ಎಲ್ಲೋರ

ಎಲ್ಲೋರ ವು (ಮರಾಠಿ:वेरूळ) ಭಾರತದ ರಾಜ್ಯ ಮಹಾರಾಷ್ಟ್ರದ ಔರಂಗಾಬಾದ್‌ ನಗರದಿಂದ 30 km (19 mi) ನಷ್ಟು ದೂರಕ್ಕೆ ಇರುವ ರಾಷ್ಟ್ರಕೂಟ (ಕನ್ನಡ:ರಾಷ್ಟ್ರಕೂಟ) ಅರಸರಿಂದ ನಿರ್ಮಿಸಲ್ಪಟ್ಟ ಒಂದು ಪುರಾತತ್ವಶಾಸ್ತ್ರದ ಪ್ರದೇಶವಾಗಿದೆ.

ಸ್ಮಾರಕ ಗುಹೆಗಳಿಗೆ ಜನಪ್ರಿಯವಾಗಿರುವ ಎಲ್ಲೋರವು ಪ್ರಪಂಚದ ಆಸ್ತಿಯ ತಾಣವಾಗಿದೆ. ಎಲ್ಲೋರವು ಭಾರತೀಯ ಕಲ್ಲಿನಿಂದ ಕೆತ್ತಿನ ವಾಸ್ತುಶಿಲ್ಪದ ಸಾಕ್ಷ್ಯರೂಪವಾಗಿದೆ. 34 "ಗುಹೆಗಳು" -ವಾಸ್ತವವಾಗಿ ರಚನೆಗಳನ್ನು ಚರಣಾಂದ್ರಿ ಬೆಟ್ಟಗಳ ಶೃಂಗೀಯ ಪಾರ್ಶ್ವದ ಹೊರಗೆ ಭೂಶೋಧನೆ ಮಾಡಲಾಗಿತ್ತು- ಕಲ್ಲಿನಿಂದ ಕೆತ್ತಿದ ಬೌದ್ಧ, ಹಿಂದು ಮತ್ತು ಜೈನ ದೇವಸ್ಥಾನ ಮತ್ತು ಸನ್ಯಾಸಿಗಳ ಮಂದಿರಗಳಾಗಿದ್ದು, ಇವನ್ನು 5ನೇ ಮತ್ತು 10ನೇ ಶತಮಾನಗಳ ಮಧ್ಯೆ ನಿರ್ಮಿಸಲಾಗಿದೆ. ಸಾಮಿಪ್ಯದಲ್ಲಿ ರಚಿಸಲಾದ 12 ಬೌದ್ಧ (ಗುಹೆಗಳು 1–12), 17 ಹಿಂದು (ಗುಹೆಗಳು 13–29) ಮತ್ತು 5 ಜೈನ (ಗುಹೆಗಳು 30–34) ಗುಹೆಗಳು ಭಾರತೀಯ ಇತಿಹಾಸದ ಆ ಸಂದರ್ಭದಲ್ಲಿ ಪ್ರಚಲಿತದಲ್ಲಿದ್ದ ಧಾರ್ಮಿಕ ಸಾಮರಸ್ಯವನ್ನು ತೋರಿಸುತ್ತವೆ.credits; ಸೌರಭ ಮುದ್ರಾಡಿ ಉಡುಪಿ

ಯುನೆಸ್ಕೊ ವಿಶ್ವ ಪರಂಪರೆಯ ತಾಣ
Ellora caves
ವಿಶ್ವ ಪರಂಪರೆಯ ಪಟ್ಟಿಯಲ್ಲಿ ನಮೂದಾಗಿರುವ ಹೆಸರು
ಎಲ್ಲೋರ
Kailasanatha Temple, (Cave 16) view from the top of the rock
ಪ್ರಕಾರCultural
ಮಾನದಂಡಗಳು(i) (iii) (vi)
ಉಲ್ಲೇಖb 243
ಯುನೆಸ್ಕೊ ಪ್ರದೇಶSouth Asia
ದಾಖಲೆಯ ಇತಿಹಾಸ
Inscription1983 (7th ಸಮಾವೇಶ)

ಬೌದ್ಧ ಗುಹೆಗಳು

ಎಲ್ಲೋರ 
ಎಲ್ಲೋರ ಗುಹೆಗಳು, ಸಾಮಾನ್ಯ ನಕ್ಷೆ

ಐದನೇ ಮತ್ತು ಎಂಟನೇ ಶತಮಾನದ ಮಧ್ಯದಲ್ಲಿ ರಚಿಸಲಾದ ಮೊದಲ ಹಂತದಲ್ಲಿನ 1-5 ಗುಹೆಗಳು (400-600) ಮತ್ತು ನಂತರದ ಹಂತದ 6-12 ಗುಹೆಗಳೊಂದಿಗೆ (ಮಧ್ಯ 7ನೇ-ಮಧ್ಯ 8ನೇ) ಬೌದ್ಧ ಗುಹೆಗಳನ್ನು ಬಹುಹಿಂದಿನ ರಚನೆಗಳೆಂದು ಆರಂಭದಲ್ಲಿ ಭಾವಿಸಲಾಗಿತ್ತು. ಆದರೆ ಈಗ ಆಧುನಿಕ ಪಂಡಿತರಿಗೆ ಕೆಲವು ಹಿಂದು ಗುಹೆಗಳು (27,29,21,28,19,26,20,17 ಮತ್ತು 14) ಈ ಗುಹೆಗಳಿಗಿಂತ ಹಿಂದಿನದಾಗಿವೆ ಎಂಬುದು ಸ್ಪಷ್ಟವಾಗಿದೆ. ಆರಂಭಿಕ ಬೌದ್ಧ ಗುಹೆಯೆಂದರೆ ಗುಹೆ 6, ನಂತರದವು 5,2,3,5 (ಬಲ ಭಾಗ), 4,7,8,10 ಮತ್ತು 9. 11 ಮತ್ತು 12 ಗುಹೆಗಳು ಕೊನೆಯಲ್ಲಿ ಬರುತ್ತವೆ. ಎಲ್ಲಾ ಬೌದ್ಧ ಗುಹೆಗಳನ್ನು 630-700ರ ಮಧ್ಯದಲ್ಲಿ ನಿರ್ಮಿಸಲಾಯಿತು.

ಈ ರಚನೆಗಳು ಹೆಚ್ಚಾಗಿ ವಿಹಾರಗಳು ಅಥವಾ ಸನ್ಯಾಸಿ ಮಂದಿರಗಳನ್ನು ಒಳಗೊಂಡಿವೆ: ವಾಸಿಸುವ ನಿವಾಸಗಳು, ನಿದ್ರಿಸುವ ಬಿಡಾರಗಳು, ಅಡುಗೆಕೋಣೆಗಳು ಮತ್ತು ಇತರ ಕೊಠಡಿಗಳನ್ನೂ ಒಳಗೊಂಡಂತೆ ದೊಡ್ಡ, ಬಹು-ಮಹಡಿಗಳ ಕಟ್ಟಡಗಳನ್ನು ಬೆಟ್ಟದ ಪಾರ್ಶ್ವಕ್ಕೆ ಕೆತ್ತಲಾಗಿದೆ. ಕೆಲವು ಸನ್ಯಾಸಿ ಮಂದಿರಗಳ ಗುಹೆಗಳು ಬುದ್ಧ, ಬೋಧಿಸತ್ವ ಮತ್ತು ಸನ್ಯಾಸಿಗಳ ಕೆತ್ತನೆಗಳನ್ನೂ ಒಳಗೊಂಡಂತೆ ದೇವಾಲಯಗಳನ್ನು ಹೊಂದಿವೆ. ಹೆಚ್ಚಿನ ಗುಹೆಗಳಲ್ಲಿ, ಶಿಲ್ಪಿಗಳು ಶಿಲೆಗಳಿಗೆ ಮರದ ರೂಪವನ್ನು ನೀಡಲು ಪ್ರಯತ್ನಿಸಿದ್ದಾರೆ.

ಹೆಚ್ಚು ಪ್ರಸಿದ್ಧ ಬೌದ್ಧ ಗುಹೆಯೆಂದರೆ ಗುಹೆ 10. ಚೈತ್ಯ ಹಜಾರ (ಚಂದ್ರಶಾಲ) ಅಥವಾ 'ವಿಶ್ವಕರ್ಮ ಗುಹೆ'ಯಾದ ಇದನ್ನು ಜನಪ್ರಿಯವಾಗಿ "ಬಡಗಿಯ ಗುಹೆ" ಎಂದು ಕರೆಯಲಾಗುತ್ತದೆ. ಅದರ ಬಹು-ಅಂತಸ್ತಿನ ಪ್ರವೇಶದ ಆಚೆಗೆ ಕ್ಯಾತಿಡ್ರಲ್-ರೀತಿಯ ಸ್ತೂಪ ಹಜಾರವಿದೆ. ಇದನ್ನು ಚೈತ್ಯವೆಂದೂ ಕರೆಯಲಾಗುತ್ತದೆ. ಇದರ ಚಾವಣಿಯ ಒಳಮೈಯನ್ನು ಮರದ ಅಡ್ಡತೊಲೆಯ ರೂಪವನ್ನು ನೀಡುವಂತೆ ಕೆತ್ತಲಾಗಿದೆ. ಈ ಗುಹೆಯ ಕೇಂದ್ರ-ಭಾಗದಲ್ಲಿ ಧರ್ಮೋಪದೇಶ ನೀಡುವ ಭಂಗಿಯಲ್ಲಿ ಕುಳಿತ ಬುದ್ಧನ 15-ಅಡಿ ಎತ್ತರದ ಪ್ರತಿಮೆಯೊಂದಿದೆ. ಇತರ ಬೌದ್ಧ ಗುಹೆಗಳಲ್ಲಿ ಮೊದಲ ಒಂಬತ್ತು (ಗುಹೆಗಳು 1–9) ಸನ್ಯಾಸಿ ಮಂದಿರಗಳಾಗಿವೆ. ಕೊನೆಯ ಎರಡು ಗುಹೆಗಳಾದ ಡು ಟಾಲ್ (ಗುಹೆ 11) ಮತ್ತು ಟಿನ್ ಟಾಲ್ (ಗುಹೆ 12) ಮೂರು ಕಥೆಗಳನ್ನು ಹೊಂದಿವೆ.

ಗುಹೆ 1

ಗುಹೆ 1 ವಿಹಾರ ವಾಗಿದ್ದು, ಎಂಟು ಕಿರುಕೊಠಡಿಗಳನ್ನು ಹೊಂದಿದೆ, ನಾಲ್ಕು ಹಿಂದಿನ ಪೌಳಿಯಲ್ಲಿವೆ ಮತ್ತು ನಾಲ್ಕು ಬಲ ಪೌಳಿಯಲ್ಲಿವೆ. ಇದು ಕಿರುಕೊಠಡಿಯೊಂದರ ಮುಂಭಾಗದಲ್ಲಿ ಒಂದು ಪೋರ್ಟಿಕೊವನ್ನು ಹೊಂದಿದೆ. ಇದು ಬಹುಶಃ ಇತರ ವಿಹಾರಗಳಿಗೆ ಕಣಜವಾಗಿತ್ತು.

ವಿಶ್ವಕರ್ಮ

ಎಲ್ಲೋರ 
ಬೌದ್ಧ "ಬಡಗಿಯ" ಗುಹೆ (ಗುಹೆ 10)

