ಕವಿ, ವಿಮರ್ಶಕ, ಚಿಂತಕ, ವಾಗ್ಮಿ ಹಾಗು ಬಹುಶ್ರುತ ವಿದ್ವಾಂಸ ಪ್ರೊ.
ಬಿ.ಎಚ್..ಶ್ರೀಧರರು ದಕ್ಷಿಣ ಕನ್ನಡ ಜಿಲ್ಲೆಯ ಬಿಜೂರು ಗ್ರಾಮದ ಬವಲಾಡಿಯಲ್ಲಿ ೨೪ ಏಪ್ರಿಲ್ ೧೯೧೮ ರಂದು ಜನಿಸಿದರು.
ಬಿ. ಎಚ್. ಶ್ರೀಧರ | |
---|---|
ಜನನ | ೨೪ ಏಪ್ರಿಲ್ ೧೯೧೮ ಬವಲಾಡಿ,ಬಿಜೂರು,ದಕ್ಷಿಣ ಕನ್ನಡ,ಕರ್ನಾಟಕ,ಭಾರತ |
ಮರಣ | ೨೪ ಏಪ್ರಿಲ್ ೧೯೯೦ ಸಿರ್ಸಿ,ಉತ್ತರ ಕನ್ನಡ,ಕರ್ನಾಟಕ,ಭಾರತ |
ವೃತ್ತಿ | ಪತ್ರಕರ್ತ, ಪ್ರಾಧ್ಯಾಪಕ, ಲೇಖಕ |
ರಾಷ್ಟ್ರೀಯತೆ | ಭಾರತೀಯ |
ಪ್ರಕಾರ/ಶೈಲಿ | ವಿಮರ್ಶೆ,ಕವನ,ಇತಿಹಾಸ,ಸಂಸ್ಕೃತಿ |
ಪ್ರಭಾವಗಳು
|
ಕವಿ, ವಿಮರ್ಶಕ, ಚಿಂತಕ, ವಾಗ್ಮಿ ಹಾಗು ಬಹುಶ್ರುತ ವಿದ್ವಾಂಸ ಪ್ರೊ.
ತಂದೆ ಸೀತಾರಾಮ ಹೆಬ್ಬಾರ, ತಾಯಿ ನಾಗಮ್ಮ, ದೊಡ್ಡಪ್ಪಂದಿರು- ವೆಂಕಟರಮಣ ಹೆಬ್ಬಾರ, ಹಿರಿಯಣ್ಣ ಹೆಬ್ಬಾರ. ಪತ್ನಿ ರಮಾದೇವಿ (ಮದುವೆ- ಮೇ ೧೯೪೬). ಮಕ್ಕಳು- ಸುಮಾ, ಪ್ರತಿಭಾ, ವಿಜಯಾ, ರಾಜಶೇಖರ, ರಾಜೇಶ್ವರಿ. ಸಹೋದರಿಯರು – ರುಕ್ಮಿಣಿ, ಸುಶೀಲ, ಮತ್ತು ರಮಾ.
ಕವಿ, ವಿಮರ್ಶಕ, ಚಿಂತಕ, ವಾಗ್ಮಿ ಹಾಗು ಬಹುಶ್ರುತ ವಿದ್ವಾಂಸ ಪ್ರೊ.
ಬಿಜೂರಿನ ಪ್ರಾಥಮಿಕ ಶಾಲೆಯಲ್ಲಿಯೂ, ಸೊರಬ ಹಾಗೂ ಸಾಗರದಲ್ಲಿ ಮಿಡಲ್ ಸ್ಕೂಲ್ ಶಿಕ್ಷಣ ಮುಗಿಸಿದರು. ಮುನಸಿಪಲ್ ಹೈಸ್ಕೂಲ್ ಸಾಗರದಲ್ಲಿ ಕಲಿತು ಎಸ್.ಎಸ್.ಎಲ್.ಸಿ ಪರೀಕ್ಷೆಯನ್ನು ಶಿವಮೊಗ್ಗದಲ್ಲಿ ಬರೆದರು.
ಇಂಟರ್ ಮೀಡಿಯೇಟ್ ಶಿಕ್ಷಣವನ್ನು ಮೈಸೂರಿನ ಯುವರಾಜ ಕಾಲೇಜಿನಲ್ಲಿ ಕಲಿತು ಬಿ.ಎ. (ಆನರ್ಸ್) ಮೈಸೂರಿನ ಮಹಾರಾಜ ಕಾಲೇಜಿನಲ್ಲಿ (೧೯೪೧) ರಲ್ಲಿ ರಾಜ್ಯಕ್ಕೆ ಮೊದಲಿಗನಾಗಿ ಉತ್ತೀರ್ಣರಾದರು. ಎಂ.ಎ. (ಆನರ್ಸ್) ಕೂಡ ಮಹಾರಾಜ ಕಾಲೇಜಿನಲ್ಲೆ ಮುಗಿಸಿದರು. ಪೂರ್ಣ ಕೃಷ್ಣರಾವ್ ಬಂಗಾರದ ಪದಕ, ನವೀನಂ ರಾಮಾನುಜಾಚಾರ್ಯ ಬಂಗಾರದ ಪದಕ ಗಳಿಸಿದರು. ಅವರ 'ಕವಿಯೂ ವಿಜ್ಞಾನಿಯೂ' ಪ್ರಬಂದಕ್ಕೆ ಹೊನ್ನಸೆಟ್ಟಿ ಬಹುಮಾನ ಲಭಿಸಿತು.
ಇವರು ೫೫ನೇಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸಾಹಿತ್ಯ ಸಮ್ಮೇಳನದ ಪತ್ರಿಕಾ ಪ್ರದರ್ಶನದ ಉದ್ಘಾಟನೆ ಹಾಗೂ ಉ.ಕ. ಜಿಲ್ಲಾ ಮೂರನೇಯ ಜಿಲ್ಲಾ ಸಾಹಿತ್ಯ ಸಮ್ಮೇಳನದ(೧೯೭೪) ಅಧ್ಯಕ್ಷರಾಗಿದ್ದರು.
ಕವಿ, ವಿಮರ್ಶಕ, ಚಿಂತಕ, ವಾಗ್ಮಿ ಹಾಗು ಬಹುಶ್ರುತ ವಿದ್ವಾಂಸ ಪ್ರೊ.
೧.ಪುಣೆಯ ಫೀಲ್ಡ್ ಕಂಟ್ರೋಲರ್ ಆಫ್ ಮಿಲಿಟರಿ ಎಕೌಂಟ್ಸ್ ಆಫೀಸಿನಲ್ಲಿ ಒಂದು ವರ್ಷ 'ಗುಮಾಸ್ತಗಿರಿ' (೧೯೪೨-೪೨)
೨.ಭಟ್ಕಳದ ಇಸ್ಲಾಮಿಯ ಆಂಗ್ಲೋ ಉರ್ದು ಹೈಸ್ಕೂಲಿನಲ್ಲಿ ಸಹ ಶಿಕ್ಷಕರಾಗಿ ೪ ವರ್ಷ ಹಾಗೂ ಹೆಡ್ ಮಾಸ್ಟರ್ ಆಗಿ ಒಂದು ವರ್ಷ
೩.'ಕರ್ಮವೀರ' ವಾರಪತ್ರಿಕೆ (ಹುಬ್ಬಳ್ಳಿ)ಯ ಉಪಸಂಪಾದಕರಾಗಿ (೧೯೪೭-೫೧)
೪.ಕುಮಟಾದ ಕೆನರಾ ಕಾಲೇಜಿನಲ್ಲಿ ಸಂಸ್ಕೃತ ಪ್ರಾಧ್ಯಾಪಕರಾಗಿ(೧೯೫೧-೬೨)
೫.ಸಿರ್ಸಿಯ ಎಂ.ಎಂ. ಕಲಾ-ವಿಜ್ಞಾನ ಮಹಾವಿದ್ಯಾಲಯದಲ್ಲಿ ಉಪ ಪ್ರಾಚಾರ್ಯರಾಗಿ (೧೯೬೨-೬೯) ಸಂಸ್ಕೃತ ಮತ್ತು ಕನ್ನಡ ಪ್ರಾಧ್ಯಾಪಕರಾಗಿ.
೬.ಸಿದ್ದಾಪುರದ ಎಂ. ಜಿ. ಸಿ. ಕಾಲೇಜಿನಲ್ಲಿ ಪ್ರಾಚಾರ್ಯರಾಗಿ (೧೯೬೯-೭೬)
೭.ಸಿರ್ಸಿಯ ಮಾಡರ್ನ್ ಎಜ್ಯುಕೇಷನ್ ಸೊಸೈಟಿಯ ಆನರರಿ ಮೆನೇಜರ್ ರಾಗಿ ೧೫-೬-೧೯೮೨ ರವರೆಗೆ.
ಕವಿ, ವಿಮರ್ಶಕ, ಚಿಂತಕ, ವಾಗ್ಮಿ ಹಾಗು ಬಹುಶ್ರುತ ವಿದ್ವಾಂಸ ಪ್ರೊ.
