ತಾಳೀಕೋಟೆಯ ಯುದ್ಧ

ತಾಳೀಕೋಟೆಯ ಯುದ್ಧ ಜನವರಿ ೨೩, ೧೫೬೫ರಲ್ಲಿ ವಿಜಯನಗರ ಸಾಮ್ರಾಜ್ಯ ಮತ್ತು ದಕ್ಷಿಣದ ಸುಲ್ತಾನರುಗಳ ನಡುವೆ ನಡೆದ ಯುದ್ಧ.

ತಾಳೀಕೋಟೆ ಇಂದಿನ ಬಿಜಾಪುರದಿಂದ ೮೦ ಕಿ.ಮೀ ದೂರದಲ್ಲಿರುವ ಕರ್ನಾಟಕದ ಒಂದು ಐತಿಹಾಸಿಕ ಸ್ಥಳ. ಈ ಯುದ್ಧದಲ್ಲಿ ವಿಜಯನಗರ ಸಾಮ್ರಾಜ್ಯದ ಪತನವಾಗುವುದರೊಂದಿಗೆ, ದಕ್ಷಿಣ ಭಾರತದ ಕೊನೆಯ ಹಿಂದೂ ಸಾಮ್ರಾಜ್ಯವು ಕೊನೆಗೊಂಡಿತು.

ತಾಳೀಕೋಟ ಯುದ್ಧ ಅಥವಾ ರಕ್ಕಸ ತಂಗಡಗಿ ಯುದ್ಧ ಅಥವಾ ಬನಟ್ಟಿ ಕದನ
Part of ಭಾರತದ ಇಸ್ಲಾಮಿ ಆಕ್ರಮಣ
ಕಾಲ: ಜನವರಿ ೨೩, 1565
ಸ್ಥಳ: ತಾಳೀಕೋಟೆ, ಇಂದಿನ ಬಿಜಾಪುರ ಜಿಲ್ಲೆ
ಪರಿಣಾಮ: ದಕ್ಷಿಣದ ಸುಲ್ತಾನರ ಭಾರಿ ವಿಜಯ
ಕದನಕಾರರು
ವಿಜಯನಗರ ಸಾಮ್ರಾಜ್ಯ ದಕ್ಷಿಣದ ಸುಲ್ತಾನರು
ಸೇನಾಧಿಪತಿಗಳು
ರಾಮರಾಯ ಸುಲ್ತಾನರ ಸೇನಾಪತಿಗಳು
ಬಲ
೧೪೦,೦೦೦ ಪದಾತಿಗಳುಗಳು, ೧೦,೦೦೦ ಕುದುರೆಗಳು ಮತ್ತು ಸುಮಾರು ೧೦೦ ಕಾಳಗದ ಆನೆಗಳು ೮೦,೦೦೦ ಪದಾತಿಗಳು, ೩೦,೦೦೦ ಕುದುರೆಗಳು ಮತ್ತು ಹತ್ತಾರು ತೋಪುಗಳು
ಮೃತರು ಮತ್ತು ಗಾಯಾಳುಗಳು
ತಿಳಿದಿಲ್ಲ. ಅನೇಕ ಎಂದು ಊಹೆ. ತಿಳಿದಿಲ್ಲ. ಹಲವಾರು ಎಂದು ಊಹೆ.

