ಕೃಷ್ಣಾ ನದಿ

ಕೃಷ್ಣೆ ಹೊಳೆ ದಕ್ಷಿಣ ಭಾರತದ ಎರಡನೆಯ ದೊಡ್ಡ ಹೊಳೆಯಾಗಿದೆ.

ಈ ಹೊಳೆಯು ಮಹಾರಾಷ್ಟ್ರದ ಪಶ್ಚಿಮ ಘಟ್ಟದ ಮಹಾದೇವ ಪರ್ವತ ಶ್ರೇಣಿಯಲ್ಲಿ ಮಹಾಬಲೇಶ್ವರ‍ದ ಹತ್ತಿರ ಕಡಲು ಮಟ್ಟಕ್ಕಿಂತ ೧೩೩೮ ಮೀಟರ ಎತ್ತರದಲ್ಲಿ ಉಗಮವಾಗಿ ಸುಮಾರು ೧೩೯೨ ಕಿ.ಮಿ.ಗಳಷ್ಟು ಹರಿದು ಆಂಧ್ರಪ್ರದೇಶ‍ದ ಹಂಸಲಾದೀವಿಯಲ್ಲಿ ಬಂಗಾಳ ಕೊಲ್ಲಿ ‍ ಯನ್ನು ಸೇರುತ್ತದೆ. ಕೃಷ್ಣೆ ಹೊಳೆ ಮಹಾರಾಷ್ಟ್ರ,ಕರ್ನಾಟಕ, ಮತ್ತು ಆಂಧ್ರಪ್ರದೇಶ ರಾಜ್ಯಗಳಲ್ಲಿ ಹರಿಯುತ್ತದೆ. ಕರ್ನಾಟಕ ರಾಜ್ಯದಲ್ಲಿ ಇದು ಸುಮಾರು ೪೮೩ ಕಿ.ಮಿ.ಹರಿಯುತ್ತದೆ.ಇದರ ಮುಖ್ಯವಾದ ಉಪನದಿಗಳೆಂದರೆ ತುಂಗಭದ್ರಾ , ಕೊಯ್ನಾ, ಭೀಮಾ , ಮಲಪ್ರಭಾ ,ಮತ್ತು ಘಟಪ್ರಭಾ.

Krishna
కృష్ణా నది, कृष्णा नदी, ಕೃಷ್ಣಾ ನದಿಯ
[[Image:| 256px|none
]]
Kintra ಭಾರತ
States ಮಹಾರಾಷ್ಟ್ರ, ಕರ್ನಾಟಕ, ತೆಲಂಗಾಣ, ಆಂಧ್ರ ಪ್ರದೇಶ
Tributaries
 - left ಭೀಮಾ, ದಿಂಡಿ, ಪೆದ್ದವಾಗು, ಹಳಿಯ, ಮುಸಿ
 - right ವೆನ್ನ, ಕೊಯ್ನಾ, ಪಂಚ ಗಂಗಾ, ದೂಧ ಗಂಗಾ, ಘಟಪ್ರಭಾ, ಮಲಪ್ರಭಾ, ತುಂಗಭದ್ರಾ
Soorce Near ಮಹಾಬಲೇಶ್ವರ, ಜೋರ್ ಹಳ್ಳಿ
 - location ಸತರಾ ಜಿಲ್ಲೆ, ಮಹಾರಾಷ್ಟ್ರ, India
 - elevation ೯೧೪ m (೨,೯೯೯ ft) Geographic headwaters
Mooth ಹಂಸಲಾದೀವಿ, ಕೃಷ್ಣ ಜಿಲ್ಲೆ, ಆಂದ್ರಪ್ರದೇಶ
 - location Bay Of Bengal, India
 - elevation ೦ m (೦ ft)
Lenth ೧,೪೦೦ km (೮೭೦ mi) approx.
Basin ೨,೫೮,೯೪೮ km² (೯೯,೯೮೦ sq mi)
Discharge
 - average ೨,೨೧೩ m³/s (೭೮,೧೫೧ cu ft/s)
Dischairge ensewhaur (average)
 - Vijaywada (1901–1979 average),
max (2009), min (1997)
೧,೬೪೧.೭೪ m³/s (೫೭,೯೭೮ cu ft/s)
[[Image:| 256px|none
]]
ಕೃಷ್ಣಾ ನದಿ
A view of Krishna river and surroundings in Vijayawada. The Prakasam Barrage is on the right.
ಕೃಷ್ಣಾ ನದಿ
Krishna river near Vijayawada