ಬೌದ್ಧ ಗುಹೆಗಳಲ್ಲಿ ವಿಶ್ವಕರ್ಮ ವೊಂದೇ (ಗುಹೆ 10) ಚೈತ್ಯ ಗೃಹವಾಗಿದೆ. ಇದನ್ನು ಸ್ಥಳೀಯವಾಗಿ ವಿಶ್ವಕರ್ಮ ಅಥವಾ ಸುತಾರ್ ಕ ಜೋಪ್ಡ (ಬಡಗಿಯ ಗುಡಿಸಲು) ಎಂದು ಕರೆಯಲಾಗುತ್ತದೆ. ಇದು ಅಜಂತದ 19 ಮತ್ತು 26 ಗುಹೆಗಳ ರಚನಾ ಸ್ವರೂಪವನ್ನು ಅನುಸರಿಸುತ್ತದೆ. ಶೈಲಿಯ ಆಧಾರದಲ್ಲಿ, ಈ ಗುಹೆಯ ನಿರ್ಮಾಣದ ದಿನಾಂಕವನ್ನು ಸುಮಾರು 700 ಎಂದು ಸೂಚಿಸಲಾಗಿದೆ. ಈ ಚೈತ್ಯವು ಒಮ್ಮೆ ಎತ್ತರದ ಪರದೆಯ ಗೋಡೆಯನ್ನು ಹೊಂದಿತ್ತು, ಈಗ ಅದು ನಾಶವಾಗಿ ಹೋಗಿದೆ. ಮುಂಭಾಗವು ಕಲ್ಲಿನ-ಕೆತ್ತನೆಯ ಅಂಗಳವಾಗಿದೆ, ಅದು ಹಾರಿಕೆಯ ಮೆಟ್ಟಿಲುಗಳಿಂದ ಪ್ರವೇಶಿಸುವಂತಿದೆ. ಎರಡೂ ಬದಿಯು ಕಂಬಗಳನ್ನು ಹೊಂದಿದ ಹಜಾರವಾಗಿದೆ ಜೊತೆಗೆ ಹಿಂದಿನ ಗೋಡೆಗಳಲ್ಲಿ ಕೋಣೆಗಳಿವೆ. ಇವುಗಳು ಬಹುಶಃ ಸಹಕಾರಿಯಾಗುವಂತಹ ದೇವಾಲಯಗಳಾಗಿದ್ದವು ಆದರೆ ಸಂಪೂರ್ಣವಾಗಲಿಲ್ಲ. ಕಂಬಗಳುಳ್ಳ ಚೈತ್ಯದ ವೆರಾಂಡಾವು ಒಂದು ಚಿಕ್ಕ ಕಲಶವನ್ನು ಎರಡೂ ಬದಿಗಳಲ್ಲಿ ಮತ್ತು ಒಂದೇ ಹಿಂಬದಿಯ ಗೋಡೆಯ ದೂರದ ಮೂಲೆಯಲ್ಲಿ ಹೊಂದಿದೆ. ಮೊಗಶಾಲೆಯಲ್ಲಿರುವ ಸ್ತಂಭಗಳು ಭಾರಿ ಚೌಕಾಕಾರದ ಶೂಲಗಳನ್ನು, ಮತ್ತು ಘಟ-ಪಲ್ಲವ (ಪುಷ್ಪಕುಂಭ ಮತ್ತು ಎಲೆಗಳ ಗೊಂಚಲು)ಗಳನ್ನು ಹೊಂದಿವೆ. ಪ್ರಮುಖ ಹಾಲ್ ವಿನ್ಯಾಶದಲ್ಲಿ ಅರ್ಧವೃತ್ತಾಕಾರವಾಗಿದೆ ಮತ್ತು ಇದರ ಮದ್ಯಭಾಗ ಮತ್ತು ಪಾರ್ಶ್ವಭಾಗಗಳ ನಡುವೆ ಪ್ಲೇನ್ ಬ್ರಾಕೆಟ್ ಕ್ಯಾಪಿಟಲ್‌ಗಳನ್ನೊಂದಿದ 28 ಅಷ್ಟಭುಜಾಕೃತಿಯ ಸ್ತಂಭಗಳಿಂದ ಬೇರ್ಪಡಿಸಲಾಗಿದೆ. ಚೈತ್ಯ ಹಾಲ್‌ನ ಅರ್ಧವೃತ್ತಾಕಾರದ ತುದಿಯಲ್ಲಿನ ಗೋಮುಟದ ಮುಖಭಾಗದಲ್ಲಿ ಬಹುದೊಡ್ಡದಾದ 3.30 m ಎತ್ತರದಲ್ಲಿ ವ್ಯಾಖ್ಯಾನ ಮುದ್ರ (ಭೋದನ ಭಂಗಿ)ಯ ಬುದ್ಧನನ್ನು ಕೆತ್ತಲಾಗಿದೆ. ಬಹು ದೊಡ್ಡದಾದ Bodhi tree (Ficus religiosa )ನ್ನು ಹಿಂಬದಿಯಲ್ಲಿ ಕೆತ್ತಲಾಗಿದೆ. ಹಾಲ್ ಕಮಾನಿನ ಮೇಲು ಛಾವಣಿಯನ್ನೊಂದಿದೆ, ಇದರಲ್ಲಿನ ರಿಬ್‌ಗಳನ್ನು ಮರವನ್ನೋಲುವಂತೆ ಕಲ್ಲಿನಲ್ಲಿ ಕೊರೆಯಲಾಗಿದೆ.

ಹಿಂದು ಗುಹೆಗಳು

ಹಿಂದು ಗುಹೆಗಳು ಆರನೇ ಶತಮಾನದ ಮಧ್ಯದಿಂದ ಎಂಟನೇ ಶತಮಾನದ ಕೊನೆಯವರೆಗೆ ನಿರ್ಮಾಣಗೊಂಡವು. ಮೊದಲನೆಯ ಗುಹೆಗಳು (ಗುಹೆಗಳು 17–29) ಕಲಚೂರಿ ಅವಧಿಯ ಸಮಯದಲ್ಲಿ ನಿರ್ಮಾಣಗೊಂಡಿದ್ದವು. ಕೆಲಸವು ಮೊದಲು ಗುಹೆಗಳು 28, 27 ಮತ್ತು 19 ರಲ್ಲಿ ಪ್ರಾರಂಭವಾಯಿತು. ಇವು ಮೊದಲನೆಯ ಹಂತದಲ್ಲಿ ನಿರ್ಮಾಣಗೊಂಡ ಗುಹೆಗಳು 29 ಮತ್ತು 21ರ ನಂತರದಲ್ಲಿ ಪ್ರಾರಂಭವಾದವು. ಇವೆರಡರ ಜೊತೆಯಲ್ಲಿ, ಗುಹೆಗಳು 20 ಮತ್ತು 26 ರಲ್ಲಿ ಕೆಲಸ ನಡೆಯುತ್ತಿತ್ತು, ಮತ್ತು ಸ್ವಲ್ಪ ಸಮಯದ ನಂತರ ಗುಹೆಗಳು 17, 19 ಮತ್ತು 28 ರಲ್ಲಿ ಪ್ರಾರಂಭವಾಯಿತು. ಗುಹೆಗಳು 14, 15 ಮತ್ತು 16 ಗಳನ್ನು ರಾಷ್ಟ್ರಕೂಟದ ಅವಧಿಯಲ್ಲಿ ನಿರ್ಮಾಣಮಾಡಲಾಗಿದೆ. ಗುಹೆಗಳು 14 ಮತ್ತು 15 ರಲ್ಲಿ ಕೆಲಸ ಪ್ರಾರಂಭವಾಯಿತು ಮತ್ತು ಗುಹೆ 16 ರಲ್ಲಿ ಉಚ್ಚತುದಿಯನ್ನು ತಲುಪಿತ್ತು. ಈ ಎಲ್ಲಾ ವಿನ್ಯಾಸಗಳನ್ನು ಸೃಜನಾತ್ಮಕ ದೃಷ್ಟಿಯ ಮತ್ತು ನಿರ್ವಹಣೆಯ ನೈಪುಣ್ಯತೆಯ ವಿವಿಧ ಪದ್ಧತಿಯಲ್ಲಿ ಪ್ರದರ್ಶಿಸಲಾಗಿದೆ. ಕೆಲವು ತುಂಬ ಸಂಕೀರ್ಣತೆಯಿಂದ ಕೂಡಿದ್ದವು. ಇವನ್ನು ಪೂರ್ಣಗೊಳಿಸಲು ಅನೇಕ ತಲೆಮಾರಿನ ಯೋಜನೆಗಳ ರಚನೆ ಮತ್ತು ಅನೋನ್ಯಸಂಬಂಧಗಳ ಅಗತ್ಯವಿದೆ.