ಹಿನ್ನೆಲೆ

ಅಚ್ಯುತರಾಯನ ತರುವಾಯ ವಿಜಯನಗರದ ಸಿಂಹಾಸನವೇರಿದ ರಾಮರಾಯನು, ಅನೇಕ ಇತಿಹಾಸದ ಪ್ರಕಾರ , ನೆರೆಯ ಮುಸ್ಲಿಮ್ ಸುಲ್ತಾನರುಗಳ ವ್ಯವಹಾರಗಳಲ್ಲಿ ಕೈಹಾಕುತ್ತಿದ್ದನು. ಮೊದಮೊದಲು ಇದರಲ್ಲಿ ಅವನಿಗೆ ಗೆಲುವು ದಕ್ಕಿದರೂ, ಒಟ್ಟಿನಲ್ಲಿ ಇದು ಸುಲ್ತಾನರುಗಳು ಒಟ್ಟಾಗಿ ಅವನ ಮೇಲೆ ಸೇಡು ತೀರಿಸಿಕೊಳ್ಳುವುದರಲ್ಲಿ ಪರ್ಯವಸಾನವಾಯಿತು. ರಾಮರಾಯನು ಸುಲ್ತಾನರುಗಳ ವ್ಯವಹಾರಗಳಲ್ಲಿ ಹಸ್ತಕ್ಷೇಪ ಮಾಡುತ್ತಿದ್ದ ಎಂಬುದನ್ನು ಅಲ್ಲಗೆಳೆಯುವ ಮತ್ತೆ ಕೆಲವು ವಿದ್ವಾಂಸರು , ಸುಲ್ತಾನರುಗಳ ಒಳಜಗಳದ ಲಾಭ ವಿಜಯನಗರಕ್ಕೆ ದೊರೆಯುವಂತೆ ಮಾಡಿದ ಎಂದು ಅಭಿಪ್ರಾಯ ಪಡುತ್ತಾರೆ. ಮುಂದೆ ಪರಸ್ಪರ ವೈವಾಹಿಕ ಸಂಬಂಧಗಳೊಂದಿಗೆ ಈ ಸುಲ್ತಾನರುಗಳ ಆಂತರಿಕ ಕಲಹ ಕಡಿಮೆಯಾದದ್ದಷ್ಟೇ ಅಲ್ಲ , ತಮ್ಮೆಲ್ಲರ ವೈರಿ, ಏಕಮೇವ ಹಿಂದೂ ಸಾಮ್ರಾಜ್ಯವಾಗಿದ್ದ ವಿಜಯನಗರದ ವಿರುದ್ಧವಾಗಿ ಅವರೆಲ್ಲಾ ಒಟ್ಟುಗೂಡಿದರು.

ಯುದ್ಧ

ಅಹಮದ್ ನಗರ , ( ಮುಂದೆ ಹೈದರಾಬಾದ್ ನಿಜಾಮನ ರಾಜ್ಯದ ಭಾಗ, ಬೀದರ್, ಬಿಜಾಪುರ ಮತ್ತು ಗೋಲ್ಕೊಂಡದ ಸುಲ್ತಾನರುಗಳ ಒಕ್ಕೂಟದ ಸೇನೆ ಜನವರಿ ೨೬, ೧೫೬೫ರಂದು ಕೃಷ್ಣಾ ನದಿಯ ದಂಡೆಯ ಮೇಲೆ, ರಕ್ಕಸ ಮತ್ತು ತಂಗಡಿ ಎಂಬ ಹಳ್ಳಿಗಳ ನಡುವಿನಲ್ಲಿದ್ದ, ತಾಳೀಕೋಟೆ (ಇದು ಇಂದಿನ ಕರ್ನಾಟಕ ರಾಜ್ಯದಲ್ಲಿದೆ) ಎಂಬಲ್ಲಿ ವಿಜಯನಗರದ ಸೇನೆಯೊಂದಿಗೆ ಯುದ್ಧ ಹೂಡಿತು. ಇಂತಹ ಒಕ್ಕೂಟದ ಸಮರ ವ್ಯೂಹ ಮಧ್ಯಕಾಲದ ಭಾರತದ ಇತಿಹಾಸದಲ್ಲಿ ಅಪರೂಪ. ವಿಜಯನಗರ ಸಾಮ್ರಾಜ್ಯದೊಂದಿಗೆ ವಿರಸವಿದ್ದ ಕೆಲ ಕಿರು ಹಿಂದೂ ರಾಜ್ಯಗಳೂ ಈ ಯುದ್ಧದಲ್ಲಿ ಸುಲ್ತಾನರ ಒಕ್ಕೂಟದ ಬೆಂಬಲಕ್ಕೆ ಬಂದವು. ಸುಲ್ತಾನರುಗಳ ಸೇನೆಯಲ್ಲಿ ೮೦ ಸಾವಿರ ಪದಾತಿಗಳೂ, ೩೦ ಸಾವಿರ ಅಶ್ವಸೈನ್ಯವೂ ಇದ್ದರೆ, ವಿಜಯನಗರದ ಸೇನೆಯಲ್ಲಿ ೧೪೦ ಸಾವಿರ ಕಾಲಾಳುಗಳೂ, ೧೦ ಸಾವಿರ ಅಶ್ವ ಸೈನಿಕರೂ ಇದ್ದರು. ಎರಡೂ ಸೈನ್ಯಗಳಲ್ಲಿ ಬಹುಸಂಖ್ಯೆಯಲ್ಲಿ ಆನೆಗಳೂ ಇದ್ದವು. ಈ ಯುದ್ಧ ಘೋರವಾಗಿದ್ದರೂ ಅಲ್ಪಾವಧಿಯಲ್ಲಿಯೇ ಮುಗಿದುಹೋಯಿತು. ಕಲ್ಲು ಬಂಡೆಗಳ ಈ ಯುದ್ಧ ಪ್ರದೇಶದಲ್ಲಿ, ತೋಪುಗಳಿಂದ ಹಲ್ಲೆ ನಡೆಸಿ, ವಿಜಯನಗರದ ಸೈನ್ಯದ ಮಂಚೂಣಿಯನ್ನು ಒಕ್ಕೂಟದ ಸೇನೆ ಹಣ್ಣು ಮಾಡಿತು. ಈ ಫಿರಂಗಿಗಳ ಈ ತೀವ್ರ ದಾಳಿಯಿಂದ ತತ್ತರಿಸಿದ ವಿಜಯನಗರ ಸೇನೆಯ ಮೇಲೆ ಒಕ್ಕೂಟದ ಸೇನೆ ನುಗ್ಗಿ ಅದನ್ನು ಧೂಳೀಪಟ ಮಾಡಿತು. ರಾಮರಾಯನ ಶಿರಛ್ಛೇದ ಮಾಡಿ ಸಾರ್ವಜನಿಕರಿಗೆ ಪ್ರದರ್ಶನ ಮಾಡಲಾಯಿತು. ವಿಜಯನಗರ ಸಾಮ್ರಾಜ್ಯವನ್ನು ಲೂಟಿಮಾಡಿ ಸಂಪೂರ್ಣವಾಗಿ ಧ್ವಂಸಮಾಡಲಾಯಿತು.

