ಮನೆಯಲ್ಲಿ 'ಬಾಬಾ ಸಾಹಬ ಅಹಮದ್ ಸಾಹಬ ಸನದಿ' (೧೯೩೩.ಆಗಸ್ಟ್.೧೮-೨೦೧೯.ಮಾರ್ಚ್,೩೧) ಎಂಬ ತೊಟ್ಟಿಲ ಹೆಸರಿನ ಖ್ಯಾತ ಕವಿ, ಸಾಹಿತಿ 'ಬಿ.ಎ ಸನದಿ', ಒಳ್ಳೆಯ ವಾಗ್ಮಿ,, ಅನುವಾದಕಾರ, ಮಕ್ಕಳ ಸಾಹಿತ್ಯದಲ್ಲಿ ನಿಷ್ಣಾತರು.
ನಾಟಕ ರಚನಾಕಾರ, ಹಾಗೂ ನಿರ್ದೇಶಕರು. ಅವರು ಮುಂಬಯಿ ಆಕಾಶವಾಣಿಯ ಹಿರಿಯ ಅಧಿಕಾರಿಯಾಗಿ ಪಾದಾರ್ಪಣೆ ಮಾಡಿದ ಕಾಲದಲ್ಲಿ ಕನ್ನಡ ರೇಡಿಯೋ ನಾಟಕಗಳು ಉಪನ್ಯಾಸಗಳು ಸರಸ ಸಂಭಾಷಣೆಗಳು ಯಕ್ಷಗಾನ ಆಟಗಳು,ಕರ್ನಾಟಕದಿಂದ ಮುಂಬಯಿಗೆ ಆಗಮಿಸುತ್ತಿದ್ದ ಸುಪ್ರಸಿದ್ಧ ಕವಿಗಳ ಜೊತೆ ಸಂವಾದ ಸಂದರ್ಶನಗಳು 'ಮುಂಬಯಿ ಆಕಾಶವಾಣಿ'ಯಲ್ಲಿ ತಪ್ಪದೆ ಆಯೋಜಿಸಲ್ಪಡುತ್ತಿದ್ದವು.
ಬಿ. ಎ. ಸನದಿ | |
---|---|
ಜನನ | ಬಾಬಾ ಸಾಹಬ ಅಹಮದ್ ಸಾಹಬ ಸನದಿ' ತಂದೆಯವರ ಹೆಸರು 'ಅಹಮದ್ ಸಾಹಬ', ತಾಯಿ 'ಆಯಿಶಾಬಿ'. ಮಗ 'ನಿಸಾರ' ೧೯೩೩ ಅಗಸ್ಟ್, ೧೮ ರಂದು ಬೆಳಗಾವಿ ಜಿಲ್ಲೆಯ ಶಿಂದೊಳ್ಳಿ ಗ್ರಾಮದಲ್ಲಿ ಜನಿಸಿದರು. |
ಮರಣ | ಕುಮಟಾದ ಸ್ವಗೃಹದಲ್ಲಿ ೨೦೧೯,ಮಾರ್ಚ್,೩೧ ರಂದು |
ರಾಷ್ಟ್ರೀಯತೆ | ಭಾರತೀಯ |
ಇತರೆ ಹೆಸರುಗಳು | ಆಕಾಶವಾಣಿಯಲ್ಲಿ ಯಕ್ಷಗಾನಕ್ಕೆ ಒಂದು ಸ್ಥಾನ ಕಲ್ಪಿಸಿಕೊಟ್ಟರು. ಮರಾಠಿ ಸಾಹಿತ್ಯದ ಒಂದು ಜನಪ್ರಿಯ ನಾಟಕವನ್ನು ಕನ್ನಡಕ್ಕೆ ಅನುವಾದಿಸಿದರು. ಆಕಾಶವಾಣಿಯಲ್ಲಿ ಕುಟುಂಬ ಕಲ್ಯಾಣ ಕಾರ್ಯಕ್ರಮಾಧಿಕಾರಿಯಾಗಿ ಕೆಲಸ ನಿರ್ವಹಿಸಿದ್ದರು. |