ಕೈಲಾಸನಾಥ

ಎಲ್ಲೋರ 
ಎಲ್ಲೋರ (ಗುಹೆ 16) ಕೈಲಾಶ ದೇವಾಲಯದಲ್ಲಿ ನೃತ್ಯ ಮಾಡುತ್ತಿರುವ ಶಿವ (ನಟರಾಜ)ನನ್ನು ತೋರುತ್ತಿರುವ ಒಂದು ವರ್ಣಚಿತ್ರ. ಸಂಪೂರ್ಣ ದೇವಾಲಯವನ್ನು ಬಿಂಬಿಸುವ ವರ್ಣಚಿತ್ರಗಳನ್ನು ಈಗಲೂ ನೋಡಬಹುದು.
ಎಲ್ಲೋರ 
ಗೋಡೆ ಕೆತ್ತನೆಗಳು – ಶಿವ (ನಾಲ್ಕು ಕೈಗಳುಳ್ಳ ಚಿತ್ರ, ಬಲಭಾಗದಲ್ಲಿ)ಮತ್ತು ಪಾರ್ವತಿಯರ (ಎರಡು ಕೈಗಳುಳ್ಳ,ಎಡಭಾಗ) ಮದುವೆಯನ್ನು ತೋರಿಸುವ ಒಂದು ದೃಶ್ಯ .
ಎಲ್ಲೋರ 
ಕೈಲಾಶ ಪರ್ವತದಲ್ಲಿ ಕುಳಿತಿರುವ ಶಿವ-ಪಾರ್ವತಿ, ರಾವಣ ಅದನ್ನು ಎತ್ತುವ ಪ್ರಯತ್ನ ಮಾಡುತ್ತಿದ್ದಾನೆ.

ಗುಹೆ 16, ಇದು ಕೈಲಾಸ ಅಥವಾ ಕೈಲಾಸನಾಥ ಎಂದು ಕೂಡ ಪ್ರಸಿದ್ಧವಾಗಿದೆ, ಇದು ಎಲ್ಲೋರದ ಸಾಟಿಯಿಲ್ಲದ ಆಕರ್ಷಕ ಕೇಂದ್ರಬಿಂದುವಾಗಿದೆ. ಮೌಂಟ್ ಕೈಲಾಶ್‌ರ ನೆನಪಿಗಾಗಿ ಇದನ್ನು ವಿನ್ಯಾಶಿಸಲಾಗಿದೆ, ಶಿವ ದೇವರ ಧಾಮವು - ನೋಡಲು ಸ್ವತಂತ್ರವಾಗಿ ನಿಂತ ಒಂದು ಬಹುಮಹಡಿಯ ದೇವಸ್ಥಾನದ ಕಾಂಪ್ಲೆಕ್ಸಿನಂತಿರುತ್ತದೆ, ಆದರೆ ಇದು ಒಂದೇ ಕಲ್ಲಿನಲ್ಲಿ ಕೆತ್ತಲಾಗಿದೆ, ಮತ್ತು ಅತೆನ್ಸ್ನಲ್ಲಿರುವ ಪಾರ್ತೆನಾನ್‌ನ ಸ್ಥಳದ ವಿಸ್ತಾರಕ್ಕಿಂತಲೂ ಎರಡುರಷ್ಟು ದೊಡ್ಡದಾಗಿದೆ. ಆರಂಭದಲ್ಲಿ ದೇವಸ್ಥಾನವು ಬಿಳಿ ಪ್ಲಾಸ್ಟೆರ್‌ನಿಂದ ಲೇಪಿತವಾಗಿತ್ತು ಇದರಿಂದ ಹಿಮಲೇಪಿತ ಮೌಂಟ್ ಕೈಲಾಶ್‌ನಂತೆ ಕಾಣುವಂತೆ ಮಾಡಲಾಗಿತ್ತು.

ಎಲ್ಲಾ ಶಿಲಾವಿನ್ಯಾಸಗಳನ್ನು ಬಹು ಹಂತಗಳಗಾಗಿ ಮಾಡಲಾಗಿದೆ. ಎರಡು ಮಹಡಿಯ ಹೆಬ್ಬಾಗಿಲು ಯು-ಆಕಾರದ ಆವರಣವನ್ನು ಪ್ರದರ್ಶಿಸುವ ದಕ್ಷಿಣ ಭಾರತದ ಗೋಪುರಮ್‌ ನ್ನು ಹೋಲುತ್ತದೆ. ಆವರಣವು ಮೂರು ಮಹಡಿಯ ಎತ್ತರದವರೆಗೆ ಕಲಾ ಸ್ತಂಬಗಳಿಂದ ಸುತ್ತುವರಿಯಲ್ಪಟ್ಟಿದೆ. ಚಿತ್ರಶಾಲೆಯು ಬೃಹತ್ ಮಟ್ಟದ ಕೆತ್ತನೆಯವರಿಂದ ಮಾಡಲ್ಪಟ್ಟಿದೆ, ಮತ್ತು ಉದ್ಯಾನಕುಂಜಗಳು ವಿವಿಧ ದೇವತೆಗಳ ಮಹತ್ತರವಾದ ಶಿಲ್ಪಕೆತ್ತನೆಯನ್ನು ಹೊಂದಿವೆ. ಮೂಲತಃ ತೇಲಾಡುವ ಕಲ್ಲಿನ ಸೇತುವೆಗಳು ಈ ಚಿತ್ರಶಾಲೆಯನ್ನು ಮುಖ್ಯ ದೇವಸ್ಥಾನದ ಕಟ್ಟಡಕ್ಕೆ ಸೇರಿಸಿದ್ದವು, ಆದರೆ ಇವು ಬಿದ್ದುಹೋಗಿವೆ.

