ಚಿಲಿ

ದಕ್ಷಿಣ ಅಮೇರಿಕದ ಕರಾವಳಿಯುದ್ದಕ್ಕೂ ಪಟ್ಟಿಯಂತೆ ಆಂಡಿಸ್ ಪರ್ವತ ಮತ್ತು ಪೆಸಿಫಿಕ್ ಮಹಾಸಾಗರಗಳ ನಡುವೆ ಚಾಚಿರುವ ದೇಶವೇ ಚಿಲಿ.

ಇದರ ಪೂರ್ವಕ್ಕೆ ಅರ್ಜೆಂಟೀನ, ಈಶಾನ್ಯಕ್ಕೆ ಬೊಲಿವಿಯಾ ಮತ್ತು ಉತ್ತರಕ್ಕೆ ಪೆರು ದೇಶಗಳಿವೆ.

ಚಿಲಿ ಗಣರಾಜ್ಯ
República de Chile
Flag of ಚಿಲಿ
Flag
Coat of arms of ಚಿಲಿ
Coat of arms
Motto: Por la Razón o la Fuerza
(ಸ್ಪಾನಿಷ್ ಭಾಷೆಯಲ್ಲಿ: "ಹಕ್ಕಿನಿಂದ ಅಥವಾ ಶಕ್ತಿಯಿಂದ")
Anthem: ಹಿಮ್ನೊ ನಾಸನಾಲ್
Location of ಚಿಲಿ
Capitalಸ್ಯಾಂಟಿಯಾಗೊ
Largest cityಸ್ಯಾಂಟಿಯಾಗೊ
Official languagesಸ್ಪಾನಿಷ್
Governmentಗಣರಾಜ್ಯ
• ರಾಷ್ಟ್ರಪತಿ
ಮಿಷೆಲ್ ಬಾಕಲೆಟ್
ಸ್ವಾತಂತ್ರ್ಯ 
ಸ್ಪೇನ್ ನಿಂದ
• ಮೊದಲ ರಾಷ್ಟ್ರೀಯ ಸರಕಾರ ಜಂತಾ
ಸೆಪ್ಟೆಂಬರ್ ೧೮, ೧೮೧೦
• ಘೋಷಣೆ
ಫೆಬ್ರವರಿ ೧೨, ೧೮೧೮
• ಮಾನ್ಯತೆ
ಏಪ್ರಿಲ್ ೨೫ ೧೮೪೪
• Water (%)
1.07%2
Population
• ಜೂನ್ ೨೦೦೬ estimate
೧,೬೪,೩೨,೬೭೪ (೬೦ನೇ)
• ೨೦೦೨ census
೧,೫೧,೧೬,೪೩೫
GDP (PPP)೨೦೦೫ estimate
• Total
$193,213 million (೪೩ನೇ)
• Per capita
$11,937 (೫೬ನೇ)
HDI (೨೦೦೩)0.854
very high · ೩೭ನೇ
Currencyಚಿಲಿ ಪೆಸೊ (CLP)
Time zoneUTC-4 (—)
• Summer (DST)
UTC-3 (—)
Calling code56
Internet TLD.cl
1 The legislative body operates in Valparaíso
2 Includes Easter Island and Isla Sala y Gómez; does not include 1,250,000 km² of claimed territory in Antarctica

ಇತಿಹಾಸ

ಚಿಲಿ 
ಕೆಂದ್ರೀಯ ಮತ್ತು ದಕ್ಷಿಣ ಚಿಲಿಯ ಮೂಲನಿವಾಸಿಗಳಾದ "ಮಾಪುಚೆ" ಜನಾಂಗ

ಸುಮಾರು ೧೦,೦೦೦ ವರ್ಷಗಳ ಹಿಂದೆ ಅಮೆರಿಕದ ಮೂಲನಿವಾಸಿಗಳು ಅಲೆದಾಡುತ್ತ ದಕ್ಷಿಣ ಅಮೆರಿಕದ ಪಶ್ಚಿಮ ಕರಾವಳಿಯ ಫಲವತ್ತಾದ ಪ್ರದೇಶದಲ್ಲಿ ನೆಲೆಸಿದರು. ಕ್ರಿ.ಶ. ೧೫೨೦ರಲ್ಲಿ ಪೋರ್ಚುಗೀಸ್ ನಾವಿಕ ಫರ್ಡಿನೆಂಡ್ ಮಗೆಲ್ಲನ್ ಮೊದಲು ಬಂದಿಳಿದ ಮೇಲೆ ೧೫೩೫ರಲ್ಲಿ ಸ್ಪೇನಿನ ನಾವಿಕರು ಬಂಗಾರವನ್ನು ಹುಡುಕುತ್ತ ಬಂದಿಳಿದರು.

