ಕುಮಾರವ್ಯಾಸ ವಿಶಿಷ್ಟ ಶಕ್ತಿಯ ಸ್ವತಂತ್ರ ಕವಿ.
ಕರ್ನಾಟ ಭಾರತ ಕಥಾ ಮಂಜರಿ ಅಥವಾ ಕುಮಾರವ್ಯಾಸ ಭಾರತ ಈತನ ಪ್ರಮುಖ ಕೃತಿ. ಇದು ಮೂಲ ಮಹಾಭಾರತದ ಮೊದಲ 10 ಪರ್ವಗಳನ್ನು ಒಳಗೊಂಡಿದೆ. ಹತ್ತನೇ ಗದಾಪರ್ವದಲ್ಲಿ, ಕೆಲವೇ ಪದ್ಯಗಳಲ್ಲಿ ಧರ್ಮರಾಯನ ಪಟ್ಟಾಭಿಷೇಕದ ಕಥಾಭಾಗವನ್ನು ಸಂಕ್ಷಿಪ್ತವಾಗಿ ಹೇಳಿದ್ದಾನೆ. ಕುಮಾರವ್ಯಾಸನನ್ನು "ರೂಪಕಸಾಮ್ರಾಜ್ಯ ಚಕ್ರವರ್ತಿ" ಎಂದು ಕರೆಯಲಾಗಿದೆ.
ಪರ್ವಗಳು | ಸಂಧಿಗಳು | ಸಂಧಿಗಳ ವಿಷಯ ಸೂಚನೆ |
---|---|---|
1.ಆದಿಪರ್ವ | 20 | 1 ನೇ ಸಂಧಿ :ಮಂಗಳಾಚರಣೆ ;2 ನೇ ಸಂಧಿ : ಭಾರತ ಕಥಾರಂಭ; 3ನೇ ಸಂಧಿ :ಕರ್ಣ ಜನನ ; 4 ನೇ ಸಂಧಿ :ಕುರು ಪಾಂಡವರ ಜನನ; 5 ನೇ ಸಂಧಿ ಪಾಂಡು ವೃತ್ತಾಂತ ; 6 ನೇ ಸಂಧಿ : ಭೀಮ ದುರ್ಯೋಧನರ ವೈರ - ದ್ರೋಣರಾಗಮನ; 7 ನೇ ಸಂಧಿ: ಶಸ್ತ್ರ ಪ್ರದರ್ಶನ; ದ್ರುಪದ ಮಾನಭಂಗ; ದ್ರೌಪದಿ - ದೃಷ್ಟದ್ಯುಮ್ನರ ಜನನ;; 8 ನೇ ಸಂಧಿ:ಅರಗಿನ ಮನೆಯಲ್ಲಿ; 9ನೇ ಸಂಧಿ : ಹಿಡಿಂಬಕ ವಧೆ, ಹೈಡಿಂಬ ಜನನ; 10ನೇ ಸಂಧಿ:ಬಕವಧೆ ; 11ನೇ ಸಂಧಿ:ಅಂಗಾರವರ್ಮ ವೃತ್ತಾಂತ. ಪಾಂಚಾಲ ನಗರ ಪ್ರವೇಶ; 12ನೇ ಸಂಧಿ:ಸ್ವಯಂವರ ಸಿದ್ಧತೆ.; 13 ನೇ ಸಂಧಿ:ಸ್ವಯಂವರ ಮಂಟಪದಲ್ಲಿ ದ್ರೌಪದಿ.; 14 ನೇ ಸಂಧಿ:ರಾಜರಾಜರನ್ನಲ್ಲಾ ಮತ್ಸ್ಯ ಯಂತ್ರ ಗೆದ್ದಿತು.; 15ನೇ ಸಂಧಿ:ಬ್ರಾಹ್ಮಣ ವೇಷಧಾರಿ ಅರ್ಜುನ: ಯಂತ್ರ ಬೇಧನ ರಿಪುನೃಪ ಮರ್ದನ. 16 ನೇ ಸಂಧಿ: ವ್ಯಾಸರ ಉಪದೇಶ; 17ನೇ ಸಂಧಿ: ಮತ್ತೆ ಹಸ್ತಿನಾಪುರಕ್ಕೆ ಪಾಮಡವರ ಪ್ರವೇಶ; 18ನೇ ಸಂದಿ:ರಾಜ್ಯ ವಿಭಜನೆ; 19ನೇ ಸಂಧಿ,ಸುಭದ್ರಾ ಪರಿಣಯ; 20 ನೇ ಸಂಧಿ:ಖಾಂಡವ ವನ ದಹನ. |
2.ಸಭಾಪರ್ವ | 16 | 1 ನೇ ಸಂಧಿ :ರಾಜಸೂಯಾರಂಭ ;2 ನೇ ಸಂಧಿ : ಜರಾಸಂದನ ವಧೆ; 3ನೇ ಸಂಧಿ :ಪಾರ್ಥ ದಿಗ್ವಿಜಯ ; 4 ನೇ ಸಂಧಿ :ಭೀಮನ ಪೂರ್ವ ದಿಗ್ವಿಜಯ; 5 ನೇ ಸಂಧಿ ಸಹದೇವನಿಂದ ದಕ್ಷಿಣ ದಿಗ್ವಿಜಯ; 6 ನೇ ಸಂಧಿ :ನಕುಲನ ಪಶ್ಚಿಮ ದಿದ್ವಿಜಯ ; 7 ನೇ ಸಂಧಿ: ಯಾಗಾರಂಭ; 8 ನೇ ಸಂಧಿ:ಶಿಶುಪಾಲ ಪ್ರತಾಪ; 9ನೇ ಸಂಧಿ : ಭೀಷ್ಮರಿಂದ ಕೃಷ್ನ ಸ್ತುತಿ; 10ನೇ ಸಂಧಿ:ಶಿಶುಪಾಲ ಛೇದನ; 11ನೇ ಸಂಧಿ:ಯಾಗ ಸಮಾಪ್ತಿ ; 12ನೇ ಸಂಧಿ:ಕಾಲಪಾಶಾಕರುಷಣದಿಂದ ಧರ್ಮರಾಯ ಹಸ್ತಿನಾವತಿಗೆ ಪಯಣ; 13 ನೇ ಸಂಧಿ:ಕಪಟದ್ಯೂತದಲ್ಲಿ ಕೌರವ ಧರ್ಮಜನನ್ನು ಗೆಲ್ಲುತ್ತಾನೆ.; 14 ನೇ ಸಂಧಿ:ಪರಿಭವದಿಂದ ದ್ರೌಪದಿಯನ್ನು ಶ್ರೀಕೃಷ್ಣನ ಸ್ತುತಿ ಕಾಯುತ್ತದೆ. ; 15ನೇ ಸಂಧಿ:ನೊಂದ ಪಾಂಡವರನ್ನು ಧೃತರಾಷ್ಟ್ರ ಸಂತೈಸಿ ಕಳಿಸುತ್ತಾನೆ.: 16 ನೇ ಸಂಧಿ: ಮತ್ತೆ ದ್ಯೂತ; ಮತ್ತೆ ಸೋಲು;ವನವಾಸ ಯಾತ್ರೆ; |
3.ಅರಣ್ಯಪರ್ವ | 23 | 1 ನೇ ಸಂಧಿ :ವನಪ್ರವೇಶ, ಕಿಮ್ಮೀರನ ವಧೆ ;2 ನೇ ಸಂಧಿ : ಶ್ರೀಕೃಷ್ಣ ಸಂದರ್ಶನ; 3ನೇ ಸಂಧಿ :ಕಣ್ವಾಶ್ರಮದ ಜಂಬೂಫಲ; 4 ನೇ ಸಂಧಿ :ಇಂದ್ರಕೀಲಕ್ಕೆ ಅರ್ಜುನನ ಯಾತ್ರೆ; 5 ನೇ ಸಂಧಿ: ಶಂಭು ಕಿರಾತಪ್ರವೇಶ;ಮೂಕದಾನವ ದಹನ; 6 ನೇ ಸಂಧಿ :ಧೀರಭಕ್ತ ಅರ್ಜುನನಿಗಾದ ಶಿವಕರುಣೆಯ ಲಾಭ;7 ನೇ ಸಂಧಿ:ಇಂದ್ರಪುರಕ್ಕೆ ಅರ್ಜುನ; 8 ನೇ ಸಂಧಿ:ಊರ್ವಸಿಯ ಸುಮನೋಹರ ಪ್ರಣಯದಿಂದ ಅರ್ಜುನ ಪಾರಾದುದು.; 9ನೇ ಸಂಧಿ : ಧರ್ಮನಂದನನ ತೀರ್ಥಯಾತ್ರೆ; 10ನೇ ಸಂಧಿ:ಭೀಮ ಆಂಜನೇಯನ ದರ್ಶನ ಪಡೆಯುತ್ತಾನೆ; 11ನೇ ಸಂಧಿ:ಜಟಾಸುರ ಮಣಿಮಾನನರನ್ನು ಭೀಮ ಕೊಂದುದು.; 12ನೇ ಸಂಧಿ:ಧರ್ಮರಾಯನಿಗೆ ಅರ್ಜುನ ನಿರೂಪಿಸಿದ ನಿವಾತಕವಚರ ಯುದ್ಧ ವರ್ಣನೆ; 13 ನೇ ಸಂಧಿ:ಸರ್ಪಬಂದನದಿಂದ ಭೀಮಸೇನನ್ನು ಧರ್ಮರಾಯ ಉಳಿಸುತ್ತಾನೆ.; 14 ನೇ ಸಂಧಿ:ಕೃಷ್ಣಾಗಮನ.;15ನೇ ಸಂಧಿ:ಮುನಿಗಳ ಉಪಕಥೆ: 16 ನೇ ಸಂಧಿ: ದೂರ್ವಾ ವೃತ್ತಾಂತ; 17ನೇ ಸಂಧಿ: ಘೋಷಯಾತ್ರೆಯ ನೆಪ; 18ನೇ ಸಂದಿ:ಗಂಧರ್ವ ಕೌರವ ಬಲಗಳೊಡನೆ ಹೋರಾಟ; 19ನೇ ಸಂಧಿ,ಚಿತ್ರಸೇನ ಕೌರವನನ್ನು ಕಟ್ಟಿಕೊಂಡು ಒಯ್ಯುತ್ತಾನೆ; 20 ನೇ ಸಂಧಿ:ಅರ್ಜುನನಿಂದ ಚಿತ್ರಸೇನನ ಪರಾಭವ.; ೨೧ನೇ ಸಂಧಿ:ಮಾನಭಂಗದಿಂದ ನೊಂದ ಕೌರವ ಪ್ರಾಯೋಪವೇಶಕ್ಕೆ ತೊಡಗುವನು, ಅವನಿಗೆ ರಾಕ್ಷಸೋಪದೇಶ; ೨೨ನೇ ಸಂಧಿ:ಸೈಂಧವನಿಂದ ದ್ರೌಪದಿಯ ಅಪಹರಣ, ಅವನ ಪರಿಭವ-ಪ್ರತಿಜ್ಞೆ- ಶಿವನಿಂದ ಪಾಂಡವರನ್ನು ಗೆಲ್ಲಲು ವರ, ೨೩ನೇ ಸಂಧಿ:ಯಕ್ಷಪ್ರಶ್ನೆ. |