೧. ಮೇಘನಾದ ( ೧೯೪೫)
೨. ಕಿನ್ನರಗೀತ (೧೯೪೭)
೩. ಅಮೃತಬಿಂದು ( ೧೯೪೯)
೪. ಮಂಜುಗೀತ ( ೧೯೫೮)
೫. ರಸಯಜ್ಞ (೧೯೬೪)
೬. ಮುತ್ತು ರತ್ನ(೧೯೬೮ & ೧೯೭೮)
೭. ನೌಕಾಗೀತ (೧೯೬೮)
೮. ಕದಂಬ ವೈಭವ (೧೯೬೭)
೯. ಕಂಟಕಾರಿ ಮಹಾಕಾವ್ಯ (೧೯೮೧)
೧೦.ಜಾತವೇದ ( ೧೯೮೪)
೧೧.ಅಮೃತಬಿಂದು – ಆಯ್ದ ಕವನಗಳು -ಕ.ಸಾ.ಪ. - ಸಂ. ಡಾ. ಎಂ.ಜಿ. ಹೆಗಡೆ (೨೦೦೭)
೧•ಮಯೂರ ಶರ್ಮ (೧೯೮೮)
೨•ಸೋಮಾರಿ ಕ್ಲಬ್ (೧೯೮೭) (ಸಮಗ್ರ ಸಾಹಿತ್ಯ ಸಂಪುಟದಲ್ಲಿ ಪ್ರಕಟಿತ)
೧. ‘ಜೀವಯಾನ’ (೧೯೯೪)
1. ನವರತ್ನ
2.ಬಾನುಮತಿ ಕಲ್ಯಾಣ – ಹಿರಿಯಣ್ಣ ಹೆಬ್ಬಾರ (1958)
3.ರಸೋವೈಸಃ - ಹಿರಿಯಣ್ಣ ಹೆಬ್ಬಾರ (1987)
•ಶ್ರೀಧರ ಸ್ಮರಣೆ – ಸಂ. ಡಾ.ಎಂ.ಜಿ. ಹೆಗಡೆ (1999)
ಕವಿ, ವಿಮರ್ಶಕ, ಚಿಂತಕ, ವಾಗ್ಮಿ ಹಾಗು ಬಹುಶ್ರುತ ವಿದ್ವಾಂಸ ಪ್ರೊ.
1.ಕಾವ್ಯಸೂತ್ರ – ಕರ್ನಾಟಕ ರಾಜ್ಯ ಸಾಹಿತ್ಯ ಅಕೆಡೆಮಿ ಬಹುಮಾನ, ತೀ.ನಂ.ಶ್ರೀ. ಸ್ಮಾರಕ ಬಹುಮಾನ, ಮೈಸೂರು ವಿ.ವಿ. ಸ್ವರ್ಣಮಹೋತ್ಸವ ಬಹುಮಾನ.
2.ಜ್ಞಾನಸೂತ್ರ - ಕರ್ನಾಟಕ ಸರ್ಕಾರದ ಅನುದಾನ. ಲೋಕಶಿಕ್ಷಣ ಟ್ರಸ್ಟ್ ಬಹುಮಾನ.
3. ರಾಷ್ಟ್ರಸೂತ್ರ - ಕರ್ನಾಟಕ ಸರ್ಕಾರದ ಅನುದಾನ, ಮೂರುಸಾವಿರ ಮಠ, ಹುಬ್ಬಳ್ಳಿ ಪ್ರಶಸ್ತಿ.
4.ಮಾನಸ ದರ್ಪಣ – ಮದ್ರಾಸ್ ಕ್ರಿಶ್ಚಿಯನ್ ಟೆಕ್ಸ್ಟ್ ಬುಕ್ ಕಮಿಟಿ ಬಹುಮಾನ.
5.ನೌಕಾಗೀತ – ಭಾರತ ಸರಕಾರದ ರಕ್ಷಣಾಖಾತೆ ಪ್ರಶಸ್ತಿ.
6.ರಸಯಜ್ಞ – ದೇವರಾಜ ಬಹಾದ್ದೂರ ಬಹುಮಾನ.
7. ಮನುಸ್ಮೃತಿ – ಕ.ವಿ.ವಿ. ಪದವಿ ವರ್ಗದ ಪಠ್ಯ ಪುಸ್ತಕ.
ಕವಿ, ವಿಮರ್ಶಕ, ಚಿಂತಕ, ವಾಗ್ಮಿ ಹಾಗು ಬಹುಶ್ರುತ ವಿದ್ವಾಂಸ ಪ್ರೊ.
ಬಿ. ಎಚ್. ಶ್ರೀಧರ ಅವರ ಸಮಗ್ರ ಸಾಹಿತ್ಯವನ್ನು ಡಿಜಿಟಲೀಕರಿಸಿ ಇಂಟರ್ನೆಟ್ ಆರ್ಕೈವ್ ನಲ್ಲಿ ಲಭ್ಯವಾಗಿಸಲಾಗಿದೆ. ಈ ಡಿಜಿಟಲ್ ಆವೃತ್ತಿಗಳು ಕ್ರಿಯೇಟೀವ್ ಕಾಮನ್ಸ್ ಪರವಾನಗಿ ಅಡಿಯಲ್ಲಿ ವಾಣಿಜ್ಯೇತರ ಉದ್ದೇಶಗಳಿಗೆ ಲಭ್ಯವಿವೆ (CC-by-NC-SA).
