ಅಧ್ಯಾತ್ಮ ಸಿದ್ಧಿಗೆ ಜ್ಞಾನ ಮುಖ್ಯವೋ ,ಕರ್ಮ ಮುಖ್ಯವೋ ? ಆಥವಾ ಜ್ಞಾನ ಕರ್ಮಗಳೆರಡೂ ಅಗತ್ಯವೋ ? ಎಂಬುದು ಜಿಜ್ಞಾಸೆ -ಚರ್ಚೆಯ ವಿಷಯವಾಗಿದೆ .ಕರ್ಮವೆಂದರೆ ಯಜ್ಞ ಯಾಗಾದಿಗಳು, ಉಪಾಸನೆ, ಅನುಷ್ಠಾನ , ಪೂಜೆ, ಭಕ್ತಿ, ಪೂಜೆ, ಭಜನೆ , ಯಾತ್ರೆ, ದಾನ, ಮತ್ತು ನಿತ್ಯನೈ ಮಿತ್ತಿಕ ಕರ್ಮಗಳು -ಪುಣ್ಯ ಸಂಪಾದನೆಯ ಕರ್ಮಗಳು ; ಇದರಲ್ಲಿ -ಈ ಚರ್ಚೆಯಲ್ಲಿ ಜೀವನೋಪಾಯದ ಕರ್ಮಗಳು ಸೇರಿಲ್ಲ..
ಜ್ಷಾನವೆಂದರೆ ತತ್ವದ ಅರಿವು ;ಅನುಭವದಿಂದ ಪಡೆದಿದ್ದು. ಉಪನಿಷತ್ತುಗಳು ಹೇಳಿದ ತತ್ವಾರ್ಥವನ್ನು ತಿಳಿರು ಮನನ ಮಾಡಿ ಸಾಕ್ಷಾತ್ಕರಿಸಿಕೊಳ್ಳವುದು ಅಥವಾ ಅದರ ಅನುಭವ ಪಡೆಯುವುದು. ಕರ್ಮವಾದಿಗಳ ಪ್ರಕಾರ ಕರ್ಮವೇ ಮುಖ್ಯ . ಅದಿಲ್ಲದೆ ತತ್ವಾರ್ಥ, ತತ್ವಾನುಭವ, ಆಗದು . ಅದು-ಆದರೂ ಬರಿಯ ಜ್ಞಾನದಿಂದ, ಪ್ರಯೋಜನವಿಲ್ಲ. ಜ್ಞಾನವಾದಿಗಳು ಕರ್ಮ ಗೌಣವೆಂದೂ, ಜ್ಞಾನವೇ ಪ್ರಧಾನವೆಂದು ಹೇಳುವರು. .ಆಧುನಿಕ ಚಿಂತಕರು , ಮೊದಲು ಎಲ್ಲರೂ ಶ್ರಮಿಕರೇ ಆಗಿದ್ದು ನಂತರ ಶ್ರಮವು ಕೀಳೆಂಬ ಭಾವನೆ ಬಂದು, ಜ್ಞಾನವೇ ಶ್ರೇಷ್ಠವೆಂದಾಯಿತೆಂದು ಹೇಳುತ್ತಾರೆ. ಇದಕ್ಕೆ ಆಲಸ್ಯ ಭಾವವೇ ಕರ್ಮವು ಗೌಣವೆಂದು ಹೇಳಲು ಕಾರಣವಿರಬಹುದೆನ್ನುತ್ತಾರೆ.ಆದರೆ ಇಲ್ಲಿ ಹೇಳಿರುವ ಕರ್ಮಕ್ಕೂ ಶ್ರಮದ ಜೀವನೋಪಾಯದ ಕರ್ಮಕ್ಕೂ ಹೋಲಿಸಲು ಬರದು/ಅಥವಾ ಅದು ಸರಿಯಲ್ಲ.