ಸ್ಪಾನಿಷ್ ವಸಾಹತು

ಚಿಲಿಯ ಆಕ್ರಮಣ ೧೫೪೦ರಿಂದ ಭರದಿಂದ ಸಾಗಿತು. ಪೆದ್ರೊ ಡಿ ವಾಲ್ಡಿವಿಯಾ ಎಂಬ ಸ್ಪಾನಿಷ್ ಸೇನಾಪತಿ ಸ್ಯಾಂಟಿಯಾಗೊ ನಗರವನ್ನು ಹುಟ್ಟುಹಾಕಿದನು. ಚಿಲಿ ಪ್ರದೇಶದ ಭೂಮಿಯ ಫಲವತ್ತತೆಯನ್ನು ಅರಿತ ಸ್ಪಾನಿಷರು ಅದನ್ನು ಪೆರು ರಾಜ್ಯದ ಭಾಗವನ್ನಾಗಿ ಮಾಡಿದರು.

ನಂತರ ಬಂದಿಳಿದ ಯೂರೋಪಿಯನ್ನರು ಮೂಲನಿವಾಸಿಗಳ ವಿರೋಧ ಕಟ್ಟಿಕೊಳ್ಳಬೇಕಾಯಿತು. ೧೫೫೩ರಲ್ಲಿ ಮಾಪುಚೆ ಎಂಬ ಮೂಲನಿವಾಸಿ ಜನಾಂಗವು ವಾಲ್ಡಿವಿಯಾನನ್ನು ಕೊಂದು ಸ್ಪಾನಿಷ್ ವಸಾಹತುಗಳನ್ನು ನಾಶ ಮಾಡಿದರು. ಮತ್ತೆ ೧೫೯೮ ಹಾಗೂ ೧೬೫೫ರಲ್ಲಿ ವಸಾಹತುಶಾಹಿಗಳ್ಯ್ ಮತ್ತು ಮೂಲನಿವಾಸಿಗಳ ಮಧ್ಯೆ ಚಕಮಕಿ ನಡೆದೇ ಇತ್ತು. ೧೬೮೩ರಲ್ಲಿ ಗುಲಾಮ ಪದ್ಧತಿಯನ್ನು ರದ್ದು ಮಾಡಿದ ಮೇಲೆ ಇಬ್ಬರ ನಡುವೆ ಸಂಧಾನವಾಗಿ ವಾಣಿಜ್ಯ-ವ್ಯವಹಾರಗಳು ಪ್ರಾರಂಭವಾದವು.

೧೮೦೮ರಲ್ಲಿ ನೆಪೋಲಿಯನ್ ಸಹೋದರನಾದ ಜೋಸೆಫನು ಸ್ಪಾನಿಷ್ ರಾಜಮನೆತನವನ್ನು ಉಚ್ಚಾಟಿಸಿ ಸೇನಾಡಳಿತವನ್ನು ಸ್ಥಾಪಿಸಿದನು. ಈ ಆಡಳಿತ ಚಿಲಿಯನ್ನು ಸ್ಪಾನಿಷ್ ರಾಜ್ಯದ ಸ್ವಾಯತ್ತ ಗಣರಾಜ್ಯವೆಂದು ಘೋಷಿಸಿತು. ಇದರ ಬೆನ್ನಲ್ಲಿಯೇ ಚಿಲಿಯ ಸ್ವಾತಂತ್ರ್ಯ ಚಳುವಳಿ ಆರಂಭವಾಯಿತು. ನಂತರ ಸ್ಪೇನ್ ರಾಜಮನೆತನದಿಂದ ಚಿಲಿಯನ್ನು ಮರು ಆಕ್ರಮಣ ಮಾಡಲು ಪ್ರಯತ್ನ ನಡೆದು ಹಿಂಸಾತ್ಮಕ ಘರ್ಷಣೆಗೆ ಕಾರಣವಾಯಿತು.