ಜಲಾನಯನ ಪ್ರದೇಶ

ಕೃಷ್ಣಾ ನದಿಯ ಒಟ್ಟು ಜಲಾನಯನ ಪ್ರದೇಶ ಸುಮಾರು ೨,೬೦,೦೦೦ ಚದರ ಕಿ.ಮಿ. ಇರುತ್ತದೆ. ಇದರಲ್ಲಿ ಮಹಾರಾಷ್ಟ್ರದಲ್ಲಿ ೬೮,೦೦೦ ಚ.ಕಿ.ಮಿ.,ಕರ್ನಾಟಕದಲ್ಲಿ ೧,೧೨,೬೦೦ ಚ.ಕಿ.ಮಿ. ಹಾಗೂ ಆಂಧ್ರ ಪ್ರದೇಶದಲ್ಲಿ ೭೫,೬೦೦ ಚ.ಕಿ.ಮಿ. ವ್ಯಾಪಿಸಿದೆ.

ಆಣೆಕಟ್ಟುಗಳು

ಮಹಾರಾಷ್ಟ್ರದಲ್ಲಿ ಕೊಯ್ನಾದ ಹತ್ತಿರ, ಕರ್ನಾಟಕದಲ್ಲಿ ಆಲಮಟ್ಟಿ ಮತ್ತು ನಾರಾಯಣಪುರಗಳಲ್ಲಿ ಹಾಗೂ ಆಂಧ್ರ ಪ್ರದೇಶದಲ್ಲಿ ಶ್ರೀಶೈಲಂ ಮತ್ತು ನಾಗಾರ್ಜುನಸಾಗರದಲ್ಲಿ ಕೃಷ್ಣಾ ನದಿಗೆ ಆಣೆಕಟ್ಟುಗಳನ್ನು ಕಟ್ಟಲಾಗಿದೆ.

ಶಿಲಾನ್ಯಾಸ

೧೯೬೨ರಲ್ಲಿ ಭಾರತ‍ದ ಪ್ರಧಾನ ಮಂತ್ರಿ‍ಯಾದ ಶ್ರೀ ಲಾಲ ಬಹಾದ್ದೂರ ಶಾಸ್ತ್ರಿ‍ಯವರು ಕೃಷ್ಣಾ ಮೇಲ್ದಂಡೆ ಯೋಜನೆಗೆ ಅಡಿಗಲ್ಲನ್ನಿಟ್ಟರು. ಈ ಯೋಜನೆಯಲ್ಲಿ ಕೃಷ್ಣಾ ನದಿಗೆ ಅಡ್ಡಲಾಗಿ ಆಲಮಟ್ಟಿ ಜಲಾಶಯ ಹಾಗೂ ಅದರ ಕೆಳಗೆ ಸುಮಾರು ೭೦ ಕಿ.ಮಿ. ದೂರದಲ್ಲಿ ಕೃಷ್ಣಾ ಹಾಗೂ ಮಲಪ್ರಭಾಗಳ ಸಂಗಮದ ಕೆಳಭಾಗದಲ್ಲಿ ನಾರಾಯಣಪುರ ಜಲಾಶಯಗಳಿವೆ. ೧೯೯೪ರಲ್ಲಿ ಕೃಷ್ಣಾ ಭಾಗ್ಯ ಜಲ ನಿಗಮದ ರಚನೆಯಾಯಿತು. ಆಬಳಿಕ ಕೆಲಸ ಚುರುಕಾಗಿ ನಡೆದರೂ ಸಹ ಆಂಧ್ರ ಹಾಗೂ ಮಹಾರಾಷ್ಟ್ರ ರಾಜ್ಯಗಳು ಸರ್ವೋಚ್ಚ ನ್ಯಾಯಾಲಯ‍ದಲ್ಲಿ ತಕರಾರು ಮಾಡಿದ್ದರಿಂದ, ಆಣೆಕಟ್ಟಿನ ಪೂರ್ಣಪ್ರಮಾಣದ ಎತ್ತರವಾದ ೫೨೪ ಮೀಟರುಗಳ ಬದಲಾಗಿ ೫೧೯.೬೦ ಮೀಟರುಗಳಿಗೆ ಕಾಮಗಾರಿಯನ್ನು ಮಿತಿಗೊಳಿಸಲಾಗಿದೆ.