ಆವರಣದ ಒಳಗೆ ಮೂರು ಕಟ್ಟಡಗಳಿವೆ. ಸಾಂಪ್ರದಾಯಬದ್ಧವಾಗಿ, ಶಿವ ಮಂದಿರಗಳಲ್ಲಿ, ಪ್ರಮುಖ ಮಂದಿರದ ಎದುರಿನಲ್ಲಿ ಪವಿತ್ರ ಬಸವ ನಂದಿಯ ದೊಡ್ಡ ಮೂರ್ತಿಯಿದೆ. ಪ್ರಮುಖ ಮಂದಿರದ - ನಂದಿ ಮಂಡಪದಲ್ಲಿ ಲಿಂಗವಿದೆ. ನಂದಿ ಮಂಡಪವು 16 ಸ್ತಂಭಗಳ ಮೇಲಿದೆ ಮತ್ತು 29.3 m ಗಳಷ್ಟು ಎತ್ತರವಿದೆ. ನಂದಿ ಮಂಟಪದ ಅಡಿಪಾಯವು ಸಹಜ ಗಾತ್ರದ ಆನೆಗಳು ಕಟ್ಟಡವನ್ನು ಎತ್ತರಕ್ಕೆ ಹಿಡಿದು ನಿಂತಹಾಗೆ ಸೂಚಿಸುವಂತೆ ಕೆತ್ತಲಾಗಿದೆ. ಹಿಂಬದಿಯಲ್ಲಿರುವ ಕಲ್ಲಿನ ಸೇತುವೆಯು ನಂದಿ ಮಂಟಪವನ್ನು ಶಿವ ಮಂದಿರಕ್ಕೆ ಸೇರಿಸುತ್ತದೆ. ಮಂದಿರವು ದಕ್ಷಿಣ ಭಾರತದ ದೇವಸ್ಥಾನವನ್ನು ಜ್ಞಾಪಿಸುವಂತಹ ಎತ್ತರದ ಗೋಪುರಾಕಾರದ ಕಟ್ಟಡವಾಗಿದೆ. ದೇಗುಲವು ಪುರ್ತಿಯಾಗಿ- ಸ್ತಂಭಗಳಿಂದ ಹಿಡಿದು, ಕಿಟಕಿಗಳು, ಒಳ ಮತ್ತು ಹೊರಗಿನ ಕೊಟಡಿಗಳು, ಸಮಾವೇಶದ ಹಾಲುಗಳು, ಮತ್ತು ಮಧ್ಯ ಭಾಗದಲ್ಲಿರುವ ಪವಿತ್ರ ಲಿಂಗ ಎಲ್ಲವು ಕಲ್ಲಿನಿಂದ ಕೆತ್ತಲ್ಪಟ್ಟಿವೆ, ಅವು ಗೂಡುಗಳಿಂದ, ಗೋಡೆಯೊಂದಿಗೆ ಕೂಡಿರುವ ಚೌಕ ಸ್ತಂಭಗಳಿಂದ, ಕಿಟಕಿಗಳಿಂದ ಹಾಗು ದೇವತೆಯರ ಚಿತ್ರಗಳಿಂದ, mithuna s (ಶೃಂಗಾರದ ಹೆಣ್ಣು ಮತ್ತು ಗಂಡು ಚಿತ್ರಗಳು) ಮತ್ತು ಇತರ ಚಿತ್ರಗಳಿಂದ ಕೆತ್ತಲ್ಪಟ್ಟಿವೆ. ಮಂದಿರದ ಎಡಭಾಗದಲ್ಲಿರುವುವು ಬಹುತೇಕ ಶೈವೈತೆಯರ (ಶಿವನ ಅನುಚರರ) ದೇವತಾ ಶಿಲ್ಪಗಳು, ಬಲಭಾಗದಲ್ಲಿರುವುವು ವೈಷ್ಣವೈತೆಯರ (ವಿಷ್ಣುವಿನ ಅನುಚರರ) ದೇವತಾ ಶಿಲ್ಪಗಳು. ಆವರಣದಲ್ಲಿ ಎರಡು ದ್ವಜ ಸ್ತಂಭಗಳಿವೆ. ಕೈಲಾಸ ಪರ್ವತವನ್ನು ಎತ್ತುವ ಪ್ರಯತ್ನದಲ್ಲಿರುವ ರಾವಣನ ಮಹ್ತ್ತರವಾದ ಮೂರ್ತಿ, ಸಂಪೂರ್ಣ ವೈಭವದ ಶಿವನ ಧಾಮಗಳು ಭಾರತದ ಶಿಲ್ಪಕಲೆಯ ಪ್ರತೀಕಗಳಾಗಿವೆ. ಈ ಗುಹೆಯ ನಿರ್ಮಾಣವು ಪ್ರತಿಭಾವಂತ ಮಾನವರ ಸಾಹಸಕಾರ್ಯವಾಗಿದೆ - ಇದರ ನಿರ್ಮಾಣಕಾರ್ಯದಲ್ಲಿ 200,000 ಟನ್ನುಗಳಷ್ಟು ಬಂಡೆಕಲ್ಲುಗಳನ್ನು ಹೊರತೆಗೆಯಲಾಯಿತು, ಮತ್ತು ಇದನ್ನು ನಿರ್ಮಿಸಲು 100 ವರ್ಷಗಳ ಕಾಲ ಬೇಕಾಯಿತು.

