ಎಸ್.ಎಂ.ಕೃಷ್ಣ: ಕರ್ನಾಟಕದ ಮುಖ್ಯಮಂತ್ರಿಗಳು

ಎಸ್ ಎಮ್ ಕೃಷ್ಣ (ಸೋಮನಹಳ್ಳಿ ಮಲ್ಲಯ್ಯ ಕೃಷ್ಣ) (ಜನನ-೧೯೩೨) ಕರ್ನಾಟಕದ ಹಿರಿಯ ರಾಜಕಾರಣಿಗಳಲ್ಲೊಬ್ಬರು.

೧೯೯೯ ರಿಂದ ೨೦೦೪ರವರೆಗೆ ಕರ್ನಾಟಕ ರಾಜ್ಯದ ಮುಖ್ಯಮಂತ್ರಿಗಳಾಗಿದ್ದರು. ಮಹಾರಾಷ್ಟ್ರ ರಾಜ್ಯದ ಮಾಜಿ ರಾಜ್ಯಪಾಲರಾದ ಇವರು, ಕೇಂದ್ರ ವಿದೇಶಾಂಗ ಸಚಿವರಾಗಿಯೂ ಸಹ ಕಾರ್ಯ ನಿರ್ವಹಿಸಿದ್ದಾರೆ. ವಿದ್ಯಾಭ್ಯಾಸದ ದೃಷ್ಟಿಯಿಂದ, ಕರ್ನಾಟಕದ ಅತ್ಯಂತ ಹೆಚ್ಚು ಸುಶಿಕ್ಷಿತ ಮುಖ್ಯಮಂತ್ರಿಗಳಲ್ಲಿ ಕೃಷ್ಣ ಒಬ್ಬರು. ಇವರು ಬಹುಕಾಲ ಕಾಂಗ್ರೆಸ್ ಪಕ್ಷದ ಸದಸ್ಯರಾಗಿದ್ದರು, ಬದಲಾದ ರಾಜಕೀಯ ಸನ್ನಿವೇಶಗಳ ಕಾರಣ ಮಾರ್ಚ್ ೨೦೧೭ ರಂದು ಭಾರತೀಯ ಜನತಾ ಪಕ್ಷದ ಸದಸ್ಯತ್ವವನ್ನು ಪದೆದರು. ಅವರು ೧೯೯೯ ರಿಂದ ೨೦೦೪ ರವರೆಗೆ ಕರ್ನಾಟಕದ ೧೬ ನೇ ಮುಖ್ಯಮಂತ್ರಿಯಾಗಿದ್ದರು ಮತ್ತು ೨೦೦೪ ರಿಂದ ೨೦೦೮ ರವರೆಗೆ ಮಹಾರಾಷ್ಟ್ರದ ೧೯ ನೇ ರಾಜ್ಯಪಾಲರಾಗಿದ್ದರು . ಎಸ್.ಎಂ.ಕೃಷ್ಣ ಅವರು ಡಿಸೆಂಬರ್ ೧೯೮೯ ರಿಂದ ಜನವರಿ ೧೯೯೩ ರವರೆಗೆ ಕರ್ನಾಟಕ ವಿಧಾನಸಭೆಯ ಸ್ಪೀಕರ್ ಆಗಿ ಸೇವೆ ಸಲ್ಲಿಸಿದ್ದರು. ೧೯೭೧ ರಿಂದ ೨೦೧೪ ರವರೆಗೆ ವಿವಿಧ ಸಮಯಗಳಲ್ಲಿ ಲೋಕಸಭೆ ಮತ್ತು ರಾಜ್ಯಸಭೆಯ ಸದಸ್ಯರಾಗಿದ್ದರು. ಇವರಿಗೆ ೨೦೨೩ರ ಸಾಲಿನ ಪದ್ಮವಿಭೂಷಣ ಪ್ರಶಸ್ತಿ ನೀಡಲಾಗಿದೆ.

