No issues specified.
This article has multiple issues. Please help improve it or discuss these issues on the talk page. (Learn how and when to remove these template messages) Please specify issues, or remove this template. |
This article has been nominated to be checked for its neutrality. (March 2010) |
ಭಾರತ ಸರ್ಕಾರವು ಇಂದು ಭಾರತೀಯ ಕಾನೂನು ಆಧಾರಿತ ಮೀಸಲಾತಿಯ ಸೌಲಭ್ಯವನ್ನು ಶೇಕಡಾವಾರು ಪ್ರಮಾಣದ ಮೇಲೆ ಸರ್ಕಾರಿ ಮತ್ತು ಸಾರ್ವಜನಿಕ ಕಂಪನಿಗಳ ನೇಮಕಾತಿಯಲ್ಲಿ ಸೇವಾವಕಾಶವನ್ನು ಒದಗಿಸುತ್ತಿದೆ. ಅಷ್ಟೇ ಅಲ್ಲದೇ ಎಲ್ಲಾ ಸಾರ್ವಜನಿಕ ಮತ್ತು ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿಯೂ ಮೀಸಲಾತಿ ನೀಡುತ್ತದೆ.ಆದರೆ ಧಾರ್ಮಿಕ/ಭಾಷಾ ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳನ್ನು ಈ ನಿಯಮಗಳಿಂದ ಹೊರತುಪಡಿಸಲಾಗಿದೆ. ಪ್ರಮುಖವಾದುದ್ದೆಂದರೆ ಸಾಮಾಜಿಕವಾಗಿ ಶೈಕ್ಷಣಿಕವಾಗಿ ಹಿಂದುಳಿದ ಸಮುದಾಯಗಳಿಗೆ ಅಂದರೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದವರಿಗೆ ಸಾಮಾಜಿಕ ಹಿಂದುಳಿದಿರುವಿಕೆಯನ್ನು ಹೋಗಲಾಡಿಸಲು ಸರ್ಕಾರ ಇದನ್ನು ಜಾರಿಗೊಳಿಸಿದೆ.ಇದನ್ನು ನೀಡುವ ಕಾರಣವೆಂದರೆ ಅವರು ಇಂತಹ ಸೇವಾವಲಯಗಳಲ್ಲಿ ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ ಸೂಕ್ತ ಪ್ರಮಾಣದ ಪ್ರಾತಿನಿಧಿತ್ವ ಹೊಂದಿರುವುದಿಲ್ಲ.ಈ ಕೊರತೆ ನೀಗಿಸಲು ಭಾರತ ಸರ್ಕಾರವು ಈ ಕೋಟಾ ಪದ್ದತಿಯನ್ನು ಜಾರಿಗೊಳಿಸಿದೆ. ಈ ಮೀಸಲಾತಿ ಸೂತ್ರವನ್ನು ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ವರ್ಗಗಳಿಗೆ ಭಾರತದ ಸಂಸತ್ತಿನಲ್ಲೂ ಪಾರ್ಲಿಮೆಂಟ್ ಆಫ್ ಇಂಡಿಯಾದಲ್ಲಿಯೂ ಪ್ರತಿನಿಧಿತ್ವ ವಹಿಸಲು ನೀಡಿದೆ. ಕೇಂದ್ರ ಸರ್ಕಾರವು ಉನ್ನತ ಶಿಕ್ಷಣ ಮತ್ತು ಇನ್ನಿತರ ಸೌಲಭ್ಯಕ್ಕಾಗಿ 27% ಮೀಸಲಾತಿ ನೀಡಿದೆ.ಆಯಾ ರಾಜ್ಯಗಳು ತಮಗೆ ಅನುಕೂಲಕರ ಪ್ರಮಾಣದಲ್ಲಿ ಕೊಟಾವನ್ನು ನಿಗದಿ ಮಾಡಿಕೊಳ್ಳಬಹುದು. ಆದರೆ ಸರ್ವೋಚ್ಚ ನ್ಯಾಯಾಲಯದ ಆದೇಶದ ಪ್ರಕಾರ ಈ ಮೀಸಲಾತಿ ಪ್ರಮಾಣವು ಶೇ.50 ಕ್ಕಿಂತ ಹೆಚ್ಚಾಗಬಾರದು. ಆದರೆ ಭಾರತದ ರಾಜಸ್ಥಾನದಂತಹ ರಾಜ್ಯಗಳಲ್ಲಿ ಇದು 68% ರಷ್ಟಿದೆ, ಯಾಕೆಂದರೆ ಇದರಲ್ಲಿ 14% ಪ್ರಮಾಣವನ್ನು ಮುಂದವರೆದ ಜನಾಂಗದವರಿಗೂ ಕಲ್ಪಿಸಲಾಗಿದೆ.
ಮೀಸಲಾತಿ ಉದ್ದೇಶವು ಸಾಮಾಜಿಕ ವೈವಿಧ್ಯದಲ್ಲಿ ತಾರತಮ್ಯ ಅನುಭವಿಸುವ ಜನಾಂಗಗಳ ಹಕ್ಕು ರಕ್ಷಿಸುವ ಪ್ರಮುಖ ಉದ್ದೇಶವಾಗಿದೆ. ಒಟ್ಟು ಜನಸಂಖ್ಯೆಯಲ್ಲಿ ಕಡಿಮೆ ಪ್ರಾತಿನಿಧ್ಯ ಕಂಡ ಸಮುದಾಯವನ್ನು ಸಾಮಾನ್ಯ ಸರಾಸರಿಯೊಂದಿಗೆ ಮೇಳೈಸುವುದೇ ಇದರ ಪ್ರಮುಖ ಗುರಿಯೂ ಆಗಿದೆ. ಕಡಿಮೆ ಪ್ರಾತಿನಿಧ್ಯ ಕಂಡು ಹಿಡಿಯಲು ಜಾತಿ ಅತ್ಯಂತ ಸೂಕ್ತ ಮಾನದಂಡವಾಗಿದೆ. ಇದೂ ಅಲ್ಲದೇ ಅತ್ಯಂತ ಕಡಿಮೆ ಪ್ರಾತಿನಿಧ್ಯ ಪಡೆದ ಇನ್ನೂ ಹಲವು ವರ್ಗಗಳಿವೆ. ಅದರಲ್ಲೂ ಲಿಂಗ ತಾರತಮ್ಯವಿದೆ.(ಮಹಿಳೆಯರ ಪ್ರಾತಿನಿಧ್ಯವೂ ಕಡಿಮೆಯೇ)ರಾಜ್ಯದ ಸ್ಥಳೀಯ ಜನಸಂಖ್ಯೆಗೆ ಹೋಲಿಸಿದರೆ,(ಈಶಾನ್ಯ ರಾಜ್ಯಗಳು ಅದಲ್ಲದೇ ಬಿಹಾರ ಮತ್ತು ಉತ್ತರ ಪ್ರದೇಶಗಳಲ್ಲಿ ಪ್ರಾತಿನಿಧ್ಯದ ಸರಾಸರಿ ಕಡಿಮೆ.)ಗ್ರಾಮೀಣ ಭಾಗದಲ್ಲಿನ ಜನರ ಪಾಲ್ಗೊಳ್ಳುವಿಕೆ ವಿರಳ,ಎಂಬುದನ್ನು ನ್ಯಾಶನಲ್ ಫೆಮಿಲಿ ಹೆಲ್ತ್ ಅಂಡ್ ನ್ಯಾಶನಲ್ ಸ್ಯಾಂಪಲ್ ಸರ್ವೆ ಇದನ್ನು ಅಧ್ಯಯನ ಮಾಡಿ ಪತ್ತೆ ಹಚ್ಚಿದೆ.
ಇಲ್ಲಿ ಕಡಿಮೆ ಪ್ರಾತಿನಿಧ್ಯ ಅಂದರೆ ಅವರು ಪ್ರಮುಖ ವಾಹಿನಿಯಲ್ಲಿ ಬರದಿರುವುದಕ್ಕೆ ಪ್ರಮುಖ ಕಾರಣವೆಂದರೆ ಭಾರತದ ಜಾತಿ ಪದ್ದತಿಯೆಂದು ಸುಲಭವಾಗಿ ಗುರುತಿಸಬಹುದು. ಭಾರತದ ಸ್ವಾತಂತ್ರ್ಯಾನಂತರ,ತನ್ನ ಸಂವಿಧಾನ ಕಾನ್ ಸ್ಟಿಟುಶನ್ ಆಫ್ ಇಂಡಿಯಾ ದಲ್ಲಿ ಕೆಲವು ನಿರ್ಧಿಷ್ಟ ಜಾತಿ-ವರ್ಗಗಳನ್ನು ಗುರುತಿಸಿದೆ.ಪರಿಶಿಷ್ಟ ಜಾತಿಗಳು (SC) ಮತ್ತು ಪರಿಶಿಷ್ಟ ಪಂಗಡಗಳು (ST)ಇತ್ಯಾದಿ. ಹೀಗೆ ಸಂವಿಧಾನ ರಚನೆಗಾರರು SCs ಮತ್ತು STs ಎಂಬ ಗುಂಪು ಈ ಜಾತಿ ಪದ್ದತಿಯಿಂದ ಹುಟ್ಟಿಕೊಂಡಿದ್ದು,ಇದು ಐತಿಹಾಸಿಕವಾಗಿ ಈ ವರ್ಗವು ಶೋಷಣೆಗೊಳಗಾಗಿದ್ದು ಅದಕ್ಕಾಗಿ ದೇಶ ಕಟ್ಟುವ ಚಟುವಟಿಕೆಗಳಲ್ಲಿ ಈ ಸಮುದಾಯ ಪಾಲ್ಗೊಳ್ಳದಿರಲು ಆಗಲಿಲ್ಲ,ಇಂತಹ ಒಂದು ಕಾರಣದಿಂದ ವಿಶೇಷ ಸೌಲಭ್ಯ ಮೀಸಲಾತಿಗೆ ಅವಕಾಶ ನೀಡಲಾಗಿದೆ. ಆದ್ದರಿಂದ ಸಂವಿಧಾನವು 15% ಮತ್ತು 7.5% ರಷ್ಟು ಮೀಸಲಾತಿಯನ್ನು ಸರ್ಕಾರಿ ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ/ ಮತ್ತು ಸಾರ್ವಜನಿಕ ಕ್ಷೇತ್ರದ ಉದ್ಯಮಗಳಲ್ಲಿ ನೀಡಿದೆ.SCs ಮತ್ತು STs ಈ ಪಟ್ಟಿಯಲ್ಲಿನ ಸಮುದಾಯಕ್ಕೆ ಮೊದಲ ಐದು ವರ್ಷಗಳ ವರೆಗೆ ನಿಗದಿ ಮಾಡಿ ಅದನ್ನು ಆಯಾ ಸಂದರ್ಭಕ್ಕೆ ವಿಸ್ತರಿಸುವ ಅವಕಾಶ ಕಲ್ಪಿಸಲಾಗಿದೆ. ಈ ಅವಧಿಯು ಇದುವರೆಗೂ ಅಡಳಿತ ಮಾಡಿದ ಸರ್ಕಾರಗಳಿಂದ ಮುಂದುವರೆಸುತ್ತಲೇ ಬರಲಾಗಿದೆ.