4.ವಿರಾಟಪರ್ವ | 10 | 1 ನೇ ಸಂಧಿ :ವಿರಾಟನಗರ ಪ್ರವೇಶ,; 2 ನೇ ಸಂಧಿ :ದ್ರೌಪದಿಯಲ್ಲಿ ಕೀಚಕನ ಮೋಹ; 3ನೇ ಸಂಧಿ :ಭೀಮನಿಂದ ಕೀಚಕನ ವಧೆ; 4 ನೇ ಸಂಧಿ :ದಕ್ಷಿಣ ಗೋಗ್ರಹಣದಲ್ಲಿ ಭೀಮ ಸಶರ್ಮಕನನ್ನು ಹಿಡಿಯುತ್ತಾನೆ; 5 ನೇ ಸಂಧಿ: ಉತ್ತರಗೋಗ್ರಹಣ, ಉತ್ತರನ ಪೌರುಷ, ಅರ್ಜುನನ ಸಾರಥ್ಯ; 6 ನೇ ಸಂಧಿ :ಭೀತಿಗೊಂಡ ಉತ್ತರನನ್ನು ಕಲಿಮಾಡಿ ಅರ್ಜುನ ಕೌರವ ಬಲವನ್ನು ಎದುರಿಸುತ್ತಾನೆ.;7 ನೇ ಸಂಧಿ: ಕೌರವನನ್ನು ಸದೆದು ಗೋವುಗಳನ್ನು ಬಿಡಿಸಿದುದು.; 8 ನೇ ಸಂಧಿ:ಸನ್ಮೋಹನಾಸ್ತ್ರ ಪ್ರಯೋಗ.; 9ನೇ ಸಂಧಿ : ಉತ್ತರ ಧನಂಜಯರು ಜಯಶಾಲಿಗಳಾಗಿ ನಗರಕ್ಕೆ ಹಿಂದಿರುಗಿದುದು.; 10ನೇ ಸಂಧಿ:ಅಭಿಮನ್ಯು ಉತ್ತರೆಯರ ಮದುವೆಗೆ ಶ್ರೀಕೃಷ್ಣ ಬರುತ್ತಾನೆ; |
5.ಉದ್ಯೋಗಪರ್ವ | 11 | 1 ನೇ ಸಂಧಿ :ಭಕ್ತಕುಟುಂಬಿ ಅರ್ಜುನನ ಸಾರಥಿಯಾಗುವುದು.; 2 ನೇ ಸಂಧಿ :ಶಲ್ಯನನ್ನು ಕೌರವ ಒಲಿಸಿಕೊಂಡುದು, ಸಂಜಯನ ದೌತ್ಯ; 3ನೇ ಸಂಧಿ :ವಿದುರ ನೀತಿ; 4 ನೇ ಸಂಧಿ :ಸನತ್ಸುಜಾತ ನೀತಿ; 5 ನೇ ಸಂಧಿ:ಕೃಷ್ಣ ಪಾಂಡವರು ಹೇಳಿದುದನ್ನು ಸಂಜಯ ಕೌರವರಿಗೆ ನಿರೂಪಿಸುತ್ತಾನೆ. ; 6 ನೇ ಸಂಧಿ :ಸಂಗ್ರಾಮಕ್ಕೆ ಪಾಂಡವರ ಮನಸ್ಸನ್ನು ಕೃಷ್ಣ ಹದಗೊಳಿಸಿದುದು.;7 ನೇ ಸಂಧಿ: 'ಕಾಳಗವನೇ ಬಲಿದು ಬಹೆ' ಎಂದು ದ್ರೌಪದಿಗೆ ವಚನವಿತ್ತು ಕೃಷ್ಣ ಹಸ್ತಿನಾವತಿಗೆ ಪಯಣ.; 8 ನೇ ಸಂಧಿ:ಕೌರವನ ಒಡ್ಡೋಲಗಕ್ಕೆ ರಾಯಭಾರಿ ಕೃಷ್ಣ ನಡೆತರುತ್ತಾನೆ.; 9ನೇ ಸಂಧಿ : 'ಬಿಡು ನೆಲನ, ಕೇಡಿಗರ ಮಾತಿಗೊಡಂಬಡದಿರು' ಎಂದು ಹೇಳಿದ ಕೃಷ್ಣನನ್ನು ಕೌರವ ಕಟ್ಟುವ ಯೋಜನೆ, ವಿಶ್ವರೂಪದರ್ಶನ.; 10ನೇ ಸಂಧಿ:ಕರ್ಣಬೇಧನ;11ನೇ ಸಂದಿ: ದೃಷ್ಟದ್ಯುಮ್ನನು ಸೇನಾಧಿಪತಿಯಾಗುತ್ತಾನ್.; |
