ಜಂಗಮ

ಜಂಗಮ ಅಥವಾ ಜಂಗಮರು ಧಾರ್ಮಿಕ ಅಲೆದಾಡುವ ಸಂನ್ಯಾಸಿಯಾಗಿದ್ದಾರೆ.

ಅವರು ವೀರಶೈವದ ಪುರೋಹಿತರು ಅಥವಾ ಗುರುಗಳು. ಜಂಗಮರನ್ನು 'ಲಿಂಗಾಯತ' ಎಂದು ಕರೆಯುವುದರ ಬಗ್ಗೆ ಪುರಾತನ ಚರ್ಚೆ ಮತ್ತು ಪುರಾಣವಿದೆ, ಆದರೆ ಇದು ಸರಿಯಾಗಿಲ್ಲ.ಜಂಗಮರು ಶಿವನ ಅನುಯಾಯಿಗಳು. ಹನ್ನೆರಡು ಜ್ಯೋತಿರ್ಲಿಂಗ ದೇವಾಲಯಗಳಲ್ಲಿ ಅವರು ಪುರೋಹಿತರಾಗಿದ್ದಾರೆ.

ಚಿತ್ರ:The Beda Jangam , Shaiva order religious monks of India.jpg
The Jangam , Shaiva order religious monks of India

ಜಂಗಮ ಪದದ ಆರ್ಥ

ಜಂಗಮ ಪದಗಳು ನಾನಾ ಅರ್ಥಗಳನ್ನು ಕೊಡುತ್ತ ಶರಣರ ಚಳವಳಿಯ ವಿರಾಟ್ ದರ್ಶನವನ್ನು ಮಾಡಿಸುತ್ತವೆ. ಜಂಗಮ ಎಂದರೆ ಅನಂತವಾದ ಮತ್ತು ನಿರಂತರವಾದ ಚೈತನ್ಯ. ಜಂಗಮ ಎಂದರೆ ಚೈತನ್ಯರೂಪಿ ದೇವರು, ಜಂಗಮ ಎಂದರೆ ಚೈತನ್ಯರೂಪಿ ಅರಿವು, ಜಂಗಮ ಎಂದರೆ ಚೈತನ್ಯವನ್ನು ಒಳಗೊಂಡ ಇಡೀ ವಿಶ್ವ. ಜಂಗಮ ಎಂದರೆ ಜೀವಜಗತ್ತು, ಜಂಗಮ ಎಂದರೆ ಮಾನವ ಸಮಾಜ. ಜಂಗಮ ಎಂದರೆ, ಮಾನವಕುಲ ಬದುಕಲು ಯೋಗ್ಯವಾಗುವಂಥ ಸಮಾಜ ನಿರ್ಮಾಣಕ್ಕಾಗಿ ಶರಣಸಂಕುಲ ಕಂಡುಕೊಂಡ ಈ ಸತ್ಯವನ್ನು ಸಮರ್ಪಣಾಭಾವದಿಂದ ಸಾರುತ್ತ ಸಾಗುವ ಶರಣ.

ಜಂಗಮರ ಸಂಖ್ಯೆ

ಕರ್ನಾಟಕ ರಾಜ್ಯದಲ್ಲಿ ಶೇ.2 ರಷ್ಟು ಜಂಗಮರಿದ್ದರು ಕೂಡ ಆರ್ಥಿಕ, ಶೈಕ್ಷಣಿಕ ಸಾಮಾಜಿಕ, ರಾಜಕೀಯ ಸೇರಿದಂತೆ ಎಲ್ಲ ರಂಗದಲ್ಲಿ ಹಿಂದುಳಿದಿದ್ದಾರೆ. ಇಂದಿನವರೆಗೂ ಸಾರ್ವಜನಿಕ ಎಲ್ಲ ಕ್ಷೇತ್ರಗಳಲ್ಲಿಯೂ ಮುಂದೆ ಬರಬೇಕು ಎಂದು ಅವರು ಕರೆ ನೀಡಿದರು.