ನಂತರ ಈ ಮೀಸಲಾತಿಯನ್ನು ಇತರ ವರ್ಗಗಳಿಗೂ ವಿಸ್ತರಿಸಲಾಯಿತು. ಸರ್ವೋಚ್ಚ ನ್ಯಾಯಾಲಯವು ಈ ಮೀಸಲಾತಿಯು 50% ಕ್ಕಿಂತ ಹೆಚ್ಚಾಗಬಾರದೆಂಬ ನಿಯಮ ರೂಪಿಸಿ ಸಮಾನವಕಾಶದ ಮಾರ್ಗ ಸೂಚಿಸಿದೆ.(ಸಂವಿಧಾನವು ಸಮಾನ ಅವಕಾಶದ ಉಲ್ಲಂಘನೆಗೆ ಅವಕಾಶ ನೀಡಿಲ್ಲ)ಆದರಿಂದ ಮೀಸಲಾತಿ ಮೇಲೆ ಒಂದು ನಿರ್ಭಂದ ವಿಧಿಸಿದೆ. ಕೆಲವು ರಾಜ್ಯಗಳಲ್ಲಿ ಈ 50% ಪರಿಧಿಯನ್ನು ಮೀಸಲಾತಿ ನೀಡಿದ ನಿದರ್ಶನಗಳು ಇದ್ದು ಅದರ ಬಗ್ಗೆ ವಿಚಾರಣೆ-ಪ್ರಕರಣಗಳು ಸರ್ವೋಚ್ಚ ನ್ಯಾಯಾಲಯದಲ್ಲಿ ನಡೆಯುತ್ತಿವೆ. ಉದಾಹರಣೆಗೆ ತಮಿಳುನಾಡಿನಲ್ಲಿ ಈ ಮೀಸಲಾತಿ ಪ್ರಮಾಣವು 69% ಮತ್ತು 87% ರಷ್ಟನ್ನು ಆಯಾ ವರ್ಗಗಳಿಗೆ ಅನ್ವಯಿಸುವಂತೆ ನೀಡಲಾಗುತ್ತಿದೆ.(ಕೆಳಗಿನ ವರ್ಗವಾರು ತಮಿಳುನಾಡಿನ ವಿವರ ನೋಡಿ)
ಹಿಂದುಳಿದ ವರ್ಗಗಳಿಗೆ (BCs) ಸ್ವಾತಂತ್ರ್ಯ ಪೂರ್ವದಲ್ಲಿಯೇ ಮೀಸಲಾತಿ ಸೌಲಭ್ಯವನ್ನು ಕಲ್ಪಿಸಲಾಗಿತ್ತು.ವಿಶಾಲ ಪ್ರದೇಶದಲ್ಲಿ ಪ್ರೆಸಿಡೆನ್ಸಿ ಆಡಳಿತ ಪ್ರದೇಶಗಳಲ್ಲಿ ಮತ್ತು ವಿಂಧ್ಯ ಪ್ರದೇಶದಲ್ಲಿದ ರಾಜರ ಆಡಳಿತಾವಧಿಯಲ್ಲಿ ಈ ಸವಲತ್ತು ನೀಡಲಾಗಿತ್ತು. ಛತ್ರಪತಿ ಶಾಹುಜಿ ಮಹಾರಾಜ,ಮಹಾರಾಷ್ಟ್ರದಲ್ಲಿನ ಮಹಾರಾಜಾ ಆಫ್ ಕೊಲ್ಲಾಪುರ್ ಇವರುಗಳು 1902 ರ ಮುಂಚೆಯೇ ರಾಜ್ಯಾಡಳಿತಗಳಲ್ಲಿ ಹಿಂದುಳಿದವರ ಪಾಲನ್ನು ನೀಡಲು ಮೀಸಲಾತಿ ನೀತಿ ರೂಪಿಸಿದ್ದರು. ಆಗಿನ 1902 ರ ಒಂದು ಸೂಚನಾ ಪತ್ರವು ಕೊಲ್ಹಾಪುರ್ ದ ಆಡಳಿತದಲ್ಲಿ 50% ರಷ್ಟು ಮೀಸಲಾತಿಯನ್ನು ಹಿಂದುಳಿದ ಸಮುದಾಯ/ ವರ್ಗದವರಿಗೆ ನೀಡಿತ್ತು, ಭಾರತದಲ್ಲಿನ ಶೋಷಿತ ವರ್ಗದ ಕಲ್ಯಾಣಕ್ಕೆ ಮಾಡಿದ ಮೊದಲ ನೋಟಿಫಿಕೇಶನ್ ಇದಾಗಿದೆ.
ಆದರೆ ಅಸ್ಪ್ರಶ್ಯತೆಯು ಎಲ್ಲೆಡೆಗೂ ಒಂದೇ ತೆರನಾಗಿ ಇರಲಿಲ್ಲವಾದ್ದರಿಂದ ಹಿಂದುಳಿದವರನ್ನು ಗುರುತಿಸುವುದು ಸುಲಭವಾಗಿರಲಿಲ್ಲ. ಇನ್ನೂ ಹೆಚ್ಚೆಂದರೆ ಈ ಅಸ್ಪ್ರಶ್ಯತೆ ಮತ್ತು ವಿಭಾಗಿಕರಣವು ಉತ್ತರ ಭಾರತಕ್ಕಿಂತ ದಕ್ಷಿಣದಲ್ಲೇ ಹೆಚ್ಚು ಪ್ರಚಲಿತವಾಗಿತ್ತು. ಅದಲ್ಲದೇ ಒಂದು ಪ್ರದೇಶದಲ್ಲಿ ಅಸ್ಪ್ರಶ್ಯವೆನಿಸಿದ ಜಾತಿ/ಸಮುದಾವು ಇನ್ನೊಂದು ಪ್ರದೇಶದಲ್ಲಿ ಅದೇ ವಿಧದಲ್ಲಿ ಅನುಸರಣೆಯಾಗುತ್ತಿರಲಿಲ್ಲ. ಕೆಲವು ಸಾಂಪ್ರದಾಯಿಕ ವೃತ್ತಿಪರತೆ ಹೊಂದಿದ ಜಾತಿಗಳು ಹಿಂದು ಮತ್ತು ಹಿಂದುಯೇತರ ವರ್ಗಗಳಲ್ಲಿ ಸ್ಥಾನ ಪಡೆದಿದ್ದವು. ಈ ಜಾತಿಗಳನ್ನು ಮನುಕಾಲದ ಆರಂಭದಿಂದಲೂ ಅದೇ ವಿಧವಾದ ವೃತ್ತಿಗಳಲ್ಲಿ ಕಾಣಬಹುದಾಗಿದೆ. ಮಧ್ಯಕಾಲೀನ ಅನುಕ್ರಮಣ ಸಮಯದಲ್ಲಿ ದೇಶದಲ್ಲಿನ ವಿವಿಧ ಸಮುದಾಯಗಳ ವಿವರ ನೀಡಲಾಗಿತ್ತು. ಬ್ರಿಟಿಶ್ ವಸಾಹತು ಕಾಲದಲ್ಲಿ 1802 ರ ಸುಮಾರಿಗೆ ದೊಡ್ಡ ಪ್ರಮಾಣದಲ್ಲಿ ಈ ಜಾತಿವಾರು ಪಟ್ಟಿ ಮಾಡುವ ಕಾರ್ಯ ನಡೆಯಿತು. ಇದು 1881 ರಿಂದ 1931 ರ ವರೆಗೆ ನಡೆದ ಜನಗಣತಿ ಅವಧಿಯಲ್ಲಿ ಹೆಚ್ಚು ಪ್ರಚಲಿತವಾಯಿತು.
ಅದೇ ತೆರನಾಗಿ ಹಿಂದುಳಿದ ವರ್ಗಗಳ ಚಳವಳಿಯು ಅದೇ ಕಾಲದಲ್ಲಿ ತನ್ನ ತಲೆ ಎತ್ತಿ ಪ್ರತಿಭಟಿಸಿದ್ದು ಮೊದಲು ತಮಿಳುನಾಡಿನಲ್ಲಿ. ಹೀಗೆ ಸಮಾಜ ಸುಧಾರಕರ ನಿರಂತರ ಪ್ರಯತ್ನಗಳು ನಡೆದವು,ಅವರೆಂದರೆ: ರೆಟ್ಟಮಲೈ ಸ್ರಿನಿವಾಸ್ ಪರೈಯಾರ್ ,ಅಯೊತಿದಾಸ್ ಪಂಡಿತರ್ www.paraiyar.webs.com, ಜ್ಯೋತಿಬಾ ಪುಲೆPhule, ಬಾಬಾಸಾಹೇಬ ಅಂಬೇಡ್ಕರ್, ಛತ್ರಪತಿ ಸಾಹು ಜಿ ಮಹಾರಾಜ ಮತ್ತು ಇನ್ನಿತರರು,ಮೇಲ್ವರ್ಗ ಮತ್ತು ಅಸ್ಪ್ರಶ್ಯರ ನಡುವೆ ನಿರ್ಮಿಸಿದ್ದ ಗೋಡೆಯನ್ನು ಕೆಡವಿಹಾಕಿದರು.
ಭಾರತವು ಹಲವಾರು ಸ್ವಗೋತ್ರ ಸಮುದಾಯಗಳಲ್ಲಿ ವಿಂಗಡಣೆಯಾಗಿದೆ.ಇಲ್ಲಿ ಜಾತಿಗಳು ಮತ್ತು ಉಪಜಾತಿಗಳು ಶತಮಾನಗಳಿಂದಲೂ ಸಾಮಾಜಿಕ ವರ್ಗಗಳ ದರ್ಜೆಗಳನ್ನು ಜಾತಿ ಪದ್ದತಿ ಎಂದು ಕರೆಯಲಾಗುತ್ತಿದೆ. ಈ ಮೀಸಲಾತಿ ಪ್ರತಿಪಾದಕರು ಈ ಸಾಂಪ್ರದಾಯಿಕ ಜಾತಿ ಪದ್ದತಿಯಿಂದ ಗಂಭೀರ ಪ್ರಮಾಣದ ಶೋಷಣೆ ಮತ್ತು ಬಹಿಷ್ಕಾರಗಳು ಕೆಳಜಾತಿಗಳಲ್ಲಿ ನಡೆಯುತ್ತವೆ ಎಂದು ಅಭಿಪ್ರಾಯಪಟ್ಟರು.ಇದರಿಂದ ಅಂತಹ ವರ್ಗಗಳು ಹಲವು ಸ್ವಾತಂತ್ರ್ಯಗಳಿಂದ ವಂಚಿತರಾಗುತ್ತಾರೆ,ಶಿಕ್ಷಣವನ್ನೊಳಗೊಂಡಂತೆ ಇದು ಪರಿಣಾಮ ಬೀರುತ್ತದೆ. ಜಾತಿಯನ್ನು ಪ್ರಾಚೀನ ಗ್ರಂಥಗಳಲ್ಲಿಯೂ ಅಂದರೆ "ಮನುಸ್ಮೃತಿ"ಯಲ್ಲಿ "ವರ್ಣಾಶ್ರಮ ಧರ್ಮ"ದಡಿ ವಿಂಗಡಿಸಲಾಗಿದೆ.ಇದರಲ್ಲಿ ಅವರವರ ವೃತ್ತಿಗಳ ಮೇಲೆ ಅವರಿಗೆ ಸಮಾಜದಲ್ಲಿ ಸ್ಥಾನಮಾನ ನೀಡಲಾಗಿತ್ತು. "ವರ್ಣ "ಎಂಬುದನ್ನು ವರ್ಣಾಶ್ರಮದಲ್ಲಿ (ವರ್ಣ+ಆಶ್ರಮ)ಎಂಬುದನ್ನು 'ಬಣ್ಣ'ಕ್ಕೆ ಹೋಲಿಸಿ ಅರ್ಥೈಸಬಾರದು. ಭಾರತದಲ್ಲಿನ ಜಾತಿ ಪದ್ದತಿ ಆಚರಣೆಯು ಈ ನಿಯಮವನ್ನು ಪಾಲಿಸುತಿತ್ತು.
ಕೆನೆ ಪದರನ್ನು ಗುರುತಿಸಲು ಹಲವಾರು ಮಾನದಂಡಗಳನ್ನು ಶಿಫಾರಸು ಮಾಡಲಾಯಿತು:
ಯಾರು ವಾರ್ಷಿಕ 250,000 ರೂಪಾಯಿಗಿಂತ ಹೆಚ್ಚಿನ ಆದಾಯ ಹೊಂದಿರುತ್ತಾರೋ ಅವರು ಮೀಸಲಾತಿ ಪರಿಧಿಗೆ ಬರಲಾರರು. ಅದಲ್ಲದೇ ವೈದ್ಯರ ಮಕ್ಕಳು,ಎಂಜನೀಯರ್ ಗಳು,ಚಾರ್ಟರ್ಡ್ ಅಕೌಂಟಂಟ್ ಗಳು,ನಟರು,ಮಾಧ್ಯಮ ವೃತ್ತಿಪರರು,ಬರೆಹಗಾರರು,ಅಧಿಕಾರಿಗಳು,ರಕ್ಷಣಾ ಇಲಾಖೆ ಅಧಿಕಾರಿಗಳು,ಕರ್ನಲ್ ದರ್ಜೆ ಅಥವಾ ಅದಕ್ಕಿಂತ ಹೆಚ್ಚಿನ ದರ್ಜೆ,ಉಚ್ಚ ನ್ಯಾಯಾಲಯ ಮತ್ತು ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರುಗಳ ಮಕ್ಕಳು ಮತ್ತು ಕೇಂದ್ರ-ರಾಜ್ಯ ಸರ್ಕಾರದಲ್ಲಿ A ಮತ್ತು B ವರ್ಗದ ಅಧಿಕಾರಿಗಳ ಮಕ್ಕಳು MP ಗಳು ಮತ್ತು MLA ಗಳ ಮಕ್ಕಳಿಗೂ ಮೀಸಲಾತಿ ಕೋಟಾಗಳನ್ನು ತೆಗೆದು ಹಾಕುವಂತೆ ಅದು ಸಂಸತ್ತಿಗೆ ಮನವಿ ಮಾಡಿತು.