ಯುದ್ಧಾನಂತರ

ಈ ಯುದ್ಧ ದಕ್ಷಿಣ ಭಾರತದ ಮಹಾನ್ ಸಾಮ್ರಾಜ್ಯದ ಅವನತಿಗೆ ಕಾರಣವಾದದ್ದಷ್ಟೇ ಅಲ್ಲ, ಸಂಪೂರ್ಣ ಭಾರತದಲ್ಲಿಯೇ ಹಿಂದೂ ರಾಜ್ಯಗಳ ಕೊನೆಗಾಲಕ್ಕೆ ನಾಂದಿ ಹಾಡಿತು. ವಿಜಯೋನ್ಮತ್ತ ಸುಲ್ತಾನರ ಸೇನೆ, ಇತರ ಕಳ್ಳಕಾಕರು ಮತ್ತು ಕಾಡುನಿವಾಸಿಗಳ ಗುಂಪುಗಳೊಂದಿಗೆ ವಿಜಯನಗರಕ್ಕೆ ಲಗ್ಗೆ ಇಟ್ಟಿತು. ಲೂಟಿ, ದರೋಡೆ, ಕಗ್ಗೊಲೆ, ಸುಲಿಗೆಗಳು ಅವ್ಯಾಹತವಾಗಿ ನಡೆದವು. ಕೊಡಲಿ, ಗಡಾರಿ, ಕತ್ತಿ ಇತ್ಯಾದಿಗಳೊಂದಿಗೆ ನಗರವನ್ನು ಹಾಳುಗೆಡವಿ, ಬೆಂಕಿ ಹಚ್ಚಲಾಯಿತು. ಈ ಧಾಳಿಯಿಂದ ವಿಜಯನಗರ ಮುಂದೆಂದೂ ಚೇತರಿಸಿಕೊಳ್ಳಲಿಲ್ಲ. ಪೆನುಗೊಂಡೆಯನ್ನು ರಾಜಧಾನಿಯನ್ನಾಗಿ ಮಾಡಿಕೊಂಡು ವಿಜಯನಗರ ಮತ್ತೆ ಮೇಲೇಳುವ ಪ್ರಯತ್ನ ಮಾಡಿದರೂ, ಅದು ಯಶಸ್ವಿಯಾಗಲಿಲ್ಲ. ಜನಬೆಂಬಲ ಅಳಿಯ ರಾಮರಾಯನ ತಮ್ಮನ ಪರವಾಗಿದ್ದ ಕಾರಣ , ಪಟ್ಟವೇರುವ ತಿರುಮಲನ ಪ್ರಯತ್ನ ಫಲಿಸಲಿಲ್ಲ. ಅದಕ್ಕಾಗಿ ಆತ ಮತ್ತೂ ಆರು ವರ್ಷ ಕಾಯಬೇಕಾಯಿತು. ಈ ಆರು ವರ್ಷಗಳಲ್ಲಿ ಅರಾಜಕತೆ ತಾಂಡವವಾಡಿತು. ಅಳಿಯ ರಾಮರಾಯನಿಂದ ಮಹತ್ವದ ಸ್ಥಾನಗಳಿಗೆ ನೇಮಿಸಲ್ಪಟ್ಟಿದ್ದ ಅವನ ಹತ್ತಿರದ ಸಂಬಂಧಿಕರಲ್ಲಿ ಈಗ ಒಳಜಗಳ ಪ್ರಾರಂಭವಾಯಿತು. ಅಷ್ಟೇ ಅಲ್ಲ ಇದರಿಂದ ಅಸಂತುಷ್ಟರಾಗಿದ್ದ ಸಾಮ್ರಾಜ್ಯ ನಿಷ್ಠ ಅಧಿಕಾರಿಗಳು ಈಗ ದಂಗೆ ಎದ್ದರು. ಹಿಂದೆ ಯಶಸ್ವಿಯಾಗಿ ನಡೆದುಕೊಂಡು ಬಂದಿದ್ದ ಪಾಳೆಯಗಾರಿ ಪದ್ಧತಿಯೂ ಸಾಮ್ರಾಜ್ಯವು ಅನೇಕ ಹೋಳಾಗುವುದಕ್ಕೆ ಕಾರಣವಾಯಿತು. ತಮಿಳು ಭಾಷಿಕರಾಗಿದ್ದ ಜಿಂಜೀ, ಮಧುರೈ ಮತ್ತು ತಂಜಾವೂರಿನ ನಾಯಕ ಮನೆತನದವರು ಸ್ವತಂತ್ರರಾಗಲು ತಹತಹಿಸತೊಡಗಿದರು. ಬಿಜಾಪುರದಿಂದ ದಾಳಿಯ ಭೀತಿಯಲ್ಲಿದ್ದ ತಿರುಮಲನು , ನಾಯಕರುಗಳ ಸ್ವತಂತ್ರ ಆಳ್ವಿಕೆಗೆ ಮೌನಸಮ್ಮತಿ ನೀಡಬೇಕಾಯಿತು. ಚಂದ್ರಗಿರಿಗೆ, ಅದರ ನಂತರ ವೆಲ್ಲೂರಿಗೆ ರಾಜಧಾನಿಯನ್ನು ಮುಂದೆ ಬದಲಾಯಿಸಲಾಯಿತು. ಈ ಅವಧಿಯಲ್ಲಿಯೇ ಮೈಸೂರು, ಕೆಳದಿ, ವೆಲ್ಲೂರು ಮೊದಲಾದ ಸಾಮಂತರು ವಿಜಯನಗರದಿಂದ ಸ್ವತಂತ್ರರಾಗಿದ್ದರು. ವಿಜಯನಗರದ ಅವನತಿಯಿಂದಾಗಿ, ದಕ್ಷಿಣಭಾರತದ ರಾಜಕೀಯ ವ್ಯವಸ್ಥೆ ಛಿದ್ರಛಿದ್ರವಾಯಿತು. ಆದರೂ ಈ ಸಾಮ್ರಾಜ್ಯದ ತೆಲುಗು ಭಾಷಿಕ ಅವಶೇಷಗಳು ದಕ್ಷಿಣ ಭಾರತದಲ್ಲಿ ಅಲ್ಲಲ್ಲಿ ಉಳಿದುಕೊಂಡವು. ಮೈಸೂರು ಸಂಸ್ಥಾನ, ಕೆಳದಿ ನಾಯಕರು, ಚಿತ್ರದುರ್ಗದ ನಾಯಕರು ಇತ್ಯಾದಿ ಸಣ್ಣ ರಾಜ್ಯಗಳ ತಲೆ ಎತ್ತುವುದರೊಂದಿಗೆ, ಮುಂದಿನ ನಾಲ್ಕು ಶತಮಾನಗಳ ಕಾಲ ಕನ್ನಡ ನಾಡಿನಲ್ಲಿ ಏಕಾಧಿಪತ್ಯವು ಎರವಾಯಿತು. ಮುಂದೆ ಚಿತ್ರದುರ್ಗ ಮತ್ತು ಕೆಳದಿ ನಾಯಕರ ಸಂಸ್ಥಾನಗಳು ಮೈಸೂರಿನಲ್ಲಿ ಲೀನವಾದವು. ವಿಜಯನಗರದ ಮೇಲೆ ವಿಜಯ ಸಾಧಿಸಿದರೂ ಸುಲ್ತಾನರುಗಳು ತಮ್ಮತಮ್ಮಲ್ಲಿಯೇ ಕಚ್ಚಾಡಿಕೊಳ್ಳುವುದನ್ನು ಮುಂದುವರಿಸಿ, ಮುಂದೆ ಮೊಘಲರ, ಅದರ ನಂತರ ಬ್ರಿಟಿಷರ, ಅಧೀನಕ್ಕೆ ಸೇರಿಹೋದರು. ಕೆಲ ಕನ್ನಡ ಪ್ರದೇಶಗಳು ಹೈದರಾಬಾದಿನ ನಿಜಾಮನ ಆಳ್ವಿಕೆಗೆ ಸೇರಿದರೆ , ಮತ್ತೊಂದು ಭಾಗ ಬ್ರಿಟಿಷರ ಅಧೀನದಲ್ಲಿ ಆಳುತ್ತಿದ್ದ ಮರಾಠರ ಮುಂಬಯಿ ಪ್ರಸಿಡೆನ್ಸಿಗೆ ಸೇರಿತು.