ಕವಿ, ವಿಮರ್ಶಕ, ಚಿಂತಕ, ವಾಗ್ಮಿ ಹಾಗು ಬಹುಶ್ರುತ ವಿದ್ವಾಂಸ ಪ್ರೊ.
ಶ್ರೀಧರರು 24-4-1990 ರಂದು ನಿಧನರಾದ ನಂತರ ಅವರ ನೆನಪನ್ನು ಚಿರಂತನವಾಗಿರಿಸಲು ಅವರ ಕುಟುಂಬ ಹಾಗೂ ಮಿತ್ರರು 1990 ರಲ್ಲಿ ಬಿ.ಎಚ್. ಶ್ರೀಧರ ಸಾಹಿತ್ಯ ಪ್ರಶಸ್ತಿ ಸಮಿತಿಯನ್ನು ರಚಿಸಿ 1991 ರಿಂದ (30 ವರ್ಷಗಳು ಕಳೆದಿದೆ) ಇಲ್ಲಿಯವರೆಗೆ ಕನ್ನಡದ ಶ್ರೇಷ್ಠ ಸಾಹಿತಿಗಳ ಅತ್ಯುತ್ತಮ ಕೃತಿಗೆ ಹಾಗೂ ಜೀವಿತ ಸಾಧನೆಗೆ ಪ್ರಶಸ್ತಿ ನೀಡುತ್ತಾ ಪುರಸ್ಕಾರ ಸಮಾಂಭವನ್ನು ಸಿರ್ಸಿಯಲ್ಲಿ ಬಿ.ಎಚ್. ಶ್ರೀಧರರ ಜನ್ಮದಿನದಂದು ಸಡೆಸುತ್ತಿದ್ದಾರೆ. ಸಮಿತಿಯಲ್ಲಿ ಡಾ. ಟಿ. ನಾರಾಯಣ ಭಟ್ (ಅಧ್ಯಕ್ಷರು), ರಾಜಶೇಖರ ಹೆಬ್ಬಾರ (ಕಾರ್ಯಾಧ್ಯಕ್ಷರು), ಮತ್ತು ಎಚ್. ಆರ್. ಅಮರನಾಥ, ಕಿರಣ ಭಟ್, ವಿಷ್ಣು ಹೆಗಡೆ, ಜಗದೀಶ ನಾ, ಸಿ.ಎನ್. ಹೆಗಡೆ, ಸಿ. ಆರ್. ಶಾನಭಾಗ, ಶ್ರೀಪಾದ ಭಟ್, ವಿಠಲ ಭಂಡಾರಿ, ಯಶವಂತ ನಾಯಕ, ಯು.ಎ. ಐತಾಳ ಸದಸ್ಯರಾಗಿ ಕಾರ್ಯ ನಿರ್ವಹಿಸಿದ್ದಾರೆ. ಡಾ. ಎಂ. ಜಿ. ಹೆಗಡೆ, ಡಾ. ಶ್ರೀಪಾದ ಭಟ್, ರಾಜಶೇಖರ ಹೆಬ್ಬಾರ ನಿರ್ಣಾಯಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಕವಿ, ವಿಮರ್ಶಕ, ಚಿಂತಕ, ವಾಗ್ಮಿ ಹಾಗು ಬಹುಶ್ರುತ ವಿದ್ವಾಂಸ ಪ್ರೊ.
ಕವಿ, ವಿಮರ್ಶಕ, ಚಿಂತಕ, ವಾಗ್ಮಿ ಹಾಗು ಬಹುಶ್ರುತ ವಿದ್ವಾಂಸ ಪ್ರೊ.
This article uses material from the Wikipedia ಕನ್ನಡ article ಬಿ.ಎಚ್.ಶ್ರೀಧರ, which is released under the Creative Commons Attribution-ShareAlike 3.0 license ("CC BY-SA 3.0"); additional terms may apply (view authors). ವಿಶೇಷವಾಗಿ ಟಿಪ್ಪಣಿ ಮಾಡದಿದ್ದ ಹೊರತು ಪಠ್ಯ "CC BY-SA 4.0" ರಡಿ ಲಭ್ಯವಿದೆ. Images, videos and audio are available under their respective licenses.
®Wikipedia is a registered trademark of the Wiki Foundation, Inc. Wiki ಕನ್ನಡ (DUHOCTRUNGQUOC.VN) is an independent company and has no affiliation with Wiki Foundation.