ಕಾಟ್ಟಶೇರಿ ಜೋಸೆಫ್ ಯೇಶುದಾಸ್ (ಟೆಂಪ್ಲೇಟು:ಮಲಯಾಳಂ: കാട്ടാശേരി ജോസഫ് യേശുദാസ്)(ಜನನ: ೧೦ ಜನವರಿ, ೧೯೪೦) ಅವರು ಭಾರತದ ಖ್ಯಾತ ಸಂಗೀತ ವಿದ್ವಾಂಸರಲ್ಲೊಬ್ಬರು ಹಾಗೂ ಅನೇಕ ಭಾರತೀಯ ಭಾಷೆಗಳಚಿತ್ರರಂಗದಲ್ಲಿನ ಹಿನ್ನೆಲೆ ಗಾಯಕರು. ಯೇಸುದಾಸ್ ಕರ್ನಾಟಕ ಸಂಗೀತದ ಪ್ರಮುಖ ಗಾಯಕರು.
ಕೆ.ಜೆ.ಏ/ಜೇಸುದಾಸ್
K. J. Yesudas
ಹಿನ್ನೆಲೆ ಮಾಹಿತಿ
ಹೆಸರು
കട്ടാശേരി ജോസഫ് യേശുദാസ്
ಜನ್ಮನಾಮ
Kattassery Joseph Yesudas
ಅಡ್ಡಹೆಸರು
Gana Gandharvan, Dasettan
ಜನನ
1940 (ವಯಸ್ಸು 83–84) Fort Kochi, Cochin, Indian Empire
ಕೇರಳದ ಕೊಚ್ಚಿಯಲ್ಲಿ ಜನನ. ಇವರು ಪ್ರಸಿದ್ಧ ಗಾಯಕ ಚೆಂಬೈ ವೈದ್ಯನಾಥ ಬಾಗವತರ ಶಿಷ್ಯರು. ಇವರು ಚಲನಚಿತ್ರ ಹಿನ್ನಲೆಗಾಯಕರಾಗಿಯೂ ಪ್ರಸಿದ್ಧರಾಗಿದ್ದಾರೆ. ಮಲೆಯಾಳಂ, ಕನ್ನಡ,ತಮಿಳು,ತೆಲುಗು ಹಾಗೂ ಹಿಂದಿ ಚಲನಚಿತ್ರಗಳಲ್ಲಿ ಸಾವಿರಾರು ಹಾಡುಗಳನ್ನು ಹಾಡಿರುತ್ತಾರೆ. ಶ್ರೀಮಂತ ಕಂಠದ ಗಾಯಕರಾಗಿರುವ ಇವರು, ಭಾರತದ ಅಗ್ರಪಂಕ್ತಿಯ ಸಂಗೀತ ಕಲಾವಿದರಾಗಿದ್ದು ಪದ್ಮಶ್ರೀ ಪ್ರಶಸ್ತಿಯನ್ನು ಪಡೆದಿದ್ದಾರೆ.
ಬಾಲ್ಯ ಹಾಗು ಸಂಗೀತಭ್ಯಾಸ
ಏಶುದಾಸ್ ಅವರು ಕೇರಳ ರಾಜ್ಯದ ಫೋರ್ಟ್ ಕೊಚ್ಚಿಯಲ್ಲಿ ಜನವರಿ ೧೦ ೧೯೪೦ರಂದು ಜನಿಸಿದರು. ಇವರ ತಂದೆ ಆಗಸ್ಟೈನ್ ಜೋಸೆಫ್ ಹಾಗು ತಾಯಿ ಎಲಿಜಬೆತ್ ಜೋಸೆಫ್. ಯೇಶುದಾಸ್ ಅವರಿಗೆ ಮೊದಲ ಸಂಗೀತ ಗುರುವಾಗಿದ್ದ ಅವರ ತಂದೆ, ಹೆಸರಾಂತ ಮಲೆಯಾಳಂ ಶಾಸ್ತ್ರೀಯ ಸಂಗೀತಕಾರರಾಗಿದ್ದರಲ್ಲದೇ, ರಂಗಭೂಮಿ ಕಲಾವಿದರಾಗಿದ್ದರು.
ಕೇರಳದ ತಿರುಪುನಿತುರ ಊರಿನಲ್ಲಿನ ಸಂಗೀತ ಅಕಾಡೆಮಿಯನ್ನು ಸೇರಿದ ಬಾಲಕ ಯೇಸುದಾಸ್, ತಮ್ಮ ಏಳನೆಯ ವಸ್ಸಿನಲ್ಲಿಯೇ ಫೋರ್ಟ್ ಕೊಚ್ಚಿಯಲ್ಲಿ ನಡೆದ ಸ್ಥಳೀಯ ಸಂಗೀತ ಸ್ಪರ್ಧೆಯಲ್ಲಿ ಜಯಗಳಿಸಿ, ಚಿನ್ನದ ಪದಕವನ್ನು ಪಡೆದಿದ್ದರು.