6.ಭೀಷ್ಮಪರ್ವ | 10 | 1 ನೇ ಸಂಧಿ :ಭೀಷ್ಮನು ಕೌರವರ ಸೇನಾಧಿಪತಿಯಾದುದು.; 2 ನೇ ಸಂಧಿ :ಶತ್ರು ಸುಭಟರನ್ನು ಧರ್ಮರಾಯನು ಸಾಮದಿಂದ ಒಲಿಸಿಕೊಂಡುದು.; 3ನೇ ಸಂಧಿ :ತನ್ನ ನಿಜವನ್ನು ತೋರಿ ಶ್ರೀಕೃಷ್ಣನು ಅರ್ಜುನನ ವಿಷಾದವನ್ನು ಕಳೆಉದು.; 4 ನೇ ಸಂಧಿ :ಯುದ್ಧಾರಂಭ; 5 ನೇ ಸಂಧಿ:ಉಭಯ ಪಕ್ಷದ ಮಹಾರಥರ ಯುದ್ಧ. ; 6 ನೇ ಸಂಧಿ :ಕೃಷ್ಣನ ಕೋಪವನ್ನು ಕೆರಳಿಸಿ ಅದನ್ನು ಭಕ್ತಿಯಿಂದ ಶಮನಗೊಳಿಸಿ ದೇವನಿಗಾಗುತ್ತಿದ್ದ ಅಪವಾದವನ್ನು ತಪ್ಪಿಸುತ್ತಾನೆ.;7 ನೇ ಸಂಧಿ: ಕೃಷ್ಣನೊಡನೆ ಬಂದ ಪಾಂಡವರುಪ್ರಾರ್ಥಿಸಲು ಭೀಷ್ಮರು ಶಸ್ತ್ರಸಂನ್ಯಾಸ ಮಾಡುವುದಾಗಿ ತಿಳಿಸಿದುದು.; 8 ನೇ ಸಂಧಿ:ಅರ್ಜುನನ ಪ್ರತಾಪವನ್ನು ಕಂಡದ್ರೋಣಾದಿಗಳ ಬೆರಗು.; 9ನೇ ಸಂಧಿ : ಭೀಷ್ಮಾರ್ಜುನ ಸಂಗ್ರಾಮ.; 10ನೇ ಸಂಧಿ:ಭೀಶ್ಮರ ಶರಶಯನ; |
7.ದ್ರೋಣಪರ್ವ | 19 | 1 ನೇ ಸಂಧಿ :ದ್ರೋಣ ಸೇನಾದಿಪತ್ಯ;; 2 ನೇ ಸಂಧಿ : ಧರ್ಮರಾಯನನ್ನು ಹಿಡಿದುತರುವುದಾಗಿ ಕೌರವನಿಗೆ ದ್ರೋಣರು ಭಾಷೆ ಕೊಡುವುದು.; 3ನೇ ಸಂಧಿ :ಸುಪ್ರತೀಕ ಭಗದತ್ತರನ್ನು ಅರ್ಜುನ ಕೊಲ್ಲುವುದು; 4 ನೇ ಸಂಧಿ :ಪದ್ಮವ್ಯೂಹ ರಚನೆ, ವ್ಯೂಹ ಬೇಧನಕ್ಕೆ ಅಭಿಮನ್ಯು ಹೊರಟಿದ್ದು,; 5 ನೇ ಸಂಧಿ: ಅಭಿಮನ್ಯುವಿನ ಮಕ್ಕಳಾಟಿಕೆ ಅತಿರಥರಿಗೆ ಮೃತ್ಯವಾಟವಾಗಿ ಶತ್ರು ಕುಮಾರರು ಅಹುತಿಗೊಳ್ಳುವರು.; 6 ನೇ ಸಂಧಿ :ಕಾಡುಕಿಚ್ಚಿನ ಉಪಶಮನ, ಅಭಿಮನ್ಯವಿನ ಮರಣ; 7 ನೇ ಸಂಧಿ:ಧರ್ಮರಾಯನ ದುಃಕಾತಿರೇಕ, ವ್ಯಾಸರ ಉಪದೇಶ; 8 ನೇ ಸಂಧಿ:ಅರ್ಜುನನ ಭಯಂಕರ ಶೋಕ, ಕೋಪ ಸೈಧವ ವಧೆ ಪ್ರತಿಜ್ಞೆ.; 9ನೇ ಸಂಧಿ : ಭಕ್ತಿಯಿಂದ ದ್ರೋಣರನ್ನು ಗೆದ್ದು ಅರ್ಜುನ ಸೈನ್ಯವ್ಯೂಹವನ್ನು ಬೇಧಿಸುವುದು. ; 10ನೇ ಸಂಧಿ:ಕೌರವನನ್ನು ಗೆದ್ದ ಅರ್ಜುನ ಬಳಲಿದ ತನ್ನ ಕುದುರೆಗಳಿಗೆ ಸಂಗ್ರಾಮ ಮಧ್ಯದಲ್ಲಿ ನೀರು ಕುಡಿಸುವುದು.; 11ನೇ ಸಂಧಿ:ಧರ್ಮರಾಜ ಕಳಿಸಿದ ಸಾತ್ಯಕಿ ಅರ್ಜುನನ್ನು ಸೇರುವುದು.; 12ನೇ ಸಂಧಿ:ಭೀಮಸೇನ ಕೌರವಾನುಜರನ್ನು ಅಹುತಿಗೊಳ್ಳುವುದು.; 13 ನೇ ಸಂಧಿ:ದ್ರೋಣರನ್ನು ಗೆದ್ದ ಭೀಮ ಕರ್ಣನೊಡನೆ ಸೆಣಸಿ ಘಾಸಿಯಾಗುವುದು.; 14 ನೇ ಸಂಧಿ:ಸೈಂದವ ವಧೆ.;15ನೇ ಸಂಧಿ:ಘಟೋತ್ಕಚನ ರಾತ್ರಿ ಯುದ್ಧ: 16 ನೇ ಸಂಧಿ: ಕರ್ಣನಿಂದ ಅವನ ಮರಣ.; 17ನೇ ಸಂಧಿ: ರಾತ್ರಿಯುದ್ಧದಲ್ಲಿ ದ್ರೋಣರ ಉಗ್ರ ಪ್ರತಾಪ.; 18ನೇ ಸಂದಿ:ದ್ರೋಣರ ಮರಣ.; 19ನೇ ಸಂಧಿ:ಅಶ್ವತ್ಥಾಮನ ಪ್ರಲಯ ಕೋಪ, ನಾರಾಯಣ ಅಸ್ತ್ರ ಪ್ರಯೋಗ, ಶ್ರೀಕೃಷ್ಣನಿಂದ ರಕ್ಷೆ; |