ಸೋಲಿಗೆ ಕಾರಣಗಳು

ವಿಜಯನಗರದ ಸೋಲಿನ ಕಾರಣಗಳ ಬಗ್ಯೆ ಇತಿಹಾಸಜ್ಞರಲ್ಲಿ ಅನೇಕ ಉತ್ಸಾಹಪೂರ್ಣ ಚರ್ಚೆಗಳಾಗಿವೆ. ಆ ಕಾಲದ ಶಾಸನಗಳು, ಇತರ ದಾಖಲೆಗಳಲ್ಲದೆ, ಯುದ್ಧದ ಸಮಯದಲ್ಲಿ ವಿಜಯನಗರಕ್ಕೆ ಭೇಟಿಯಿತ್ತಿದ್ದ ಯೂರೋಪಿಯನ್ ಪ್ರವಾಸಿಗಳ ಬರವಣಿಗೆಗಳೂ ಈ ವಿಷಯದಲ್ಲಿ ಬೆಳಕು ಚೆಲ್ಲುತ್ತವೆ.

  • ಒಂದು ವಾದದ ಪ್ರಕಾರ , ವಿಜಯನಗರದ ಸೇನೆಯಲ್ಲಿ , ತುಲನಾತ್ಮಕವಾಗಿ , ಕಡಿಮೆ ಅಶ್ವಾರೋಹಿ ಸೈನಿಕರಿದ್ದು, ಗಜಾರೋಹಿ ದಂಡನಾಯಕರಮೇಲೆ ಅವರು ಅವಲಂಬಿತರಾಗಿದ್ದರಿಂದ , ಸೈನ್ಯದ ಮುನ್ನಡೆ ನಿಧಾನವಾಯಿತು. ಇದಕ್ಕೆ ವಿರುದ್ಧವಾಗಿ, ಸುಲ್ತಾನರ ಸೇನೆಯಲ್ಲಿ ಪರ್ಶಿಯಾದ ಕುದುರೆಗಳ ಮೇಲಿದ್ದ ಚತುರ ದಂಡನಾಯಕರು ಚುರುಕಿನಿಂದ ತಮ್ಮ ಸೈನ್ಯವನ್ನು ಮುನ್ನುಗ್ಗಿಸಲು ಶಕ್ತರಾದರು.
  • ವಿಜಯನಗರದ ಮೂರೂ ಮುಖ್ಯ ದಂಡನಾಯಕರು , ರಾಮರಾಯನೂ ಸೇರಿದಂತೆ , ಮಧ್ಯವಯಸ್ಕರಾಗಿದ್ದರೆ , ಸುಲ್ತಾನರ ಸೇನೆಯ ದಂಡನಾಯಕರು ಯುವಹುಮ್ಮಸ್ಸಿನಲ್ಲಿದ್ದರು.
  • ವಿಜಯನಗರದ ಕಾಲಾಳುಗಳ ಶಸ್ತ್ರ ಬಿದಿರಿನಿಂದ ಮಾಡಿದ ಬಿಲ್ಲು. ಸುಲ್ತಾನರ ಸೇನೆಯ ಬಿಲ್ಲು ಸಿಡಿಬಿಲ್ಲಿನಂತಿದ್ದು , ಲೋಹದಿಂದ ಮಾಡಲಾಗಿತ್ತು. ಬಿದುರಿನ ಬಿಲ್ಲುಗಳಿಗಿಂತಲೂ ಇವು ಹೆಚ್ಚು ಶಕ್ತಿಯುತವಾಗಿಯೂ, ನಿಖರವಾಗಿಯೂ ಇದ್ದವು. ವಿಜಯನಗರದ ಈಟಿಗಳು ಏಳು ಅಟಿ ಉದ್ದದ್ದಾಗಿದ್ದರೆ, ಎದುರಾಳಿಗಳದ್ದು ಹದಿನೈದು ಅಡಿ ಉದ್ದವಿತ್ತು.
  • ಸುಲ್ತಾನರ ಸೈನ್ಯದ ಫಿರಂಗಿ ದಳದವರು ತ, ಆ ಕಾಲದಲ್ಲಿ ಅತ್ಯುತ್ತಮ ಎಂದು ಪರಿಗಣಿಸಲಾಗುತ್ತಿದ್ದ ತುರ್ಕಿಸ್ಥಾನದಿಂದ ಬಂದವರಾಗಿದ್ದರು. ವಿಜಯನಗರ ಅವಲಂಬಿತವಾಗಿದ್ದ ಯೂರೋಪಿನ ಸಂಬಳದ ಸಿಪಾಯಿಗಳಿಗೆ ತರಬೇತಿಯ ಕೊರತೆಯಿತ್ತು.
  • ಇಷ್ಟೆಲ್ಲಾ ಅನಾನುಕೂಲಗಳಿದ್ದರೂ, ವಿಜಯನಗರದ ಸೋಲಿಗೆ ಮುಖ್ಯ ಕಾರಣ ಅವರ ಸೇನೆಯ ಇಬ್ಬರು ಮುಖ್ಯ ಸೇನಾಧಿಕಾರಿಗಳ ವಿಶ್ವಾಸದ್ರೋಹ ಎಂಬುದನ್ನು ಇತಿಹಾಸಜ್ಞರು ಒಪ್ಪುತ್ತಾರೆ. ಈ ಇಬ್ಬರು ಗಿಲಾನಿ ಸೋದರರ ಸುಪರ್ದಿನಲ್ಲಿ ಸಾವಿರಾರು ಸೈನಿಕರ ಪಡೆಯಿತ್ತು. ಇವರಿಬ್ಬರು ಮೊದಲು ಆದಿಲ್ ಶಾಹಿ ದೊರೆಗಳ ಸೈನ್ಯದಲ್ಲಿದ್ದು , ಅಲ್ಲಿಂದ ರಾಮರಾಯನ ಸೇನೆಗೆ ಪಕ್ಷಾಂತರ ಮಾಡಿದ್ದರು. ಯುದ್ಧ ನಿರ್ಣಾಯಕ ಘಟ್ಟದಲ್ಲಿದ್ದಾಗ ಈ ಇಬ್ಬರು ಸಹೋದರರು ಯುದ್ಧಭೂಮಿಯಿಂದ ಓಡಿಹೋದರು. ವಿಜಯನಗರವನ್ನು ಕ್ರಿ.ಶ. ೧೫೬೭ರಲ್ಲಿ ಸಂದರ್ಶಿಸಿದ್ದ ಫ್ರೆಂಡ್ರಿಚಿ ಮತ್ತು ಅಂಕೆಟಿ ದು ಪೆರಾನ್ ಎಂಬ ಯೂರೋಪಿನ ಪ್ರವಾಸಿಗಳ ಬರವಣಿಗೆಗಳೂ ಈ ವಿಷಯವನ್ನು ಧೃಡಪಡಿಸುತ್ತದೆ.

