ಚಂದ್ರಕಾಂತ ಕರದಳ್ಳಿಯವರು (೨೫ ಆಗಸ್ಟ್ ೧೯೫೨ - ೧೯ ಡಿಸೆಂಬರ್ ೨೦೧೯) ಕನ್ನಡದ ಒಬ್ಬರು ಬರಹಗಾರರು.
ವಿಶೇಷವಾಗಿ ಮಕ್ಕಳ ಸಾಹಿತ್ಯವನ್ನು ಹೆಚ್ಚು ರಚಿಸಿದ್ದಾರೆ.
ಕರದಳ್ಳಿಯವರು ಯಾದಗಿರಿ ಜಿಲ್ಲೆಯ ಶಹಾಪುರದವರು. ವೃತ್ತಿಯಿದ ಶಿಕ್ಷಕರಾಗಿದ್ದವರು. ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ ಪಡೆದಿದ್ದರು. ಮೈಸೂರು ವಿಶ್ವವಿದ್ಯಾನಿಲಯದಿಂದ ಬಿ.ಎಡ್. ಪದವಿ ಗಳಿಸಿದರು. ಮೂವತ್ತಮೂರು ವರ್ಷ ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದರು.
ಕರದಳ್ಳಿಯವರು ಸುಮಾರು ೫೦ ಪುಸ್ತಕಗಳನ್ನು ರಚಿಸಿದ್ದಾರೆ. ಅದರಲ್ಲಿ ಅರ್ಧಕ್ಕಿಂತಲೂ ಹೆಚ್ಚು ಮಕ್ಕಳ ಸಾಹಿತ್ಯ ಎನ್ನುವುದು ವಿಶೇಷ. ಮಕ್ಕಳ ಸಾಹಿತ್ಯದಲ್ಲಿ ಇವರು 5 ಕಥಾ ಸಂಕಲನ, 6 ಕವನ ಸಂಕಲನ, 6 ಮಕ್ಕಳ ಕಾದಂಬರಿ, ಎರಡು ಶಿಶುಪ್ರಾಸಗಳು, ಸಾಹಿತ್ಯ ಅಕಾಡೆಮಿ ಸಂಪಾದನೆ ಸೇರಿದಂತೆ ಒಟ್ಟು ೫೦ ಕೃತಿಗಳು ಹೊರಬಂದಿವೆ. ಇದರಲ್ಲಿ ಹಾಡು, ಕಥೆ, ಜೀವನಗಾಥೆಗಳು, ಒಗಟುಗಳ ಸಂಗ್ರಹ ಎಲ್ಲಾ ಸೇರಿವೆ.
ಅವರ ಕೆಲ ಜನಪ್ರಿಯ ಕೃತಿಗಳೆಂದರೆ,
This article uses material from the Wikipedia ಕನ್ನಡ article ಚಂದ್ರಕಾಂತ ಕರದಳ್ಳಿ, which is released under the Creative Commons Attribution-ShareAlike 3.0 license ("CC BY-SA 3.0"); additional terms may apply (view authors). ವಿಶೇಷವಾಗಿ ಟಿಪ್ಪಣಿ ಮಾಡದಿದ್ದ ಹೊರತು ಪಠ್ಯ "CC BY-SA 4.0" ರಡಿ ಲಭ್ಯವಿದೆ. Images, videos and audio are available under their respective licenses.
®Wikipedia is a registered trademark of the Wiki Foundation, Inc. Wiki ಕನ್ನಡ (DUHOCTRUNGQUOC.VN) is an independent company and has no affiliation with Wiki Foundation.