ವಿದ್ಯಾರ್ಹತೆ | ಪ್ರಾಥಮಿಕ ಶಿಕ್ಷಣ ಹುಟ್ಟೂರು ಶಿಂದೊಳ್ಳಿಯಲ್ಲಿ. |
ಹಳೆ ವಿದ್ಯಾರ್ಥಿ | ೧೯೫೪ ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯದ ಅರ್ಥಶಾಸ್ತ್ರ ಪದವಿ ಪಡೆದರು. ೧೯೭೨ ರಲ್ಲಿ ಶಿವಾಜಿ ವಿಶ್ವವಿದ್ಯಾಲಯದಿಂದ ಕನ್ನಡ ಹಾಗು ಸಂಸ್ಕೃತದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದರು. |
ಉದ್ಯೋಗ | ಮುಂಬಯಿ ಆಕಾಶವಾಣಿಯಲ್ಲಿ ಅಧಿಕಾರಿಯಾಗಿದ್ದರು. ಸನದಿಯವರೇ ಬರೆದು ನಿರ್ದೇಶಿಸಿದ, 'ಗಂಡ ಹೆಂಡತಿ' ರೇಡಿಯೋ ನಾಟಕ,ಬಹಳ ಹೆಸರುವಾಸಿಯಾಯಿತು. ಕವಿ,ಲೇಖಕ,ನಾಟಕ ಕರ್ತ, ನಿರ್ದೇಶಕ, ಒಳ್ಳೆಯ ಅನುವಾದಕ, ಕನ್ನಡ ಪರಿಚಾರಕ, |
ಇದಕ್ಕೆ ಖ್ಯಾತರು |
|
ಎಪ್ಪತ್ತರ ದಶಕ ಮುಂಬಯಿನ ಕನ್ನಡಿಗರ ಸಾಹಿತ್ಯ, ಸಾಂಸ್ಕೃತಿಕ ಚಟುವಟಿಕೆಗಳ ಪರ್ವಕಾಲ. ಆ ದಶಕದಲ್ಲೇ ಹೊರನಾಡುಕನ್ನಡಿಗರ ಸೃಜನಶೀಲ ಶ್ರೇಷ್ಠ ಕವಿಗಳು ನಾಟಕಕಾರರು, ಕಾದಂಬರಿಗಾರರು ತಮ್ಮ ಅಮೂಲ್ಯವಾದ ಕೊಡುಗೆಯನ್ನು ಕೊಟ್ಟಕಾಲ. ಅವರಲ್ಲಿ ಪ್ರಮುಖರು, ಹಿರಿಯ ಕವಿಗಲಾಗಿದ್ದ ವ್ಯಾಸರಾಯ ಬಲ್ಲಾಳರು, ಯಶವಂತ ಚಿತ್ತಾಲರು, ಅರವಿಂದ ನಾಡಕರ್ಣಿ,ಮತ್ತು ಯುವ ಕವಿ, ಜಯಂತ ಕಾಯ್ಕಿಣಿ ಮೊದಲಾದವರು. ಕನ್ನ ಡ ನಾಟಕ ರಂಗದಲ್ಲಿ ತಮ್ಮ ಅನುಪಮ ಕೊಡುಗೆ ಕೊಟ್ಟ,ವರಲ್ಲಿ, ಟಿ.ಪಿ.ಕೈಲಾಸಂ, ವಿ. ಕೆ. ಮೂರ್ತಿ , ಸದಾನಂದ ಸುವರ್ಣ, ಮುಂತಾದವರು ಪ್ರಮುಖರು. ಮೈಸೂರ್ ಅಸೋಸಿಯೇಷನ್, ಮುಂಬಯಿ ನ ಕಲಾವಿದರು ಇದಕ್ಕಿಂತಾ ಮೊದಲೇ ಆಗಾಗ ಕನ್ನಡ ನಾಟಕಗಳನ್ನು 'ರವೀಂದ್ರ ನಾಟ್ಯಮಂದಿರ' ಮೊದಲಾದ ರಂಗ ಮಂಚಗಳಲ್ಲಿ ಪ್ರದರ್ಶಿಸುತ್ತಿದ್ದರು. ಆಕಾಶವಾಣಿಯ ಕನ್ನಡ ಕಾರ್ಯಕ್ರಮದ ರುವಾರಿಯಾಗಿದ್ದ ಸನದಿಯವರು ಅಂದಿನ ಪ್ರತಿಭಾನ್ವಿತ ಕಲಾವಿದರನ್ನು ಗುರುತಿಸಿ ಆಹ್ವಾನಿಸಿ, ಮುಂಬಯಿನ ಕಲಾರಸಿಕರಿಗೆ ಪರಿಚಯಿಸುತ್ತಿದ್ದರು. ಎಮ್. ಎನ್. ರಾಮಚಂದ್ರ ರಾವ್, ಸುಬ್ಬ ನರಸಿಂಹ ಕೆ.ವಿ. ವಾಮನ್ ಸದಾನಂದ ಸುವರ್ಣ, ದೇವದಾಸ್ ಮೇಗರವಳ್ಳಿ ಬಲ್ಲಾಳ್, ಕಿಶೋರಿ ಬಲ್ಲಾಳ್, ಕುಂದಾ ರಿಗೇ, ಮೊದಲಾದ ಕಲಾವಿದರು. ಸನದಿಯವರೇ ರಚಿಸಿ ನಿರ್ದೇಶಿಸಿ ಪ್ರಸಾರಮಾಡಿದ 'ಗಂಡ ಹೆಂಡತಿ' ರೇಡಿಯೋ ನಾಟಕ, ಬಹಳ ಹೆಸರುವಾಸಿಯಾಯಿತು. ಡಾ ವ್ಯಾಸರಾವ್ ನಿಂಜೂರ್ ರಚಿಸಿದ 'ಪ್ರೇಮಾಂತರಿಕ್ಷ' ವೆಂಬ ಅಂತರಿಕ್ಷದಲ್ಲಿ ನಡೆಯುವ ಪ್ರೇಮ ಸಲ್ಲಾಪ ಕಥಾನಕ ವಿಭಿನ್ನ ವಾಗಿತ್ತು. ಹೀಗೆ ಪ್ರಯೋಗಾತ್ಮಕವಾಗಿ ರೂಪಿಸಿದ 'ಬಾನುಲಿ ನಾಟಕ 'ಬಹಳ ಜನಪ್ರಿಯವಾಯಿತು.
ಆಕಾಶವಾಣಿಯಲ್ಲಿ ಯಕ್ಷಗಾನಕ್ಕೆ ಒಂದು ಸ್ಥಾನ ಕಲ್ಪಿಸಿಕೊಟ್ಟ ಶ್ರೇಯಸ್ಸು ಬಿ.ಎ.ಸನದಿಯವರದು. ವಾರದ ಒಂದು ದಿನ ಅರ್ಧ ಗಂಟೆಯ ಕಾರ್ಯಕ್ರಮವನ್ನು ಬಿತ್ತರಿಸುತ್ತಿದ್ದ ಕಾರ್ಯಕ್ರಮವನ್ನು ಕೇಳಲು ತುಳು ಕನ್ನಡಿಗರು, ಕನ್ನಡಿಗರು, ಅತಿ ಆಸಕ್ತಿಯಿಂದ ಕಾದಿರುತ್ತಿದ್ದರು. ಮುಂಬಯಿನ ಕೋಟೆ ಪ್ರದೇಶದಲ್ಲಿ ತಮ್ಮ ಉದ್ಯಮವನ್ನು ನಡೆಸುತ್ತಿದ್ದ ಎಮ್. ಎಸ್. ಕೋಟ್ಯಾನ್ ಮುಖಂಡತ್ವದಲ್ಲಿ ಹವ್ಯಾಸಿಕಲಾವಿದರು ನಡೆಸಿಕೊಡುತ್ತಿದ್ದರು.
