ಡಿ. ವಿ. ಸದಾನಂದ ಗೌಡ

ದೇವರಗುಂಡ ವೆಂಕಪ್ಪ ಸದಾನಂದ ಗೌಡ ಅಥವಾ ಡಿ.

ವಿ. ಸದಾನಂದ ಗೌಡ (ಜನನ. ೧೮, ಮಾರ್ಚ್ ೧೯೫೩) ಮಾಜಿ ಕೇಂದ್ರ ಸಚಿವ ಹಾಗೂ ಕರ್ನಾಟಕದ ಮಾಜಿ ಮುಖ್ಯಮಂತ್ರಿ. ಪ್ರಸಕ್ತ ಅವರು ೧೫ನೇ ಲೋಕಸಭೆಯಲ್ಲಿ ಉಡುಪಿ ಮತ್ತು ಚಿಕ್ಕಮಗಳೂರು ಕ್ಷೇತ್ರದ ಸಂಸದ.

ಡಿ. ವಿ. ಸದಾನಂದ ಗೌಡ
ಡಿ. ವಿ. ಸದಾನಂದ ಗೌಡ
ಸದಾನಂದ ಗೌಡ ಭಾವಚಿತ್ರ

26 ನೆಯ ಕರ್ನಾಟಕದ ಮುಖ್ಯ ಮಂತ್ರಿ
ಅಧಿಕಾರ ಅವಧಿ
03 ಆಗಸ್ಟ್ 2011 – 12 ಜುಲೈ 2012
ಪೂರ್ವಾಧಿಕಾರಿ ಬಿ.ಎಸ್. ಯಡಿಯೂರಪ್ಪ
ಉತ್ತರಾಧಿಕಾರಿ ಜಗದೀಶ್ ಶೆಟ್ಟರ್
ಮತಕ್ಷೇತ್ರ ಉಡುಪಿ ಚಿಕ್ಕಮಗಳೂರು
ವೈಯಕ್ತಿಕ ಮಾಹಿತಿ
ಜನನ (1953-03-19) ೧೯ ಮಾರ್ಚ್ ೧೯೫೩ (ವಯಸ್ಸು ೭೧)
ದಕ್ಷಿಣ ಕನ್ನಡ, ಕರ್ನಾಟಕ
ರಾಜಕೀಯ ಪಕ್ಷ ಬಿಜೆಪಿ
ಸಂಗಾತಿ(ಗಳು) ಡಾಟಿ ಸದಾನಂದ ಗೌಡ
ಮಕ್ಕಳು ದಿವಂಗತ ಕೌಶಿಕ್ ಗೌಡ, ಕಾರ್ತಿಕ್ ಗೌಡ
ವಾಸಸ್ಥಾನ ಪುತ್ತೂರು, ಕರ್ನಾಟಕ
ಧರ್ಮ ಹಿಂದೂ
ಜಾಲತಾಣ http://sadanandagowda.com
As of ಸೆಪ್ಟೆಂಬರ್ 23, 2006
ಮೂಲ: [೧]