ಸ್ವಾತಂತ್ರ್ಯ

ಚಿಲಿ 
ಬರ್ನಾರ್ಡೊ ಓ' ಹಿಗ್ಗಿನ್ಸ್

೧೮೧೭ರಲ್ಲಿ ಚಿಲಿಯ ಪ್ರಖ್ಯಾತ ದೇಶಪ್ರೇಮಿ ಬರ್ನಾರ್ಡೊ ಓ' ಹಿಗ್ಗಿನ್ಸ್ ಮತ್ತು ಅರ್ಜೆಂಟೀನದ ಸ್ವಾತಂತ್ರ್ಯ ಹೋರಾಟದ ನಾಯಕ ಯೋಸೆ ಡಿ ಸಾನ್ ಮಾರ್ಟಿನ್ ಆಂಡಿಸ್ ಪರ್ವತ ಶ್ರೇಣಿಯನ್ನು ದಾಟಿ ಸ್ಪಾನಿಷ್ ರಾಜಸೇನೆಯನ್ನು ಸೋಲಿಸಿದರು. ಫೆಬ್ರವರಿ ೧೨, ೧೮೧೮ರಂದು ಚಿಲಿಯನ್ನು ಓ' ಹಿಗ್ಗಿನ್ಸ್ ನೇತೃತ್ವದಲ್ಲಿ ಸ್ವತಂತ್ರ ಗಣರಾಜ್ಯವೆಂದು ಘೋಷಿಸಲಾಯಿತು. ಆದರೆ ಈ ಕ್ರಾಂತಿ ಸಾಮಾಜಿಕ ಬದಲಾವಣೆಯನ್ನೇನೂ ಉಂಟು ಮಾಡಲಿಲ್ಲ; ಶ್ರೀಮಂತ ಜಮೀನ್ದಾರರು ಅತಿ ಪ್ರಭಾವಶಾಲಿಯಾಗಿ ಉಳಿದರು. ೧೯ನೇ ಶತಮಾನದ ಕೊನೆಯಲ್ಲಿ ಸರಕಾರ ನಿಷ್ಕರುಣೆಯಿಂದ ಮಾಪುಚೆ ಜನರನ್ನು ದಮನಗೊಳಿಸಿತು. ೧೮೯೧ರಲ್ಲಿ ನಡೆದ ಅಂತಃಕಲಹದ ಪ್ರತಿಫಲವಾಗಿ ಸಂಸತ್ತಿನ ಮಾದರಿ ಪ್ರಜಾಪ್ರಭುತ್ವದ ಸ್ಥಾಪನೆಯಾಯಿತು.

ಆಧುನಿಕ ಕಾಲ

ಶ್ರೀಮಂತ ಜಮೀನ್ದಾರರ ಶೋಷಣೆಯ ವಿರೋಧವಾಗಿ ಬೆಳೆಯುತ್ತಿದ್ದ ಮಧ್ಯಮ ಶ್ರಮಿಕ ವರ್ಗಗಳು ೧೯೨೦ರ ದಶಕದಲ್ಲಿ ಮಾರ್ಕ್ಸಿಸ್ಟ್ ಗುಂಪುಗಳ ಕಡೆ ವಾಲಿದರು. ರಾಜಕೀಯ ಅಸ್ಥಿರತೆಯ ಈ ದಶಕದಲ್ಲಿ ಹಲವಾರು ಸರಕಾರಗಳು ಮತ್ತು ಸರ್ವಾಧಿಕಾರಿಗಳು ಬಂದು ಹೋಗಿ ಕೊನೆಗೆ ೧೯೩೨ರಲ್ಲಿ ಸಾಂವಿಧಾನಿಕ ಆಡಳಿತದ ಮರುಸ್ಥಾಪನೆಯಾಯಿತು. ೧೯೬೪ರಲ್ಲಿ ಎಡ್ವರ್ಡೊ ಫ್ರೆಯ್ ಬಹುಮತದಿಂದ ಚುನಾಯಿತನಾಗಿ ಹಲವಾರು ಸಾಮಾಜಿಕ ಮತ್ತು ಆರ್ಥಿಕ ಕಾರ್ಯಕರಮಗಳನ್ನು ತಂದನು. ಫ್ರೆಯ್ ಆಡಳಿತದ ಕೊನೆ ವರ್ಷಗಳಲ್ಲಿ ಕಮ್ಯೂನಿಸ್ಟ್ ಪಕ್ಷಗಳು ಬಲಿಷ್ಠವಾಗಿ ನಂತರ ಸರಕಾರ ಸ್ಥಾಪಿಸಿದವು. ಈ ಸರಕಾರ ಶ್ರಮಿಕ ವರ್ಗದ ಹಿತಾಸಕ್ತಿ, ಕೃಷಿ ರಂಗದ ಸುಧಾರಣೆ, ದೇಶದ ಆರ್ಥಿಕತೆಯ ಸಂಘಟನೆ, ಮತ್ತು ಹೊಸ ವಿದೇಶಿ ನೀತಿ - ಹೀಗೆ ಹಲವಾರು ಕಾರ್ಯಕ್ರಮಗಳನ್ನು ಕೈಗೊಂಡಿತು. ಇದರ ಜೊತೆಗೆ ಮಿಲಿಯಾಂತರ ಎಕರೆ ಭೂಮಿಯನ್ನು ಭೂಮಿಹೀನ ಕೃಷಿಕರಿಗೆ ಮರು ಹಂಚಿಕೆ ಮಾಡಲಾಯಿತು.

