ಭಾಲಚಂದ್ರ ವನಾಜಿ ನೆಮಾಡೆ(ಮರಾಠಿ: भालचंद्र वनाजी नेमाडे) ಮರಾಠಿ ಲೇಖಕರು.
ಇವರು ಕವಿ, ಕಾದಂಬರಿಕಾರ ಹಾಗೂ ವಿಮರ್ಶಕರಾಗಿ ಹೆಸರು ಮಾಡಿದ್ದಾರೆ. 'ಕೋಸಲಾ' ಮತ್ತು 'ಹಿಂದು' ಅವರ ಸುಪ್ರಸಿದ್ಧ ಕಾದಂಬರಿಗಳು. ’ಹಿಂದೂ’ ಎಂಬ ಕಾದಂಬರಿಗಾಗಿ ೨೦೧೪ ರ ೫೦ನೇ ಜ್ಞಾನಪೀಠ ಪ್ರಶಸ್ತಿಯನ್ನು ಪಡೆದರು. ಜ್ಞಾನಪೀಠ ಪ್ರಶಸ್ತಿ ಪಡೆದ ನಾಲ್ಕನೇ ಮರಾಠಿ ಲೇಖಕರಾಗಿದ್ದಾರೆ.
ಭಾಲಚಂದ್ರ ವನಾಜಿ ನೆಮಾಡೆ | |
---|---|
ಜನನ | ೧೯೩೮, ಮೇ ೨೭ ಸಾಂಗವೀ, ಕೊಲ್ಹಾಪುರ, ಮಹಾರಾಷ್ಟ್ರ |
ವೃತ್ತಿ | ಲೇಖಕ |
ಭಾಷೆ | ಮರಾಠಿ |
ರಾಷ್ಟ್ರೀಯತೆ | ಭಾರತೀಯ |
ಪ್ರಕಾರ/ಶೈಲಿ | ಕವನ, ಕಾದಂಬರಿ, ವಿಮರ್ಶೆ |
ಭಾಲಚಂದ್ರರು ಮಹಾರಾಷ್ಟ್ರದ ಕೊಲ್ಹಾಪುರ ಸಮೀಪದ 'ಸಾಂಗವೀ' ಗ್ರಾಮದಲ್ಲಿ ಕೃಷಿಕ ಕುಟುಂಬವೊಂದರಲ್ಲಿ ೧೯೩೮ರ ಮೇ ೨೭ರಂದು ಜನಿಸಿದರು. ಪುಣೆಯ ಫರ್ಗ್ಯುಸನ್ ಕಾಲೇಜಿನಿಂದ ಪದವಿ ಪಡೆದರು. ನಂತರ ಇಂಗ್ಲಿಷ್ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದು, ಉತ್ತರ ಮಹಾರಾಷ್ಟ್ರವಿಶ್ವವಿದ್ಯಾಲಯದಿಂದ ಪಿಎಚ್.ಡಿ. ಮತ್ತು ಡಿ.ಲಿಟ್ ಪದವಿಗಳನ್ನೂ ಪಡೆದಿದ್ದಾರೆ. ವಿವಿಧ ವಿಶ್ವವಿದ್ಯಾಲಯಗಳಲ್ಲಿ ಇಂಗ್ಲಿಷ್, ಮರಾಠಿ ಮತ್ತು ತೌಲನಿಕ ಅಧ್ಯಯನದ ಬೋಧಕರಾಗಿ ಅವರು ಕಾರ್ಯನಿರ್ವಹಿಸಿದ್ದಾರೆ.
This article uses material from the Wikipedia ಕನ್ನಡ article ಭಾಲಚಂದ್ರ ನೆಮಾಡೆ, which is released under the Creative Commons Attribution-ShareAlike 3.0 license ("CC BY-SA 3.0"); additional terms may apply (view authors). ವಿಶೇಷವಾಗಿ ಟಿಪ್ಪಣಿ ಮಾಡದಿದ್ದ ಹೊರತು ಪಠ್ಯ "CC BY-SA 4.0" ರಡಿ ಲಭ್ಯವಿದೆ. Images, videos and audio are available under their respective licenses.
®Wikipedia is a registered trademark of the Wiki Foundation, Inc. Wiki ಕನ್ನಡ (DUHOCTRUNGQUOC.VN) is an independent company and has no affiliation with Wiki Foundation.