ಜಂಗಮ ಸಮಾವೇಶಗಳು

ಅಕ್ಟೋಬರ ೨೫, ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ರಾಜ್ಯ ಮಟ್ಟದ ಜಂಗಮ ಸಮಾಜದ ಬೃಹತ್ ಸಮಾವೇಶವನ್ನು ನಿಯೋಜಿಸಿತ್ತು.

ಜಂಗಮರು

ಜಂಗಮ ಲಿಂಗ, ವಿಭೂತಿ, ಜೋಳಿಗೆ, ಬೆತ್ತ , ಜೋಳದ ಹಿಟ್ಟು ಭಿಕ್ಷೆ ಅಥವಾ ಕಂತೆ ಭಿಕ್ಷೆ ಮಾಡುವುದನ್ನು ಕರ್ನಾಟಕದಲ್ಲಿ ಕಾಣಬಹುದು. ಕೇವಲ ಭಿಕ್ಷೆ ಬೇಡುವದಷ್ಟೆ ಅಲ್ಲ. ಸಮಾಜದಲ್ಲಿ ಬೆರೆತು ಹುಟ್ಟಿನಿಂದ ಅಂತ್ಯದವರೆಗೂ ಎಲ್ಲಾ ಕಾರ್ಯವನ್ನು ಮಾಡುವ ಪುರೋಹಿತನಾಗಿ, ಅವರು ನೀಡುವ ದಕ್ಷಿಣೆಯನ್ನು ಪಡೆದು, ಅವರಿಗೆ ಶುಭವನ್ನೇ ಆಶೀರ್ವದಿಸುವ ಗುರುವಾಗಿ, ಗ್ರಾಮದ ಸ್ವಾಮಿಯಾಗಿ ಶಿವನ ಪ್ರತಿರೂಪವೇ ಜಂಗಮ. ಅವನು ಸನ್ಯಾಸಿಯಲ್ಲ: ಸಂಸಾರಿಕನು ಈ ಜಂಗಮ. ಸಂಸಾರದ ಜಂಜಡ ಬಿಟ್ಟವನು ಸನ್ಯಾಸಿಯು ಜಂಗಮನಲ್ಲ. ಅವನು ಎಲ್ಲವನ್ನು ಬಿಟ್ಟವನು ಜಂಗಮ ಹೇಗೆ ಆದಾನು?. ಅವು ಸ್ವಾಮಿಯಾಗುವನೇ ಹೊರತು ಜಂಗಮನಲ್ಲ.

ಮೂಲ ಕಾಯಕ

ಜಂಗಮರು ಜೋಳದ ಹಿಟ್ಟು ಭಿಕ್ಷೆ, ಕೋರಣ್ಯ ಭಕ್ಷೆ ಕಂತೆ ಭಿಕ್ಷೆ ಮತ್ತು ವೈದಿಕ ಕಾರ್ಯಕ್ರಮಗಳನ್ನು ನೆಡೆಸಿಕೊಂಡು ಬಂದವರು.ಸ್ವಗ್ರಾಮದಲ್ಲಿದ್ದರೆ ಹಿಟ್ಟನ್ನು , ಬೇರೆ ಊರಿಗೆ ಹೋದರೆ ಕಾಳು ಅಥವಾ ಕಂತಿ ಬಿಕ್ಷೆಯನ್ನು ಮಾಡುವ ಕಾಯಕ.

ಕಾಲಜ್ಞಾನ ಹೇಳುತ್ತಾ ಊರೂರು ತಿರುಗುತ್ತ ಇರುವ "ಸಾರುವ ಜಂಗಮ ಅಥವಾ ಸಾರುವ ಅಯ್ಯನವರು". ಲಿಂಗಕ್ಕೆ ಕಂತಿ ಮಾಡುವ "ಕಂತಿ ಜಂಗಮ" ಊರಿನಲ್ಲಿ ಪೌರೋಹಿತ್ಯ ಮಾಡುವ ಹಿರೇಮಠದಯ್ಯ. ಇವರಿಗೆ ಸಹಾಯಕನಾಗಿರುವ ಜಂಗಮನೇ "ಮಠಪತ್ತಿ" ಪತ್ರಿ ಹಂಚುವವರು "ಪತ್ರಿ ಮಠದವರು"

ಹೀಗೆ ಹಲವಾರು ಹೆಸರುಗಳಿಂದ ಜಂಗಮನು ಸಮಾಜದ ಕಾರ್ಯವನ್ನು ಸದಾ ಮಾಡುತ್ತ ಬಂದ ಪ್ರಯುಕ್ತ ಜಂಗಮ ಜಗದೋದ್ಧಾರಕ ಎಂದು ಎನಿಸಿಕೊಂಡಿರುತ್ತಾನೆ. ಪಂಚಾಚಾರ್ಯರು ಊರಿನ ಜಂಗಮನಿಲ್ಲದೇ ಮುಂದೆ ಹೋಗುವದಿಲ್ಲ. ಅವರಿಗೆ ಸಾಮೀಪ್ಯ ಜಂಗಮನು.

ಜಂಗಮ ದೀಕ್ಷೆ

ವಟುಗಳಿಗೆ ವಿಭೂತಿ ಧಾರಣೆ, ಲಿಂಗ ಧಾರಣೆ, ಮಂತ್ರ ದೀಕ್ಷೆ ಜೊತೆಗೆ ಜೋಳಿಗೆ, ಬೆತ್ತ ಧಾರಣೆ ಮಾಡಲಾಗುತ್ತದೆ. ವೀರಶೈವರಲ್ಲಿ ಜಂಗಮ ದೀಕ್ಷೆ ಪಡೆದ ಸಂದರ್ಭ ನೀಡುವ ಜೋಳಿಗೆಯಲ್ಲಿ "ಕೋರು ಧಾನ್ಯ" ಬೇಡುವ ಪದ್ದತಿ. ವಟುಗಳು ಜೋಳಿಗೆ ಹೆಗಲಿಗೇರಿಸಿ "ಶಿವ ಶಿವ ಗುರು ಧರ್ಮ ಕೋರುಧಾನ್ಯ ಭಿಕ್ಷೆ " ನೀಡಿ ಎಂದು ವೀರಶೈವರ ಮನೆ ಮನೆಗೆ ತೆರಳಿ ಅವ್ರು ನೀಡುವ ಧಾನ್ಯ ಸ್ವೀಕರಿಸಿ, ಭಿಕ್ಷೆ ನೀಡಿದ ಕುಟುಂಬಕ್ಕೆ ಆಯುಸ್ಸು, ಅಶ್ವರ್ಯ ನೀಡಲೆಯಂದು ಶಿವ ಕರುಣಿಸಲಿಯಂದು ಆಶೀರ್ವದಿಸುವರು. ಸ್ವೀಕರಿಸಿದ ಭಿಕ್ಷೆಯನ್ನು ಮಠಕ್ಕೆ ಬರುವ ಭಕ್ತರಿಗೆ ದಾಸೋಹ ನೀಡಲಾಗುತ್ತದೆ.