Tags:

ತಾಳೀಕೋಟೆಯ ಯುದ್ಧ ಹಿನ್ನೆಲೆತಾಳೀಕೋಟೆಯ ಯುದ್ಧ ಯುದ್ಧತಾಳೀಕೋಟೆಯ ಯುದ್ಧ ಯುದ್ಧಾನಂತರತಾಳೀಕೋಟೆಯ ಯುದ್ಧ ಸೋಲಿಗೆ ಕಾರಣಗಳುತಾಳೀಕೋಟೆಯ ಯುದ್ಧಕರ್ನಾಟಕಜನವರಿ ೨೩ದಕ್ಷಿಣ ಭಾರತಬಿಜಾಪುರವಿಜಯನಗರ ಸಾಮ್ರಾಜ್ಯ೧೫೬೫

🔥 Trending searches on Wiki ಕನ್ನಡ:

ನಂಜುಂಡೇಶ್ವರ ದೇವಸ್ಥಾನ, ನಂಜನಗೂಡುಚಾಮರಾಜನಗರಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮಅಮೃತಧಾರೆ (ಕನ್ನಡ ಧಾರಾವಾಹಿ)ನೂಲುಚಿಕವೀರ ರಾಜೇಂದ್ರ (ಗ್ರಂಥ)ಭಗತ್ ಸಿಂಗ್ಗೋತ್ರ ಮತ್ತು ಪ್ರವರಮಧ್ಯಕಾಲೀನ ಭಾರತಇಂಟರ್ನೆಟ್‌ ಇತಿಹಾಸವಾಣಿವಿಲಾಸಸಾಗರ ಜಲಾಶಯರಕ್ತಪಂಚತಂತ್ರಮಧುಮೇಹವಡ್ಡಾರಾಧನೆಕರ್ನಾಟಕ ಸರ್ಕಾರಮೆಕ್ಕೆ ಜೋಳಕರ್ನಾಟಕದ ವಾಸ್ತುಶಿಲ್ಪಜಯಮಾಲಾಉಪನಯನವ್ಯಾಸರಾಯರುಅಶೋಕನ ಶಾಸನಗಳುಬಾರ್ಲಿಅಕ್ಬರ್ದ್ರೋಣಬಿ. ಎಂ. ಶ್ರೀಕಂಠಯ್ಯನಯನತಾರಸವರ್ಣದೀರ್ಘ ಸಂಧಿಎಂ. ಎನ್. ಶ್ರೀನಿವಾಸ್ವಾರ್ಧಕ ಷಟ್ಪದಿತಾಪಮಾನದಿಕ್ಕುಕುಂಬಳಕಾಯಿಕತ್ತೆಯಕ್ಷಗಾನಗೋಪಾಲಕೃಷ್ಣ ಅಡಿಗಕಲಿಯುಗತಿರುಗುಬಾಣಬೇವುಭೂಮಿರತನ್ ನಾವಲ್ ಟಾಟಾರಾಧಿಕಾ ಗುಪ್ತಾನುಗ್ಗೆಕಾಯಿಉಡಸೀತಾ ರಾಮಬರವಿಶ್ವ ಮಾನವ ಸಂದೇಶಬಾದಾಮಿಸರಕು ಮತ್ತು ಸೇವಾ ತೆರಿಗೆ (ಜಿಎಸ್‍ಟಿ)ಉತ್ತರ ಕರ್ನಾಟಕಜವಹರ್ ನವೋದಯ ವಿದ್ಯಾಲಯಮತದಾನಕನ್ನಡ ಅಭಿವೃದ್ಧಿ ಪ್ರಾಧಿಕಾರಭಾರತೀಯ ರಿಸರ್ವ್ ಬ್ಯಾಂಕ್ಕರ್ನಾಟಕದ ಕಲೆ ಮತ್ತು ಸಂಸ್ಕೃತಿಮೂತ್ರಪಿಂಡಗೌತಮ ಬುದ್ಧಹಿಂದೂ ಮಾಸಗಳುಸೆಸ್ (ಮೇಲ್ತೆರಿಗೆ)ಮುಟ್ಟು ನಿಲ್ಲುವಿಕೆಗ್ರಹಕುಂಡಲಿಚುನಾವಣೆಭಾರತೀಯ ಭಾಷೆಗಳುತುಮಕೂರುಶಿಕ್ಷಣಆಗಮ ಸಂಧಿಶಿವಇಂದಿರಾ ಗಾಂಧಿಬಾಲ್ಯ ವಿವಾಹಶಿವಮೊಗ್ಗದೇವನೂರು ಮಹಾದೇವಅಡೋಲ್ಫ್ ಹಿಟ್ಲರ್ಮನೆಗಂಗ (ರಾಜಮನೆತನ)ಹೈನುಗಾರಿಕೆದ್ರಾವಿಡ ಭಾಷೆಗಳು🡆 More