ಭಾರತೀಯ ನ್ಯಾಯಾಂಗವು ಕೆಲವು ಮೀಸಲಾತಿಗಳನ್ನು ಎತ್ತಿ ಹಿಡಿದಿದೆ,ಕೆಲವೊಂದನ್ನು ಮರುಪರಿಷ್ಕರಿಸಿ ಜಾರಿಗೊಳಿಸುವಂತೆ ಆದೇಶಿಸಿದೆ. ಮೀಸಲಾತಿ ಬಗೆಗಿನ ಹಲವಾರು ತೀರ್ಪುಗಳನ್ನು ಭಾರತದ ಸಂಸತ್ತಿನಲ್ಲಿ ಮಂಡಿಸಿ ಅವುಗಳಿಗೆ ಸೂಕ್ತ ತಿದ್ದುಪಡಿ ಮಾಡಲಾಗಿದೆ,ಇದಕ್ಕಾಗಿ ಆಗಾಗ ಅಗತ್ಯ ಸಾಂವಿಧಾನಿಕ ತಿದ್ದುಪಡಿ ಮೂಲಕ ಪರಿಷ್ಕರಿಸಲಾಗಿದೆ. ಭಾರತದ ನ್ಯಾಯಾಂಗದ ಹಲವಾರು ತೀರ್ಪುಗಳನ್ನು ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಹಗುರಾಗಿ ತೆಗೆದುಕೊಂಡ ಸಂದರ್ಭಗಳೂ ಇವೆ. ಭಾರತದ ನ್ಯಾಯಾಲಯಗಳ ಪ್ರಮುಖ ತೀರ್ಪುಗಳು ಮತ್ತು ಅದರ ಅನುಷ್ಟಾನದ ಸ್ಥಿತಿ-ಗತಿ,:
ವರ್ಷಗಳು | ತೀರ್ಪು | ಅನುಷ್ಟಾನದ ವಿವರಗಳು |
---|---|---|
1951 | (ನ್ಯಾಯಾಲಯದ ಪ್ರಕಾರ ಜಾತಿ ಮೂಲದ ಮೀಸಲಾತಿಗಳು ಪ್ರತಿ ಕೋಮು-ವರ್ಗ ಆಧಾರದಮೂಲಕ ನೀಡುವ ಮೀಸಲಾತಿಯು ಖಂಡ ಆರ್ಟಿಕಲ್ 15(1) ನಿಯಮವನ್ನು ಉಲ್ಲಂಘಿಸುತ್ತದೆ.ಮದ್ರಾಸ್ ರಾಜ್ಯ ವಿರುದ್ದ. ಶ್ರ್ರೀಮತಿ. ಚಂಪಕಮ್ ದೊರೆರಾಜನ್ AIR 1951 SC 226) | 1ನೆಯ ಸಾಂವಿಧಾನಿಕ ತಿದ್ದುಪಡಿ(Art. 15 (4)) ತೀರ್ಪುಗಳನ್ನೇ ಅಸಿಂಧುಗೊಳಿಸುವ ತಿದ್ದುಪಡಿ ಇದಾಗಿದೆ. |
1963 | ನ್ಯಾಯಾಲಯವು ಎಂ,ಆರ್ ಬಾಲಾಜಿ ವಿರುದ್ದ AIR 1963 SC 649 ಮೈಸೂರು ಪ್ರಕರಣದಲ್ಲಿ ಮೀಸಲಾತಿಯನ್ನು 50% ಕ್ಕೆ ಸೀಮಿತಗೊಳಿಸಿದೆ | ಬಹುತೇಕ ಎಲ್ಲಾ ರಾಜ್ಯಗಳು ತಮಿಳುನಾಡು ಹೊರತುಪಡಿಸಿ (69% ರಷ್ಟು 9 ನೆಯ ಶೆಡ್ಯುಲ್ )ರಾಜಸ್ಥಾನ್ (68% ಪ್ರಮಾಣ ಇದರಲ್ಲಿ 14% ರಷ್ಟು ಮುಂದುವರೆದ ಜಾತಿಗಳು,ಗುಜ್ಜಾರ್ ರ ಚಳವಳಿ ನಂತರ)ಇಲ್ಲಿ ಮೀಸಲಾತಿಯು 50% ಕ್ಕಿಂತ ಹೆಚ್ಚಿಲ್ಲ. ತಮಿಳುನಾಡು 1980 ರಲ್ಲಿ ತನ್ನ ಪರಿಮಿತಿ ಮೀರಿತು. ಆಂಧ್ರ ಪ್ರದೇಶವು 2005 ರಲ್ಲಿ ಪರಿಮಿತಿ ದಾಟಲು ಪ್ರಯತ್ನಿಸಿತು,ಮತ್ತೆ ಇದನ್ನು ಉಚ್ಚ ನ್ಯಾಯಾಲಯ ತಡೆಯೊಡ್ಡಿತು. |
1992 | ಸರ್ವೋಚ್ಚ ನ್ಯಾಯಾಲಯವು ಇಂದಿರಾ ಸಾಹನಿ & ಇನ್ನುಳಿದವರ ವಿರುದ್ದ ಯುನಿಯನ್ ಆಫ್ ಇಂಡಿಯಾ ಸರ್ವೋಚ್ಚ ನ್ಯಾಯಾಲಯವು AIR 1993 SC 477 : 1992 Supp (3)SCC 217 ಕೇಂದ್ರ ಸರ್ಕಾರಿ ಸೇವೆಗಳಲ್ಲಿ ಇನ್ನಿತರ ಹಿಂದುಳಿದ ಜಾತಿಗಳಿಗೆ ಪ್ರತ್ಯೇಕ ಮೀಸಲಾತಿಯನ್ನು ಜಾರಿಗೊಳಿಸಲು ಸೂಚಿಸಿತು.. | ನ್ಯಾಯಾಲಯದ ತೀರ್ಪುಗಳ ಅನುಷ್ಠಾನ |
ಇನ್ನುಳಿದ ಹಿಂದುಳಿದ ವರ್ಗಗಳಲ್ಲಿನ ಕೆನೆ ಪದರನ್ನು ತೆಗೆದು ಹಾಕುವಂತೆ ಆದೇಶಿಸಿತು,ಈಗಾಗಲೇ ಸಾಕಷ್ಟು ಈ ಸವಲತ್ತನ್ನು ಅನುಭವಿಸಿದವರಿಗೆ ಮೀಸಲಾತಿ ಇಲ್ಲ ಎಂದು ವಿವರಿಸಿತು. | ತಮಿಳುನಾಡು ಹೊರತುಪಡಿಸಿ ಎಲ್ಲಾ ರಾಜ್ಯಗಳು ಇದನ್ನು ಜಾರಿಗೆ ತಂದವು ಇತ್ತೀಚಿನ ಮೀಸಲಾತಿ ಮಸೂದೆಯಲ್ಲಿ ಶೈಕ್ಷಣಿಕ ಸಂಸ್ಥೆಗಳಲ್ಲಿ ನೀಡುವ ಮೀಸಲಾತಿ ಸಂದರ್ಭದಲ್ಲಿ ಕೆಲವೆಡೆ ರಾಜ್ಯಗಳಲ್ಲಿ ಕೆನೆ ಪದರನ್ನು ತೆಗೆದಿಲ್ಲ (ಇನ್ನೂ ಸ್ಥಾಯಿ ಸಮಿತಿಯ ಪರಿಶೀಲನೆಯಲ್ಲಿದೆ). | |
ಮೀಸಲಾತಿಗಳನ್ನು 50% ರ ಮಿತಿ ದಾಟದಂತೆ ಆದೇಶಿಸಿತು. | ತಮಿಳು ಹೊರತುಪಡಿಸಿ ಎಲ್ಲಾ ರಾಜ್ಯಗಳು ಅಳವಡಿಸಿದವು | |
ಮುಂದುವರಿದ ಜಾತಿಗಳಲ್ಲಿನ ಆರ್ಥಿವಾಗಿ ಹಿಂದುಳಿದವರಿಗೆ ನೀಡುವ ಪ್ರತ್ಯೇಕ ಮೀಸಲಾತಿಯು ಅಸಿಂಧುಗೊಳಿಸಿತು. | ತೀರ್ಪುಗಳು ಜಾರಿಗೊಂಡಿದ್ದು | |
ಸಾಮಾನ್ಯವಾಗಿ ಮ್ಯಾನೇಜರ್,ಎಸ್. ರೈಲ್ವೆ. v. ರಂಗಾಚಾರಿ AIR 1962 SC 36, ಪಂಜಾಬ ರಾಜ್ಯ v. ಹಿರಾಲಾಲ್ 1970(3) SCC 567, ಅಖಿಲ ಭಾರತೀಯ ಶೋಷಿತ ಕರ್ಮಚಾರಿ ಸಂಘ (ರೈಲ್ವೆ) v. ಯುನಿಯನ್ ಆಫ್ ಇಂಡಿಯಾof India (1981) 1 SCC 246 ಇದರಲ್ಲಿ ಮೀಸಲಾತಿ ಮೂಲಕ ನೇಮಕ ಅಥವಾ ನಿಯಮಾವಳಿ (Article) 16(4) ಇದರಲ್ಲಿ ಭಡ್ತಿಗಳೂ ಸೇರಿವೆ. ಇದನ್ನು ಇಂದಿರಾ ಸಹಾನಿ & Ors v ಯುನಿಯನ್ ಆಫ್ ಇಂಡಿಯಾ ಪ್ರಕರಣದಲ್ಲಿ ಮೀರಿದ ತೀರ್ಪು ಬಂದಿದೆ AIR 1993 SC 477 : 1992 Supp (3) SCC 217 ಇದರಲ್ಲಿ ಬಡ್ತಿಯಲ್ಲಿ ಮೀಸಲಾತಿಗಳನ್ನು ಅಳವಡಿಸಲಾಗುವುದಿಲ್ಲ.ಯುನಿಯನ್ ಆಫ್ ಇಂಡಿಯಾ Vs ವರ್ಪಾಲ್ ಸಿಂಗ್ AIR 1996 SC 448,ಅಜಿತ್ ಸಿಂಗ್ ಜನುಜಾ & (ಅದರ್ಸ್ )Ors Vs ಪಂಜಾಬ ರಾಜ್ಯ AIR 1996 SC 1189,ಅಜಿತ್ ಸಿಂಗ್ ಜನುಜಾ & Ors Vs ಪಂಜಾಬ ರಾಜ್ಯ & ಅದರ್ಸ Ors AIR 1999 SC 3471,M.G. ಬಡಪ್ಪನವರ್ Vs ಕರ್ನಾಟಕ ರಾಜ್ಯ 2001 (2) SCC 666. | ಅಶೋಕಕುಮಾರ್ ಗುಪ್ತಾ: ವಿದ್ಯಾಸಾಗರ ಗುಪ್ತಾ Vs ಉತ್ತರ ಪ್ರದೇಶ ರಾಜ್ಯ. 1997 (5) SCC 20177th ಸಾಂವಿಧಾನಿಕ ತಿದ್ದುಪಡಿ (Art 16(4 A) & (16 4B) ತೀರ್ಪನ್ನು ಅಸಿಂಧು ಮಾಡಲು ಈ ಕಾನೂನು ತಿದ್ದುಪಡಿ.ಎಂ. ನಾಗರಾಜ್ & ಅದರ್ಸ್ v. ಯುನಿಯನ್ ಆಫ್ ಇಂಡಿಯಾ ಮತ್ತು ಅದರ್ಸ್. AIR 2007 SC 7 ತಿದ್ದುಪಡಿಗಳನ್ನು ಸಾಂವಿಧಾನಿಕವಾಗಿ ಇವೆ ಎನ್ನಲು ಈ ತಿದ್ದುಪಡಿ.1. ಆರ್ಟ್. 16(4)(A) ಮತ್ತು 16(4)(B) ಈ ನಿಯಮಾವಳಿಯಿಂದ ಮುಂದುವರೆದಿದ್ದು (Art). 16(4). ಈ ಸಾಂವಿಧಾನಿಕ ತಿದ್ದುಪಡಿಗಳು (ಆರ್ಟ್ )ವಿಧಿ-ವಿಧಾನದ ರಚನೆಯನ್ನು ಬದಲಾಯಿಸಲಾರವು. 