ಮೋಕ್ಷವೆಂದರೆ ಸುಖ-ದುಃಖಗಳಿಂದ ಬಿಡುಗಡೆ. ಅಲ್ಲಿ ಶರೀರ ಮನಸ್ಸಿನ ಸಂಬಂಧವಿಲ್ಲ. ಇಂಥ ಸ್ಥ್ಭಿತಿಯನ್ನು ಶರೀರದಿಂದ ,ಕರ್ಮದಿಂದಲೇ ಪಡೆಯಲು ಸಾಧ್ಯವಿಲ್ಲ. ಅಶರೀರತ್ವ -ಆನಂದದ ಸ್ಥಿತಿಯನ್ನು ಶರೀರದಿಂದ, ಕರ್ಮದಿಂದ ಪಡೆಯಲು ಸಾಧ್ಯವಿಲ್ಲ. ಅಶರೀರತ್ವ ,ಆನಂದವನ್ನು ಕರ್ಮದಿಂದಲೇ ಪಡೆಯಬಹುದಲ್ಲವೇ ? ಎಂದರೆ ; ಆತ್ಮನಿಗೆ ಮುಕ್ತಾವಸ್ಥೆ ಸ್ವಾಭಾವಿಕವಾದುದು. (ಬ್ರ,ಸೂ. ತಸ್ಯ ಸ್ವಭಾವಿPತ್ವತ್) ಮತ್ತು ಜೀವನಿಗೆ (ಆತ್ಮಕ್ಕೆ) ಮೋಕ್ಷವು ಕೂಟಸ್ಥ ನಿತ್ಯವಾಗಿದೆ. ಅದಕ್ಕೆ ಕ್ರಿಯಾ ಸಂಭಂಧವಿಲ್ಲ .
ಧರ್ಮಾಧರ್ಮಗಳಿಗೂ ಆತ್ಮನಿಗೂ ಸಂಬಂಧವಿದೆಯೆಂದು ಸಿದ್ಧಪಡಿಸಲು ಸಾಧ್ಯವಿಲ್ಲವೆಂಬುದು ಆವರ ಮತ. ಮಿಥ್ಯಾಜ್ಞಾನವನ್ನು ಹೊರತುಪಡಿಸಿ ಇನ್ನಾವ ರೀತಿಯಿಂದಲೂ, ಆತ್ಮನಿಗೂ ಶರೀರಕ್ಕೂ, ಸಂಬಂಧವನ್ನು ಹೇಳಲು ಆಗುವುದಿಲ್ಲ. ಆದ್ದರಿಂದ ಕರ್ಮಗಳಿಂದ ಬಿಡುಗಡೆಗೆ ಮಾರ್ಗವೆಂದರೆ -ಜ್ಞಾನ . ತಾನು ಬ್ರಹ್ಮ ಸ್ವರೂಪಿಯೆಂದು ಸಾಕ್ಷಾತ್ಕಾರವಾದಾಗ ಮಾತ್ರಾ ಕರ್ಮಚಕ್ರವು ನಿಂತು ಹೋಗುತ್ತದೆ. ಅದಿಲ್ಲವಾದರೆ, ಎಷ್ಟೇ ಸತ್ಕರ್ಮ ಮಾಡಿದರೂ ಭವ ಬಂಧನದಿಂದ ಬಿಡುಗಡೆಯಾಗದು.
