ಕಾಗಿನೆಲೆ: ಭಾರತ ದೇಶದ ಗ್ರಾಮಗಳು

ಕಾಗಿನೆಲೆ ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನಲ್ಲಿ ಕಾಗಿನೆಲೆ ಇದ್ದು , ಹಾವೇರಿಯಿಂದ 9 ಮೈ.

ದೂರದಲ್ಲಿದೆ. ಇದು ಕನಕದಾಸರ ಆರಾಧ್ಯದೈವ ಆದಿಕೇಶವನ ನೆಲೆಬೀಡು.

Kaginele
Kaginelli
village
Kaginele is located in Karnataka
Kaginele
Kaginele
Location in Karnataka, India
Kaginele is located in India
Kaginele
Kaginele
Kaginele (India)
Coordinates: 14°41′19″N 75°21′35″E / 14.68861°N 75.35972°E / 14.68861; 75.35972
Countryಕಾಗಿನೆಲೆ: ಇತಿಹಾಸ, ಪ್ರಕೃತಿ ಸೌಂದರ್ಯ, ಧಾರ್ಮಿಕ-ಸಾಂಸ್ಕೃತಿಕ ಕೇಂದ್ರವಾಗಿ ಭಾರತ
Stateಕರ್ನಾಟಕ
DistrictHaveri district
TalukByadagi
Languages
 • OfficialKannada
Time zoneUTC+5:30 (IST)
PIN
581 153
Telephone code08574
Vehicle registrationKA 27

ಇತಿಹಾಸ

ಹಿಂದೆ ಒಂದು ಪರಗಣೆಯಾಗಿ ಅನೇಕ ಗ್ರಾಮಗಳನ್ನು ಒಂಗೊಂಡಿತ್ತು. ಸುಮಾರು 15 ಶಿಲಾಶಾಸನಗಳೂ 10 ಪುರಾತನ ದೇವಾಲಯಗಳೂ ಇವೆ. ಒಮ್ಮೆ ಬನವಾಸಿಯ ಕದಂಬರ ಆಧಿಪತ್ಯಕ್ಕೆ ಒಳಪಟ್ಟಿತ್ತು. ಬನವಾಸಿಯು ಚಾಳುಕ್ಯರ ಕೈಗೆ ಬಂದಾಗ ಇದೂ ಚಾಳುಕ್ಯರ ಆಡಳಿತಕ್ಕೊಳಪಟ್ಟಿತು. ಕೆಲಕಾಲ ಇದು ದೇವಗಿರಿಯ ಯಾದವರ ಅಂಕಿತದಲ್ಲಿದ್ದುದೂ ಉಂಟು. ಚಾಳುಕ್ಯರ ಭುವನೈಕಮಲ್ಲ ದತ್ತಿ-ದಾನಗಳನ್ನು ಕೊಟ್ಟಿರುವುದರ ಬಗ್ಗೆ ಆಧಾರಗಳಿವೆ. ದೇವಗಿರಿಯ ಯಾದವರು ಬೆಟ್ಟೇಶ್ವರ ಮತ್ತು ಕಾಳಹಸ್ತೀಶ್ವರ ದೇವಾಲಯಗಳಿಗೆ ದಾನವಿತ್ತರು. 14ನೆಯ ಶತಮಾನದಲ್ಲಿ ಬಹಮನೀ ಸುಲ್ತಾನರು ವಿಜಯನಗರದ ದೊರೆ ಬುಕ್ಕನಿಂದ ಇದನ್ನು ವಶಪಡಿಸಿಕೊಂಡರು. ಅನಂತರ ಮತ್ತೆ ಇದು ವಿಜಯನಗರದಲ್ಲೇ ಇದ್ದು ಒಂದು ಪರಗಣೆಯಾಗಿ ಸುಭೆಯಾಗಿ ಇತ್ತು. ಈ ಕಾಲದಲ್ಲಿ ಕನಕ ಇದರ ಢಣಾಯಕನಾಗಿ ವಿಜಯನಗರದ ಮಾಂಡಲೀಕನಾಗಿದ್ದ.  ವಿಜಾಪುರದ ಸುಲ್ತಾನ ಇದನ್ನು ಜಯಿಸಿ ಆಗ ಪ್ರಾಂತ್ಯವಾಗಿದ್ದ ಬಂಕಾಪುರಕ್ಕೆ ಸೇರಿಸಿದನೆಂದು (1573) ಹೇಳಲಾಗಿದೆ. ವಿಜಾಪುರದ ದಂಡನಾಯಕನಾಗಿದ್ದ ಮುಸ್ತಫಾಖಾನನ ದಾಳಿಯಿಂದ ಇಲ್ಲಿಯ ಕೋಟೆಕೊತ್ತಳಗಳು ನಾಶವಾಗಿರಬೇಕು. ಮುಂದೆ ಇದು ಸವಣೂರ ನವಾಬರ, ಅನಂತರ ಮೊಗಲರ, ವಿಜಾಪುರದ ಸುಲ್ತಾನರ, ಮರಾಠರ ಮತ್ತು ಬ್ರಿಟೀಷರ ಅಂಕಿತಕ್ಕೊಳಪಟ್ಟಿತ್ತು.