16(4).2. ಹಿಂದುಳಿದಿರುವಿಕೆ ಮತ್ತು ಪ್ರಾತಿನಿಧ್ಯದಲ್ಲಿನ ಕೊರತೆಯು ಇದನ್ನು ನಿಯಂತ್ರಿಸುವ/ಕಡ್ಡಾಯಗೊಳಿಸುವ ಕಾರಣಗಳು ರಾಜ್ಯಗಳ ಆಡಳಿತಗಳು ಮೀಸಲಾತಿಯನ್ನು ಅಳವಡಿಸುವಂತೆ ಕಡ್ಡಾಯ/ಅನಿವಾರ್ಯಗೊಳಿಸುತ್ತಿವೆ.3. ಸರ್ಕಾರವು ಈ ಮೀಸಲಾತಿಯಲ್ಲಿ ವರ್ಗೀಕರಣದ ಕೇಡರ್ ಗಳ ಪ್ರಕಾರ ಪಟ್ಟಿ ಸಿದ್ದಪಡಿಸಿ ವರ್ಗ/ಸಮೂಹಗಳಿಗೆ ಸೇವೆಗಳಲ್ಲಿ ಸೂಕ್ತ ಪ್ರಾತಿನಿಧ್ಯ ನೀಡಿದೆ ಎಂದು ಹೇಳಬೇಕಾಗುತ್ತದೆ. ನೇಮಕಾತಿಯ ಅನುಕ್ರಮಣ ಪಟ್ಟಿಯಲ್ಲಿ ಅಂತರ್ಗತ ಪರಿಕಲ್ಪನೆ ಪ್ರಕಾರ ಇದರ ಸ್ಥಾನಪಲ್ಲಟಕ್ಕೆ ಸಂಬಂಧಿಸಿದ್ದು ಆದರೆ ಸೇವೆಗಳ ಮೂಲಾಧಾರ ಅಲ್ಲ.4. ಯಾವುದೇ ಅಧಿಕಾರಿ ಘಟಕವು ಹಿಂದುಳಿದವರ್ಗಕ್ಕೆ/ಪಂಗಡಕ್ಕೆ ಪ್ರಾತಿನಿಧ್ಯದ ಕೊರತೆ ಕಂಡುಕೊಂಡರೆ ಅಲ್ಲಿ ನೇರ ನೇಮಕಾತಿಗೆ ಅವಕಾಶ ನೀಡಿ ಮುಕ್ತವಾಗಿ ಇದನ್ನು ಅಳವಡಿಸಬೇಕಾಗುತ್ತದೆ.5. ಹಿಂದುಳಿದ ವರ್ಗಗಳ ಮೀಸಲಾತಿ ತುಂಬದ ಸ್ಥಾನಗಳು ವಿಶಿಷ್ಟ ಗುಂಪು ಎಂದು ಪರಿಗಣಿಸಿ ಅದರ ಪರಿಮಿತಿಯನ್ನು 50% ಕ್ಕೆ ಸೀಮಿತಗೊಳಿಸಲಾಗದು.6. ಮೀಸಲಾತಿ ಅಡಿಯ ಅಭ್ಯರ್ಥಿಯು ಸಾಮಾನ್ಯ ವರ್ಗದಡಿ ಆಯ್ಕೆಯಾದರೆ ಅದನ್ನು ಮೀಸಲಾತಿಗೆ ಸಂಬಂಧಿಸಿದ ನೇಮಕ ಎಂದು ಹೇಳಲಾಗದು.ಮೀಸಲಾತಿ ಅಭ್ಯರ್ಥಿಯು ಸಾಮಾನ್ಯ ವರ್ಗದಲ್ಲಿ ಪೈಪೋಟಿ ಮಾಡಬಹುದಾಗಿದೆ.7. ಮೀಸಲಾತಿ ವರ್ಗದ ಅಭ್ಯರ್ಥಿಯು ಸಾಮಾನ್ಯ ವರ್ಗದಡಿ ಬಡ್ತಿಯಲ್ಲಿ ಸ್ಪರ್ಧಿಸಿ ಅದನ್ನು ಸಾಮಾನ್ಯ ಕೋಟಾದಡಿ ಸ್ಥಾನವನ್ನು ಪಡೆಯುವ ಸ್ವಯಂ ಹಕ್ಕಿನಡಿ ಆತನಿಗೆ ಅವಕಾಶವಿದೆ. ಅವರ ಆಯ್ಕೆಯ ನಂತರ ಅವರನ್ನು ಸಾಮಾನ್ಯ ಸ್ಥಾನದಲ್ಲಿ ರೋಸ್ಟರ್ ಪ್ರಕಾರ ಹೊಂದಾಣಿಕೆ ಮಾಡಬಹುದು.ಅದೇ ಪ್ರಕಾರ ರೋಸ್ಟರ್ ಅನುಕ್ರಮದ ವರ್ಗದ ದರ್ಜೆಯಲ್ಲಿ ಅವರು ಅದರ ಸಮಸ್ಥಾನಕ್ಕೂ ಸ್ಪರ್ಧಿಸಬಹುದಾಗಿದೆ.8. ಪ್ರತಿಯೊಂದು ಸ್ಥಾನಕ್ಕೆ ಮೀಸಲಿರುವ ಹಿಂದುಳಿದ ವರ್ಗದ ಅಭ್ಯರ್ಥಿಯ ಜಾಗೆಯಲ್ಲಿ ಅದೇ ವರ್ಗದ ಅಭ್ಯರ್ಥಿಯ ನೇಮಕ ಕಡ್ಡಾಯವಾಗಿದ್ದು ಖಾಲಿ ಸ್ಥಾನವನ್ನು ಅದೇ ವರ್ಗದ ಅಭ್ಯರ್ಥಿಯಿಂದ ಮಾತ್ರ ತುಂಬತಕ್ಕದ್ದು.(ಸ್ಥಾನಪಲ್ಲಟ ನಿಯಮದಂತೆ)ಆರ.ಕೆ.ಸಭರ್ ವಾಲ್ Vs ಪಂಜಾಬ್ ರಾಜ್ಯ AIR 1995 SC 1371 : (1995) 2 SCC 745.ರೋಸ್ಟರ್ ಪದ್ದತಿಯ ನೇಮಕಾತಿಯಲ್ಲಿ ಈ ಸ್ಥಾನ ತುಂಬಲು ಅದೇ ವರ್ಗದ-ಬಲದ ವ್ಯಕ್ತಿಯ ಆಯ್ಕೆ ಸಮಂಜಸವಾಗಿದೆ,ಇದು 50% ರ ಸೀಮಿತದಲ್ಲಿರಬೇಕು. | |
ಯುನಿಯನ್ ಆಫ್ ಇಂಡಿಯಾದಲ್ಲಿ Vs ವರ್ಫ್ಪಾಲ್ ಸಿಂಗ್ AIR 1996 SC 448 ಮತ್ತು ಅಜಿತ್ ಸಿಂಗ್ ಜನುಜಾ & ಅದರ್ಸ್ Vs ಪಂಜಾಬ್ ರಾಜ್ಯ AIR 1996 SC 1189 ಈ ಪ್ರಕರಣದಲ್ಲಿ ಬಡ್ತಿ ವಿಚಾರದಲ್ಲಿ ಅವರ ಸೇವಾ ಹಿರಿತನಕ್ಕಿಂತ ಅವರ ಕೆಟಗರೀಸ್ ವರ್ಗೀಕರಣಕ್ಕೆ ಸಂಬಂಧಿಸಿದ್ದು ಅದನ್ನು ಅಭ್ಯರ್ಥಿಗಳು ಸಾಮಾನ್ಯ ವರ್ಗದ ಅಭ್ಯರ್ಥಿಗಳೊಂದಿಗೆ ಹೋಲಿಸಲಾಗದೇ ನೇರವಾಗಿ ಬಡ್ತಿಗೆ ಪಾತ್ರರಾಗುತ್ತಾರೆ.ಇದು ನಿಯಂತ್ರಣ ಸಮಿತಿಯ ಸಲಹೆ ಮೇರೆಗೆ ಪರಿಗಣಿಸಲಾಗುತ್ತದೆ. ಇದನ್ನು ಜಗದೀಶ್ ಲಾಲ್ ಮತ್ತಿತರರು ಹಾಗು ಹರ್ಯಾಣಾ ರಾಜ್ಯದ ಮತ್ತು ಇತರರ (1997) 6 SCC 538 ಪ್ರಕರಣದಲ್ಲಿ ಹಿಂದೆ ತೆಗೆದು ಅದನ್ನು ಮೀರಿ ನಿರ್ಣಯಗಳ ತೆಗೆದುಕೊಳ್ಳಲಾಯಿತು.ಅಧಿಕೃತ ಕಚೇರಿ ಕಾರ್ಯದಲ್ಲಿ ಅವರ ಬಡ್ತಿಯನ್ನು ಪರಿಗಣಿಸಿ ರೊಸ್ಟರ್ ಆಧಾರದಲ್ಲಿ ಕ್ರಮ ಕೈಗೊಳ್ಳಲಾಯಿತು.ಅಂದರೆ ನಿರಂತರ ಸೇವಾವಧಿ ಕೂಡ ಇಲ್ಲಿ ಬಡ್ತಿಗೆ ಅನುಕೂಲವಾಗಲಿದೆ ಎಂದು ಸೂಚಿಸಲಾಯಿತು.ಅಜಿತ್ ಸಿಂಗ್ ಜನುಜಾ & ಅದರ್ಸ್ Vs ಪಂಜಾಬ್ ರಾಜ್ಯ & Ors AIR 1999 SC 3471 ಇದರಲ್ಲಿ ಜಗದೀಶ್ ಲಾಲ್,ಎಂ.ಜಿ. ಬಡಪ್ಪನವರ್ Vs ಕರ್ನಾಟಕ ರಾಜ್ಯ 2001(2) SCC 666 : AIR 2001 SC 260 ಇಅರ ಪ್ರಕಾರ ರೊಸ್ಟರ್ ಪದ್ದತಿಯ ಬಡ್ತಿಗಳು ಕೆಲ ತಾತ್ಕಾಲಿಕ ಸಮಯಕ್ಕೆ ಮಾತ್ರ ಸೀನಿತವಾಗಿದ್ದು,ವಿಶೇಷ ಉದ್ದೇಶಗಳ ಈಡೇರಿಕೆಗೆ ಅನುಕೂಲವಾಗುತ್ತದೆ.ಆದರೆ ರೊಸ್ಟರ್ ಪದ್ದತಿಗನುಗುಣವಾಗಿ ಸ್ಥಾನ ಪಲ್ಲಟಗೊಳ್ಳುವ ಅಭ್ಯರ್ಥಿಯು ಸಾಮಾನ್ಯ ಅಭ್ಯರ್ಥಿಯ ಸೇವಾ ಹಿರಿತನವನ್ನು ಸರಿಗಟ್ಟಲಾಗದು.ಹೀಗಾಗಿ ಸಾಂದರ್ಭಿಕ ಬಡ್ತಿಗಳು ಸಾಮಾನ್ಯ ವ್ಯಕ್ತಿಗಳ ಬಡ್ತಿಗೆ ಪೂರಕವಲ್ಲ ಎಂದು ವಿವರಿಸಲಾಯಿತು. | ಈ ಅನುಗತ ಸೇವಾ ಹಿರಿತನದ ಬಗ್ಗೆ ಸಂವಿಧಾನದ 85ನೆಯ ತಿದ್ದುಪಡಿಯನ್ನು Art 16 (4)(A) ನಲ್ಲಿ ಸೇರಿಸಲಾಗಿದೆ.ಇದರಿಂದ ಅಸ್ತಿತ್ವದಲ್ಲಿರುವ ತೀರ್ಪು ಸಿಂಧುವಾಗುವುದಿಲ್ಲ.ಎಂ. ನಾಗರಾಜ & ಅದರ್ಸ್ v. ಯುನಿಯನ್ ಆಫ್ ಇಂಡಿಯಾ ಮತ್ತು ಅದರ್ಸ್ . AIR 2007 SC 71 ಪ್ರಕಾರ ತಿದ್ದುಪಡಿಗಳು ಸಂವಿಧಾನಾತ್ಮಕವಾಗಿವೆ ಎಂದು ಹೇಳುತ್ತದೆ.ಜಗದೀಶ್ ಲಾಲ್ ಮತ್ತು ಇತರರು v.ಹರ್ಯಾಣಾ ರಾಜ್ಯ ಮತ್ತಿತರರು (1997) 6 SCC 538 ಇಲ್ಲಿ ನಿರಂತರ ಅಧಿಕೃತ ಕಚೇರಿ ಸೇವಾವಧಿಯನ್ನು ಪರಿಗಣಿಸಲಾಗುತ್ತದೆ.ರೊಸ್ಟರ್ ಮೂಲಕ ಬಡ್ತಿಗೆ ಅವರು ಭಾಧ್ಯರಾಗುತ್ತರಲ್ಲದೇ ಸೇವಾ ಹಿರಿತನದ ಸವಲತ್ತುಗಳಿಗೂ ಭಾಧ್ಯಸ್ತರಾಗಿರುತ್ತಾರೆ. | |
ಎಸ್. ವಿನೋದಕುಮಾರ್ Vs. ಯುನಿಯನ್ ಆಫ್ ಇಂಡಿಯಾ 1996 6 SCC 580 ಅಹರತೆಗೆ ಬೇಕಾಗುವ ಅಂಕಗಳು ಮತ್ತು ಮೌಲ್ಯಮಾಪನದ ಮೀಸಲಾತಿ ಅಂಶಗಳು ಬಡ್ತಿಯಲ್ಲಿ ಪರಿಗಣಿಸಲಾಗುವುದಿಲ್ಲ. | ಸಾಂವಿಧಾನಿಕ (82ನೆಯ) ತಿದ್ದುಪಡಿ ಕಾನೂನನ್ನು ನಿಯಮಾವಳಿ ಆರ್ಟ್ 335 ಗೆ ಕೊನೆಯಲ್ಲಿ ಸೇರಿಸಲಾಯಿತು.ಎಂ. ನಾಗರಾಜ್ & ಅದರ್ಸ್ v. ಯುನಿಯನ್ ಆಫ್ ಇಂಡಿಯಾ ಅಂಡ್ ಅದರ್ಸ್. AIR 2007 SC 71 ಇದು ತಿದ್ದುಪಡಿಗಳು ಸಾಂವಿಧಾನಿಕವಾಗಿ ಸಿಂಧು ಎಂದು ಹೇಳಿತು. | |