ಬಿ.ಎ.ಸನದಿಯವರು, ಮುಂಬಯಿನ ಮಹೀಮ್ ನಲ್ಲಿದ್ದ ಪ್ರತಿಷ್ಟಿತ 'ಕರ್ನಾಟಕ ಸಂಘ'ಕ್ಕೆ ಸದಸ್ಯರಾದರು. ಸೆಕ್ರೆಟರಿ, ಎ.ಎಸ್.ಕೆ.ರಾವ್, ಮತ್ತು ಸಂಘದ ಅಧ್ಯಕ್ಷ, ವರದರಾಜ ಆದ್ಯರ ಆಗ್ರಹದ ಮೇರೆಗೆ ಕಾರ್ಯಕಾರಿ ಸಮಿತಿಯಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಮುಂದುವರೆದರು. ಸುಮಾರು ೮ ವರ್ಷ ಕಾರ್ಯಾಧ್ಯಕ್ಷರಾಗಿ ತಮ್ಮ ಅನುಪಮ ಸೇವೆಯನ್ನು ಸಲ್ಲಿಸಿದರು. ಆ ಸಮಯದಲ್ಲಿ ಅವರ ಜೊತೆ ಸಹಕರಿಸಿದ ಮಹಾನಿಯರೆಂದರೆ, ವ್ಯಾಸರಾಯ ಬಲ್ಲಾಳ್ ಮತ್ತು ವ್ಯಾಸರಾಯ ನಿಂಜೂರ್, ಮೊದಲಾದವರು. ಸನದಿಯವರು, ಚತುರ ಸಂಘಟಕಕಾರ, ಒಳ್ಳೆಯ ಮಾತುಗಾರ, ಮತ್ತು ಎಲ್ಲರಜೊತೆ ಸ್ನೇಹದಿಂದ ವರ್ತಿಸುವ ಸ್ವಭಾವದವರು. ಸಂಘದಲ್ಲಿ ತಾವಿದ್ದ ಸಮಯದಲ್ಲಿ ಪ್ರಗತಿಪರ ಯೋಜನೆಗಳನ್ನು ಹುಟ್ಟುಹಾಕಿ ಅವನ್ನು ಯಶಸ್ವಿಯಾಗಿ ನಡೆಸಿಕೊಂಡು ಬಂದರು. ಸನ್ ೨೦೧೩ ಮುಂಬಯಿನಿಂದ ನಿರ್ಗಮಿಸಿ ಕುಮುಟಾಕ್ಕೆ ಹೋಗುವ ವರೆಗೂ ಸಂಘದ 'ವಿಶ್ವಸ್ತ ಮಂಡಳಿಯ ಸದಸ್ಯ'ರಾಗಿ ದುಡಿದರು. ಕಾವ್ಯ ರಚನೆ, ಅವರ ಹೃದಯಕ್ಕೆ ಅತಿ ಹತ್ತಿರವಾಗಿತ್ತು. ಅತ್ಯಂತ ಪ್ರಿಯ ವ್ಯವಸಾಯವಾಗಿತ್ತು. ಅನುವಾದ, ವ್ಯಕ್ತಿ ಚಿತ್ರ, ಶಿಶುಸಾಹಿತ್ಯ, ಕಥೆ, ವಿಮರ್ಶೆಗಳಲ್ಲೂ ಅವರು ಕೈಯಾಡಿಸಿದ್ದಾರೆ.
