ಮರಾಠಾ ಸಾಮ್ರಾಜ್ಯ

ಮರಾಠ ಸಾಮ್ರಾಜ್ಯ ಅಥವಾ ಮರಾಠ ಒಕ್ಕೂಟವು ಇಂದಿನ ಭಾರತದಲ್ಲಿ ೧೬೭೪ ರಿಂದ ೧೮೧೮ ರವರೆಗೆ ಇದ್ದ ಒಂದು ಹಿಂದೂ ರಾಜ್ಯ.

ತನ್ನ ತುತ್ತತುದಿಯನ್ನು ಮುಟ್ಟಿದಾಗ ಅದು ೨೫೦ ದಶಲಕ್ಷ ಎಕರೆ ( ೧ ದಶಲಕ್ಷ ಚದರ ಕಿ.ಮೀ) ಗಳಷ್ಟು ಅಂದರೆ ದಕ್ಷಿಣ ಏಷ್ಯಾದ ಮೂರನೇ ಒಂದು ಭಾಗದಷ್ಟು ಪ್ರದೇಶವನ್ನು ಹೊಂದಿತ್ತು.

ಮರಾಠಾ ಸಾಮ್ರಾಜ್ಯ
ಸುಮಾರು ೧೭೫೮ರಲ್ಲಿ ಸಾಮ್ರಾಜ್ಯದ ಉತ್ತುಂಗದಲ್ಲಿ ವ್ಯಾಪ್ತಿ

ಸಂಕ್ಷಿಪ್ತ ಇತಿಹಾಸ

ಮರಾಠಾ ಸಾಮ್ರಾಜ್ಯ 
ಧ್ವಜ

खचटबठफफबಬಾಳಿನುದ್ದಕ್ಕೂ ಬಿಜಾಪುರದ ಆದಿಲಶಾಹ ಮತ್ತು ಮುಘಲ್ ಚಕ್ರವರ್ತಿ ಔರಂಗಜೇಬರೊಂದಿಗೆ ಗೆರಿಲ್ಲಾ ಹೋರಾಟ ಮತ್ತು ಅನೇಕ ಸಾಹಸಗಳ ಮೂಲಕ ರಾಯಗಢವನ್ನು ರಾಜಧಾನಿಯಾಗಿಟ್ಟುಕೊಂಡ ಸ್ವತಂತ್ರ ಮರಾಠಾ ರಾಜ್ಯವೊಂದನ್ನು ಸ್ಥಳೀಯ ರಾಜ ಶಿವಾಜಿಯು ೧೬೭೪ ರಲ್ಲಿ ಸ್ಥಾಪಿಸಿದನು. ಶಿವಾಜಿಯು ವಿಶಾಲ ರಾಜ್ಯವನ್ನು ಬಿಟ್ಟು ತೀರಿಕೊಂಡನು. ಮುಘಲರು ಆಕ್ರಮಣಮಾಡಿದರಾದರೂ ೧೬೮೨ರಿಂದ ೧೭೦೭ ರವರೆಗಿನ ೨೫ ವರ್ಷಗಳಷ್ಟು ದೀರ್ಘವಾದ ಯುದ್ಧವು ಫಲನೀಡಲಿಲ್ಲ. ಶಿವಾಜಿಯ ಮೊಮ್ಮಗ ಶಾಹುವು ೧೭೪೯ ರವರೆಗೆ ಚಕ್ರವರ್ತಿಯಾಗಿ ಆಳಿದನು. ತನ್ನ ಆಳಿಕೆಯ ಕಾಲದಲ್ಲಿ ಶಾಹುವು ಪೇಶ್ವೆ ( ಅಂದರೆ ಪ್ರಧಾನಮಂತ್ರಿ) ಯನ್ನು ಸರಕಾರದ ಮುಖ್ಯಸ್ಥನನ್ನಾಗಿ ನೇಮಿಸಿದನು. ಶಾಹುವಿನ ಮರಣಾನಂತರ ೧೭೪೯ ರಿಂದ ೧೭೬೧ ರವರೆಗೆ ಪೇಶ್ವೆಗಳು ವಸ್ತುಶಃ ಸಾಮ್ರಾಜ್ಯದ ಅಧಿಪತಿಗಳೇ ಆದರು. ಈ ಅವಧಿಯಲ್ಲಿ ಶಿವಾಜಿಯ ನಂತರ ಬಂದವರು ಸತಾರಾದ ತಮ್ಮ ನೆಲೆಯಿಂದ ಹೆಸರಿಗೆ ಮಾತ್ರ ರಾಜರಾಗಿ ಮುಂದುವರೆದರು. ಭಾರತೀಯ ಉಪಖಂಡದ ಬಹುಭಾಗವನ್ನು ವ್ಯಾಪಿಸಿ , ಮರಾಠಾ ಸಾಮ್ರಾಜ್ಯವು ೧೮ನೇ ಶತಮಾನದಲ್ಲಿ ಬ್ರಿಟಿಷ್ ಸಾಮ್ರಾಜ್ಯದ ಬೆಳವೆಣಿಗೆಗೆ , ನಂತರ ಪೇಶ್ವೆಗಳು ಮತ್ತು ಅವರ ಸರದಾರರ ನಡುವಿನ ಮತಭೇದಗಳಿಂದಾಗಿ ಅವರ ಒಕ್ಕಟ್ಟು ಒಡೆಯುವವರೆಗೆ , ಕಡಿವಾಣ ಹಾಕಿತು.