ಆದರೆ ಕಮ್ಯೂನಿಸ್ಟ್ ಸರಕಾರದ ಪ್ರಗತಿಯನ್ನು ಕಂಡು ಅಮೆರಿಕ ತನ್ನ ಗುಪ್ತಚರ ಇಲಾಖೆಯಿಂದ ಚಿಲಿಯ ಸರಕಾರದ ವಿರೋಧಿಗಳಿಗೆ ಧನಸಹಾಯ ಮಾಡಿ ಸರಕಾರವನ್ನು ಅಸ್ಥಿರಗೊಳಿಸುವ ಪ್ರಯತ್ನ ಮಾಡಿತು. ೧೯೭೨೧ರ ಹೊತ್ತಿಗೆ ಸರಕಾರದ ಎಲ್ಲೆ ಅಭಿವೃದ್ಧಿ ಕಾರ್ಯಗಳು ಕುಂಠಿತಗೊಂಡು ಸರಕಾರದ ಪರ ಮತ್ತು ವಿರೋಧಿಗಳ ಮಧ್ಯೆ ಗುಂಪುಘರ್ಷಣೆ ಏರ್ಪಟ್ಟವು. ೧೯೭೩ರಲ್ಲಿ ಕ್ಷಿಪ್ರಕ್ರಾಂತಿ ನಡೆದು ಸೇನಾಧಿಕಾರಿ ಜನರಲ್ ಆಗಸ್ಟೊ ಪಿನೊಚೆ ಸರ್ವಾಧಿಕಾರಿಯಾದನು. ಆರಂಭದ ವರ್ಷಗಳಲ್ಲಿ ವ್ಯಾಪಕವಾಗಿ ಮಾನವ ಹಕ್ಕುಗಳ ಅತಿಕ್ರಮಣವಾಯಿತು. ಪಿನೊಚೆ ಆಡಳಿತದ ಆರಂಭಿಕ ೬ ತಿಂಗಳಲ್ಲಿ ಕನಿಷ್ಠ ಒಂದು ಸಾವಿರ ಜನರ ಹತ್ಯೆ ಮಾಡಲಾಯಿತು. ನಂತರದ ೧೬ ವರ್ಷಗಳಲ್ಲಿ ಎರಡು ಸಾವಿರ ಜನರನ್ನು ಕೊಲ್ಲಲಾಯಿತು ಹಾಗೂ ೩೦,೦೦೦ ಜನರನ್ನು ದೇಶ ಬಿಟ್ಟು ಉಚ್ಚಾಟಿಸಲಾಯಿತು.

ಪ್ರಜಾಪ್ರಭುತ್ವದ ಮರುಸ್ಥಾಪನೆ

ಚಿಲಿ 
ಚಿಲಿ ದೇಶದ ನಕ್ಷೆ
ಚಿಲಿ 
ಅಟಕಾಮಾ ಮರುಭೂಮಿ

೧೯೮೦ರ ದಶಕದ ಉತ್ತರಾರ್ಧದಲ್ಲಿ ನಿಧಾನವಾಗಿ ಆರ್ಥಿಕತೆಯ ಉದಾರೀಕರಣ ಮಾಡಲಾಯಿತು. ಅಕ್ಟೋಬರ್ ೫, ೧೯೮೮ರಂದು ನಡೆದ ಜನಮತ ಸಂಗ್ರಹಣೆಯಲ್ಲಿ ಪಿನೊಚೆಯ ಆಡಳಿತವನ್ನು ತಿರಸ್ಕರಿಸಲಾಯಿತು. ೧೭ ಪಕ್ಷಗಳ ಸಮ್ಮಿಶ್ರ ಸರಕಾರ ಅಸ್ತಿತ್ವಕ್ಕೆ ಬಂದು ಪ್ರಜಾಪ್ರಭುತ್ವ ಮರುಸ್ಥಾಪನೆಯಾಯಿತು.

ಜನವರಿ ೨೦೦೬ರಲ್ಲಿ ಸಮಾಜವಾದಿ ಪಕ್ಷದ ಮಿಷೆಲ್ ಬಾಕಲೆಟ್ ರನ್ನು ಚಿಲಿ ದೇಶದ ಪ್ರಥಮ ಮಹಿಳಾ ಅಧ್ಯಕ್ಷರನ್ನಾಗಿ ಚುನಾಯಿಸಲಾಯಿತು.

ಆಡಳಿತಾತ್ಮಕ ವಿಭಾಗಗಳು

ಚಿಲಿಯನ್ನು ೧೩ ಪ್ರದೇಶಗಳಾಗಿ ಭಾಗಿಸಲಾಗಿದೆ. ಪ್ರತಿಯೊಂದು ಪ್ರದೇಶವನ್ನು ರಾಷ್ಟ್ರಪತಿ ಆರಿಸಿದ "ಇಂಟೆಂಡೆಂಟ್" ಆಡಳಿತ ನಡೆಸುತ್ತಾರೆ. ಪ್ರತಿಯೊಡು ಪ್ರದೇಶವನ್ನು ಪ್ರಾಂತ್ಯಗಳನಾಗಿ, ಮತ್ತು ಪ್ರಾಂತ್ಯವನ್ನು ಮುನಿಸಿಪಾಲಿಟಿಗಳನ್ನಾಗಿ ವಿಭಜಿಸಲಾಗಿದೆ.