ಚಾರ್ವಾಕ ದರ್ಶನ | ಜೈನ ದರ್ಶನ | ಬೌದ್ಧ ದರ್ಶನ | ಸಾಂಖ್ಯ ದರ್ಶನ |
ರಾಜಯೋಗ | ನ್ಯಾಯ | ವೈಶೇಷಿಕ ದರ್ಶನ | ಮೀಮಾಂಸ ದರ್ಶನ |
ಆದಿ ಶಂಕರರು ಮತ್ತು ಅದ್ವೈತ | ಅದ್ವೈತ- ಜ್ಞಾನ-ಕರ್ಮ ವಿವಾದ | ವಿಶಿಷ್ಟಾದ್ವೈತ ದರ್ಶನ | ದ್ವೈತ ದರ್ಶನ |
ಮಾಧ್ವ ಸಿದ್ಧಾಂತ | ಶ್ರೀಮನ್ಮಹಾಭಾರತಮ್ ಮತ್ತು ದ್ವೈತ ದರ್ಶನ | ಭಾರತೀಯ ತತ್ವಶಾಸ್ತ್ರ ಸಮೀಕ್ಷೆ | ಭಗವದ್ಗೀತಾ ತಾತ್ಪರ್ಯ |
ಕರ್ಮ ಸಿದ್ಧಾಂತ | ವೀರಶೈವ ತತ್ತ್ವ | ಭಾರತೀಯ ತತ್ತ್ವಶಾಸ್ತ್ರದಲ್ಲಿ ದೇವರು | - ಭಾರತೀಯ ತತ್ತ್ವಶಾಸ್ತ್ರದಲ್ಲಿ ಜಗತ್ತು |
ಭಾರತೀಯ ತತ್ತ್ವಶಾಸ್ತ್ರದಲ್ಲಿ ಜೀವಾತ್ಮ | ಮೋಕ್ಷ | ಗೀತೆ | ಬ್ರಹ್ಮಸೂತ್ರ |
ಚಾರ್ವಾಕ ದರ್ಶನ ;ಜೈನ ಧರ್ಮ- ಜೈನ ದರ್ಶನ ;ಬೌದ್ಧ ಧರ್ಮ ;ಸಾಂಖ್ಯ-ಸಾಂಖ್ಯ ದರ್ಶನ ;(ಯೋಗ)->ರಾಜಯೋಗ ;ನ್ಯಾಯ ದರ್ಶನ ;ವೈಶೇಷಿಕ ದರ್ಶನ;;ಮೀಮಾಂಸ ದರ್ಶನ - ;ವೇದಾಂತ ದರ್ಶನ / ಉತ್ತರ ಮೀಮಾಂಸಾ ;ಅದ್ವೈತ ;ಆದಿ ಶಂಕರರು ಮತ್ತು ಅದ್ವೈತ ;ವಿಶಿಷ್ಟಾದ್ವೈತ ದರ್ಶನ ;ದ್ವೈತ ದರ್ಶನ - ಮಾಧ್ವ ಸಿದ್ಧಾಂತ ;ಪಂಚ ಕೋಶ--ಶ್ರೀಮನ್ಮಹಾಭಾರತಮ್ ಮತ್ತು ದ್ವೈತ ದರ್ಶನ ;ವೀರಶೈವ;ಬಸವಣ್ಣ;ಭಾರತೀಯ ತತ್ವಶಾಸ್ತ್ರ ಸಮೀಕ್ಷೆ;ಭಗವದ್ಗೀತಾ ತಾತ್ಪರ್ಯ ;ಕರ್ಮ ಸಿದ್ಧಾಂತ ;.ಭಾರತೀಯ ತತ್ವಶಾಸ್ತ್ರ ಸಮೀಕ್ಷೆವೇದಗಳು--ಕರ್ಮ ಸಿದ್ಧಾಂತ--ಭಾರತೀಯ ತತ್ತ್ವಶಾಸ್ತ್ರದಲ್ಲಿ ದೇವರುಭಾರತೀಯ ತತ್ತ್ವಶಾಸ್ತ್ರದಲ್ಲಿ ಜಗತ್ತು-ಅಸ್ತಿತ್ವ-ಸತ್ಯವೇ-ಮಿಥ್ಯವೇ -ಭಾರತೀಯ ತತ್ತ್ವಶಾಸ್ತ್ರದಲ್ಲಿ ಜೀವಾತ್ಮ-ಮೋಕ್ಷ-ಜ್ಞಾನ-ಕರ್ಮ ವಿವಾದ
This article uses material from the Wikipedia ಕನ್ನಡ article ಜ್ಞಾನ-ಕರ್ಮ ವಿವಾದ, which is released under the Creative Commons Attribution-ShareAlike 3.0 license ("CC BY-SA 3.0"); additional terms may apply (view authors). ವಿಶೇಷವಾಗಿ ಟಿಪ್ಪಣಿ ಮಾಡದಿದ್ದ ಹೊರತು ಪಠ್ಯ "CC BY-SA 4.0" ರಡಿ ಲಭ್ಯವಿದೆ. Images, videos and audio are available under their respective licenses.
®Wikipedia is a registered trademark of the Wiki Foundation, Inc. Wiki ಕನ್ನಡ (DUHOCTRUNGQUOC.VN) is an independent company and has no affiliation with Wiki Foundation.