ಮರಾಠಾ ಸಾಮ್ರಾಜ್ಯವು ೧೮ನೇ ಶತಮಾನದಲ್ಲಿ ಶಾಹು ಮತ್ತು ಪೇಶ್ವೆ ಮೊದಲನೇ ಬಾಜೀರಾವ್ ಕಾಲಕ್ಕೆ ತನ್ನ ಉಚ್ಛ್ರಾಯ ಸ್ಥಿತಿಯನ್ನು ತಲುಪಿತು. ೧೭೬೧ ರಲ್ಲಿ ಮೂರನೆಯ ಪಾಣಿಪತ್ ಯುದ್ಧದ ಸೋಲು ಸಾಮ್ರಾಜ್ಯದ ಇನ್ನಷ್ಟು ವಿಸ್ತರಣೆಯನ್ನು ತಡೆದು ಪೇಶ್ವೆಗಳ ಅಧಿಕಾರವನ್ನು ಮೊಟಕುಗೊಳಿಸಿತು. ಆಗ ಅವರು ರಾಜ್ಯದ ಮೇಲಿನ ತಮ್ಮ ಹಿಡಿತವನ್ನು ಕಳೆದುಕೊಂಡರು. ಶಿಂಧೆ , ಹೋಳ್ಕರ್ , ಗಾಯಕವಾಡ್ , ಪಂತಪ್ರತಿನಿಧಿ ಮತ್ತು ನೇವಳ್ಕರ್ ರು ತಂತಮ್ಮ ಪ್ರದೇಶಗಳಿಗೆ ರಾಜರಾದರು. ಸಾಮ್ರಾಜ್ಯವು ಸಡಿಲಾದ ಒಕ್ಕೂಟವೊಂದಕ್ಕೆ ದಾರಿ ಮಾಡಿಕೊಟ್ಟಿತು. ಅಧಿಕಾರವು ಐದು ಪ್ರಮುಖ ಮನೆತನಗಳಲ್ಲಿ ಉಳಿಯಿತು: ಪುಣೆಯ ಪೇಶ್ವೆಗಳು ; ಮಾಳವ ಮತ್ತು ಗ್ವಾಲಿಯರ್ಸಿಂಧಿಯಾರು (ಮೂಲದಲ್ಲಿ ಇವರು ಶಿಂಧೆ);ಇಂದೂರ್ ನ ಹೋಳ್ಕರ್ ರು ;ನಾಗಪುರದ ಭೋಂಸ್ಲೆ ಗಳು ; ಬರೋಡದ ಗಾಯಕವಾಡ್ ರು. ೧೯ ನೇ ಶತಮಾನದ ಮೊದಲಿಗೆ ಸಿಂಧಿಯ ಮತ್ತು ಹೋಳ್ಕರರ ನಡುವಿನ ವೈರತ್ವವು ಬ್ರಿಟಿಷರು ಮತ್ತು ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯ ಜತೆಗಿನ ಮೂರು ಆಂಗ್ಲೋ ಮರಾಠಾ ಯುದ್ಧಗಳು ಈ ಒಕ್ಕೂಟದ ಪ್ರಮುಖ ಘಟನೆಗಳಾಗಿದ್ದವು . ಮೂರನೇ ಆಂಗ್ಲೋ ಮರಾಠಾ ಯುದ್ಧದಲ್ಲಿ ಕೊನೆಯ ಪೇಶ್ವೆಯಾದ ಎರಡನೇ ಬಾಜೀರಾಯನನ್ನು ಬ್ರಿಟಿಷರು ೧೮೧೮ರಲ್ಲಿ ಸೋಲಿಸಿದರು. ಮೊದಲಿನ ಮರಾಠಾ ಸಾಮ್ರಾಜ್ಯದ ಬಹುಭಾಗವನ್ನು ಬ್ರಿಟಿಷ್ ಭಾರತವು ತನ್ನೊಳಗೆ ಸೇರಿಸಿಕೊಂಡಿತಾದರೂ ಕೆಲವು ಭಾಗಗಳು ಭಾರತವು ೧೯೪೭ರಲ್ಲಿ ಸ್ವತಂತ್ರವಾಗುವವರೆಗೆ ಅರೆ-ಸ್ವತಂತ್ರವಾಗಿ ಉಳಿದುಕೊಂಡವು.