ಬಾಲ್ಯ ಹಾಗೂ ವೃತ್ತಿಜೀವನ

ಸದಾನಂದ ಗೌಡರು, ಕೊಡಗು ದೇವರಗುಂಡ ಗೌಡ ಪರಿವಾರದ ಮಂಡೆಕೊಲು ಗ್ರಾಮ ಸುಳ್ಯ ತಾಲ್ಲೂಕಿನ ವೆಂಕಪ್ಪಗೌಡ ಮತ್ತು ಕಮಲಾ ದಂಪತಿಗಳ ಪುತ್ರನಾಗಿ ಜನಿಸಿದರು. ಅವರ ಪ್ರಾರಂಭಿಕ ವಿದ್ಯಾಭ್ಯಾಸ, ಪುತ್ತೂರು ತಾಲ್ಲೂಕಿನ ಕೆಯ್ಯೂರ್,ಹಾಗೂ ಸುಳ್ಯದಲ್ಲಿ ನಡೆಯಿತು. ಫಿಲೋಮಿನಾ ಕಾಲೇಜಿನಲ್ಲಿ ವಿಜ್ಞಾನದಲ್ಲಿ ಪದವಿಗಳಿಸಿ ನಂತರ, ವೈಕುಂಠ ಬಾಳಿಗ ಲಾ ಕಾಲೇಜಿನಲ್ಲಿ ಕಾನೂನು ಪದವಿ ಗಳಿಸಲು ಹೊರಟರು. ಮುಂದೆ, ಅವರು, ಲಾ ಕಾಲೇಜಿನ ವಿದ್ಯಾರ್ಥಿ ಸಂಘದ ಮುಖ್ಯ ಕಾರ್ಯದರ್ಶಿಯ ಸ್ಥಾನಕ್ಕೆ ಚುನಾಯಿತರಾದರು. ಜಿಲ್ಲಾ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ತಿನ ಮುಖ್ಯ ಕಾರ್ಯದರ್ಶಿಯಾಗಿ ಬಹಳ ಪ್ರಖ್ಯಾತರಾಗಿದ್ದರು. ೧೯೭೬ರಲ್ಲಿ, ಅವರು ಸುಳ್ಯ ಮತ್ತು ಪುತ್ತೂರಿನಲ್ಲಿ, ವಕೀಲಿ ವೃತ್ತಿಯನ್ನು ಆರಂಭಿಸಿದರು. ಸದಾನಂದರು, ಉತ್ತರ ಕನ್ನಡ ಜಿಲ್ಲೆಯ ಸಿರ್ಸಿಯಲ್ಲಿ ಪಬ್ಲಿಕ್ ಪ್ರಾಸಿಕ್ಯೂಟರ್ ಆಗಿ ಸ್ವಲ್ಪಕಾಲ ಸೇವೆ ಸಲ್ಲಿಸಿದರು. ೧೯೮೧ರಲ್ಲಿ ಡಾಟಿ ಸದಾನಂದ ಅವರನ್ನು ಮದುವೆಯಾದರು. ಈ ದಂಪತಿಗಳ ಮಗ ಕಾರ್ತಿಕ್ ಗೌಡ, ನಿಟ್ಟೆ ಇಂಜಿನಿಯರಿಂಗ್ ಕಾಲೇಜಿನಿಂದ ಪದವಿ ಗಳಿಸಿದ್ದಾರೆ. ಸದಾನಂದ ಗೌಡರ ಮೊದಲನೆಯ ಮಗ, ಕೌಶಿಕ್ ಗೌಡ ಮೆಡಿಕಲ್ ವಿದ್ಯಾರ್ಥಿಯಾಗಿದ್ದರು. ೨೦೦೩ ರಲ್ಲಿ ಪುತ್ತೂರಿನ ಬಳಿ ಒಂದು ರಸ್ತೆ ಅಪಘಾತದಲ್ಲಿ ಮೃತರಾದರು.