ಭೂಗೋಳ

ಚಿಲಿ 
ಚುಂಗಾರ ಸರೋವರ ಮತ್ತು ಉತ್ತರದಲ್ಲಿ ಪರಿನಕೋತ ಜ್ವಾಲಾಮುಖಿ ಪರ್ವತ

ಆಂಡಿಸ್ ಪರ್ವತಗಳ ಪಶ್ಚಿಮಕ್ಕೆ ಕರಾವಳಿ ಪ್ರದೇಶದಲ್ಲಿ ೪,೬೩೦ ಕಿ.ಮಿ ಉದ್ದನೆ ಪಟ್ಟಿಯಂತೆ ಚಾಚಿರುವ ಚಿಲಿ, ಕೇವಲ ೪೩೦ ಕಿ.ಮಿ. ಅಗಲವಿದೆ. ಹೀಗೆ ಚಿಲಿ ಪ್ರಪಂಚದ ಅತಿ ಉದ್ದನೆಯ (ಉತ್ತರದಿಂದ ದಕ್ಷಿಣ) ದೇಶವಾಗಿದೆ. ೧೨,೫೦,೦೦೦ ಚದರ ಕಿ.ಮಿ.ನಷ್ಟು ಅಂಟಾರ್ಕ್ಟಿಕ ಭೂಪ್ರದೇಶದ ಭಾಗವನ್ನೂ ಒಳಗೊಂಡಿದೆ. ಇದರಲ್ಲಿರುವ ಭೂಭಾಗದ ವೈವಿಧ್ಯತೆ ಬಹಳ.

ಉತ್ತರದಲ್ಲಿರುವ ಅಟಕಾಮ ಮರುಭೂಮಿ, ತಾಮ್ರ ಮತ್ತು ನೈಟ್ರೇಟುಗಳಲ್ಲಿ ಸಂಪದ್ಭರಿತವಾಗಿದೆ. ರಾಜಧಾನಿ ಸ್ಯಾಂಟಿಯಾಗೊ ಮತ್ತು ಸುತ್ತಲಿನ ಕಣಿವೆಯಲ್ಲಿಯೇ ದೇಶದ ಅತ್ಯಧಿಕ ಜನರು ವಾಸವಾಗಿದ್ದಾರೆ. ಚಿಲಿಯ ದಕ್ಷಿಣ ಭಾಗದಲ್ಲಿ ಕಾಡು, ಜ್ವಾಲಾಮುಖಿ, ಹಾಗೂ ಸರೋವರಗಳಿವೆ. ದಕ್ಷಿಣದ ಕರಾವಳಿ ದ್ವೀಪಸಮೂಹ, ಜೌಗು ಪ್ರದೇಶ, ಸಮುದ್ರದ ಚಾಚು ಪ್ರದೇಶ ಹಾಗೂ ಆಳವಿಲ್ಲದ ನದಿಗಳ ಆಗರವಾಗಿದೆ.

ಅರ್ಥವ್ಯವಸ್ಥೆ

ಚಿಲಿ 
ಚಿಲಿಯ ಆರ್ಥಿಕ ಕೇಂದ್ರವಾದ ಸ್ಯಾಂಟಿಯಾಗೊ

ಕಳೆದ ಮೂರು ದಶಕಗಳಿಂದ ಖಾಸಗೀಕರಣ ಮಾಡುತ್ತ ಬಂದಿರುವ ಸರಕಾರ, ತನ್ನ ಪಾತ್ರವನ್ನು ಕೇವಲ ನಿಬಂಧಕನಾಗಿ ಉಳಿಸಿಕೊಂಡಿದೆ. ೨೦೦೪ರಲ್ಲಿ ಆರ್ಥಿಕ ಪ್ರಗತಿ ೬.೧% ಆಗಿತ್ತು. ಇದಕ್ಕೆ ಮುಖ್ಯ ಕಾರಣ ತಾಮ್ರಕ್ಕೆ ಹೆಚ್ಚಾದ ಬೇಡಿಕೆ. ಭಾರತ ಸೇರಿದಂತೆ ಪ್ರಪಂಚದ ಹಲವಾರು ದೇಶಗಳ ಜೊತೆ ಮುಕ್ತ ವಾಣಿಜ್ಯ ಒಪ್ಪಂದಗಳನ್ನು ಮಾಡಿಕೊಂಡಿದೆ. ಇತ್ತೀಚೆಗಿನ ವರ್ಷಗಳಲ್ಲಿ ನಿರುದ್ಯೋಗ ೮-೧೦% ನಷ್ಟು ಇದೆ. ಆದರೆ ಸಾಮಾನ್ಯವಾಗಿ ಜನರ ಆದಾಯ ಹಣದುಬ್ಬರದ ದರಕ್ಕಿಂತ ಅಧಿಕವಾಗಿ ಜೀವನಮಟ್ಟ ಹೆಚ್ಚಾಗಲು ಕಾರಣವಾಗಿದೆ. ಬಡತನದ ರೇಖೆ (ಕನಿಷ್ಠ ಪೌಷ್ಟಿಕ ಆಹಾರದ ಎರಡರಷ್ಟು ದರ)ಯ ಕೆಲಗಿರುವವರ ದರ ೧೯೮೭ರಲ್ಲಿ ೪೭% ಇದ್ದದ್ದು ೨೦೦೪ರಲ್ಲಿ ೧೮%ಗೆ ಇಳಿದಿದೆ. ಆದರೆ ಸಂಪತ್ತಿನ ಹಂಚಿಕೆಯಲ್ಲಿ ಬಹಳಷ್ಟು ಅಸಮಾನತೆಗಳಿವೆ. ಕೇವಲ ೧೦.೫% ಜನರಲ್ಲಿ ದೇಶದ ೯೦% ಸಂಪತ್ತು ಶೇಖರಣೆಗೊಂಡಿದೆ.