ದೇವಾಲಯವು ದ್ರಾವಿಡಿಯನ್ನರ ಕಲೆಯ ಪ್ರಶಂಸನೀಯ ಸಾಧನೆಯಾಗಿದೆ. ಈ ಯೋಜನೆಯನ್ನು ಪ್ರಸ್ತುತ ಕರ್ನಾಟಕ ರಾಜ್ಯದಲ್ಲಿರುವ ಮಾನ್ಯಕೇತದಿಂದ ಆಡಳಿತ ಮಾಡಿದ ರಾಷ್ಟ್ರಕೂಟ ರಾಜವಂಶದ ಕೃಷ್ಟ್ನ I (757–773) ಇವರಿಂದ ಪ್ರಾರಂಭಿಸಲಾಯಿತು. ಅವರ ಆಡಳಿತವು ದಕ್ಷಿಣ ಭಾರತಕ್ಕೂ ವ್ಯಾಪಿಸಿತು, ಆದ್ದರಿಂದ ದೇವಸ್ಥಾನವನ್ನು ಬಹಳ ಸುಲಬದ ರೀತಿಯಲ್ಲಿ ಕೆತ್ತಲಾಯಿತು. ಇದರ ನಿರ್ಮಾಪಕರು ಇದನ್ನು ಪಟ್ಟದಕಲ್ಲಿನಲ್ಲಿರುವ ವಿರುಪಾಕ್ಷ ದೇವಾಲಯದ ರೇಖೆಗಳ ಆಧಾರದ ಮೇಲೆ ನಮೂನಿಸಿದ್ದಾರೆ. ದಕ್ಷಿಣ ಭಾರತದ ದೇವಾಲಯಗಳ ಶೈಲಿಯಲ್ಲಿದ್ದು, ಸಾಮಾನ್ಯವಾಗಿ ಉತ್ತರ ಭಾರತದ ದೇವಾಲಯಗಳಿಗಿರುವ ಶಿಖರವನ್ನು ಹೊಂದಿಲ್ಲ. - 1996ರ, ಟಕೆಯೊ ಕಮಿಯ, ಜಪಾನಿನ ವಾಸ್ತುಶಿಲ್ಪಿಯ ವಿದ್ಯಾಲಯವು ಮತ್ತು ಭಾರತೀಯ ಪುರಾತನದ ವಸ್ತುಶಾಸ್ತ್ರದ ಸಮೀಕ್ಷೆ ಗಳು ಭಾರತ ಖಂಡದ ವಾಸ್ತುಶಿಲ್ಪಿಯ ಮಾರ್ಗದರ್ಶನಗಳಾಗಿದ್ದವು .

ದಶಾವತಾರ

ದಶಾವತಾರ (ಗುಹೆ 15) ಇದು ಬೌದ್ಧ ಸನ್ಯಾಸಿ ಮಂದಿರವಾಗಿ ಪ್ರಾರಂಭವಾಗಿತ್ತು. ಇದು ಮಧ್ಯಭಾಗದಲ್ಲಿ ಒಂದೇ ಕಲ್ಲಿನಲ್ಲಿ ಕೆತ್ತಿದ ಸ್ವತಂತ್ರವಾಗಿ ನಿಂತ ಮಂಡಪ ವನ್ನು ಮತ್ತು ಹಿಂಬದಿಯಲ್ಲಿ ಎರಡು ಮಹಡಿಯ ಕೊರೆದ ಮಂದಿರಗಳನ್ನೊಳಗೊಂಡ ತೆರೆದ ಆವರಣವನ್ನೊಂದಿದೆ. ದೇವಸ್ಥಾನದ ಪ್ರದರ್ಶನ ವಿನ್ಯಾಸವು ಗುಹೆಗಳು 11 ಮತ್ತು 12 ರೊಂದಿಗೆ ಬಹಳ ಹತ್ತಿರದ ಸಂಬಂದವನ್ನೊಂದಿದೆ. ಮೇಲಿನ ಮಹಡಿಯಲ್ಲಿನ ಗೋಡೆಯ ಸ್ತಂಭಗಳ ನಡುವಿನ ಬೃಹತ್ತಾದ ಶಿಲಾಕೃತಿಗಳು ವಿಶಾಲ ಶ್ರೇಣಿಯ ಪ್ರಬಂಧದ ವಿಷಯಗಳನ್ನು ವಿವರಿಸುತ್ತವೆ, ಇವು ವಿಷ್ಟ್ನುವಿನ ಹತ್ತು ಅವತಾರಗಳನ್ನೊಳಗೊಂಡಿವೆ. ಪ್ರಖ್ಯಾತ ದಂಟಿದುರ್ಗದ ಕೆತ್ತಿದ ಲೇಖನಗಳನ್ನು ಎದುರಿನ ಮಂಡಪದ ಹಿಂಬದಿಯ ಗೋಡೆಯಮೇಲೆ ಕಾಣಬಹುದು. ಕೋಮರಸ್ವಾಮಿಯ ಪ್ರಕಾರ, ಈ ಗುಹೆಯ ಅತ್ಯುತ್ತಮ ಸಮಾಧಾನವೆಂದರೆ ಹಿರಣ್ಯಕಶಿಪುನ ಸಾವಿನ ವರ್ಣನೆಮಾಡುವುದು, ಅಲ್ಲಿ ವಿಷ್ಟ್ನುವಿನ ಮಾನವ-ಸಿಂಹ (ನರಸಿಂಹ) ಅವತಾರವು, ಸ್ತಂಭದಿಂದ ಅಪಾಯಕಾರಕ ಹಸ್ತವನ್ನು ಹಿರಣ್ಯಕಶಿಪುವಿನ ಭುಜದಮೇಲೆ ಇಡುತ್ತಿರುವಂತೆ ಗೋಚರಿಸುತ್ತದೆ.

ಇತರೆ ಹಿಂದು ಗುಹೆಗಳು

ಇತರೆ ಪ್ರಮುಖ ಹಿಂದು ಗುಹೆಗಳೆಂದರೆ ರಾಮೇಶ್ವರ (ಗುಹೆ 21), ಇದು ದ್ವಾರದಲ್ಲಿ ದೇವತೆಗಳಾದ ಗಂಗಾ ಮತ್ತು ಯಮುನಾರ ಸಣ್ಣ ಪ್ರತಿಮೆಗಳನ್ನು ಹೊಂದಿದೆ ಮತ್ತು ಧುಮರ್ ಲೇನಾ ದ (ಗುಹೆ 29) ವಿನ್ಯಾಸವು ಮುಂಬಯಿ ಹತ್ತಿರದ ಎಲೆಫೆಂಟಾ ದ್ವೀಪದಲ್ಲಿನ ಗುಹೆ ದೇವಾಲಯದ ಹಾಗೆ ಇದೆ. ಎರಡು ಇತರೆ ಗುಹೆಗಳಾದ, ರಾವಣ್ ಕಿ ಖಾಯಿ (ಗುಹೆ 14) ಮತ್ತು ನೀಲಕಂಠ (ಗುಹೆ 22) ಹಲವಾರು ಶಿಲ್ಪಕಲಾಕೃತಿಗಳನ್ನು ಹೊಂದಿದೆ. ಉಳಿದ ಹಿಂದು ಗುಹೆಗಳಾದ, ಕುಂಭರ್ವದಾ (ಗುಹೆ 25) ಮತ್ತು ಗೋಪಿಲೇನಾ (ಗುಹೆ 27) ಪ್ರಮುಖವಾದ ಶಿಲ್ಪಕಲೆಗಳನ್ನು ಹೊಂದಿಲ್ಲ.