ಎಸ್.ಎಂ.ಕೃಷ್ಣ
ಎಸ್.ಎಂ.ಕೃಷ್ಣ: ವಿದ್ಯಾಭ್ಯಾಸ, ರಾಜಕೀಯ ಜೀವನ, ಉಲ್ಲೇಖಗಳು
ಭಾರತದ ವಿದೇಶಾಂಗ ವ್ಯವಹಾರಗಳ ಮಂತ್ರಿಯಾಗಿ ಅಮೇರಿಕಾದಲ್ಲಿ (೨೦೧೦).

ಭಾರತದ ೨೭ನೇ ವಿದೇಶಾಂಗ ವ್ಯವಹಾರಗಳ ಮಂತ್ರಿಯಾಗಿ
ಅಧಿಕಾರ ಅವಧಿ
೨೩ ಮೇ ೨೦೦೯ – ೨೮ ಅಕ್ಟೋಬರ್ ೨೦೧೨
ಪ್ರಧಾನ ಮಂತ್ರಿ ಮನಮೋಹನ್ ಸಿಂಘ್
ಪೂರ್ವಾಧಿಕಾರಿ ಪ್ರಣಬ್ ಮುಖರ್ಜಿ
ಉತ್ತರಾಧಿಕಾರಿ ಸಲ್ಮಾನ್ ಖುರ್ಶೀದ್

ಮಹಾರಾಷ್ಟ್ರದ ೧೮ನೇ ರಾಜ್ಯಪಾಲರಾಗಿ
ಅಧಿಕಾರ ಅವಧಿ
೧೨ ಡಿಸೆಂಬರ್ ೨೦೦೪ – ೫ ಮಾರ್ಚ್ ೨೦೦೮
ಮುಖ್ಯಮಂತ್ರಿ ವಿಲಾಸ್ ರಾವ್ ದೇಶ್‌ಮುಖ್
ಪೂರ್ವಾಧಿಕಾರಿ ಮೊಹ್ಮದ್ ಫಝಲ್
ಉತ್ತರಾಧಿಕಾರಿ ಎಸ್ ಸಿ ಜಮೀರ್

ಕರ್ನಾಟಕದ ೧೬ನೇ ಮುಖ್ಯಮಂತ್ರಿಯಾಗಿ
ಅಧಿಕಾರ ಅವಧಿ
೧೧ ಅಕ್ಟೋಬರ್ ೧೯೯೯ – ೨೮ ಮೇ ೨೦೦೪
ಪೂರ್ವಾಧಿಕಾರಿ ಜೆ ಹೆಚ್ ಪಟೇಲ್
ಉತ್ತರಾಧಿಕಾರಿ ಎನ್ ಧರಮ್ ಸಿಂಘ್

ಕರ್ನಾಟಕದ ಮೊದಲ ಉಪ ಮು.ಮಂ.
ಅಧಿಕಾರ ಅವಧಿ
೨೧ ಜನವರಿ ೧೯೯೩ – ೧೧ ಡಿಸೆಂಬರ್ ೧೯೯೪
ಮುಖ್ಯಮಂತ್ರಿ ಎಂ ವೀರಪ್ಪ ಮೊಯ್ಲಿ
ಪೂರ್ವಾಧಿಕಾರಿ ಇಲ್ಲ.
ಉತ್ತರಾಧಿಕಾರಿ ಜೆ ಹೆಚ್ ಪಟೇಲ್
ಮತಕ್ಷೇತ್ರ ಮದ್ದೂರು ವಿಧಾನಸಭಾ ಕ್ಷೇತ್ರ
ವೈಯಕ್ತಿಕ ಮಾಹಿತಿ
ಜನನ (1932-05-01) ೧ ಮೇ ೧೯೩೨ (ವಯಸ್ಸು ೯೧)
ಸೋಮನಹಳ್ಳಿ, ಮಂಡ್ಯ ಜಿಲ್ಲೆ, ಕರ್ನಾಟಕ (ಆಗಿನ ಮೈಸೂರು ರಾಜ್ಯ)
ರಾಜಕೀಯ ಪಕ್ಷ ಭಾರತೀಯ ಜನತಾ ಪಾರ್ಟಿ
(ಮಾರ್ಚ್ ೨೦೧೭ರಿಂದ)
ಇತರೆ ರಾಜಕೀಯ
ಸಂಲಗ್ನತೆಗಳು
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
(೧೯೭೧-ಜನವರಿ ೨೦೧೭)
  • ಪ್ರಜಾ ಸೋಷಲಿಸ್ಟ್ ಪಾರ್ಟಿ
    (೧೯೬೨-೧೯೭೧)
ಸಂಗಾತಿ(ಗಳು) ಪ್ರೇಮಾ
ಅಭ್ಯಸಿಸಿದ ವಿದ್ಯಾಪೀಠ ಮೈಸೂರು ವಿವಿ ಕಾನೂನು ಕಾಲೇಜು
ಡೆಡ್‍ಮನ್ ಕಾನೂನು ಕಾಲೇಜು(ಸದರ್ನ್ ಮೆಥಡಿಸ್ಟ್ ವಿವಿ, ಟೆಕ್ಸಾಸ್)
ಜಾರ್ಜ್ ವಾಷಿಂಗ್‌ಟನ್ ವಿವಿ ಕಾನೂನು ಕಾಲೇಜು