ರಾಜಕೀಯ ಜೀವನ

ಸದಾನಂದ ಗೌಡ ಅವರು ಅಂದಿನ ಜನ ಸಂಘದ ಸದಸ್ಯರಾಗಿ ತಮ್ಮ ರಾಜಕೀಯ ಜೀವನ ಆರಂಭಿಸಿದರು. ನಂತರ ಸುಳ್ಯ ವಿಧಾನಸಭಾ ಕ್ಷೇತ್ರದ ಪಕ್ಷಾಧ್ಯಕ್ಷ, ದಕ್ಷಿಣ ಕನ್ನಡ ಬಿಜೆಪಿ ಯುವ ಮೋರ್ಚಾದ ಅಧ್ಯಕ್ಷ, ದಕ್ಷಿಣ ಕನ್ನಡ ಬಿಜೆಪಿ ಉಪಾಧ್ಯಕ್ಷ, ರಾಜ್ಯ ಬಿಜೆಪಿ ಯುವ ಮೋರ್ಚಾದ ಕಾರ್ಯದರ್ಶಿ (೧೯೮೩-೮೮), ರಾಜ್ಯ ಬಿಜೆಪಿ ಪಕ್ಷದ ಕಾರ್ಯದರ್ಶಿ (೨೦೦೩-೦೪) ಮತ್ತು ಪಕ್ಷದ ರಾಷ್ಟ್ರೀಯ ಕಾರ್ಯದರ್ಶಿ (೨೦೦೪) ಆಗಿ ಕಾರ್ಯ ನಿರ್ವಹಿಸಿದ್ದಾರೆ. ೧೯೯೪ ಮತ್ತು ೧೯೯೯ರಲ್ಲಿ ದಕ್ಷಿಣ ಕನ್ನಡದ ಪುತ್ತೂರು ವಿಧಾನಸಭಾ ಕ್ಷೇತ್ರದಿಂದ ರಾಜ್ಯ ವಿಧಾನಸಭೆಗೆ ಆಯ್ಕೆಯಾದರು. ತಮ್ಮ ಎರಡನೇ ಅವಧಿಯಲ್ಲಿ ರಾಜ್ಯ ವಿರೋಧ ಪಕ್ಷದ ಉಪನಾಯಕರಾದರು. ೨೦೦೪ರಲ್ಲಿ ಮಂಗಳೂರು ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ ವೀರಪ್ಪ ಮೊಯ್ಲಿ ಅವರನ್ನು ೩೨,೩೧೪ ಮತಗಳಿಂದ ಸೋಲಿಸಿ ೧೪ನೇ ಲೋಕಸಭೆಗೆ ಆಯ್ಕೆಯಾದರು. ೨೦೦೯ರಲ್ಲಿ ಪಕ್ಷವು ಅವರನ್ನು ಉಡುಪಿ-ಚಿಕ್ಕಮಗಳೂರು ಕ್ಷೇತ್ರಕ್ಕೆ ವರ್ಗಾಯಿಸಿತು ೨೦೧೪-೧೯ರಲ್ಲಿ ರೈಲ್ವೇ, ಕಾನೂನು, ಅಂಕಿ-ಅಂಶ ಖಾತೆ, ೨೦೧೯-೨೧ರಲ್ಲಿ ರಸಗೊಬ್ಬರ ಖಾತೆಯ ಸಚಿವರಾಗಿದ್ದರು.

'ಜನಸಂಘ' ಹಾಗೂ ಬಿ.ಎಂ.ಎಸ್

'ಜನಸಂಘದ ಸಕ್ರಿಯ ರಾಜಕಾರಣ'ದಲ್ಲಿ ಭಾಗಿಯಾಗಿದ್ದರು. ಭಾರತೀಯ ಮಜ್ದೂರ್ ಸಂಘ (ಬಿ.ಎಂ.ಎಸ್) ನಲ್ಲೂ ಕಾರ್ಯ ನಿರ್ವಹಿಸಿದ್ದ ಸದಾನಂದ ಗೌಡರು, 'ಸುಳ್ಯ ತಾಲ್ಲೂಕು ಆಟೋ ರಿಕ್ಷಾ ಚಾಲಕರ ಹಾಗೂ ಮಾಲಿಕರ ಸಂಘ'ದಲ್ಲಿಯೂ ಸೇವೆ ಸಲ್ಲಿಸಿದ್ದರು.

ಕಲಾಪ್ರೇಮಿ ಹಾಗೂ ಕ್ರೀಡಾಸಕ್ತ

ವಿದ್ಯಾರ್ಥಿ ದೆಸೆಯಲ್ಲಿದ್ದಾಗ ಅವರು ಖೋಖೋ ಆಟದಲ್ಲಿ ಅತ್ಯಂತ ಆಸಕ್ತಿತೋರಿಸಿ 'ಮೈಸೂರು ವಿಶ್ವವಿದ್ಯಾಲವನ್ನು ಪ್ರತಿನಿಧಿಸಿ'ದ್ದರು. 'ಬ್ಯಾಡ್ ಮಿಂಟನ್' ಮತ್ತು 'ಟೆನ್ನಿಸ್' ಆಟಗಳನ್ನೂ ಆಡುತ್ತಿದ್ದರು. 'ಕರಾವಳಿಯ ಬಹು ಜನಪ್ರಿಯ-ಜಾನಪದ ಕಲೆ'ಯಾದ ಯಕ್ಷಗಾನದ ಬಗ್ಗೆ ಅತ್ಯಂತ ಗೌರವವಿದೆ. ಸಮಯ ದೊರೆತಾಗ ಆಟಗಳನ್ನು ವೀಕ್ಷಿಸುತ್ತಾರೆ.