ಜನತೆ ಮತ್ತು ಜನಾಂಗ

ಚಿಲಿಯ ಬಹುತೇಕ ಜನರು ಸ್ಪಾನಿಷ್ ಸಂತತಿಗಳಾಗಿದ್ದಾರೆ. ಜೊತೆಗೆ ಮೂಲನಿವಾಸಿಗಳು ಮತ್ತು ಈ ಇಬ್ಬರ ಮಿಶ್ರತಳಿ ಜನಾಂಗವೂ ಇದೆ. ದೇಶದ ೪೦% ಜನ ರಾಜಧಾನಿ ಸ್ಯಾಂಟಿಯಾಗೊನಲ್ಲಿ ವಾಸಿಸುತ್ತಾರೆ. ೧೦.೫% ಜನ ತಮ್ಮನ್ನು ಮೂಲನಿವಾಸಿಗಳ ಸಂತತಿ ಎಂದು ಗುರುತಿಸಿಕೊಳ್ಳುತ್ತಾರೆ. ಸಾಮಾನ್ಯವಾಗಿ ಇವರು ಸಾಮಾಜಿಕ-ಆರ್ಥಿಕವಾಗಿ ಕೆಳಗಿನ ಮಟ್ಟದಲ್ಲಿರುವವರು.

ಸಂಸ್ಕೃತಿ

ಇನ್ಕಾ ನಾಗರಿಕತೆಯ ಕಾಲದಲ್ಲಿ ಉತ್ತರ ಚಿಲಿ ಒಂದು ಮುಖ್ಯ ಸಾಂಸ್ಕೃತಿಕ ಕೇಂದ್ರವಾಗಿತ್ತು. ನಂತರದ ಶತಮಾನಗಳಲ್ಲಿ ಸ್ಪಾನಿಷ್ ವಸಾಹತುಶಹಿಗಳದೇ ಪ್ರಭಾವ. ಚಿಲಿಯನ್ನರಿ ತಮ್ಮ ದೇಶವನ್ನು 'ಕವಿಗಳ ದೇಶ' ಎಂದು ಹೇಳಿಕೊಳ್ಳುತ್ತಾರೆ. ಗಾಬ್ರಿಯೆಲ ಮಿಸ್ತ್ರಾಲ್ ಸಾಹಿತ್ಯದ ನೊಬೆಲ್ ಪ್ರಶಸ್ತಿ ಗಳಿಸಿದ ಮೊದಲ ಚಿಲಿಯನ್ನನಾದ. ಚಿಲಿಯ ಅತಿ ಪ್ರಖ್ಯಾತ ಕವಿ ಪಾಬ್ಲೊ ನೆರುಡಾ ೧೯೭೧ರಲ್ಲಿ ನೊಬೆಲ್ ಪ್ರಶಸ್ತಿ ಗಳಿಸಿದನು.

ಧರ್ಮ

೨೦೦೨ರ ಜನಗಣತಿಯ ಪ್ರಕಾರ ಸುಮಾರು ೬೦% ಜನ ತಮ್ಮನ್ನು ಕ್ಯಾಥಲಿಕ್‌ಗಳೆಂದು ಗುರುತಿಸಿಕೊಂಡಿದ್ದಾರೆ. ೨೫% ಜನ ಪ್ರೊಟೆಸ್ಟೆಂಟರು, ೮.೩% ಜನ ನಾಸ್ತಿಕರು. ಕ್ಯಾಥಲಿಕ್ ಚರ್ಚಿನ ಅಧಿಕಾರ ವ್ಯಾಪ್ತಿ ಈಗ ಕಡಿಮೆಯಾಗಿದ್ದರೂ, ಸಮಾಜದ ಮೇಲೆ ಇದರ ಪ್ರಭಾವ ಅಧಿಕವಾಗಿದೆ. ಸ೦ವಿಧಾನವು ಧರ್ಮದ ಸ್ವಾತ೦ತ್ರವನ್ನು ಒದಗಿಸಿದೆ, ಅದೆ ರೀತಿಯಾಗಿ ಇನ್ನಿತರ ಕಾಯ್ದೆ ಕಾನೂನುಗಳು ಧರ್ಮದ ಸ್ವಾತ೦ತ್ರಕ್ಕೆ ಪೂರಕವಾಗಿವೆ.