ಜೈನ ಗುಹೆಗಳು

ಎಲ್ಲೋರ 
ಎಲ್ಲೋರ ಗುಹೆಗಳು. ಗುಹೆ 34. ಯಕ್ಷಿ ಅಂಬಿಕಾ ಪ್ರತಿಮೆ
ಎಲ್ಲೋರ 
ಎಲ್ಲೋರದಲ್ಲಿನ ಜೈನ ಗುಹೆ

ಎಲ್ಲೋರದಲ್ಲಿರುವ ಐದು ಜೈನ ಗುಹೆಗಳು ಒಂಭತ್ತನೆಯ ಮತ್ತು ಹತ್ತನೆಯ ಶತಮಾನಗಳಿಗೆ ಸೇರಿವೆ. ಅವೆಲ್ಲವೂ ದಿಗಂಬರ ಪಂಥಕ್ಕೆ ಸೇರಿದವಾಗಿವೆ. ಜೈನ ತತ್ವಜ್ಞಾನದ ಮತ್ತು ಸಂಪ್ರದಾಯದ ಒಂದು ನಿಶ್ಚಿತ ಆಕಾರವನ್ನು ಜೈನ ಗುಹೆಗಳು ಹೇಳುತ್ತವೆ. ಅವು ವೈರಾಗ್ಯದ ಕಟ್ಟುನಿಟ್ಟಾದ ಕ್ರಮವನ್ನು ಪ್ರತಿಬಿಂಬಿಸುತ್ತವೆ – ಇತರೆಯವುಗಳಿಗೆ ಹೋಲಿಸಿದರೆ ಅವು ಅಷ್ಟೇನು ದೊಡ್ಡವಾಗಿಲ್ಲ, ಆದರೆ ಅವು ವಿವರಣಾತ್ಮಕವಾದ ಅಸಾಮಾನ್ಯವಾದ ಕ್ರಿಯಾತ್ಮಕ ಕಲೆಗಳನ್ನು ಹೊಂದಿವೆ. ಅತ್ಯಂತ ಗುರುತಿಸಲ್ಪಡುವಂತಹ ಜೈನ ದೇವಾಲಯಗಳೆಂದರೆ ಛೋಟಾ ಕೈಲಾಶ್ (ಗುಹೆ 30), ಇಂದ್ರ ಸಭಾ (ಗುಹೆ 32) ಮತ್ತು ಜಗನ್ನಾಥ ಸಭಾ (ಗುಹೆ 33). ಗುಹೆ 31 ಪೂರ್ಣಗೊಳ್ಳದ ನಾಲ್ಕು-ಕಂಬಗಳುಳ್ಳ ಹಜಾರ ಮತ್ತು ಒಂದು ದೇವಾಲಯ. ಗುಹೆ 34 ಒಂದು ಸಣ್ಣ ಗುಹೆ, ಗುಹೆ 33ರ ಎಡಭಾಗದಲ್ಲಿರುವ ಒಂದು ಸಣ್ಣ ಬಾಗಿಲಿನಿಂದ ಇದಕ್ಕೆ ಹೋಗಬಹುದು.

ಇಂದ್ರ ಸಭಾ

ಇಂದ್ರ ಸಭಾ (ಗುಹೆ 32)ವು ಎರಡು ಅಂತಸ್ತಿನ ಗುಹೆಯಾಗಿದ್ದು ಮಾನೊಲಿಥಿಕ್ ಕಲಶವನ್ನು ಅಂಗಳದಲ್ಲಿ ಹೊಂದಿದೆ. ಇದು ಅದರ ಮೇಲ್ಛಾವಣಿಯ ಮೇಲೆ ಅತಿ ನಾಜೂಕಾದ ಕಮಲ ಹೂವಿನ ಕೆತ್ತನೆಯನ್ನು ಹೊಂದಿದೆ. ಇದಕ್ಕೆ ಇಂದ್ರ ಸಭಾ ಎನ್ನುವ ಹೆಸರು ಬಹುಶಃ ಅರ್ಥಪೂರ್ಣವಾಗಿ ಅಲಂಕೃತಗೊಂಡಿರುವುದಾಗಿದೆ. ಹಾಗೂ ಆನೆಯ ಮೇಲೆ ಕುಳಿತಿರುವ ಯಕ್ಷ ಮಾತಂಗನನ್ನು, ಇಂದ್ರ ಎಂದು ತಪ್ಪಾಗಿ ಗುರುತಿಸಲಾಗಿತ್ತು. ಎರಡು ಅಂತಸ್ತಿನ ಕಲಶದ ಮೇಲ್ಭಾಗವು ಅಂಗಳದ ಹಿಂಭಾಗದಲ್ಲಿ ಗುಳಿ ಮಾಡಿದೆ, ಅದರಲ್ಲಿ ಮೂಡಿದ ಅಂಬಿಕಾ ಚಿತ್ರ, ನೇಮಿನಾಥನ ಯಕ್ಷಿ (ಸಮರ್ಪಿಸಿಕೊಂಡು ಅನುಸರಿಸುವ ಭಕ್ತೆ), ಹಣ್ಣುಗಳನ್ನು ಹೊತ್ತ ಆಕೆ ಸಿಂಹದ ಮೇಲೆ ಮಾವಿನ ಮರದ ಕೆಳಗೆ ಕುಳಿತಿರುವ ಚಿತ್ರವಿದೆ.

ಇತರೆ ಜೈನ ಗುಹೆಗಳು

ಎಲ್ಲಾ ಇತರ ಜೈನ ಗುಹೆಗಳು ಗೋಜಲಾದ ವಿವರಣೆಗಳಿಂದ ವಿಶೇಷತೆ ಹೊಂದಿವೆ. ಅನೇಕ ರಚನೆಗಳು ಮೇಲ್ಛಾವಣಿಯಲ್ಲಿ ಅದ್ಭುತ ವರ್ಣಚಿತ್ರಗಳನ್ನು ಹೊಂದಿವೆ – ಅವುಗಳ ತುಣುಕುಗಳನ್ನು ಈಗಲೂ ಕಾಣಿಸುತ್ತವೆ.