1994 | ಸರ್ವೋಚ್ಚ ನ್ಯಾಯಾಲಯವು 50% ರ ಮಿತಿಯನ್ನು ಪಾಲಿಸುವಂತೆ ಸಲಹೆ ಮಾಡಿತು. | ತಮಿಳು ನಾಡು ಮೀಸಲಾತಿಗಳು ಸಂವಿಧಾನದ 9ನೆಯ ಶೆಡುಲ್ಯುನಡಿ ಸೂಚಿಸಲಾಗಿದೆ.ಐ.ಆರ್. ಕೊಯಿಲೊ(ಮೃತ) LRS.ನಿಂದ Vs. ತಮಿಳುನಾಡು ರಾಜ್ಯ T.N. 2007 (2) SCC 1 : 2007 AIR(SC) 861 ಇದರ ಪ್ರಕಾರ ಸಂವಿಧಾನದ ಈ ಒ(ಬತ್ತನೆಯ) ಶೆಡ್ಯುಲ್ ಕಾನೂನಡಿ ಇದರ ತೀರ್ಪುಗಳನ್ನು ಇನ್ನೊಂದು ಸಾರಿ ಸವಾಲೊಡ್ಡದಂತೆ ಅದು ಸೂಚಿಸಿತು.ಇಂತಹ ಕಾನೂನುಗಳು ಯಾವಾಗಲೂ ನಿಯಮಾವಳಿಗೆ ಸ್ವಾಧೀನವಾಗಿವೆ ಎಂದೂ ಪ್ರತಿಪಾದಿಸಿತು. ಯಾವುದೇ ಕಾನೂನು ಭಾಗ III ರ ನಿಯಮಗಳನ್ನು ಉಲ್ಲಂಘಿಸಿದರೆ ಅದಕ್ಕೆ ಪೂರಕವಾದ ನಿಯಮಾವಳಿಗಳನ್ನು ಒಂಬಂತ್ತನೆಯ ಶೆಡ್ಯುಲ್ ನಲ್ಲಿ, ಇದನ್ನು 1973 ರ ಏಪ್ರಿಲ್ 24 ರ ವಿಧಿನಿಯಮದಲ್ಲಿ ನಮೂದಿಸಲಾಗಿದೆ.ಇಂತಹ ಯಾವುದೇ ಉಲ್ಲಂಘನೆ/ ಹಕ್ಕು ಭಂಗದ ಪ್ರಕರಣವನ್ನು ನ್ಯಾಯಾಲಯದಲ್ಲಿ ಮುಕ್ತವಾಗಿ ಪ್ರಶ್ನಿಸಬಹುದಾಗಿದೆ.ವಿಧಿ ಅಥವಾ ಕಲಮು 21 ರಲ್ಲಿ ತಿಳಿಸಿದಂತೆ ಇದರ ಜೊತೆಗೆ ವಿಧಿ 14 ನ್ನೂ ಸೇರಿಸಲಾಗಿದೆ.ಅದರೊಂದಿಗೆ 19 ವಿಧಿಯನ್ನು ಉಲ್ಲೇಖ ಮಾಡುವ ನಿಯಮಗಳನ್ನು ಇಲ್ಲಿ ಬಳಸಿಕೊಳ್ಳಬಹುದಾಗಿದೆ. ಕ್ರಮ ಕೈಗೊಂಡ ಅಥವಾ ಆಕ್ರಮಣಕಾರಿ ಎನಿಸುವ ಕ್ರಮಗಳನ್ನು ಮುಕ್ತವಾಗಿ ಪ್ರಶ್ನಿಸಲಾಗದು. |
2005 | ಉನ್ನಿ ಕೃಷ್ಣನ್ , ಜೆ.ಪಿ. & ಅದರ್ಸ್. Vs.ಆಂಧ್ರಪ್ರದೇಶ ರಾಜ್ಯ & ಅದರ್ಸ್. (1993 (1) SCC 645) ಇದರಲ್ಲಿ ಶಿಕ್ಷಣ ಸಂಸ್ಥೆಗಳ ಸ್ಥಾಪನೆ ಕ್ರಿಯೆಯು ವ್ಯವಹಾರ-ವ್ಯಾಪಾರವಲ್ಲ ಅಥವಾ ಅದು ವೃತ್ತಿಪರರು, ವಿಧಿ 19(1)(g)ನಲ್ಲಿ ಸೂಚಿಸಿರುವಂತೆ ಮಾಡುವ ಕೆಲಸದ ವಿವರಣೆಯಲ್ಲ. ಇದನ್ನು ನಂತರ ಟಿ.ಎಂ.ಎ. ಪೈ ಪ್ರತಿಷ್ಟಾನ v. ಕರ್ನಾಟಕ ರಾಜ್ಯof (2002) 8 SCC 481,ಪಿ.ಎ.ಇನಾಮ್ದಾರ್ v. ಮಹರಾಷ್ಟ್ರ ರಾಜ್ಯ 2005 AIR(SC) 3226 ಇದರಲ್ಲಿ ಸರ್ವೋಚ್ಚ ನ್ಯಾಯಾಲಯವು ಅನುದಾನರಹಿತ ಖಾಸಗಿ ಶಿಕ್ಷಣ ಸಂಸ್ಥೆಗಳ ಮೇಲೆ ಮೀಸಲಾತಿಗಳನ್ನು ಹೇರುವಂತಿಲ್ಲ ಎಂದು ಸೂಚಿಸಿತು.ಇದನ್ನು ಹೀಗೆ ಹಿಂದಕ್ಕೆ ಸರಿಸಲಾಯಿತು. | 93 ನೆಯ ಸಾಂವಿಧಾನಿಕ ತಿದ್ದುಪಡಿ ವಿಧಿ 15(5) ನ್ನು ಜಾರಿಗೊಳಿಸಿತು.ಅಶೋಕಕುಮಾರ್ ಠಾಕೂರ್ vs. ಯುನಿಯನ್ ಆಫ್ ಇಂಡಿಯಾ 1. ಸಂವಿಧಾನದ (ತೊಂಬತ್ಮೂರನೆಯ ತಿದ್ದುಪಡಿ)ಕಾನೂನು,2005 ಇದು ಸಂವಿಧಾನದ "ಮೂಲ ಆಶಯ"ವನ್ನು ಕಡೆಗಣಿಸುವುದಿಲ್ಲ.ಇಲ್ಲಿ ರಾಜ್ಯ ಉಸ್ತುವಾರಿಯ ಸಂಸ್ಥೆಗಳು ಮತ್ತು ಅನುದಾನಿತ ಶಿಕ್ಷಣ ಸಂಸ್ಥೆಗಳು ಇದಕ್ಕೆ ಸಂಬಂಧಿಸಿದವುಗಳಲ್ಲ. "ಇಲ್ಲಿ ಪ್ರಶ್ನೆಯೆಂದರೆ ಸಂವಿಧಾನದ (ತೊಂಬತ್ಮೂರನೆಯ ತಿದ್ದುಪಡಿ)2005 ರ ಕಾನೂನು ಸಾಂವಿಧಾನಿಕವಾಗಿ ಸಿಂಧುವೇ ಅಥವಾ ಅಸಿಂಧುವೇ ಎಂಬುದು "ಖಾಸಗಿ ಅನುದಾನರಹಿತ"ಶಿಕ್ಷಣ ಸಂಸ್ಥೆಗಳು ಇದಕ್ಕೆ ಸಂಬಂಧಿಸಿವೆಯೇ ಎಂಬುದನ್ನು ಕಾದು ನೋಡಬೇಕಾಗುತ್ತದೆ,ಇದನ್ನು ಸೂಕ್ತ ಪ್ರಕರಣದಡಿ ಪರಿಶೀಲಿಸಬೇಕಾಗುತ್ತದೆ.2.ಕೆನೆ ಪದರು "ಕೂಡಾ ಹಿಂದುಳಿದ ವರ್ಗದವರನ್ನು ಗುರುತಿಸುವ ಒಂದು ಪ್ರಮುಖ ಮಾನದಂಡವಾಗಿದೆ. ಆದ್ದರಿಂದ ತಾತ್ವಿಕವಾಗಿ "ಕೆನೆ ಪದರು"ತತ್ವವನ್ನು STs ಮತ್ತು SCs, ಗಳಿಗೆ ಅನ್ವಯಿಸಲಾಗುವುದಿಲ್ಲ,ಏಕೆಂದರೆ STs ಮತ್ತು SCs ಗಳು ಪ್ರತ್ಯೇಕವಾಗಿ ಅವರದೇ ವರ್ಗಕ್ಕೆ ಸೇರಿರುತ್ತಾರೆ.3. ಆದ್ಯತೆಗನುಸಾರವಾಗಿ ಹತ್ತು ವರ್ಷಕ್ಕೊಮ್ಮೆ ಇದನ್ನು ಸಾಂದರ್ಭಿಕವಾಗಿ ಬದಲಾವಣೆಗೆ ಒಳಪಡುತ್ತದೆ.4. ಕೇವಲ ಒಂದು ಪದವಿ (ತಾಂತ್ರಿಕ ಶಿಕ್ಷಣದ ಪದವಿಯಲ್ಲ) ಅಥವಾ ವೃತ್ತಿಪರರು ಶೈಕ್ಷಣಿಕವಾಗಿ ಮುಂದುವರೆದವರೆಂದು ಹೇಳಲಾಗದು.5. ಕೆನೆ ಪದರು ತೆಗೆದು ಹಾಕುವ ತತ್ವವು OBC'ಗಳಿಗೆ ಮಾತ್ರ ಅಳವಡಿಕೆಯಾಗುತ್ತದೆ.6. ಕೇಂದ್ರ ಸರ್ಕಾರವು ಇನ್ನುಳಿದ ಹಿಂದುಳಿದ ವರ್ಗಗಗಳ (OBCs)ಅಭ್ಯರ್ಥಿಗಳಿಗೆ ನೀಡುವ ಅಂಕಗಳ ಪ್ರಮಾಣವು ಇನ್ನಿತರ ಸಾಮಾಜಿಕ ಹಿತಾಸಕ್ತಿಗಳ ರಕ್ಷಣೆ ಹಾಗು ಪ್ರತಿಭೆಯ ಗುಣಮಟ್ಟವನ್ನು ಕಾಯ್ದುಕೊಳ್ಳಬೇಕಾಗುತ್ತದೆ. ಇದರಿಂದ ಗುಣಮಟ್ಟ ಮತ್ತು ಪ್ರತಿಭೆ ಘಾಸಿಗೊಳಗಾಗುವುದಿಲ್ಲ ಇಂತಹ ನಿಯಮಾವಳಿಗಳ ಪಾಲಿಸಿದ ನಂತರ ಖಾಲಿ ಉಳಿದ ಸ್ಥಾನಗಳಿಗೆ ಸಾಮಾನ್ಯ ವರ್ಗದ ಅಭ್ಯರ್ಥಿಗಳನ್ನು ನೇಮಕ ಮಾಡಬಹುದು.7. ಸದ್ಯ ಹಿಂದುಳಿದ ವರ್ಗಗಳ ಬಗೆಗಿನ ನಿರ್ಧಾರ ಕುರಿತಂತೆ ಭಾರತದ ಕೇಂದ್ರ ಒಕ್ಕೂಟ ಸರ್ಕಾರವು (ಕೇಂದ್ರ ಸರ್ಕಾರ) ಒಂದು ತಿಳಿವಳಿಕೆ ಸೂಚನೆ ನೀಡಬೇಕಾಗುತ್ತದೆ. ಕೆನೆಪದರಿನ ಅಭ್ಯರ್ಥಿಗಳನ್ನು ತೆಗೆದ ನಂತರ ಕೇಂದ್ರ ಸರ್ಕಾರವು ಇದನ್ನು ಮಾಡಬೇಕಾಗುತ್ತದೆ,ಇದಕ್ಕಾಗಿ ಆಯಾ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಂದ ಅಗತ್ಯ ಅಂಕಿಅಂಶಗಳನ್ನು ಪಡೆದುಕೊಳ್ಳಬೇಕಾಗುತ್ತದೆ. ಇಂತಹ ತಿಳಿವಳಿಕೆಯ ಪತ್ರವನ್ನು ಅದರಲ್ಲಿ ತಪ್ಪಾಗಿ ಸೇರಿದ ಅಥವಾ ಬಿಟ್ಟುಹೋದ ವಿಷಯಗಳ ಕುರಿತು ಪ್ರಶ್ನಿಸಬಹುದಾಗಿದೆ. ವಿವಿಧ ರಾಜ್ಯಗಳು ಮತ್ತು ಕೇಂದ್ರಾಡಳಿತದ ಪ್ರದೇಶಗಳಲ್ಲಿನ ನೈಜ ಪರಿಸ್ಥಿತಿ ಅವಲೋಕಿಸಿ ತಕ್ಕ ನಿಯಮಾವಳಿ ರಚಿಸಬೇಕಾಗುತ್ತದೆ. ಹೀಗೆ ಇನ್ನಿತರ ಹಿಂದುಳಿದ ವರ್ಗಗಳನ್ನು (OBCs.) ಸೂಕ್ತ-ಸರಿಯಾದ ಕ್ರಮದಲ್ಲಿ ಗುರುತಿಸಬೇಕಾಗುತ್ತದೆ. ಈ ಹಿಂದುಳಿದ ವರ್ಗಗಳ ಗುರುತಿಸಲು ನೇಮಕವಾದ ಆಯೋಗವು ಹೇಗೆ ಪಾಲಿಸಬೇಕೆಂಬುದನ್ನು ಇಂದ್ರ ಸಾಹನಿ 1 ಪ್ರಕರಣದಲ್ಲಿ ಹೆಚ್ಚು ಪರಿಣಾಮಕಾರಿಯಾಗಿ ಬಿಂಬಿಸಲಾಗಿದೆ.