ಶಿವಾಜಿ ಮರಾಠರ ಸಿರಿವಂತ ಕುಟುಂಬ ಬೋಸ್ಲೆ ಕುಟುಂಬದಿಂದ ಬಂದವರು. ಶಿವಾಜಿ ಮರಾಠ ಸಾಮ್ರಾಜ್ಯದ ಸಂಸ್ಥಾಪಕ.ಶಿವಾಜಿ  1645 ರಲ್ಲಿ ಬಿಜಾಪುರವನ್ನು ವಶಪಡಿಸಿಕೊಂಡನು. ಇದು ಆದಿಲ್ ಷಾ ನ ವಶದಲ್ಲಿತ್ತು ಅವನನ್ನು ಸೋಲಿಸಿ ತೋರಣಗಲ್ಲನ್ನು

ವಶಪಡಿಸಿಕೊಂಡ. ರಾಯಗಡ, ಪುರಂದರಗಡ, ಚಾಕಣ್,ಸಿಂಹಗಡ,ಹೀಗೆ ಅನೇಕ ಕೋಟೆಗಳನ್ನು ವಶಪಡಿಸಿಕೊಂಡ ಅವುಗಳೆಂದರೆ  ಹಿಂಡವಿ, ಸ್ವರಾಜ್ಯ,  

ಶಿವಾಜಿ ಕ್ಲಿಷ್ಟ.1655 ರಲ್ಲಿ ಕೊಂಕಣಿ ಪ್ರದೇಶದ  ಜಾವಳಿ,ಕಲ್ಯಾಣ್ ಪ್ರದೇಶಗಳನ್ನು ವಶಪಡಿಸಿಕೊಂಡ ನ್ನು.

1659 ದಿಲ್ಲಿ ಸುಲ್ತಾನ್  ಶಿವಾಜಿ ಯನ್ನು ಹಿಮ್ಮೆಟ್ಟಿಸಲು ಅಪ್ಜಲ್ ಖಾನ್ ನೇತೃತ್ವದಲ್ಲಿ ಒಂದು ಸೈನ್ಯವನ್ನು ಕಳುಹಿಸಿದ ಈ ಸೈನ್ಯವನ್ನು ಶಿವಾಜಿ ಹಿಮ್ಮೆಟ್ಟಿಸಿದ.

ಶಿವಾಜಿ ಮರಾಠ ಸಾಮ್ರಾಜ್ಯದ ರಾಜಧಾನಿಯಾಗಿ ರಾಯಗಡ್ ವನ್ನು ಮಾಡಿಕೊಂಡು ತನ್ನ ವಿಜಯ ಯಾತ್ರೆ ಯನ್ನು ಮುಂದುವರಿಸಿದನ್ನು.ಮುಂದೆ ಮೊಘಲ್ ಸಾಮ್ರಾಜ್ಯವನ್ನು ಗೆದ್ದು   ಶಿವಾಜಿ ಕೀರೀಟ ಧಾರಣೆ ಮಾಡಿಕೊಂಡು ಛತ್ರಪತಿ ಶಿವಾಜಿ ಎಂದು ಕರೆಸಿಕೊಂಡನು.

ಶಿವಾಜಿಯು ತನ್ನ ಸಾಮ್ರಾಜ್ಯವನ್ನು ಅನೇಕ ಪ್ರಾಂತ್ಯಗಳನ್ನಾಗಿ ವಿಂಗಡಿಸಿ ಅವುಗಳನ್ನು ಸ್ವರಾಜ್ಯ, ಮೊಘಲರ ರಾಜ್ಯ ಎಂದು ಕರೆದನು.