ಈ ಕೆಳಗಿನವುಗಳನ್ನೂ ನೋಡಬಹುದು

ಟಿಪ್ಪಣಿಗಳು

ಆಕರಗಳು

  1. Dhavalikar, M.K. (2003). Ellora. Oxford University Press, New Delhi. ISBN 0 19 565458 7. .

ಬಾಹ್ಯ ಕೊಂಡಿಗಳು

20°01′35″N 75°10′45″E / 20.02639°N 75.17917°E / 20.02639; 75.17917

Tags:

ಎಲ್ಲೋರ ಬೌದ್ಧ ಗುಹೆಗಳುಎಲ್ಲೋರ ಹಿಂದು ಗುಹೆಗಳುಎಲ್ಲೋರ ಜೈನ ಗುಹೆಗಳುಎಲ್ಲೋರ ಈ ಕೆಳಗಿನವುಗಳನ್ನೂ ನೋಡಬಹುದುಎಲ್ಲೋರ ಟಿಪ್ಪಣಿಗಳುಎಲ್ಲೋರ ಆಕರಗಳುಎಲ್ಲೋರ ಬಾಹ್ಯ ಕೊಂಡಿಗಳುಎಲ್ಲೋರಕನ್ನಡ ಭಾಷೆಜೈನಜೈನ ಧರ್ಮದೇವಸ್ಥಾನಬೌದ್ಧಬೌದ್ಧ ಧರ್ಮಭಾರತಮರಾಠಿ ಭಾಷೆಮಹಾರಾಷ್ಟ್ರರಾಜ್ಯರಾಷ್ಟ್ರಕೂಟಹಿಂದುಹಿಂದೂ ಧರ್ಮ

🔥 Trending searches on Wiki ಕನ್ನಡ:

ವೆಂಕಟರಮಣೇ ಗೌಡ (ಸ್ಟಾರ್ ಚಂದ್ರು)ಇತಿಹಾಸಕೊಡಗಿನ ಗೌರಮ್ಮಮಲೇರಿಯಾಸಂವತ್ಸರಗಳುಶ್ರೀರಂಗಪಟ್ಟಣಋತುಟಿಪ್ಪು ಸುಲ್ತಾನ್ಪೆಟ್ರೋಮ್ಯಾಕ್ಸ್ (ಚಲನಚಿತ್ರ)ರಾಷ್ಟ್ರೀಯ ಸ್ವಯಂಸೇವಕ ಸಂಘಕನ್ನಡ ಗಣಕ ಪರಿಷತ್ತುಭೀಷ್ಮದ್ವಂದ್ವ ಸಮಾಸಮಾಧ್ಯಮದುಂಡು ಮೇಜಿನ ಸಭೆ(ಭಾರತ)ಗ್ರಂಥ ಸಂಪಾದನೆಇಂದಿರಾ ಗಾಂಧಿಭಾರತದ ಸ್ವಾತಂತ್ರ್ಯ ದಿನಾಚರಣೆಧರ್ಮ (ಭಾರತೀಯ ಪರಿಕಲ್ಪನೆ)ಮೌರ್ಯ ಸಾಮ್ರಾಜ್ಯಮೊದಲನೆಯ ಕೆಂಪೇಗೌಡಆವಕಾಡೊವಸ್ತುಸಂಗ್ರಹಾಲಯಭಾರತೀಯ ಕಾವ್ಯ ಮೀಮಾಂಸೆಸಮಾಸಕರ್ನಾಟಕದ ರಾಜ್ಯಪಾಲರುಗಳ ಪಟ್ಟಿಹಣ್ಣುಹರಪ್ಪವಾಣಿಜ್ಯ(ವ್ಯಾಪಾರ)ವೈದಿಕ ಯುಗಹುಲಿಆದಿಪುರಾಣಭಾರತ ರತ್ನವಾಟ್ಸ್ ಆಪ್ ಮೆಸ್ಸೆಂಜರ್ಪುನೀತ್ ರಾಜ್‍ಕುಮಾರ್ಹಸಿರುಮನೆ ಪರಿಣಾಮಭಾರತದ ಸಂವಿಧಾನದ ೩೭೦ನೇ ವಿಧಿಸಂಸ್ಕಾರವಾಯು ಮಾಲಿನ್ಯಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಭಾರತದ ಬ್ಯಾಂಕುಗಳ ಪಟ್ಟಿಶ್ರೀ ಸಿದ್ಧಲಿಂಗೇಶ್ವರರಾಷ್ಟ್ರಕೂಟರಕ್ತ ದಾನಕರ್ನಾಟಕದ ಜಿಲ್ಲೆಗಳುಹಿಪಪಾಟಮಸ್ವಿನಾಯಕ ಕೃಷ್ಣ ಗೋಕಾಕತೆಂಗಿನಕಾಯಿ ಮರಹಳೇಬೀಡುಕನ್ನಡ ಕಾವ್ಯಮಾನವನ ವಿಕಾಸಶ್ರೀ ಸಿದ್ದೇಶ್ವರ ಸ್ವಾಮಿಜಿಗಳುವಿದುರಾಶ್ವತ್ಥಮದ್ಯದ ಗೀಳುರವೀಂದ್ರನಾಥ ಠಾಗೋರ್ಕರ್ನಾಟಕದಶರಥಹರಕೆಕೇಂದ್ರ ಲೋಕ ಸೇವಾ ಆಯೋಗಪದಬಂಧಆದಿ ಕರ್ನಾಟಕವಚನ ಸಾಹಿತ್ಯಬೆಳಗಾವಿಋಗ್ವೇದರಂಗನಾಥಸ್ವಾಮಿ ದೇವಸ್ಥಾನ, ಶ್ರೀರಂಗಪಟ್ಟಣಪ್ರಾಥಮಿಕ ಶಾಲೆಕ್ರಿಯಾಪದದ್ಯುತಿಸಂಶ್ಲೇಷಣೆಆಂಡಯ್ಯನಂಜನಗೂಡುರನ್ನಸಂಗೊಳ್ಳಿ ರಾಯಣ್ಣಜನಪದ ಕಲೆಗಳುಪರಿಸರ ಕಾನೂನುವಿಷ್ಣುಅಲ್-ಬಿರುನಿರಾಮಾಯಣಕನ್ನಡ ಸಾಹಿತ್ಯ ಪರಿಷತ್ತುರಾಜಾ ರವಿ ವರ್ಮ🡆 More