ಕೇವಲ ಯಾರನ್ನು ತೆಗೆದುಹಾಕಬೇಕು ಯಾರನ್ನು ಸೇರಿಸಬೇಕೆಂಬುದನ್ನು ಮಾತ್ರ ಅಭಸಿಸುವಂತಿಲ್ಲ.8. ಸಂಸತ್ತು ಇದಕ್ಕಾಗಿ ಸಮಯಾವಧಿಯನ್ನು ನಿಗದಿ ಮಾಡಿ ಯಾವ ಮಗು ದೇಶದಲ್ಲಿನ ಮೂಲಭೂತ ಶಿಕ್ಷಣಕ್ಕೆ ತನ್ನನ್ನು ತೊಡಗಿಸಿಕೊಂಡಿದೆಯೇ ಎಂದು ನೋಡಬೇಕು. ಇದನ್ನು ಆರು ತಿಂಗಳಲ್ಲೇ ಮಾಡಬೇಕು.ಯಾಕೆಂದರೆ ಮುಕ್ತ ಹಾಗು ಕಡ್ಡಾಯ ಶಿಕ್ಷಣವು ಅತ್ಯಂತ ಆದ್ಯತೆಯ ಮೂಲಭೂತ ಹಕ್ಕಾಗಿದೆ.(Art.21 A) ಶಿಕ್ಷಣವಿಲ್ಲದೇ ಇನ್ನುಳಿದ ಹಕ್ಕುಗಳ ಬಗ್ಗೆ ಅವುಗಳ ಆಚರಣೆ ಬಗ್ಗೆ ತಿಳಿಯುವುದು ಅತ್ಯಂತ ಕಠಿಣ ಕೆಲಸವಾಗಿದೆ.9. ಯಾವ ಶಿಕ್ಷಣ ಸಂಸ್ಥೆಯು ತನ್ನನ್ನು ಮೀಸಲಾತಿ ವರ್ಗೀಕರಣದಲ್ಲಿ ಸೇರಿಸಬೇಕೆ ಬೇಡವೆ ಎಂಬ ಬಗ್ಗೆ ಅಗತ್ಯ ಕಾಗದಪತ್ರ ದಾಖಲೆಗಳನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಬೇಕಾಗುತ್ತದೆ.ಯಾವ ಶೆಡ್ಯುಲ್ ನಲ್ಲಿ ಇದು ಒಳಗೊಳ್ಳುತ್ತದೆ.(ಮೀಸಲಾತಿ ಪಟ್ಟಿಯಿಂದ ಹೊರಗಿರುವ ಶಿಕ್ಷಣ ಸಂಸ್ಥೆಗಳು)ಹೀಗೆ ಶಿಕ್ಷಣ ಸಂಸ್ಥೆಯು ಕೇಂದ್ರಕ್ಕೆ ಸಲ್ಲಿಸಿದ ದಾಖಲೆಗಳನ್ನು ಪರಿಶೀಲಿಸಿ ಅದನ್ನು ಯಾವ ವರ್ಗಕ್ಕೆಸೇರಿಸ ಬೇಕೆಂಬುದನ್ನು ನಿಯಮಾವಳಿಗಳು 4 ರಲ್ಲಿ ಮೇಲೆ ತಿಳಿಸಲಾದ ಕಾನೂನಲ್ಲಿ ಪರಿಗಣಿಸಲಾಗುತ್ತದೆ.10. ಇದರ ಪ್ರಕಾರ SEBC ಗಳ ಗುರುತಿಸುವಿಕೆಯು ಸಾಮಾನ್ಯವಾಗಿ ಜಾತಿಯ ಮೇಲೆಯೇ ನಡೆಯುತ್ತದೆ.ಆದ್ದರಿಂದ SEBC ಗಳ ಗುರುತಿಸುವಿಕೆಯು ಸಂವಿಧಾನದ ವಿಧಿ ಅಥವಾ ಕಲುಮು 15(1)ನ್ನು ಉಲ್ಲಂಘಿಸಲಾರದು. |
ಪ್ರಸ್ತುತ ಪ್ರಕರಣಗಳು
ಶಿಕ್ಷಣ ಸಂಸ್ಥೆಗಳು ಮತ್ತು ಕೆಲಸಗಳಲ್ಲಿನ ಮೀಸಲಾತಿಯು ವಿವಿಧ ಮಾನದಂಡಗಳನ್ನು ಅವಲಂಬಿಸಿದೆ. ಈ ಮೀಸಲಾತಿ ಪ್ರಮಾಣದ ಪದ್ದತಿಯು ವಿಶಿಷ್ಟ ಗುಂಪುಗಳ ಅನುಪಾತವನ್ನು ಬದಿಗಿಟ್ಟು ಈ ಕ್ರಮಕ್ಕೆ ಮುಂದಾಗುತ್ತದೆ. ನಿಗದಿತ ಸಮುದಾಯಕ್ಕೆ ಸೇರಿದವರು ಕೊಡಮಾಡಿದ ಅನುಪಾತದ ಮೇಲೆ ಸ್ಪರ್ಧಿಸಬೇಕಾಗುತ್ತದೆ,ಆದರೆ ಅದೇ ಮೀಸಲಾತಿಯ ಗುಂಪುಗಳು (ಮೀಸಲಾತಿ ಮತ್ತು ಮುಕ್ತ) ಎರದರಲ್ಲಿಯೂ ಸ್ಪರ್ಧಿಸಬಹುದು. ಉದಾಹರಣೆಗಾಗಿ 10 ರಲ್ಲಿಯ 2 ಗುಮಾಸ್ತರ ಹುದ್ದೆಗಳನ್ನು ಮಾಜಿ ಸೈನಿಕರಿಗೆ ಮೀಸಲಾಗಿಟ್ಟಾಗ ಸೈನ್ಯದಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದವರಿಗೆ ಆದ್ಯತೆ ನೀಡಲಾಗುತ್ತದೆ,ಆದರೆ ಅವರು ಈ ಮೀಸಲಾತಿ ಮತ್ತು ಸಾಮಾನ್ಯ ವರ್ಗದಲ್ಲೂ ಸ್ಪರ್ಧಿಸಬಹುದಾಗಿದೆ.
ಪರಿಶಿಷ್ಟ ಜಾತಿಗಳು,ಪರಿಶಿಷ್ಟ ವರ್ಗಗಳು ಮತ್ತು ಇನ್ನಿತರ ಹಿಂದುಳಿದ ಜಾತಿಗಳ (ಹುಟ್ಟುವಾಗಿನ ಜಾತಿ ಮೂಲಾಧಾರ)ನೇಮಕಾತಿಯಲ್ಲಿ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳಲ್ಲಿನ ಖಾಲಿ ಹುದ್ದೆಗಳ ಮೇರೆಗೆ ಆಯ್ಕೆ ಮಾಡಲಾಗುತ್ತದೆ. ಈ ಜಾತಿ ಪರಗಣನೆಯೋ ಹುಟ್ಟುವಾಗಿನದ್ದಾಗಿರಬೇಕೆ ವಿನಹ ಪರಿವರ್ತನೆಯಾದದ್ದಲ್ಲ. ಒಬ್ಬ ವ್ಯಕ್ತಿಯು ತನ್ನ ಧರ್ಮವನ್ನು ಬದಲಿಸಬಹುದು,ಆತನ ಆರ್ಥಿಕ ಮಟ್ಟ ಏರು-ಪೇರಾಗಬಹುದು.ಜಾತಿಯು ಶಾಶ್ವತ.
ಕೇಂದ್ರ ಸರ್ಕಾರದ ಧನ ಸಹಾಯದ ಶಿಕ್ಷಣ ಸಂಸ್ಥೆಗಳಲ್ಲಿ ಒಟ್ಟು ಲಭ್ಯ ಸ್ಥಳಗಳಲ್ಲಿ 22.5% ರಷ್ಟು ಸ್ಥಾನಗಳನ್ನು ಪರಿಶಿಷ್ಟ ಜಾತಿಗಳು (ದಲಿತ) ಮತ್ತು ಪರಿಶಿಷ್ಟ ವರ್ಗಗಳು (ಆದಿವಾಸಿ) ವಿದ್ಯಾರ್ಥಿಗಳಿಗೆ ಮೀಸಲಿಡಲಾಗುತ್ತದೆ.(15% ರಷ್ಟುSCs 7.5% ರಷ್ಟು STs ಗಳಿಗೆ) ಈ ಮೀಸಲಾತಿಯ ಶೇಕಡಾವಾರನ್ನು 49.5% ರಷ್ಟು ಹೆಚ್ಚಳ ಮಾಡಲಾಗಿದೆ.ಇದರಲ್ಲಿ ಹೆಚ್ಚುವರಿ 27% ರಷ್ಟು ಮೀಸಲಾತಿಯನ್ನು OBC ಗೆ 10ನೀಡಲಾಗುತ್ತದೆ. AIIMS ನಲ್ಲಿ 14% ರಷ್ಟು ಸ್ಥಾನಗಳು SC ವರ್ಗಗಳಿಗೆ,ಮತ್ತು 8% ST ವರ್ಗಗಳಿಗೆ ಮೀಸಲಾಗಿವೆ. ಅದಲ್ಲದೇ ಕನಿಷ್ಟ 50% ಅಂಕ ಪಡೆದ SC/ST ವಿದ್ಯಾರ್ಥಿಗಳಿಗೆ ಮಾತ್ರ ಮೀಸಲಾತಿ ಅವಕಾಶ ಕಲ್ಪಿಸಲಾಗಿದೆ. ಈ ಅನುಪಾತವನ್ನು ಕೆಲವು ಮತಕ್ಷೇತ್ರಗಳಲ್ಲಿಯೂ ಅನುಸರಿಸಲಾಗುತ್ತಿದೆ.ಕೆಲವೆಡೆ ಕೆಲವೇ ಕೆಲವು ಸಮುದಾಯಗಳಿಗೆ ಈ ಕ್ಷೇತ್ರ ಮೀಸಲಾಗಿರುತ್ತವೆ. ತಮಿಳುನಾಡುನಂತಹ ರಾಜ್ಯಗಳಲ್ಲಿ SC ಗಳಿಗೆ 18% ಆದರೆ ST ಗಳಿಗೆ 1% ರಷ್ಟಾಗಿದೆ.ಇದು ಸ್ಥಳೀಯ ಜನಸಂಖ್ಯೆ ಆಧಾರವಾಗಿ ಪರಿಗಣಿಸಲಾಗಿದೆ. ಆಂಧ್ರಪ್ರದೇಶದಲ್ಲಿ 25% ರಷ್ಟು ಶಿಕ್ಷಣ ಸಂಸ್ಥೆಗಳು ಮತ್ತು ಸರ್ಕಾರಿ ಸೇವೆಗಳಲ್ಲಿ BC ಗಳಲ್ಲಿ SC ಗಳಿಗೆ 15%,ST ಗಳಿಗೆ 6% ಮತ್ತು 4% ರಷ್ಟನ್ನು ಮುಸ್ಲಿಮ್ ರಿಗೆ ಮೀಸಲಾತಿ ಕಲ್ಪಿಸಲಾಗಿದೆ.
ಈ ಆಡಳಿತ ನಿಯಂತ್ರಣದಲ್ಲಿರುವ ಮೀಸಲಾತಿ ಪ್ರಮಾಣದಲ್ಲಿ ಬಹಳಷ್ಟು ವಿವಾದಗಳಿಗೆ ಮೀಸಲಾತಿ ಬೆಂಬಲಿಗರು ಇದನ್ನು ಬಹುವಾಗಿ ವಿರೋಧಿಸಿದ್ದಾರೆ. ಇದನ್ನು ಶಿಕ್ಷಣ ತಜ್ಞರು ತೀವ್ರವಾಗಿ ಟೀಕಿಸುತ್ತಾರೆ,ಈ ಪ್ರಮಾಣವು ಯಾವುದೇ ಜಾತಿ,ಆರ್ಥಿಕ್ ಸ್ಥಿತಿಗತಿ ನೋಡದೇ ಕೇವಲ ಹಣ ಇರುವವರಿಗೆ ಎಂದು ಅವರು ಹೇಳುತ್ತಾರೆ.ಇದನ್ನು ಹಣ ಇರುವ ಯಾರು ಬೇಕಾದರೂ ಕೊಂಡುಕೊಳ್ಳಬಹುದು. ಖಾಸಗಿ ಕಾಲೇಜುಗಳಲ್ಲಿ 15% ರಷ್ಟು ಸ್ಥಾನಗಳನ್ನು ಆ ಕಾಲೇಜು ಆಡಳಿತ ಮಂಡಳಿ ನಿರ್ಧರಿಸಿದ ವಿದ್ಯಾರ್ಥಿಗಳಿಗೆ ಮಾತ್ರ ನೀಡಲಾಗುತ್ತದೆ. ಇದಕ್ಕಾಗಿ ಕಾಲೇಜುಗಳು ತಮ್ಮದೇ ಆದ ಮಾನದಂಡಗಳನ್ನು ಹೊಂದಿದ್ದು ಕನಿಷ್ಟ % ಶೇಕಡಾವಾರು ಪ್ರವೇಶ ಪರೀಕ್ಷೆಯಲ್ಲಿ ಅಥವಾ 10+2 ಅಂಕಗಳನ್ನು ಪರಿಗಣಿಸಲಾಗುತ್ತದೆ.