ವಿದ್ಯಾಭ್ಯಾಸ

ಎಸ್ ಎಂ ಕೃಷ್ಣ ಅವರು ಮೈಸೂರು ಮಹಾರಾಜ ಕಾಲೇಜಿನಲ್ಲಿ ಪದವೀಧರರಾದ ನಂತರ ಬೆಂಗಳೂರಿನ ಸರ್ಕಾರಿ ಕಾನೂನು ಕಾಲೇಜಿನಲ್ಲಿ ಓದಿದರು. ಇದರ ನಂತರ ಅಮೆರಿಕದ ಟೆಕ್ಸಸ್ ರಾಜ್ಯದಲ್ಲಿರುವ ಸದರ್ನ್ ಮೆಥಡಿಸ್ಟ್ ವಿಶ್ವವಿದ್ಯಾಲಯದಲ್ಲಿ ಓದಿ ನಂತರ ವಾಷಿಂಗ್ಟನ್ ನಲ್ಲಿರುವ ಜಾರ್ಜ್ ವಾಷಿಂಗ್ಟನ್ ವಿಶ್ವವಿದ್ಯಾಲಯದಲ್ಲಿ ಪ್ರತಿಷ್ಠಿತ ಫುಲ್‍ಬ್ರೈಟ್ ವಿದ್ಯಾರ್ಥಿವೇತನವನ್ನು ಪಡೆದರು.