ಮರಾಠಿ ಸಾಹಿತ್ಯದ ಒಂದು ಜನಪ್ರಿಯ ನಾಟಕವನ್ನು ಕನ್ನಡಕ್ಕೆ ಅನುವಾದಿಸಿ ಮುಂಬಯಿಯ ಕಲಾರಸಿಕರಿಗೆ ಪ್ರಸ್ತುತಪಡಿಸುವ ಕಾರ್ಯಕ್ರಮವನ್ನು 'ಮುಂಬಯಿಯ ಕನ್ನಡ ಕಲಾ ಕೆಂದ್ರ' ಹಮ್ಮಿಕೊಂಡಿತ್ತು. 'ಶಿಮುಂಜೆ ಪರಾರಿ'ಯವರು, ನಾಟಕದ ರೂಪಾಂತರದ ಜವಾಬ್ದಾರಿಯನ್ನು ಹೊತ್ತಿದ್ದರು. ನಾಟಕವನ್ನು 'ಸದಾನಂದ ಸುವರ್ಣ', ನಿರ್ದೇಶಿಸಿದ್ದರು. ಆದರೆ ಅದರಲ್ಲಿದ್ದ ೨ ಸುಂದರ ಮರಾಠಿ ಕವಿತೆಗಳನ್ನು ಕವಿಯೊಬ್ಬರು ಅನುವಾದಿಸಿದರೆ ಉತ್ತಮವೆಂಬ ಅಭಿಪ್ರಾಯವವನ್ನು ಕೆಲವು ಕಲಾವಿದರು ವ್ಯಕ್ತಪಡಿಸಿದರು. ಸನದಿಯವರು ಆ ಗುರುತರ ಜವಾಬ್ದಾರಿಯನ್ನು ಸುಂದರವಾಗಿ ನಿಭಾಯಿಸಿದರು. ರಮೇಶ್ ನಾಡಕರ್ಣಿ ಅದಕ್ಕೆ ರಾಗ ಸಂಯೋಜನೆ ಮಾಡಿದ್ದರು. ಕವನಗಳನ್ನು ಕೇಳಿದ ಕುಸುಮಾಗ್ರಜರು ತಮ್ಮ ಪ್ರಶಂಸೆಯನ್ನು ಸಭೆಯ ಮುಂದೆ ಮುಕ್ತ ಕಂಠದಿಂದ ವ್ಯಕ್ತಪಡಿಸಿದ್ದರು. ಮುಂಬಯಿ ರಂಗ ಭೂಮಿಯಲ್ಲಿ ಸನದಿಯವರು ಬರೆದು ಪ್ರಸ್ತುತಪಡಿಸಿದ ನಾಟಕಗಳು 'ಬಂದೆಯ ಬಾ ರಾಯ', ಮತ್ತು 'ನೀಲಾಂಬಿಕಾ' ದಲ್ಲಿ ಶ್ರೀಪತಿ ಬಲ್ಲಾಳ್, ಮತ್ತು ಕಿಶೋರಿ ಬಲ್ಲಾಳ್ ಅಭಿನಯಿಸಿದ್ದರು. ಈ ನಾಟಕ ಪ್ರಯೋಗವನ್ನು ಭಾರತದ ಮಾಜಿ ಉಪರಾಷ್ಟ್ರಪತಿ ಬಿ. ಡಿ. ಜ಼ತ್ತಿಯವರು ನೋಡಿ ಆನಂದಿಸಿದರು. ಅದನ್ನು ಮನಸಾರೆ ಮೆಚ್ಚಿದ ಜತ್ತಿಯವರು, ನಾಟಕವನ್ನು ಮರಾಠಿಗೆ ಅನುವಾದಿಸಲು ಸೂಚಿಸಿದರು.
ಬಿ.ಎ.ಸನದಿ ಯವರು ೧೯೩೩ ಅಗಸ್ಟ್, ೧೮ ರಂದು ಬೆಳಗಾವಿ ಜಿಲ್ಲೆಯ ಶಿಂದೊಳ್ಳಿ ಗ್ರಾಮದಲ್ಲಿ ಜನಿಸಿದರು. ಪ್ರಾಥಮಿಕ ಶಿಕ್ಷಣ ಹುಟ್ಟೂರು ಶಿಂದೊಳ್ಳಿಯಲ್ಲಿ.
ಕ್ಷೇತ್ರ ಪ್ರಚಾರಾಧಿಕಾರಿಯಾದರು.
ಹಾಗು ಮಹಾರಾಷ್ಟ್ರ ರಾಜ್ಯದ ಅಂತರ್ ಮಾಧ್ಯಮ ಸಂಯೋಜನಾ ಸಮಿತಿಯ ಸದಸ್ಯರಾಗಿದ್ದರು.
