ಮೈಸೂರ್ ಪಿಟೀಲು ಚೌಡಯ್ಯ, (ಜನವರಿ ೧.೧೮೯೫ - ಜನವರಿ ೧೯, ೧೯೬೭) ಖ್ಯಾತರಾಗಿರುವ ಪಿಟೀಲ್ ವಾದಕರು, ಶಾಸ್ತ್ರೀಯ ಸಂಗೀತ ವಲಯದಲ್ಲಿ ಚಿರಸ್ಮರಣೀಯವಾಗಿದೆ.
ತಮ್ಮ ಸಂಗೀತ ಪಾಂಡಿತ್ಯ ಮತ್ತು ಹೆಚ್ಚುಗಾರಿಕೆಯಿಂದ ಹೆಸರಾದವರು. ಇಂದಿಗೂ ಕರ್ನಾಟಕದಲ್ಲಿ ಪಿಟೀಲಿನೊಂದಿಗೆ ಜೋಡಿಸಿದ ಹೆಸರೆಂದರೆ ಚೌಡಯ್ಯನವರದ್ದೇ.'ಬೆಂಗಳೂರಿನ ವೈಯಾಲಿಕಾವಲ್'ನಲ್ಲಿರುವ ಚೌಡಯ್ಯ ಸ್ಮಾರಕ ಭವನ “ಪಿಟೀಲಿನ’ ಆಕಾರದಲ್ಲೇ ಇದೆ.
ತಿರುಮಕೂಡಲು ಚೌಡಯ್ಯ | |
---|---|
ಮೂಲಸ್ಥಳ | ತಿರುಮಕೂಡಲು ನರಸೀಪುರ, ಮೈಸೂರು ಜಿಲ್ಲೆ, ಕರ್ನಾಟಕ |
ಸಂಗೀತ ಶೈಲಿ | ಕರ್ನಾಟಕ ಸಂಗೀತ |
ವೃತ್ತಿ | ಪಿಟೀಲು ವಾದಕ |
'ತಿರುಮಕೂಡಲು ಚೌಡಯ್ಯ' ಆಗತ್ಸ್ಯ ಗೌಡ, ಹಾಗೂ ಸುಂದರಮ್ಮ ದಂಪತಿಗಳ ಮಗನಾಗಿ ಜನಿಸಿದರು. ಚಿಕ್ಕವಯಸ್ಸಿನಿಂದಲೇ ಬಾಲಕ ಚೌಡಯ್ಯನಿಗೆ ಸಂಗೀತದಲ್ಲಿ ಸಂಗೀತ ವಾದ್ಯಗಳನ್ನು ನುಡಿಸುವುದರಲ್ಲಿ ಅಪರಿಮಿತ ಆಸಕ್ತಿಯಿತ್ತು.ಬಿಡಾರಮ್ ಕೃಷ್ಣಪ್ಪನವರಲ್ಲಿ ಹದಿನೆಂಟು ವರ್ಷ ಸಂಗೀತಾಬ್ಯಾಸ ಮಾಡಿದ ಚೌಡಯ್ಯನವರು ಅಸಾಧಾರಣ ಪಾಂಡಿತ್ಯ ಪಡೆದರು. ತಿರುಚಿ ಗೋವಿಂದ ಸ್ವಾಮಿಗಳಿಂದ ಹೆಚ್ಹಿನ ಪರಿಣತಿ ಪಡೆದರು.ಕರ್ನಾಟಕ ಸಂಗೀತ ಪ್ರಕಾರದ ಒಬ್ಬ ಪ್ರಮುಖ ಪಿಟೀಲು ವಾದಕರಾಗಿದ್ದವರು. ಪಿಟೀಲು ಟಿ.ಚೌಡಯ್ಯನವರು ಅಭಿನಯಿಸಿದ ಚಿತ್ರದ ಹೆಸರು “ವಾಣಿ”. ಅದರಲ್ಲಿ ಅವರೇ ನಾಯಕ. ವಿಶೇಷವೆಂದರೆ ಪಂಡರೀಬಾಯಿ ಮತ್ತು ಮುಸುರಿ ಕೃಷ್ಣಮೂರ್ತಿಯವರ ಮೊದಲ ಚಿತ್ರವೂ ಅದೇ.
ಇಂಥ ಸಂಗೀತ ವಿದ್ವಾಂಸ ನಾಯಕ ನಟನಾಗಿ ಚಿತ್ರದಲ್ಲಿ ಅಭಿನಯಿಸಿದ್ದರು. 'ನಟ ಅಂಬರೀಷನ ತಾತ'ನವರಾದ ಚೌಡಯ್ಯನವರು ೧೯೪೩ ರಲ್ಲಿ ಬಿಡುಗಡೆಯಾದ “ವಾಣಿ’ ಚಿತ್ರದಲ್ಲಿ ತಂದೆ ಮತ್ತು ಮಗನಾಗಿ ದ್ವಿಪಾತ್ರದಲ್ಲಿ ಅಭಿನಯಿಸಿದ್ದರು, ಅದರ ಇಂಗ್ಲಿಷ್ ನ ಟೈಟಲ್ “violinist’. ಸಂಗೀತ ಪ್ರಧಾನವಾದ ಚಿತ್ರ. ಇದರಲ್ಲಿನ ಹಾಡಿಗೆ ಸ್ವತಃ ಅವರೇ ಸಂಗೀತ ಸಂಯೋಜಿಸಿದ್ದರು. ಇಡೀ ಚಿತ್ರದ ಸಂಗೀತ ನಿರ್ದೇಶನವನ್ನು ಮತ್ತೊಬ್ಬ ಸಹಾಯಕನೊಂದಿಗೆ ಪೂರೈಸಿದ್ದರು. ಚೌಡಯ್ಯನವರು, ೧೯೫೨-೧೯೫೮ ರವರೆಗೆ 'ವಿದಾನ ಪರಿಷತ್ ಸದಸ್ಯ'ರಾಗಿದ್ದರು.
[ಶಾಶ್ವತವಾಗಿ ಮಡಿದ ಕೊಂಡಿ][ಶಾಶ್ವತವಾಗಿ ಮಡಿದ ಕೊಂಡಿ]
This article uses material from the Wikipedia ಕನ್ನಡ article ತಿರುಮಕೂಡಲು ಚೌಡಯ್ಯ, which is released under the Creative Commons Attribution-ShareAlike 3.0 license ("CC BY-SA 3.0"); additional terms may apply (view authors). ವಿಶೇಷವಾಗಿ ಟಿಪ್ಪಣಿ ಮಾಡದಿದ್ದ ಹೊರತು ಪಠ್ಯ "CC BY-SA 4.0" ರಡಿ ಲಭ್ಯವಿದೆ. Images, videos and audio are available under their respective licenses.
®Wikipedia is a registered trademark of the Wiki Foundation, Inc. Wiki ಕನ್ನಡ (DUHOCTRUNGQUOC.VN) is an independent company and has no affiliation with Wiki Foundation.