ರಾಜಕೀಯ ಜೀವನ

ಭಾರತಕ್ಕೆ ಮರಳಿದ ನಂತರ ಬೆಂಗಳೂರಿನ ರೇಣುಕಾಚಾರ್ಯ ಕಾಲೇಜಿನಲ್ಲಿ ಸ್ವಲ್ಪ ಕಾಲ ಅಂತಾರಾಷ್ಟ್ರೀಯ ನ್ಯಾಯದ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದರು. ವಿಧಾನ ಸಭೆಗೆ ಮೊದಲ ಬಾರಿ ೧೯೬೨ ರಲ್ಲಿ ಚುನಾಯಿತರಾದರು. ೧೯೬೮ರಲ್ಲಿ ಲೋಕಸಭೆಗೆ ಚುನಾಯಿತರಾದರು. ೧೯೭೧ರಲ್ಲಿ ಅಲ್ಲಿಗೆ ಮರು ಚುನಾಯಿತರಾಗಿ ಮತ್ತೆ ೧೯೭೨ ರಲ್ಲಿ ಕರ್ನಾಟಕ ವಿಧಾನ ಪರಿಷತ್ತಿಗೆ ಚುನಾಯಿತರಾದರು. ಇದೇ ಸಮಯದಲ್ಲಿ ವಾಣಿಜ್ಯ, ಉದ್ಯಮ ಮತ್ತು ಸಂಸದೀಯ ವ್ಯವಹಾರಗಳ ಸಚಿವರಾದರು. ೧೯೮೩ರಲ್ಲು ಉದ್ಯಮ ಖಾತೆ ಮತ್ತು ೧೯೮೪ ರಲ್ಲಿ ವಿತ್ತ ಖಾತೆಯ ಸಚಿವರಾದರು. ೧೯೮೯ ರಿಂದ ೧೯೯೨ರ ವರೆಗೆ ವಿಧಾನಸಭೆಯ ಸ್ಪೀಕರ್ ಆಗಿ ನೇಮಿತರಾದರು. ೧೯೯೨ ರಿಂದ ೧೯೯೪ರ ವರೆಗೆ ಕರ್ನಾಟಕದ ಉಪ-ಮುಖ್ಯಮಂತ್ರಿಗಳಾದರು. ೧೯೯೬ರಲ್ಲಿ ರಾಜ್ಯಸಭೆಗೆ ನೇಮಕಗೊಂಡ ಕೃಷ್ಣ, ೧೯೯೯ ರಲ್ಲಿ ಕರ್ನಾಟಕದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕಾರ ಮಾಡಿದರು. ೧೯೯೯ರಿಂದಲೇ ಕರ್ನಾಟಕ ಪ್ರದೇಶ ಕಾಂಗ್ರೆಸ್ ಕಮಿಟಿಯ ಅಧ್ಯಕ್ಷರಾಗಿದ್ದರು. ವಿದೇಶಗಳಲ್ಲಿ ಎರಡು ಬಾರಿ (ವಿಶ್ವಸಂಸ್ಥೆಯಲ್ಲಿ ಒಮ್ಮೆ, ಮತ್ತು ಕಾಮನ್ ವೆಲ್ತ್ ಒಕ್ಕೂಟದಲ್ಲಿ ಒಮ್ಮೆ) ಭಾರತವನ್ನು ಪ್ರತಿನಿಧಿಸಿದ್ದಾರೆ.

ಎಸ್.ಎಂ.ಕೃಷ್ಣ ಕಾಂಗ್ರೆಸ್ ನ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ

  • ಜನವರಿ ೨೮ ೨೦೧೭ಬೆಳಿಗ್ಗೆ ೧೧ ಗಂಟೆಗೆ ಎಸ್.ಎಂ.ಕೃಷ್ಣ ಅಧಿಕೃತವಾಗಿ ಕಾಂಗ್ರೆಸ್ ನ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಘೋಷಣೆ ಮಾಡಿದರು. ಬೆಂಗಳೂರಿನಲ್ಲಿರುವ ತಮ್ಮ ನಿವಾಸದಲ್ಲಿ ತುರ್ತು ಪತ್ರಿಕಾ ಗೋಷ್ಠಿ ನಡೆಸಿ ‘ ಕಾಂಗ್ರೆಸ್ ಪಕ್ಷವನ್ನು ತ್ಯಜಿಸುತ್ತಿದ್ದೇನೆ’ ಎಂದು ಎಸ್‌. ಎಂ. ಕೃಷ್ಣ ಅಧಿಕೃತವಾಗಿ ಘೋಷಣೆ ಮಾಡಿದರು. ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಎಸ್.ಎಂ.ಕೃಷ್ಣ ಸಕ್ರಿಯ ರಾಜಕಾರಣದಿಂದ ನಿವೃತ್ತಿ ಘೋಷಿಸಿದ್ದಾರೆ ಎಂದು ಟಿ.ವಿ.ನೈನ್ ವರದಿ ಮಾಡಿದೆ.

ಉಲ್ಲೇಖಗಳು




Tags:

ಎಸ್.ಎಂ.ಕೃಷ್ಣ ವಿದ್ಯಾಭ್ಯಾಸಎಸ್.ಎಂ.ಕೃಷ್ಣ ರಾಜಕೀಯ ಜೀವನಎಸ್.ಎಂ.ಕೃಷ್ಣ ಉಲ್ಲೇಖಗಳುಎಸ್.ಎಂ.ಕೃಷ್ಣಕರ್ನಾಟಕಪದ್ಮವಿಭೂಷಣಭಾರತೀಯ ಜನತಾ ಪಕ್ಷಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಮಹಾರಾಷ್ಟ್ರ೧೯೯೯೨೦೦೪

🔥 Trending searches on Wiki ಕನ್ನಡ:

ಬೇಸಿಗೆಮೈಲಾರ ಲಿಂಗೇಶ್ವರ ದೇವಸ್ಥಾನ, ಮೈಲಾರತಾಳಗುಂದ ಶಾಸನಕೊ. ಚನ್ನಬಸಪ್ಪಕರ್ನಾಟಕ ಸ್ವಾತಂತ್ರ್ಯ ಚಳವಳಿಗುರುರಾಜ ಕರಜಗಿಪರಶುರಾಮಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ಕೆಂಬೂತ-ಘನಸಂಗೊಳ್ಳಿ ರಾಯಣ್ಣವಿಜಯನಗರ ಸಾಮ್ರಾಜ್ಯಸಹಕಾರಿ ಸಂಘಗಳುದೆಹಲಿ ಸುಲ್ತಾನರುಸಮಾಸಧರ್ಮಮೈಸೂರು ರಾಜ್ಯಕನ್ನಡ ಸಾಹಿತ್ಯ ಸಮ್ಮೇಳನಘಾಟಿ ಸುಬ್ರಹ್ಮಣ್ಯಸ್ವಾಮಿ ವಿವೇಕಾನಂದಗ್ರಾಮಗಳುಮಲೈ ಮಹದೇಶ್ವರ ಬೆಟ್ಟಈಡನ್ ಗಾರ್ಡನ್ಸ್ಶಾತವಾಹನರುಚಂಡಮಾರುತಬೆಂಗಳೂರುಗರ್ಭಧಾರಣೆಶ್ರೀ ರಾಘವೇಂದ್ರ ಸ್ವಾಮಿಗಳುಮಾಧ್ಯಮಸಾಂಗತ್ಯಭಾರತದ ರಾಷ್ಟ್ರಗೀತೆಸೀತಾ ರಾಮಹಂಸಲೇಖಆಂಡಯ್ಯಸಿಸ್ಟೆಮಿಕ್‌ ಲ್ಯೂಪಸ್‌ ಎರಿಥ್‌ಮೆಟೋಸಸ್‌ಶಾಂತಲಾ ದೇವಿಗಣೇಶಅಮೇರಿಕ ಸಂಯುಕ್ತ ಸಂಸ್ಥಾನಹರಿಶ್ಚಂದ್ರಹೂವುಭ್ರಷ್ಟಾಚಾರಭಾರತದಲ್ಲಿನ ಚುನಾವಣೆಗಳುಸಿದ್ದಲಿಂಗಯ್ಯ (ಕವಿ)ಸಂಸತ್ತುಕರ್ಬೂಜಹಲ್ಮಿಡಿವರ್ಗೀಯ ವ್ಯಂಜನಹನುಮಂತನಾಗಮಂಡಲಅರ್ಜುನನರೇಂದ್ರ ಮೋದಿಹತ್ತಿಭಕ್ತಿ ಚಳುವಳಿಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿಗಳು 2016ಕಿತ್ತೂರು ಚೆನ್ನಮ್ಮಶೇಷಾದ್ರಿ ಅಯ್ಯರ್ಅಶ್ವತ್ಥಮರಧಾನ್ಯತೆಲುಗುಪಂಚತಂತ್ರಗುರುಅರ್ಥಶಾಸ್ತ್ರಜೀನ್-ಜಾಕ್ವೆಸ್ ರೂಸೋದ್ವಿರುಕ್ತಿಬೆಕ್ಕುತತ್ತ್ವಶಾಸ್ತ್ರರಾಜ್ಯಸಭೆಪಾಂಡವರುಬೆಂಗಳೂರು ದಕ್ಷಿಣ (ಲೋಕ ಸಭೆ ಚುನಾವಣಾ ಕ್ಷೇತ್ರ)ಚೇಳು, ವೃಶ್ಚಿಕಮುದ್ದಣತತ್ಪುರುಷ ಸಮಾಸಸೀಮೆ ಹುಣಸೆಸುವರ್ಣ ನ್ಯೂಸ್ಭಾರತೀಯ ಧರ್ಮಗಳುಭೂಮಿಭವ್ಯಯೂಟ್ಯೂಬ್‌🡆 More