ಗಂಗಾಧರ ಚಿತ್ತಾಲರು ನವೋದಯ ಕಾಲದ ಪ್ರಮುಖ ಕವಿಗಳು.
ಇವರು ಉತ್ತರ ಕನ್ನಡ ಜಿಲ್ಲೆಯ ಹನೇಹಳ್ಳಿಯಲ್ಲಿ ೧೯೨೩ ನವೆಂಬರ್ ೧೨ರಂದು ಜನಿಸಿದರು. ಕನ್ನಡದ ಮತ್ತೋರ್ವ ಖ್ಯಾತ ಲೇಖಕ ಯಶವಂತ ಚಿತ್ತಾಲರು ಇವರ ಅಣ್ಣಂದಿರು.
Gangadhar Vithoba Chittal | |
---|---|
ಜನನ | ಗೋಕರ್ಣದ, ಹನಹಳ್ಳಿ,ಉತ್ತರ ಕನ್ನಡ, ಕರ್ನಾಟಕ | ೧೨ ನವೆಂಬರ್ ೧೯೨೩
ಮರಣ | 28 January 1987 ಮುಂಬಯಿ | (aged 63)
ವೃತ್ತಿ | ಕವಿ, ಭಾರತೀಯ ಆಡಿಟ್ ಮತ್ತು ಖಾತೆ ಸೇವೆ |
ರಾಷ್ಟ್ರೀಯತೆ | ಭಾರತೀಯ |
ಪ್ರಕಾರ/ಶೈಲಿ | ಕವನ |
ವಿಷಯ | ಕನ್ನಡ |
ಬಾಳ ಸಂಗಾತಿ | ಮೀರಾ ಕೃಷ್ಣ |
ಪ್ರಭಾವಗಳು
| |
ಪ್ರಭಾವಿತರು
|
೧೯೪೦ರಲ್ಲಿ ಕುಮಟಾದ ಗಿಬಸ್ ಹೈ ಸ್ಕೂಲಿನಿಂದ ಮ್ಯಾಟ್ರಿಕ್ಯುಲೇಶನ್ ಪರೀಕ್ಷೆಗೆ ಕುಳಿತ ಚಿತ್ತಾಲರು ಮುಂಬಯಿ ವಿಶ್ವವಿದ್ಯಾಲಯಕ್ಕೆ ಹೊಸ ವಿಕ್ರಮ ಸ್ಥಾಪಿಸಿ, ಪ್ರಥಮ ಸ್ಥಾನ ಪಡೆದರು. ೧೯೪೨ರಲ್ಲಿ ಸ್ವಾತಂತ್ರ್ಯ ಚಳುವಳಿಯಲ್ಲಿ ಸಕ್ರಿಯವಾಗಿ ಭಾಗವಹಿಸಿ, ಕಾಲೇಜಿನಿಂದ ಡಿಬಾರ್ ಆದರು. ಕಾಲೇಜು ಶಿಕ್ಷಣವನ್ನು ಮುಂದುವರಿಸಿದಾಗಲೂ ಕೂಡ ಎಂ.ಎನ್.ರಾಯ್ ಅವರ ಪಕ್ಷದೊಂದಿಗೆ ಸಂಬಂಧವಿಟ್ಟುಕೊಂಡ ಚಿತ್ತಾಳರು , ವಿದ್ಯಾರ್ಥಿ ಯೂನಿಯನ್ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದರು. ೧೯೪೫ರಲ್ಲಿ ಇಂಗ್ಲಿಷ್ ಸಾಹಿತ್ಯವನ್ನು ಮುಖ್ಯ ವಿಷಯವಾಗಿ ತೆಗೆದುಕೊಂಡು, ಮುಂಬಯಿ ವಿಶ್ವವಿದ್ಯಾಲಯದ ಬಿ.ಎ. (ಆನರ್ಸ್) ಪದವಿ ಪಡೆದರು.
೧೯೮೨ರಲ್ಲಿ ಗಂಗಾಧರ ಚಿತ್ತಾಲರಿಗೆ ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿತು.
This article uses material from the Wikipedia ಕನ್ನಡ article ಗಂಗಾಧರ ಚಿತ್ತಾಲ, which is released under the Creative Commons Attribution-ShareAlike 3.0 license ("CC BY-SA 3.0"); additional terms may apply (view authors). ವಿಶೇಷವಾಗಿ ಟಿಪ್ಪಣಿ ಮಾಡದಿದ್ದ ಹೊರತು ಪಠ್ಯ "CC BY-SA 4.0" ರಡಿ ಲಭ್ಯವಿದೆ. Images, videos and audio are available under their respective licenses.
®Wikipedia is a registered trademark of the Wiki Foundation, Inc. Wiki ಕನ್ನಡ (DUHOCTRUNGQUOC.VN) is an independent company and has no affiliation with Wiki Foundation.