ಮುಳುಗಡೆ ಪ್ರದೇಶ

ಆಲಮಟ್ಟಿಯಿಂದ ಹಿಪ್ಪರಗಿವರೆಗೆ ೧೩೬ ಕಿ.ಮಿ.ವರೆಗೆ ಹಿನ್ನೀರು ವ್ಯಾಪಿಸಿದ್ದು ೨೦೧ ಗ್ರಾಮಗಳು ಹಾಗೂ ಬಾಗಲಕೋಟೆಯ ಬಹುತೇಕ ಭಾಗ ಮುಳುಗಡೆಯಾಗಿವೆ.

ಜಲ ಸಂಗ್ರಹ

ಹಿಪ್ಪರಗಿಯಲ್ಲಿ ೧೩ ಟಿ.ಎಮ್.ಸಿ., ಆಲಮಟ್ಟಿಯಲ್ಲಿ ೧೨೩ ಟಿ.ಎಮ್.ಸಿ. (೫೧೯.೬೦ ಮೀಟರ್ ವರೆಗೆ) ಹಾಗೂ ನಾರಾಯಣಪುರದಲ್ಲಿ ೩೭ ಟಿ.ಎಮ್.ಸಿ. ನೀರನ್ನು ಸಂಗ್ರಹಿಸಲಾಗುತ್ತಿದೆ. ಇದರಿಂದಾಗಿ ಬಚಾವತ್ ಆಯೋಗದ ಸ್ಕೀಮ್ ಎ ಅಲ್ಲಿ ಕೃಷ್ಣಾ ಮೇಲ್ದಂಡೆ ಯೋಜನೆಗೆ ನೀಡಲಾದ ೧೭೩ ಟಿ.ಎಮ್.ಸಿ. ನೀರಿನ ಪೂರ್ಣ ಸಂಗ್ರಹವಾದಂತಾಗಿದೆ.

ನೀರಾವರಿ ಪ್ರದೇಶ

ಪ್ರಥಮ ಘಟ್ಟದಲ್ಲಿ ೧೧೯ ಟಿ.ಎಮ್.ಸಿ. ನೀರನ್ನು ಬಳಸಿಕೊಂಡು ಸುಮಾರು ೬,೨೨,೦೦೦ ಹೆಕ್ಟೇರ್ ಜಮೀನಿಗೆ ಹಾಗೂ ದ್ವಿತೀಯ ಘಟ್ಟದಲ್ಲಿ ಸ್ಕೀಮ್ ಬಿ ಯಲ್ಲಿ ದೊರೆಯುವ ನೀರನ್ನೂ ಸಹ ಬಳಸಿಕೊಂಡು ಹೆಚ್ಚಿನ ೩,೯೭,೦೦೦ ಹೆಕ್ಟೇರ್ ಜಮೀನಿಗೆ ನೀರಾವರಿ ಒದಗಿಸುವ ಉದ್ದೇಶವಿದೆ.

ವಿದ್ಯುತ್ ಉತ್ಪಾದನೆ

೧೫ ಮೆಗಾವ್ಯಾಟ್ ಉತ್ಪಾದಿಸುವ ೧ ಹಾಗೂ ೫೫ ಮೆಗಾವ್ಯಾಟ್ ಉತ್ಪಾದಿಸುವ ೩ ಘಟಕಗಳನ್ನು ಸ್ಥಾಪಿಸಲಾಗಿದೆ.

ವೆಚ್ಚ

ಜಲಾಶಯ ನಿರ್ಮಾಣಕ್ಕಾಗಿ ೫೫೦೦ ಕೋಟಿ, ಸಂಪರ್ಕ ವ್ಯವಸ್ಥೆಗಾಗಿ ೪೦೦ ಕೋಟಿ ಹಾಗೂ ಪುನರ್ವಸತಿಗಾಗಿ ೨೧೦೦ ಕೋಟಿ ರೂಪಾಯಿಗಳಷ್ಟು ವೆಚ್ಚವನ್ನು ಮಾಡಲಾಗಿದೆ.