ಮಹಿಳೆಯರಿಗಾಗಿ ಮೀಸಲಾತಿಗಳು ಮಹಿಳೆಯರು 33% ರಷ್ಟು ಮೀಸಲಾತಿಗಳನ್ನು ಗ್ರಾಮ ಪಂಚಾಯತಿ ಮಟ್ಟದಲ್ಲಿ ಪಡೆಯುತ್ತಾರೆ.(ಗ್ರಾಮ ಮಟ್ಟದ ವಿಧಾನ ಮಂಡಲ),ಇದು ಸ್ಥಳೀಯ ಗ್ರಾಮ ಸರ್ಕಾರ ಅಥವಾ ಮುನ್ಸಿಪಲ್ ಚುನಾವಣೆಗಳ ಮೂಲಕ ಇದು ಅಸ್ತಿತ್ವಕ್ಕೆ ಬರುತ್ತವೆ. ಒಂದು ಸುದೀರ್ಘ ಯೋಜನೆಯಡಿ ಇದನ್ನು ಸಂಸತ್ತು ಮತ್ತು ಶಾಸಕಾಂಗಗಳಲ್ಲೂ ಅರುವ ಉದ್ದೇಶ ಹೊಂದಲಾಗಿದೆ. ಇನ್ನೂ ಹೆಚ್ಚೆಂದರೆ ಮಹಿಳೆಯರಿಗೆ ಶಿಕ್ಷಣ ಮತ್ತು ಸರ್ಕಾರಿ ಸೇವೆಗಳಲ್ಲಿ ಆದ್ಯತೆ ಮೇರೆಗೆ ಪರಿಗಣಿಸಲಾಗುತ್ತದೆ ಇಂತಹ ಆದ್ಯತೆ ಬಗ್ಗೆ ಕೆಲವು ಪುರುಷರು ಇದನ್ನು ಲಿಂಗತಾರತಮ್ಯವೆಂದು ಕರೆಯುತ್ತಾರೆ,ಶಾಲೆ,ಕಾಲೇಜು ಮತ್ತು ವಿಶ್ವವಿದ್ಯಾಲಯಗಳಲ್ಲಿ ಪ್ರವೇಶ ಸೂಕ್ತ ಕ್ರಮವಲ್ಲ ಎನ್ನುವವರೂ ಇದ್ದಾರೆ. ಭಾರತದಲ್ಲಿನ ಹಲವು ಕಾನೂನು ಕಾಲೇಜುಗಳಲ್ಲಿ ಮಹಿಳೆಯರಿಗೆ 30% ರಷ್ಟು ಮೀಸಲಾತಿ ಇದೆ. ಸದ್ಯದ ಪ್ರಗತಿಪರ ರಾಜಕಾರಣದಲ್ಲಿ ಮಹಿಳೆಯರಿಗೆ ಆದ್ಯತೆ ಮೇರೆಗೆ ಎಲ್ಲಾ ಕ್ಷೇತ್ರದಲ್ಲೂ ಉತ್ತಮ ಸ್ಥಾನದ ಅಗತ್ಯವನ್ನು ಭಾರತದಲ್ಲಿ ಕಂಡುಕೊಳ್ಳಲಾಗಿದೆ.ಇದರಿಂದ ದೇಶದ ಎಲ್ಲಾ ನಾಗರಿಕರಿಗೆ ಸಮಾನವಕಾಶದ ಸಂದರ್ಭ ಒದಗಲಿದೆ.
.ಮಹಿಳಾ ಮೀಸಲಾತಿ ಮಸೂದೆಯು ಇತ್ತೀಚೆಗೆ 2010 ಮಾರ್ಚ್ 9 ರಂದು ರಾಜ್ಯಸಭೆಯಲ್ಲಿ 186 ಸದಸ್ಯರ ಬೆಂಬಲ ಓರ್ವರ ವಿರೋಧದಿಂದ ಸಮ್ಮತಿ ಪಡೆಯಿತು. ಸದ್ಯ ಈ ಮಸೂದೆ ಲೇಕಸಭೆಗೆ ಹೋಗಿ ಅಲ್ಲಿ ಅನುಮೋದನೆ ಪಡೆಯುವ ನಿರೀಕ್ಷೆ ಇದೆ. GHAGad LHDalHad:LKHadd:lKHadklHDal:Hal;khaDHL;Ad
ತಮಿಳುನಾಡು ಸರ್ಕಾರವು ಮುಸ್ಲಿಮ್ ಮತ್ತು ಕ್ರಿಶ್ಚನ್ ರಿಗೆ 3.5% ರಷ್ಟು ಮೀಸಲಾತಿ ನೀಡಿದೆ.OBC ಯ ಮೀಸಲಾತಿಯನ್ನು 30% ರಿಂದ 23% ಕ್ಕೆ ಪರಿವರ್ತಿಸಿದೆ.ಇದರಲ್ಲಿ ಮುಸ್ಲಿಮ್ ಮತ್ತು ಕ್ರಿಶ್ಚೇಯನ್ ರಲ್ಲದವರಿಗೆ ಮೀಸಲಾತಿ ಇರುವುದಿಲ್ಲ. ಸರ್ಕಾರದ ವಾದದ ಪ್ರಕಾರ ಈ ಮೀಸಲಾತಿಯು ಧಾರ್ಮಿಕವಾಗಿ ಹಿಂದುಳಿದಿರುವ ಸಮುದಾಯಗಳಿಗೆ ಮಾಡಲಾಗಿದ್ದು ಆದರೆ ಧಾರ್ಮಿಕತೆಯನ್ನೇ ಕೇವಲ ಅವಲಂಬಿಸಿಲ್ಲ.
ಆಂಧ್ರಪ್ರದೇಶದ ಆಡಳಿತವು ಮುಸ್ಲಿಮ್ ರಿಗೆ 4% ರಷ್ಟು ಮೀಸಲಾತಿಯನ್ನು ನೀಡಿದೆ. ಇದನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಲಾಗಿದೆ. ಕೇರಳ ಲೋಕಸೇವಾ ಆಯೋಗವು ಮುಸ್ಲಿಮ್ ರಿಗೆ 12% ರಷ್ಟು ಮೀಸಲಾತಿ ನೀಡಿದೆ. ಧಾರ್ಮಿಕ ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳು ತಮ್ಮ ಧರ್ಮದವರಿಗೆ 50% ರಷ್ಟು ಮೀಸಲಾತಿ ನೀಡಲು ಅವಕಾಶವಿದೆ. ಕೇಂದ್ರ ಸರ್ಕಾರವು ಹಲವಾರು ಮುಸ್ಲಿಮ್ ಸಮುದಾಯಗಳನ್ನು ಹಿಂದುಳಿದ ಮುಸ್ಲಿಮ್ ರೆಂದು ಪರಿಗಣಿಸಿ ಅಗತ್ಯ ಮೀಸಲಾತಿ ಒದಗಿಸಿದೆ.
ಅಪವಾದವೆಂಬಂತೆ ಆಯಾ ರಾಜ್ಯಸರ್ಕಾರಗಳು ತಮ್ಮ ಸ್ಥಳೀಯರಿಗೆ ಎಲ್ಲಾ ಸರ್ಕಾರಿ ಮತ್ತು ಇತರ ಸೇವೆಗಳನ್ನು ನೀಡುತ್ತಿವೆ. ಚಂಡೀಗಢ PEC ನಲ್ಲಿ ಆರಂಭದಲ್ಲಿ 80% ರಷ್ಟು ಸ್ಥಾನಗಳನ್ನು ಸ್ಥಳೀಯರಿಗೆ ನೀಡಲಾಗುತಿತ್ತು.ಈಗ ಅದು 50% ರಷ್ಟಿದೆ.
ಸಂಸ್ಥೆಗಳಾದ JIPMER ನಲ್ಲಿ ಸ್ನಾತಕೋತ್ತರ ಸ್ಥಾನಗಳನ್ನು ಯಾರು ತಮ್ಮ MBBS ನ್ನು JIPMER ನಲ್ಲಿ ಪೂರ್ಣ ಮಾಡಿದ್ದಾರೋ ಅವರಿಗೆ ಸ್ಥಾನಗಳ ಮೀಸಲಿಟ್ಟಿದೆ. AIIMS] ಸಂಸ್ಥೆಯು ತನ್ನ 120 ಸ್ನಾತಕೋತ್ತರ ಸ್ಥಾನಗಳಲ್ಲಿ 33% ರಷ್ಟನ್ನು 40 ಪದವಿಪೂರ್ವ ವಿದ್ಯಾರ್ಥಿಗಳಿಗೆ ಮೀಸಲಿಟ್ಟಿದೆ.(ಯಾರು ಅಲ್ಲಿ MBBSನ್ನು ಅಲ್ಲಿ ಮುಗಿಸಿರುತ್ತಾರೋ ಅವರಿಗೆ ಸ್ನಾತಕೋತ್ತರ ಪ್ರವೇಶಕ್ಕೆ ಅವಕಾಶ,ಆದರೆ ಇದನ್ನು ನ್ಯಾಯಾಲಯವೊಂದು ಕಾನೂನು ಬಾಹಿರ ಎಂದು ಹೇಳಿದೆ).
ಕೆಲವು ಮೀಸಲಾತಿಗಳನ್ನು:
ಕೆಲವು ದೇಶದ ಅತ್ಯುನ್ನುತ ಪದವಿ-ಪೂರ್ವ ಮತ್ತು ಪದವಿ ಕಾಲೇಜುಗಳಾದ IITs, ದಿ IIMಗಳಲ್ಲಿ ಇವು ವಿಶ್ವದಲ್ಲೇ ಹೆಸರುವಾಸಿ ಇವುಗಳ ಪ್ರವೇಶ ಪರೀಕ್ಷೆಗಳಲ್ಲಿ ಮಾತ್ರ ಸವಲತ್ತಿನ ಸಡಲಿಕೆ ಇದೆ ಆದರೆ ಎಲ್ಲ ಹಂತಗಳಲ್ಲಿ ಮೀಸಲಾತಿ ಇರುವುದಿಲ್ಲ. ಕೆಲವು ಮಾನದಂಡಗಳನ್ನು ಮೀಸಲಾತಿ ವರ್ಗಕ್ಕೆ ನೀಡಿದರೆ ಇನ್ನುಳಿದನ್ನು ಪೂರ್ಣವಾಗಿ ತೆಗೆದು ಹಾಕಲಾಗಿದೆ. ಉದಾಹರಣೆಗಳೆಂದರೆ:
ಇದರಲ್ಲಿ ಗಮನಿಸಬೇಕಾದ ವಿಷಯವೆಂದರೆ ಒಂದು ಸಂಸ್ಥೆಯ ಪದವಿಧರರು ಉನ್ನತ ಶಿಕ್ಷಣಕ್ಕೆ ಬೇಕಾದ ಮಾನದಂಡಕ್ಕೆ ವಿನಾಯತಿ ಇಲ್ಲ.(ಉದಾಹರಣೆಗೆ IIT ಗಳಲ್ಲಿ)ಪ್ರೊಗ್ರಾಮಿಂಗ್ ವಿನಾಯತಿ ಅಥವಾ ಕನಿಷ್ಟ ವಿದ್ಯಾಹರ್ಯತೆ ಅಗತ್ಯವಾಗಿದೆ.
ತಮಿಳುನಾಡಿನಲ್ಲಿ ದೇಶದ ಇನ್ನಿತರ ಮೀಸಲಾತಿ ನೀತಿಗಿಂತ ಭಿನ್ನವಾಗಿದೆ ಯಾಕೆಂದರೆ ಅದರ ಐತಿಹಾಸಿಕ ಹಿನ್ನಲೆ ಇದಕ್ಕೆ ಕಾರಣ. ಆಗ 2006 ರ ಮೇ ನಲ್ಲಿ ಮೀಸಲಾತಿ ವಿರೋಧಿ ಧ್ವನಿ ದೆಹಲಿಯಲ್ಲಿ ಮೊಳಗಿದಾಗ ಚೆನ್ನೈನಲ್ಲಿ ಅಸಹನೀಯ ಶಾಂತಿ ನೆಲೆಸಿತ್ತು. ನಂತರ ಮೀಸಲಾತಿ-ವಿರೋಧಿ ಸಂಖ್ಯೆ ಹೆಚ್ಚಾದಾಗ ಚೆನ್ನೈನಲ್ಲಿ ಮೀಸಲಾತಿ ಬೇಕೆಂದು ನಗರದಲ್ಲಿ ಸಣ್ಣ ಪ್ರತಿಭಟನೆ ನಡೆಯಿತು. ಚೆನ್ನೈನಲ್ಲಿನ ವೈದ್ಯರ ಸಮೂಹ ಅದರ ಸಾಮಾಜಿಕ (DASE) ಸಂಘಟನೆಯು ಈ ಪ್ರತಿಭಟನೆಯ ಮುಂಚೂಣಿಯಲ್ಲಿತ್ತು.ಕೇಂದ್ರ ಸರ್ಕಾರದ ಆಡಳಿತವಿರುವ ಉನ್ನತ ಮತ್ತು ತಾಂತ್ರಿಕ ಶಿಕ್ಷಣ ಸಂಸ್ಥೆಗಳಲ್ಲಿ ಮೀಸಲಾತಿಗೆ ಆಗ್ರಹಿಸಿತು.