ಆಡಳಿತ ಭಾಷೆ ಮರಾಠಿ ಆಗಿತ್ತು ಸರ್ಕಾರದ ಮುಖ್ಯಸ್ಥನಾದ ದೊರಗೆ ನೆರವು ನೀಡಲು ಅಷ್ಟೇ ಪ್ರಧಾನಿ ಎಂಬ ವ್ಯವಸ್ಥೆ ಇತ್ತು.

ಶಿವಾಜಿ ಮಹಾರಾಜರ ಸೈನ್ಯದಲ್ಲಿ ಕಾಲ್ದಳ,ಅಶ್ವದಳ,ಗಜದಳ, ಫಿರಂಗಿದಳ ಗಳೆಂಬ ನಾಲ್ಕು ದಳಗಳಿದ್ದವು.

ರಾಯಗಡ್,ರಾಜಗಡ್, ಪ್ರತಾಪ್ ಗಡ್, ತೋರಣಗಡ್, ಸಿಂಹಗಡ್, ಗಳಲ್ಲಿ ಕೋಟೆಗಳಿದ್ದವು.

ಸೈನ್ಯದಲ್ಲಿ ಅನೇಕ ಚಿಕ್ಕ ಚಿಕ್ಕ ಘಟಕಗಳಿದ್ದು ಗೆರಿಲ್ಲಾ ಯುದ್ಧ ತಂತ್ರಗಾರಿಕೆಯಲ್ಲಿ ಶಿವಾಜಿ ಸೈನ್ಯ ವಿಶೇಷ ತರಬೇತಿ ಹೊಂದಿತ್ತು

ಕ್ರಿಶಕ. 1680 ದಿಲ್ಲಿ ಶಿವಾಜಿಯ ಮರಣದ ನಂತರ ಅವನ ಮಗ ಸಂಬಾಜಿ ಅಧಿಕಾರಕ್ಕೆ ಬಂದ. ನಂತರ ಕೊನೆಯ ದೊರೆ ಸಾಹು ಅಧಿಕಾರಕ್ಕೆ ಬಂದ ಇವನ ನಂತರ ಪೇಶ್ವೆಗಳು ಪ್ರಬಲರಾದರು.

ಮರಾಠಾ ಸಾಮ್ರಾಜ್ಯವು ಉಪಖಂಡದ 4.1% ನಷ್ಟು ಭಾಗವನ್ನು ಒಳಗೊಂಡಿತ್ತು, ಆದರೆ ಇದು ದೊಡ್ಡ ಪ್ರದೇಶಗಳ ಮೇಲೆ ಹರಡಿತು. ಸಾವಿನ ಸಮಯದಲ್ಲಿ  ಶಿವಾಜಿಯು 300 ಕೋಟೆಗಳು, 50000 ಸೈನಿಕ ರನ್ನು ಹೊಂದಿದ್ದ. ಮತ್ತೆ ಪಶ್ಚಿಮ ಕರಾವಳಿ ಪ್ರದೇಶದಲ್ಲಿ ಒಂದು ನೌಕಾ ನೆಲೆಯನ್ನು ಹೊಂದಿದ್ದ.ತನ್ನ ಅಧಿಕಾವದಿಯಲ್ಲಿ ತನ್ನ ಸಾಮ್ರಾಜ್ಯವನ್ನು ಇನ್ನಷ್ಟು ವೃದ್ದಿಸಿದ್ದನು. ನಂತರ ಇವನ ಮೊಮ್ಮಕ್ಕಳು ಇವನ ಸಾಮ್ರಾಜ್ಯ ವಿಸ್ತರಣೆ ಮಾಡಿದ್ದರು ಪೇಶ್ವೆಗಳ ಸಹಾಯದಿಂದ ಈ ಕಾಲದಲ್ಲಿ ಮರಾಠ ಸಾಮ್ರಾಜ್ಯ ಸಮೃದ್ಧ ಭರಿತವಾಗಿತ್ತು.