8.ಕರ್ಣ ಪರ್ವ | 27 | 1 ನೇ ಸಂಧಿ :ಕರ್ಣನ ಸೇನಾದಿಪತ್ಯ;; 2 ನೇ ಸಂಧಿ : ಭೀಮಸೇನನು ಕ್ಷೇಮಧೂರ್ತಿಯನ್ನು ಕೊಲ್ಲುವುದು.; 3ನೇ ಸಂಧಿ :ಕೌರವಸೈನ್ಯವನ್ನು ಸಾತ್ಯಕಿ ಕಲಕುವುದು; 4 ನೇ ಸಂಧಿ :ದುರ್ಯೋದನನ್ನು ಧರ್ಮರಾಯ ಗೆಲ್ಲುವುದು,; 5 ನೇ ಸಂಧಿ: ತ್ರಿಪುರ ದಹನದ ಕಥೆಯನ್ನು ಹೇಳಿ ಕೌರವನು ಶಲ್ಯನನ್ನು ಕರ್ಣನ ಸಾರಥಿಯಾಗಲು ಒಡಂಬಡಿಸುವುದು.; 6 ನೇ ಸಂಧಿ :ತ್ರಿಪುರ ದಹನದ ಕಥೆ; 7 ನೇ ಸಂಧಿ:ಕಾಮಾರಿಯು ತ್ರಿಪುರಾರಿಯಾದುದಯ; 8 ನೇ ಸಂಧಿ:ಸಾರಥಿ ಶಲ್ಯನೊಡನೆ ಕರ್ಣ ಯುದ್ಧಭೂಮಿಗೆ ಬರುವುದು.; 9ನೇ ಸಂಧಿ : ಶಲ್ಯ ಕರ್ಣರ ತಿಕ್ಕಾಟ. ; 10ನೇ ಸಂಧಿ:ಸುಷೇಣನನ್ನು ಭೀಮ ಕೊಂದುದು.;11ನೇ ಸಂಧಿ:ಧರ್ಮರಾಯನನ್ನು ಕರ್ಣ ಭಂಗಿಸುವುದು.; 12ನೇ ಸಂಧಿ:ಭೀಮನಿಂದ ಕರ್ಣನ ಪರಾಭವ.; 13 ನೇ ಸಂಧಿ:ಭೀಮನಿಂದ ಕೌರವಾನುಜರ ಮರಣ.; 14 ನೇ ಸಂಧಿ:ಅರ್ಜುನನು ಅಣ್ಣನ ಸೋಲನ್ನು ಕೇಳಿ ಬರುತ್ತಿರುವಾಗ ಕೌರವ ಬಲವನ್ನು ಸವರುವುದು.;15ನೇ ಸಂಧಿ:ಕೌರವಸಾಗರವನ್ನು ಭೀಮಸೇನ ಕದಡುವುದು.: 16 ನೇ ಸಂಧಿ: ನೊಂದ ಅಣ್ಣನನ್ನು ಕಾಣಲು ಅರ್ಜುನ ಕೃಷ್ಣನೊಡನೆ ಬರುವುದು, ಧರ್ಮಜನ ಬಿರುನುಡಿ.; 17ನೇ ಸಂಧಿ: ಅವಮಾನಿತ ಅರ್ಜುನ ಅಣ್ಣನನ್ನು ಕೊಲ್ಲುತ್ತೇನೆಂದು ಮುನ್ನುಗ್ಗುವುದು.ಶ್ರೀಕೃಷ್ಣನ ಹಿತವಚನ, ಸಹೋದರರ ಸಮ್ಮಿಲನ; 18ನೇ ಸಂದಿ:ಅಣ್ಣನಾಣತಿ ಪಡೆದು ಅರ್ಜು ಯುದ್ಧಕ್ಕೆ ಹೊರಟುದು ; 19ನೇ ಸಂಧಿ:ದುಶ್ಯಾಸನನ ರಕ್ತದಲ್ಲಿ ಭೀಮಸೇನನ ಕೋಪಾಗ್ನಿಗೆ ಸ್ನಾನ.; 20 ನೇ ಸಂಧಿ: ಜಯಮತ್ತನಾದ ಭೀಮನನ್ನು ವೃಷಸೇನನು ವಿರಥನನ್ನಾಗಿ ಮಾಡುವುದು.; 21ನೇ ಸಂದಿ:ಕರ್ಣಾರ್ಜುನರ ಯುದ್ಧಾರಂಬ; 22ನೇ ಸಂಧಿ:ಸೃಷ್ಟಿಯ ಸಮಸ್ತ ಸುರಾಸುರ ಶಕ್ತಿಗಳು ಎರಡೂ ಒಟ್ಟಾಗಿ ಕರ್ಣಾರ್ಜುನರ ಪಕ್ಷ ವಹಿಸುವುದು.; 23ನೇ ಸಂಧಿ:ಕರ್ಣಾರ್ಜುನರ ಯುದ್ಧ,ಕೃಷ್ಣ ಮೆಚ್ಚುವಂತೆ ಕರ್ಣಹೋರಾಡುವುದು.;24 ನೇ ಸಂಧಿ :ಕರ್ಣನ ಪರಾಕ್ರಮಕ್ಕೆ ಆಂಜನೇಯ ತಲೆದೂಗುವುದು.; 25 ನೇ ಸಂಧಿ :ಸರ್ಪಬಾಣ ಪ್ರಯೋಗ, ಶಲ್ಯ ತಿರಸ್ಕಾರ.; 26 ನೇ ಸಂಧಿ:ಕರ್ಣನ ವಿಜಯಸಿರಿ ಧನಂಜಯನ ಭುಜಕ್ಕೆ ಸರಿದಳು.; 27 ನೇ ಸಂಧಿ:ಕರ್ಣಾವಸಾನ. ಪಾಂಡವರ ದುಮ್ಮಾನ. |
9.ಶಲ್ಯಪರ್ವ | 3 | 1 ನೇ ಸಂಧಿ :ಶಲ್ಯನ ಸೇನಾದಿಪತ್ಯ;; 2 ನೇ ಸಂಧಿ : ಧರ್ಮರಾಯನು ಶಲ್ಯನನ್ನು ಜಯಿಸುವುದು.; 3ನೇ ಸಂಧಿ :ಧರ್ಮರಾಯನಿಂದ ಶಲ್ಯವಧೆ; |
10.ಗದಾಪರ್ವ | 13 | 1 ನೇ ಸಂಧಿ :ಸುಯೋಧನನು ತನ್ನನ್ನು ತಾನೇ ಸೇನಾಧಿಪತಿಯಾಗಿ ಮಾಡಿಕೊಂಡುದು.; 2 ನೇ ಸಂಧಿ :ಸಹದೇವನಿಂದ ಶಕುನಿಯ ಕಥೆ.; 3ನೇ ಸಂಧಿ :ದ್ವೈಪಾವನ ಸರೋವರ ಪ್ರವೇಶ.; 4 ನೇ ಸಂಧಿ :ಪಾಂಡವರು ಸುಯೋಧನನ್ನು ಅರಸಿಕೊಂಡು ಅಲ್ಲಿಗೆ ಬರುವುದು.; 5 ನೇ ಸಂಧಿ:ಪಾಂಡವರ ಅವಹೇಳನದಿಂದ ಕೌರವ ಸರೋವರದಿಂದ ಹೊರಬರುತ್ತಾನೆ.; 6 ನೇ ಸಂಧಿ :ಭೀಮ ದುರ್ಯೋಧನರ ಸಂಗ್ರಾಮ; 8 ನೇ ಸಂಧಿ:ತೊಡೆಯೊಡೆದ ಕೌರವನನ್ನು ಕಂಡು ಅಶ್ವತ್ಥಾಮ ಪಾಂಡವರನ್ನು ನಿರ್ನಾಮಗೊಳಿಸಲು ಪ್ರತಿಜ್ಞೆ ಮಾಡುತ್ತಾನೆ.; 9ನೇ ಸಂಧಿ :ರಾತ್ರಿ ಪಾಂಡವ ಶಿಬಿರದಲ್ಲಿ ಪ್ರಾಣ ಹತ್ಯೆ.; 10ನೇ ಸಂಧಿ:ಅಶ್ವಸ್ಥಾಮನ ಕುಶಿಕಾಸ್ತ್ರದಿಂದ ಉತ್ತರೆಯ ಗರ್ಭವನ್ನು ಶ್ರೀಕೃಷ್ಣ ಕಾಪಾಡುತ್ತಾನೆ. ಅಶ್ವತ್ಥಾಮನನ್ನು ಕೊಲ್ಲಲು ಹೊರಡುವ ಭೀಮಾರ್ಜುನರನ್ನು ದ್ರೌಪದಿ ತಡೆಯುತ್ತಾಳೆ.;11ನೇ ಸಂಧಿ:ವೇದವ್ಯಾಸರು ದೃತರಾಷ್ಟ್ರನನ್ನು ಸಂತೈಸುವುದು, ಧರ್ಮರಾಯನಿಗೆ ಗಾಂಧಾರಿಯ ಶಾಪ.; 12ನೇ ಸಂಧಿ:ಮಡಿದ ಮಕ್ಕಳನ್ನು ಯುದ್ಧಭೂಮಿಯಲ್ಲಿ ಕಂಡು ಗಾಂಧಾರಿಯ ವಿಲಾಪ.; 13 ನೇ ಸಂಧಿ:ಧರ್ಮರಾಜ ಪಟ್ಟಾಭಿಷೇಕ.; |
ಒಟ್ಟು ಸಂಧಿಗಳು | 152 | ಪದ್ಯಗಳು: 8244 |
'ಮುನಿಯ ಮಾತಿನ ಬಲೆಗೆ ಸಿಲುಕಿತು ಜನಪತಿಯ ಚೈತನ್ಯಮೃಗ';
'ನಮ್ಮ ಬಾಗ್ಯದ ಬಾಣಸಿಗ ವಿಧಿ ವಿಷವ ಬೆರಸುವೊಡಾರು ಕಾವರು'.