ಜನಗಣತಿ ಗೊಂದಲ

ಇದುವರೆಗಿನ ಜನಗಣತಿಯಲ್ಲಿ ವೀರಶೈವ, ಲಿಂಗಾಯತ ಅಥವಾ ವೀರಶೈವ ಜಂಗಮ ಅಥವಾ ಹಿಂದೂ ಲಿಂಗಾಯತ ಅಥವಾ ಹಿಂದೂ ಜಂಗಮ ಎಂದು ಬರೆದುಕೊಂಡು ಬಂದಿದ್ದಾರೆ. ೧೯೫೦ ಹಾಗೂ ಅದಕ್ಕೂ ಮೊದಲು ಜಂಗಮರ ಕಾಯಕ ಕೇವಲ ಧಾರ್ಮಿಕ ಭಿಕ್ಷೆ ಬೇಡುವುದು, ಭವಿಷ್ಯ ಹೇಳುವುದು ಮಾತ್ರ. ಕೆಲವರು ಜೋಳದ ಹಿಟ್ಟು ಭಿಕ್ಷೆ ಮಾಡಿದರೆ ಇನ್ನೂ ಕೆಲವರು ಕಂತೆ ಭಿಕ್ಷೆ ಮಾಡುತ್ತಿದ್ದರು. ಇನ್ನೂ ಕೆಲವು ಕಡೆ ಕಂತೆ ಭಿಕ್ಷೆ ಮಾಡುವವರಿದ್ದಾರೆ. ನಿಜಾಮರ ಕಾಲದಲ್ಲೂ ಇಂಥ ಜಂಗಮರನ್ನು ಬೇಡ ಜಂಗಮರೆಂದು ಗುರುತಿಸಲಾಗಿತ್ತು ಎಂದು ಹೇಳಿದರು.

ಉಲ್ಲೇಖ

ಜಂಗಮ ಅಂದರೆ ಚಲಿಸುವುದು. ಚಲಿಸುವುದು ಅಂದರೆ ನಡೆದಾಡುವ ವ್ಯಕ್ತಿಯೂ ಅಲ್ಲ. ಶರಣರ ಹಲವಾರು ವಚನಗಳಲ್ಲಿ ಬಳಕೆಯಾಗಿರುವ ಜಂಗಮ ನಂಪುಸಕಾರ್ಥದಲ್ಲಿ ಪ್ರಯೋಗವಾಗಿರುವುದೆ ಈ ಮಾತಿಗೆ ಸಾಕ್ಷಿ. ಸಮಾಜವನ್ನು ಅವರು ಜಂಗಮವೆಂದು ಕರೆದಿರುವರೆ ಹೊರತು, ಒಂದು ಜಾತಿಯನ್ನು ಜಂಗಮವೆಂದು ಕರೆದಿಲ್ಲ. ಯಾವ ಆದರ್ಶಗಳನ್ನು ಹೇಳುತ್ತಾನೋ ಅದರಂತೆ ನಡೆಯುವವನೆ ಜಂಗಮ.

ಇವನ್ನೂ ನೋಡಿ

ಉಲ್ಲೇಖ

Tags:

ಜಂಗಮ ಪದದ ಆರ್ಥಜಂಗಮ ರ ಸಂಖ್ಯೆಜಂಗಮ ಸಮಾವೇಶಗಳುಜಂಗಮ ರುಜಂಗಮ ಮೂಲ ಕಾಯಕಜಂಗಮ ದೀಕ್ಷೆಜಂಗಮ ಜನಗಣತಿ ಗೊಂದಲಜಂಗಮ ಉಲ್ಲೇಖಜಂಗಮ ಇವನ್ನೂ ನೋಡಿಜಂಗಮ ಉಲ್ಲೇಖಜಂಗಮಜ್ಯೋತಿರ್ಲಿಂಗಲಿಂಗಾಯತ ಧರ್ಮ

🔥 Trending searches on Wiki ಕನ್ನಡ:

ರಾಷ್ಟ್ರಕೂಟರಾಜ್ಯಪಾಲಯೋಗಕೆ. ಅಣ್ಣಾಮಲೈಪರಮಾತ್ಮ(ಚಲನಚಿತ್ರ)ಕರ್ಮಧಾರಯ ಸಮಾಸಮೈಲಾರ ಲಿಂಗೇಶ್ವರ ದೇವಸ್ಥಾನ, ಮೈಲಾರಪ್ರಜಾಪ್ರಭುತ್ವರಾಷ್ಟ್ರೀಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಪರಿಷತ್ತುವಿವಾಹವಿದುರಾಶ್ವತ್ಥರಾಮಾಚಾರಿ (ಕನ್ನಡ ಧಾರಾವಾಹಿ)ವಿಶ್ವ ಪುಸ್ತಕ ಮತ್ತು ಕೃತಿಸ್ವಾಮ್ಯ ದಿನಭಾರತೀಯ ಸಂವಿಧಾನದ ತಿದ್ದುಪಡಿಸೂಫಿಪಂಥಕನ್ನಡ ಬರಹಗಾರ್ತಿಯರುಹಾವುಚಂದ್ರಗುಪ್ತ ಮೌರ್ಯಭಜರಂಗಿ (ಚಲನಚಿತ್ರ)ಸಂಪ್ರದಾಯಕರ್ನಾಟಕದಲ್ಲಿ ಪಂಚಾಯತ್ ರಾಜ್ಶೈಕ್ಷಣಿಕ ಮನೋವಿಜ್ಞಾನಆಸ್ಟ್ರೇಲಿಯರಾಮ ಮಂದಿರ, ಅಯೋಧ್ಯೆನದಿಭಾರತದ ಚುನಾವಣಾ ಆಯೋಗವೈದೇಹಿಕರಗ (ಹಬ್ಬ)ದಿಕ್ಕುಬೆಳವಲಅನುಪಮಾ ನಿರಂಜನಭಾರತದಲ್ಲಿನ ಜಾತಿ ಪದ್ದತಿಆಧುನಿಕ ಕನ್ನಡ ಕಾವ್ಯದ ಬೆಳವಣಿಗೆಸಿದ್ದರಾಮಯ್ಯರೇಣುಕಚಿದಾನಂದ ಮೂರ್ತಿರಾಯಲ್ ಚಾಲೆಂಜರ್ಸ್ ಬೆಂಗಳೂರುಮೆಂತೆವ್ಯಂಜನಬೃಂದಾವನ (ಕನ್ನಡ ಧಾರಾವಾಹಿ)ರಾಜಸ್ಥಾನ್ ರಾಯಲ್ಸ್ಕನ್ನಡ ಗುಣಿತಾಕ್ಷರಗಳುದ್ವಂದ್ವ ಸಮಾಸಶ್ರೀ ರಾಘವೇಂದ್ರ ಸ್ವಾಮಿಗಳುಅಕ್ಷಾಂಶ ಮತ್ತು ರೇಖಾಂಶವೈದಿಕ ಯುಗಡೊಳ್ಳು ಕುಣಿತಋತುಚಕ್ರರಾಷ್ಟ್ರೀಯ ಶಿಕ್ಷಣ ನೀತಿಕಳಿಂಗ ಯುದ್ದ ಕ್ರಿ.ಪೂ.261ಕಾನೂನುಪರಿಣಾಮಬಾಗಿಲುಬಹುವ್ರೀಹಿ ಸಮಾಸರಾಗಿಉದಯವಾಣಿಜಶ್ತ್ವ ಸಂಧಿಮಳೆಇಮ್ಮಡಿ ಪುಲಕೇಶಿಬೆಲ್ಲಸಮುದ್ರಗುಪ್ತವಿಕಿಪೀಡಿಯಭಾರತದ ಪ್ರಧಾನ ಮಂತ್ರಿಉತ್ತರ ಕರ್ನಾಟಕಯಣ್ ಸಂಧಿತಲಕಾಡುಯಲ್ಲಮ್ಮ ದೇವಿ ದೇವಸ್ಥಾನ ಸವದತ್ತಿಒಡೆಯರ್ದ್ರಾವಿಡ ಭಾಷೆಗಳುಕರ್ನಾಟಕ ಸಂಗೀತನಾಯಿತ್ರಿಶಾಏಡ್ಸ್ ರೋಗಕವಿಪ್ಯಾರಾಸಿಟಮಾಲ್ಸಂಗೊಳ್ಳಿ ರಾಯಣ್ಣ🡆 More