ಸದ್ಯ ಒಟ್ಟಾರೆ ಮೀಸಲಾತಿ ಪ್ರಮಾಣವು 69% ರಷ್ಟಿದ್ದು ಇಅರಲ್ಲಿ ಎಷ್ಟು ಯಾವ ವರ್ಗಕ್ಕೆ ಎನ್ನುವುದಕ್ಕಿಂತ ಎಲ್ಲರಿಗೂ ಅದಲ್ಲದೇ ವರ್ಗಕ್ಕೆ ಸೇರದವರ ಭಾಗವೆಷ್ಟೆಂಬುದನ್ನೂ ಪರಿಗಣಿಸಲಾಗುತ್ತದೆ.ವಿದ್ಯಾರ್ಥಿಗಳಿಗೆ ಸಾಕಷ್ಟು ಸಂಖ್ಯಾಬಲದ ಪ್ರವೇಶ ನೀಡಬೇಕೆಂಬುದು ಅವರ ಅಭಿಪ್ರಾಯ. ಒಂದು ವೇಳೆ 100 ಸ್ಥಾನಗಳು ಲಭ್ಯವಿದ್ದರೆ ಸಮುದಾಯ-ಪಂಗಡ ಗಮನಿಸದೇ ಮೊದಲು ಎರಡು ಮೆರಿಟ್ ಪಟ್ಟಿ ತಯಾರಿಸಲಾಗುತ್ತದೆ.(ಮೀಸಲಾತಿ ಇರಬಹುದು ಮೀಸಲಾತಿ ಇಲ್ಲದಿರಬಹುದು)ಮೊದಲನೆಯದು 31 ಸ್ಥಾನಗಳಿಗೆ ಇನ್ನೊಂದು 50 ಸ್ಥಾನಗಳಿಗೆ ಇದು 69% ಮತ್ತು 50% ರಷ್ಟರ ಮೀಸಲಾತಿಗನುಗುಣವಾಗಿ ವಿಂಗಡಿಸಲಾಗುತ್ತದೆ. ಯಾವುದೇ ಮೀಸಲಾತಿರಹಿತದ ವಿದ್ಯಾರ್ಥಿಗಳು 50 ಮತ್ತು 31 ರ ವಿದ್ಯಾರ್ಥಿ ಕೋಟಾದಲ್ಲಿ ಬರದಿದ್ದರೆ ಇಂತಹ ವಿದ್ಯಾರ್ಥಿಗಳನ್ನು ಸುಪರ್ -ನ್ಯುಮರಿ ಕೋಟಾ ಪ್ರಮಾಣದಲ್ಲಿ ಪ್ರವೇಶವಕಾಶ ನೀಡಲಾಗುತ್ತದೆ.ಇಲ್ಲಿ 100 ಸಂಖ್ಯೆಯನ್ನು ಇದಕ್ಕೆ ಸೇರ್ಪಡೆ ಮಾಡಲಾಗುತ್ತದೆ. ಅದೇ 31 ಸ್ಥಾನಗಳ ಪಟ್ಟಿಯನ್ನು ಮೀಸಲಾತಿರಹಿತ ಮುಕ್ತ ಪ್ರವೇಶಕ್ಕೆ ಉಪಯೋಗಿಸಲಾಗುವುದು.69 ಸ್ಥಾನಗಳನ್ನು 60% ರ ಮೀಸಲಾತಿ ಕೋಟಾದಡಿ ಭರ್ತಿ ಮಾಡಲಾಗುವುದು.(30 obc,20 mbc,18 ಸ್ಥಾನಗಳು sc ಮತ್ತು 1 ಸ್ಥಾನ st ಗಳಿಗೆ) ಹೀಗೆ ಪರಿಣಾಮಕಾರಿ ಮೀಸಲಾತಿ ಶೇಕಡಾವಾರು ಎಷ್ಟು ಮೀಸಲಾತಿ-ರಹಿತ 50 ರ ಕೆಟಗರಿಯಲ್ಲಿ ಎಷ್ಟಿದ್ದಾರೆಂದು ಪರಿಗಣಿಸಲಾಗುತ್ತದೆ.ಆದರೆ 31 ರ ಮೆರಿಟ್ ಪಟ್ಟಿಯಲ್ಲಲ್ಲ. ಒಂದು ತೆರನಾದ ವರ್ಗೀಕರಣದ ಎಲ್ಲಾ 19 (31 ರಿಂದ 50 ರ ಪಟ್ಟಿಯಲ್ಲಿ)ಇದು ಮೀಸಲಾತಿ ರಹಿತರ ವಿದ್ಯಾರ್ಥಿಗಳು ಪಟ್ಟಿ ಇದು ಒಟ್ಟು ಮೀಸಲತಿಯ 58%(69/119)/119 ಅಥವಾ 74% ಇದರೊಂದಿಗೆ 19% ನ್ನು ಮೀಸಲಾತಿರಹಿತ ವಿದ್ಯಾರ್ಥಿಗಳ ಸಮೂಹವನ್ನು 'ಮೀಸಲಾತಿ' ಎಂದು ಪರಿಗಣಿಸಲಾಗುತ್ತದೆ! ಇನ್ನೊಂದು ವಿಶಿಷ್ಟವೆದರೆ ಈ 19 ವಿದ್ಯಾರ್ಥಿಗಳು 31 ರ ಪಟ್ಟಿಗೆ ಸೇರುವುದಿಲ್ಲ.ಇವರು ಮೀಸಲಾತಿರಹಿತರ ಕೆಟಗರಿಯಲ್ಲಿದ್ದರೂ ಇದಕ್ಕೆ ಸೇರುವುದಿಲ್ಲ.ಇಲ್ಲಿ ಸುಪರ್ -ನ್ಯುಮರಿ ಸ್ಥಾನಗಳ ಪ್ರಶ್ನೆ ಉದ್ಭವಿಸುವುದಿಲ್ಲ.ಹೀಗೆ ರಾಜ್ಯ ಕಾನೂನಿಂದ ನಿಗದಿಯಾಗಿರುವ 69% ಕಡ್ಡಾಯ ಮೀಸಲಾತಿ ಅನ್ವಯವಾಗುತ್ತದೆ.
ಮೂಲಗಳು Rediff.com ನ ಹೊಸ ಲೇಖನ .
ನ್ಯಾಶನಲ್ ಸ್ಯಾಂಪಲ್ ಸರ್ವೆ ದ 1999-2000 (NSS 99-00)ಪ್ರಕಾರ ದೇಶದ ಒಟ್ಟು ಜನಸಂಖ್ಯೆಯಲ್ಲಿ ಶೇಕಡಾ 36 ರಷ್ಟು ಜನರು ಇನ್ನಿತರ ಹಿಂದುಳಿದ ಜನಾಂಗದ (OBC)ಜನರಿದ್ದಾರೆಂದು ತಿಳಿಸಿತು. ಮುಸ್ಲಿಮ್ OBC ಗಳನ್ನು ಹೊರತುಪಡಿಸಿದರೆ ಇದು 32 ಶೇಕಡಾವಾರು ನಿಲ್ಲುತ್ತದೆ. ನ್ಯಾಶನಲ್ ಫ್ಯಾಮಿಲಿ ಹೆಲ್ತ್ ಸ್ಟ್ಯಾಟಿಸ್ಟಿಕ್ಸ್ (NFHS)ತನ್ನ ಸರ್ವೇಕ್ಷಣೆಯಲ್ಲಿ ಅಂಕಿಅಂಶವನ್ನು ಮುಸ್ಲಿಮ್ ರಹಿತ OBCs ಗಳನ್ನು 29.8 ಶೇಕಡಾ ಎಂದು ಹೇಳಿದೆ. ಈ ಸರ್ವೇಕ್ಷಣೆಗಳನ್ನು ಮೇಲುಸ್ತುವಾರಿ ಸಮಿತಿಯು ತನ್ನ ಅಧ್ಯಯನಗಳಲ್ಲಿ ವ್ಯಾಪಕವಾಗಿ ಬಳಸಿವೆ.ಡಾ.ಯೋಗೆಂದ್ರ ಯಾದವ್ ಅವರು ಕೂಡಾ ಈ ಅಂಕಿಅಂಶಗಳಲ್ಲಿ ತಮ್ಮ ಪ್ರಯೋಗಗಳನ್ನು ಕೈಗೊಂಡಿದ್ದಾರೆ.[೯] Archived 21 July 2011[Date mismatch] ವೇಬ್ಯಾಕ್ ಮೆಷಿನ್ ನಲ್ಲಿ. ರಾಜ್ಯ ಜನಸಂಖ್ಯೆಯನ್ನು NSS 99-00 ರಲ್ಲಿ ಇನ್ನಿತರ ವಿಭಾಗಗಳಲ್ಲಿ ನೋಡಬಹುದು.
ಮೀಸಲಾತಿಗಳ ಬಗೆಗೆ ಹಲವಾರು ವಾದ-ವಿವಾದಗಳಿವೆ,ಇದಕ್ಕೆ ಬೆಂಬಲಿಸುವವರೂ ಇದನ್ನು ವಿರೋಧಿಸುವವರೂ ಇದ್ದಾರೆ. ಕೆಲವು ವಾದವಿವಾದಗಳು ಪರಸ್ಪರ ವ್ಯಾಜ್ಯಕ್ಕೆ ಮೂಲವಾದರೆ ಇನ್ನು ಕೆಲವೆಡೆ ವಿಷಯನಾಧರಿಸಿ ಒಟ್ಟಾಭಿಪ್ರಾಯಕ್ಕೆ ಬಂದ ಪ್ರಸಂಗಗಳೂ ಇವೆ.
ಈ ನೀತಿಗೆ ಕೆಲವು ಸಲಹೆಗಳನ್ನು ನೀಡಿ ಈ ಸಮಸ್ಯೆಗೆ ಪರಿಹಾರ ಕಂಡುಹಿಡಿಯಲು ಯತ್ನಿಸಲಾಗಿದೆ.
ಸಾಚಾರ್ ಸಮಿತಿಯ ಶಿಫಾರಸುಗಳು
ಸಾಚಾರ ಸಮಿತಿ ಪ್ರಕಾರ ಶೈಕ್ಷಣಿಕ ಸಂಸ್ಥೆಗಳಲ್ಲಿರುವ OBC ಹಿಂದುಗಳು ತಮ್ಮ ಜನಸಂಖ್ಯಾ ಅನುಪಾತಕ್ಕೆ ಪೂರಕವಾಗಿದ್ದಾರೆ.. ಭಾರತದ ಮಾನವ ಸಂಪನ್ಮೂಲ ಇಲಾಖೆಯ ಸಚಿವರು ಸಾಚಾರ್ ಸಮಿತಿಯ ಭಾರತೀಯ ಮುಸ್ಲಿಒಮ್ ರ ಕುರಿತ ಶಿಫಾರಸುಗಳ ಪರಿಶೀಲನೆಗೆ ಒಂದು ಸಮಿತಿ ರಚಿಸಿದರು.ಆದರೆ ಉಳಿದವರ ಬಗ್ಗೆ ಚಕಾರವೆತ್ತದೆ ಅದರ ಸಲಹೆಗಳಿಗೂ ಕಿವಿಗೊಡದೇ ಸುಮ್ಮನಾದರು. ಇದರಲ್ಲಿರುವ ದೋಷವೆಂದರೆ ಮೊದಲ ಶ್ರೇಣಿ ಪಡೆದ ಅಭ್ಯರ್ಥಿ ಪ್ರವೇಶ ಅಥವಾ ಪ್ರವೇಶಕ್ಕೆ ಅಯೋಗ್ಯನಾಗುವ ಸಾಧ್ಯತೆ ಇದೆ.ಇದು ಸಮಾನತೆಯ ತತ್ವಕ್ಕೆ ಮತ್ತು ನೈಸರ್ಗಿಕ ನ್ಯಾಯಕ್ಕೆ ತದ್ವಿರುದ್ದವಾದುದು.
ಸಮಾಜ ಸುಧಾರಣೆಯ ಅಧ್ಯಯನ ಕೇಂದ್ರದ ಸಲಹೆ
ಇತರರ ಶಿಫಾರಸುಗಳು
ಇದರಿಂದ ಮೂಲಭೂತವಾದ ಜಾತಿ ಪದ್ದತಿ-ಆಚರಣೆಗಳು ಅಳಿದುಹೋಗಬಹುದು. ಅಂತರ್ ಜಾತೀಯ ವಿಹಾಹದಿಂದ ಜನಿಸಿದ ಮಗುವಿಗೆ ಮೀಸಲಾತಿ ಅವಕಾಶ ನೀಡುವುದರಿಂದ ಸಮಾಜದಲ್ಲಿನ ಜಾತಿ ಪದ್ದತಿಯನ್ನು ವಿನಾಶ ಮಾಡಬಹುದು.
ಹಾಗೆ ಸರಕಾರದ ಸವಲತ್ತುಗಳಲ್ಲೂ %ಶೇಕಡಾವರು ಕಾಯ್ದಿರಿಸಿಬೇಕು.
This article uses material from the Wikipedia ಕನ್ನಡ article ಭಾರತದಲ್ಲಿ ಮೀಸಲಾತಿ, which is released under the Creative Commons Attribution-ShareAlike 3.0 license ("CC BY-SA 3.0"); additional terms may apply (view authors). ವಿಶೇಷವಾಗಿ ಟಿಪ್ಪಣಿ ಮಾಡದಿದ್ದ ಹೊರತು ಪಠ್ಯ "CC BY-SA 4.0" ರಡಿ ಲಭ್ಯವಿದೆ. Images, videos and audio are available under their respective licenses.
®Wikipedia is a registered trademark of the Wiki Foundation, Inc. Wiki ಕನ್ನಡ (DUHOCTRUNGQUOC.VN) is an independent company and has no affiliation with Wiki Foundation.