ನಂತರ ಇವರು ಸಂಗೀತ ವಿದ್ವಾಂಸ ಚೆಂಬೈ ವೈದ್ಯನಾಥ ಭಾಗವತರು ಅವರ ಬಳಿ ಶಾಸ್ತ್ರೀಯ ಸಂಗೀತಾಭ್ಯಾಸ ನಡೆಸುತ್ತಿದ್ದರು. ಆದರೆ, ೧೯೭೪ರಲ್ಲಿ ಗುರುಗಳ ಮರಣದಿಂದ ಈ ವಿದ್ಯಾಭ್ಯಾಸ ಅಕಾಲಿಕವಾಗಿ ನಿಂತಿತು.
ಸಂಗೀತ ಜೀವನ
ಹಿನ್ನೆಲೆಗಾಯಕರಾಗಿ ಯೇಸುದಾಸ್ ಅವರ ಮೊದಲ ಹಾಡು ೧೯೬೧ರಲ್ಲಿ ಬಿಡುಗಡೆಯಾದ ಮಲೆಯಾಳಂ ಭಾಷೆಯ 'ಕಾಲ್ಪಾಡುಕಲ್' ಚಿತ್ರದ್ದು.ಇಲ್ಲಿಯವರೆಗೂ (ವರ್ಷ ೨೦೦೬) ಇವರು ಐವತ್ತು ಸಾವಿರಕ್ಕೂ ಹೆಚ್ಚಿನ ಹಾಡುಗಳನ್ನು ವಿವಿಧ ಭಾರತೀಯ ಭಾಷೆಗಳ ಚಲನಚಿತ್ರಗಳಲ್ಲಿ ಹಾಡಿದ್ದಾರೆ.
ಇವುಗಳಲ್ಲಿ ಪ್ರಮುಖವಾಗಿ ಅವರ ಮಾತೃಭಾಷೆಯಾದ ಮಲೆಯಾಳಂ, ಕನ್ನಡ, ಹಿಂದಿ, ತಮಿಳು, ತೆಲುಗು ಹಾಗು ಬಂಗಾಳಿ ಗುಜರಾತಿ, ಒಡಿಶಾ, ಮರಾಠಿ, ಪಂಜಾಬಿ, ಸಂಸ್ಕೃತ, ತುಳು ಮತ್ತು ವಿದೇಶಿ ಭಾಷೆಗಳಾದ ರಷ್ಯನ್, ಅರೇಬಿಕ್, ಲ್ಯಾಟಿನ್ ಹಾಗೂ ಇಂಗ್ಲಿಷ್ ಭಾಷೆಗಳಲ್ಲೂ ಹಾಡಿದ್ದಾರೆ.
ಸಂಗೀತದಲ್ಲಿ ವಿಜ್ಞಾನ ಅಡಗಿದೆ,ಅದನ್ನು ಅರಿತು ಯುವಪೀಳಿಗೆ ಅಧ್ಯಯನ ನಿರತರಾಗಬೇಕು. ಪ್ರತಿಯೊಂದು ರಾಗದಲ್ಲೂ ವಿಜ್ಞಾನದ ಹಿನ್ನೆಲೆಯಿದೆ ಅದನ್ನು ತಿಳಿಯದೆ ಕೇವಲ ಸಂಗೀತಾಧ್ಯಯನ ಮಾಡಿದರೆ ಯಾವುದೇ ಪ್ರಯೋಜನವಿಲ್ಲ. ಸಾಂಸ್ಕೃತಿಕ ಪ್ರಾಮುಖ್ಯತೆಯನ್ನರಿತು ಸಂಗೀತಾಭ್ಯಾಸದಲ್ಲಿ ತೊಡಗಬೇಕು ,ಸಂಸ್ಕೃತ ಎಲ್ಲ ಭಾಷೆಗೂ ಮಾತೃ ಭಾಷೆಯಾದ ಕಾರಣ ಕೇವಲ ಮಲೆಯಾಳಿ ಬಲ್ಲ ತನಗೆ ಎಲ್ಲ ಭಾಷೆಯಲ್ಲೂ ಹಾಡಲು ಸಾಧ್ಯವಾಯಿತು.