Tags:

ದಕ್ಷಿಣ ಏಷ್ಯಾಭಾರತ

🔥 Trending searches on Wiki ಕನ್ನಡ:

ಹಳೇಬೀಡುಸೂರ್ಯವ್ಯೂಹದ ಗ್ರಹಗಳುಉತ್ತರ ಕನ್ನಡಪ್ರಬಂಧ ರಚನೆಒಂದನೆಯ ಮಹಾಯುದ್ಧಪಕ್ಷಿಹಿಂದೂ ಧರ್ಮದ್ವಾರಕೀಶ್ಕೃಷ್ಣದೇವರಾಯಸಾರಾ ಅಬೂಬಕ್ಕರ್ಮೋಕ್ಷಗುಂಡಂ ವಿಶ್ವೇಶ್ವರಯ್ಯಭಾರತದ ಸ್ವಾತಂತ್ರ್ಯ ಚಳುವಳಿಜಯಮಾಲಾಹುರುಳಿಭಾರತದ ಪ್ರಧಾನ ಮಂತ್ರಿಚದುರಂಗದ ನಿಯಮಗಳುದಾಸ ಸಾಹಿತ್ಯಭಾರತ ಸಂವಿಧಾನದ ಪೀಠಿಕೆರಾಶಿಧಾರವಾಡಭಾರತದ ಉಪ ರಾಷ್ಟ್ರಪತಿಹಂಸಲೇಖಅಂತರಜಾಲವಚನಕಾರರ ಅಂಕಿತ ನಾಮಗಳುಪರಿಸರ ವ್ಯವಸ್ಥೆನಾಲ್ವಡಿ ಕೃಷ್ಣರಾಜ ಒಡೆಯರುಶಬ್ದಮಣಿದರ್ಪಣಆವಕಾಡೊಸಹೃದಯತಾಳೀಕೋಟೆಯ ಯುದ್ಧಅ.ನ.ಕೃಷ್ಣರಾಯಹುಲಿಕುಮಾರವ್ಯಾಸಆದಿಪುರಾಣಹೈದರಾಲಿಕನ್ನಡದಲ್ಲಿ ನವ್ಯಕಾವ್ಯದೂರದರ್ಶನರಾಮಾಯಣಕ್ರಿಯಾಪದಪ್ರಜಾವಾಣಿಪರಿಸರ ಕಾನೂನುಅನುಪಮಾ ನಿರಂಜನದ.ರಾ.ಬೇಂದ್ರೆಭಾರತದಲ್ಲಿ ತುರ್ತು ಪರಿಸ್ಥಿತಿಸಂಯುಕ್ತ ರಾಷ್ಟ್ರ ಸಂಸ್ಥೆಧರ್ಮಸ್ಥಳಪರಿಣಾಮಚೀನಾಶಿವರಾಮ ಕಾರಂತಶಿವನ ಸಮುದ್ರ ಜಲಪಾತಸಂಪತ್ತಿಗೆ ಸವಾಲ್ಸಮುದ್ರಗೌತಮ ಬುದ್ಧವ್ಯಾಪಾರಪಿರಿಯಾಪಟ್ಟಣಪ್ಲಾಸಿ ಕದನಮಣ್ಣಿನ ಸಂರಕ್ಷಣೆಭಾರತೀಯ ರಿಸರ್ವ್ ಬ್ಯಾಂಕ್ಸಾಮ್ರಾಟ್ ಅಶೋಕಮೂಕಜ್ಜಿಯ ಕನಸುಗಳು (ಕಾದಂಬರಿ)ಪರಶುರಾಮನುಡಿಗಟ್ಟುಮೈಗ್ರೇನ್‌ (ಅರೆತಲೆ ನೋವು)ಜ್ಞಾನಪೀಠ ಪ್ರಶಸ್ತಿಶ್ರೀ ಸಿದ್ದೇಶ್ವರ ಸ್ವಾಮಿಜಿಗಳುಸಿದ್ಧಯ್ಯ ಪುರಾಣಿಕಮಹಾವೀರ ಜಯಂತಿಸಾಮಾಜಿಕ ಸಮಸ್ಯೆಗಳುಯಲ್ಲಮ್ಮ ದೇವಿ ದೇವಸ್ಥಾನ ಸವದತ್ತಿಯು.ಆರ್.ಅನಂತಮೂರ್ತಿಸಮಾಜಗೋಲ ಗುಮ್ಮಟಮನಮೋಹನ್ ಸಿಂಗ್ಆದಿವಾಸಿಗಳುಲೋಹಸಂವಹನರಕ್ತಪಿಶಾಚಿಹಾ.ಮಾ.ನಾಯಕಏಷ್ಯಾ🡆 More