ಪ್ರಕೃತಿ ಸೌಂದರ್ಯ

ಮಲೆನಾಡಿನ ಅಂಚಿನಲ್ಲಿರುವ ಇದು ತನ್ನ ಪ್ರಕೃತಿ ಸೌಂದರ್ಯದಿಂದ ಅನೇಕರನ್ನು ಆಕರ್ಷಿಸಿದೆ. ಆಂಡಯ್ಯ ಮತ್ತು ಕನಕದಾಸರು ಇಲ್ಲಿಯ ಪ್ರಕೃತಿಸೌಂದರ್ಯವನ್ನು ಬಣ್ಣಿಸಿದ್ದಾರೆ. ಈ ಬಣ್ಣನೆಯನ್ನು ಚಾಳುಕ್ಯರ ಮತ್ತು ಯಾದವರ ಶಾಸನಗಳಲ್ಲಿಯೂ ಕಾಣಬಹುದಾಗಿದೆ.

ಧಾರ್ಮಿಕ-ಸಾಂಸ್ಕೃತಿಕ ಕೇಂದ್ರವಾಗಿ

ಪ್ರಾಚೀನ ಕಾಲದಿಂದಲೂ ಇದು ಧಾರ್ಮಿಕ ಕೇಂದ್ರವಾಗಿ ಬೆಳೆದು ಬಂದಿದೆ. ಜೈನ, ವೈಷ್ಣವ, ಶೈವ, ವೀರಶೈವ ಸಂಸ್ಕೃತಿಗಳ ಸಂಗಮ ಇದೆನ್ನುವುದಕ್ಕೆ ಸಾಕ್ಷಿ-ಇಲ್ಲಿಯ ಅನೇಕ ಗುಡಿ, ಗೋಪುರಗಳು. ಲಕ್ಷ್ಮೀನರಸಿಂಹ, ಆದಿಕೇಶವ, ಕಾಳಹಸ್ತೀಶ್ವರ, ವೀರಭದ್ರ, ಸೋಮೇಶ್ವರ, ಬ್ರಹ್ಮೇಶ್ವರ, ಸಂಗಮೇಶ್ವರ, ಬಸವಣ್ಣ, ಆದಿಶಕ್ತಿ-ಇವು ಇಲ್ಲಿಯ ಪ್ರಮುಖ ದೇವಾಲಯಗಳು. ಆದಿಶಕ್ತಿ ದೇವಾಲಯವೊಂದನ್ನಳಿದು ಮಿಕ್ಕವೆಲ್ಲ 10ನೆಯ ಶತಮಾನದಿಂದೀಚೆಗೆ ಸ್ಥಾಪಿಸಲ್ಪಟ್ಟವು. ಇಲ್ಲಿನ ಮುಖ್ಯ ದೇವಾಲಯಗಳು ಆದಿಕೇಶವ, ನರಸಿಂಹ. ಮಣ್ಣುಗೋಡೆಯಿಂದ ಸುತ್ತುವರಿಯಲ್ಪಟ್ಟ ಪ್ರಾಕಾರದೊಳಗೆ ಎರಡೂ ದೇವಾಲಯಗಳಿವೆ. ಹೆಬ್ಬಾಗಿಲು ಪ್ರವೇಶಿಸಿದೊಡನೆ ಗೋಚರಿಸುವುದು ನರಸಿಂಹ ಮಂದಿರ. ಎಡಭಾಗದಲ್ಲಿ 10 ಅಡಿಗಳ ಅಂತರದಲ್ಲಿ ಆದಿಕೇಶವ ದೇವಾಲಯವಿದೆ. 