ಉದ್ಘಾಟನೆ

೨೧ ಅಗಸ್ಟ ೨೦೦೬ ರಂದು ಭಾರತದ ಆಗಿನ ರಾಷ್ಟ್ರಪತಿಯಾಗಿದ್ದ ಶ್ರೀ ಅಬ್ದುಲ್ ಕಲಾಂ ಅವರು ಲಾಲ ಬಹಾದ್ದೂರ ಶಾಸ್ತ್ರಿ ಎಂದು ನಾಮಕರಣಗೊಂಡ ಆಲಮಟ್ಟಿ ಜಲಾಶಯವನ್ನು ರಾಷ್ಟ್ರಕ್ಕೆ ಅರ್ಪಿಸಿದರು.

ಪ್ರೇಕ್ಷಣೀಯ ಸ್ಥಳ

ಆಲಮಟ್ಟಿಯಿಂದ ಸುಮಾರು ೪೦ ಕಿ.ಮಿ.ದೂರದಲ್ಲಿರುವ ಕೂಡಲ ಸಂಗಮ‍ವು ಬಸವಣ್ಣನವರ ಐಕ್ಯ ಸ್ಥಳವಾಗಿದ್ದು ಕರ್ನಾಟಕ ಸರಕಾರವು ಇದನ್ನು ಪ್ರೇಕ್ಷಣೀಯ ಸ್ಥಳವನ್ನಾಗಿ ಅಭಿವೃದ್ಧಿಗೊಳಿಸಿದೆ.

ನೋಡಿ

ಬಾಹ್ಯ ಸಂಪರ್ಕಗಳು

ಉಲ್ಲೇಖಗಳು

Tags:

ಕೃಷ್ಣಾ ನದಿ ಜಲಾನಯನ ಪ್ರದೇಶಕೃಷ್ಣಾ ನದಿ ಆಣೆಕಟ್ಟುಗಳುಕೃಷ್ಣಾ ನದಿ ಶಿಲಾನ್ಯಾಸಕೃಷ್ಣಾ ನದಿ ಮುಳುಗಡೆ ಪ್ರದೇಶಕೃಷ್ಣಾ ನದಿ ಜಲ ಸಂಗ್ರಹಕೃಷ್ಣಾ ನದಿ ನೀರಾವರಿ ಪ್ರದೇಶಕೃಷ್ಣಾ ನದಿ ವಿದ್ಯುತ್ ಉತ್ಪಾದನೆಕೃಷ್ಣಾ ನದಿ ವೆಚ್ಚಕೃಷ್ಣಾ ನದಿ ಉದ್ಘಾಟನೆಕೃಷ್ಣಾ ನದಿ ಪ್ರೇಕ್ಷಣೀಯ ಸ್ಥಳಕೃಷ್ಣಾ ನದಿ ನೋಡಿಕೃಷ್ಣಾ ನದಿ ಬಾಹ್ಯ ಸಂಪರ್ಕಗಳುಕೃಷ್ಣಾ ನದಿ ಉಲ್ಲೇಖಗಳುಕೃಷ್ಣಾ ನದಿಆಂಧ್ರ ಪ್ರದೇಶಕರ್ನಾಟಕಘಟಪ್ರಭಾತುಂಗಭದ್ರ ನದಿತೆಲಂಗಾಣದಕ್ಷಿಣ ಭಾರತಬಂಗಾಳ ಕೊಲ್ಲಿಭೀಮಾಮಲಪ್ರಭಾ ನದಿಮಹಾಬಲೇಶ್ವರ್ಮಹಾರಾಷ್ಟ್ರ

🔥 Trending searches on Wiki ಕನ್ನಡ:

ಸಾರಾ ಅಬೂಬಕ್ಕರ್ಕನ್ನಡ ಅಕ್ಷರಮಾಲೆಕನ್ನಡ ಛಂದಸ್ಸುಕಾಂತಾರ (ಚಲನಚಿತ್ರ)ಧಾರವಾಡಕಂದನವೋದಯಜೋಳಕನ್ನಡದಲ್ಲಿ ಕಾವ್ಯ ಮಿಮಾಂಸೆಚಂದ್ರಶೇಖರ ಕಂಬಾರಶುಂಠಿವಿದುರಾಶ್ವತ್ಥಬರವಣಿಗೆರೇಣುಕಸಾಲ್ಮನ್‌ಅಶೋಕನ ಶಾಸನಗಳುಸರ್ವೆಪಲ್ಲಿ ರಾಧಾಕೃಷ್ಣನ್ಮೊಹೆಂಜೊ-ದಾರೋಮಧುಮೇಹಮಂಗಳಮುಖಿಕನ್ನಡ ಬರಹಗಾರ್ತಿಯರುಖ್ಯಾತ ಕರ್ನಾಟಕ ವೃತ್ತಕೊ. ಚನ್ನಬಸಪ್ಪಕಾಳಿದಾಸಕರ್ನಾಟಕದ ಜಾನಪದ ಕಲೆಗಳುಬುಡಕಟ್ಟುಸಹೃದಯಅನುಪಮಾ ನಿರಂಜನಮಂಗಳೂರುಮಂಜಮ್ಮ ಜೋಗತಿತಮಿಳುನಾಡುಚಿಕ್ಕಮಗಳೂರುಸಂಸ್ಕೃತ ಸಂಧಿಮೋಕ್ಷಗುಂಡಂ ವಿಶ್ವೇಶ್ವರಯ್ಯಶ್ರೀಶೈಲಸುಧಾರಾಣಿಅಂತರರಾಷ್ಟ್ರೀಯ ಸಂಘಟನೆಗಳುಆಂಧ್ರ ಪ್ರದೇಶಭಾರತದ ವಾಯುಗುಣಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಪ್ಲೇಟೊಮಾನವನ ನರವ್ಯೂಹಬ್ಯಾಂಕ್ಭಾರತೀಯ ಸ್ಟೇಟ್ ಬ್ಯಾಂಕ್ಹೆಚ್.ಡಿ.ಕುಮಾರಸ್ವಾಮಿಭಾರತೀಯ ಭಾಷೆಗಳುಸ್ವಾತಂತ್ರ್ಯವಿಧಾನ ಪರಿಷತ್ತುಭಾರತದ ಪ್ರಧಾನ ಮಂತ್ರಿಗಳ ಪಟ್ಟಿಪುಟ್ಟರಾಜ ಗವಾಯಿಸ್ವಾಮಿ ವಿವೇಕಾನಂದಶ್ರೀ ಸಿದ್ದೇಶ್ವರ ಸ್ವಾಮಿಜಿಗಳುಗುಡುಗುತಿಂಥಿಣಿ ಮೌನೇಶ್ವರಕನಕದಾಸರುಭಾವನಾ(ನಟಿ-ಭಾವನಾ ರಾಮಣ್ಣ)ಅಲಂಕಾರಕವಲುಸಮಾಜಶಾಸ್ತ್ರರತ್ನಾಕರ ವರ್ಣಿಮತದಾನಬೆಂಗಳೂರು ಗ್ರಾಮಾಂತರ (ಲೋಕ ಸಭೆ ಚುನಾವಣಾ ಕ್ಷೇತ್ರ)ಶಿಕ್ಷಣಹಸ್ತಪ್ರತಿಶಿವಕಲಿಕೆಕಾನೂನುಭೀಷ್ಮಬಾದಾಮಿಕೃಷ್ಣರಾಜಸಾಗರಕನ್ನಡ ಅಭಿವೃದ್ಧಿ ಪ್ರಾಧಿಕಾರವಾಸ್ತವಿಕವಾದಕೇಂದ್ರ ಲೋಕ ಸೇವಾ ಆಯೋಗಮುಮ್ಮಡಿ ಕೃಷ್ಣರಾಜ ಒಡೆಯರುಕೆ. ಎಸ್. ನರಸಿಂಹಸ್ವಾಮಿಚದುರಂಗದ ನಿಯಮಗಳುಜ್ಯೋತಿಬಾ ಫುಲೆ🡆 More