ಬಿ. ಎ. ಸನದಿಯವರ ತಂದೆಯವರ ಹೆಸರು 'ಅಹಮದ್ ಸಾಹೇಬ', ತಾಯಿ 'ಆಯಿಶಾಬಿ'. ಮಗ 'ನಿಸಾರ', ಮಗಳು 'ಆಯೆಶಾ', ತಮ್ಮ ತಮ್ಮ ಕುಟುಂಬಗಳೊಡನೆ ಅಮೆರಿಕಾ ಹಾಗೂ ಕೆನಡಾದಲ್ಲಿದ್ದಾರೆ. ಶಿಕ್ಷಕರಾಗಿದ್ದ ಸನದಿಯವರು ಇದುವರೆಗೆ ಒಟ್ಟು ಹದಿನೆಂಟು ಸಂಕಲನಗಳನ್ನು ಪ್ರಕಟಿಸಿದ್ದಾರೆ. ಅವರ ಕಾವ್ಯಯಾನ ಕನ್ನಡ ಕಾವ್ಯಲೋಕದಲ್ಲಿ ಸದ್ದುಗದ್ದಲವಿಲ್ಲದೆ ನಡೆದ ಕಾಲುದಾರಿಯ ಪಯಣದಂತಿದೆ. ಇಲ್ಲಿ ಹಲವು ತಂಗುದಾಣಗಳಿವೆ, ಅರವಂಟಿಗೆಗಳಿವೆ. ಅಲ್ಲಲ್ಲಿ ಜೊತೆಗೆ ನಡೆದ ಜೀವ ಜಂಗಮ ಸಹವಾಸಿಗಳಿದ್ದಾರೆ. ಕಾಲುದಾರಿಗೆ ಅಡ್ಡಬರುವ ರಾಜಮಾರ್ಗಗಳಿವೆ. ಅಲ್ಲಿನ ಗದ್ದಲದ ನಡುವೆಯೂ ಈ ಕವಿ ತನ್ನ ದನಿಯ ಅನನ್ಯತೆಯನ್ನು ಕಾಯ್ದು ಕೊಂಡಿದ್ದಾರೆ. ಎಲ್ಲ ಸವಾಲುಗಳನ್ನು ಸ್ವಾನುಭವದ ಅಸ್ಮಿತೆಯಲ್ಲಿ ತನ್ನದಾಗಿಸಿಕೊಂಡು ನುಡಿಗೊಟ್ಟಿದ್ದಾರೆ. ಸನದಿಯವರು ಕನ್ನಡದ ಮೆಲುದನಿಯ ಕವಿ. ಪ್ರಚಾರ ಪ್ರಿಯರಲ್ಲ. ತಮ್ಮದೇ ಮಾತನ್ನು ಎಲ್ಲರು ಒಪ್ಪಬೇಕೆಂಬುದು ಅವರ ಮತವಲ್ಲ. ಬರೆಯಬೇಕಾದ ಒಳಗಿನೊತ್ತಡದಲ್ಲಿ ಬರೆಯಲೇಬೇಕಾದ್ದನ್ನು ಬರೆಯುತ್ತಾ ಬಂದವರು. ತಾವು ನಂಬಿದ ಮಾನವತಾವಾದದಲ್ಲಿ ಇಂದಿಗೂ ನಂಬಿಕೆ ಕಳೆದುಕೊಳ್ಳದೆ ಬದ್ಧತೆಯಲ್ಲಿ ಬದುಕು ಕಟ್ಟಿಕೊಂದು ದಾರಿಯುದ್ದಕ್ಕೂ ನಡೆಯುತ್ತಾ ಜೀವನ ಸಾಗಿಸುತ್ತಿರುವವರು.
ಸನದಿಯವರು ೩೧, ಮಾರ್ಚ್, ೨೦೧೯ ರ ರವಿವಾರದ ಬೆಳಿಗ್ಯೆ ಕುಮಟಾದ ತಮ್ಮಸ್ವಗೃಹದಲ್ಲಿ ನಿಧನರಾದರು. ಬಹಳ ಸಮಯದಿಂದ ಅವರು ಅನಾರೋಗ್ಯದಿಂದ ಬಳಲುತ್ತಿದ್ದರು.
This article uses material from the Wikipedia ಕನ್ನಡ article ಬಿ.ಎ.ಸನದಿ, which is released under the Creative Commons Attribution-ShareAlike 3.0 license ("CC BY-SA 3.0"); additional terms may apply (view authors). ವಿಶೇಷವಾಗಿ ಟಿಪ್ಪಣಿ ಮಾಡದಿದ್ದ ಹೊರತು ಪಠ್ಯ "CC BY-SA 4.0" ರಡಿ ಲಭ್ಯವಿದೆ. Images, videos and audio are available under their respective licenses.
®Wikipedia is a registered trademark of the Wiki Foundation, Inc. Wiki ಕನ್ನಡ (DUHOCTRUNGQUOC.VN) is an independent company and has no affiliation with Wiki Foundation.