'ಬಂಧುಗಳ ದರುಶನ ಫಲವಲಾ ಸಂಸಾರ ತರುವಿಂಗೆ';
ಪರಿಮಳದ ಪರಮಾಣುಗಳ ಸಂ
ವರಿಸಿ ಮುಕ್ತಾಫಲದ ಕೆಂದಾ
ವರೆಯ ಮರಿದುಂಬಿಗಳ ವರ್ಣಾಂತರವನಳವಡಿಸಿ|
ಸರಸ ವೀಣಾಧ್ವನಿಯ ಹಂಸೆಯ
ಗರುವ ಗತಿಗಳನಾಯ್ದು ಮನ್ಮಥ
ವರ ವಿರಂಚಿಯೆ ಸೃಜಿಸಿದನು ಪಾಂಚಾಲ ನಂದನೆಯ.||(೧-೧೩-೧೭)
"ಎನಲು ಭಕುತಿಯ ಭಾವರಸದಲಿ ನೆನೆದು ಹೊಂಪುಳಿಯಾಗಿ ರೋಮಾಂ
ಚನದ ಮೈಯುಭ್ಬಿನಲಿ ತನು ಪುಳುಕಾಂಬು ಪೂರದಲಿ,
ಮನದೊಳಗೆ ವಂದಿಸಿದಳೀತನಲಿ ಗುರು ಭಾವನೆಯ ಮತಿ ಸಂ
ಜನಿಸೇನೆಂದರಿಯೆನೆಂದಳು ಕಮಲಮುಖಿ ನಗುತ"||
'ಕಾಡು ಕಿಚ್ಚೆದ್ದಡವಿಯನು ಕುಡಿ
ನಾಲಗೆಯೊಳಳವಡಿಸಿ ದಳ್ಳುರಿ
ಜ್ವಾಲೆ ತಗ್ಗಿದವೋಲು ಗಗನದ ಮುಗಿಲ ಮೋಹರವ|
ದಾಳಿಯಲಿಯರೆಯಟ್ಟಿ ಸುಂಟರು
ಗಾಳಿಯುರವಣಿಸಿ ನಿಂದವೊಲು ಸುರ
ಪಾಲ ತನಯನ ತನಯನಸ್ತಮಿಸಿದನು ರಣದೊಳಗೆ||
......ಸಮರದ
ಲೀಲೆಯಲಿ ಕುಣಿಕುಣಿದು ಬಸವಳಿ
ದಾಳುಗಳ ದೇವನು ಮಹಾ ಹವದೊಳಗೆ ಪವಡಿಸಿದ||
....ವಿಕ್ರಮಾಗ್ನಿಯ
ತಗಹು ಬಿಡದಭಿಮನ್ಯು ಮೆರೆದನು ಶಸ್ತ್ರ ಶಯನದಲಿ||
ತಾವು ಷಡುರಥರು ಒಬ್ಬ ಹಸುಳೆಯ
ಹೇವವಿಲ್ಲದ ಕೊಂದರೋ ಸುಡಲಾವ ವೀರರು ಕೌರವಾದಿಗಳೆಂದುದಮರಗಣ||
(ಮಡಿದ ....ಬಾಲಕನನು ಈಕ್ಷಿಸಲು ಅರಿದು (ಸಾದ್ಯವಿಲ್ಲ) ತನಗೆ ಎಂಬಂತೆ ರವಿ ಜಾರಿದನು ಪಶ್ಚಿಮಕೆ||
* | * | * | * | * | * | * | * | * | * | * | * | * | ಸಂಧಿಗಳು | ಪದ್ಯಗಳು | |||||||||
---|---|---|---|---|---|---|---|---|---|---|---|---|---|---|---|---|---|---|---|---|---|---|---|
ಆದಿ ಪರ್ವ | 1(ಸಂಧಿ->) | 1 | 2 | 3 | 4 | 5 | 6 | 7 | 8 | 9 | 10 | 11 | 12 | 13 | 14 | 15 | 16 | 17 | 18 | 19 | 20 | 20 | |
ಪದ್ಯಗಳು | 23 | 28 | 28 | 70 | 32 | 46 | 74 | 94 | 25 | 40 | 46 | 26 | ಼68 | 34 | 52 | 67 | 33 | 34 | 51 | 69 | 940 | ||
ಸಭಾ | 2(ಸಂಧಿ->) | 1 | 2 | 3 | 4 | 5 | 6 | 7 | 8 | 9 | 10 | 11 | 12 | 13 | 14 | 15 | 16 | 16 | |||||
94 | 129 | 67 | 14 | 51 | 26 | 47 | 54 | 65 | 81 | 36 | 101 | 78 | 132 | 67 | 78 | 1120 | |||||||
ಅರಣ್ಯ | 3(ಸಂಧಿ->) | 1 | 2 | 3 | 4 | 5 | 6 | 7 | 8 | 9 | 10 | 11 | 12 | 13 | 14 | 15 | 16 | 17 | 18 | 19 | 20 | ||
37 | 35 | 41 | 47 | 47 | 110 | 104 | 55 | 39 | 58 | 33 | 66 | 72 | 48 | 31 | 50 | 38 | 43 | 56 | 41 | ||||
3(ಸಂಧಿ->) | 21 | 22 | 23 | 23 | |||||||||||||||||||
71 | 53 | 53 | 1228 | ||||||||||||||||||||
ವಿರಾಟ | 4(ಸಂಧಿ->) | 1 | 2 | 3 | 4 | 5 | 6 | 7 | 8 | 9 | 10 | 10 | |||||||||||