ಮುಖ್ಯಮಂತ್ರಿ ಸ್ಥಾನ

ಬಿ.ಜೆ.ಪಿ.ಪಕ್ಷದ ಮುಖ್ಯಮಂತ್ರಿಗಳಾಗಿದ್ದ ಯಡಿಯೂರಪ್ಪ ೩೧ರ ಜುಲೈ ೨೦೧೧ ರಂದು ರಾಜೀನಾಮೆ ಇತ್ತರು. ೩ ಆಗಸ್ಟ್ ೨೦೧೧ ರಂದು , ಬಿಜೆಪಿ ಶಾಸಕರ ಗೌಪ್ಯ ಮತದಾನದಲ್ಲಿ ಬಹುಮತ ಪಡೆದ ಡಿ.ವಿ.ಸದಾನಂದ ಗೌಡರು ಜಗದೀಶ್ ಶೆಟ್ಟರ್ ಗಿಂತ ಹೆಚ್ಚು ಮತ ಗಳಿಸಿ ರಾಜ್ಯದ ೨೬ನೇ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು.

ಸದಾನಂದ ಗೌಡರ ಸಾರ್ವಜನಿಕ ಸೇವೆ

  • ೧೯೯೪-೨೦೦೪: ಎರಡು ಅವಧಿಗೆ ಶಾಸಕ
  • 1995-1996 Member, Cell for preparing Draft Bill on Prohibiting atrocities on Women, Government of Karnataka
  • 2001-2002 Member, Committee for Energy, Fuel & Power, Karnataka Legislative
  • 2002-2003 Member, Public Undertaking Committee, Karnataka Legislative Assembly
  • 2003-2004 President, Public Accounts Committee, Karnataka Legislative Assembly
  • ೧೯೯೯-೨೦೦೪: ವಿಧಾನ ಪರಿಷತ್ ವಿರೋಧಿ ಬಣದ ಉಪನಾಯಕ
  • Member, Committee on Commerce
  • National Secretary, BJP
  • ೧೯೮೩-೧೯೮೮: ಬಿಜೆಪಿ ಯುವ ಮೋರ್ಚಾ ಕಾರ್ಯದರ್ಶಿ
  • ೨೦೦೪-೨೦೦೬: ಸಂಸದ
  • 2006-Present State President, BJP, Karnataka
  • 5 August 2006-onwards Member, Committee on Commerece
  • 18 January 2006-onwards Member, Sub-committee of the Department Related ==pArlimeMTari==
  • Standing Committee on Commerce for Special Economic Zones
  • 5 Aug. 2007 onwards Member, Committee on Commerce
  • 2009 Elected to 15th Lok Sabha
  • Chief Ministerial candidate
  • Voted the new Chief minister of Karnataka.He was supported by former chief Minister BS Yediyurappa.
  • D V Sadananda Gowda 26th Chief Minister of Karnataka State

ಬಾಹ್ಯ ಸಂಪರ್ಕಗಳು

ಉಲ್ಲೇಖಗಳು




Tags:

ಡಿ. ವಿ. ಸದಾನಂದ ಗೌಡ ಬಾಲ್ಯ ಹಾಗೂ ವೃತ್ತಿಜೀವನಡಿ. ವಿ. ಸದಾನಂದ ಗೌಡ ರಾಜಕೀಯ ಜೀವನಡಿ. ವಿ. ಸದಾನಂದ ಗೌಡ ಜನಸಂಘ ಹಾಗೂ ಬಿ.ಎಂ.ಎಸ್ಡಿ. ವಿ. ಸದಾನಂದ ಗೌಡ ಕಲಾಪ್ರೇಮಿ ಹಾಗೂ ಕ್ರೀಡಾಸಕ್ತಡಿ. ವಿ. ಸದಾನಂದ ಗೌಡ ಮುಖ್ಯಮಂತ್ರಿ ಸ್ಥಾನಡಿ. ವಿ. ಸದಾನಂದ ಗೌಡ ಸದಾನಂದ ಗೌಡರ ಸಾರ್ವಜನಿಕ ಸೇವೆಡಿ. ವಿ. ಸದಾನಂದ ಗೌಡ ಬಾಹ್ಯ ಸಂಪರ್ಕಗಳುಡಿ. ವಿ. ಸದಾನಂದ ಗೌಡ ಉಲ್ಲೇಖಗಳುಡಿ. ವಿ. ಸದಾನಂದ ಗೌಡಉಡುಪಿಚಿಕ್ಕಮಗಳೂರು

🔥 Trending searches on Wiki ಕನ್ನಡ:

ಟೊಮೇಟೊಬ್ರಿಕ್ಸ್ ಸಂಘಟನೆಕೂಡಲ ಸಂಗಮತಂತ್ರಜ್ಞಾನದ ಉಪಯೋಗಗಳುಶ್ರೀಕೃಷ್ಣದೇವರಾಯಬಿ.ಎಲ್.ರೈಸ್ವೆಂಕಟೇಶ್ವರಭಾರತದ ಇತಿಹಾಸಕರ್ನಾಟಕದ ವಾಸ್ತುಶಿಲ್ಪಝೊಮ್ಯಾಟೊಶಬರಿರಾಷ್ಟ್ರಕೂಟಮಹಾಲಕ್ಷ್ಮಿ (ನಟಿ)ಪರಶುರಾಮಗಣೇಶಕರ್ನಾಟಕ ರಾಜ್ಯ ಮಹಿಳಾ ಆಯೋಗಕರ್ನಾಟಕದ ಮುಖ್ಯಮಂತ್ರಿಗಳುಪ್ಲಾಸಿ ಕದನಕಾಫಿರ್ನಿರಂಜನಇತಿಹಾಸಕಲಿಯುಗರಚಿತಾ ರಾಮ್ಕಂದಭಾರತದಲ್ಲಿ ಮೀಸಲಾತಿವರ್ಗೀಯ ವ್ಯಂಜನಕನ್ನಡದಲ್ಲಿ ಮಹಿಳಾ ಸಾಹಿತ್ಯಕನ್ನಡಪ್ರಭಸೌರಮಂಡಲಹಲ್ಮಿಡಿ ಶಾಸನಮೂಲಧಾತುಗಳ ಪಟ್ಟಿಶೃಂಗೇರಿಯೋಗಪಂಚಾಂಗಹರ್ಡೇಕರ ಮಂಜಪ್ಪಯೂಟ್ಯೂಬ್‌ಧರ್ಮಸ್ಥಳಸ್ತ್ರೀವಾದಶ್ರೀವಿಜಯಸಂಪತ್ತಿಗೆ ಸವಾಲ್ಸಂಭೋಗಮಧುಮೇಹಕ್ರಿಯಾಪದಟಿ.ಪಿ.ಕೈಲಾಸಂಮುಹಮ್ಮದ್ಶ್ರೀ ರಾಮಾಯಣ ದರ್ಶನಂಭಾರತದ ರಾಷ್ಟ್ರಪತಿಗಳ ಪಟ್ಟಿದಿವ್ಯಾಂಕಾ ತ್ರಿಪಾಠಿಸಮಾಜ ವಿಜ್ಞಾನಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಕನ್ನಡ ಭಾಷಾ ಸಾಹಿತಿಗಳುರಾಜ್ಯಭಾರತೀಯ ಜನತಾ ಪಕ್ಷಮಾಸರಾಮ್ ಮೋಹನ್ ರಾಯ್ಕನ್ನಡದಲ್ಲಿ ನವ್ಯಕಾವ್ಯಅನುನಾಸಿಕ ಸಂಧಿಭಾರತದ ಉಪ ರಾಷ್ಟ್ರಪತಿಗಳ ಪಟ್ಟಿಚಿತ್ರದುರ್ಗಕಾಳಿದಾಸಮಾನವನ ನರವ್ಯೂಹವಿಧಾನ ಪರಿಷತ್ತುಓಂ ನಮಃ ಶಿವಾಯಹಣ್ಣುಸಮಾಸಸಾಲ್ಮನ್‌ಪಿತ್ತಕೋಶದೂರದರ್ಶನಕನ್ನಡ ಅಕ್ಷರಮಾಲೆಗರ್ಭಧಾರಣೆಚಿತ್ರದುರ್ಗ ಕೋಟೆಮಹಾವೀರ ಜಯಂತಿಟಿಪ್ಪು ಸುಲ್ತಾನ್ಭಾರತದ ಸಂವಿಧಾನದ ೩೭೦ನೇ ವಿಧಿಕ್ರೀಡೆಗಳುಸಾಮಾಜಿಕ ಸಮಸ್ಯೆಗಳುಸೂರ್ಯವಂಶ (ಚಲನಚಿತ್ರ)ಹೊಯ್ಸಳೇಶ್ವರ ದೇವಸ್ಥಾನ🡆 More