16ನೆಯ ಶತಮಾನದಲ್ಲಿ ಆದಿಕೇಶವನ ಮೂರ್ತಿಯನ್ನು ಕನಕದಾಸಬಾಡ ಗ್ರಾಮದಿಂದ ತಂದು ಪ್ರತಿಷ್ಠಾಪಿಸಿದನಂತೆ. ಆದಿಕೇಶವನ ಮೂರ್ತಿ 1 1/2 ಅಡಿ ಎತ್ತರವಾಗಿದೆ. ಕಲ್ಯಾಣದಿಂದ ಹೊರಟ ಶರಣರ ಗುಂಪು ಈ ಸ್ಥಳದಿಂದ ಆಕರ್ಷಿತವಾಗಿ ಇಲ್ಲೊಂದು ಸಂಗಮನಾಥ ಮಂದಿರ ನಿರ್ಮಿಸಿದೆ. ಇಲ್ಲಿಯ ಕೆರೆಯ ದಂಡೆಯ ಮೇಲೆ ಕನಕದಾಸನ ಸಮಾಧಿಯಿದೆ. ಸುಮಾರು 9ನೆಯ ಶತಮಾನದಿಂದ 16ನೆಯ ಶತಮಾನದ ವರೆಗೆ ಧಾರ್ಮಿಕ-ಸಾಂಸ್ಕೃಕ ಕೇಂದ್ರವಾಗಿದ್ದ ಇದು ಅನಂತರ ಮುಸ್ಲಿಮರ ಆಳ್ವಿಕೆಗೆ ಒಳಪಟ್ಟಿದ್ದುದರಿಂದ ಅದರ ಚಟುವಟಿಕೆಗಳೆಲ್ಲ ನಿಂತುಹೋದುವು.

ಕಾಗಿನೆಲೆ ಅಭಿವೃದ್ದಿ ಪ್ರಾಧಿಕಾರ

ಕರ್ನಾಟಕ ರಾಜ್ಯ ಸರ್ಕಾರವು ಕಾಗಿನೆಲೆ ಅಭಿವೃದ್ದಿಗಾಗಿ "ಕಾಗಿನೆಲೆ ಅಭಿವೃದ್ದಿ ಪ್ರಾಧಿಕಾರ" ಸ್ಥಾಪನೆ ಮಾಡಿದೆ.

ಸಂಪರ್ಕಗಳು

ಕಾಗಿನೆಲೆ: ಇತಿಹಾಸ, ಪ್ರಕೃತಿ ಸೌಂದರ್ಯ, ಧಾರ್ಮಿಕ-ಸಾಂಸ್ಕೃತಿಕ ಕೇಂದ್ರವಾಗಿ 
ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ:

Tags:

ಕಾಗಿನೆಲೆ ಇತಿಹಾಸಕಾಗಿನೆಲೆ ಪ್ರಕೃತಿ ಸೌಂದರ್ಯಕಾಗಿನೆಲೆ ಧಾರ್ಮಿಕ-ಸಾಂಸ್ಕೃತಿಕ ಕೇಂದ್ರವಾಗಿಕಾಗಿನೆಲೆ ಅಭಿವೃದ್ದಿ ಪ್ರಾಧಿಕಾರಕಾಗಿನೆಲೆ ಸಂಪರ್ಕಗಳುಕಾಗಿನೆಲೆಕನಕದಾಸಬ್ಯಾಡಗಿಹಾವೇರಿ ಜಿಲ್ಲೆ