34 | 56 | 110 | 61 | 48 | 66 | 52 | 93 | 41 | 85 | 646 | |||||||||||||
ಉದ್ಯೋಗ | 5(ಸಂಧಿ->) | 1 | 2 | 3 | 4 | 5 | 6 | 7 | 8 | 9 | 10 | 11 | 11 | ||||||||||
45 | 48 | 137 | 122 | 22 | 30 | 31 | 72 | 80 | 25 | 49 | 661 | ||||||||||||
ಭೀಷ್ಮ | 6(ಸಂಧಿ->) | 1 | 2 | 3 | 4 | 5 | 6 | 7 | 8 | 9 | 10 | 10 | |||||||||||
64 | 39 | 93 | 98 | 42 | 48 | 34 | 67 | 51 | 43 | 579 | |||||||||||||
ದ್ರೋಣ | 7(ಸಂಧಿ->) | 1 | 2 | 3 | 4 | 5 | 6 | 7 | 8 | 9 | 10 | 11 | 12 | 13 | 14 | 15 | 16 | 17 | 18 | 19 | 19 | ||
71 | 82 | 80 | 61 | 82 | 67 | 39 | 68 | 52 | 63 | 18 | 33 | 64 | 48 | 71 | 56 | 45 | 72 | 56 | 1128 | ||||
ಕರ್ಣ | 8(ಸಂಧಿ->) | 1 | 2 | 3 | 4 | 5 | 6 | 7 | 8 | 9 | 10 | 11 | 12 | 13 | 14 | 15 | 16 | 17 | 18 | 19 | 20 | ||
31 | 21 | 31 | 39 | 37 | 33 | 46 | 42 | 40 | 49 | 61 | 33 | 48 | 40 | 37 | 34 | 53 | 30 | 100 | 41 | 1154 | |||
8(ಸಂಧಿ->) | 21 | 22 | 23 | 24 | 25 | 26 | 27 | 27 | |||||||||||||||
26 | 49 | 48 | 57 | 45 | 52 | 31 | (308) | ||||||||||||||||
ಶಲ್ಯ | 9(ಸಂಧಿ->) | 1 | 2 | 3 | 3 | ||||||||||||||||||
35 | 63 | 77 | 175 | ||||||||||||||||||||
ಗದಾ | 10(ಸಂಧಿ->) | 1 | 2 | 3 | 4 | 5 | 6 | 7 | 8 | 9 | 10 | 11 | 12 | 13 | 13 | ||||||||
69 | 41 | 45 | 60 | 56 | 35 | 54 | 64 | 44 | 27 | 73 | 25 | 20 | 613 | ||||||||||
ಒಟ್ಟು | 152 | 8244 |
This article uses material from the Wikipedia ಕನ್ನಡ article ಕರ್ಣಾಟ ಭಾರತ ಕಥಾಮಂಜರಿ, which is released under the Creative Commons Attribution-ShareAlike 3.0 license ("CC BY-SA 3.0"); additional terms may apply (view authors). ವಿಶೇಷವಾಗಿ ಟಿಪ್ಪಣಿ ಮಾಡದಿದ್ದ ಹೊರತು ಪಠ್ಯ "CC BY-SA 4.0" ರಡಿ ಲಭ್ಯವಿದೆ. Images, videos and audio are available under their respective licenses.
®Wikipedia is a registered trademark of the Wiki Foundation, Inc. Wiki ಕನ್ನಡ (DUHOCTRUNGQUOC.VN) is an independent company and has no affiliation with Wiki Foundation.