ಕರ್ನಾಟಕ ಸಂಗೀತ ಎನ್ನುವಂತದ್ದು ಒಂದು ಸಾಗರವಿದ್ದಂತೆ. ನಾನು ಅದರ ಮೊದಲ ತೆರೆಯಲ್ಲಿದ್ದೇನೆ. ಸಂಗೀತದ ಪೂರ್ತಿ ಭಾಷೆ ಅರಿವಾಗಲು ಅದೆಷ್ಟೋ ಜನ್ಮ ಬೇಕು. ನಾನು ವಿದ್ವಾನ್ ಅಲ್ಲ. ನಾನು ಸಂಗೀತ ಕ್ಷೇತ್ರದಲ್ಲಿ ಇನ್ನೂ ವಿದ್ಯಾರ್ಥಿ ಎಂದು ಮೇರು ಗಾಯಕನ ಹಿನ್ನೆಲೆ ಗಾಯನ ವೃತ್ತಿಯ ಸುವರ್ಣ ಸಂಬ್ರಮದ ಮಾತು. ೧೯೬೫ರಲ್ಲಿ ಆಗಿನ ಸೋವಿಯತ್ ಒಕ್ಕೂಟದ ಸರಕಾರವು ಯೇಸುದಾಸ್ ಅವರನ್ನು ಸೋವಿಯತ್ ಒಕ್ಕೂಟದಲ್ಲಿನ ವಿವಿಧ ಸ್ಥಳಗಳಲ್ಲಿನ ಸಂಗೀತ ಕಛೇರಿಗಳಲ್ಲಿ ಭಾಗವಹಿಸಲು ಆಮಂತ್ರಿಸಿತ್ತು.
ವೈಯುಕ್ತಿಕ ಜೀವನ
ಯೇಶುದಾಸ್ ಅವರ ಪತ್ನಿಯ ಹೆಸರು ಪ್ರಭಾ. ಈ ದಂಪತಿಗಳಿಗೆ ಮೂರು ಪುತ್ರರಿದ್ದಾರೆ, ವಿನೋದ್, ವಿಜಯ್ ಹಾಗು ವಿಶಾಲ್. ಈ ಕುಟುಂಬವು ತಮಿಳುನಾಡಿನಚೆನ್ನೈ ನಗರದಲ್ಲಿ ವಾಸವಿದೆ.
ಪ್ರಶಸ್ತಿ ಪುರಸ್ಕಾರಗಳು
ಅತ್ಯುತ್ತಮ ಹಿನ್ನೆಲೆ ಗಾಯಕ ಎಂದು ಏಳು ಬಾರಿ ರಾಷ್ಟ್ರ ಪ್ರಶಸ್ತಿ .
ಅತ್ಯುತ್ತಮ ಹಿನ್ನೆಲೆ ಗಾಯಕ ಎಂದು ೧೬ ಬಾರಿ ಕೇರಳ ರಾಜ್ಯ ಪ್ರಶಸ್ತಿ.
೧೯೭೩ರಲ್ಲಿ ಭಾರತದ ರಾಷ್ಟ್ರಪತಿಯವರಿಂದ ಪದ್ಮಶ್ರೀ ಪ್ರಶಸ್ತಿ.
೨೦೧೭ರಲ್ಲಿ ಭಾರತ ಸರ್ಕಾರದಿಂದ ಪದ್ಮ ವಿಭೂಷಣ ಪ್ರಶಸ್ತಿ ಘೋಷಣೆ
ಯೇಶುದಾಸ್ ಅವರು ಹಾಡಿರುವ ಕೆಲವು ಕನ್ನಡ ಚಲನಚಿತ್ರಗೀತೆಗಳು
ಟು ಟು ಟು ಬೇಡಪ್ಪ, ಓಡಿ ಬಂದು ನನ್ನ ಸಂಗ ಕಟ್ಟಪ್ಪ -ಪ್ರೇಮಮಯಿ - ಕೆ.ಜೆ.ಯೇಶುದಾಸ್ ಕನ್ನಡದಲ್ಲಿ ಹಾಡಿದ ಪ್ರಥಮ ಗೀತೆ, ಹಾಗೆಯೇ ಈ ಚಿತ್ರ ಡಾ.ರಾಜ್ಕುಮಾರ್ರಿಗೆ ಯೇಸುದಾಸ್ ಹಿನ್ನೆಲೆ ಗಾಯನ ನೀಡಿದ ಏಕೈಕ ಚಿತ್ರ.
This article uses material from the Wikipedia ಕನ್ನಡ article ಕೆ.ಜೆ.ಜೇಸುದಾಸ್, which is released under the Creative Commons Attribution-ShareAlike 3.0 license ("CC BY-SA 3.0"); additional terms may apply (view authors). ವಿಶೇಷವಾಗಿ ಟಿಪ್ಪಣಿ ಮಾಡದಿದ್ದ ಹೊರತು ಪಠ್ಯ "CC BY-SA 4.0" ರಡಿ ಲಭ್ಯವಿದೆ. Images, videos and audio are available under their respective licenses. ®Wikipedia is a registered trademark of the Wiki Foundation, Inc. Wiki ಕನ್ನಡ (DUHOCTRUNGQUOC.VN) is an independent company and has no affiliation with Wiki Foundation.