🔥 Trending searches on Wiki ಕನ್ನಡ:

ಸಾರಜನಕಮಾಧ್ಯಮಉಳ್ಳಾಲಬಿ.ಜಯಶ್ರೀಬ್ರಾಹ್ಮಣಕದಂಬ ರಾಜವಂಶಹೆಚ್.ಡಿ.ದೇವೇಗೌಡಹಾವು ಕಡಿತಕೆ. ಎಸ್. ನರಸಿಂಹಸ್ವಾಮಿಉತ್ತರ ಕರ್ನಾಟಕಕಂಪ್ಯೂಟರ್ನರೇಂದ್ರ ಮೋದಿಭಾರತದ ವಿಜ್ಞಾನಿಗಳುಅದ್ವೈತಅಥರ್ವವೇದಅರ್ಜುನವೀಣೆಕನ್ನಡವೆಂಕಟೇಶ್ವರ ದೇವಸ್ಥಾನಅಮಿತ್ ತಿವಾರಿ (ಏರ್ ಮಾರ್ಷಲ್)ಎಳ್ಳೆಣ್ಣೆಕಿತ್ತೂರು ಚೆನ್ನಮ್ಮಯಕೃತ್ತುಕೇರಳಮತದಾನಕರಗಕೆಂಬೂತ-ಘನಮೆಕ್ಕೆ ಜೋಳಕರ್ನಾಟಕದ ವಿಶ್ವವಿದ್ಯಾಲಯಗಳುರಾವಣವಿಕ್ರಮಾರ್ಜುನ ವಿಜಯಎಚ್.ಎಸ್.ವೆಂಕಟೇಶಮೂರ್ತಿಮಂಡಲ ಹಾವುವಚನ ಸಾಹಿತ್ಯಭಗತ್ ಸಿಂಗ್ಉಪ್ಪಿನ ಸತ್ಯಾಗ್ರಹಹಿಂದೂ ಧರ್ಮಕುವೆಂಪುಬನವಾಸಿಗೌತಮ ಬುದ್ಧಆರೋಗ್ಯಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಕರ್ನಾಟಕದ ಮುಖ್ಯಮಂತ್ರಿಗಳುಪ್ರೇಮಾಗಂಗ (ರಾಜಮನೆತನ)ಹೊಂಗೆ ಮರಅಕ್ಕಮಹಾದೇವಿಝಾನ್ಸಿಅಲಂಕಾರಭಾರತದಲ್ಲಿನ ಜಾತಿ ಪದ್ದತಿವಿಜಯನಗರ ಸಾಮ್ರಾಜ್ಯಆತ್ಮಹತ್ಯೆಕೃಷ್ಣಸೆಕೆಂಡರಿ ಸ್ಕೂಲ್ ಲೀವಿಂಗ್ ಸರ್ಟಿಫಿಕೇಟ್ಹುಣಸೂರು ಕೃಷ್ಣಮೂರ್ತಿಇಂದಿರಾ ಗಾಂಧಿಖೊಖೊರಾಹುಜಾಹೀರಾತುತಾಪಮಾನಸತ್ಯ (ಕನ್ನಡ ಧಾರಾವಾಹಿ)ಅಂಬರೀಶ್ಒಡೆಯರ್ಅಂತರರಾಷ್ಟ್ರೀಯ ಹಣಕಾಸು ಸಂಸ್ಥೆತೋಟಗಾರಿಕೆಭರತೇಶ ವೈಭವಸಂಖ್ಯಾಶಾಸ್ತ್ರಜವಾಹರ‌ಲಾಲ್ ನೆಹರುವಿಧಾನಸೌಧಗಣರಾಜ್ಯೋತ್ಸವ (ಭಾರತ)ಭೂಮಿಹುಬ್ಬಳ್ಳಿಸಜ್ಜೆನುಡಿ (ತಂತ್ರಾಂಶ)ಕನ್ನಡ ಸಾಹಿತ್ಯ ಪರಿಷತ್ತುಆಧುನಿಕ ಮಾಧ್ಯಮಗಳುಬಾಳೆ ಹಣ್ಣು🡆 More