ಕ್ರಿಸ್ಮಸ, ಗುಡ್-ಫಾಯ್ಡೆ ಮತ್ತು ಅನೇಕ ಹಬ್ಬಗಳು ಸರಕಾರಿ ಘೋಶಿತ ರಜೆಯೆ೦ದು ಆಚರಿಸಲಾಗುತ್ತವೆ.

ಭಾಷೆ

ಚಿಲಿ 
ಕೊಪಿಹ್ಯು ಹೂವು

ಚಿಲಿಯನ್ ಸ್ಪಾನಿಷ್ ಚಿಲಿಯೇತರರಿಗೆ ಬಹು ಕಷ್ಟವಾಗಿ ಅರ್ಥವಾಗುವ ಭಾಷೆ. ಇದಕ್ಕೆ ಕಾರಣ ಇವರು ಮಾತನಾಡುವ ಶೈಲಿ. ಇವರು ಅತಿ ವೇಗವಾಗಿಯೂ ಮಾತನಾಡುತ್ತಾರೆ. ಇಂಗ್ಲಿಷ್ ಭಾಷೆಯನ್ನು ದ್ವಿತೀಯ ಭಾಷೆಯನ್ನಾಗಿ ಅಭ್ಯಾಸ ಮಾಡಲಾಗುತ್ತದೆ. ಆಂಗ್ಲ ಭಾಷೆಯ ಕೆಲವು ಶಬ್ದಗಳು ಇಲ್ಲಿ ಕಂಡು ಬಂದರೂ, ಅವುಗಳ ಪ್ರಯೋಗ ಮತ್ತು ಉಚ್ಚರಣೆ ಶೈಲಿಯ ಕಾರಣ ಗುರುತು ಹಿಡಿಯಲು ದುಃಸಾಧ್ಯ.

ರಾಷ್ಟ್ರೀಯ ಸಂಕೇತಗಳು

ಕೊಪಿಹ್ಯು ಚಿಲಿಯ ರಾಷ್ಟ್ರೀಯ ಹೂವಾಗಿದೆ. ಮೇಲಿನ ಬಾಕ್ಸಿನಲ್ಲಿ ಚಿತ್ರಿತ ರಾಷ್ಟ್ರ ಲಾಂಛನ ಎರಡು ಪ್ರಾಣಿಗಳನ್ನು ಒಳಗೊಂಡಿದೆ - "ಕಾಂಡಾರ್" (ಪರ್ವತಗಳಲ್ಲಿ ಜೀವಿಸುವ ಒಂದು ಬಗೆಯ ರಣಹದ್ದು) ಮತ್ತು "ಹ್ಯೂಮುಲ್" (ಬಿಳಿ ಬಾಲದ ಜಿಂಕೆ).

ಇವನ್ನೂ ನೋಡಿ

ಹೊರಗಿನ ಸಂಪರ್ಕಗಳು


ಚಿಲಿ  ದಕ್ಷಿಣ ಅಮೇರಿಕ ಖಂಡದ ದೇಶಗಳು
ಅರ್ಜೆಂಟೀನ | ಬೊಲಿವಿಯ | ಬ್ರೆಜಿಲ್ | ಚಿಲಿ | ಕೊಲೊಂಬಿಯ | ಎಕ್ವಡಾರ್ | ಗಯಾನ | ಪೆರಗ್ವೆ | ಪೆರು | ಸುರಿನಾಮ್ | ಉರುಗ್ವೆ | ವೆನೆಜುವೆಲಾ

Tags:

ಚಿಲಿ ಇತಿಹಾಸಚಿಲಿ ಆಡಳಿತಾತ್ಮಕ ವಿಭಾಗಗಳುಚಿಲಿ ಭೂಗೋಳಚಿಲಿ ಅರ್ಥವ್ಯವಸ್ಥೆಚಿಲಿ ಜನತೆ ಮತ್ತು ಜನಾಂಗಚಿಲಿ ಸಂಸ್ಕೃತಿಚಿಲಿ ಧರ್ಮಚಿಲಿ ಭಾಷೆಚಿಲಿ ರಾಷ್ಟ್ರೀಯ ಸಂಕೇತಗಳುಚಿಲಿ ಇವನ್ನೂ ನೋಡಿಚಿಲಿ ಹೊರಗಿನ ಸಂಪರ್ಕಗಳುಚಿಲಿಅರ್ಜೆಂಟೀನಆಂಡಿಸ್ದಕ್ಷಿಣ ಅಮೇರಿಕಪೆರುಪೆಸಿಫಿಕ್ ಮಹಾಸಾಗರಬೊಲಿವಿಯಾ

