ.ಎಸ್. ಯಡಿಯೂರಪ್ಪಚೋಳ ವಂಶಬೆಂಗಳೂರು ನಗರ ಜಿಲ್ಲೆಕೆ. ಎಸ್. ನಿಸಾರ್ ಅಹಮದ್ಮತದಾನಋಗ್ವೇದಪತ್ರಿಕೋದ್ಯಮಪ್ರೇಮಾದೇವತಾರ್ಚನ ವಿಧಿಆಯ್ದಕ್ಕಿ ಲಕ್ಕಮ್ಮಜ್ಯೋತಿಷ ಶಾಸ್ತ್ರದ ನಕ್ಷತ್ರಗಳುಸಜ್ಜೆಪಿ.ಲಂಕೇಶ್ಚಂಡಮಾರುತರಾವಣಕರ್ನಾಟಕದ ಸಂಸ್ಕೃತಿಶಿವರಾಮ ಕಾರಂತಭಾರತೀಯ ಸಂಸ್ಕೃತಿಭಾರತೀಯ ಕಾವ್ಯ ಮೀಮಾಂಸೆಗಣೇಶಭಾರತದ ಪಂಚಾಯತ್ ರಾಜ್ ವ್ಯವಸ್ಥೆಹರಿಶ್ಚಂದ್ರವೇದಅಂತರಜಾಲಅಂತಿಮ ಸಂಸ್ಕಾರರಾಜಕುಮಾರ (ಚಲನಚಿತ್ರ)ಚಿದಂಬರ ರಹಸ್ಯವಿಜಯನಗರಮುಸುರಿ ಕೃಷ್ಣಮೂರ್ತಿತೀರ್ಥಕ್ಷೇತ್ರಕರ್ನಾಟಕದ ಜಾನಪದ ಕಲೆಗಳುಭ್ರಷ್ಟಾಚಾರರನ್ನಹುಣಸೆಪಿತ್ತಕೋಶಕಲ್ಯಾಣ ಕರ್ನಾಟಕಕಾರ್ಮಿಕರ ದಿನಾಚರಣೆಉಳ್ಳಾಲಎಚ್.ಎಸ್.ಶಿವಪ್ರಕಾಶ್ವೀರಗಾಸೆಅಶ್ವತ್ಥಮರಸುಭಾಷ್ ಚಂದ್ರ ಬೋಸ್ಹೈದರಾಲಿಮಂಕುತಿಮ್ಮನ ಕಗ್ಗಗ್ರಂಥ ಸಂಪಾದನೆಬಿಗ್ ಬಾಸ್ ಕನ್ನಡನಾಲ್ವಡಿ ಕೃಷ್ಣರಾಜ ಒಡೆಯರುಬಾಹುಬಲಿಮೂಲಧಾತುಗಳ ಪಟ್ಟಿದೇವರ ದಾಸಿಮಯ್ಯಹೀಮೊಫಿಲಿಯಅರ್ಥಶಾಸ್ತ್ರಅವತಾರಶ್ವೇತ ಪತ್ರಸವದತ್ತಿಚಾಣಕ್ಯಶಿರ್ಡಿ ಸಾಯಿ ಬಾಬಾಹಂಪೆಕರ್ಣಸರಕು ಮತ್ತು ಸೇವಾ ತೆರಿಗೆ (ಜಿಎಸ್‍ಟಿ)ಮಳೆಗಾಲಭಾಷಾ ವಿಜ್ಞಾನಸಂಘಟನೆವಸ್ತುಸಂಗ್ರಹಾಲಯಹಳೆಗನ್ನಡ🡆 More