🔥 Trending searches on Wiki ಕನ್ನಡ:

ಕನ್ನಡ ಸಂಧಿಕನ್ನಡದಲ್ಲಿ ವಚನ ಸಾಹಿತ್ಯನವಣೆಚಿಪ್ಕೊ ಚಳುವಳಿಕ್ರೈಸ್ತ ಧರ್ಮಅಮೇರಿಕ ಸಂಯುಕ್ತ ಸಂಸ್ಥಾನಸೀತಾ ರಾಮಬಿ. ಆರ್. ಅಂಬೇಡ್ಕರ್ಕಪ್ಪೆಸಂಕ್ಷಿಪ್ತ ಸಂಧ್ಯಾವಂದನೆ ಮಂತ್ರ ಮತ್ತು ಭೋಜನ ವಿಧಿಸುರಪುರದ ವೆಂಕಟಪ್ಪನಾಯಕಜೀನ್-ಜಾಕ್ವೆಸ್ ರೂಸೋವ್ಯಂಜನಜೈನ ಧರ್ಮ ಗ್ರಂಥ ತತ್ತ್ವಾರ್ಥ ಸೂತ್ರಅದಿಲಾಬಾದ್ ಜಿಲ್ಲೆಮಲಾವಿಪಠ್ಯಪುಸ್ತಕಎತ್ತಿನಹೊಳೆಯ ತಿರುವು ಯೋಜನೆವಿಷ್ಣುವರ್ಧನ್ (ನಟ)ಜಲಿಯನ್‍ವಾಲಾ ಬಾಗ್ ಹತ್ಯಾಕಾಂಡರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು (೨೦೦೫)ಸಂವತ್ಸರಗಳುಸಂಯುಕ್ತ ರಾಷ್ಟ್ರ ಸಂಸ್ಥೆತುಂಬೆಗಿಡಅಳೆಯುವ ಸಾಧನನೇಮಿಚಂದ್ರ (ಲೇಖಕಿ)ವೀರಗಾಸೆದೂರದರ್ಶನಯಜಮಾನ (ಚಲನಚಿತ್ರ)ಕವಿರಾಜಮಾರ್ಗಕನ್ನಡ ಸಾಹಿತ್ಯ ಸಮ್ಮೇಳನಶೃಂಗೇರಿ೧೭೮೫ಅಭಿಮನ್ಯುಪರಿಮಾಣ ವಾಚಕಗಳುಭಾರತದ ಧಾರ್ಮಿಕ ಮತ್ತು ಸಾಮಾಜಿಕ ಸುಧಾರಕರುಅಕ್ಬರ್ಭಾರತದ ಪ್ರಧಾನ ಮಂತ್ರಿಗಳ ಪಟ್ಟಿಸುದೀಪ್ಅರ್ಥಶಾಸ್ತ್ರರಮ್ಯಾಯುವರತ್ನ (ಚಲನಚಿತ್ರ)ಭಾರತೀಯ ಸಂಸ್ಕೃತಿಗುರುತ್ವ2017ರ ಕನ್ನಡ ಚಿತ್ರಗಳ ಪಟ್ಟಿತ್ರಿಪುರಾದ ಜಾನಪದ ನೃತ್ಯಗಳುತ. ರಾ. ಸುಬ್ಬರಾಯಹೋಳಿಬೇಸಿಗೆಪಶ್ಚಿಮ ಘಟ್ಟಗಳುಪಟ್ಟದಕಲ್ಲುಬರವಣಿಗೆತತ್ಪುರುಷ ಸಮಾಸನಿರುದ್ಯೋಗಶಂಖಕೇಂದ್ರಾಡಳಿತ ಪ್ರದೇಶಗಳುಷಟ್ಪದಿಲಿಂಗಾಯತ ಧರ್ಮಹನುಮಂತಟೊಮೇಟೊಅಂಬಿಗರ ಚೌಡಯ್ಯಸಿಂಧೂತಟದ ನಾಗರೀಕತೆಮುಮ್ಮಡಿ ಕೃಷ್ಣರಾಜ ಒಡೆಯರುಮುರುಡೇಶ್ವರಪ್ಯಾರಾಸಿಟಮಾಲ್ಕರ್ನಾಟಕದ ಜಿಲ್ಲೆಗಳುಶೂದ್ರ ತಪಸ್ವಿಜಾಹೀರಾತುಪ್ರಾಣಾಯಾಮಕೊಲೆಸ್ಟರಾಲ್‌ಸಮಾಸನ್ಯೂಟನ್‍ನ ಚಲನೆಯ ನಿಯಮಗಳುಭಾರತೀಯ ಮೂಲಭೂತ ಹಕ್ಕುಗಳುಆರೋಗ್ಯವಾಟ್ಸ್ ಆಪ್ ಮೆಸ್ಸೆಂಜರ್ಅಂಜನಿ ಪುತ್ರಭಗತ್ ಸಿಂಗ್🡆 More